Author: roovari

ಉಡುಪಿ : ಕೋಟದ ನೂತನ ವರುಣತೀರ್ಥ ವೇದಿಕೆಯು ‘ನಿರಂತರ’ ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವು ದಿನಾಂಕ 01-11-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ‘ವರುಣತೀರ್ಥ ರಾಜ್ಯೋತ್ಸವ ಪುರಸ್ಕಾರ’ವನ್ನು ಸ್ವೀಕರಿಸಿದ ಉಪನ್ಯಾಸಕ, ಕಲಾವಿದ, ಗಮಕಿ ಎಚ್. ಸುಜಯೀಂದ್ರ ಹಂದೆ ಅವರು ಮಾತನಾಡುತ್ತಾ “ನಾಡು ನುಡಿಗಳ ಚಿಂತನೆ ಕೇವಲ ಭಾವನಾತ್ಮಕವಾಗಿದ್ದರೆ ಸಾಲದು, ಅದು ಕ್ರಿಯಾತ್ಮಕವಾಗಿದ್ದಾಗ ಮಾತ್ರ ಉಳಿವು ಬೆಳೆವು ಸಾಧ್ಯ. ಜಾತಿ ಮತ ಧರ್ಮವನ್ನು ಮೀರಿ, ಈರ್ಷ್ಯೆ, ದ್ವೇಷ, ಅಸೂಯೆಗಳನ್ನು ದಾಟಿ ನಿಂತ ಸಂಘ ಸಂಸ್ಥೆಗಳೇ ಈ ದೇಶದ ನಿಜವಾದ ಸಂಪತ್ತು. ಪ್ರಶಸ್ತಿ ಮತ್ತು ಪುರಸ್ಕಾರಗಳೆರಡೂ ಒಂದೇ ಅಲ್ಲಾ, ಸಾಧನೆ ಮಾಡಿದವನನ್ನು ಪ್ರಶಸ್ತಿಗಳು ಅರಸಿ ಬಂದರೆ, ಸಾಧನೆಯ ಪಥದಲ್ಲಿರುವವನನ್ನು ಗುರುತಿಸಿ ಬೆನ್ನುತಟ್ಟುವುದೇ ಪುರಸ್ಕಾರ. ನನ್ನೂರಿನ ಪ್ರೀತಿಯ ಆಶೀರ್ವಾದ ಸ್ವರೂಪದ ಈ ರಾಜ್ಯೋತ್ಸವ ಪುರಸ್ಕಾರವು ಮುಂದಿನ ದಿನಗಳಲ್ಲಿ ನಾನು ಸಾಧಿಸಬೇಕಾದ ವಿಸ್ತಾರವನ್ನು ಬೊಟ್ಟುಮಾಡಿ ತೋರಿಸಿದೆ.” ಎಂದು ಹೇಳಿದರು. ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ ಆನಂದ ಸಿ. ಕುಂದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಹಿಂದುಳಿದ ವರ್ಗಗಳ…

Read More

ಮೂಲ್ಕಿ : ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸಿದ ಮೂಲ್ಕಿ ತಾಲೂಕಿನ ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ‘ಕತೆ ರಚನೆ ಕಾರ್ಯಾಗಾರ’ವು ದಿನಾಂಕ 04-11-2023ರಂದು ನಡೆಯಿತು. ಈ ಕಾರ್ಯಕ್ರಮ ನಡೆಸಿಕೊಟ್ಟ ಕಥೆಗಾರ ದೇವು ಹನೆಹಳ್ಳಿ ಇವರು ಮಾತನಾಡುತ್ತಾ “ಸಮಾಜ, ಪರಿಸರ, ವಸ್ತು, ಮನುಷ್ಯರು ಹೀಗೆ ಎಲ್ಲೆಡೆಗಳ ವೈಶಿಷ್ಟ್ಯಗಳನ್ನು ಗುರುತಿಸುವ ಸಂವೇದನಾಶೀಲ ಮನಸ್ಸು, ಬಳಸುವ ಭಾಷಾಶೈಲಿ, ಸತತ ಓದುವಿಕೆಯಿಂದ ಬೆಳೆದ ಮನಸ್ಥಿತಿಯಿಂದ ಮೂಡಿಬರುವ ಕಥೆಗಳು ಬರಹಗಾರನನ್ನೂ ಓದುಗನನ್ನೂ ತಟ್ಟುತ್ತವೆ, ಆಪ್ತವಾಗುತ್ತವೆ, ಯಶಸ್ವಿಯಾಗುತ್ತವೆ. ಪತ್ರಿಕೆಗಳು, ಆಕಾಶವಾಣಿ, ಈಗಿನ ಸಾಮಾಜಿಕ ಜಾಲತಾಣಗಳಲ್ಲಿ ಕತೆ, ಕವನಗಳಿಗೆ ಸಾಕಷ್ಟು ಅವಕಾಶಗಳಿದ್ದು, ಬರೆಯುವ ಪ್ರಯತ್ನಗಳಾಗಲಿ. ಕಾರಂತ, ಬಾಗಲೋಡಿ, ಮಾಸ್ತಿ, ಚದುರಂಗ, ಹೀಗೆ ನೂರಾರು ಕಥೆಗಳ ಓದುವಿಕೆ ಬರವಣಿಗೆಯನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪ್ರಯತ್ನಶೀಲರಾಗಲಿ” ಎಂದು ಹೇಳಿದರು. ಪ್ರೇರಣಾ ನುಡಿಗಳನ್ನಾಡಿದ ಮೂಲ್ಕಿ ಸರಕಾರಿ ಕಾಲೇಜಿನ ಪ್ರಾಚಾರ್ಯ ಡಾ. ವಾಸುದೇವ ಬೆಳ್ಳೆ ಮಾತನಾಡಿ, “ವಿದ್ಯಾರ್ಥಿಗಳನ್ನು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು…

Read More

ನಂದಳಿಕೆ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕ ಹಾಗೂ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದೊಂದಿಗೆ 68ನೇ ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ನಾಮಕರಣಗೊಂಡು ಸ್ವರ್ಣ ಸಂಭ್ರಮದ ಅಂಗವಾಗಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ರಂಗಮಂದಿರದಲ್ಲಿ ದಿನಾಂಕ 01-11-2023ರಂದು ಜಿಲ್ಲಾ ಮಟ್ಟದ ‘ಕವಿಗೋಷ್ಠಿ’ಯನ್ನು ನಡೆಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಕನ್ನಡ ಭುವನೇಶ್ವರೀ ತಾಯಿಯ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪರ್ಚಾನೆ ಸಲ್ಲಿಸಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ “ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರ ಭಾಷೆಗಳನ್ನು ದ್ವೇಷಿಸಬೇಕೆಂಬ ತಪ್ಪು ಕಲ್ಪನೆ ಸರಿಯಲ್ಲ. ಭಾರತದಂತಹ ವಿಶಾಲವಾದ ದೇಶದಲ್ಲಿ ರಾಜ್ಯಕ್ಕೊಂದು, ಜಿಲ್ಲೆಗೊಂದು ಭಾಷೆಗಳಿವೆ ಇಂತಹ ವೈವಿಧ್ಯಪೂರ್ಣ ದೇಶ ನಮ್ಮದು” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಹಾಗೂ ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶುಭಲಕ್ಷ್ಮೀ ಆರ್. ನಾಯಕ್ ವಹಿಸಿ ಮಾತನಾಡಿದರು.…

Read More

ಬಂಟ್ವಾಳ : ಸಿದ್ಧಕಟ್ಟೆಯ ಶ್ರೀ ಕ್ಷೇತ್ರ ಪೂಂಜದ ಯಕ್ಷಮಿತ್ರರು ತಂಡದ 6ನೇ ವಾರ್ಷಿಕೋತ್ಸವವು ಸಿದ್ಧಕಟ್ಟೆ ಸಹಕಾರಿ ಸಂಘದ ಸಭಾಭವನದಲ್ಲಿ ದಿನಾಂಕ 24-10-2023ರಂದು ನಡೆಯಿತು. ಈ ಸಂದರ್ಭದಲ್ಲಿ ‘ಯಕ್ಷಮಿತ್ರ ಪ್ರಶಸ್ತಿ’ ಪ್ರದಾನ ಹಾಗೂ ತಾಳಮದ್ದಳೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆದು ಪ್ರೇಕ್ಷಕರನ್ನು ರಂಜಿಸಿತು. ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯಕ್ ಕರ್ಪೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣ ಪ್ರಸಾದ ಆಚಾರ್ಯ, ಪ್ರಧಾನ ಅರ್ಚಕ ಪ್ರಕಾಶ ಆಚಾರ್ಯ, ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೋಪಾಲ ಬಂಗೇರ, ನಿವೃತ್ತ ಕಂದಾಯಾಧಿಕಾರಿ ಭೋಜ ಜೈನ್, ರೋಟರಿ ಕ್ಲಬ್ ವಲಯ ಸೇನಾನಿ ರಾಘವೇಂದ್ರ ಭಟ್‌ ಹೊಕ್ಕಾಡಿಗೋಳಿ ಇವರೆಲ್ಲರೂ ಶುಭ ಹಾರೈಸಿದರು. ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ವಹಿಸಿದ್ದರು. ಕಲಾಪೋಷಕ, ರಂಗಸ್ಥಳ ನಿರ್ಮಾತೃ ಪರಮೇಶ್ವರ ಹೊಳ್ಳ ಅವರಿಗೆ ಯಕ್ಷಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿಮ್ಮೇಳ ಕಲಾವಿದ ಚಂದ್ರಶೇಖರ ಕೊಂಕಣಾಜೆ ಅವರು…

Read More

ಮಂಗಳೂರು : ಮರಕಡದ ‘ಶುಭವರ್ಣ ಯಕ್ಷ ಸಂಪದ’ ಸಂಸ್ಥೆಯ ವಾರ್ಷಿಕೋತ್ಸವ ದಿನಾಂಕ 18-11-2023ರಂದು ಸಂಜೆ 5 ಗಂಟೆಗೆ ಮರಕಡ ಮೈದಾನದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಮರಕಡ ಕುಮೇರು ಮನೆ ಲಿಂಗಮ್ಮ ತನಿಯಪ್ಪ ಕೋಟ್ಯಾನ್ ಅವರ ಸ್ಮರಣಾರ್ಥ ‘ಶುಭವರ್ಣ ಪ್ರಶಸ್ತಿ’ ಪ್ರದಾನ, ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ಮಂಗಳಾ ದೇವಿಯ ರಾಮಕೃಷ್ಣ ಮಿಷನ್ ಬಾಲಕಾಶ್ರಮದ ಮೇಲ್ವಿಚಾರಕ ಸ್ವಾಮಿ ರಘು ರಾಮಾನಂದ ಆಶೀವರ್ಚನ ನೀಡುವರು. ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಯಕ್ಷಗಾನ ಹಿರಿಯ ಗುರು ಶಿವರಾಮ ಪಣಂಬೂರು, ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ಞೇಶ್ವರ ಬರ್ಕೆ, ವಿವಿಧ ಕ್ಷೇತ್ರದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. ಶ್ರೀ ವಿಠಲ ಶೆಟ್ಟಿಗಾರ್ ಶ್ರೀ ಅಶೋಕ ಆಚಾರ್ಯ ಮರಕಡ ಕುಮೇರು ಮನೆ ಲಿಂಗಮ್ಮ ತನಿಯಪ್ಪ ಕೋಟ್ಯಾನ್ ಸ್ಮರಣಾರ್ಥ ರೂ.10,000/- ಮೊತ್ತ ಒಳಗೊಂಡ ‘ಶುಭವರ್ಣ ಪ್ರಶಸ್ತಿ 2023’ನ್ನು ಹಿರಿಯ ಕಲಾವಿದ ಶ್ರೀ ವಿಠಲ ಶೆಟ್ಟಿಗಾರ್ ಕಾವೂರು ಅವರಿಗೆ, ರೂ.10,000/-…

Read More

ಮೂಡಬಿದಿರೆ : ತುಳುಕೂಟ(ರಿ) ಬೆದ್ರ ಇದರ ತಿಂಗಳ ಕಾರ್ಯಕ್ರಮದಲ್ಲಿ ದಿನಾಂಕ 04-11-2023 ರಂದು ಮೂಡಬಿದಿರೆಯ ಕನ್ನಡ ಭವನದಲ್ಲಿರುವ ತುಳುಕೂಟದ ಕಛೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ತುಳುನಾಡಿನ ಭೂತಾರಾಧನೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಈ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಉಜಿರೆ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಭಾಗ ಮುಖ್ಯಸ್ಥರೂ ಆಗಿರುವ ಡಾ. ರವೀಶ್ ಪಡುಮಲೆಯವರು “ತುಳುವರ ಆಚಾರ ವಿಚಾರಗಳು ಬದಲಾಗುತ್ತಾ ವಿಕೃತಿಯೆಡೆಗೆ ಸಾಗುತ್ತಿದ್ದರೆ ಅವರು ನಂಬಿಕೊಂಡು ಬಂದ ದೈವಾರಾಧನೆಯು ಕೂಡಾ ಹಾದಿ ತಪ್ಪುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಂಡು ತುಳು ಸಂಸ್ಕೃತಿ, ಪರಂಪರೆಯನ್ನು ಉಳಿಸಲು ಪ್ರಯುತ್ನಿಸಬೇಕಾಗಿದೆ. ಇತ್ತೀಚೆಗೆ ಚಂದ ಕಾಣಬೇಕೆಂಬ ಇರಾದೆಯಿಂದ ಯಕ್ಷಗಾನ ಶೈಲಿಯ ಬಣ್ಣಗಾರಿಕೆಯನ್ನು ಮಾಡಲಾಗುತ್ತಿದೆ. ವೇಷಭೂಷಣಗಳಲ್ಲೂ ಬದಲಾವಣೆ ತರಲಾಗುತ್ತಿದೆ. ಪರಂಪರೆಗೆ ಅಪಚಾರವೆಸಗುವ ಇಂತಹ ಕೃತ್ಯಗಳನ್ನು ಪ್ರಶ್ನಿಸುವ ಮನೋಭಾವವನ್ನು ತುಳುವರು ಬೆಳೆಸಿಕೊಳ್ಳಬೇಕಾಗಿದೆ. ಇದರ ಜೊತೆಗೆ ದೈವಾರಾಧನೆಯ ಪರಂಪರೆ ದಾರಿ ತಪ್ಪುವಲ್ಲಿ ಈಗ ಚಾಲ್ತಿಯಲ್ಲಿರುವ ಕಂಟ್ರಾಕ್ಟ್ ಪದ್ಧತಿಯೂ ಕಾರಣವಾಗುತ್ತಿದೆ.” ಎಂದು ವಿಷಾದಿಸಿದರು. ಸ್ವತಃ ದೈವನರ್ತಕರೂ ಆಗಿರುವ ಡಾ.ರವೀಶ್ ಅವರು…

Read More

ಕುಶಾಲನಗರ : ಕುಶಾಲನಗರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಿನಾಂಕ 01-11-2023ರಂದು ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ‌ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಕೊಡಗು ವಿವಿ ಇದರ ಕನ್ನಡ ಉಪನ್ಯಾಸಕರಾದ ಡಾ. ಜಮೀರ್ ಅಹಮ್ಮದ್ “ಕನ್ನಡ ಹಬ್ಬವನ್ನು ನಾವೆಲ್ಲರರೂ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತೇವೆ. ಇದು ನಮ್ಮ ಅಸ್ಮಿತೆಯ ಹಬ್ಬ. ಜಾತಿ ಮತ ಧರ್ಮಗಳ ಹಂಗಿಲ್ಲದ ಹಬ್ಬ. ಈ ಸುಂದರ ಸಂಭ್ರಮದ ದಿನದಂದು ನಾವೆಲ್ಲರೂ ಕನ್ನಡದ ಉಳಿವಿಗಾಗಿ ಪಣ ತೊಡಬೇಕಾಗಿದೆ. ಕನ್ನಡ‌ ಭಾಷೆಯ ಬಗ್ಗೆ ತಾತ್ಸಾರ, ಉದಾಸೀನ ಸಲ್ಲದು. ಕನ್ನಡ ಭಾಷೆಯನ್ನು ಹೆಚ್ಚಿನ ಮಟ್ಟದಲ್ಲಿ ಬಳಕೆ ಮಾಡಬೇಕಿದೆ. ಕನ್ನಡಿಗರು ತಮ್ಮ ಜವಾಬ್ದಾರಿ ಅರಿತು ಕನ್ನಡ ಭಾಷೆಯನ್ನು ಪ್ರೀತಿಸಬೇಕಾಗಿದೆ. ಕನ್ನಡ ರಾಜ್ಯೋತ್ಸವ ನಮಗೆ ಬರಬೇಕಾದರೆ ಹಲವರ ಬಲಿದಾನಗಳು ನಡೆದಿದೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್‌.ಕೃಷ್ಣ ರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ ಸೇರಿದಂತೆ ಹಲವು ಮಹನೀಯರು ಕರ್ನಾಟಕ ಏಕೀಕರಣಕ್ಕೆ…

Read More

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವು ದಿನಾಂಕ 01-11-2023 ರಂದು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಸಂದೇಶ ನೀಡಿದ ಹಿರಿಯ ಮಹಿಳಾ ಸಾಹಿತಿ ಡಾ.ಇಂದಿರಾ ಹೆಗ್ಡೆ “ನಮ್ಮ ಅಡುವ ಭಾಷೆ ಹಾಗೂ ಅಕ್ಷರ ಭಾಷೆ ಎರಡನ್ನೂ ರಾಜ್ಯ ಭಾಷೆಯಾಗಿ ಬಳಸುವ ಮೂಲಕ ಕನ್ನಡದ ಬೆಳವಣಿಗೆಗೆ ಪಣತೊಡೋಣ ತನ್ಮೂಲಕ ಕನ್ನಡ ಭಾಷಾನುಷ್ಠಾನಕ್ಕೆ ನಮ್ಮ ಕೊಡುಗೆ ನೀಡೋಣ. ತಾನು ಸ್ವತಃ ಪ್ರತಿಯೊಂದು ಪತ್ರ ವ್ಯವಹಾರವನ್ನು ಕನ್ನಡ ಭಾಷೆಯ ಮೂಲಕವೇ ಮಾಡುತ್ತಿದ್ದು, ಎಲ್ಲರೂ ಇದೇ ತೆರನಾಗಿ ಭಾಷಾ ವಾತ್ಸಲ್ಯವನ್ನು ರೂಢಿಸಿಕೊಳ್ಳುವಂತಾಗಲಿ.” ಎಂದರು. ಇದೇ ಸಂದರ್ಭ ಹಿರಿಯ ನಾಟ್ಯ ಗುರು ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರನ್ನು ‘ರಾಜ್ಯೋತ್ಸವ ಗೌರವ ಪ್ರದಾನ’ ಮಾಡುವ ಮೂಲಕ ಅಭಿನಂದಿಸಲಾಯಿತು. ಗೌರವಕ್ಕೆ ಉತ್ತರಿಸಿದ ಮೋಹನ್ ಕುಮಾರ್ “ಗುರು ಪರಂಪರೆಯನ್ನು ಗೌರವಿಸುವ ಸಂಗತಿ ಬದುಕಿನ ಶ್ರೇಷ್ಠತೆಯನ್ನು ಎತ್ತಿ ತೋರಿಸುವ ಮಹತ್ಕಾರ್ಯವಾಗಿದೆ” ಎಂದರು. ಸಭಾಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ…

Read More

ಮಂಗಳೂರು : ಕೊಂಚಾಡಿಯ ಶೀರಾಮ ಭಜನಾ ಮಂದಿರದಲ್ಲಿ ಶ್ರೀರಾಮ ಯಕ್ಷ ವೃಂದದ ವತಿಯಿಂದ ನಡೆಯಲಿರುವ ಯಕ್ಷಗಾನ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 04-11-2023 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಭಜನಾ ಮಂದಿರದ ವಿಜಯ ಕುಮಾರ್ ದೀಪ ಬೆಳಗಿದರೇ ಯಕ್ಷ ಗುರು ವರ್ಕಾಡಿ ಶ್ರೀ ರವಿ ಅಲೆವೂರಾಯರು ಉದ್ಘಾಟಿಸಿ “ಹಿಂದೆ ಯಕ್ಷಗಾನವನ್ನು ಕಲಿಯಲು ಅವಕಾಶಗಳಿರಲಿಲ್ಲ. ಕಲಾವಿದ ತನ್ನ ಸ್ವ ಪ್ರಯತ್ನದಿಂದ ಕಲಿತು ಬೆಳೆಯುತ್ತಿದ್ದ. ಮಳೆಗಾಲದಲ್ಲಿ ಉಳ್ಳವರ ಮನೆಯಲ್ಲಿ ಉಳಿದು ಕಲಿಯುತ್ತಾ, ಕಲೆಯನ್ನು ವೈಭವದ ಸ್ಥಿತಿಗೆ ಒಯ್ಯುತ್ತಿದ್ದ. ಆದರೆ ಇಂದು ಕಲಾಸಕ್ತನಾದವನಿಗೆ ಅದು ಅಂಗೈಯಲ್ಲೇ ದೊರಕುತ್ತಿದೆ. ಅಲ್ಲಲ್ಲಿ ನಾಟ್ಯ, ಹಿಮ್ಮೇಳಗಳನ್ನು ಕಲಿಸುವ ತರಗತಿಗಳಿವೆ. ಸಮರ್ಥ ಮತ್ತು ಶಾಸ್ತ್ರೀಯವಾಗಿ ಕಲಿಸುವ ನೃತ್ಯ ಗುರುಗಳಿದ್ದಾರೆ ಹಾಗಾಗಿ ಮಕ್ಕಳು ಎಳವೆಯಲ್ಲಿ ಯಕ್ಷ ನಾಟ್ಯವನ್ನು ಕರಗತ ಗೊಳಿಸಿಕೊಳ್ಳುತ್ತಾರೆ. ಇಲ್ಲಿ ಕಲಿತಂತಹ ವಿದ್ಯಾರ್ಥಿಗಳು ಮುಂದೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಾರೆ. ಕಲೆಯನ್ನು ಉಳಿಸುತ್ತಾರೆ. ಕೊಂಚಾಡಿಯ ಶ್ರೀರಾಮ ಭಜನಾ ಮಂದಿರದ ಈ ಶ್ರೀ ರಾಮ ಯುಕ್ತವೃಂದವೂ ಬೆಳೆದು ಕೀರ್ತಿ ಗಳಿಸಲಿ.“ ಎಂದು ಶುಭ…

Read More

ವೃತ್ತಿರಂಗಭೂಮಿಯ ನಾಟಕಗಳಲ್ಲಿ ಕಾಣಸಿಗುತ್ತಿದ್ದ ದಿಟ್ಟ ಮಹಿಳಾ ಪಾತ್ರಗಳೆಂದರೆ ಒಂದೋ ಖಳನಾಯಕಿಯ ಪಾತ್ರಗಳು ಅಥವಾ ಹಾಸ್ಯಪಾತ್ರಗಳು. ಮುಖ್ಯನಾಯಕಿಯರು ಪಿತೃಪ್ರಧಾನ ಸಮಾಜದ ಎಲ್ಲ ಹೊರೆಯನ್ನು ಹೊತ್ತು ಬೆಂದು ಬಸವಳಿದಂತೆ ಕಂಡರೆ, ಈ ದಿಟ್ಟ ಹಾಸ್ಯ ಪ್ರಧಾನ ಪಾತ್ರಗಳು ಸಮಾಜ ಹೇರುವ ಎಲ್ಲಾ ಭಾರಗಳನ್ನು ಕಿತ್ತೆಸೆದು ಬಿಡುಗಡೆಗೊಂಡ ಆತ್ಮಗಳಂತೆ ಕಾಣುತ್ತವೆ. ಅವು ಸಮಾಜವನ್ನು ಪ್ರಶ್ನಿಸುತ್ತವೆ. ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುತ್ತವೆ. ಹಾಗೆ ಹೇಳಲು ಅವು ಆಯ್ಕೆ ಮಾಡಿಕೊಳ್ಳುವುದು ಹಾಸ್ಯ, ವ್ಯಂಗ್ಯ, ಲೇವಡಿಯ ಚಾಟಿಗಳನ್ನು, ಅದಕ್ಕೆ ಸೃಷ್ಟಿಮಾಡಿಕೊಂಡ ಭಾಷೆಯೇ ಕುತೂಹಲಕಾರಿ ಎನಿಸುತ್ತದೆ. ದಿನನಿತ್ಯದ ಅಡುಗೆಮನೆ ವಸ್ತುಗಳು, ತರಕಾರಿ, ಸಾಮಾನುಗಳು ರೂಪಕಗಳಾಗಿ ಒದಗಿಬರುತ್ತವೆ. ಈಗ ಅದಕ್ಕೆ ‘ಡಬಲ್ ಮೀನಿಂಗ್’ ಎಂಬ ಲೋಕಕ್ಕೆ ಒಪ್ಪಿಸಿದ ಭಾಷೆಯನ್ನು ಅನ್ವಯಿಸಿ, ಈ ಹೊಳಹನ್ನೂ ತುಳಿಯುವ ಹುನ್ನಾರ ಪಿತೃಪ್ರಧಾನ ವ್ಯವಸ್ಥೆಯಿಂದಲೇ ಬಂದಿದೆ ಎನಿಸುತ್ತದೆ. ಸಮಾಜ ಅಂತಹ ವ್ಯಕ್ತಿತ್ವಗಳಿಗೆ ‘ಬಜಾರಿ’ ಎಂದು ನಾಮಕರಣ ಮಾಡುತ್ತದೆ. ಅಂತಹ ಪಾತ್ರಗಳನ್ನು ‘ನಕ್ಕು ಮರೆತುಬಿಡುವಂತಹ ಹಾಸ್ಯ/ಬಜಾರಿ ಪಾತ್ರಗಳು’ ಎಂದೇ ಸ್ವೀಕರಿಸುತ್ತವೆ. ಅಲ್ಲೊಂದು ಪುರುಷಲೋಕದ ವೈಯಕ್ತಿಕ ಒಳರಾಜಕಾರಣವೂ ಇದೆಯಲ್ಲವೆ?’ ಅಂತಹ ಪಾತ್ರಕ್ಕೆ…

Read More