Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕನ್ನಡ ಕಟ್ಟೆಯ ವಿಂಶತಿ ಆಚರಣೆಯ ಉದ್ಘಾಟನಾ ಸಮಾರಂಭವು ದಿನಾಂಕ 05-11-2023ರಂದು ಮಂಗಳೂರಿನ ಕದ್ರಿಯ ಹೊಟೇಲ್ ಡಿಂಕಿ ಡೈನ್ ಇದರ ಸಭಾಂಗಣದಲ್ಲಿ ನಡೆಯಿತು. “ನಾಡು, ನುಡಿ, ನೆಲ, ಪರಿಸರ, ಪ್ರಕೃತಿ ಪರ ಚಿಂತನೆ ಹೋರಾಟಗಳಿಗೆ ಹಾಗೂ ಅನುಷ್ಠಾನಕ್ಕೆ ನೇರ ನಿಷ್ಠುರ ಗಟ್ಟಿ ಧ್ವನಿಯ ಕನ್ನಡ ಕಟ್ಟೆಯಂತಹ ಸಂಘಟನೆಗಳು ಇನ್ನಷ್ಟು ಬೇಕು” ಎಂದು ಡಾ. ಹರಿಕೃಷ್ಣ ಪುನರೂರು ಹಾಗೂ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯಪಟ್ಟರು. ವಿಂಶತಿ ಆಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗೆ ಏರ್ಪಡಿಸಿದ ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಹೋರಾಟಗಾರರನ್ನು ಮತ್ತು ಸಂತೋಷ್ ಕುಮಾರ್ ಶೆಟ್ಟಿ ಜಪ್ತಿ ಅವರನ್ನು ಸಮ್ಮಾನಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆಯ ಜಪ್ಪು ಯೋಗೀಶ್ ಶೆಟ್ಟಿ ಅವರು ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ಕುಂದಾಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಮತ್ತು ಡಾ. ವಿಜಯ್ ಕುಮಾರ್ ಶುಭ ಹಾರೈಸಿದರು. ಕನ್ನಡ ಕಟ್ಟೆಯ ವಿಂಶತಿ ಕಾರ್ಯಕ್ರಮದ ಮುಂದಿನ ಭಾಗವಾಗಿ…
ಮುಂಬಯಿ : ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ 51ನೇ ನವರಾತ್ರಿ ಉತ್ಸವದ ನಿಮಿತ್ತ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ವಿನಾಯಕ ಯಕ್ಷಕಲಾ ಫೌಂಡೇಷನ್ ಕೆರೆಕಾಡು ಮುಲ್ಕಿ (ರಿ.) ಇದರ 9ನೇ ವರ್ಷದ ಮುಂಬಯಿ ಪ್ರವಾಸದ ಯಕ್ಷಗಾನ ಸಪ್ತ ಸಂಭ್ರಮವು ದಿನಾಂಕ 26-10-2023ರಂದು ನಡೆಯಿತು. ಈ ಸಮಾರಂಭವನ್ನು ಉದ್ಘಾಟನೆ ಮಾಡಿದ ಮುಂಬಯಿಯ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಇವರು “ಯಕ್ಷಗಾನವು ಕಲಾ ಸಂಪತ್ತಾಗಿದ್ದು, ಇದನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಅಭ್ಯಸಿಸಬೇಕು. ಇಂತಹ ತುಳುನಾಡಿನ ಹೆಮ್ಮೆಯ ಕಲೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆಯುತ್ತಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಯಕ್ಷಗಾನದ ಪ್ರಾಯೋಜಕರಾದ ಫೆಡರೇಶನ್ ಆಫ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಮಹಾರಾಷ್ಟ್ರ ಇದರ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ದೇವಾಲಯದಲ್ಲಿ ವಿಶೇಷವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಸೇವಕರ್ತರಾದ ನವೀನ್ ಸುವರ್ಣ ಹಾಗೂ ರವಿ ನಾಯಕ್ ಮತ್ತು ಕೆರೆಕಾಡು ಶ್ರೀ ವಿನಾಯಕ ಫೌಂಡೇಶನ್ ಇದರ ಕಲಾವಿದ ಅಭಿಜಿತ್ ಕರೆಕಾಡು ಇವರುಗಳನ್ನು…
ಕಾರ್ಕಳ : ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ.ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಕಲ್ಲು ಮರ ಹಾಗೂ ಲೋಹಶಿಕ್ಷಣ ವಿಭಾಗಗಳಲ್ಲಿ 18ತಿಂಗಳ ಅವಧಿಯ ಉಚಿತ ತರಬೇತಿ ತರಗತಿಯು ದಿನಾಂಕ 11.12.2023 ರಂದು ಪ್ರಾರಂಭವಾಗಲಿದೆ. ಈ ತರಗತಿಗೆ ಸೇರಲಿಚ್ಛಿಸುವ ಆಸಕ್ತ ಯುವಕರು ದಿನಾಂಕ 06.11.2023ರಿಂದ 11-11-2023ರ ವರೆಗೆ ಸಂಸ್ಥೆಯ ಆವರಣದಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಬೆಳಿಗ್ಗೆ 10.30 ರಿಂದ ಸಂಜೆ 4.00 ಗಂಟೆಯ ಒಳಗೆ ಹಾಜರಾಗಬೇಕು. ಸಂದರ್ಶನಕ್ಕೆ ಬರುವಾಗ ಅಭ್ಯರ್ಥಿಯು ತಂದೆ ಅಥವಾ ತಾಯಿಯ ಜೊತೆಗೆ ಬರಬೇಕು ಹಾಗೂ ಈ ಕೆಳಗೆ ನಮೂದಿಸಿದ ದಾಖಲೆ ಪ್ರತಿಗಳನ್ನು ತರಬೇಕು. 1. ಅಭ್ಯರ್ಥಿಯ ಆಧಾರ್ ಕಾರ್ಡ್ 2. ಪೋಷಕರ ಆಧಾರ್ ಕಾರ್ಡ್ 3. ರೇಷನ್ ಕಾರ್ಡ್ 4. SSLC Marks ಕಾರ್ಡ್ 5. ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ.) 6. ಇಬ್ಬರು ಗಣ್ಯ ವ್ಯಕ್ತಿಗಳಿಂದ ನಡತೆ ಪ್ರಮಾಣ ಪತ್ರ 7. ಪಾಸ್ ಪೋರ್ಟ್ size ಫೋಟೋ 5 8. ಉತ್ತಮ ಆರೋಗ್ಯದ ವೈದ್ಯಕೀಯ ದ್ರಢೀಕರಣ ಪತ್ರ 9.…
ಬೆಂಗಳೂರು : ಪ್ರತಿಷ್ಠಿತ ರೇವಾ ವಿಶ್ವವಿದ್ಯಾನಿಲಯದ ಲಲಿತ ಕಲೆಗಳ ಅಧ್ಯಯನ ಕೇಂದ್ರವು ಕರಾವಳಿಯ ಯುವ ನೃತ್ಯ ಕಲಾವಿದರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರ ‘ನಟ್ಟುವಾಂಗಂ ಕಾರ್ಯಾಗಾರ’ವನ್ನು ದಿನಾಂಕ 03-11-2023ರಂದು ಹಮ್ಮಿಕೊಂಡಿತು. ಮೂರು ದಿನಗಳ ಈ ಕಾರ್ಯಾಗಾರದ ಸದುಪಯೋಗವನ್ನು ಸ್ನಾತಕೋತ್ತರ ಪದವಿ, ಪದವಿ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ಪಡೆದುಕೊಂಡರು. ಪ್ರದರ್ಶನ ಕಲೆಗಳ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿರುವ ದೇಶದ ಬೇರೆ ಬೇರೆ ಭಾಗದ ಸುಮಾರು 58 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮುಂಬೈ : ಶ್ರೀ ಡಾ. ಸುಗುಣೇ0ದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದಗಳೊಂದಿಗೆ ಮುಂಬಯಿಯ ವಿದ್ಯಾವಿಹಾರ್ ಶ್ರೀ ಗಾಂದೇವಿ ಅಂಬಿಕಾ ಶ್ರೀ ಅದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದಿನಾಂಕ 20-10-2023ರಂದು ನಡೆದ ನವರಾತ್ರಿ ವಿಶೇಷದಲ್ಲಿ ‘ನಾಟ್ಯಾಯನ’ ಮತ್ತು ಕೋಟಿ ಗೀತಾ ಲೇಖನ ಯಜ್ಞ ನೋಂದಣಿ ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಪೆರಣ0ಕಿಲ ಹರಿದಾಸ್ ಭಟ್ “ಭಗವದ್ಗೀತೆ, ಸಂಗೀತ, ನೃತ್ಯ, ನಾಟಕ, ಸಂಸ್ಕೃತಿ, ಶಿಕ್ಷಣಗಳ ವಿಶಿಷ್ಟ ಸಮ್ಮೇಳನದ ‘ನಾಟ್ಯಾಯನ’ ಕಾರ್ಯಕ್ರಮ ನೀಡುತ್ತಿರುವ ಮೂಡುಬಿದಿರೆಯ ಅಯನಾ ವಿ. ರಮಣ್, ಅನನ್ಯ- ಅದ್ಭುತ ಕಲಾವಿದೆ. ದಕ್ಷಿಣಾಯನ-ಉತ್ತರಾಯಣಗಳ ಸೂರ್ಯ ಚಲನೆಯ ಹೆಸರನ್ನು ಹೊಂದಿರುವ ಆಕೆ, ಅಷ್ಟೇ ಪ್ರಖರ – ಪ್ರಚಂಡ ಪ್ರತಿಭೆ. ಅಸಾಧಾರಣ ಸ್ಮರಣ ಶಕ್ತಿ, ಪರಿಣಾಮಕಾರಿ ಅಭಿನಯದ ಅದ್ಭುತ ಸಾಧನೆ ಮಾಡಿದ ಈ ಕಲಾವಿದೆ, ಭಗವದ್ಗೀತೆ – ವೇದಸೂಕ್ತಗಳ ಪ್ರಸ್ತುತಿಯಿರುವ ನೃತ್ಯ – ನೃತ್ತ ಭರತನಾಟ್ಯದ ಮೂಲಕ ಪ್ರತ್ಯೇಕವಾಗಿ ನಿಲ್ಲುತ್ತಾರೆ” ಎಂದು ವಿಶ್ಲೇಷಿಸಿದ ಅವರು, ರಾಷ್ಟ್ರಮಟ್ಟದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ…
ಬೆಂಗಳೂರು : ವರ್ಷ ಪೂರ್ತಿ ಒಂದಲ್ಲ ಒಂದು ಬಗೆಯ ನೃತ್ಯ ಚಟುವಟಿಕೆಯಲ್ಲಿ ನಿರತವಾದ ‘ಅದ್ಯಷ ಫೌಂಡೇಷನ್’ ಖ್ಯಾತ ಒಡಿಸ್ಸಿ ನೃತ್ಯ ಸಂಸ್ಥೆಯು, ವಿವಿಧ ಹೊಸ ಪರಿಕಲ್ಪನೆ ಮತ್ತು ಪ್ರಯೋಗಗಳಲ್ಲಿ ತೊಡಗಿಕೊಂಡಿದ್ದು ವಿಶೇಷ ನೃತ್ಯೋತ್ಸವಗಳನ್ನು ಆಯೋಜಿಸುತ್ತ ಬಂದಿದೆ. ಸಂಸ್ಥೆಯ ಕಲಾತ್ಮಕ ನಿರ್ದೇಶಕಿ, ಅನ್ವೇಷಕಿ ಮತ್ತು ಪ್ರಖ್ಯಾತ ಒಡಿಸ್ಸಿ ನೃತ್ಯಕಲಾವಿದೆ, ಗುರು ಸರಿತಾ ಮಿಶ್ರ ಇವರದು ಬಹುಮುಖ ಪ್ರತಿಭೆ. ದೇಶ-ವಿದೇಶಗಳಲ್ಲಿ ಇವರು ಅಸಂಖ್ಯ ನಾಟ್ಯಪ್ರದರ್ಶನಗಳನ್ನು ನೀಡುತ್ತ ಬಂದಿರುವುದಲ್ಲದೆ, ಅಪಾರ ಶಿಷ್ಯರಿಗೆ ಒಡಿಸ್ಸಿ ನೃತ್ಯವನ್ನು ಕಲಿಸುತ್ತಿರುವ ಕ್ರಿಯಾಶೀಲೆ. ಭಾರತೀಯ ನೃತ್ಯ ಪರಂಪರೆಯ ರಕ್ಷಣೆ-ಅಭಿವೃದ್ಧಿ ‘ಅದ್ಯಷ’ದ ಆದ್ಯ ಉದ್ದೇಶ. ಒಡಿಸ್ಸಿ ನೃತ್ಯದ ಬಗ್ಗೆ ಆಳವಾದ ಪಾಂಡಿತ್ಯ ಹೊಂದಿರುವ ಸರಿತಾ ಪ್ರಾಮಾಣಿಕತೆ, ಬದ್ಧತೆಯೊಂದಿಗೆ ಪರಿಶ್ರಮ, ಶಿಸ್ತನ್ನು ತಮ್ಮ ಜೀವನಾದರ್ಶದ ತತ್ವಗಳಾಗಿ ರೂಢಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಒಡಿಸ್ಸಿ ನಾಟ್ಯ ಕಲಿಸುವ ಅವರದೇ ಆದ ‘ಅದ್ಯಷ’ ನೃತ್ಯ ಶಾಲೆಯಿದೆ. ಗುರು ದೇವಪ್ರಸಾದ್ ಮತ್ತು ಕೇಳುಚರಣ್ ಮಹಾಪಾತ್ರ ನೃತ್ಯ ಶೈಲಿಯನ್ನು ಅನುಸರಿಸುವ ಸರಿತಾ, ದೂರದರ್ಶನದಲ್ಲಿ ಗ್ರೇಡೆಡ್ ಆರ್ಟಿಸ್ಟ್ ಮತ್ತು ಐ.ಸಿ.ಸಿ.ಆರ್. ಹಾಗೂ ಸ್ಪಿಕ್ ಮಕೆಯ…
ಉಡುಪಿ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ ಬೈಕಾಡಿ ಬ್ರಹ್ಮಾವರ ಇವರ ಆಯೋಜನೆಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ, ನುಡಿಚಿತ್ತಾರ-2023 ಕಾರ್ಯಕ್ರಮವು ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 05-11-2023ರಂದು ನೆರವೇರಿತು. ದೀಪ ಬೆಳಗಿಸಿ ಆಶಯಗೀತೆಯೊಂದಿಗೆ ಉದ್ಘಾಟನೆಗೊಂಡ ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಶ್ರೀ ಮುರಳೀಧರ ಉಪಾಧ್ಯಾಯ ಮಾಜಿ ಸದಸ್ಯರು ಸಾಹಿತ್ಯ ಅಕಾಡೆಮಿ ನವದೆಹಲಿ ಇವರು ಮಾತನಾಡಿ ಅನುಪಮಾ ನಿರಂಜನರ ದಿನಕ್ಕೊಂದು ಪುಸ್ತಕ, ಗೋವಿಂದ ಪೈ ಅವರ ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹೀಗೆ ಹಲವು ಕನ್ನಡ ಪುಸ್ತಕ, ಗೀತೆಗಳ ಕುರಿತು ಅರಿವು ಮೂಡಿಸಿದರು. ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಉಪನಿರ್ದೇಶಕಿಯಾದ ಶ್ರೀಮತಿ ಪೂರ್ಣಿಮಾ ಅವರು ಮಾತನಾಡಿ “ಭಾಷಾಭಿಮಾನ ಇರುವವರು ಖಂಡಿತವಾಗಿ ದೇಶಾಭಿಮಾನ ಪಡೆಯಲಿಕ್ಕೆ ಸಾಧ್ಯ” ಎಂದು ಹೇಳಿದರು. ವಾರಂಬಳ್ಳಿ ಪಂಚಾಯತ್ ನ ಅಧ್ಯಕ್ಷರಾದ ನಿತ್ಯಾನಂದ ಬಿ.ಆರ್. ಹಾಗೂ ಅಜಪುರ ಕನ್ನಡ ಸಂಘದ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ಇವರು…
ಉಡುಪಿ : ಕನ್ನಡದ ಹಿರಿಯ ಲೇಖಕಿ, ಕಾದಂಬರಿಗಾರ್ತಿ, ಕಥೆಗಾರ್ತಿ ಉಡುಪಿಯ ತಾರಾ ಭಟ್ ದಿನಾಂಕ 06-11-2023ರಂದು ನಿಧನರಾದರು. ಆಂಗ್ಲ ಮತ್ತು ಕನ್ನಡ ಎರಡು ಭಾಷೆಗಳಲ್ಲೂ ಇವರ ಕೃತಿ ಪ್ರಕಟವಾಗಿ ಜನಮನ್ನಣೆಗಳಿಸಿವೆ. ತಮ್ಮ ಕಥೆ ಕಾದಂಬರಿಗಳಲ್ಲಿ ಶೋಷಣೆಯ ಬಗ್ಗೆ ಧ್ವನಿ ಎತ್ತಿದ ಇವರು ಕನ್ನಡದ ಖ್ಯಾತ ಲೇಖಕಿ ಶಾರದ ಭಟ್ ಅವರ ಸಹೋದರಿಯಾಗಿದ್ದಾರೆ. ಅವರ ನಿಧನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಹಿರಿಯ ಲೇಖಕ ಮತ್ತು ಪ್ರಕಾಶಕರಾದ ಕೋಟೇಶ್ವರದ ಡಾ. ಭಾಸ್ಕರಾಚಾರ್ಯರ ಜೊತೆ ತಾರಾ ಭಟ್ ಅವರು ಚಡಗ ಪ್ರಶಸ್ತಿ ತೀರ್ಪುಗಾರರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ತಾರಾ ಭಟ್ ಇವರು 1944 ಸೆಪ್ಟಂಬರ್ 03ರಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ‘ಅವ್ಯಕ್ತ’, ಮತ್ತು ‘ಲೋಟಸ್ ಪಾಂಡ್’ ಅವರ ಪ್ರಸಿದ್ಧ ಕಾದಂಬರಿಗಳು. ‘ಹೊಕ್ಕಳ ಬಳ್ಳಿ’, ‘ಸರ್ವಾಧಿಕಾರಿ’ ಮತ್ತು ‘ಪಂಚಶತ್ತಮ’ ಇವು ನಾಟಕಗಳು. ‘ಗಾಳಿಯಲ್ಲಿ ಹೆಪ್ಪುಗಟ್ಟಿದ ಮೌನ’, ‘ಬೋಳು ಮರದ ಕೊಂಬೆಗಳು’, ‘ಸರಿದು ಹೋದ ಕಾಲ’ ಎಂಬ ಕಥಾಸಂಕಲನಗಳನ್ನೂ ರಚಿಸಿದ್ದಾರೆ. ‘ಲೋಟಸ್ಪಾಂಡ್’ ಕಾದಂಬರಿಗೆ ‘ವರ್ಧಮಾನ…
ಮಂಗಳೂರು : ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದೊಂದಿಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2023’ ಏಕಾದಶ ಸರಣಿ ‘ಹನ್ನೊಂದನೇ ವರ್ಷದ ನುಡಿ ಹಬ್ಬ’ ದಿನಾಂಕ 19-11-2023ರಿಂದ 25-11-2023ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಜರಗಲಿದೆ. ದಿನಾಂಕ 31-10-2023ರಂದು ನಗರದ ಖಾಸಗಿ ಹೋಟೆಲಿನಲ್ಲಿ ಜರಗಿದ ಯಕ್ಷಾಂಗಣದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ‘ಸಪ್ತಾಹದಲ್ಲಿ ಏಳು ಜನಪ್ರಿಯ ಪ್ರಸಂಗಗಳ ತಾಳಮದ್ದಳೆ ಮತ್ತು ಗತಿಸಿದ ಹಿರಿಯರ ಸಂಸ್ಮರಣಾ ಕಾರ್ಯಕ್ರಮಗಳನ್ನು ನಡೆಸಲಾಗುವುದು’ ಎಂದರು. ಯಕ್ಷಾಂಗಣದ ಆಶ್ರಯದಲ್ಲಿ ‘ಶ್ರೀಹರಿ ಚರಿತ್ರೆ’ ಎಂಬ ಪರಿಕಲ್ಪನೆಯೊಂದಿಗೆ ಜರಗುವ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ನವೆಂಬರ್ 19ನೇ ಭಾನುವಾರ ಉದ್ಘಾಟನೆಗೊಳ್ಳಲಿದ್ದು ಅಂದಿನಿಂದ…
ಮಂಗಳೂರು : ಉರ್ವಸ್ಟೋರ್ನ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಾದ್ಯ ಕಲಾವಿದರ ಸಂಘದ ವತಿಯಿಂದ ಆಯೋಜಿಸಲಾದ ‘ವಾದ್ಯ ಕಲಾ ಮೇಳ’ವು ದಿನಾಂಕ 05-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಶ್ರೀಕ್ಷೇತ್ರ ಕಚ್ಚೂರು ಧರ್ಮದರ್ಶಿ ಗೋಕುಲ್ದಾಸ್ ಬಾರ್ಕೂರು ಮಾತನಾಡಿ, “ದೈವಾರಾಧನೆ ಮತ್ತು ನಾಗಾರಾಧನೆ ತುಳುನಾಡಿನ ಮೂಲ ಸಂಸ್ಕೃತಿಯಾಗಿದ್ದು, ಹಿಂದೂ ಧರ್ಮಕ್ಕೆ ಭದ್ರ ಬುನಾದಿ ಹಾಕಿವೆ. ಇದರಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವವರು ತಳ ಸಮುದಾಯದವರು. ತುಳುನಾಡಿನ ಸಂಸ್ಕೃತಿಗೆ ಈ ಸಮುದಾಯದ ಕೊಡುಗೆ ಅಪಾರ. ದೇವಸ್ಥಾನ, ದೈವಸ್ಥಾನಗಳಲ್ಲಿ ತಳ ಸಮುದಾಯದ ವಾದ್ಯ ಕಲಾವಿದರಿಗೆ ಅವಕಾಶ ದೊರೆಯಬೇಕು. ಕಲಾವಿದರಿಗೆ ಮಾಶಾಸನವನ್ನು ನೀಡಲು ಸರ್ಕಾರವನ್ನು ಒತ್ತಾಯಿಸಬೇಕು” ಎಂದರು. ‘ವಾದ್ಯ ಕಲಾ ಮೇಳ’ವನ್ನು ತಾಸೆ ಬಡಿಯುವ ಮೂಲಕ ಚಿತ್ರನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಉದ್ಘಾಟಿಸಿ ಮಾತನಾಡುತ್ತಾ “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ಪ್ರತಿ ಮಗುವಿಗೂ ತಾಸೆ, ತೆಂಬರೆ, ಡೋಲು ಇವು ಸ್ಫೂರ್ತಿ. ತುಳುನಾಡಿನ ಸಂಸ್ಕೃತಿ ಸಂರಕ್ಷಿಸಲು…