Author: roovari

ಮಂಗಳೂರು : ಪ್ರಕಾಶ್ ರಾಜ್ ಫೌಂಡೇಷನ್ ವತಿಯಿಂದ ‘ನಿರ್ದಿಗಂತ ಉತ್ಸವ 2025’ ಕಾರ್ಯಕ್ರಮವು ದಿನಾಂಕ 28 ಫೆಬ್ರವರಿ 2025ರಂದು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ಬಹುಬಾಷಾ ನಟ ಪ್ರಕಾಶ್ ರಾಜ್ ಮಾತಾನಾಡಿ ಕರಾವಳಿ ಭಾಗದ ಸೌಹಾರ್ದತೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕರಾವಳಿ ಜನರ ಕೆಲಸ ಕಾರ್ಯಗಳಿಂದ ಅವರಲ್ಲಿರುವ ಸೌಹಾರ್ದತೆಯನ್ನು ಕಾಣಬಹುದು ಹಾಗೂ ನಾಲ್ಕು ದಿನದ ಕಾರ್ಯಕ್ರಮಕ್ಕೆ ವಿನ್ಯಾಸ ಮಾಡಿದಂತಹ ಮೇಘ ಶೆಟ್ಟಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಬಳಿಕ ರೆವರೆಂಡ್ ಫಾದರ್ ಡಾ. ಪ್ರವೀಣ್ ಮಾರ್ಟಿಸ್ ಇವರು ಮಾತನಾಡಿ, ಹೂವಿಗೂ ನನಗೂ ಅವಿನಾಭಾವ ಸಂಬಂಧವಿದೆ. ಬಾಲ್ಯದಲ್ಲಿ ಹೂವು ಹೆಣೆಯುವ ಕೆಲಸ ಮಾತ್ರ ಗೊತ್ತಿತ್ತು. ಇವತ್ತು ಈ ಕಾರ್ಯಕ್ರಮದಲ್ಲಿ ಹೂವಿನ ವಿನ್ಯಾಸವು ನನ್ನ ಬಾಲ್ಯವನ್ನು ನೆನಪಿಸಿತು. ನಿರ್ದಿಗಂತ ತಂಡವು ನಮ್ಮ ಕಾಲೇಜಿಗೆ ಬಂದಿರುವುದು ಬಹಳ ಸಂತಸ ತಂದಿದ್ದು, ಮಲ್ಲಿಗೆ ಹೂವು ಹೇಗೆ ಒಂದನ್ನೊಂದು ಹೆಣೆದುಕೊಂಡಿದೆಯೋ ಅದೇ ರೀತಿ ನಮ್ಮ ಬಂಧ ಬೆಸೆದಿರಲಿ” ಎಂದು ತಿಳಿಸಿದರು.

Read More

ಬೆಂಗಳೂರು : ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕವು ದಿನಾಂಕ 01 ಮಾರ್ಚ್ 2025ರಂದು ಸಂಜೆ ಗಂಟೆ 7-00ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಂಗರೂಪ ಕರಣಂ ಪವನ್ ಪ್ರಸಾದ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕು ಸೂರ್ಯ ಸಾಥಿ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಮಹೇಶ್ ಎಸ್.ಪಿ., ಹನು ರಾಮಸಂಜೀವ, ನಾಗಶ್ರೀ ಪುಟ್ಟರಾಜು, ಸುಶಾಂತ್ ರಾಜ್ ಆರಾಧ್ಯ, ಋತ್ವಿಕ್ ಕೆ.ಸಿ., ಅಂಬಿಕಾ ಶೆಟ್ಟಿ, ಅಜಯ್ ಕುಮಾರ್, ಸಂಜೀವಿನಿ, ಚಂದನ್ ರಾಮಚಂದ್ರೇಗೌಡ, ಶ್ರೀನಾಥ್ ಎನ್., ಪ್ರವೀಣ್ ಭಟ್, ಚರಣ್ ಗೌಡ, ದಿಲೀಪ್ ಮಹದೇವ್, ಭರಣಿ ವಿನಾಯಕ್, ಲೇಖನ, ಹರ್ಷಿತಾ, ಯಶಸ್ವಿನಿ, ಮನ್ವಿತ್ ವಿನಯ್ ಕುಮಾರ್ ರಂಗದ ಮೇಲೆ ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9686869676 ಸಂಖ್ಯೆಯನ್ನು ಸಂಪರ್ಕಿಸಿರಿ. ಪ್ರವರ ಥಿಯೇಟರ್ ಪ್ರಸ್ತುತಿ ‘ಅಣ್ಣನ ನೆನವು’ ಸಾಕ್ಷ್ಯ ನಾಟಕ ಈಗಾಗಲೇ ರಾಜ್ಯದ…

Read More

ಹೊನ್ನಾವರ : ಗುಣವಂತೆಯ ಯಕ್ಷಾಂಗಣದಲ್ಲಿ ಶ್ರೀ ಇಡಗುಂಜಿ ಯಕ್ಷಗಾನ ಮಂಡಳಿ ಕೆರೆಮನೆ ಇದರ 90ನೇ ವರ್ಷದ ಸಂಭ್ರಮ ಹಾಗೂ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ -15ರ ಸಂಭ್ರಮ ಸಮಾರಂಭದಲ್ಲಿ ದಿನಾಂಕ 23 ಫೆಬ್ರವರಿ 2025ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ‘ಕಲಾಪೋಷಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಇವರು ಮಾತನಾಡಿ “ಸಮಾಜದಲ್ಲಿ ಭಾಷಾ ಶುದ್ದತೆ ಹಾಗೂ ಜೀವನದ ಮೌಲ್ಯ ವರ್ಧನೆಯಾಗಬೇಕೆಂದರೆ ಯಕ್ಷಗಾನದೊಂದಿಗೆ ನಿಕಟ ಸಂಬಂಧವನ್ನು ಬೆಳೆಸಬೇಕಾಗುತ್ತದೆ. ಇಡಗುಂಜಿ ಯಕ್ಷಗಾನ ಮೇಳದೊಂದಿಗಿನ ತನ್ನ ನಾಲ್ಕು ದಶಕಗಳ ಸಂಬಂಧವನ್ನು ಸ್ಮರಿಸಿದರಲ್ಲದೆ, ಈ ಕ್ಷೇತ್ರವು ಬಹು ದೊಡ್ಡ ಕಲಾ ಕ್ಷೇತ್ರವಾಗಿ ಬೆಳೆದಿದೆ” ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣಮೂರ್ತಿ ಮಂಜರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾಲಯದ ಡೀನ್ ಪ್ರೊ. ಎಂ.ಎನ್ ವೆಂಕಟೇಶ, ಡಾ. ಮಿಲನ್ ಕುಲಕರ್ಣಿ, ಕೆರೆಮನೆ ನರಸಿಂಹ ಹೆಗಡೆ ಅಲ್ಲದೆ ಭಾಗವತ ವಿದ್ವಾನ್ ಗಣಪತಿ ಭಟ್, ಅಖಿಲ ಹವ್ಯಕ ಮಹಾಸಭಾ,…

Read More

ಶಿರ್ವ : ಹಿರಿಯ ಪಾಡ್ಡಾನಗಾರ್ತಿ, ಕೃಷಿಕೆ, ಪಡುಅಲೆವೂರು ಪೆರುಪಾದೆಯ ಲಕ್ಷ್ಮೀ ಸೇರಿಗಾರ್ತಿ (98) ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 23 ಫೆಬ್ರವರಿ 2025ರಂದು ನಿಧನರಾದರು. ನಾಟಿಗದ್ದೆಗಳಲ್ಲಿ, ಮದುವೆ ಮನೆಗಳಲ್ಲಿ ತುಳುನಾಡಿನ ವಿವಿಧ ದೈವಗಳ ಸಂಧಿ ಪಾಡ್ಡಾನಗಳನ್ನು ಹಾಡುವ ಮೂಲಕ ಇವರು ಖ್ಯಾತರಾಗಿದ್ದು ಮನೆಮಾತಾಗಿದ್ದರು. ದೈವಾರಾಧಕರಾಗಿದ್ದ ಇವರು ಪಂಜುರ್ಲಿ, ಕೋಟಿ ಚೆನ್ನಯ, ಸಿರಿ ಪಾಗ್ದಾನಗಳನ್ನು ಇತ್ತೀಚಿನವರೆಗೂ ಸುಧೀರ್ಘವಾಗಿ ಹಾಡುತ್ತಿದ್ದರು. ಅವರ ಸಾಧನೆಯನ್ನು ಗುರುತಿಸಿ ಇವರಿಗೆ ದೆಂದೂರು ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ವತಿಯಿಂದ ‘ಕೊಲ್ಲು ಶೆಡ್ತಿ ಸ್ಮರಣಾರ್ಥ ಪಾಡ್ಡಾನ ಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು. ಇವರಿಗೆ ಏಳು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Read More

ಹೊನ್ನಾವರ : ಚಿಂತನ ಉತ್ತರ ಕನ್ನಡ, ಚಿಂತನ ರಂಗ ಅಧ್ಯಯನ ಕೇಂದ್ರ ಹಾಗೂ ಪ್ರೀತಿಪದ ಹೊನ್ನಾವರ ಇವರ ವತಿಯಿಂದ ಬಹುರೂಪಿಯ ಪ್ರಕಟಣೆ, ರಂಗಕರ್ಮಿ ಕಿರಣ ಭಟ್ ರವರ ‘ಹೌಸ್ ಫುಲ್’ ರಂಗಕೃತಿ ಬಿಡುಗಡೆ ಸಮಾರಂಭವು ದಿನಾಂಕ 26 ಫೆಬ್ರವರಿ 2025ರಂದು ಹೊನ್ನಾವರದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಮಾತನಾಡಿ “ಸದ್ದಿಲ್ಲದೆ ಸಂವಿಧಾನವನ್ನು ಬದಲಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ವಿಚಾರವಂತಿಕೆಯನ್ನು ರಕ್ಷಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ರಂಗಭೂಮಿ ಸದಾ ಜೀವಂತವಾದದ್ದು. ಚಲನಶೀಲತೆಯನ್ನು ಉಳ್ಳದ್ದು. ಈ ರಂಗಭೂಮಿ ಜನರ ಮನಸ್ಸಿನ ಕನ್ನಡಿ. ಹಾಗಾಗಿಯೇ ರಂಗಭೂಮಿ ಬದಲಾವಣೆಯನ್ನು ಪ್ರೇರೇಪಿಸುತ್ತದೆ. ಕಿರಣ್ ಭಟ್ ಅವರ ‘ಹೌಸ್ ಫುಲ್’ ಕೃತಿ ಬಿ.ವಿ. ಕಾರಂತರ ನಂತರ ನಡೆಯುತ್ತಿರುವ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳನ್ನು ಹಿಡಿದಿಟ್ಟಿದೆ. ರಂಗ ಕೈರಳಿ ಕೃತಿಯ ಮೂಲಕ ಓದುಗರ ಮನ ಗೆದ್ದ ಕಿರಣ್ ಈಗ ರಂಗ ವಿಮರ್ಶೆಯ ಮೂಲಕ ರಂಗ ಚರಿತ್ರೆಯನ್ನು ದಾಖಲಿಸಿದ್ದಾರೆ” ಎಂದರು. ಪತ್ರಕರ್ತ, ಬಹುರೂಪಿಯ ಜಿ.ಎನ್. ಮೋಹನ್…

Read More

ಪುತ್ತೂರು : ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ ಮುಂಡೂರು ನರಿಮೊಗರು ಇಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ದಿನಾಂಕ 26 ಫೆಬ್ರವರಿ 2025ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ‘ದಕ್ಷ ಯಜ್ಞ’ ಎಂಬ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಜಯರಾಮ ಭಟ್ ಮತ್ತು ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಈಶ್ವರ), ಕಿಶೋರಿ ದುಗ್ಗಪ್ಪ ನಡುಗಲ್ಲು (ದಾಕ್ಷಾಯಿಣಿ), ಗಾಯತ್ರಿ ಹೆಬ್ಬಾರ್ (ವೃದ್ಧ ಬ್ರಾಹ್ಮಣ), ಹರಿಣಾಕ್ಷಿ ಜೆ. ಶೆಟ್ಟಿ (ದಕ್ಷ), ಶಾರದಾ ಅರಸ್ (ವೀರಭದ್ರ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.

Read More

ಮಂಗಳೂರು : ಅಶೋಕನಗರ ಯುವಕ ಸಂಘ (ರಿ.) ಅಶೋಕನಗರ ಮಂಗಳೂರು ಇದರ 64ನೇ ವಾರ್ಷಿಕೋತ್ಸವ ಸಂಭ್ರಮದ ಪ್ರಯುಕ್ತ ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ, ಗೌರವ ಅಭಿನಂದನೆ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳನ್ನು ದಿನಾಂಕ 01 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಅಶೋಕನಗರ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭವು ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇವರ ಆಡಳಿತಾಧಿಕಾರಿ ಜಗದೀಶ ಕೆ. ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಉರ್ವ ಅಶೋಕನಗರದ ಬಿಲ್ಲವ ಸಂಘಕ್ಕೆ ಗೌರವ ಅಭಿನಂದನೆ ಹಾಗೂ ಮಾಜಿ ಸೈನಿಕ ಪ್ರಸನ್ನ ಮತ್ತು ಅಂಗನವಾಡಿ ಸಹಾಯಕಿ ಶ್ರೀಮತಿ ವಿಶಾಲಾಕ್ಷಿ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಬೈಕಾಡಿ ಪ್ರತಿಷ್ಠಾನದ ಅಂಗ ಸಂಸ್ಥೆ ‘ರತ್ನ ಕಲಾಲಯ’ದ ನಿರ್ದೇಶಕಿ ಅಕ್ಷತಾ ಬೈಕಾಡಿ ಇವರ ಶಿಷ್ಯ ವೃಂದ ಮತ್ತು ಕಲಾವಿದರಿಂದ ನೃತ್ಯ-ಗಾನ-ಕುಂಚ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.

Read More

ಕುಂದಾಪುರ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಯೋಜನೆಯಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ದಿನದ ಪ್ರಯುಕ್ತ ದಿನಾಂಕ 26 ಫೆಬ್ರವರಿ 2025ರಂದು ತಾಳಮದ್ದಳೆ-ಯಕ್ಷಗಾನ-ಭರತನಾಟ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ತಂಡದ ಭಾಗವತರಾದ ಗುರು ಲಂಬೋದರ ಹೆಗಡೆ ನಿಟ್ಟೂರು ಇವರನ್ನು ಗೌರವಿಸಲಾಯಿತು. ತಂಡವನ್ನು ಗೌರವಿಸಿ ಮಾತನಾಡಿದ ಆಡಳಿತ ಮಂಡಳಿಯ ಮುಖ್ಯಸ್ಥ ವಾಸುದೇವ ಯಡಿಯಾಳ್ “ಕನ್ನಡ ಭಾಷಾಭಿವೃದ್ಧಿಯ ಏಕೈಕ ಕಲೆ ಯಕ್ಷಗಾನ. ಮಕ್ಕಳ ಮೂಲಕ ಕಲೆಯನ್ನು ಸಾಂಕ್ರಾಮಿಕವಾಗಿ ಹರಡಿಸುವ ಕಾರ್ಯ ಶ್ಲಾಘನೀಯ. ಇತಿಹಾಸ ಪ್ರಸಿದ್ಧವಾದ ಪುರಾತನ ದೇಗುಲದಲ್ಲಿ ಈಶನಿಗೆ ಪ್ರಿಯವಾದ ಕಲೆಯ ವಿವಿಧ ಆಯಾಮಗಳ ಪ್ರದರ್ಶನ ಶಿವರಾತ್ರಿಯಂದು ಅತ್ಯಂತ ಸೂಕ್ತ. ಮಕ್ಕಳಿಗೆ ಅವಕಾಶ ಕಲ್ಪಿಸುವುದರಿಂದ ದೇವರಿಗೆ ಪ್ರಿಯವಾಗುವುದು ಸತ್ಯ” ಎಂದರು. “ಕಲೆಗೂ, ಧಾರ್ಮಿಕ ಕಾರ್ಯಕ್ರಮಕ್ಕೂ ಬಹಳ ಸಾಮ್ಯತೆ. ಪ್ರತೀ ವರ್ಷ ನೂರಾರು ಮಕ್ಕಳು ಕುಂದೇಶ್ವರದ ರಂಗದಲ್ಲಿ ಗೆಜ್ಜೆ ಕಟ್ಟುತ್ತಾರೆ. ಬಹಳ ಹಿಂದಿನಿಂದಲೂ ಪ್ರಸಿದ್ಧತೆಯನ್ನು ಪಡೆದುಕೊಂಡ ಕುಂದೇಶ್ವರ ದೇಗುಲ ಸಾಂಸ್ಕೃತಿಕವಾಗಿಯೂ ಹೆಸರಾಗಿದೆ” ಎಂದು ಆಡಳಿತ ನಿರ್ದೇಶಕ ಜಿ.ಎಸ್.…

Read More

ಮೈಸೂರು : ರಂಗಾಂತರಂಗ ಮೈಸೂರು (ರಿ.) ಮಕ್ಕಳ ಅಭಿನಯ ರಂಗಶಾಲೆ ಇವರ ವತಿಯಿಂದ ‘ಕಲರವ’ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 10 ಏಪ್ರಿಲ್ 2025ರಿಂದ 10 ಮೇ 2025ರವರೆಗೆ ಬೆಳ್ಳಿಗೆ 10-00 ಗಂಟೆಯಿಂದ ಸಂಜೆ 4-00 ಗಂಟೆ ತನಕ ಆಯೋಜಿಸಲಾಗಿದೆ. ನಾಟಕ, ಮೈಮ್, ಜನಪದ ಗೀತೆಗಳು, ಯೋಗ ಮತ್ತು ಧ್ಯಾನ, ನೃತ್ಯ, ಚಿತ್ರಕಲೆ, ದೇಶಿ ಆಟಗಳು, ನಿರೂಪಣ ಕೌಶಲ್ಯ, ಧ್ವನಿ ಮತ್ತು ಮಾತು, ಭಾಷಾ ಕೌಶಲ್ಯ, ಪರಿಸರ ಮತ್ತು ಪ್ರಾಣಿಗಳ ಮಾಹಿತಿ, ಮಕ್ಕಳಿಗಾಗಿ ಸಿನಿಮಾ ವೀಕ್ಷಣೆ, ಪೌರಾಣಿಕ ಮತ್ತು ಸಾಮಾಜಿಕ ಐತಿಹಾಸಿಕ ಕಥೆಗಳ ಮಾಹಿತಿ ಈ ಶಿಬಿರದ ಚಟುವಟಿಕೆಗಳಗಿದ್ದು, ಅಭಿನಯ ತರಬೇತಿ, ಭರತನಾಟ್ಯ, ಸಂಗೀತ ಮತ್ತು ನೃತ್ಯ ವಾರಾಂತ್ಯ ತರಗತಿಗಳನ್ನು ಈ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9739919004 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಶಿವಮೊಗ್ಗ : ವಸುಧಾ ಕರಣಿಕ್ – ವೈಶಾಲಿ ಭಟ್ ಇವರ ಜನ್ಮದಿನೋತ್ಸವ ನಿಮಿತ್ತ ಸನ್ಮಾನ ಸಮಾರಂಭ ಮತ್ತು ಭರತನಾಟ್ಯ ಪ್ರಸ್ತುತಿಯು ದಿನಾಂಕ 02 ಮಾರ್ಚ್ 2025ರಂದು ಸಂಜೆ 5-00 ಗಂಟೆಗೆ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆಯಲಿದೆ. ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಡಾ. ವಿದುಷಿ ವಸುಂಧರಾ ದೊರೆಸ್ವಾಮಿಯವರ ಶಿಷ್ಯೆ ಮಂಗಳೂರಿನ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್ ಇದರ ನಿರ್ದೇಶಕರಾದ ಡಾ. ವಿದುಷಿ ಭ್ರಮರಿ ಶಿವಪ್ರಕಾಶ್ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸನ್ಮಾನಿತರು ‘ಕುಮಾರವ್ಯಾಸ ನೃತ್ಯ ಭಾರತ’ ಶಾಸ್ತ್ರೀಯ ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

Read More