Author: roovari

ಉಡುಪಿ : ಲಕ್ಷ್ಮೀ ಗುರುರಾಜ್ ಎನ್.ಎನ್.ಯು. (ರಿ.) ಇದರ ಪಂಚ ತ್ರಿಂಶತ್ ಉತ್ಸವದ ಅಂಗವಾಗಿ ಆಯೋಜಿಸುತ್ತಿರುವ ‘ನೃತ್ಯ ರಂಗದಲ್ಲಿ ಬೆಳಕಿನ ವಿನ್ಯಾಸ’ ನೃತ್ಯ ಗುರುಗಳಿಗೆ ಮತ್ತು ವಿದ್ವತ್ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರವು ದಿನಾಂಕ 20 ಜುಲೈ 2025ರಂದು ಬೆಳಗ್ಗೆ 10-30 ಗಂಟೆಗೆ ಉಡುಪಿಯ ಕುಂಜಿಬೆಟ್ಟು ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಲಿದೆ. ಒಡಿಸ್ಸಿ ನೃತ್ಯ ಗುರುಗಳಾದ ಶ್ರೀ ಉದಯ್ ಕುಮಾರ್ ಶೆಟ್ಟಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಆಸಕ್ತರು ವಿದುಷಿ ಶ್ರೀವಿದ್ಯಾ ಸಂದೇಶ್ 98445 51114 ಮತ್ತು ಶ್ರೀಮತಿ ಶ್ರೀಲಲಿತಾ ಪ್ರವೀಣ್ 94818 43935 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಬೆಂಗಳೂರು : ಜಾಣಗೆರೆ ಪತ್ರಿಕೆ ಪ್ರಕಾಶನ ಇದರ ವತಿಯಿಂದ ಸಾಹಿತಿ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಇವರ ‘ನುಡಿಗೋಲು 3’ ಅಪೂರ್ವ ಸಾಧಕರ ನುಡಿ ಸಂಕಥನ ಕೃತಿ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 19 ಜುಲೈ 2025ರಂದು ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಗಾನ ಪಲ್ಲವಿ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಡ್ಯದ ಕರ್ಣಾಟಕ ಸಂಘ ಇದರ ಅಧ್ಯಕ್ಷರಾದ ಡಾ. ಬಿ. ಜಯಪ್ರಕಾಶ ಗೌಡ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಕವಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಪ್ರಸಿದ್ಧ ವಿಮರ್ಶಕರಾದ ಡಾ. ಎಂ.ಎಸ್. ಆಶಾದೇವಿ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಶ್ರೀಮತಿ ಸುನಂದಾ ಜಯರಾಮ್, ಮಾವಳ್ಳಿ ಶಂಕರ್ ಮತ್ತು ಡಾ. ವಸುಂಧರಾ ಭೂಪತಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ಶ್ರೀ ಸಂತವಾಣಿ ಸುಧಾಕರ್ ಮತ್ತು ತಂಡದವರಿಂದ ಸುಗಮ ಗಾಯನ ಪ್ರಸ್ತುತಗೊಳ್ಳಲಿದೆ.

Read More

ಪುತ್ತೂರು : ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ದಿನಾಂಕ 15 ಜುಲೈ 2025ರಂದು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಈಶ್ವರ ಭಟ್ ಪುಳು ಪ್ರಾಯೋಜಕತ್ವದಲ್ಲಿ ‘ಸುಭದ್ರಾ ಕಲ್ಯಾಣ’ ತಾಳಮದ್ದಳೆ ನಡೆಯಿತು. ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಆನಂದ ಸವಣೂರು, ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್, ಜಯಪ್ರಕಾಶ್ ನಾಕೂರು, ಟಿ.ಡಿ. ಗೋಪಾಲಕೃಷ್ಣ ಭಟ್, ಬಲರಾಮನಾಗಿ ಗುಂಡ್ಯಡ್ಕ ಈಶ್ವರ ಭಟ್, ಶ್ರೀಕೃಷ್ಣನಾಗಿ ವಿ.ಕೆ. ಶರ್ಮ ಅಳಿಕೆ, ಅರ್ಜುನನಾಗಿ ಗುಡ್ಡಪ್ಪ ಬಲ್ಯ, ಸುಭದ್ರೆಯಾಗಿ ಭಾಸ್ಕರ ಬಾರ್ಯ, ಸತ್ಯಭಾಮೆಯಾಗಿ ಮಾಂಬಾಡಿ ವೇಣುಗೋಪಾಲ ಭಟ್, ವನಪಾಲಕನಾಗಿ ಬಡೆಕ್ಕಿಲ ಚಂದ್ರಶೇಖರ ಭಟ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಆಂಜನೇಯ ಉಭಯ ಯಕ್ಷಗಾನ ಸಂಘಗಳಿಂದ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದಿನಾಂಕ 25 ಜುಲೈ 2025ರಿಂದ ಜರಗಲಿರುವ ತಾಳಮದ್ದಳೆ ಸಪ್ತಾಹದ ಆಮಂತ್ರಣ ಪತ್ರಿಕೆಯನ್ನು ಕರ್ನಾಟಕ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ಪುಳು ಈಶ್ವರ ಭಟ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಉಭಯ ಸಂಘಗಳ ಅಧ್ಯಕ್ಷರಾದ ಭಾಸ್ಕರ ಬಾರ್ಯ, ಪ್ರೇಮಲತಾ…

Read More

ಶಿರಸಿ : ಬೆಂಗಳೂರಿನ ಆನಂದ ರಾವ್ ವೃತ್ತದ ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ವಿಶ್ವಾಭಿಗಮನಮ್ ಯಕ್ಷನೃತ್ಯ, ಸಾಹಿತಿ ಪ್ರಸಂಗಕರ್ತ ದಿನೇಶ ಉಪ್ಪೂರ ಇವರಿಗೆ ಸನ್ಮಾನ ಮತ್ತು ‘ಯಕ್ಷಗಾನ ಶಾಸ್ತ್ರೀಯವೇ’ ಕುರಿತ ಸಂವಾದ ಕಾರ್ಯಕ್ರಮವು ದಿನಾಂಕ 12 ಜುಲೈ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಅಂಕಣಕಾರ ರಾಜು ಅಡಕಳ್ಳಿ “ದಶರೂಪಗಳ ದಶಾವತಾರ ಕೃತಿಯನ್ನು ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಇವರು ಹತ್ತು ವರ್ಷಗಳ ಸತತ ಅಧ್ಯಯನ, ಪರಿಕ್ರಮದಿಂದ ರಚಿಸಿದ್ದಾರೆ: ಯಕ್ಷಗಾನಕ್ಕೆ ಇದೊಂದು ಆಕರ ಗ್ರಂಥ. ಈ ಕೃತಿ ಡಾಕ್ಟರೇಟ್ ಪಡೆಯಲು ಅರ್ಹವಾದ ಕೃತಿ. ಅಶೋಕ ಹಾಸ್ಯಗಾರ ಇವರು ಸ್ವಚ್ಛ, ಪ್ರಾಮಾಣಿಕ, ಬದ್ದತೆಯುಳ್ಳ, ಸಂಪಾದಕರಾಗಿದ್ದರು. ಅವರ ಈ ಕೃತಿಗೆ ಸಮ್ಮಾನ ಕೂಡ ದೊರೆತಿರುವುದು ಸಂತಸದ ವಿಷಯ. ಇಂತಹ ಸಂವಾದ ಕಾರ್ಯಕ್ರಮ ಏರ್ಪಡಿಸುವುದು ಸ್ತುತ್ಯಾರ್ಹ” ಎಂದು ಅಭಿಪ್ರಾಯಪಟ್ಟರು. ದಿನೇಶ ಉಪ್ಪೂರ ಇವರನ್ನು ಸನ್ಮಾನಿಸಿದ ಗಿಂಡಿಮನೆ ಮೃತ್ಯುಂಜಯ ಇವರು ಮಾತನಾಡಿ ದಿನೇಶ ಉಪ್ಪೂರ ಇವರ ಪ್ರಸಂಗ ಸಾಹಿತ್ಯದಲ್ಲಿಯ ಭಂದಸ್ಸು,…

Read More

ಪ್ರಾಣೇಶಾಚಾರ್ಯ ತನ್ನ ಹೆಂಡ್ತಿ ಕಮಲಮ್ಮ, ಮಕ್ಕಳು ಪರಿಮಳ ಮತ್ತು ವಸುಧೇಂದ್ರ ಆಚಾರ್ಯರ ಜೊತೆ ನೆಮಲಿಗುಂಡ್ಲ ರಂಗನಾಯಕ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಮಲಗಿ, ಭಾನುವಾರ ಬೆಳಿಗ್ಗೆ ಏಳು ಗಂಟೆಗೆ ಕಾರ್‌ನಲ್ಲಿ ಕರ್ನೂಲಿಗೆ ಹೊರಟ್ರು. ಗ್ರೂಪ್-2 ಪರೀಕ್ಷೆ ಮೂಲಕ ಡೆಪ್ಯೂಟಿ ತಹಶೀಲ್ದಾರ್ ಆಗಿ ಆಯ್ಕೆಯಾದ ಅವರು, ಈಗ ಕರ್ನೂಲಿನ ಹಂದ್ರೀನೀವಾ ಆಫೀಸಿನಲ್ಲಿ ಭೂಸ್ವಾಧೀನ ವಿಭಾಗದಲ್ಲಿ ಡೆಪ್ಯೂಟಿ ಕಲೆಕ್ಟರ್ ಆಗಿ ಕೆಲಸ ಮಾಡ್ತಿದ್ದಾರೆ. ಪ್ರತಿ ವರ್ಷ ಕುಟುಂಬ ಸಮೇತ ಪ್ರಕಾಶಂ ಜಿಲ್ಲೆಯ ರಾಚೆರ್ಲಾ ಹತ್ತಿರದ ನೆಮಲಿಗುಂಡ್ಲ ರಂಗನಾಯಕ ಸ್ವಾಮಿ ದೇವಸ್ಥಾನಕ್ಕೆ ಹೋಗೋದು ಅವರ ಸಂಪ್ರದಾಯ. ಉಪ್ಪಲಪಾಡು ಹಳ್ಳಿಗೆ ಹತ್ತಿರವಾಗ್ತಿದ್ದಂತೆ, ಪ್ರಾಣೇಶಾಚಾರ್ಯ ಡ್ರೈವರ್‌ಗೆ ರಸ್ತೆ ಬದಿಯಲ್ಲಿದ್ದ ಢಾಬಾ ತರಹದ ಹೋಟೆಲ್‌ನಲ್ಲಿ ಟಿಫನ್‌ಗೆ ಕಾರ್ ನಿಲ್ಲಿಸೋಕೆ ಹೇಳಿದ್ರು. ಎಲ್ಲರೂ ಕಾರ್‌ನಿಂದ ಇಳಿದ್ರು. ಡ್ರೈವರ್ ಕಾರ್‌ನ್ನ ಮರದ ನೆರಳಲ್ಲಿ ನಿಲ್ಲಿಸೋಕೆ ಹೋದ. ಕಮಲಮ್ಮ ಅನುಮಾನದಿಂದ, “ಇಲ್ಲಿ ಟಿಫನ್ ಚೆನ್ನಾಗಿರುತ್ತಾ?” ಅಂತ ಕೇಳಿದ್ಲು. “ನಾನು ಶುಗರ್ ಮಾತ್ರೆ ತಗೋಳೋ ಸಮಯ ಆಗಿದೆ. ಏನಾದ್ರೂ ತಿನ್ನೋಣ. ಒಂದು ಹೊತ್ತು ಅಷ್ಟೇ ಅಲ್ವಾ!”…

Read More

ಕನ್ನಡ ಸಾಹಿತ್ಯ ಲೋಕದಲ್ಲಿ ಎಂ. ಎಸ್. ಕೆ. ಪ್ರಭು ಎಂದು ಚಿರಪರಿಚಿತರಾದವರು ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು. ತಂದೆ ಸೀತಾರಾಮಯ್ಯ ಹಾಗೂ ತಾಯಿ ಸೀತಮ್ಮ. ಸ್ವತಃ ತಾವೇ  ಹಾಡುಗಳನ್ನು ರಚಸುತ್ತಿದ್ದ ತಾತ, ಕುಮಾರವ್ಯಾಸ ಭಾರತದ ಪದ್ಯಗಳನ್ನು ರಾಗಬದ್ಧವಾಗಿ ಹಾಡುತ್ತಿದ್ದ ತಂದೆ ಇವರೆಲ್ಲ ಬಾಲ್ಯದಲ್ಲಿಯೇ ಎಂ. ಎಸ್. ಕೆ. ಯವರಿಗೆ ಸ್ಪೂರ್ತಿಯಾಗಿದ್ದರು. ಎಂ. ಎಸ್. ಕೆ.ಯವರು ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಮೈಸೂರಿನಲ್ಲಿ ಪ್ರೌಢ ಶಿಕ್ಷಣ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಪ್ರಥಮ ದರ್ಜೆಯ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಥಮವಾಗಿ ಬೆಂಗಳೂರಿನ ಅಕೌಂಟೆಂಟ್ ಜನರಲ್ ರವರ ಕಛೇರಿಯ ಉದ್ಯೋಗದ ಮೂಲಕ  ವೃತ್ತಿ ಜೀವನಕ್ಕೆ ಪಾದರ್ಪಣೆ ಮಾಡಿದ ಇವರು 1961 ರಿಂದ 1977ರವರೆಗೆ ಕಾರ್ಯನಿರ್ವಹಿಸಿ, ಮುಂದೆ ಯು. ಪಿ. ಎಸ್. ಸಿ. ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾ ಅಧಿಕಾರಿಗಳಾಗಿ ಆಯ್ಕೆಯಾದರು. ಬೆಂಗಳೂರು, ಧಾರವಾಡ, ಭದ್ರಾವತಿ ಇತ್ಯಾದಿ ಆಕಾಶವಾಣಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ 1996ರಲ್ಲಿ ನಿವೃತ್ತಿ ಹೊಂದಿದರು. ತಮ್ಮ ಅಗಾಧ ಸ್ಮರಣಾ ಶಕ್ತಿಯಿಂದಾಗಿ ನೋಡಿದ್ದನ್ನು, ಕೇಳಿದ್ದನ್ನು ಮನಸ್ಸಿನಾಳಕ್ಕೆ…

Read More

‘ಮಾತು ವಿಸ್ಮಯ’ ಲೋಕ ಒಪ್ಪಿಕೊಂಡ ಬದಲಾವಣೆ ಸಬ್ ಟೈಟಲ್ ಇರುವಂತಹ ಈ ಪುಸ್ತಕದ ಮೂಲ ಕರ್ತೃ ಮಲಯಾಳಂ ನಲ್ಲಿ ಬರೆದಿರುವ ಸಜಿ ಎಂ. ನರಿಕ್ಕುಯಿ. ಕನ್ನಡಕ್ಕೆ ಶ್ರದ್ಧೆಯಿಂದ ಅನುವಾದಿಸಿದವರು ಡಾ. ಮೀನಾಕ್ಷಿ ರಾಮಚಂದ್ರ. ಈಪುಸ್ತಕವನ್ನು ಅವಲೋಕಿಸುವಾಗ ಮುಖಪುಟದಿಂದಲೇ ಆರಂಭಿಸಬೇಕಾಗುತ್ತದೆ. ಸುಂದರವಾದ, ಅಷ್ಟೇ ಮಾರ್ಮಿಕವಾದ ಮುಖಪುಟವನ್ನು ಕಲಾವಿದ ಗೋಪಾಡ್ಕರ್ ಅವರು ಮಾಡಿರುತ್ತಾರೆ. ಸ್ವಯಂ ಮಾರ್ಗದರ್ಶಕವಾಗಿರುವ ಸೆಲ್ಫ್ ಆಗಿರುವಂತಹ ಈ ಪುಸ್ತಕಕ್ಕೆ ಪೂರಕವಾಗಿರುವಂತಹ, ಅನ್ವರ್ಥವಾಗಿರುವಂತಹ ಬಿಂಬಗಳು ಈ ಚಿತ್ರಗಳೊಳಗೆ ಕಾಣುತ್ತವೆ. ಪುಸ್ತಕದ ಒಳಗೆ ಹೋಗುವಾಗಲೇ ಒಂದಷ್ಟು ಚಿತ್ರಗಳನ್ನು ನಮ್ಮ ಚಿತ್ತ ಭಿತ್ತಿಯಲ್ಲಿ ಮೂಡಿಸುತ್ತದೆ. ಪ್ರತಿಯೊಂದು ಅಧ್ಯಾಯ ಆರಂಭವಾಗುವುದು ಚಿಂತನೆಗೆ ಹಚ್ಚುವ ಆಕರ್ಷಕ ಚಿತ್ರದ ಮೂಲಕ. ಈ ಪುಸ್ತಕದಲ್ಲಿ ಸಜಿಯವರು ಒಟ್ಟು ಐದು ಭಾಗಗಳನ್ನು ಮಾಡಿದ್ದಾರೆ. ಪ್ರತಿಯೊಂದು ಭಾಗದಲ್ಲಿ ಒಂದರಿಂದ ಒಂಬತ್ತು ಅಥವಾ 10 ಅಧ್ಯಾಯಗಳಿವೆ. ‘ಮಾತಿನ ಮಾಂತ್ರಿಕ ಶಕ್ತಿ’, ‘ಬದುಕಿನಲ್ಲಿ ಬದಲಾವಣೆ’ ,’ವಿಜಯದ ರಹಸ್ಯ ಹೊಂದಾಣಿಕೆ ಉಳ್ಳ ಸಂಬಂಧಗಳು’, ‘ಹರಿಯುವ ಹಣ’ ಇವು ಐದು ಭಾಗಗಳು. ಮೊದಲನೆಯ ಅಧ್ಯಾಯದಲ್ಲಿಯೇ ಮಾತಿನ ಬಗೆಗಿನ ಪುಸ್ತಕದ…

Read More

ಮೈಸೂರು : ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ‘ಸುಬ್ಬಣ್ಣ ಸ್ಮರಣೆ 2025’ ಕಾರ್ಯಕ್ರಮವು ದಿನಾಂಕ 16 ಜುಲೈ 2025ರಂದು ಸಂಜೆ ಘಂಟೆ 6.30ಕ್ಕೆ ನಡೆಯಲಿದೆ. ಸಮಾರಂಭದಲ್ಲಿ ಶ್ರೀಧರ ಹೆಗ್ಗೋಡು ಮತ್ತು ದಿಗ್ವಿಜಯ ಹೆಗ್ಗೋಡು ಇವರು ಕೆ. ವಿ. ಸುಬ್ಬಣ್ಣ ಅವರ ಕುರಿತ ಮಾತಮಾಡಲಿದ್ದಾರೆ. ಹೆಚ್ಚಿನಮಾಹಿತಿಗಾಗಿ 7259537777, 9480468327, 9845595505 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

Read More

ಬೆಂಗಳೂರು : ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇವರು ಕೊಡ ಮಾಡುವ ಹಳ್ಳೂರು ಹನುಮಂತಪ್ಪ ವರಮಹಾಲಕ್ಷ್ಮಮ್ಮ ರಾಜ್ಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಿಸಲ್ಪಟ್ಟ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರಿಗೆ ನೀಡಲಾಗಿದೆ. ರಾಜ್ಯದ ಪ್ರತಿಷ್ಠಿತ ಪತ್ರಿಕೆ ‘ವಿಜಯವಾಣಿ ‘ಪತ್ರಿಕೆಯಿಂದ ಜಿಲ್ಲಾವಾರು ಆರಿಸಲ್ಪಟ್ಟಂತಹ ಸಾಧಕರಿಗೆ ಇದನ್ನು ನೀಡಲಾಗಿದೆ. ಗಮಕ, ಯಕ್ಷಗಾನ, ವಿವಿಧ ಕಲಾ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರಿಗೆ ಈ ಪ್ರಶಸ್ತಿಯನ್ನು ದಿನಾಂಕ 6 ಜುಲೈ 2025ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಮಾರಂಭದಲ್ಲಿ ಮಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು. ಮೋಹನ ಕಲ್ಲೂರಾಯರ ಪರವಾಗಿ ಅವರ ಪುತ್ರ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ಬೆಂಗಳೂರಿನಲ್ಲಿ ಸನ್ಮಾನವನ್ನು ಸ್ವೀಕರಿಸಿದರು.ಮಧೂರು ಮೋಹನ ಕಲ್ಲೂರಾಯರು ದ.ಕ ಜಿಲ್ಲೆಯ ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ.

Read More

ಬೆಳಾಲು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಬೆಳಾಲು ಇದರ ಸಂಯುಕ್ತ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು : ಉಪನ್ಯಾಸ ಮಾಲೆ – 2ರ ಕಾರ್ಯಕ್ರಮದಲ್ಲಿ ವರಕವಿ ಬೇಂದ್ರೆಯವರ ಕುರಿತು ಉಪನ್ಯಾಸ ದಿನಾಂಕ 11 ಜುಲೈ 2025ರಂದು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಜರಗಿತು. ದೀಪ ಬೆಳಗಿಸಿ, ಬೇಂದ್ರೆಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಧ. ಮಂ. ಪದವಿ ಕಾಲೇಜು ಉಜಿರೆ ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗಣ್ಣ ಡಿ.ಎ. ಮಾತನಾಡಿ “ಬೇಂದ್ರೆಯವರು ಆಡು ಮಾತಿನ ಶೈಲಿಯಲ್ಲಿ ಕವನಗಳನ್ನು ರಚಿಸಿ ಜನಜನಿತರಾದವರು, ಸರಳ ಜೀವನ, ವ್ಯಕ್ತಿತ್ವದಿಂದ ಶ್ರೇಷ್ಠತೆಯನ್ನು ಪಡೆದುಕೊಂಡವರು” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಯದುಪತಿ ಗೌಡ ಮಾತನಾಡಿ “ಸಾಹಿತ್ಯಾಸಕ್ತಿ ಮತ್ತು ಓದುವ…

Read More