Subscribe to Updates
Get the latest creative news from FooBar about art, design and business.
Author: roovari
ಸಕಾರಾತ್ಮಕ ಚಿಂತನೆಗಳು ಮಾತ್ರ ನಮ್ಮನ್ನು ಗುರಿಯಡೆಗೆ ತಲುಪಿಸುವುದಿಲ್ಲ, ಅದರೊಂದಿಗೆ ಕಠಿಣ ಪರಿಶ್ರಮವೂ ಬೇಕು ಎಂಬ ಮಾತಿದೆ. ಬಹುಶ: ನಂದಾವರ ದಂಪತಿಗಳಲ್ಲಿ ಇಂದು ಇಂತಹ ಕಠಿಣ ಪರಿಶ್ರಮವು ಜೊತೆಗಿತ್ತು ಎಂದರೆ ತಪ್ಪಾಗಲಾರದು. ಸುಂದರಿ ಮತ್ತು ವಾಮನ ಮೇಷ್ಟ್ರ ಹಿರಿಯ ಮಗಳಾಗಿ ದಿನಾಂಕ 21-11-1950ರಲ್ಲಿ ನಮ್ಮೆಲ್ಲರ ಪ್ರೀತಿಯ ಕೆ.ವಿ. ಚಂದ್ರಕಲಾ ಮೇಡಂ ಜನಿಸಿದರು. ಮುನಿಸಿಪಲ್ ಹಾಯರ್ ಪ್ರೈಮರಿ ಶಾಲೆ, ಕಾಪಿಕಾಡು ಇಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೆಸೆಂಟ್ ಬಾಲಿಕಾ ಪ್ರೌಢಶಾಲೆ ಕೊಡಿಯಾಲ್ ಬೈಲಿನಲ್ಲಿ ಪೂರೈಸಿದರು. ಪದವಿ ಪೂರ್ವ ಶಿಕ್ಷಣವನ್ನು ನಗರದ ಸರಕಾರಿ ಕಾಲೇಜಿನಲ್ಲಿ ಪಡೆದ ಇವರು ನಂತರ ಹಿಂದಿ ರಾಷ್ಟ್ರಭಾಷಾ ಪ್ರವೀಣ ಪರೀಕ್ಷೆಯಲ್ಲಿ ದ್ವಿತೀಯ ಶ್ರೇಣಿ ಹಾಗೂ ಸಂಸ್ಕೃತ ಕೋವಿದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡರು. ಮೈಸೂರು ವಿಶ್ವವಿದ್ಯಾನಿಲಯದ ಎರಡು ವರ್ಷದ ಕನ್ನಡ ಡಿಪ್ಲೋಮಾ ಪದವಿಯನ್ನು ಮೂರನೇಯ ರ್ಯಾಂಕಿನೊಂದಿಗೆ ಉತ್ತಿರ್ಣರಾದ ನಂತರ ಬಜ್ಪೆಯ ಹೋಲಿ ಫ್ಯಾಮಿಲಿ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ವೃತ್ತಿಗೆ ಸೇರಿಕೊಂಡರು. ಮಂಗಳ ಗಂಗೋತ್ರಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಕನ್ನಡ…
ಕಟೀಲು : ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭವು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ದಿನಾಂಕ 18-11-2023ರಂದು ಅತ್ಯಂತ ಯಶಸ್ವಿಯಾಗಿ ಜರಗಿತು. “ಸಂಸ್ಕಾರ ನೀಡುವ, ಸಂಸ್ಕೃತಿ ಉಳಿಸುವ, ಶ್ರೀಮಂತ ಕಲೆಯಾದ ಯಕ್ಷಗಾನದ ಕಲಾವಿದರ ತ್ಯಾಗ, ಶ್ರಮ ದೊಡ್ಡದು. ಅವರು ಸದಾ ಅಭಿನಂದನೀಯರು. ಅಂತಹ ಕಲಾವಿದರನ್ನು ಗೌರವಿಸುವುದು ಸ್ತುತ್ಯರ್ಹ” ಎಂದು ಪ್ರಶಸ್ತಿ ಪ್ರದಾನ ಮಾಡಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಕಲಾವಿದರಾದ ಚಿದಂಬರಬಾಬು, ಕೋಟ ಗೋವಿಂದ ಉರಾಳ, ಮುಂಡ್ಕೂರು ವಸಂತ ಶೆಟ್ಟಿ, ತೀರ್ಥಹಳ್ಳಿ ಶಿವಶಂಕರ ಭಟ್, ಸಿದ್ದಾಪುರ ಸಂಜೀವ ಕೊಠಾರಿ, ಸೀತೂರು ಅನಂತಪದ್ಮನಾಭ ರಾವ್, ಕವ್ವಾಳೆ ಗಣಪತಿ ರಾಮಚಂದ್ರ ಭಾಗ್ವತ, ಮಂದಾರ್ತಿ ರಘುರಾಮ ಮಡಿವಾಳ, ಕೋಡಿ ವಿಶ್ವನಾಥ ಗಾಣಿಗ, ಸಿದ್ದಾಪುರ ಅಶೋಕ್ ಭಟ್, ಗುಣವಂತೆ ಸುಬ್ರಾಯ ನಾರಾಯಣ ಭಂಡಾರಿ, ಚೋರಾಡಿ ವಿಠಲ ಕುಲಾಲ್, ಎರ್ಮಾಳು ವಾಸುದೇವ ರಾವ್, ಈಚಲಕೊಪ್ಪ ಪ್ರಭಾಕರ ಹೆಗಡೆ, ಮಧೂರು ರಾಧಾಕೃಷ್ಣ ನಾವಡ, ಪಡುಬಿದ್ರೆ ರತ್ನಾಕರ ಆಚಾರ್ಯ,…
ಮಂಗಳೂರು : ಸುರತ್ಕಲ್ ವಿದ್ಯಾದಾಯಿನೀ ಪ್ರೌಢಶಾಲೆಯಲ್ಲಿ ದಿನಾಂಕ 18-11-2023ರಂದು ಜರಗಿದ ತುಳು ಕೂಟ (ರಿ) ಕುಡ್ಲದ ಬಂಗಾರ್ ಪರ್ಬ ವೈಭವ ಸರಣಿ -09ರ ‘ತುಳುವೆರೆ ತುಡರ ಪರ್ಬೊ’ ಕಾರ್ಯಕ್ರಮವನ್ನು ಅಗರಿ ಶ್ರೀ ರಾಘವೇಂದ್ರ ರಾವ್ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ತುಳುವಿನಲ್ಲಿ ಪರಂಪರಾನುಗತ ತುಳು ಮಾತನಾಡಲು ಕಷ್ಟವಾದರೂ ನಾವು ಸಮಯ – ಸಂದರ್ಭದಲ್ಲಿ ತುಳು ಭಾಷೆಯನ್ನಾಡಲೇ ಬೇಕಾಗುತ್ತದೆ. ಕೆಲವೊಮ್ಮೆ ತಪ್ಪಿದರೂ ಅದನ್ನು ತಿದ್ದಿಕೊಂಡು ತುಳು ನಮ್ಮದು ಎಂಬ ವಿಶೇಷ ಮಮತೆಯಿಟ್ಟು ಬೆಳಸೋಣ” ಎಂಬ ಸಂದೇಶವನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸನ್ನಿಧೀಸ್ ಹೋಟೆಲ್ಸ್ (ಪ್ರೈ) ಲಿ. ಇದರ ಜನರಲ್ ಮ್ಯಾನೇಜರ್ ಶ್ರೀ ಭಾಸ್ಕರ ಸಾಲ್ಯಾನರು “ನಾವು ತುಳುವರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವಾದರೂ ನಾವು ಭಾಷೆಯನ್ನು ಅಷ್ಟಾಗಿ ದುಡಿಸಿಕೊಂಡಿಲ್ಲ. ಎಷ್ಟೇಷ್ಟೋ ಕವಿಗಳು, ಸಾಹಿತಿಗಳು ಬೆಳೆದರೂ ಭಾಷೆ ಹಿಂದುಳಿದಿದೆ. ನಾವು ಗ್ರಾಂಥಿಕವಾದ ತುಳು ಮಾತನಾಡಲು ಅಸಾಧ್ಯವಾದರೂ ನಮ್ಮ ಮನೆಯ ಭಾಷೆಯಾಗಿ ತುಳುವನ್ನು ಸ್ವೀಕರಿಸಬೇಕು. ಖಂಡಿತಾ ದೈನಂದಿನ ಚಟುವಟಿಕೆಗಳಲ್ಲಿ, ಪರಸ್ಪರ ಸಂಭಾಷಣೆಗಳಲ್ಲಿ ತುಳು…
ಬೆಂಗಳೂರು : ಬೆಂಗಳೂರಿನ ನರಸಿಂಹ ರಾಜ ಕಾಲೋನಿಯಲ್ಲಿರುವ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಹಿರಿಯಡ್ಕದ ಅಮೋಘ (ರಿ.) ಮತ್ತು ಸಪ್ನ ಬುಕ್ ಹೌಸ್ ಆಯೋಜಿಸಿದ ಕಲಾವಿದೆ ಶ್ರೀಮತಿ ಪೂರ್ಣಿಮಾ ಸುರೇಶ್ ಅವರು ರಚಿಸಿದ ರಂಗಭೂಮಿಯ ಒಡನಾಟದ ಕಥನವನ್ನು ಹೇಳುವ ಕೃತಿ ‘ರಂಗ ರಂಗೋಲಿ’ಯ ಲೋಕಾರ್ಪಣೆ ದಿನಾಂಕ 19-11-2023ರಂದು ನಡೆಯಿತು. ಖ್ಯಾತ ಚಲನಚಿತ್ರ ನಿರ್ದೇಶಕರು ಹಾಗೂ ಕನ್ನಡಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಟಿ.ಎಸ್. ನಾಗಾಭರಣ ಅವರು ಕೃತಿ ಅನಾವರಣಗೊಳಿಸಿ ಮಾತನಾಡುತ್ತಾ, “ರಂಗಭೂಮಿ ಎನ್ನುವುದೇ ಸತ್ಯ. ಆದರೆ ಬಹುತೇಕರು ರಂಗಭೂಮಿಯನ್ನು ಮಿಥ್ಯಕ್ಕೆ ಹೋಲಿಸುತ್ತಾರೆ. ವಾಸ್ತವದಲ್ಲಿ ಸುಳ್ಳಿನ ನಿಜವಾದ ಅರ್ಥವನ್ನು ಹಾಗೂ ಸುಳ್ಳನ್ನು ಸರಣಿಯೋಪಾದಿಯಲ್ಲಿ ತೆರೆದಿಡುವ ವೇದಿಕೆಯೇ ರಂಗಭೂಮಿ. ಅದಕ್ಕೆ ಸತ್ಯದ ಪ್ರತೀಕವಾಗಿರುವ ರಂಗಭೂಮಿ ಉಳಿಯಬೇಕು, ಅದನ್ನು ಎಲ್ಲರೂ ಸೇರಿ ಬೆಳೆಸಬೇಕು. ಕಲೆ ಎನ್ನುವುದಕ್ಕೆ ಎಡ-ಬಲ ಸಂಸ್ಕೃತಿ ಇರುವುದಿಲ್ಲ. ಬದಲಾಗಿ ಕಲೆ ಎನ್ನುವುದು ಎಡ ಬಲ ಸಂಪ್ರದಾಯವನ್ನು ಮೀರಿ ಮಧ್ಯದ ಸಂಪ್ರದಾಯವನ್ನು ಬಿಂಬಿಸುವ ಕಲೆಗೆ ಯಾವುದೇ ಪಂಕ್ತಿಯ ರಂಗು ಹಚ್ಚಬಾರದು. ಕೃತಕ ಬುದ್ದಿಮತ್ತೆ ಎನ್ನವುದು ಇಂದು ರಂಗವನ್ನು…
ಪುತ್ತೂರು : ಸಂಸ್ಕಾರ ಭಾರತೀ ಪುತ್ತೂರು ಘಟಕದ ವತಿಯಿಂದ ವಾಲ್ಮೀಕಿ ನಮನ ಕಾರ್ಯಕ್ರಮವು ದಿನಾಂಕ 5-11-2023ನೇ ಭಾನುವಾರ ಅಪರಾಹ್ನ 4 ಗಂಟೆಗೆ ದರ್ಬೆಯಲ್ಲಿರುವ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಪ್ರೊ. ಹರಿನಾರಾಯಣ ಮಾಡಾವು ಇವರು “ದರೋಡೆಕಾರನಾದ ರತ್ನಾಕರನೆಂಬ ಬೇಡನು ದೇವರ್ಷಿ ನಾರದರ ಉಪದೇಶದ ಮೇರೆಗೆ ರಾಮಾಯಣದಂತಹ ಬೃಹತ್ ಗ್ರಂಥವನ್ನು ರಚಿಸಿ ಆದಿಕವಿ ವಾಲ್ಮೀಕಿ ಎನಿಸಿಕೊಂಡನು. 24,000 ಶ್ಲೋಕಗಳನ್ನೊಳಗೊಂಡ ರಾಮಾಯಣ ಗ್ರಂಥದ ಸಾರವು ಇಂದಿಗೂ ಪ್ರಸ್ತುತ.” ಎಂದ ಅವರು ವಾಲ್ಮೀಕಿಯ ಪೂರ್ವೇತಿಹಾಸದ ಸವಿಸ್ತಾರವಾದ ವಿವರಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ, ಸದಸ್ಯೆ ಶಂಕರಿ ಶರ್ಮ ಅವರು ವಾಲ್ಮೀಕಿ ನುಡಿನಮನ ಸಲ್ಲಿಸುತ್ತಾ, “ರಾಮಾಯಣದಲ್ಲಿರುವ ವಿಭಿನ್ನ ಪಾತ್ರಗಳು ಇಂದಿಗೂ ಜೀವಂತ ನಿದರ್ಶನದಂತಿವೆ.” ಎಂದರು. ಸದಸ್ಯೆ ವಿದುಷಿ ಪ್ರೀತಿಕಲಾ ಮತ್ತು ಸದಸ್ಯೆ ವಿದುಷಿ ಮೇಘನಾ ಪಾಣಾಜೆ ಇವರು ರಾಮಾಯಣದ ಉತ್ತರ ಕಾಂಡದಿಂದ ಆಯ್ದ ಶ್ಲೋಕಗಳ ವಿವರಣಾತ್ಮಕ ಗಾಯನದ ಮೂಲಕ ವಾಲ್ಮೀಕಿ ಗೀತ ನಮನಗೈದರು. ಸದಸ್ಯೆ ಕೃಷ್ಣವೇಣಿ ಮುಳಿಯ ಇವರು ರಾಮಾಯಣದ…
ಮಡಿಕೇರಿ : ಕರ್ನಾಟಕ ಸಂಭ್ರಮ 50 ಇದರ ಪ್ರಯುಕ್ತ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ರಾಜೇಶ್ವರಿ ಶಿಕ್ಷಣ ಸಂಸ್ಥೆ ಇದರ ಸಂಯುಕ್ತ ಆಶ್ರಯದಲ್ಲಿ ವಿಜಯ ವಿಷ್ಣುಭಟ್ ಮತ್ತು ದಿ.ಡಿ.ಜೆ.ಪದ್ಮನಾಭ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮ ದಿನಾಂಕ 18-11-2023ರ ಶನಿವಾರದಂದು ಮಡಿಕೇರಿಯ ರಾಜೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು. ‘ಕೊಡಗಿನ ಮಹಿಳಾ ಸಾಹಿತಿಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿಮುತ್ತಣ್ಣ ಅವರು “ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಬರಹಗಾರರು ಮತ್ತಷ್ಟು ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಕೊಡಗಿನ ಗೌರಮ್ಮ ಹೆಸರಿನಲ್ಲಿ ಪ್ರಶಸ್ತಿ ಪ್ರಾರಂಭವಾದ ನಂತರ ಕೊಡಗು ಜಿಲ್ಲೆಯಲ್ಲಿ ಮಹಿಳಾ ಬರಹಗಾರರ ಸಂಖ್ಯೆ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ಇನ್ನಷ್ಟು ಮಹಿಳಾ ಬರಹಗಾರರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕನ್ನಡ, ಕೊಡವ, ಅರೆಭಾಷೆ ಸೇರಿದಂತೆ ಹಲವು ಭಾಷೆಗಳ ಅಭಿವೃದ್ಧಿಗೆ ಶ್ರಮಿಸಬೇಕು. ಜೊತೆಗೆ ಸಾಹಿತ್ಯದ ಮೂಲಕ ಸಮಾಜದ ಆಗುಹೋಗುಗಳನ್ನು ಅಭಿವ್ಯಕ್ತಪಡಿಸಬೇಕು. ಸಾಹಿತ್ಯವು ಓದುಗರ ಮನಸ್ಸನ್ನು ತಲುಪಬೇಕು. ಆ ನಿಟ್ಟಿನಲ್ಲಿ ಮಹಿಳಾ…
ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಲಲಿತಕಲಾ ಸಂಘ, ಯಕ್ಷರಂಜಿನಿ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಮೇಧಾನ್ವೇಷ 2023’ ದಿನಾಂಕ 16-11-2023 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಹೆಚ್. ಮಾಧವ ಭಟ್ ಇವರು “ವಿದ್ಯಾರ್ಥಿಗಳು ತಮ್ಮ ಪ್ರತಿಭೆಗೆ ಅವಕಾಶ ಸಿಕ್ಕಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಮಗೆ ಸಿಗುವ ಅನೇಕ ಅನುಭವಗಳನ್ನು ಸಂಗ್ರಹಿಸಿಕೊಂಡಾಗ ಮಾತ್ರ ನಿಮ್ಮಲ್ಲಿನ ನೈಜ ಪ್ರತಿಭೆಗಳು ಅನಾವರಣಗೊಳ್ಳುತ್ತದೆ. ಕೆಲವು ಪ್ರತಿಭೆಗಳು ವಿದ್ಯಾರ್ಥಿಗಳಲ್ಲಿ ಹುಟ್ಟಿನಿಂದಲೇ ಕರಗತವಾಗಿದ್ದರೆ, ಇನ್ನು ಕೆಲವೊಂದು ಪ್ರತಿಭೆಗಳು ಬೆಳೆಯುತ್ತ ರೂಢಿಯಾಗುತ್ತದೆ. ಇಂದಿನ ಈ ಕಾರ್ಯಕ್ರಮವು ನಿಮ್ಮಲ್ಲಿನ ನೈಜ ಪ್ರತಿಭೆಗಳ ಅನಾವರಣಕ್ಕಾಗಿ ಉತ್ತಮ ವೇದಿಕೆಯಾಗಿ ಮೂಡಿಬರಲಿ” ಎಂದು ಶುಭಹಾರೈಸಿದರು. ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಅಧ್ಯಕ್ಷೀಯ ಮಾತುಗಳನ್ನಾಡಿ “ಶಿಕ್ಷಣವು ಬದುಕಿಗೆ ಊರುಗೋಲಾಗಬೇಕು. ಅದು ಕೇವಲ ತರಗತಿಗಳಿಗೆ ಮಾತ್ರ ಸೀಮಿತವಾಗಿರಬಾರದು. ಪದವಿ ಎಂಬುದು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ತರವಾದ…
ಪೆರ್ಲ : ರಂಗ ಡಿಂಡಿಮ ಪೆರ್ಲ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪೆರ್ಲ ಸ.ನಾ. ಶಾಲೆಯ ಕಲಾನಿಲಯದಲ್ಲಿ ದಿನಾಂಕ 11-11-20223ರಂದು ಜರಗಿತು. ಹಿರಿಯ ರಂಗನಟ-ಶಿಕ್ಷಣ ತಜ್ಞ-ನಿವೃತ್ತ ಪ್ರಾಶುಂಪಾಲ ಯತೀಶ್ ಕುಮಾರ್ ರೈ ಮುಳ್ಳೇರಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಥಿಯೇಟರ್ ಡ್ರಾಮದಂತಹ ರಂಗ ಕಲೆಗಳಿಂದಾಗಿ ಮಕ್ಕಳು ಪರಿಣಾಮಕಾರಿ ಬದಲಾವಣೆ ಹೊಂದುತ್ತಿದ್ದು ಇದು ಭವಿಷ್ಯಕ್ಕೆ ಪೂರಕವಾಗುತ್ತಿದೆ. ಗಡಿನಾಡಾದ ಕಾಸರಗೋಡು ಜಿಲ್ಲೆಯಿಂದ ಕನ್ನಡ ಭಾಷೆಯ ಡಿಂಡಿಮ ಬಾರಿಸಲು, ಮಕ್ಕಳ ರಂಗಾಭಿನಯದ ಪ್ರತಿಭೆ ಅಭಿವ್ಯಕ್ತಪಡಿಸಲು ಸಂಘಟನಾತ್ಮಕ ಪ್ರೋತ್ಸಾಹ ಅಭಿನಂದನಾರ್ಹ” ಎಂದರು. ನಾಟಕ ಕರ್ತೃ, ರಂಗ ನಿರ್ದೇಶಕ, ಶಿಕ್ಷಕ ಉದಯ ಸಾರಂಗ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಾ.ಆಶಾಲತಾ ಚೇವಾರು, ಸದಾಶಿವ ಭಟ್ ಹರಿನಿಲಯ, ಮೊಹಮ್ಮದಾಲಿ ಪೆರ್ಲ, ಉದಯ ಚೆಟ್ಟಿಯಾರ್ ಪೆರ್ಲ, ಸುಧಾಕರ ಮಾಸ್ತರ್ ಕಾಟುಕುಕ್ಕೆ, ಅಜಯ್ ಪೈ ಅಮೆಕ್ಕಳ, ಕೃಷ್ಣಪ್ಪ ಬಂಬಿಲ, ನೂತನ ಅಧ್ಯಕ್ಷ ರಾಜೇಶ್ ಬಜಕೂಡ್ಲು ಸಭೆಯಲ್ಲಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ 2023-24ನೇ ಸಾಲಿನ ಮಕ್ಕಳ ನಾಟಕೋತ್ಸವ ‘ಕಣ್ಣಾ ಮುಚ್ಚೆ ಕಾಡೆ ಕೂಡೆ’ ರಂಗಾಭಿನಯ ತರಬೇತಿಗೆ…
ಮೂಲ್ಕಿ : ಮೂಲ್ಕಿ ಬಳಿಯ ಕೆರೆಕಾಡಿನ ಶ್ರೀ ವಿನಾಯಕ ಯಕ್ಷಕಲಾ ಫೌಂಡೇಷನ್ ಇದರ ‘ಶ್ರೀ ವಿನಾಯಕ ಯಕ್ಷಕಲೋತ್ಸವ 2023’ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇವರು ದಿನಾಂಕ 11-11-2023ರಂದು ಪದ್ಮಾವತಿ ಲಾನ್ ಎಸ್. ಕೋಡಿಯಲ್ಲಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಡಾ. ವೈ.ಭರತ್ ಶೆಟ್ಟಿ ಇವರು ಮಾತನಾಡುತ್ತಾ “ಸಾಂಸ್ಕೃತಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಸಂಸ್ಥೆಗಳು ಉತ್ತಮ ಸಾಧನೆ ಮಾಡಿವೆ. ಯಕ್ಷಗಾನ ಕಲೆಗೆ ವಿಶ್ವಮನ್ನಣೆ ಇದ್ದು, ದಾನಿಗಳ ಪ್ರೋತ್ಸಾಹ, ಸಹಕಾರ ನಿರಂತವಾಗಿರಬೇಕು” ಎಂದು ಹೇಳಿದರು. ಉದ್ಯಮಿ ಪಟೇಲ್ ವಾಸುದೇವ ರಾವ್ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶ್ರೀ ಶೈಲೇಂದ್ರ ವೈ. ಸುವರ್ಣ, ಮೆಸ್ಕಾಂನ ಸಹಾಯಕ ಎಂಜಿನಿಯರ್ ಶ್ರೀ ಚಂದ್ರಶೇಖರ ಪೂಜಾರಿ, ಶ್ರೀಮತಿ ಮಾಲತಿ ವಿ.ಅಮೀನ್ ಅವರನ್ನು ಸನ್ಮಾನಿಸಲಾಯಿತು. ಫೌಂಡೇಷನ್ ಅಧ್ಯಕ್ಷ ಜಯಂತ್ ಅಮೀನ್, ನಮೀತಾ ಶ್ಯಾಮ್, ಕೆ.ಭುವನಾಭಿರಾಮ ಉಡುಪ, ಉದ್ಯಮಿಗಳಾದ ಗುರುರಾಜ್ ಎಸ್.ಪೂಜಾರಿ, ಪ್ರಶಾಂತ್ ಪೂಜಾರಿ, ಮಹೇಂದ್ರ, ಧನಂಜಯ ಅಮೀನ್ ಮಟ್ಟು, ಚಿತ್ರಾ ಭಾಸ್ಕರ…
ಕಾಸರಗೋಡಿನ ಮಧೂರಿನಲ್ಲಿ ಪುಂಡರೀಕಾಕ್ಷ ಹೆಬ್ಬಾರ್ ಹಾಗೂ ಮಹಾಲಕ್ಷ್ಮಿ ಅಮ್ಮ ದಂಪತಿಗಳಿಗೆ ದಿನಾಂಕ 23-05-1947ರಲ್ಲಿ ಜನಿಸಿದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಬಲ್ಲವರಿಂದ ಕೇಳಿಯೇ ಅಕ್ಷರಾಭ್ಯಾಸ ಮತ್ತು ಹಿಂದಿ ವಿಶಾರದಾ ವಿದ್ಯಾಭ್ಯಾಸ ಪಡೆದವರು. ಮಧೂರು ಪದ್ಮನಾಭ ಸರಳಾಯರಲ್ಲಿ ಏಳುವರ್ಷ ಶಾಸ್ತ್ರೀಯ ಸಂಗೀತ ತರಬೇತಿ ಪಡೆದರು. 1972ರಿಂದೀಚೆಗೆ 40ಕ್ಕೂ ಹೆಚ್ಚು ವರ್ಷಗಳ ಕಾಲ ಯಕ್ಷಗಾನ ರಂಗಾನುಭವ ಹೊಂದಿದ್ದಾರೆ. ಹಾಗೂ ಪ್ರಥಮ ಮಹಿಳಾ ಭಾಗವತರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಸಾಧನೆಗೆ ಕರ್ನಾಟಕ ಸರಕಾರದ ಸಾಧಕ ಹಿರಿಯ ನಾಗರಿಕ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮಂಗಳೂರು ವಿವಿ ಯಕ್ಷ ಮಂಗಳಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಸಾಧಕ ಪ್ರಶಸ್ತಿ, ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ, ಕರಾವಳಿ ಲೇಖಕಿ, ವಾಚಕಿಯರ ಸಂಘ ಪ್ರಶಸ್ತಿ , ಅಗರಿ ಪ್ರಶಸ್ತಿ, ಉಡುಪಿಯ ಪೇಜಾವರ ಮಠದ ಪ್ರಶಸ್ತಿ ಹಾಗೂ ಇತರ ನೂರಾರು ಸನ್ಮಾನ ಹಾಗೂ ಗೌರವಗಳು ಸಂದಿವೆ. ಪತಿ ಕೆ.ಹರಿನಾರಾಯಣ ಬೈಪಾಡಿತ್ತಾಯರ ಜೊತೆಗೂಡಿ ಎರಡು ದಶಕಗಳಿಂದ ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು…