Author: roovari

ಮುಡಿಪು : ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕ ಮತ್ತು ವಿಶ್ವಮಂಗಳ ವಿದ್ಯಾಸಂಸ್ಥೆ ಮಂಗಳಗಂಗೋತ್ರಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ವಿಶೇಷೋಪನ್ಯಾಸ ಕಾರ್ಯಕ್ರಮ ದಿನಾಂಕ 01-11-2023ರ ಬುಧವಾರದಂದು ವಿಶ್ವಮಂಗಳದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಲತಾರವರು “ಎಲ್ಲರನ್ನು ಸಮಭಾವದಿಂದ ನೋಡುವ ಗೌರವಿಸುವ ಮನೋಭಾವ ಕನ್ನಡಿಗರದ್ದು. ಪರಧರ್ಮ, ಪರ ವಿಚಾರಗಳನ್ನೂ ಗೌರವಿಸುತ್ತಾ ಬಂದ ಸಹಿಷ್ಣು ಪರಂಪರೆ ಕನ್ನಡ ನಾಡಿನದ್ದು. ಕನ್ನಡ ಭಾಷೆ ಸಾಹಿತ್ಯದ ಕುರಿತಾದ ತಿಳುವಳಿಕೆಯನ್ನು ಹೆಚ್ಚಿಸುವ ಕಾರ್ಯಕ್ರಮಗಳು ಗ್ರಾಮಾಂತರ ಭಾಗದಲ್ಲಿ ಹೆಚ್ಚು ಹೆಚ್ಚು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಉಳ್ಳಾಲದ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕೆಲಸ ಮಾಡುತ್ತಿದೆ.” ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಡಾ. ಪರಮೇಶ್ವರ ವಹಿಸಿದ್ದರು. ಸಮಾರಂಭದಲ್ಲಿ ಉಳ್ಳಾಲ ಕಸಾಪ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಉಳ್ಳಾಲ ಹೋಬಳಿ ಅಧ್ಯಕ್ಷೆ ವಿಜಯಲಕ್ಷ್ಮೀ ಪ್ರಸಾದ್…

Read More

ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನಾ ಕೇಂದ್ರ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ಸಹಯೋಗದೊಂದಿಗೆ ಬೆಟ್ಟಂಪಾಡಿಯಲ್ಲಿ ನಡೆದ ‘ಬಸವಣ್ಣ ಮತ್ತು ಕನಕದಾಸರ ಇಹ ಪರ ಲೋಕದೃಷ್ಟಿ’ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ 8-11-2023ರಂದು ನಡೆಯಿತು. ವಿಚಾರ ಸಂಕಿರಣದಲ್ಲಿ  ಸಮಾರೋಪ ಭಾಷಣ ಮಾಡಿದ ಆಂಧ್ರಪ್ರದೇಶದ ಕುಪ್ಪಂ ವಿವಿಯ ಮಾನವಿಕ ನಿಕಾಯದ ಡೀನ್ ಡಾ. ಶಿವಕುಮಾರ ಭರಣ್ಯ “ಹಿಂದಿನಿಂದಲೂ ಕನ್ನಡಿಗರು ಮೌಲ್ಯಗಳಿಗೆ ಗೌರವ ಕೊಟ್ಟವರು. ಬಹಿರಂಗಕ್ಕಿಂತ ಅಂತರಂಗದ ಸೌಂದರ್ಯಕ್ಕೆ ಗಮನ ಹರಿಸಿದವರು. ಕನ್ನಡದ ಶರಣ ಮತ್ತು ದಾಸ ಪರಂಪರೆ ಧಾರ್ಮಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಸಮಾನತೆಯ ತತ್ವವನ್ನು ಭೋದಿಸಿದ್ದಾರೆ. ಈ ವಿವೇಕ ಸದಾ ನಮಗೆ ಮಾರ್ಗದರ್ಶಿ.” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ  ಕನಕದಾಸ  ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ “ಕನಕ ಮತ್ತು ಬಸವಣ್ಣನವರನ್ನು ವರ್ತಮಾನದ ಕನ್ನಡಿಯಲ್ಲಿ ನೋಡುವಾಗ ಔಚಿತ್ಯಪೂರ್ಣ ಅಂತರವನ್ನು ಕಾಪಾಡಿಕೊಳ್ಳಬೇಕು. ನಮ್ಮ ಪೂರ್ವಾಗ್ರಹಗಳನ್ನು ಅಲ್ಲಿ ತುಂಬುವಂತಾಗಬಾರದು. ಸತ್ಯವನ್ನು ಅರಿಯುವುದಕ್ಕೆ…

Read More

ಮಂಗಳೂರು : ಬೆಂದೂರಿನ ಸಂತ ಆ್ಯಗ್ನೆಸ್‌ ಕಾಲೇಜಿನಲ್ಲಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಅಂತರ್ ಕಾಲೇಜು ರಾಷ್ಟ್ರೀಯ ಮಟ್ಟದ ಒಂದು ದಿನದ ಸಾಂಸ್ಕೃತಿಕ ಉತ್ಸವ ‘ಸೆಲೆಸ್ತಿಯಾ-2023’ನ್ನು ದಿನಾಂಕ 31-10-2023ರಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಹುಭಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಇವರು ಮಾತನಾಡುತ್ತಾ “ವಿಶ್ವದ ಕೆಲವು ರಾಷ್ಟ್ರಗಳು ಪರಸ್ಪರ ಯುದ್ಧ ಸಾರುತ್ತಿದ್ದರೂ ಭಾರತ ಇಂದು ಸುರಕ್ಷಿತವಾಗಿದೆ, ನಾವೆಲ್ಲ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಸೈನಿಕರು. ತಮ್ಮ ಜೀವವನ್ನು ಪಣಕ್ಕಿಟ್ಟು, ದೇಶಕ್ಕಾಗಿ ಸೇವೆ ಸಲ್ಲಿಸುವ ಅವರೇ ನಮ್ಮ ಪಾಲಿಗೆ ಅವರೇ ನಿಜವಾದ ಹೀರೋಗಳು. ಜೀವನದಲ್ಲಿ ಎಲ್ಲರಿಗೂ ಅವಕಾಶಗಳು ಬರುತ್ತವೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಅದೃಷ್ಟ ಎನ್ನುವುದು ಒಂದು ಭಾಗ ಮಾತ್ರ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ಕಾರಣ ‘ಡಾಕ್ಟರ್’ ಆಗಬೇಕು ಅಂದುಕೊಂಡಿದ್ದವ ಇಂದು ‘ಆ್ಯಕ್ಟರ್’ ಆಗಿ ಅಭಿಮಾನಿಗಳನ್ನು ಪಡೆದಿದ್ದೇನೆ. ಹೆತ್ತವರು, ಶಿಕ್ಷಕರಿಗೆ ವಿದ್ಯಾರ್ಥಿಗಳು ಗೌರವ ನೀಡಬೇಕು, ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸಿದರೆ ಹೆಮ್ಮೆ…

Read More

ಉಡುಪಿ : ಎಂ.ಜಿ.ಎಂ. ಕಾಲೇಜು, ಕನ್ನಡ ಸಾಹಿತ್ಯ ಸಂಘ, ಐಕ್ಯೂಎಸಿ ಮತ್ತು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಕಥಾ ಕಮ್ಮಟ’ ಕಾರ್ಯಕ್ರಮವು ದಿನಾಂಕ 16-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಪ್ರೊ. ಮುರಳೀಧರ ಉಪಾಧ್ಯ ಮಾತನಾಡಿ “ಕನ್ನಡದಲ್ಲಿ ಹಲವು ಲೇಖಕರು ಅತ್ಯುತ್ತಮ ಕಥೆಗಳನ್ನು ಬರೆದು ನಾಡಿನ ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಗೊಳಿಸಿ, ಕನ್ನಡಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಮಾಸ್ತಿ, ಶಿವರಾಮ ಕಾರಂತರು, ಲಂಕೇಶ್, ಅನಂತಮೂರ್ತಿ, ವೈದೇಹಿ ಇಂಥವರ ಕಥೆಗಳನ್ನು ವಿದ್ಯಾರ್ಥಿಗಳು ಓದಬೇಕು. ಇಂತಹ ಕಮ್ಮಟಗಳ ಮೂಲಕ ವಿದ್ಯಾರ್ಥಿಗಳು ಮುಂದೆ ಒಳ್ಳೆಯ ಕಥೆಗಾರರು ಆಗಲು ಸಾಧ್ಯ” ಎಂದು ಹೇಳಿದರು. ವೇದಿಕೆಯಲ್ಲಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ವೇದಿಕೆಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ  ನೀಲಾವರ ಸುರೇಂದ್ರ ಅಡಿಗ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಇದರ ಸಹಕಾರದೊಂದಿಗೆ ಹವ್ಯಕ ಸಭಾ ಮಂಗಳೂರು (ರಿ) ಇದರ ಆಶ್ರಯದಲ್ಲಿ ಶ್ರೀ ಭಾರತೀ ಕಾಲೇಜು ಮಂಗಳೂರು ಹಾಗೂ ಲಯನ್ ಕ್ಲಬ್ ಮಂಗಳೂರು ಇದರ ಸಹಭಾಗಿತ್ವದೊಂದಿಗೆ ಧನ್ವಂತರಿ ಜಯಂತಿ ದಿನಾಚರಣೆ ಮತ್ತು ಲೇಖಕ ಡಾ. ಮುರಲೀ ಮೋಹನ್ ಚೂಂತಾರು ಅವರ 14ನೇ ಕೃತಿ ‘ಧನ್ವಂತರಿ ಭಾಗ-2’ ವೈದ್ಯಕೀಯ ಲೇಖನಗಳ ಪುಸ್ತಕ ಇದರ ಬಿಡುಗಡೆ ಸಮಾರಂಭವು ದಿನಾಂಕ 10-11-2023ರ ಶುಕ್ರವಾರದಂದು ನಂತೂರಿನ ಶ್ರೀ ಭಾರತೀ ಕಾಲೇಜು ಇದರ ಶ್ರೀ ಶಂಕರಶ್ರೀ ಸಭಾಭವನದಲ್ಲಿ ನಡೆಯಿತು. ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಡಾ.ಚಕ್ರಪಾಣಿ ಅವರು “ಇಂತಹ ಕೃತಿಗಳಿಂದ ಜನರಿಗೆ ಬಹಳ ಉಪಯೋಗ ಹಾಗೂ ವೈದ್ಯರ ಮತ್ತು ರೋಗಿಗಳ ಸಮಯ ಉಳಿತಾಯ” ಎಂದು ಡಾ. ಚಕ್ರಪಾಣಿ ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಪುಸ್ತಕ ವಿಮರ್ಶೆ ಮಾಡಿದ ಕೆ.ಎಂ.ಸಿ ಆಸ್ಪತ್ರೆಯ ಖ್ಯಾತ ಫಿಸಿಷಿಯನ್ ಆದ ಡಾ. ಶಿಕಾರಿಪುರ ಕೃಷ್ಣಮೂರ್ತಿ ಅವರು…

Read More

ಕುಶಾಲನಗರ : ಕರ್ನಾಟಕ ಸುವರ್ಣ ಸಂಭ್ರಮ ಹಾಗೂ ಹೆಬ್ಬಾಲೆ ಬನಶಂಕರಿ ಜಾತ್ರೆಯ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಹೆಬ್ಬಾಲೆ ವಲಯ ಘಟಕದ ವತಿಯಿಂದ ಕವಿ ಗೋಷ್ಠಿಯು ದಿನಾಂಕ 10-12-2023 ರಂದು ಬನಶಂಕರಿ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ ಘಂಟೆ 3.00ರಿಂದ ನಡೆಯಲಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸುವ ಉದಯೋನ್ಮುಖ ಕವಿಗಳು ತಮ್ಮ ಸ್ವರಚಿತ ಕವನದೊಂದಿಗೆ ದಿನಾಂಕ 30-11-2023ರ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಹೆಬ್ಬಾಲೆ ಕಸಾಪ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ ತಿಳಿಸಿದ್ದಾರೆ. ಕವಿಗೋಷ್ಠಿಯಲ್ಲಿ ಭಾಗವಹಿಸುವ ಆಸಕ್ತ ಕವಿಗಳು ಎಂ.ಎನ್.ಮೂರ್ತಿ 9449008099 ಇವರಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಆಸಕ್ತರು ತಮ್ಮ ಕವನವನ್ನು ಅಧ್ಯಕ್ಷರು, ಕ.ಸಾ.ಪ. ಹೆಬ್ಬಾಲೆ ವಲಯ ಘಟಕ, ಕುಶಾಲನಗರ ತಾಲೂಕು – ಇಲ್ಲಿಗೆ 30-11-2023ರ ಒಳಗಾಗಿ ಕಳುಹಿಸಬಹುದು. ಈ ಕವಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕವಿಗಳಿಗೆ ಮಾತ್ರ ಅವಕಾಶ.

Read More

ಮಂಗಳೂರು : ರಾಮಕೃಷ್ಣ ಮಠದಲ್ಲಿ ದಿನಾಂಕ 04-11-2023ರಂದು ಒಂಬತ್ತನೇ ಭಜನ್ ಸಂಧ್ಯಾ ಕಾರ್ಯಕ್ರಮದಲ್ಲಿ ವಿದ್ಯೋದಯ ಭಜನಾ ಮಂಡಳಿ ಬೋಳಾರ, ಮಂಗಳೂರು ಇವರು ಭಜನಾ ಸೇವೆಯನ್ನು ನೀಡಿದರು. ಭಜನಾ ತಂಡದ ಸೇವೆಯ ನಂತರ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ರಘುರಾಮಾನಂದಜಿ ಅವರು ಆಶೀರ್ವಚನ ನೀಡಿದರು.  ದಿನಾಂಕ 11-11-2023ರಂದು ಭಜನ್ ಸಂಧ್ಯಾದ ಹತ್ತನೇ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಪಾಂಡೇಶ್ವರ ಮಂಗಳೂರು ಇವರು ಭಜನಾ ಸೇವೆಯನ್ನು ನೀಡಿದರು. ಭಜನಾ ತಂಡದ ಸೇವೆಯ ನಂತರ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಆಶ್ರಮದ ವತಿಯಿಂದ ಭಜನಾ ತಂಡಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತದನಂತರ ಆರತಿ ಹಾಗೂ ಆಶ್ರಮದ ವಿದ್ಯಾರ್ಥಿಗಳಿಂದ ಭಜನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಶ್ರಮದ ಭಕ್ತರು, ಸ್ವಯಂಸೇವಕರು ಹಾಗೂ ಹಲವಾರು ಸಾರ್ವಜನಿಕರು ಭಾಗವಹಿಸಿದರು. ಮುಂದಿನ ತಿಂಗಳು ದಿನಾಂಕ 3 ಡಿಸೆಂಬರ್ 2023 ಭಾನುವಾರದಂದು ಸಂಜೆ 4 ಗಂಟೆಗೆ ಸರಿಯಾಗಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ,…

Read More

ಸುಳ್ಯ : ಕ.ಸಾ.ಪ. ಸುಳ್ಯ ತಾಲೂಕು ಘಟಕದ ವತಿಯಿಂದ ಸುವಿಚಾರ ಸಾಹಿತ್ಯ ವೇದಿಕೆಯ ಸಹಕಾರದಲ್ಲಿ ಸುಳ್ಯದ ಕನ್ನಡ ಭವನದಲ್ಲಿ ಭಾನುವಾರ ನಡೆದ ತಾಲೂಕು ಮಟ್ಟದ ಕವಿಗೋಷ್ಠಿ ಹಾಗೂ ಜ್ಞಾನಪೀಠ ಪುರಸ್ಕೃತ ವಿ.ಕೃ. ಗೋಕಾಕ್ ನೆನಪು ಕಾರ್ಯಕ್ರಮವನ್ನು ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷೆ ಎಂ. ಮೀನಾಕ್ಷಿ ಗೌಡ ಇವರು ದಿನಾಂಕ 05-11-2023ರಂದು ಉದ್ಘಾಟಿಸಿದರು. ವಿ.ಕೃ. ಗೋಕಾಕ್ ಕುರಿತು ಕ.ಸಾ.ಪ.ದ ಗೌರವ ಕಾರ್ಯದರ್ಶಿ ಶ್ರೀಮತಿ ಚಂದ್ರಮತಿ ಉಪನ್ಯಾಸ ಗೈದರು. ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಕವಿ, ಸಾಹಿತಿ ಶ್ರೀಮತಿ ಸಂಗೀತ ರವಿರಾಜ್ “ನಿಮ್ಮ ಬರಹಗಳನ್ನು ತಿಳಿದವರಿಗೆ ತೋರಿಸಿ, ತಿದ್ದಿ ಇನ್ನಷ್ಟು ಉತ್ತಮಗೊಳಿಸಬೇಕು. ನೇರ ಹೇಳಿದರೆ ಗದ್ಯವಾಗುತ್ತದೆ. ರೂಪಕಗಳ ಮೂಲಕ ಅಮೂರ್ತವಾಗಿ ಹೇಳುವ ಕಲೆಯೇ ಕವಿತೆ, ಅದು ಎಲ್ಲರಿಗೂ ಅರ್ಥವಾಗಬೇಕೆಂದಿಲ್ಲ. ಅದನ್ನು ಕೇಳಿ ಆಸ್ವಾದಿಸುವುದಷ್ಟೇ ನಮ್ಮ ಕೆಲಸ. ಬರೆಯುವರು ಗುಣಮಟ್ಟ ಕಾಯ್ದುಕೊಳ್ಳಬೇಕು. ನಿರಂತರ ಅಧ್ಯಯನದಿಂದ ಮಾತ್ರ ಇದು ಸಾಧ್ಯ” ಎಂದು ಹೇಳಿದರು. ಕವಿಗಳಾದ ವಿಮಲಾರುಣ ಪಡ್ಡಂಬೈಲು, ಸಂಧ್ಯಾ ಕುಮಾರ್ ಉಬರಡ್ಕ, ವಿದ್ಯಾಶಂಕರಿ ಅಜ್ಜಾವರ,…

Read More

ಬೆಂಗಳೂರು : ಶ್ರೀ ರಾಮ ಸೇವಾ ಮಂಡಲಿ ಟ್ರಸ್ಟ್ (ರಿ.) ವತಿಯಿಂದ ‘ವಿಜಯ ವೈಭವ’ ವಿಜಯದಾಸರ ಆರಾಧನಾ ಮಹೋತ್ಸವವು ದಿನಾಂಕ 26-11-2023 ಭಾನುವಾರ ಬೆಳಗ್ಗೆ ಗಂಟೆ 9ಕ್ಕೆ ಕನಕಪುರ ರಸ್ತೆ, ಸೋಮನಹಳ್ಳಿ, ನೆಟ್ಟಿಗೆರೆ ಗ್ರಾಮದ ‘ಎಸ್.ವಿ. ನಾರಾಯಣ ಸ್ವಾಮಿ ರಾವ್ ಮೊಮೋರಿಯಲ್ ಹಾಲ್’ನಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿಜಯದಾಸರ ವಂಶೀಕರಾದ ಶ್ರೀ ಚೀಕಲಪರ್ವಿ ಜಗನ್ನಾಥ ದಾಸರು ಹಾಗೂ ಕುಟುಂಬದವರಿಂದ ವಿಜಯದಾಸರ ವಿಶೇಷ ಸುಳಾದಿಗಳು, ವಿದ್ವಾನ್ ಮುದ್ದುಮೋಹನ್ ಮತ್ತು ತಂಡದವರಿಂದ ದಾಸವಾಣಿ, ವಿದುಷಿ ವೀಣಾ ಮೊರಬ್ ತಂಡದವರಿಂದ ‘ವಿಜಯ ವೈಭವ’ ನೃತ್ಯ ರೂಪಕ, ವಿದುಷಿ ಅದಿತಿ ಪ್ರಹ್ಲಾದ್ ತಂಡದವರಿಂದ ಹಾಡುಗಾರಿಕೆ, ವಿದ್ವಾನ್ ಬಿ.ಕೆ. ಅನಂತರಾಮ್ ಹಾಗೂ ತಂಡದವರಿಂದ ಕೊಳಲು ವಾದನ, ವಿದುಷಿ ಹಿರಣ್ಮಯಿ ಎಸ್. ಹಾಗೂ ವಿದ್ವಾನ್ ಸಮೀರ್ ವಿ. ಕುಲಕರ್ಣಿ ಇವರಿಂದ ದ್ವಂದ್ವ ಹಾಡುಗಾರಿಕೆ, ಸಂಜಯನಗರದ ಶ್ರೀ ವಿಜಯವಿಠ್ಠಲ ದಾಸ ವೃಂದದಿಂದ ನರಸಿಂಹ ಸುಳಾದಿ ನೃತ್ಯ ರೂಪಕ, ಚೀಕಲಪರ್ವಿ ಶ್ರೀ ಜಗನ್ನಾಥದಾಸರು ಹಾಗೂ ಕುಟುಂಬದವರಿಂದ ವಿಜಯದಾಸರ ಶಿಷ್ಯ ಪ್ರಶಿಷ್ಯರಿಂದ ರಚಿತವಾದ ಸ್ತೋತ್ರ…

Read More

‘ಮಕ್ಕಳ ಜಗಲಿ’ ಮಕ್ಕಳಿಗಾಗಿ ಮೀಸಲಾದ ಆನ್ಲೈನ್ ಪತ್ರಿಕೆ (www.makkalajagali.com) ಇದರ ಮೂರನೇ ವರ್ಷದ ಸಂಭ್ರಮದಲ್ಲಿ ಮಕ್ಕಳಿಗಾಗಿ ರಾಜ್ಯಮಟ್ಟದ ‘ಕವನ ಮತ್ತು ಕಥಾ ಸ್ಪರ್ಧೆ – 2023’ನ್ನು ಏರ್ಪಡಿಸಲಾಗಿತ್ತು. ಮಕ್ಕಳ ಜಗಲಿ ‘ಕವನ ಸಿರಿ ಪ್ರಶಸ್ತಿ’ ಮತ್ತು ‘ಕಥಾ ಸಿರಿ ಪ್ರಶಸ್ತಿ’ ಫಲಿತಾಂಶ ಪ್ರಕಟವಾಗಿದ್ದು, ಪ್ರತಿ ವಿಭಾಗದಲ್ಲಿ ಎರಡು ಸಮಾನ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಅತ್ಯುತ್ತಮ ಕಥೆ ಮತ್ತು ಕವನಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗಿದೆ. ವಿಭಾಗ 1) – 5, 6, 7, 8ನೇ ತರಗತಿಯ ಕವನ ಸ್ಪರ್ಧೆಯ ಫಲಿತಾಂಶ : ಕವನ ಸಿರಿ ಪ್ರಶಸ್ತಿ – 2023 ಶ್ರುತಿಕಾ, 7ನೇ ತರಗತಿ, ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆ, ಓಜಾಲ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಕವನದ ಶೀರ್ಷಿಕೆ : ಜಗದ ನಿಯಮ ದಿಯಾ ಉದಯ್ ಡಿ.ಯು., 5ನೇ ತರಗತಿ, ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ, ಕಿಲ್ಪಾಡಿ, ಮುಲ್ಕಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಕವನದ ಶೀರ್ಷಿಕೆ…

Read More