Author: roovari

ಹೊಸಪೇಟೆ : ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಹಂಪಿಯ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಜರಗಿದ ಅಖಿಲ ಭಾರತ ಕಲಾ ಸಮ್ಮೇಳನದಲ್ಲಿ ಗಡಿನಾಡು ಕಾಸರಗೋಡು ಜಿಲ್ಲೆಯ ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಸ್ಕೂಲಿನ ರಂಗ ಚೇತನ ಸಂಸ್ಥೆಯ ಚಿಣ್ಣರ ತಂಡದಿಂದ ಶ್ರೀ ಸದಾಶಿವ ಬಾಲಮಿತ್ರರವರು ರಚಿಸಿ ನಿರ್ದೇಶಿಸಿದ ‘ಒಪ್ಪಂದ’ ಎಂಬ ನಾಟಕವು ದಿನಾಂಕ 18-11-2023ರಂದು ಪ್ರದರ್ಶನಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ನಿತ್ಯ ಜೀವನದಲ್ಲಿ ಸಿರಿಧಾನ್ಯಗಳ ಬಳಕೆಯಿಂದ ಆಗುವ ಪ್ರಯೋಜನವನ್ನು, ನವೀನ ಯುಗದ ನವ್ಯ ಆಹಾರ ಪದ್ಧತಿ ತರುವ ಆರೋಗ್ಯ ಸಮಸ್ಯೆಗಳ ಸುತ್ತ ಹೆಣೆದ ‘ಒಪ್ಪಂದ’ ನಾಟಕದಲ್ಲಿ ಶರಣ್ಯ, ಸ್ವಾತಿ ಶೆಟ್ಟಿ, ನಿರೀಕ್ಷಾ, ಸಿಂಚನಾ ಪಿ.ಎಸ್., ವರ್ಷ, ಮೋನಿಶ್, ಮನೀಶ್ ಪಿ.ಜಿ., ಅನ್ನಾ ಅಲೀಶಾ ಡಿಸೋಜಾ ಮತ್ತು ನಿಶ್ಮಿತಾರವರ ಅಭಿನಯ ಮನೋಜ್ಞವಾಗಿತ್ತು. ನಾಟಕವನ್ನು ವೀಕ್ಷಣೆ ಮಾಡಿದ ಸಂಘಟನೆಯ ಪದಾಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರಶಂಸಿಸಿದರು. ನಾಟಕ ತಂಡಕ್ಕೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ರಂಗ ಚೇತನ…

Read More

ಬೆಂಗಳೂರು : ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಜಿಕ್ ಅಕಾಡೆಮಿ ಟ್ರಸ್ಟ್ (ರಿ.) ಪ್ರಸ್ತುತ ಪಡಿಸುವ ‘ಕಾಂಚನೋತ್ಸವ 2023’ ಕಾರ್ಯಕ್ರಮವು ದಿನಾಂಕ 25-11-2023 ಮತ್ತು 26-11-2023ರಂದು ಬೆಂಗಳೂರಿನ ಗಿರಿನಗರದ ಅಕ್ಷರಂ ಇಲ್ಲಿ ನಡೆಯಲಿದೆ. ದಿನಾಂಕ 25-11-2023ರಂದು ನಡೆಯಲಿರುವ ಸಂಗೀತ ಕಛೇರಿಯಲ್ಲಿ ವಿದ್ವಾನ್ ಎನ್.ಆರ್. ಪ್ರಶಾಂತ್ ಹಾಡುಗಾರಿಕೆಗೆ ವಯೊಲಿನ್ ನಲ್ಲಿ ವಿದ್ವಾನ್ ಅಚ್ಯುತ ರಾವ್, ಮೃದಂಗದಲ್ಲಿ ವಿದ್ವಾನ್ ಆರ್. ರಮೇಶ್ ಮತ್ತು ಖಂಜೀರದಲ್ಲಿ ವಿದ್ವಾನ್ ಉಡುಪಿ ಶ್ರೀಕಾಂತ್ ಸಾಥ್ ನೀಡಲಿದ್ದಾರೆ. ದಿನಾಂಕ 26-11-2023ರಂದು ಜುಗಲ್ ಬಂಧಿ ನಡೆಯಲಿದ್ದು, ವಿದ್ವಾನ್ ರವಿಚಂದ್ರ ಕೂಳೂರು ಕೊಳಲು, ಪಂಡಿತ್ ಸಂಜೀವ ಕೋರ್ತಿ ಸಿತಾರ, ವಿದ್ವಾನ್ ಅದಮ್ಯ ರಾಮಾನಂದ್ ಮೃದಂಗ, ಪಂಡಿತ್ ರಾಹುಲ್ ಪೊಫಾಲಿ ತಬ್ಲಾ ಮತ್ತು ವಿದ್ವಾನ್ ಪಿ. ನಂದಕುಮಾರ್ ಇಡಕ್ಕ ನುಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮೃದಂಗ ವಿದ್ವಾನ್ ಶ್ರೀ ಎ.ವಿ.ಆನಂದ್ ಇವರಿಗೆ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ‘ಕಾಂಚನಶ್ರೀ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಂತರ ನಡೆಯುವ ದಾಸವಾಣಿ ಕಛೇರಿಯಲ್ಲಿ ಪಂಡಿತ್ ಕೃಷ್ಣೇಂದ್ರ ವಾದಿಕರ್ ಹಾಡುಗಾರಿಕೆಗೆ ಹಾರ್ಮೋನಿಯಂನಲ್ಲಿ…

Read More

ಮಂಗಳೂರು : ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಡಾ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಯಕ್ಷ ಭಾರತಿ(ರಿ.) ಪುತ್ತೂರು ಸಹಯೋಗದಲ್ಲಿ ನಗರದ ರವೀಂದ್ರ ಕಲಾಭವನದಲ್ಲಿ ನವೆಂಬರ್ 19ರಿಂದ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ, ಸಪ್ತಾಹ – 2023’ ಹನ್ನೊಂದನೇ ವರ್ಷದ ಕನ್ನಡ ನುಡಿ ಹಬ್ಬದಲ್ಲಿ ಮೂರನೇ ದಿನ ದಿನಾಂಕ 21-11-2023ರಂದು ನಮ್ಮ ಕುಡ್ಲ ಸಂಸ್ಥಾಪಕರಾದ ದಿ| ಬಿ.ಪಿ. ಕರ್ಕೇರ ಅವರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಮರಣ ಜ್ಯೋತಿ ಬೆಳಗಿದ ಮೂಡಬಿದ್ರೆ ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ನ ಮಾಲಕ ಶ್ರೀಪತಿ ಭಟ್ ಮೂಡುಬಿದಿರೆ ಇವರು ಮಾತನಾಡುತ್ತಾ, “ಕಲೆಯೆಂಬುದು ರಕ್ತಗತವಾಗಿ ತಲೆಮಾರುಗಳಲ್ಲಿ ವಿಸ್ತರಣೆಗೊಳ್ಳುವುದು ಸ್ವಾಭಾವಿಕ. ಆದರೆ ಕಲಾಭಿರುಚಿಯೂ ಹಾಗೆಯೇ. ತಂದೆ ತಾಯಿಗಳಿಂದ ಮಕ್ಕಳಿಗೆ ಅದರ ಬಗ್ಗೆ ಆಸಕ್ತಿ ರಕ್ತಗತವಾಗಿ ಬಂದರೆ ಆಶ್ಚರ್ಯವಿಲ್ಲ. ದಿ| ಬಿ.ಪಿ.ಕರ್ಕೇರರು ಓರ್ವ ಉತ್ತಮ ಪ್ರೇಕ್ಷಕರಾಗಿ ತಮ್ಮ ಮಕ್ಕಳನ್ನು…

Read More

ಉಡುಪಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಅಂಗವಾಗಿ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ದಿನಾಂಕ 19-10-2023ರಂದು ಬೆಳಗ್ಗೆ 10ಕ್ಕೆ 9ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಸೃಜನಾತ್ಮಕ ಪ್ರದರ್ಶನ ಕಲೆ (ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಮತ್ತು ಹಿಂದು ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ), ವಿಜ್ಞಾನದಲ್ಲಿ ನೂತನ ಆವಿಷ್ಕಾರ, ಚಿತ್ರಕಲಾ ಸ್ಪರ್ಧೆ, ವಾದ್ಯ ಸಂಗೀತ (ತಬಲಾ, ಮೃದಂಗ, ಕೀಬೋರ್ಡ್, ಕೊಳಲು, ಡೊಳ್ಳು ಮತ್ತು ನಗಾರಿ) ಹಾಗೂ ಅಂಗವಿಕಲ, ಬುಡಕಟ್ಟು ಪ್ರದೇಶದ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರ ಈ ರೀತಿ ಇದೆ. ತಬಲದಲ್ಲಿ ಉಡುಪಿ ವಳಕಾಡಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಗೌರೀಶ್, ಕೊಳಲಿನಲ್ಲಿ ಎಸ್.ವಿ. ಗಂಗೊಳ್ಳಿಯ ಶಾಮ್ ಜಿ.ಎನ್. ಪೂಜಾರಿ ಮತ್ತು ಉಡುಪಿ ಮೌಂಟ್ ರೋಸರಿ ಸ್ಕೂಲಿನ ಜಾನ್ವಿ ಮತ್ತು ಸ್ಯಾಕ್ಸಪೋನ್ ವಾದನದಲ್ಲಿ ಉಡುಪಿ ವಳಕಾಡಿನ…

Read More

ನನ್ನನ್ನೂ ಸೇರಿ ನಾವಿದ್ದದ್ದು ಎಂಟು ಜನ. ನಾನು ಮತ್ತು ಏಳು ಮಕ್ಕಳು. ಮಗನ ಅಪಾರ್ಟಮೆಂಟಿನ ಹುಡುಗರು. ಎಲ್ಲ ಇಂಗ್ಲಿಷ್ ಓದುವವರು. ಅವರಲ್ಲಿ ಒಬ್ಬ ಗುಜರಾತಿ, ಒಬ್ಬ ಮರಾಠಿ, ಒಬ್ಬ ಮಲೆಯಾಳಿ, ಒಬ್ಬ ಬಂಗಾಲಿ. ಮೂವರು ಕನ್ನಡದವರು. ನಾವೆಲ್ಲ ಸೇರಿ ಕನ್ನಡ ರಾಜ್ಯೋತ್ಸವಕ್ಕಾಗಿ ಒಂದು ಕನ್ನಡ ಮಕ್ಕಳ ನಾಟ್ಕ ಆಡಬೇಕಿತ್ತು. ನಮಗೆ ಇದ್ದಿದ್ದು ಮೂರೇ ಸಂಜೆಗಳು. ಇದೊಂಥರಾ ಸವಾಲು. ನಾವದನ್ನ ಸ್ವೀಕರಿಸಿಯೇಬಿಟ್ಟೆವು. ಇಂಥ ಸಮಯದಲ್ಲಿ ನನ್ನ ಸಹಾಯಕ್ಕೆ ಬಂದವರು ಡಾ. ಆರ್‌ ವಿ. ಭಂಡಾರಿ. ಮೂವತ್ತೈದು ವರ್ಷಗಳ ಹಿಂದೆ ಶಿರಸಿಯಲ್ಲಿ ಆಡಿಸಿದ ಅವರ ‘ ಬೆಕ್ಕು ಮತ್ತು ರೊಟ್ಟಿ’ ನಾಟ್ಕ ನೆನಪಾಯ್ತು. ಸರಳ ಸಂಭಾಷಣೆಯ ಹಾಡು ಕುಣಿತಗಳ ನಾಟ್ಕ ಅದು. ಆರ್. ವಿ. ಭಂಡಾರಿಯವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದವರು. ಮಕ್ಕಳಿಗಾಗಿಯೇ ನಾಟಕಗಳನ್ನ ಬರೆದ ಮೊದಲಿಗರಲ್ಲೊಬ್ಬರು. ಪ್ರಸಿದ್ಧವಾದ ಬೆಕ್ಕು- ಬೆಣ್ಣೆಯ ಕತೆಯನ್ನ ಆಧರಿಸಿದ ನಾಟಕ ಇದು. ಅಡುಗೆ ಮನೆಯಿಂದ ರೊಟ್ಟಿಯನ್ನು ಕದ್ದ ಕರಿಬೆಕ್ಕು, ಬಿಳಿಬೆಕ್ಕುಗಳು ಹಂಚಿಕೊಂಡು ತಿನ್ನೋದನ್ನು ಬಿಟ್ಟು ಇಡಿಯ ರೊಟ್ಟಿಗಾಗಿ ಜಗಳವಾಡ್ತವೆ. ಇವುಗಳ…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು ಮತ್ತು ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ ಈ ಸಂಸ್ಥೆಗಳು ಜೊತೆ ಸೇರಿ ಹದಿನೈದು ದಿನಗಳ ಉಚಿತ ತುಳು ಲಿಪಿ ಕಲಿಕಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮವು ನೆರವೇರಿದೆ. ಈ ಕಾರ್ಯಕ್ರಮವು ಮಂಗಳೂರಿನ ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನ ತುಳು ವಿಭಾಗದಲ್ಲಿ ದಿನಾಂಕ 20-11-2023ರಂದು ಸಂಜೆ 5.30ಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಮಂಗಳೂರಿನ ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರಾದ ಡಾ. ಮಾಧವ ಎಂ.ಕೆ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ಮಾತನಾಡುತ್ತಾ “ತುಳುವಿಗೆ ಲಿಪಿ ಇಲ್ಲ ಎಂಬ ವದಂತಿಯಿದೆ. ಸುಮಾರು 1,300 ತುಳು ಲಿಪಿಯ ತಾಡವೋಲೆಗಳು ಧರ್ಮಸ್ಥಳದಲ್ಲಿ ಈಗಲೂ ಪ್ರಸ್ತುತವಿದೆ.  ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಈಗಾಗಲೇ ಬಹಳಷ್ಟು ಕೆಲಸಗಳು ನಡೆದಿವೆ. ಈಗ ನಾವೆಲ್ಲರೂ ಸೇರಿ  ಅದಕ್ಕೆ ಪೂರಕವಾಗಿ ಇನ್ನಷ್ಟು …

Read More

ಉಡುಪಿ : ಬೆಂಗಳೂರಿನ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಸಮಗ್ರ ಸಾಹಿತ್ಯ ಸೇವೆ ಮತ್ತು ಜೀವಮಾನ ಸಾಧನೆಗಾಗಿ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ, ಲೇಖಕ ಡಾ. ತಲ್ಲೂರು ಶಿವರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ದಿನಾಂಕ 30-12-2023ರಂದು ಬೆಂಗಳೂರಿನ ನಯನ ರಂಗಮಂದಿರದಲ್ಲಿ ನಡೆಯುವ ಕೆಂಪೇಗೌಡ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ. ತಲ್ಲೂರು ಶಿವರಾಮ ಶೆಟ್ಟಿ ರಂಗಭೂಮಿ ಉಡುಪಿ ಇದರ ಅಧ್ಯಕ್ಷರು ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿಯ ಜಿಲ್ಲಾಧ್ಯಕ್ಷರಾಗಿದ್ದಾರೆ. ತಮ್ಮದೇ ಆದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ಜಾನಪದ ಕಲೆಯ ಉಳಿವು ಬೆಳವಣಿಗೆಗಾಗಿ ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜಾನಪದ ವೈಭವ ಕಾರ್ಯಕ್ರಮ ಹಮ್ಮಿಕೊಂಡು ಜಾನಪದ ಕಲೆಗಳ ಪ್ರದರ್ಶನದ ಜೊತೆಗೆ ಸಾಧಕ ಜಾನಪದ ಕಲಾವಿದರಿಗೆ, ಜಾನಪದ ಸಂಘಟಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ನಡೆಸಿದ್ದಾರೆ. ತಲ್ಲೂರು ಕನಕಾ ಅಣ್ಯಯ್ಯ ಶೆಟ್ಟಿ ಪ್ರಶಸ್ತಿ…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ರಾಮಕೃಷ್ಣ ಮಿಷನ್ ಮಂಗಳೂರು ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕ ಜಾಗೃತಿ ಸರಣಿ ಉಪನ್ಯಾಸದ ಉದ್ಘಾಟನಾ ಕಾರ್ಯಕ್ರಮ ದಿನಾಂಕ 17-11-2023 ರಂದು ಮಂಗಳೂರಿನ ಕೊಡಿಯಾಲಬೈಲ್ ನಲ್ಲಿರುವ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನಡೆಯಿತು. ಈ ಉಪನ್ಯಾಸ ಸರಣಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಜಿತಕಾಮಾನಂದಜೀ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸುತ್ತಿದ್ದೇವೆ. ವಿವೇಕಾನಂದರು ಯುವಕರ ಮೇಲೆ ಅಪಾರ ಭರವಸೆಯನ್ನಿಟ್ಟಿದ್ದರು ಅವರ ಮಾತುಗಳು ಯುವಕರಿಗೆ ಇಂದಿಗೂ ಸ್ಫೂರ್ತಿ, ಶಿಕ್ಷಣವೆಂದರೆ ಕೇವಲ ಪುಸ್ತಕದ ವಿಷಯಗಳ ಕಲಿಕೆಯಲ್ಲ ಅದು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಬೇಕು. ಇಂತಹ ಶಿಕ್ಷಣದಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ. ವಿವೇಕ ಜಾಗೃತಿ ಕಾರ್ಯಕ್ರಮವು ಸ್ವಾಮಿ ವಿವೇಕಾನಂದರನ್ನು ಯುವ ಜನತೆಗೆ ಪರಿಚಯಿಸುವ ಮೂಲಕ ಸಮರ್ಥ ಯುವ ಜನಾಂಗ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಲಿದೆ” ಎಂದರು. ಈ ಸಂದರ್ಭದಲ್ಲಿ ವಿವೇಕ ಜಾಗೃತಿ ಕಾರ್ಯಕ್ರಮದ…

Read More

23.11.1982ರಂದು ವೆಂಕಟರಮಣ ಆಚಾರ್ಯ ಹಾಗೂ ಗಿರಿಜಾ ಆಚಾರ್ಯ ಇವರ ಮಗನಾಗಿ ಜನಿಸಿದ ಪದ್ಮನಾಭ ಆಚಾರ್ಯರು B.A ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಯಕ್ಷ ಗುರು ಪ್ರಸಾದ್ ಮೊಗೆಬೆಟ್ಟು ಇವರ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿ ಒಬ್ಬ ಒಳ್ಳೆಯ ಕಲಾವಿದರಾಗಿ ರೂಪುಗೊಂಡರು. ಚಿಕ್ಕಂದಿನಿಂದಲೂ ಯಕ್ಷಗಾನದ ಬಗ್ಗೆ ಅತೀವ ಆಸಕ್ತಿ. ಸುತ್ತಮುತ್ತ ಎಲ್ಲಿ ಯಕ್ಷಗಾನ ಆದರೂ ಬೆಳಗ್ಗಿನವರೆಗೆ ಯಕ್ಷಗಾನ ನೋಡುವ ಹವ್ಯಾಸ. ಆದರೆ 29ನೇ ವಯಸ್ಸಿನವರೆಗೆ ಒಮ್ಮೆಯೂ ವೇಷ ಮಾಡಿದವವರಲ್ಲ. ಪ್ರಸಾದ್ ಮೊಗೆಬೆಟ್ಟುರವರ ಗುರುತನದಲ್ಲಿ ಶ್ರೀ ಮಹಾಲಿಂಗೇಶ್ವರ ಕಲಾ ರಂಗದಲ್ಲಿ ಮೊದಲು ಗೆಜ್ಜೆ ಕಟ್ಟಿ ವೇಷ ಮಾಡಿದ ಇವರಿಗೆ ನಂತರ ಇದೇ ಸಂಘದಲ್ಲಿ ಹಾಗೂ ಸುತ್ತಮುತ್ತಲಿನ ಅನೇಕ ಸಂಘಗಳಲ್ಲಿ ವೇಷ ಮಾಡುವ ಅವಕಾಶ ಸಿಕ್ಕಿತು. ಯಕ್ಷಗಾನದಲ್ಲಿ ಏನಾದರೂ ಅಲ್ಪಸ್ವಲ್ಪ ಕಲಿತದ್ದಿದ್ದರೆ ಬಡಗಿನ ಮೇರು ಪ್ರಸಂಗಕರ್ತ, ಯಕ್ಷ ಗುರು, ಯಕ್ಷ ಕವಿ,  ನಿರ್ದೇಶಕ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಿಂದ. ರಂಗಕ್ಕೆ ಹೋಗುವ ಮೊದಲು ಗುರುಗಳ ಹತ್ತಿರ ಪ್ರಸಂಗದ ಬಗ್ಗೆ ತಿಳಿದುಕೊಂಡು, ಪದ್ಯದ ಅರ್ಥವನ್ನು ಗುರುಗಳ ಬಳಿ ತಿಳಿದುಕೊಂಡು,…

Read More

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘವು ಕನ್ನಡ ವಿಭಾಗ ಮತ್ತು ಕನ್ನಡ ಸಂಘ, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಇದರ ಸಹಯೋಗದೊಂದಿಗೆ ಆಯೋಜಿಸುವ ಇಂದಿರಾ ರತ್ನ ದತ್ತಿ ಪ್ರಶಸ್ತಿ ಪ್ರದಾನ, ಕರ್ನಾಟಕ ರಾಜ್ಯೋತ್ಸವ ಆಚರಣೆ ಹಾಗೂ ಪತ್ರಿಕೆ ಬಿಡುಗಡೆ ಸಮಾರಂಭವು ದಿನಾಂಕ 24-11-2023 ರಂದು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎನ್. ವೆಂಕಟೇಶ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಖ್ಯಾತ ಕಿರುತೆರೆ ಕಲಾವಿದೆ ಮತ್ತು ಕಾರ್ಯಕ್ರಮ ನಿರೂಪಕಿಯಾದ ಶ್ರೀಮತಿ ಅಪರ್ಣಾ ವಸ್ತಾರೆ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯೋತ್ಸವದ ಆಶಯ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ಆಶಯ ನುಡಿಗಳನ್ನಾಡಲಿದ್ದು, ಐಕ್ಯುಎಸಿ ಸಂಚಾಲಕರಾದ ಡಾ. ಎಂ. ಎಲ್. ಅಶೋಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಹೋರಾಟಗಾರರು ಹಾಗೂ ಕವಯತ್ರಿಯಾದ ಆರ್. ಹಂಸ ಇವರಿಗೆ 2023ನೇ ಸಾಲಿನ ಇಂದಿರಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.…

Read More