Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಗೋಣಿಕೊಪ್ಪಲಿನ ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಬಹುಭಾಷಾ ಕವಿಗೋಷ್ಠಿಯು ದಿನಾಂಕ 26 ಸೆಪ್ಟೆಂಬರ್ 2026ರ ಶುಕ್ರವಾರ ಬೆಳಿಗ್ಗೆ 10-00 ಗಂಟೆಗೆ ಗೋಣಿಕೊಪ್ಪಲು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಲಾಗುವ ಶ್ರೀ ಕಾವೇರಿ ದಸರಾ ಕಲಾ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಗೋಣಿಕೊಪ್ಪಲು ಬಹುಭಾಷಾ ಕವಿಗೋಷ್ಠಿ ಆಯೋಜನ ಸಮಿತಿಯ ಅಧ್ಯಕ್ಷರಾಗಿರುವ ಕೋಳೆರ ದಯಾ ಚಂಗಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಂಚಾಲಕರಾಗಿ ಶ್ರೀಮತಿ ಎಸ್.ಎಂ, ರಜನಿ, ಕಾರ್ಯದರ್ಶಿಯಾಗಿ ಶ್ರೀಮತಿ ಶೀಲಾ ಬೋಪಣ್ಣ, ಸಹಕಾರ್ಯದರ್ಶಿಯಾಗಿ ಟಿ.ಅರ್. ವಿನೋದ್, ನಿರ್ದೇಶಕರಾಗಿ ಶ್ರೀಮತಿ ಚಂದನಾ ಮಂಜುನಾಥ್, ಶ್ರೀಮತಿ ಓಮನ, ಶ್ರೀಮತಿ ಉಳುವಂಗಡ ಕಾವೇರಿ, ಜಗದೀಶ್ ಜೋಡುಬೀಟಿ, ಕೆ.ವಿ. ರಾಮಕೃಷ್ಣ, ಶ್ರೀ ಕಾವೇರಿ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸಂಯೋಜಕ ಎಂ.ಕೆ. ಚಂದನ್ ಕಾಮತ್, ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್…
ಉಡುಪಿಯ ಪ್ರತಿಷ್ಠಿತ ಸಂಸ್ಥೆ ರಾಗ ಧನ (ರಿ.) ಇದರ ಆಶ್ರಯದಲ್ಲಿ ರಾಗರತ್ನಮಾಲಿಕೆ -40 ತಿಂಗಳ ಸರಣಿ ಕಾರ್ಯಕ್ರಮವು ಚೆನ್ನೈಯ ಭಾರದ್ವಾಜ್ ಸುಬ್ರಹ್ಮಣ್ಯಂ ಇವರ ಸಂಗೀತ ಕಛೇರಿಯೊಂದಿಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು. ಉತ್ತಮ ಶಾರೀರ ಭಾವಸ್ಪಷ್ಟತೆ, ಉಚ್ಚಾರ ಸ್ಪುಟತೆ, ಲಯ ಶುದ್ಧತೆಯಿಂದ ವಿದ್ವತ್ಪೂರ್ಣ ಕಚೇರಿ ನೀಡಿದವರು ಚೆನ್ನೈನ ಭಾರದ್ವಾಜ್ ಸುಬ್ರಹ್ಮಣ್ಯಂ. ಆರಂಭದಲ್ಲಿ ವಲಚಿ ನವರಾಗಮಾಲಿಕೆಯನ್ನು ಆದಿತಾಳದಲ್ಲಿ ಸುಂದರವಾಗಿ ಹಾಡಿ ಚರಣ ಭಾಗದಲ್ಲಿ ಬೇರೆ ಬೇರೆ ರಾಗಗಳಿಗೆ ಸ್ವರ ಪ್ರಸ್ತಾರವನ್ನು ಅಚ್ಚುಕಟ್ಟಾಗಿ ಹಾಕಿ ಹಾಡಿದರು. ಮುಂದೆ ಆರಭಿ ರಾಗದ ಚುಟುಕಾದ ರಾಗಾಲಾಪನೆ ‘ವಿಘ್ನೇಶ್ವರ ಶುಭಕಾರಕ’ ಕೃತಿಗೆ ಸ್ವರ ಪ್ರಸ್ತಾರವನ್ನು ನೀಡಿದರು. ತದನಂತರ ಶುದ್ಧಧನ್ಯಾಸಿ ರಾಗಾಲಾಪನೆ ‘ನಾರಾಯಣ ನಿನ್ನ’ ಪುರಂದರದಾಸರ ದೇವರ ನಾಮವು ಸ್ವರಪ್ರಸ್ತಾರದೊಂದಿಗೆ ಮೂಡಿ ಬಂದದು ಶ್ಲಾಘನೀಯವಾಗಿತ್ತು. ಮುಂದುವರಿದು ವೇಗವಾಗಿ ‘ಮಾಳವಿ’ ರಾಗದಲ್ಲಿ ‘ನೆನರುಂಚಿನ’ ಆದಿತಾಳದಲ್ಲಿ ಕೃತಿಯನ್ನು ಪ್ರಸ್ತುತಪಡಿಸಿದರು. ಕಛೇರಿ ಮುಂದುವರಿಯುತ್ತಾ ಭೈರವಿ ರಾಗ ಆಲಾಪನೆಯೂ ದೀರ್ಘವಾಗಿ ಒಂದೇ ಉಸಿರಿನಲ್ಲಿ ನಿಂತ ಪರಿ ಅನನ್ಯ. ‘ನನ್ನುಬ್ರೋವಲಲಿತ’ ಕೃತಿಯನ್ನು…
ಹೈದರಬಾದ್ : ಹೈದರಾಬಾದಿನಲ್ಲಿ ಸ್ಥಳೀಯ ಶಾಸಕರಾದ ಕಾಲೇರು ವೆಂಕಟೇಶ್ ಹಾಗೂ ಡಿಸಿಪಿ ರಾಹುಲ್ ಹೆಗ್ಡೆಯವರ ಉಪಸ್ಥಿತಿಯಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಇದರ 44ನೇ ಘಟಕದ ಉದ್ಘಾಟನಾ ಸಮಾರಂಭವು ದಿನಾಂಕ 10 ಸೆಪ್ಟೆಂಬರ್ 2025ರ ಬುಧವಾರದಂದು ನಡೆಯಿತು. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕರು, ಸುಪ್ರಭಾತ ಗ್ರೂಪ್ಸ್ ಆಫ್ ಹೋಟೆಲ್ ಹೈದರಾಬಾದಿನ ಮಾಲೀಕರಾದ ಕೃಷ್ಣಮೂರ್ತಿ ಮಂಜ ಅವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರೆ ಶ್ರೀ ಎನ್. ಶ್ರೀಧರ್ ರಾವ್ ಗೌರವಾಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಟಿ. ಸತ್ಯನಾರಾಯಣ ಹತ್ತಾವರ ಮತ್ತು ಏ. ಜಯರಾಮ ಶೆಟ್ಟಿ, ಕಾರ್ಯದರ್ಶಿಯಾಗಿ ಜಿ. ರತ್ನಾಕರ್ ರೈ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಸುಮತಿ ನಿರಂಜನ್ ರಾವ್ ಮತ್ತು ಕೋಶಾಧಿಕಾರಿಯಾಗಿ ಎನ್. ಕೆ. ರಮಾ ಮೂರ್ತಿಯವರು ಹಾಗೂ 18 ಮಂದಿ ಸದಸ್ಯರು ತಮ್ಮ ಸ್ಥಾನವನ್ನು ಅಲಂಕರಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣಮೂರ್ತಿ ಮಂಜ ಅವರು ಕಳೆದ ಯಕ್ಷದ್ರುವ ದಶಮ ಸಂಭ್ರಮಕ್ಕೆ ಹೈದರಾಬಾದಿನಿಂದ ಘೋಷಿಸಿದ ಹತ್ತು ಲಕ್ಷದ ಮೊತ್ತವನ್ನು ಸಹೃದಯಿ ದಾನಿಗಳ ಮೂಲಕ ಪಟ್ಲ ಸತೀಶ್ ಶೆಟ್ಟಿ ಅವರಿಗೆ…
ಚೇಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಚೇಳೂರು ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ ರಾಜ್ಯ ಇವರು ಚೇಳೂರು ತಾಲೂಕು ಕೇಂದ್ರದಲ್ಲಿ ದಸರ ಹಬ್ಬದ ಪ್ರಯುಕ್ತ ಭಾರತೀಯ ಭಾಷೆಗಳ ಕವಿ ಮಿತ್ರರಿಗೆ “ದಸರ ಕವಿಗೋಷ್ಠಿ”ಯನ್ನು ಆಯೋಜಿಸುತಿದ್ದು, ಭಾಗವಹಿಸಲು ಇಚ್ಚಿಸುವ ಕವಿಗಳು ಈ ಕೆಳಗೆ ನೀಡಿರುವ ಜಂಗಮ ವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. ರಾಧಾಮಣಿ ಎಂ. ಕೋಲಾರ – 9972731056, ಸತ್ಯ ನಾರಾಯಣ ವಿ. – 9945291154, ಪಿ. ಎಸ್. ಶ್ರೀಧರ್(ಶಾಸ್ತ್ರಿ) – 9606794039 ನಿಯಮಗಳು:- 1)ಕವನ ಭಾರತೀಯ ಭಾಷೆಗಳಲ್ಲಿ ಯಾವುದೇ ಭಾಷೆಯದ್ದಾಗಿರಬಹುದು, 2)ಒಬ್ಬರು ಒಂದು ಕವನ ಮಾತ್ರ ವಾಚನ ಮಾಡಲು ಅವಕಾಶ ನೀಡಲಾಗುವುದು, 3)ದೇಶ ಭಕ್ತಿ, ನಾಡು ನುಡಿಗೆ ಸಂಬಂಧಪಟ್ಟಿರಬೇಕು, 4)ಚುಟುಕು, ಹನಿಗವನ, ಟಂಕಾ, ಹಾಯ್ಕುಗಳಿಗೆ ಅವಕಾಶವಿರುವುದಿಲ್ಲ, 5)ದಸರ ಹಬ್ಬದ ಕವನಗಳಿಗೆ ಆದ್ಯತೆ ನೀಡಲಾಗುವುದು, 6)ಕವನದಲ್ಲಿ 16 ರಿಂದ 20 ಸಾಲುಗಳು ಇರಲಿ, 7)ಕವನಗಳು ಸ್ವರಚಿತವಾಗಿರಬೇಕು, 8)ಕವಿಗಳು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು, 9)ಭಾಗವಹಿಸಿದ ಎಲ್ಲಾ ಕವಿಗಳಿಗೂ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಗುವುದು, 10)ಸಂಸ್ಥೆಯ…
ಮಂಗಳೂರು: ಭರತಾಂಜಲಿಯ ವಿದ್ವಾನ್ ಶ್ರೀಧರ ಹೊಳ್ಳ ಹಾಗೂ ವಿದ್ವಾನ್ ಪ್ರತಿಮಾ ಶ್ರೀಧರ ಹೊಳ್ಳ ಅವರ ಶಿಷ್ಯೆ ಕುಮಾರಿ ಅಪೂರ್ವ ಬಿ. ರಾವ್ ಅವರ ರಂಗಪ್ರವೇಶ ಸಮಾರಂಭ 06 ಸೆಪ್ಟೆಂಬರ್ 2025ರ ಶನಿವಾರದಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ವೀಣಾ ಬನ್ನಂಜ್ಜೆ ಮಾತನಾಡಿ “ವಿವಿಧ ಜಾತಿ, ಪ್ರಕಾರಗಳ ಸ್ವರಗಳು, ಪರಿಕರಗಳು ಏಕ ಕಾಲದಲ್ಲಿ ಕೂಡಿ ಪ್ರಸ್ತುತ ಪಡಿಸಿದಾಗ ಭಾರತೀಯ ಪರಂಪರೆ, ನಾಟ್ಯ ಪರಂಪರೆಯ ಅನಾವರಣವಾಗುತ್ತದೆ. ನಮ್ಮ ನೃತ್ಯ ಪರಂಪರೆಯು ಪವಿತ್ರ ಪರಂಪರೆಯಾಗಿದೆ. ಯಾಕೆಂದರೆ ಸ್ವತಃ ಶ್ರೀಕೃಷ್ಣ ಪರಮಾತ್ಮ ಹಾಗೂ ರುದ್ರ ದೇವರು ಕುಣಿದ ಪ್ರಕಾರ. ಇದು ದೇವರು ನಮಗೆ ನೀಡಿದ ಪರಂಪರೆಯಾಗಿದೆ. ದೇವಲೋಕದಲ್ಲಿ ಜನಿಸಿದ ಈ ಕಲೆಯ ಪರಂಪರೆಯನ್ನು ಭೂಲೋಕಕ್ಕೆ ಇಳಿಸಿ, ಮನುಷ್ಯರನ್ನು ಗಂಧರ್ವರ ಸಮಾನರನ್ನಾಗಿ ಮಾಡುವ ಶಕ್ತಿ ನೃತ್ಯಕಲೆಗೆ ಇದೆ. ಈ ನೃತ್ಯಮಾರ್ಗವು ಭಾವಲೋಕವನ್ನು ದೇವಲೋಕದೊಂದಿಗೆ ಜೋಡಿಸುವ ಸೇತುವೆಯಂತಿದೆ. ಈ ಮಾರ್ಗದಲ್ಲಿ ಅನೇಕ ಶ್ರೇಷ್ಠ ಕಲಾವಿದರು ನೃತ್ಯಸಾಧನೆಯ ಮೂಲಕ ದೇವರನ್ನೇ ಒಲಿಸಿಕೊಂಡಿದ್ದಾರೆ. ಆ ಪವಿತ್ರ ಪರಂಪರೆಯ ಮುಂದುವರಿಕೆಯಾಗಿ ಇಂದು…
1929ರ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರು ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯವನ್ನು ವಾಚಿಸಿ ನಾಡಿಗೆ ‘ಬೇಂದ್ರೆ’ ಕಾವ್ಯದ ಗುಂಗು ಹಿಡಿಸಿಬಿಟ್ಟರು. ಇವರ ಕಾವ್ಯ ವಾಚನ ಕೇಳಿದ ಮಾಸ್ತಿಯವರು ಬೆಳಗಾವಿಯಿಂದ, ಧಾರವಾಡದ ಬೇಂದ್ರೆಯವರ ಮನೆಗೆ ಬಂದು ಅವರು ಬರೆದ ಕವಿತೆಗಳನ್ನೆಲ್ಲಾ ತೆಗೆದುಕೊಂಡು ಹೋಗಿ ಆಯ್ದು ‘ಗರಿ’ ಕವನ ಸಂಕಲನವನ್ನು 1932ರಲ್ಲಿ ಬೆಂಗಳೂರಿನಿಂದ ಪ್ರಕಟಮಾಡಿದರು. ಇದು ಬೇಂದ್ರೆಯವರ ಮೊದಲ ಕವನ ಸಂಕಲನ. ಈ ಕವನ ಸಂಕಲನ ನಾಡಿನಲ್ಲೆಲ್ಲಾ ಒಂದು ರೀತಿಯ ಕಾವ್ಯದ ವಿದ್ಯುತ್ ಸಂಚಲನವನ್ನುಂಟು ಮಾಡಿತು. ಇದರಲ್ಲಿ ಒಟ್ಟು 55 ಕವಿತೆಗಳಿವೆ. ಮೊದಲನೆಯದು ‘ಬೆಳಗು’. ಕೊನೆಯದು ‘ಗರಿ’. ಈ ಸಂಕಲನದ ಕೊನೆಯ ಕವಿತೆಯೆ, ಈ ಸಂಕಲನದ ಶಿರೋನಾಮೆ. ಗರಿ ಹಕ್ಕಿಗಳಲ್ಲಿ ಮಾತ್ರ ಕಂಡು ಬರುವ ಒಂದು ವಿಶೇಷ ನಿರ್ಜೀವ ರಚನೆ. ಆದರೆ ಈ ನಿರ್ಜಿವತ್ವವು ಪಕ್ಷಿಗೆ ಹಾರಲು ಜೀವವನ್ನು ತಂದು ಕೊಡುತ್ತದೆ. ಇದು ಇದರ ವಿಶೇಷ. ಇವು ಪಕ್ಷಿ ದೇಹವನ್ನು ಮುಚ್ಚುವದಲ್ಲದೆ, ಪಕ್ಷಿ ದೇಹಕ್ಕೆ ಹೊಸ ಹೊರ ರೂಪ ರಚನೆಯನ್ನು ಕೊಡುತ್ತವೆ. ಜಗತ್ತಿನ…
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ವತಿಯಿಂದ ಶ್ರೀ ವಿಶ್ವೇಶತೀರ್ಥ ಸಭಾಂಗಣದ ಉದ್ಘಾಟನಾ ಸಮಾರಂಭವನ್ನು ದಿನಾಂಕ 13 ಸೆಪ್ಟೆಂಬರ್ 2025ರಂದು ಸುರತ್ಕಲ್ ನಾಗಬನ ರೋಡ್ ಇಲ್ಲಿರುವ ಅನುಪಲ್ಲವಿಯಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವಿದ್ವಾನ್ ಡಿ. ಅನ್ನು ದೇವಾಡಿಗ, ಬಿ. ಸೀತಾರಾಮ ತೊಳ್ಪಾತ್ತಾಯ ಮತ್ತು ಕುಮಾರಿ ರೆಮೋನಾ ಎವೆಟ್ ಪಿರೇರಾ ಇವರನ್ನು ಸನ್ಮಾನಿಸಲಾಗುವುದು. ಬಳಿಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ದಿವ್ಯಾಶ್ರೀ ಇವರ ಹಾಡುಗಾರಿಕೆಗೆ ತನ್ಮಯಿ ಉಪ್ಪಂಗಳ ಇವರು ವಯೋಲಿನ್, ಪನ್ನಗ ಶರ್ಮನ್ ಮೃದಂಗ ಮತ್ತು ಸುಜಾತಾ ಎಸ್. ಭಟ್ ತಂಬೂರದಲ್ಲಿ ಸಹಕರಿಸಲಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಹಾಸನ ಜಿಲ್ಲಾ ಘಟಕದ ಸಹಯೋಗದೊಂದಿಗೆ ಹಾಸನದಲ್ಲಿ ನಡೆದ ಅರಿವಿನ ಪಯಣ ಕಾರ್ಯಕ್ರಮದಲ್ಲಿ ಅಧ್ಯಯನ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಮಾದಕದ್ರವ್ಯ ವ್ಯಸನಗಳಿಂದ ಆಗುವ ಅನಾಹುತಗಳು ಕುರಿತು ಅರಿವು ಮೂಡಿಸುವ ಒಂದು ಕಿರು ನಾಟಕ ಪ್ರದರ್ಶನ ನೀಡಿದರು. ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಎಂಬ ಭೂತ ಸದ್ದಿಲ್ಲದೆ ಯುವ ಪೀಳಿಗೆಯನ್ನು ಹೇಗೆ ವ್ಯಾಪಿಸಿದೆ ? ಇದರಿಂದ ಆಗುತ್ತಿರುವ ಅನಾಹುತಗಳೇನು ? ಇದರಿಂದ ಎಷ್ಟು ಕುಟುಂಬಗಳು ಸಂಕಷ್ಟಕ್ಕೆ ದೂಡಲ್ಪಟ್ಟಿವೆ ? ಎಂಬುದನ್ನ ನಾವು ದಿನನಿತ್ಯ ಕೇಳುತ್ತಿದ್ದೇವೆ. ಆದರೆ ಈ ಯುವ ಪೀಳಿಗೆ ಯಾಕೆ ಇಂತಹ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ ? ಇದಕ್ಕೆ ಕಾರಣ ಏನು ? ಹುಡುಕುತ್ತ ಹೊರಟಾಗ ನಮಗೆ ಸಿಕ್ಕ ಅಂಕಿ ಅಂಶಗಳು ಮೂರು ತರಹದ ಗುಂಪುಗಳು ಸಿಗುತ್ತದೆ. ಅದರಲ್ಲಿ ಮೊದಲನೆಯ ಗುಂಪು ಅದು ಏನು ? ಹೇಗಿರುತ್ತದೆ ನೋಡೋಣ ಎಂಬ ಕುತೂಹಲಕ್ಕೆ ಹೋಗುವವರು. ಎರಡನೆಯ ಗುಂಪು ಅತಿಯಾದ ಶ್ರೀಮಂತಿಕೆ, ಮತ್ತೊಂದು ಅತಿಯಾದ ಬಡತನ. ಈ ಮೂರು…
ಕಾಸರಗೋಡು : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು(ರಿ) ನೇತೃತ್ವದಲ್ಲಿ ಆಯೋಜಿಸುವ ಖ್ಯಾತ ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯ ವೈ. ಸತ್ಯನಾರಾಯಣ ಇವರ ‘ಆಕಾಶದಿಂದ ಪಾತಾಳಕ್ಕೆ’ ಕಥಾ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 13 ಸೆಪ್ಟೆಂಬರ್ 2025ರ ಶನಿವಾರದಂದು ಕಾಸರಗೋಡಿನ ಕರೆಂದಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ಅಪರಾಹ್ನ ಘಂಟೆ 3:00ಕ್ಕೆ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಕೆ. ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಹಾಗೂ ರಂಗಕರ್ಮಿಗಳಾದ ಕಾಸರಗೋಡು ಚಿನ್ನಾ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ. ಖ್ಯಾತ ಸಾಹಿತಿಗಳಾದ ಡಾ. ಪ್ರಮೀಳಾ ಮಾಧವ್ ಪುಸ್ತಕದ ಕುರಿತು ಮಾತನಾಡಲಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕರಾದ ವೈ. ಸತ್ಯನಾರಾಯಣ, ಕಾಸರಗೋಡು ಕನ್ನಡ ಲೇಖಕರ ಬಳಗದ ಕಾರ್ಯಾಧ್ಯಕ್ಷರು ಹಾಗೂ ಸಾಹಿತಿಗಳಾದ ಪ್ರೊ. ಪಿ. ಎನ್. ಮೂಡಿತ್ತಾಯ, ಕನ್ನಡ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ಟಿ. ಎ. ಎನ್. ಖಂಡಿಗೆ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ…
ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ 97ನೇ ಶಾಸ್ತ್ರೀಯ ಮಾಸಿಕ ಸಂಗೀತ ಕಛೇರಿ ‘ಆಲಾಪ್’ ಕಾರ್ಯಕ್ರಮವನ್ನು ದಿನಾಂಕ 13 ಸೆಪ್ಟೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದ ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಲಾಗಿದೆ. ಈ ಹಿಂದೂಸ್ಥಾನಿ ವಾದ್ಯ ಸಂಗೀತ ಕಾರ್ಯಕ್ರಮದಲ್ಲಿ ಶ್ರೀರಕ್ಷಾ ಶಾನ್ ಭೋಗ್ ಇವರ ಹಾರ್ಮೋನಿಯಂ ವಾದನಕ್ಕೆ ಶ್ರೀರಶ್ಮಿ ಶಾನ್ ಭೋಗ್ ತಬಲಾ ಸಾಥ್ ನೀಡಲಿದ್ದಾರೆ. ‘ಆಲಾಪ್’ ಸರಣಿ ಸ್ವರ ಮಾಲಿಕೆಯ 97ನೇ ಕಾರ್ಯಕ್ರಮ ಇದಾಗಿದ್ದು, ಕಳೆದ 10 ವರ್ಷಗಳಿಂದ ಈ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಉದಯೋನ್ಮುಖ ಕಲಾವಿದರಿಗಾಗಿಯೇ ಆಯೋಜಿಸುವ ಈ ಸರಣಿಯಲ್ಲಿ ಒಂದು ತಿಂಗಳು ಹಿಂದೂಸ್ಥಾನಿ ಹಾಗೂ ಒಂದು ತಿಂಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳು ನಡೆಯುತ್ತಿದೆ. ಶ್ರೀ ನಿವಾಸ್ ಜಿ. ಕಪ್ಪಣ್ಣ ಹಾಗೂ ಲಲಿತ ಕಪ್ಪಣ್ಣ ದಂಪತಿಗಳು ತಮ್ಮ ಮನೆಯ ಅಂಗಳದಲ್ಲಿಯೇ ಸುಸಜ್ಜಿತವಾದ ಸಭಾಂಗಣವನ್ನು ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿಯೇ ಮುಡಿಪಾಗಿಟ್ಟಿದ್ದಾರೆ. ಕಪ್ಪಣ್ಣ ಅವರ ಪುತ್ರಿ ಹಾಗೂ ಕಪ್ಪಣ್ಣ ಅಂಗಳದ ನಿರ್ದೇಶಕಿಯಾದ ಸ್ನೇಹ ಕಪ್ಪಣ್ಣರವರು ಈ…