Author: roovari

ಕೋಟ : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ಐವತ್ತರ ವರುಷ – ನವೋಲ್ಲಾಸದ ಹರುಷ ಪ್ರಯುಕ್ತ ನಡೆದ ಸುವರ್ಣ ಪರ್ವದ ಸಮಾರೋಪ ಸಂಭ್ರಮವನ್ನು ದಿನಾಂಕ 19 ಅಕ್ಟೋಬರ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಕೋಟ ಮೂರ್ಕೈ ಕೋಟ ವಿವೇಕ ವಿದ್ಯಾ ಸಂಸ್ಥೆ ಗಾಂಧಿ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಲಿಗ್ರಾಮ ಮಕ್ಕಳ ಮೇಳದ ಹಿರಿಯ ಪ್ರಾಕ್ತನ ವಿದ್ಯಾರ್ಥಿಗಳಿಂದ ರತ್ನಪುರದ ರಾಮ ವಿರಚಿತ ‘ತಾಮ್ರಧ್ವಜ ಕಾಳಗ’ ಮತ್ತು ವೃತ್ತಿ ಮೇಳಗಳ ಆಹ್ವಾನಿತ ಕಲಾವಿದರಿಂದ ಮೂಲ್ಕಿ ರಾಮಕೃಷ್ಣಯ್ಯ ವಿರಚಿತ ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 4-00 ಗಂಟೆಗೆ ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ಸ್ಥಾಪಕ ನಿರ್ದೇಶಕರಾದ ಹೆಚ್. ಶ್ರೀಧರ ಹಂದೆ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ. ಶ್ಯಾಮ ಭಟ್ ಇವರು ವಹಿಸಲಿದ್ದಾರೆ. ಮುಖ್ಯ ಅಭಾಗತರಾಗಿ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ಕೆ.…

Read More

ಕಾರ್ಕಳ : ಕಾರ್ಕಳದ ಸಾಹಿತ್ಯ ಸಂಘ ಏರ್ಪಡಿಸಿದ ಎಸ್. ಎಲ್. ಭೈರಪ್ಪ ಮಾಸದ ನೆನಪು ಕಾರ್ಯಕ್ರಮವು ದಿನಾಂಕ 13 ಅಕ್ಟೋಬರ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವ್ಯಕ್ತಿತ್ವ ವಿಕಸನದ ರಾಷ್ಟ್ರಮಟ್ಟದ ತರಬೇತುದಾರರು ಮತ್ತು ಲೇಖಕರೂ ಆದ ರಾಜೇಂದ್ರ ಭಟ್ ಕೆ. “ಕನ್ನಡದಲ್ಲಿ ಹಲವು ಶ್ರೇಷ್ಠ ಕಾದಂಬರಿಕಾರರು ಇದ್ದರೂ ಭೈರಪ್ಪ ಜನಪ್ರಿಯತೆಯಲ್ಲಿ ಅವರೆಲ್ಲರಿಗಿಂತ ಮುಂದೆ ಇದ್ದರು. ಅದಕ್ಕೆ ಅವರು ಆರಿಸಿಕೊಂಡ ಕ್ಷೇತ್ರ, ಶುದ್ಧ ಸಾಹಿತ್ಯ, ಯಾವುದೇ ಅಲಂಕಾರ, ಶಬ್ದಗಳ ಆಡಂಬರ, ಉತ್ಪ್ರೇಕ್ಷೆಗಳು ಇಲ್ಲದೆ ಅವರು 24 ಕಾದಂಬರಿಗಳನ್ನು ಬರೆದರು. ಸತ್ಯ ಪ್ರತಿಪಾದನೆಯೇ ಅವರ ಸಾಹಿತ್ಯದ ಉದ್ದೇಶವಾಗಿತ್ತು. ಅವರ ಎಲ್ಲಾ ಕಾದಂಬರಿಗಳು ಜನಪ್ರಿಯವಾಗಿ ಓದುಗರ ಪ್ರೀತಿಗೆ ಪಾತ್ರವಾದವು. ಭಾರತದ ಎಲ್ಲಾ ಭಾಷೆಗಳಿಗೆ ಅನುವಾದವಾದವು. ಅವರ ಆವರಣ, ಮಂದ್ರ, ಪರ್ವ, ಧರ್ಮಶ್ರೀ, ಸಾರ್ಥ, ಯಾನ ಮೊದಲಾದವುಗಳು ಭಾರತದ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಸ್ಥಾನ ಪಡೆದ ಕಾರಣ ಅವರು ಕನ್ನಡದ ಮೊದಲ ಪಾನ್ ಇಂಡಿಯಾ ಲೇಖಕ ಎಂದು ಕರೆಸಿಕೊಂಡರು. ಇವರನ್ನು ಕನ್ನಡದ ಲೆಜೆಂಡ್ ಕಾದಂಬರಿಕಾರ…

Read More

ಮಡಿಕೇರಿ : ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಪದ್ಮ ಭೂಷಣ ಎಸ್.ಎಲ್. ಭೈರಪ್ಪ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ 11 ಅಕ್ಟೋಬರ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದ ಘಟಕದ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಎಸ್.ಎಲ್. ಭೈರಪ್ಪರವರ ಸಾಹಿತ್ಯ ಸಾಧನೆಯನ್ನು ಕೊಂಡಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕ. ಸಾ. ಪ. ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ಮಾತನಾಡಿ “ಕನ್ನಡ ಸಾಹಿತ್ಯ ಲೋಕಕ್ಕೆ ಎನ್. ಎಲ್. ಭೈರಪ್ಪರವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಭೈರಪ್ಪರವರ ಸಾಹಿತ್ಯ ಜೀವನದ ದಾರಿ ಯುವ ಸಾಹಿತಿಗಳಿಗೆ ಮಾದರಿಯಾಗಿದ್ದು, ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿದೆ” ಎಂದು ಹೇಳಿದರು. ಹಿರಿಯ ಸಾಹಿತಿ ಕಿಗಾಲು ಎಸ್. ಗಿರೀಶ್ ಇವರು ಎಸ್. ಎಲ್. ಭೈರಪ್ಪರವರ ಸಾಧನೆ ಹಾಗೂ ಜೀವನ ಚರಿತ್ರೆಯನ್ನು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿವರಿಸಿದರು.…

Read More

ಸಾಗರ : ಪಾಂಚಜನ್ಯ ಕಲಾವೇದಿಕೆ ಅಂಬಾರಗೋಡ್ಲು ಇವರ ವತಿಯಿಂದ ಯಕ್ಷಗಾನ – ಸಾಹಿತ್ಯ – ಚಿತ್ರ ಸಹಿತವಾದ ಅಪರೂಪದ ಬೌದ್ಧಿಕ ಕ್ರೀಡೆ ‘ಯಕ್ಷಗಾನ ಅಷ್ಟಾವಧಾನ’ ಕಾರ್ಯಕ್ರಮವನ್ನು ದಿನಾಂಕ 18 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಸಾಗರದ ಕುಡುಪಲಿ ಸ್ವರಲಾಯದಲ್ಲಿ ಹಮ್ಮಿಕೊಳ್ಳಲಾಗಿದೆ. ಆಶುಕವಿತೆ : ಶ್ರೀ ಗಜಾನನ ಹೆಗಡೆ ಅಡೇಮನೆ, ಅಪ್ರಸ್ತುತ ಪ್ರಸಂಗ : ಡಾ. ಗಜಾನನ ಶರ್ಮ ಹುಕ್ಲು, ಸಮಸ್ಯಾಪೂರಣ : ಶ್ರೀ ದಿವಾಕರ ಹೆಗಡೆ ಕೆರೆಹೊಂಡ, ಯಕ್ಷ ಗಾಯನ : ಶ್ರೀ ಯಕ್ಷೇಶ್ವರ ಹೆಗಡೆ ಅಂಬಾರಗೋಡ್ಲು. ಮದ್ದಲೆ – ಶ್ರೀ ಚಿನ್ಮಯ ಹೆಗಡೆ, ಚಂಡೆ – ಶ್ರೀ ಮಿತ್ರ ಮಧ್ಯಸ್ಥ, ನಿಷೇಧಾಕ್ಷರಿ : ವೇದ ಮೂರ್ತಿ ಅಜಿತ್ ಕಾರಂತ ತೋಟದೂರು, ಚಿತ್ರ – ಪದ್ಯ : ಶ್ರೀಮತಿ ವಿಜಯಶ್ರೀ ನಟರಾಜ್ ಬೆಂಗಳೂರು. ದತ್ತಪದಿ : ಡಾ. ಶಿವಕುಮಾರ ಅಳಗೋಡು, ಸಂಖ್ಯಾ ಬಂಧ : ಶ್ರೀ ಎ.ಜಿ. ರಮೇಶ ಹುಕ್ಲು.

Read More

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೊಂಬತ್ತನೇ ಉಪನ್ಯಾಸ ಕಾರ್ಯಕ್ರಮ ಉಡುಪಿಯ ಕಟಪಾಡಿಯ, ತ್ರಿಶಾ ವಿದ್ಯಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ದಿನಾಂಕ 12 ಅಕ್ಟೋಬರ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ “ಆತ್ಮವಿಶ್ವಾಸ ಮತ್ತು ಧೈರ್ಯದ ಹಾದಿಯಲ್ಲಿ ಜಾಗೃತರಾಗಿ ಮತ್ತು ಚೈತನ್ಯಭರಿತರಾಗಿ” ಎಂಬ ವಿಷಯದ ಕುರಿತು ಮಾತನಾಡಿದ ಭಾರತೀಯ ಸೇನೆಯ ನಿವೃತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ “ಜೀವನದಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಎರಡು ಮಹತ್ವದ ಶಕ್ತಿಗಳು – ಆತ್ಮವಿಶ್ವಾಸ ಮತ್ತು ಧೈರ್ಯ. ಆತ್ಮವಿಶ್ವಾಸವಿಲ್ಲದೆ ಯಾರೂ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಿಲ್ಲ. ಧೈರ್ಯವಿಲ್ಲದೆ ಯಾವುದೇ ಗುರಿ ಸಾಧಿಸಲಾಗದು. ಸ್ವಾಮಿ ವಿವೇಕಾನಂದರು ಹೇಳಿದಂತೆ “Education is the manifestation of perfection already within you” — ಅಂದರೆ ಪರಿಪೂರ್ಣತೆ ನಮ್ಮೊಳಗೇ ಇದೆ, ಅದನ್ನು ಹೊರತರುವುದು ಶಿಕ್ಷಣದ ಉದ್ದೇಶ. ಈ ನಂಬಿಕೆಯೇ ಆತ್ಮವಿಶ್ವಾಸದ ಮೂಲ. ಯುವಕರು ತಮ್ಮೊಳಗಿನ ಶಕ್ತಿಯನ್ನು ಅರಿತು, ಅಜ್ಞಾನ, ಭಯ ಮತ್ತು…

Read More

ಬೆಂಗಳೂರು : ಪ್ರಯೋಗರಂಗ ಬೆಂಗಳೂರು ಇವರು ಪ್ರಸ್ತುತ ಪಡಿಸುವ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನವನ್ನು ದಿನಾಂಕ 16 ಅಕ್ಟೋಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕದ ರಚನೆ ಕಿ.ರಂ. ನಾಗರಾಜ ಇವರು ಮಾಡಿದ್ದು, ಸಂಗೀತ ಹೆಚ್.ಕೆ. ಯೋಗಾನಂದ ಇವರು ನೀಡಿದ್ದು, ಸಿಜಿಕೆ ನಿರ್ದೇಶನ ಮಾಡಿರುತ್ತಾರೆ. ಪ್ರಸ್ತುತ ಟಿ. ರಘು ಇವರು ಮರು ನಿರ್ದೇಶನ ಮಾಡಿದ್ದು, ಡಾ. ಕೆ.ವಿ. ನಾಗರಾಜ ಮೂರ್ತಿ ಇವರು ನಿರ್ಮಾಣ ಮತ್ತು ನಿರ್ವಹಣೆ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 98451 72822 ಸಂಖ್ಯೆಯನ್ನು ಸಂಪರ್ಕಿಸಿರಿ. ಪ್ರಯೋಗರಂಗದ ಬಗ್ಗೆ : ಪ್ರಯೋಗರಂಗ ನಾಟಕ ತಂಡ ಕಳೆದ 25 ವರ್ಷಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ನಾಟಕ ಪ್ರರ್ದಶಿಸುತ್ತಾ ಬಂದಿದೆ. ‘ಮಂಟೆಸ್ವಾಮಿ ಕಥಾಪ್ರಸಂಗ’, ‘ಮೌನಿ’, ‘ಪ್ರೇತದ್ವೀಪ’, ‘ಮಲ್ಲಮ್ಮನ ಮನೆ ಹೋಟು’, ‘ಬ್ರಹ್ಮಚಾರಿ ಶರಣಾದ’, ‘ಮಹಿಪತ ಕ್ವಾಣನ ತಂಬಿಗಿ ಎಂ.ಎ’, ‘ಜುಮ್ನಾಳ ದೂಳ್ಯನ ಪ್ರಸಂಗ’, ‘ರಾಜಬೇಟೆ’, ‘ಸಂತೆಯಲ್ಲಿ ನಿಂತ ಕಬೀರ’, ‘ಪರಿಹಾರ’, ‘ಜುಗಾರಿ ಕೂಟ’, ‘ಸಿರಿ ಪುರಂದರ’,…

Read More

ಬೆಂಗಳೂರು : ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯಿಂದ ಹಾಗೂ ಅರು ಕ್ರಿಯೇಶನ್ಸ್ ಮತ್ತು ಬುಕ್ ಬ್ರಹ್ಮದ ಸಹಯೋಗದೊಂದಿಗೆ 15 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 19 ಅಕ್ಟೋಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಕ.ಸಾ.ಪ. ಆವರಣದ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಡಸಾಲೆ ಪುಟ್ಟಸ್ವಾಮಯ್ಯ ಇವರ ವಹಿಸಲಿದ್ದು, ಶ್ರೀಮತಿ ಮೇಘನಾ ಸುಧೀಂದ್ರ ಮತ್ತು ಶ್ರೀಮತಿ ನಿವೇದಿತಾ ಎಚ್. ಇವರು ಕೃತಿಗಳ ಪರಿಚಯ ಮಾಡಲಿದ್ದಾರೆ. ಹಂದಲಗೆರೆ ಗಿರೀಶ್, ಸ. ಹರೀಶ್, ಡಾ. ಪ್ರದೀಪ್ ಬೇಲೂರು ಮತ್ತು ಶ್ರೀಮತಿ ಆಶಾ ರಘು ಇವರುಗಳು ಭಾಗವಹಿಸಲಿದ್ದಾರೆ. ಹೊಸ ಕೃತಿಗಳಾದ ‘ಅಮ್ಮ ಅಂದ್ರೆ ಭೂಮಿ’, ‘ಸುಡೋಕು’, ಅದೃಶ್ಯ ಬೇರುಗಳು ಮತ್ತು ‘ಹೂಮಾಲೆಯಾದ ಅಂಡಾಳು’ ಹಾಗೂ ಮರು ಮುದ್ರಣವಾಗುತ್ತಿರುವ ಕೃತಿಗಳು ಹಂದಲಗೆರೆ ಗಿರೀಶ್ ಇವರ ‘ನೀರ ಮೇಗಿಲ ಸಹಿ’ ಮತ್ತು ‘ನೇಗಿಲ ಗೆರೆ’ ಆಶಾ ರಘು ಇವರ ‘ಮಾಯೆ’, ‘ಗತ’, ‘ಆರನೇ ಬೆರಳು’, ‘ಕೆಂಪು ದಾಸವಾಳ’, ‘ಬೊಗಸೆಯಲ್ಲಿ ಕಥೆಗಳು’, ‘ಅಪರೂಪದ ಪುರಾಣ ಕಥೆಗಳು’,…

Read More

ಕೊಪ್ಪಳ : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕೊಪ್ಪಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ (ರಿ.) ಬೆಂಗಳೂರು ಕೊಪ್ಪಳ ಜಿಲ್ಲೆ ಇವರ ಸಹಯೋಗದಲ್ಲಿ ‘ಜಿಲ್ಲಾ ಮಟ್ಟದ ಯುವಜನೋತ್ಸವ 2025-26’ ದಿನಾಂಕ 17 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಕೊಪ್ಪಳ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಕಥೆ ಬರೆಯುವುದು, ಚಿತ್ರಕಲೆ, ಭಾಷಣ, ಕವಿತೆ, ವಿಜ್ಞಾನ ಮೇಳ ಸ್ಪರ್ಧೆಗಳು ನಡೆಯಲಿದ್ದು, ಹೆಚ್ಚಿನ ಮಾಹಿತಿ ಹಾಗೂ ಸ್ಪರ್ಧೆಯ ನಿಯಮಗಳಿಗೆ 08539 230121, 76763 43554 ಮತ್ತು 81973 98600 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಕಾಸರಗೋಡು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಪುವೆಂಪು ಪ್ರತಿಷ್ಠಾನ ಕಾಸರಗೋಡು, ಕೇರಳ ತುಳು ಅಕಾಡೆಮಿ ಮಂಜೇಶ್ವರ ಇವರು ಸಂಯುಕ್ತವಾಗಿ ‘ಪುವೆಂಪು ನೆನಪು 2025’ ಕಾರ್ಯಕ್ರಮವನ್ನು ದಿನಾಂಕ 15 ಅಕ್ಟೋಬರ್ 2025ರಂದು ಬೆಳಗ್ಗೆ 9-00 ಗಂಟೆಗೆ ಮಂಜೇಶ್ವರದ ಹೊಸಂಗಡಿ ದುರ್ಗಿಪಳ್ಳದಲ್ಲಿರುವ ಕೇರಳ ತುಳು ಅಕಾಡೆಮಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದಾರೆ. ಬೆಳಿಗ್ಗೆ 9-00 ಗಂಟೆಗೆ ಭಾವ ಗಾಯನ, ನೃತ್ಯ ವೈಭವ ನಡೆಯಲಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನ ಮರದ ಇವರ ವಹಿಸಲಿದ್ದು, ಮಾನ್ಯ ಸಭಾಪತಿಗಳಾದ ಬಸವರಾಜ ಎಸ್. ಹೊರಟ್ಟಿ ಇವರು ಉದ್ಘಾಟನೆ ಮಾಡಲಿದ್ದಾರೆ. ಡಾ. ಮೀನಾಕ್ಷಿ ರಾಮಚಂದ್ರ ಇವರು ನುಡಿ ನಮನಗಳನ್ನಾಡಲಿದ್ದು, ಹಿರಿಯ ಸಹಿತ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರಿಗೆ ‘ಪುವೆಂಪು ಪ್ರಶಸ್ತಿ’ಯನ್ನು ಮಾಜಿ ಸಚಿವರಾದ ಹೆಚ್.ಎಂ. ರೇವಣ್ಣ ಇವರು ಪ್ರದಾನ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪುರುಷೋತ್ತಮ ಭಟ್ ಕೆ. ಮಟ್ಟಿ ರಾಮಪ್ಪ ಮಂಜೇಶ್ವರ ಇವರ ನಿರ್ವಹಣೆಯಲ್ಲಿ ಸಾಂಸ್ಕೃತಿಕ…

Read More

ಸಾಲಿಗ್ರಾಮ : ಗೆಳೆಯರ ಬಳಗ (ರಿ.) ಕಾರ್ಕಡ ಸಾಲಿಗ್ರಾಮ ಇವರ ವತಿಯಿಂದ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮವು ದಿನಾಂಕ 17 ಅಕ್ಟೋಬರ್ 2025ರಂದು ಸಂಜೆ 4-30 ಗಂಟೆಗೆ ಸಾಲಿಗ್ರಾಮ ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಶ್ರೀ ಕೆ. ಚಂದ್ರಕಾಂತ ನಾಯರಿ ನೇತೃತ್ವದಲ್ಲಿ ಸ್ಥಳೀಯ ಪ್ರತಿಭೆಗಳಿಂದ ‘ಗಾನ ನಮನ’, ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ‘ನೃತ್ಯ ವೈವಿಧ್ಯ’ ಪ್ರಸ್ತುತಗೊಳ್ಳಲಿದೆ. ಸಭಾ ಕಾರ್ಯಕ್ರಮದಲ್ಲಿ ಕಾರಂತರ ಸಂಸ್ಮರಣೆ ಹಾಗೂ ಎಚ್. ಶಕುಂತಳಾ ಭಟ್ ಇವರಿಗೆ ‘ಗೆಳೆಯರ ಬಳಗ ಕಾರಂತ ಪುರಸ್ಕಾರ 2025’ ಪ್ರದಾನ ನಡೆಯಲಿದೆ. ಬಳಿಕ ಶಶಿಕಾಂತ ಶೆಟ್ಟಿ ಕಾರ್ಕಳ ಇವರ ನೇತೃತ್ವದಲ್ಲಿ ಶ್ರೀದೇವಿ ಯಕ್ಷಕಲಾ ವೃಂದದ ಕಲಾವಿದರಿಂದ ‘ಶ್ರೀಕೃಷ್ಣ ತುಲಾಭಾರ’ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Read More