Author: roovari

ಕಾಸರಗೋಡು : ಪೆರಿಯ ಆಲಕ್ಕೋಡು ಗೋಕುಲಂ ಗೋಶಾಲಾ ದೀಪಾವಳಿ ಸಂಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯವನ್ನು ವಹಿಸಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹಿರಿಯ ನೃತ್ಯ ಕಲಾವಿದೆ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಗೆ ದಿನಾಂಕ 19-11-2023 ರಂದು  ಪರಂಪರಾ ವಿದ್ಯಾಪೀಠದ ನಾಟ್ಯಭೂಷಣ ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿದರು. ಪ್ರಶಸ್ತಿಯನ್ನು ಸ್ವೀಕರಿಸಿದ ಡಾ.ಪದ್ಮಾ ಸುಬ್ರಹ್ಮಣ್ಯಂ ಮಾತನಾಡಿ, “ಕಲೆಯೇ ಸಂಸ್ಕೃತಿಯ ತಳಹದಿ. ಇಂದಿನ ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ ಎಂದು ತಿಳಿಸಿದರು. ಅಲ್ಲದೆ ಗೋಶಾಲೆಯಿಂದ ದೊರೆತ ಪ್ರಶಸ್ತಿ ಶ್ರೇಷ್ಠವಾದುದು ಎಂದರು. ಗೋಶಾಲೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಸಹಕರಿಸುವುದಾಗಿ ಇದೇ ವೇಳೆ ಅವರು ಭರವಸೆ ನೀಡಿದರು. ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್ ಅವರಿಗೆ ಗುರುರತ್ನ ಪ್ರಶಸ್ತಿ, ಗೋಕುಲ್ ಅಲಂಗೋಡ್ ಮತ್ತು ವಿಭಾ ರಾಜೀವ್‌ ಅವರಿಗೆ ಯುವ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪರಂಪರಾ ವಿದ್ಯಾಪೀಠದ ಆಚಾರ್ಯರಾದ ವಿಷ್ಣುಪ್ರಸಾದ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಅಜಿತ್ ಕುಮಾರ್ ವರ್ಮಾ, ಶಂಕರನಾರಾಯಣ ಜೋಯಿಸ್, ಕೇಂದ್ರೀಯ…

Read More

ಬಾಗಲಕೋಟೆ : ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ (ನೋಂ) ವತಿಯಿಂದ ‘ಮಹಾಮಹೋಪಾಧ್ಯಾಯ ವಿದ್ವಾನ್ ರಂಗನಾಥ್ ಶರ್ಮಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ದಿನಾಂಕ 03-12-2023ರಂದು ಬೆಳಿಗ್ಗೆ 10.30 ಗಂಟೆಗೆ ಬಾಗಲಕೋಟೆ ಬ.ವಿ.ವಿ.ವ. ಸಂಘ, ಪಾಲಿಟೆಕ್ನಿಕ್ ಕಾಲೇಜು, ಸೆಮಿನಾರ್ ಹಾಲ್ ನಲ್ಲಿ ನಡೆಯಲಿದೆ. ಅ.ಭಾ.ಸಾ.ಪ. ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎಸ್.ಜಿ. ಕೋಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಶ್ರೀ ಶಿವಯೋಗಿ ಮಂದಿರ ಎಸ್‌.ಕೆ.ಎಸ್. ಪಾಠ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಚಿದಾನಂದಸ್ವಾಮಿ ಹಿರೇಮಠ ಇವರು ‘ವಚನ ಸಾಹಿತ್ಯದಲ್ಲಿ ಸಂಸ್ಕೃತ’ ಎಂಬ ವಿಷಯದ ಬಗ್ಗೆ ಪ್ರಧಾನ ಭಾಷಣ ಮಾಡಲಿರುವರು. ಇದೇ ಸಂದರ್ಭದಲ್ಲಿ ಸಮಾಜ ಸೇವಕಿ, ‘ಸಂಸ್ಕೃತ ಭಾರತಿ’ಯ ನಿಕಟಪೂರ್ವ ವಡೋದರಾ ಜಿಲ್ಲಾ ಸಂಯೋಜಕರಾದ ಡಾ. ಸುಮಾ ಶಿವಾನಂದ ದೇಸಾಯಿ ಇವರಿಗೆ ‘ಮಹಾಮಹೋಪಾಧ್ಯಾಯ ವಿದ್ವಾನ್ ರಂಗನಾಥ್ ಶರ್ಮಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಯು ನಗದು ರೂ.25,000/-, ಪ್ರಶಸ್ತಿ ಪತ್ರ ಮತ್ತು ಶಾರದಾ ಮೂರ್ತಿಯನ್ನು ಒಳಗೊಂಡಿರುತ್ತದೆ. ಬಾಗಲಕೋಟೆ ಜಿಲ್ಲೆಯ ಅಖಿಲ ಭಾರತೀಯ…

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ವತಿಯಿಂದ ದಿನಾಂಕ 30-12-2023 ಶನಿವಾರದಂದು ನಡೆಯಲಿರುವ ಉಡುಪಿ ತಾಲೂಕು 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೃಹಣಿಯರಿಗಾಗಿ ಕಥಾ ಗೋಷ್ಠಿ ಆಯೋಜಿಸಿದ್ದು ,ಆಸಕ್ತ ಗೃಹಿಣಿಯರು ಪೋಸ್ಟ್ ಕಾರ್ಡ್ ಮೂಲಕ ತಮ್ಮ ಅಡುಗೆಮನೆ ವಾರ್ತೆಯ ಕಥೆಗಳನ್ನು ದಿನಾಂಕ 02-12-2023ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ಆಯ್ದ ಆರು ಕಥೆಗಳ ಲೇಖಕಿಯರಿಗೆ ಸಮ್ಮೇಳನದ ಕಥಾ ಗೋಷ್ಠಿಯಲ್ಲಿ ಭಾಗವಹಿಸಿ ಕಥೆಯನ್ನು ವಾಚಿಸಲು ವೇದಿಕೆಯಲ್ಲಿ ಅವಕಾಶ ನೀಡಲಾಗುವುದು. ಕಳುಹಿಸಬೇಕಾದ ವಿಳಾಸ :  ಜನಾರ್ದನ ಕೊಡವೂರು, ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ‘ಭಾಮಾ’, ಉಡುಪ ಲೇನ್, ಕೊಡವೂರು, ಕ್ರೋಡಾಶ್ರಮ, ಉಡುಪಿ – 576106. ಹೆಚ್ಚಿನ ವಿವರಗಳಿಗೆ ಶ್ರೀ ರವಿರಾಜ್ ಎಚ್.ಪಿ., ಅಧ್ಯಕ್ಷರು 98452 40309 ಸಂಪರ್ಕಿಸಬಹುದು.

Read More

ಬೈಂದೂರು : ಅರೆಹೊಳೆ ಪ್ರತಿಷ್ಠಾನ, ರಂಗ ಪಯಣ ಬೆಂಗಳೂರು, ಮಂದಾರ (ರಿ.) ಬೈಕಾಡಿ ಮತ್ತು ಜನಪ್ರತಿನಿಧಿ ಕುಂದಾಪುರ ಆಯೋಜಿಸುವ ಕನಸು ಕಾರ್ತಿಕ್ ನೆನಪಿನಲ್ಲಿ ‘ಅರೆಹೊಳೆ ನಾಟಕೋತ್ಸವ’ವು ದಿನಾಂಕ 03-12-2023ರಿಂದ 05-12-2023ರವರೆಗೆ ಬೈಂದೂರಿನ ನಂದಗೋಕುಲ ರಂಗ ಶಾಲೆ ಅರೆಹೊಳೆ, ಡಾ. ಹಂದಟ್ಟು ಹರೀಶ್ ಹಂದೆ ರಂಗಮಂದಿರದಲ್ಲಿ ನಡೆಯಲಿದೆ. ದಿನಾಂಕ 03-12-2023ರಂದು ರಂಗ ಪಯಣ ತಂಡದವರು ಪ್ರಸ್ತುತ ಪಡಿಸುವ ರಾಜಗುರು ಇವರ ರಚನೆ, ಸಂಗೀತ, ವಿನ್ಯಾಸ ಮತ್ತು ನಿರ್ದೇಶನದ ‘ಪೂಲನ್ ದೇವಿ’ ನಾಟಕ ಪ್ರದರ್ಶನ, ದಿನಾಂಕ 04-12-2023ರಂದು ಸಾತ್ವಿಕ ತಂಡದವರು ಮಂಜುನಾಥ ಬೆಳಕೆರೆ ರಚಿಸಿರುವ ರಾಜಗುರು ಹೊಸಕೋಟೆ ಸಂಗೀತ ಮತ್ತು ನಿರ್ದೇಶನ ಮಾಡಿರುವ ‘ಶರೀಫ’ ಎಂಬ ನಾಟಕ ಪ್ರಸ್ತುತ ಪಡಿಸಲಿದ್ದು, ದಿನಾಂಕ 05-12-2023ರಂದು ಮನ್ವಂತರ ತಂಡದವರು ಶ್ರೀನಿವಾಸ ವೈದ್ಯ ಬರೆದಿರುವ ಕಥೆಯನ್ನು ರಾಜಗುರು ಇವರ ರಂಗರೂಪ, ವಿನ್ಯಾಸ ಸಂಗೀತ ಮತ್ತು ನಿರ್ದೇಶನದ ‘ಬಿದ್ದೂರಿನ ಬಿಗ್ ಬೆನ್’ ನಾಟಕ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ಕಾರ್ತಿಕ್ ಬ್ರಹ್ಮಾವರ ನೆನಪಿನ ಕಾರ್ತಿಕ ನಮನ ಹಾಗೂ ಕಲಾವಿದೆ ಲಿಖಿತಾ…

Read More

ಮಂಗಳೂರು: ನಗರದ ಮಾತಾ ಅಮೃತಾನಂದಮಯಿ ಮಠದ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ವತಿಯಿಂದ ಬೋಳೂರಿನ ಅಮೃತ ವಿದ್ಯಾಲಯಂ ಆವರಣದಲ್ಲಿ ರಾಷ್ಟ್ರೀಯ ಯುವದಿನದ ಅಂಗವಾಗಿ ದ. ಕ., ಕಾಸರಗೋಡು ಮತ್ತು ಉಡುಪಿ ಜಿಲ್ಲಾ ಮಟ್ಟದ ಒಂದು ದಿನದ ಯುವ – ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವು ದಿನಾಂಕ 13- 01-2024ರ ಶನಿವಾರದಂದು ನಡೆಯಲಿದೆ. ಈ ಸಮ್ಮೇಳನದ ಗೋಷ್ಠಿಗಳಲ್ಲಿ ಮಂಡಿಸಲು ದ. ಕ., ಕಾಸರಗೋಡು ಮತ್ತು ಉಡುಪಿ ಜಿಲ್ಲೆಯ 28 ವರ್ಷ ವಯಸ್ಸಿಗಿಂತ ಕೆಳಗಿನ ಯುವಕ ಯುವತಿಯರಿಂದ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಆಯ್ಕೆಗಾಗಿ ಮೂರು ನಿಮಿಷಕ್ಕೆ ಮೀರದಂತಹ ಸ್ವರಚಿತ ಕಥೆ, ಕವನ ಮತ್ತು ಪ್ರಬಂಧಗಳನ್ನು ಆಹ್ವಾನಿಸಲಾಗಿದೆ. ಕಥೆ ಕವನಗಳು ಸ್ವತಂತ್ರವಾಗಿದ್ದು ಪ್ರಬಂಧವು ನನ್ನ ಪ್ರವಾಸಾನುಭವ ಎಂಬ ವಿಷಯದ ಬಗ್ಗೆ ಇರಬೇಕಾಗಿದೆ. ಬರಹದೊಂದಿಗೆ ಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆ ನಮೂದಿಸಿ ದಿನಾಂಕ 15-12-2023ರ ಒಳಗಾಗಿ ತಲಪುವಂತೆ ಕಳುಹಿಸಿ ಕೊಡಬೇಕು ಎಂದು ಅಮೃತ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ತಿಳಿಸಿದ್ದಾರೆ. ವಿದ್ಯಾರ್ಥಿಗಳಾದರೆ…

Read More

ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸ್ಸೋಸಿಯೇಷನ್, ಸಮುದಾಯ ಬೆಂಗಳೂರು ಮತ್ತು ರಾಗಿ ಕಣ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸುತ್ತಿರುವ ಪ್ರೀತಿ ಸಹಬಾಳ್ವೆಯ ಯಾತ್ರೆ ‘ರಾಷ್ಟ್ರೀಯ ಸಾಂಸ್ಕೃತಿಕ ಜಾಥಾ’ ಬೆಂಗಳೂರು ಮತ್ತು ಮಂಗಳೂರಿನ ವಿವಿಧೆಡೆ ದಿನಾಂಕ 01-12-2023ರಿಂದ 07-12-2023ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಜಾಥಾದಲ್ಲಿರುವ ಕಾರ್ಯಕ್ರಮಗಳು ತತ್ವ ಪದಗಳು, ವಚನ ಗಾಯನ, ಬೀದಿ ನಾಟಕ, ಗ್ರಾಮೀಣ ಜನರೊಡನೆ ವಾಸ್ತವ್ಯ ಮತ್ತು ಆತ್ಮೀಯ ಸಂವಾದ, ತಿಳಿಕಲಿ – ಮಾತುಕತೆ, ಹೊಸ ಕಲಿಕೆ – ಹೊಸ ಜ್ಞಾನ – ಹೊಸ ಅರಿವು. ದಿನಾಂಕ 01-12-2023ರಂದು ಸಂಜೆ ಗಂಟೆ 5ಕ್ಕೆ ಬೆಂಗಳೂರಿನ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಉದ್ಘಾಟನೆಗೊಂಡು ದಿನಾಂಕ 02-12-2023ರಂದು ಮಧ್ಯಾಹ್ನ ಗಂಟೆ 2ಕ್ಕೆ ಜಾಲಹಳ್ಳಿ ಸರ್ಕಲ್, ಸಂಜೆ ಗಂಟೆ 5ಕ್ಕೆ ಎಂ.ಜಿ. ರಸ್ತೆ ಮೆಟ್ರೋ ಮತ್ತು ಕಾವೇರಿ ಎಂಪೋರಿಯಂ ಬಳಿ ಮತ್ತು ದಿನಾಂಕ 03-12-2023ರಂದು ಬೆಳಿಗ್ಗೆ ಗಂಟೆ 10ರಿಂದ ರಾಗಿ ಕಣ ಸಂತೆ ಆವರಣದಲ್ಲಿ ‘ಕಲ್ಲಂಗಡಿ ಹಣ್ಣಿನ ಕಥೆ’ ಬೀದಿ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 02-12-2023ರಂದು…

Read More

ಮಂಗಳೂರು : ಯಕ್ಷಾಂಗ‌ಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ಹನ್ನೊಂದನೇ ವರ್ಷದ ನುಡಿ ಹಬ್ಬದಲ್ಲಿ ದಿನಾಂಕ 23-11-2023ರಂದು ಕೀರ್ತಿಶೇಷ ಅರ್ಥಧಾರಿಗಳಾದ ಪರಂಗಿಪೇಟೆಯ ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಅವರ ಸಂಸ್ಮರಣಾ ಸಮಾರಂಭ ಜರಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ “ಯಕ್ಷಗಾನವು ಮನುಷ್ಯ ಜೀವನದ ಮೌಲ್ಯ ಪ್ರತಿಪಾದನೆ ಜೊತೆಗೆ ಪುರಾಣ ಪಾತ್ರಗಳ ತತ್ವಾದರ್ಶಗಳನ್ನು ಪರಿಚಯಿಸುತ್ತದೆ. ಅಲ್ಲದೆ ಮನೋರಂಜನೆಯನ್ನೂ ಒದಗಿಸುವುದರಿಂದ ಅದು ಸಾಂಸ್ಕೃತಿಕ ಸಂಪನ್ನತೆಯ ಕಲೆ. ಅದಕ್ಕಾಗಿ ದುಡಿದ ಹಿರಿಯರು ಸದಾ ಸ್ಮರಣೀಯರು” ಎಂದು ಹೇಳಿದರು. ಮಹೇಶ್ ಮೋಟರ್ಸ್ ಮಾಲಕ ಎ.ಕೆ. ಜಯರಾಮ ಶೇಖ ಅವರು ಸಂಸ್ಮರಣ ಜ್ಯೋತಿ ಬೆಳಗಿ ನುಡಿ ನಮನ ಸಲ್ಲಿಸಿದರು. ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ,…

Read More

ಮಂಗಳೂರು : ಶ್ರೀ ರಾಮಕೃಷ್ಣ ಮಠ ಮಂಗಳೂರು ಮತ್ತು ವಿಭಿನ್ನ ಮಂಗಳೂರು ಅರ್ಪಿಸುವ ಕಲಾಕಾಣಿಕೆ ‘ಯಕ್ಷಾಮೃತ’ ದಿನಾಂಕ 10-12-2023 ರಂದು ಮಧ್ಯಾಹ್ನ 2 ಗಂಟೆಗೆ ಮಂಗಳೂರಿನ ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ. ಪೂರ್ಣಚಂದ್ರ ಯಕ್ಷಗಾನ ಮಂಡಳಿ (ರಿ.) ಕುಂಭಾಶಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ರಾಜಾ ಭದ್ರಸೇನ – ಶ್ರೀ ರಾಮನಿರ್ಯಾಣ’ ಎಂಬ ಕಥಾ ಭಾಗವನ್ನು ಆಡಿತೋರಿಸಲಿರುವರು. ಹಿಮ್ಮೇಳದಲ್ಲಿ ಸರ್ವಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯ, ರಾಮಕೃಷ್ಣ ಹೆಗಡೆ ಹಿಲ್ಲೂರು, ಎನ್.ಜಿ. ಹೆಗಡೆ, ಬೊಳ್ಗರೆ ಗಜಾನನ ಭಂಡಾರಿ, ಲಕ್ಷ್ಮೀನಾರಾಯಣ ಸಂಪ, ಶ್ರೀನಿವಾಸ ಪ್ರಭು ಮತ್ತು ಮುಮ್ಮೇಳದಲ್ಲಿ ಸರ್ವಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ನೀಲ್ಕೊಡು ಶಂಕರ ಹೆಗಡೆ, ಅಶ್ವಿನಿ ಕೊಂಡದಕುಳಿ, ಚಪ್ಪರಮನೆ ಶ್ರೀಧರ ಹೆಗ್ಡೆ, ಪ್ರಸನ್ನ ಶೆಟ್ಟಿಗಾರ್, ಗಣೇಶ್ ಶೆಟ್ಟಿ ಕನ್ನಡಿ ಕಟ್ಟೆ, ಸುಧೀರ್ ಉಪ್ಪೂರ್, ಕಾರ್ತಿಕ್ ಚಿಟ್ಟಾಣಿ, ಕಾರ್ತಿಕ್ ಕಣ್ಣಿ, ನಾಗೇಶ್ ಕುಳಿಮನೆ, ಮಾರುತಿ ನಾಯ್ಕ್ ಸಹಕರಿಸಲಿದ್ದಾರೆ. ಮಂಗಳೂರಿನ ಶ್ರೀ ರಾಮಕೃಷ್ಣ ಮಠ ಮತ್ತು…

Read More

ಕಾಸರಗೋಡು : ಕರಂದಕ್ಕಾಡು ಪದ್ಮಗಿರಿಯಲ್ಲಿರುವ ರಂಗ ಚಿನ್ನಾರಿ ಕಾಸರಗೋಡು (ರಿ.) ಇದರ ಘಟಕಗಳಾದ ನಾರಿ ಚಿನ್ನಾರಿ (ಮಹಿಳಾ ಘಟಕ) ಸ್ವರ ಚಿನ್ನಾರಿ (ಸಂಗೀತ ಘಟಕ) ನೇತೃತ್ವದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಸುಬ್ರಹ್ಮಣ್ಯ ಬಾಡೂರು (ಬಾನಾಸು) ಇವರಿಗೆ ಹುಟ್ಟೂರ ಗೌರವ ಕಾರ್ಯಕ್ರಮವು ದಿನಾಂಕ 01-12-2023ರಂದು ಸಂಜೆ ಗಂಟೆ 5ಕ್ಕೆ ಕಾಸರಗೋಡಿನ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಶ್ರೀ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಕಾಸರಗೋಡಿನ ಶಾಸಕರಾದ ಶ್ರೀ ಎನ್.ಎ. ನೆಲ್ಲಿಕುನ್ನು, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಶ್ರೀಮತಿ ಉಮಾಶ್ರೀ, ರಾಷ್ಟ್ರ ಪ್ರಶಸ್ತಿ ವಿಜೇತ ನಿದೇಶಕ ಶ್ರೀ ಶಿವಧ್ವಜ್ ಶೆಟ್ಟಿ ಮತ್ತು ಖ್ಯಾತ ಪತ್ರಕರ್ತರಾದ ಶ್ರೀ ರವೀಂದ್ರ ಜೋಶಿ ಇವರುಗಳು ಭಾಗವಹಿಸಲಿದ್ದಾರೆ. 2021ರ ಸಾಲಿನ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿಮರ್ಶಕ (ತೀರ್ಪುಗಾರರ ವಿಶೇಷ ಉಲ್ಲೇಖ) ಪ್ರಶಸ್ತಿಗೆ ಶ್ರೀ ಸುಬ್ರಹ್ಮಣ್ಯ ಬಾಡೂರು ಭಾಜನರಾಗಿದ್ದಾರೆ. ಚಲನಚಿತ್ರ ಪತ್ರಕರ್ತರೊಬ್ಬರು ಕರ್ನಾಟಕದಲ್ಲಿ ಈ ರಾಷ್ಟ್ರೀಯ ಗೌರವ ಪಡೆದಿದ್ದು…

Read More

ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇದರ ಜಂಟಿ ಆಶ್ರಯದಲ್ಲಿ ವಿಕಲಚೇತನರ ಸೇವಾ ಕೇಂದ್ರ ಪುತ್ತೂರು ತಾಲೂಕು ಪಂಚಾಯತ್‌ ಸಹಕಾರದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಪ್ರಪ್ರಥಮ ಬಾರಿಗೆ ವಿನೂತನ ಕಾರ್ಯಕ್ರಮ ‘ದಿವ್ಯಾಂಗಜನ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 03-12-2023 ಆದಿತ್ಯವಾರದಂದು ಪುತ್ತೂರಿನ ಬಿರುಮಲೆ ಬೆಟ್ಟದ ಪ್ರಜ್ಞಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಕಲಚೇತನರಲ್ಲಿರುವ ಸುಪ್ತ ಪ್ರತಿಭೆಯನ್ನು ಹಾಗೂ ಸಾಹಿತ್ಯ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಹಾಗೂ ಸೂಕ್ತ ವೇದಿಕೆಯನ್ನು ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಪ್ರಥಮ ವಿನೂತನ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಈ ಕೆಳಗಿನ ಗೋಷ್ಠಿಗಳಿಗೆ ಆಸಕ್ತಿಯುಳ್ಳ ಪುತ್ತೂರು ತಾಲೂಕಿನ ದಿವ್ಯಾಂಗ ಪ್ರತಿಭೆಗಳು ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ವಿನಂತಿ. ಕವಿ ಗೋಷ್ಠಿ (ಸ್ವರಚಿತ ಕವನಗಳನ್ನು ವಾಚಿಸಲು ಅವಕಾಶ-12 ಸಾಲುಗಳ ಮಿತಿಯ ಒಳಗೆ ಇರುವ), ಕಥಾ ಗೋಷ್ಠಿ (ಸ್ವರಚಿತ ಕಿರು ಕಥೆಗಳನ್ನು ವಾಚಿಸಲು ಅವಕಾಶ 200-250 ಪದಗಳ…

Read More