Author: roovari

ಉಡುಪಿ : ರಥಬೀದಿ ಗೆಳೆಯರು (ರಿ.) ಉಡುಪಿ ಇವರ ವತಿಯಿಂದ ನೆಹರೂ ಜಯಂತಿ ಪ್ರಯುಕ್ತ ‘ಮಕ್ಕಳ ನಾಟಕ ಹಬ್ಬ -2023’ ದಿನಾಂಕ 19-11-2023ರಂದು ಸಂಜೆ 3 ಘಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ. ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಅಭಿಜ್ಞಾನ ಮಕ್ಕಳ ನಾಟಕ ಬಳಗದವರು ಐಕೆ ಬೊಳುವಾರು ಇವರ ರಂಗಪಠ್ಯ ಮತ್ತು ನಿರ್ದೇಶನದಲ್ಲಿ ‘ಕಾರಂತಜ್ಜನಿಗೊಂದು ಪತ್ರ’, ಕಟಪಾಡಿ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಬಾಲರಂಗ ಮಕ್ಕಳ ನಾಟಕ ಶಾಲೆಯ ಮಕ್ಕಳಿಂದ ಸಂತೋಷ್ ನಾಯಕ್ ಪಟ್ಲ ರಚನೆ ಮತ್ತು ನಿರ್ದೇಶನದಲ್ಲಿ ‘ಜ್ಞಾನ ವಿಜ್ಞಾನ ಜಿಂದಾಬಾದ್’ ಮತ್ತು ಕಿನ್ನರಮೇಳ ತುಮುರಿ ಪ್ರಸ್ತುತ ಪಡಿಸುವ ಸಾಲಿಯಾನ್ ಉಮೇಶ್ ನಾರಾಯಣ್ ನಿರ್ದೇಶನದಲ್ಲಿ ‘ಆನ್ಯಾಳ ಡೈರಿ’ ನಾಟಕ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿವಿಯ ನಿವೃತ್ತ ಪ್ರಾಂಶುಪಾಲರಾದ ಉದಯ್ ಕುಮಾರ್ ಇರ್ವತ್ತೂರು ಮತ್ತು ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಭಾಗವಹಿಸಲಿರುವರು.

Read More

ಉಡುಪಿ : ಯಕ್ಷಗಾನ ಕಲಾರಂಗದ 2023ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 18-11-2023 ಶನಿವಾರ ಕಟೀಲು ದೇವಳದ ಸರಸ್ವತೀ ಸದನದಲ್ಲಿ ಸಂಜೆ 5.00 ಗಂಟೆಗೆ ಜರಗಲಿದೆ. ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಲಿರುವರು. ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕರಾದ ಶ್ರೀ ಕೆ. ವಾಸುದೇವ ಆಸ್ರಣ್ಣರು ಕಲಾವಿದರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿರುವರು. ಕಟೀಲು ದೇವಳದ ಅಧ್ಯಕ್ಷರು ಹಾಗೂ ಆನುವಂಶಿಕ ಮೊಕ್ತೇಸರರಾಸ ಶ್ರೀ ಕೆ. ಸನತ್ ಕುಮಾರ್ ಶೆಟ್ಟಿ, ಆನುವಂಶಿಕ ಅರ್ಚಕರುಗಳಾದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ವೆಂಕಟರಮಣ ಆಸ್ರಣ್ಣ, ಶ್ರೀ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಕಮಲಾದೇವಿಪ್ರಸಾದ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕರಾದ ಶ್ರೀ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಬೆಂಗಳೂರಿನ ಶ್ರೀ ಕೆ. ಸದಾಶಿವ ಭಟ್, ದುಬೈಯ ಶ್ರೀ ಪ್ರಭಾಕರ ಸುವರ್ಣ, ಶ್ರೀ…

Read More

ಬೆಂಗಳೂರು : ರಂಗಪಯಣ ಪ್ರಸ್ತುತ ಪಡಿಸುವ ‘ಶಂಕರ್ ನಾಗ್ ನಾಟಕೋತ್ಸವ 2023’ ಕಾರ್ಯಕ್ರಮವು ದಿನಾಂಕ 20-11-2023ರಿಂದ 24-11-2023ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ದಿನಾಂಕ 20-11-2023ರಂದು ಸಂಜೆ ಗಂಟೆ 6ಕ್ಕೆ ಸಾತ್ವಿಕ ರಂಗ ತಂಡದ ‘ರಂಗ ಗೀತೆ’ಯೊಂದಿಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಶ್ರೀಯುತ ಶಶಿಧರ ಅಡಪ ಇವರಿಗೆ ರಂಗ ಮಕ್ಕಳಿಂದ ರಂಗ ಗೌರವ. 7.30ಕ್ಕೆ ರಂಗಪಯಣ ತಂಡದವರಿಂದ ರಾಜ್ ಗುರು ರಚನೆಯ ಸಂಗೀತ ಮತ್ತು ನಿರ್ದೇಶನದ ‘ಸೋಮಾಲಿಯಾ ಕಡಲ್ಗಳ್ಳರು’ ನಾಟಕ ಪ್ರದರ್ಶನ ನಡೆಯಲಿದೆ. ದಿನಾಂಕ 21-11-2023ರಂದು ಸಂಜೆ ಗಂಟೆ 5ಕ್ಕೆ ‘ನನ್ನೊಳಗಿನ ಕಡಲು’ ಕೃತಿ ಲೋಕಾರ್ಪಣೆ ಮತ್ತು ಶ್ರೀಯುತ ಪ್ರವೀಣ್ ಬಿ.ಎಂ. ಇವರಿಂದ ಕಾವ್ಯ ವಾಚನ, 6-05ಕ್ಕೆ ‘ನಮ್ಮ ನಾಟಕ – ನಿಮ್ಮ ಮಾತು’ : ಗುಲಾಬಿ ಗ್ಯಾಂಗ್ 100ರ ಸಂಭ್ರಮ ಪ್ರಯುಕ್ತ ಸಂವಾದ ಕಾರ್ಯಕ್ರಮ ನಡೆಯಲಿದೆ. ಗಂಟೆ 7.15ಕ್ಕೆ ಸಾತ್ವಿಕ ತಂಡ ಅಭಿನಯಿಸುವ ರಾಜ್ ಗುರು ರಚನೆಯ ಹಾಗೂ ಕೃಷ್ಣಮೂರ್ತಿ ಕವತ್ತಾರ್ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದ…

Read More

ಬೆಂಗಳೂರು : ಅಮೋಘ (ರಿ.) ಹಿರಿಯಡ್ಕ ಮತ್ತು ಸಪ್ನ ಬುಕ್ ಹೌಸ್ ಬೆಂಗಳೂರು ಇವರ ಆಯೋಜನೆಯಲ್ಲಿ ಶ್ರೀಮತಿ ಪೂರ್ಣಿಮಾ ಸುರೇಶ್ ಅವರ ‘ರಂಗ ರಂಗೋಲಿ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 19-11-2023ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ನರಸಿಂಹರಾಜ ಕಾಲೋನಿಯ 3ನೇ ಮುಖ್ಯ ರಸ್ತೆಯಲ್ಲಿರುವ ‘ಬಿ.ಎಂ.ಶ್ರೀ ಪ್ರತಿಷ್ಠಾನ’ದಲ್ಲಿ ನಡೆಯಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರು, ಚಿಂತಕರು ಡಾ. ಟಿ.ಎಸ್. ನಾಗಾಭರಣ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಕ.ಸಾ.ಪ.ದ ಗೌರವ ಕಾರ್ಯದರ್ಶಿಯಾದ ಡಾ. ಪದ್ಮಿನಿ ನಾಗರಾಜು ಇವರು ಕೃತಿ ಪರಿಚಯ ಮಾಡಲಿದ್ದಾರೆ. ಮಾಧ್ಯಮ ಭಾರತಿ ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಶ್ರೀ ಎನ್.ಎಸ್. ಶ್ರೀಧರ ಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಕಾರ್ಯಕ್ರಮದ ಮೊದಲು ಖ್ಯಾತ ಗಾಯಕಿ ಭಾಗ್ಯಶ್ರೀ ಗೌಡ ಇವರಿಂದ ಗೀತಗಾಯನ ಕಾರ್ಯಕ್ರಮ ನಡೆಯಲಿದೆ. ಕೃತಿಯ ಲೇಖಕಿ ಶ್ರೀಮತಿ ಪೂರ್ಣಿಮಾ ಸುರೇಶ್ ಮತ್ತು ಸಪ್ನ ಬುಕ್ ಹೌಸ್ ಇದರ ಸಂಚಾಲಕರಾದ ಶ್ರೀ ಆರ್. ದೊಡ್ಡೇಗೌಡರು ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.

Read More

ಮೈಸೂರು : ಮೈಸೂರಿನ ಅದಮ್ಯ ರಂಗಶಾಲೆಯ ವತಿಯಿಂದ ‘ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ’ ಪ್ರದಾನ ಹಾಗೂ ಮಕ್ಕಳ ನಾಟಕ ಪ್ರದರ್ಶನ ಕಾರ್ಯಕ್ರಮವು ದಿನಾಂಕ 18-11-2023ರಂದು ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಶ್ರೀ ವಿವೇಕಾನಂದ ಪದವಿಪೂರ್ವ ಕಾಲೇಜಿನ ಶ್ರೀ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಸಮಾರಂಭವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಲೋಕನಾಥ್ ಉದ್ಘಾಟಿಸಲಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕ ಹಾಗೂ ಜಾನಪದ ವಿದ್ವಾಂಸ ಪ್ರೊ. ನಂಜಯ್ಯ ಹೊಂಗನೂರು ಅಧ್ಯಕ್ಷತೆ ವಹಿಸಲಿರುವರು. ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಲಿದ್ದು, ಪಂಪ ಪ್ರಶಸ್ತಿ ಪುರಸ್ಕೃತ ಬಹುಶ್ರುತ ವಿದ್ವಾಂಸ ಡಾ.ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಪ್ರಶಸ್ತಿ ಪ್ರದಾನ ಮಾಡುವರು.‌ ಮುಖ್ಯ ಅತಿಥಿಯಾಗಿ ದಿ ನೆಸ್ಟ್ ಟ್ರಸ್ಟಿನ ಅಧ್ಯಕ್ಷ ಲಯನ್ ಡಿ.ಎಸ್. ಸತೀಶ್ ಪಾಲ್ಗೊಳ್ಳುವರು. ಡಾ.ಆರ್.ಎಸ್.‌ನರಸೇಗೌಡ ಎನ್. ಉದಯಶಂಕರ್ ಜಿ.ಟಿ. ಅನ್ನಪೂರ್ಣ ಎ. ರಾಮೇಗೌಡ ಕೆ. ಮಾಲತಿ ಲೋಕೇಶ ಬೆಕ್ಕಳಲೆ ಕೃ.ಪಾ. ಮಂಜುನಾಥ್ ಜಿ.ಆರ್. ಶ್ರೀವತ್ಸ ಈ ಸಾಲಿನ ‘ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ’ಯನ್ನು ಮೈಸೂರಿನ ಬಿ.ಜಿ.ಎಸ್ ಶಿಕ್ಷಣ…

Read More

ಕಾಸರಗೋಡು : ಕಾಸರಗೋಡಿನ ಸಾಮಾಜಿಕ – ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಮಹಿಳಾ ಘಟಕ ನಾರಿ ಚಿನ್ನಾರಿಯ 11ನೇ ಸರಣಿ ಕಾರ್ಯಕ್ರಮ ‘ರಸ ಪಯಸ್ವಿನಿ’ ದಿನಾಂಕ 19-11-2023ರ ಆದಿತ್ಯವಾರ ಬೆಳಗ್ಗೆ 9.30 ರಿಂದ ಕಾಸರಗೋಡಿನ ಕರಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಹಿರಿಯ ಲೇಖಕಿ ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪ್ರಮೀಳಾ ಮಾಧವ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ತುಳು ಸಂಶೋಧಕಿ ಹಾಗೂ ಸಾಹಿತಿಯಾದ ಕುಶಾಲಾಕ್ಷಿ ಕುಲಾಲ್, ಗಾಯಕಿಯಾದ ಮಾಯಾ ಮುಕುಂದ ರಾಜ್ ನಾಯಕ್ ಹಾಗೂ ಮಾನವ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷೆ ಮತ್ತು ಸಮಾಜ ಸೇವಕಿಯಾದ ಜುಲೇಖಾ ಮಾಹಿನ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜ ಸೇವಕಿಯಾದ ಪ್ರಭಾವತಿ ಟೀಚರ್, ನಾಟಿ ವೈದ್ಯೆಯಾದ ಶ್ಯಾಮಲ ರೈ ಬೆಳ್ಳೂರು, ಮಲಯಾಳಂ ಲೇಖಕಿ ಆಲಿಸ್ ಟೀಚರ್ ಹಾಗೂ ರಂಗನಟಿ ಮತ್ತು ರಂಗ ನಿರ್ದೇಶಕಿಯಾದ ಮಾಲತಿ ಮಾಧವ್ ಕಾಮತ್ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಒಂದೇ ವೇದಿಕೆಯಲ್ಲಿ ನಾಲ್ಕು ಭಾಷೆಗಳ ಸಾಂಸ್ಕೃತಿಕ ಕಾರ್ಯಕ್ರಮ…

Read More

ಬದುಕೆಂಬುದನ್ನು ಕಲೆಯಾಗಿ ತಿಳಿದು ಕಲೆಯ ಬದುಕನ್ನೇ ಬಾಳಿದವರು ಉಡುಪಿಯ ವಸಂತಲಕ್ಷ್ಮೀ ಹೆಬ್ಬಾರ್ ಅವರು. ಕಾಲೇಜಿನ ದಿನಗಳಿಂದಲೇ ಶಾಸ್ತ್ರೀಯ ಸಂಗೀತ, ನೃತ್ಯ, ಯಕ್ಷಗಾನಗಳಲ್ಲಿ ಪರಿಣತಿ ಸಾಧಿಸಿದ ಇವರು ಯಾವ ಗುರುವಿನ ಆಶ್ರಯವಿಲ್ಲದೇ ಚಿತ್ರ ಕಲೆಗೂ ಕೈಯಾಡಿಸಿದರು. ಎಂ.ಜಿ.ಎಂ. ಕಾಲೇಜಿನಲ್ಲಿ ಓದುತ್ತಿರುವ ವೇಳೆಯಲ್ಲಿ ಹವ್ಯಾಸವೆಂದು ಚಿತ್ರಿಸುತ್ತಾ ವರ್ಣ ಬಳಿಯುತ್ತಾ ನೈಫ್ ವರ್ಕ್ ನಲ್ಲಿ ಕೆತ್ತಿದ ಯೇಸು ಕ್ರಿಸ್ತನ ಪೈಂಟಿಂಗ್ ಅಂದಿನ ವಾರ ಪತ್ರಿಕೆ ತರಂಗದಲ್ಲಿ ಪ್ರಕಟಗೊಂಡಿತ್ತು. ಸಸ್ಯ ಶಾಸ್ತ್ರ ಉಪನ್ಯಾಸಕ ಶ್ರೀ ವೀ. ಅರವಿಂದ ಹೆಬ್ಬಾರರೊಂದಿಗಿನ ವಿವಾಹನಂತರ ಅವರ ಪ್ರೋತ್ಸಾಹದೊಂದಿಗೆ, ವಸಂತಲಕ್ಷ್ಮೀ ಅವರ ಸಂಗೀತ ಮತ್ತು ಪೈಂಟಿಂಗ್‌ಗಳು ಬಲವಾದ ಪ್ರವೃತ್ತಿಯಾಗಿ ಮುಂದೆ ಬೆಳೆಯಿತು. ರಂಜನಿ ಹೆಬ್ಬಾರ್ ಮತ್ತು ಸಾರಂಗ ಹೆಬ್ಬಾರ್ ಅವರ ತಾಯಿಯಾಗಿ, ಪುತ್ರಿ ರಂಜನಿ ಹೆಬ್ಬಾರ್ ಅವರನ್ನು ಸಂಗೀತ ಕ್ಷೇತ್ರದ ತಾರೆಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪುತ್ರಿ ರಂಜನಿಯ ಅಕಾಲ ಮೃತ್ಯುವಿನ ಬಳಿಕ (1983) ದುಃಖದ ಮಡುವಿನಿಂದ ಮರೆಯಾಗಲು ಕಲಾ ಮಾಧ್ಯಮವನ್ನು ಬಳಸಿದ ಈ ಸಂಗೀತ ಟೀಚರು ಪೈಂಟಿಂಗನ್ನೇ ಗಂಭೀರವಾಗಿ ಆಯ್ದುಕೊಂಡು ಚಿತ್ರಕಲೆಯಲ್ಲಿ…

Read More

ಶಿವಮೊಗ್ಗ : ಕರ್ನಾಟಕ ಸಂಘ (ರಿ.), ಶಿವಮೊಗ್ಗ ಆಯೋಜಿಸುವ ಶ್ರೀಮತಿ ಎಂ.ಎಸ್. ಲಕ್ಷ್ಮೀ ಕಾರಂತ ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ ‘ಅಧಿನಾಯಕಿ’ ದಿನಾಂಕ 18-11-2023ರ ಶನಿವಾರದಂದು ಸಂಜೆ ಘಂಟೆ 5.30ಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಪ್ರದರ್ಶನ ಗೊಳ್ಳಲಿದೆ. ಕಾರ್ಯಕ್ರಮವನ್ನು ಬೆಂಗಳೂರಿನ ರಂಗಕರ್ಮಿಗಳಾದ ಶ್ರೀ ಬೇಲೂರು ರಘುನಂದನ್ ಉದ್ಘಾಟಿಸಲಿದ್ದು, ಕರ್ನಾಟಕ ಸಂಘ ಶಿವಮೊಗ್ಗದ ಅಧ್ಯಕ್ಷರಾದ ಶ್ರೀ ಎಂ.ಎನ್. ಸುಂದರರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ‘ಅಧಿನಾಯಕಿ’ ಹೆಣ್ಣು ಸದಾ ಒಂದು ಮಿತಿಯಲ್ಲೇ ಇರಬೇಕು ಅಂತ ಸಮಾಜ ಅವಳನ್ನು ಕೂಡಿಟ್ಟಿದೆ… ಅವಳೆಷ್ಟೇ ಸಾಧನೆಗೈದರೂ. ಮನೆ-ಸಮಾಜ ಏನ್ನನ್ನೇ ಸಮರ್ಥವಾಗಿ ಸಂಭಾಳಿಸಿದರೂ, ಕೊನೆಯ ಮಾತು ಮಾತ್ರ – ಅವಳು ಹೆಣ್ಣು”..!? ರಾಣಿಯರ ಕಾಲದಿಂದಲೂ, ಸ್ತ್ರೀ ಭೋಗದ ವಸ್ತು… ಭೂಮಿಯೊಂದಿಗೆ ಹೆಣ್ಣನ್ನು ಗೆಲ್ಲುವುದು ಗಂಡಿನ ದಾರ್ಷ್ಟ್ಯದ ಉತ್ತುಂಗ… ಚರಿತ್ರೆ ಅದೆಷ್ಟೋ ಮಹಿಳೆಯರ ಸಾಧನೆಗಳನ್ನು ಮರೆಮಾಚಿದೆ… ಎಷ್ಟೇ ಎತ್ತರಕ್ಕೇರಿದರೂ, ಅಡುಗೆಮನೆಗೆ ಹೆಣ್ಣನ್ನು ಸೀಮಿತಗೊಳಿಸುವ ಅಪ್ಯಾಯ ಓಲೈಕೆ ಸಮಾಜದ್ದು! ತನ್ನವರನ್ನು ಸದಾ ಓಲೈಸುಲೆ ಬದುಕುವ ದೌರ್ಭಗ್ಯ ಹೆಣ್ಣಿನದ್ದು…! ಪ್ರಜಾಪ್ರಭುತ್ವದಲ್ಲೂ ಮಹಿಳಾ ಸಚಿವೆಯರಿಗೆಷ್ಟು ಸ್ಥಾನವಿದೆ!? ಸಮಾನತೆಯ…

Read More

ಗೋವಾ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ 39ನೇ ಗೋವಾ ಘಟಕವನ್ನು ಪಣಜಿ ಇನ್ಸಿಟ್ಯೂಟ್ ಮೆನೆಜಸ್ ಬ್ರಗಾನ್ಸಾ ಸಭಾಗೃಹದಲ್ಲಿ ದಿನಾಂಕ 02-11-2023ರಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟೆಹೊಳೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಕನ್ನಡದ ಶುದ್ಧ ಭಾಷೆಯನ್ನು ನಾವು ಯಕ್ಷಗಾನದಲ್ಲಿ ಕಾಣಬಹುದು. ಶಿಸ್ತು, ಸಂಸ್ಕಾರ, ಶ್ರದ್ಧಾ ಭಕ್ತಿಯನ್ನು ಯಕ್ಷಗಾನದಲ್ಲಿ ಕಾಣಲು ಸಾಧ್ಯವಿದೆ. ಕರಾವಳಿಯ ಗಂಡುಕಲೆಯಲ್ಲಿ ಸಂಘಟನೆಯ ಜೊತೆಗೆ ಭಾಷಾ ಶುದ್ಧತೆಯೂ ಇದೆ. ಇಂದು ಯುವ ಸಮುದಾಯ ಯಕ್ಷಗಾನದ ಆಕರ್ಷಣೆಗೆ ಒಳಗಾಗಿದ್ದಾರೆ. ಪುರಾಣದ ಕತೆಗಳನ್ನು ತಿಳಿದುಕೊಳ್ಳುವ ಆಸಕ್ತಿಯೂ ಯುವ ಸಮುದಾಯಕ್ಕೆ ಇದೆ. ಯಕ್ಷಗಾನ ಮೇಲ್ಪಂಕ್ತಿಯಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ. ಯಕ್ಷಗಾನವನ್ನು ಆರಾಧಿಸೋಣ, ಪ್ರೀತಿಸೋಣ. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ 40ನೇ ಘಟಕವನ್ನು ಬೈಂದೂರಿನಲ್ಲಿ ಸ್ಥಾಪಿಸಲಾಗುವುದು” ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟಿನ ಪ್ರಧಾನ ಸಂಚಾಲಕ, ಬರೋಡಾ ತುಳು ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ ಮಾತನಾಡಿ “ಮುಂದಿನ ವರ್ಷ ಗೋವಾದ ಬೀಚ್ ಬಳಿ ಪಟ್ಲ ಫೌಂಡೇಶನ್ನಿನ…

Read More

ಮಂಗಳೂರು : ಲೇಖಕಿ ಡಾ. ಅರುಣಾ ನಾಗರಾಜ್ ಅವರು ರಚಿಸಿರುವ ‘ಅರಿಷಡ್ವೈರಿಗಳ ಗೊಂದಲಾಪುರದಾಚೆ’ ಎಂಬ ಚಿಂತನ ಸಂಕಲನವು ದಿನಾಂಕ 04-11-2023ರಂದು ದೀಪಾ ಕಂಫರ್ಟ್ಸ್ ಇಲ್ಲಿನ ಶೆಹನಾಯಿ ಹಾಲ್‌ನಲ್ಲಿ ಬಿಡುಗಡೆಗೊಂಡಿತು. ಕೃತಿ ಬಿಡುಗಡೆಗೊಳಿಸಿದ ಬೆಂಗಳೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಿಕೆ ಡಾ. ಪ್ರಮಿಳಾ ಮಾಧವ್‌ ಮಾತನಾಡಿ, “ಈ ರೀತಿಯ ಕೃತಿಗಳು ಮತ್ತಷ್ಟು ಬೆಳಕಿಗೆ ಬರಬೇಕು” ಎಂದರು. ಪಂಚಮಹಾಶಕ್ತಿ ಶ್ರೀ ಗಾಯತ್ರಿ ದೇವಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಕೃಷ್ಣ ಶೇಟ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಆರ್‌.ಪಿ.ಎಲ್‌ ಇದರ ನಿವೃತ್ತ ಮಹಾ ಪ್ರಬಂಧಕಿ ವೀಣಾ ಟಿ. ಶೆಟ್ಟಿ ಅವರು “ಕೃತಿಯ ಶೀರ್ಷಿಕೆಯೇ ಅದರ ಅಂತರಾಳದ ಮಹತ್ವವನ್ನು ತಿಳಿಸುತ್ತದೆ” ಎಂದರು. ಪತ್ರಕರ್ತೆ ಡಾ. ಮಾಲತಿ ಶೆಟ್ಟಿ ಮಾಣೂರು ಪ್ರಸ್ತಾವಿಸಿದರು. ಕೆ.ಎಂ.ಸಿ ವೈದ್ಯೆ ಡಾ. ಪ್ರಿಯಾಂಕಾ ಅರುಣ್ ಶಿರಾಲಿ ಅವರು ಪ್ರಚಲಿತ ಸಮಾಜಕ್ಕೆ ಇಂತಹ ಕೃತಿಗಳ ಅವಶ್ಯಕತೆಯನ್ನು ತಿಳಿಸಿದರು. ವಕೀಲೆ ಪುಷ್ಪಲತಾ ಯು.ಕೆ., ಸಿ.ಎ ಕಿರಣ್ ಶೇಟ್, ಪ್ರಶಾಂತ್ ಶೇಟ್ ಮಾತನಾಡಿದರು. ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ…

Read More