Author: roovari

ಪುತ್ತೂರು : ಬೊಳುವಾರು ಆಂಜನೇಯ ನಗರದ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯ ಇದರ 84ನೇ ವರ್ಷದ ನವರಾತ್ರಿ ಪೂಜೆಯ ಪ್ರಯುಕ್ತ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಇವರ ವತಿಯಿಂದ ‘ಜಟಾಯು ಮೋಕ್ಷ’ ಮತ್ತು ‘ವಾಲಿ ವಧೆ’ ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 22-10-2023ರಂದು ಬೊಳುವಾರು ಶ್ರೀ ಸುಬ್ರಹ್ಮಣ್ಯ ನಗರದ ಮಹಾಲಿಂಗ ಮಣಿಯಾಣಿ ವೇದಿಕೆಯಲ್ಲಿ ಜರುಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಶ್ರೀ ಗಣೇಶ್ ಭಟ್, ಶ್ರೀ ಸತೀಶ್ ಇರ್ದೆ, ಶ್ರೀ ಆನಂದ್ ಸವಣೂರು ಸಹಕರಿಸಿದರು. ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಶ್ರೀ ದಂಬೆ ಈಶ್ವರ ಶಾಸ್ತ್ರೀ, ಶ್ರೀ ಮುರಳೀಧರ ಕಲ್ಲೂರಾಯ, ಶ್ರೀ ಅಚ್ಯುತ ಪಾಂಗಣ್ಣಾಯ, ಮಾ. ಪರೀಕ್ಷತ್ ಮತ್ತು ಮಾ. ಪ್ರದೀಪ್ ಕೃಷ್ಣ ಸಹಕರಿಸಿದರು. ‘ಜಟಾಯು ಮೋಕ್ಷ’ ಪ್ರಸಂಗದ ಮುಮ್ಮೇಳದಲ್ಲಿ ಶ್ರೀಮತಿ ಶುಭಾ ಗಣೇಶ್ (ಶ್ರೀ ರಾಮ), ಶ್ರೀಮತಿ…

Read More

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಐನಬೈಲು ಗ್ರಾಮದ ಶ್ರೀಮತಿ ಸೌಭದ್ರೆ ಹಾಗೂ ಶ್ರೀ ಗಣಪತಿ ಹೆಗಡೆ ಇವರ ಮಗನಾಗಿ 18.02.1965ರಂದು ಪರಮೇಶ್ವರ ಹೆಗಡೆ ಐನಬೈಲು ಅವರ ಜನನ. ತಮ್ಮ ಹತ್ತನೇ ವಯಸ್ಸಿನಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆಯನ್ನು ಮಾಡಿದ ಇವರಿಗೆ ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಯಕ್ಷಗಾನ ಕಲಿಕೆಯೂ ಕೂಡ ಸ್ವಂತ ತಂದೆಯಿಂದಲೇ ಆರಂಭವಾಯಿತು. ಆಟವಾಡುವ ವಯಸ್ಸಿನಲ್ಲಿ ಕಲೆಯತ್ತ ಆಕರ್ಷಿತರಾದ ಐನಬೈಲು ಅವರು, ಆ ಕಾಲದ ಗುರುಗಳಾಗಿದ್ದ ಶ್ರೀ ಕೃಷ್ಣ ಭಾಗವತ ಬಾಳೆಹದ್ದ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿದರು. ಮುಂದೆ ಶ್ರೀ ಮಂಜುನಾಥ ಭಟ್ಟ ಶಿರಳಗಿ ಬಳಿ ನಾಟ್ಯವನ್ನು ಅಭ್ಯಸಿಸಿದರು. ಯಕ್ಷಗುರು ಶ್ರೀ ಮಂಜುನಾಥ ಭಾಗವತ ಹೊಸ್ತೋಟ ಬಳಿ ರಂಗ ತಂತ್ರವನ್ನು ಅಭ್ಯಸಿಸಿ ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಯಕ್ಷಗಾನ ವೃತ್ತಿ ತಿರುಗಾಟವನ್ನು ಆರಂಭಿಸಿದರು. ಸೋಂದಾ ಮೇಳದಲ್ಲಿ ವೇಷಧಾರಿಯಾಗಿ ಕಾಣಿಸಿಕೊಂಡ ಇವರು ಪುಂಡು ವೇಷ ಸಾಲಿನ ಅನೇಕ ವೇಷವನ್ನು ಮಾಡಿ ಜನರಿಂದ ಮೆಚ್ಚುಗೆಯನ್ನು ಗಳಿಸಿಕೊಂಡರು. ವ್ಯವಸಾಯೀ ಮೇಳದಲ್ಲಿ ಹೆಚ್ಚು ಕಾಲ ವೃತ್ತಿಯನ್ನು ಮಾಡದೆ…

Read More

ಉಡುಪಿ : ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ದಿನಾಂಕ 06-11-2023ರಿಂದ 30-11-2023ರವರೆಗೆ ಪುಸ್ತಕ ಮಾರಾಟ ಮಾಡಲಾಗುತ್ತದೆ. ಸಂಸ್ಥೆಯ ಪ್ರಕಟಣೆಗಳಿಗೆ 25% ಯಿಂದ 50% ರವರೆಗೆ ರಿಯಾಯಿತಿ ಕೊಡಲಾಗುವುದು. ಆಸಕ್ತರು ಎಂ.ಜಿ.ಎಂ ಕಾಲೇಜು ಆವರಣದಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಪುಸ್ತಕಗಳನ್ನು ಕೊಂಡುಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ 0820-2521159, 9448868868, 9480575783 ಈ ದೂರವಾಣಿ ಸಂಖ್ಯೆಗಳಿಗೆ ಕರೆಮಾಡಬಹುದು.

Read More

ಮಂಗಳೂರು : ಮುದ್ದು ಮೂಡುಬೆಳ್ಳೆಯವರ ‘ತುಳುನಾಡಿನ ಜನಪದ ವಾದ್ಯಗಳು ಮತ್ತು ಪಾರಂಪರಿಕ ವೃತ್ತಿಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 02-11-2023ರ ಗುರುವಾರ ದಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಜಾನಪದ ವಿದ್ವಾಂಸ ಡಾ. ಗಣನಾಥ ಶೆಟ್ಟಿ ಎಕ್ಕಾರು “ಮುದ್ದು ಮೂಡುಬೆಳ್ಳೆ ತುಳು ಕನ್ನಡ ಸಾಹಿತ್ಯದಲ್ಲಿ ಕವಿ, ಲೇಖಕ ಮತ್ತು ಸಂಶೋಧಕರಾಗಿ ಅಪ್ರತಿಮ ಕೊಡುಗೆ ನೀಡಿರುವುದು ಸ್ಮರಣೀಯ. ಕೃತಿಯಲ್ಲಿ ವಾದ್ಯಗಳ ಪರಿಚಯದ ಜತೆಗೆ ಜನಪದ ಸಂಸ್ಕೃತಿ ಅನಾವರಣಗೊಂಡಿದೆ. ಕೃತಿಯು ಉನ್ನತ ಅಧ್ಯಯನಕ್ಕೆ ಪೂರಕ ಮಾರ್ಗದರ್ಶಿ” ಎಂದು ತಿಳಿಸಿದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳೈರು ಮಾತನಾಡಿ ” ಮುದ್ದು ಮೂಡುಬೆಳ್ಳೆಯವರು ತುಳು ಸಾಹಿತ್ಯದ ಬಗ್ಗೆ ಅಪಾರ ಮಮತೆ ಹಾಗೂ ಕಾಳಜಿ ಇಟ್ಟುಕೊಂಡವರಾಗಿದ್ದಾರೆ. ಕೃಷಿ ಸಮುದಾಯ ಮತ್ತು ಆರಾಧಕರು ಸಹಿತ ಹತ್ತು ಹಲವು ವರ್ಗಗಳ ಪರಿಚಯವನ್ನು ಕೃತಿಯ ಮೂಲಕ ಮಾಡಲಾಗಿದೆ. ವಿವಿಧ ಸಮುದಾಯಗಳ ಬಗ್ಗೆ ಅಧ್ಯಯನ ಕೈಗೊಳ್ಳುವವರಿಗೆ ಮಹತ್ವದ ಕೃತಿಯಾಗಿದೆ” ಎಂದು ಹೇಳಿದರು. ಲೇಖಕ…

Read More

ಮಂಗಳೂರು : ಶ್ರೀದೇವಿ ನೃತ್ಯ ಕೇಂದ್ರದ ಸ್ಥಾಪಕ ನಿರ್ದೇಶಕಿ ಶಾಂತಲಾ ಪ್ರಶಸ್ತಿ ಪುರಸ್ಕೃತ ದಿ. ಶ್ರೀಮತಿ ಜಯಲಕ್ಷ್ಮೀ ಆಳ್ವ ಅವರ 90ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಮಂಗಳೂರಿನ ಶ್ರೀದೇವಿ ನೃತ್ಯಕಲಾ ಕೇಂದ್ರ ಆಯೋಜಿಸಿದ ‘ನೃತ್ಯೋತ್ಸವ -2023’’ದಲ್ಲಿ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆ ‘ಪ್ರತಿಭಾ ಪ್ರದರ್ಶನ’ ದಿನಾಂಕ 27-10-2023 ಶುಕ್ರವಾರದಂದು ನಗರದ ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ನಡೆಯಿತು. ಮಣಿಪುರಿ ನೃತ್ಯದ ಹಿರಿಯ ಕಲಾವಿದೆ ಪದ್ಮಶ್ರೀ ಪುರಸ್ಕೃತ ದರ್ಶನಾ ಜ್ಹವೇರಿ ಅವರು ಪ್ರತಿಭಾ ಪ್ರದರ್ಶನ ಉದ್ಘಾಟಿಸಿ, “ದಿ. ಜಯಲಕ್ಷ್ಮೀ ಆಳ್ವ ಅವರು ನೃತ್ಯ ಕ್ಷೇತ್ರದ ದೊಡ್ಡ ಹೆಸರಾಗಿದ್ದು, ಅವರ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆ ತಂದಿದೆ. ಆಳ್ವರ ಮಕ್ಕಳೊಂದಿಗೂ ಹಲವು ವರ್ಷಗಳ ಒಡನಾಟ ಹೊಂದಿದ್ದು, ಕುಟು೦ಬಗಳ ಸಂಬಂಧ ಬೆಸೆಯುವ ಕಾರ್ಯಕ್ರಮ ಇದಾಗಿದೆ. ಆಳ್ವರು ಅಪಾರ ಶಿಷ್ಯ ವರ್ಗವನ್ನು ನೃತ್ಯ ಕ್ಷೇತ್ರಕ್ಕೆ ನೀಡಿದ್ದಾರೆ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, “ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ಕರಾವಳಿಗೆ ಕರೆ ತರುವ…

Read More

ಕಲ್ಲೇಗ : ಕಲ್ಲೇಗ ಶ್ರೀ ದೇವಿ ಭಜನಾ ಮಂದಿರ ಇಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ದಿನಾಂಕ 20-10-2023ರಂದು ‘ಪಂಚವಟಿ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಗಿರೀಶ್ ಮುಳಿಯಾಲ, ಚೆಂಡೆ ಮದ್ದಳೆಗಳಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಶ್ರೀ ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ (ಶ್ರೀ ರಾಮ), ಶ್ರೀ ಗಣರಾಜ ಕುಂಬ್ಳೆ (ಶೂರ್ಪನಖಿ), ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ (ಲಕ್ಷ್ಮಣ), ಶ್ರೀ ಸುಬ್ಬಪ್ಪ ಕೈಕಂಬ (ಸೀತೆ), ಶ್ರೀ ದುಗ್ಗಪ್ಪ ಅಂಜೇರಿ (ಋಷಿಗಳು) ಸಹಕರಿಸಿದರು. ಶ್ರೀ ವಿನೋದ್ ಕಲ್ಲೇಗ ಸ್ವಾಗತಿಸಿ, ಶ್ರೀ ಜಯರಾಂ ಕಲ್ಲೇಗ ವಂದಿಸಿದರು. ಶ್ರೀ ಸಂಜೀವ ಕಲ್ಲೇಗ ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Read More

ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ಎಂಬಂತೆ ಸಾಹಿತ್ಯದಲ್ಲಿ, ಕಾವ್ಯದಲ್ಲಿ, ಶಿಲ್ಪದಲ್ಲಿ, ಕಲಾಕೃತಿಯಲ್ಲಿ, ಸಂಗೀತದಲ್ಲಿ, ನಾಟ್ಯದಲ್ಲಿ, ಕನ್ನಡವನ್ನು ಕಟ್ಟುವ ಬೆಳೆಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ದೃಶೃಕಲೆಯು ಸಂವಹನದ ಮಾಧ್ಯಮವಾಗಿ ವಿವಿಧ ಉದ್ದೇಶಗಳಿಂದ ಜನರನ್ನು ತಲುಪುತ್ತದೆ. ಇಲ್ಲಿ ಕನ್ನಡ ಲಿಪಿಗಳನ್ನೇ, ವರ್ಣಮಾಲೆಯನ್ನೇ ಅಂದದ ಕೈಬರಹದ ಮೂಲಕ ಕಲಾಕೃತಿಗಳನ್ನಾಗಿಸಿ ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ ಈ ಐದು ಜನ ಯುವ ಕಲಾವಿದರು. ಶ್ರೀ ಅನಿಮಿಶ ನಾಗನೂರು, ಶ್ರೀ ಜಿ. ಹರಿಕುಮಾರ್, ಶ್ರೀ ಮೋಹನ ಕುಮಾರ ಈರಪ್ಪ, ಶ್ರೀ ಸುರೇಶ್ ವಾಘ್ಮೋರೆ, ಶ್ರೀ ಟಿ.ಬಿ. ಕೋಡಿಹಳ್ಳಿ ಇವರು “ಅಕ್ಷರ ಸಿಂಗಾರೋತ್ಸವ೨೩” ಎನ್ನುವ ಹೆಸರಿನಲ್ಲಿ ಈ ಕಲಾಪ್ರದರ್ಶನವನ್ನು ಬೆಂಗಳೂರಿನ ಜಯನಗರದ ಯುವಪಥ ರಸ್ತೆಯಲ್ಲಿರುವ ‘ಬೆಂಗಳೂರು ಆರ್ಟ ಗ್ಯಾಲರಿ’ಯಲ್ಲಿ ಹಮ್ಮಿಕೊಂಡಿದ್ದಾರೆ. ಕನ್ನಡ ನಾಡು ನುಡಿ, ಇತಿಹಾಸ,ಪರಂಪರೆ, ಕಾವ್ಯ , ಸಾಹಿತ್ಯದೊಂದಿಗೆ ಕನ್ನಡ ಅಕ್ಷರಮಾಲೆಯನ್ನೇ ಕಲಾಕೃತಿಗಳಾಗಿ ಬಿಂಬಿಸುವ ದಾಖಲಿಸುವ ಮತ್ತು ಕನ್ನಡ ಮನಸ್ಸನ್ನು ಸೆಳೆಯುವ ಪ್ರಯತ್ನ ಇವರದು. ಮಾನವ ವಿಕಾಸವಾದಾಗಿನಿಂದ ವಿವಿಧ ಮಾಧ್ಯಮಗಳಲ್ಲಿ ಕಲ್ಲಿನಿಂದ ಕಂಪ್ಯೂಟರ್ ತನಕ ಅಕ್ಷರದ ಬೆಳವಣಿಗೆ…

Read More

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಅಜ್ಜನ ಮನೆ ಕಲಾ ಪ್ರಪಂಚ ಸಾದರ ಪಡಿಸುವ ‘ಹರಿದಾಸ ಸ್ಮರಣೆ’ ದಾಸ ಕೃತಿ ಗಾಯನ ಸ್ಪರ್ಧೆಯು ದಿನಾಂಕ 24-12-2023 ಮತ್ತು 25-12-2023ರಂದು ಮೈಸೂರಿನ ಶ್ರೀ ನಾದಬ್ರಹ್ಮ ಸಂಗೀತ ಸಭಾದಲ್ಲಿ ನಡೆಯಲಿದೆ. ಈ ಸ್ಪರ್ಧೆಯ ಪ್ರಥಮ ಹಂತದಲ್ಲಿ 100 ಸ್ಪರ್ಧಿಗಳಿಗೆ ಮಾತ್ರ ಪ್ರವೇಶವಿದೆ. ಪ್ರಥಮ ಹಂತದಲ್ಲಿ ಸ್ಪರ್ಧಿಗಳು ಬೇರೆ ಬೇರೆ ರಾಗದಲ್ಲಿರುವ 4 ದಾಸರ ಕೃತಿಗಳನ್ನು ಕಲಿತಿರಬೇಕು. ತೀರ್ಪುಗಾರರು ಕೇಳಿದ ಕೃತಿಯನ್ನು ಹಾಡಬೇಕು. ದ್ವಿತೀಯ ಹಂತದಲ್ಲಿ ಆಯ್ಕೆಯಾದ 30 ಸ್ಪರ್ಧಿಗಳು ಮೊದಲ ಹಂತದ 4 ಕೃತಿಗಳ ಜೊತೆಗೆ ಹೊಸದಾಗಿ 4 ಕೃತಿಗಳನ್ನು ಉಗಾಭೋಗದ ಸಮೇತ ಕಲಿತಿರಬೇಕು. ಇದರಲ್ಲಿ 2 ಹಾಡು ರಾಗಮಾಲಿಕೆಯಲ್ಲಿರಬೇಕು. ಇಲ್ಲಿ ಸ್ಪರ್ಧಿಗಳು 1 ಕೃತಿ ಅವರ ಆಯ್ಕೆಯದ್ದು ಹಾಗೂ ಇನ್ನೊಂದು ತೀರ್ಪುಗಾರರ ಆಯ್ಕೆಯಂತೆ ಹಾಡಬೇಕು. ತೃತೀಯ ಹಂತದಲ್ಲಿ ಆಯ್ಕೆಯಾದ 10 ಸ್ಪರ್ಧಿಗಳು ತೀರ್ಪುಗಾರರು ಹೇಳುವ ಕೃತಿಯನ್ನು ವಾದ್ಯ ಸಹಕಾರದೊಂದಿಗೆ ಹಾಡಬೇಕು ಹಾಗೂ ಕಿರಿಯ ದರ್ಜೆ ಪಠ್ಯ ಪುಸ್ತಕದ ಪ್ರಕಾರ (ರಾಗ, ತಾಳದ ಬಗ್ಗೆ)…

Read More

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಘೋಷಣೆಯಾಗಿ ಐವತ್ತು ವರ್ಷವಾಗಿದ್ದು ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ಕನ್ನಡ ನಾಡಿನ ಕನ್ನಡ, ಸಂಸ್ಕೃತಿ, ಇತಿಹಾಸ ಪರಂಪರೆಗಳ ವಿಷಯದ ಕುರಿತು ರಾಜ್ಯ ಮಟ್ಟದ ಉಚಿತ ಲಿಖಿತ ಪ್ರಬಂಧ ಸ್ಪರ್ಧೆ ಹಮ್ಮಿಕೊಂಡಿದ್ದು ಫಲಿತಾಂಶ ಈ ಕೆಳಗಿನಂತಿದೆ. ಪ್ರಥಮ ಬಹುಮಾನ ಬೆಳಗಾವಿ ಜಿಲ್ಲೆಯ ಕರಡಿಗುದ್ದಿಯ ಶ್ರೀಮತಿ ಗಂಗಾದೇವಿ ಚಕ್ರಸಾಲಿ, ದ್ವಿತೀಯ ಬಹುಮಾನ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಂತಗಲ್‌ನ ವಿನಾಯಕ ರಮೇಶನಾಯ್ಕ ಮತ್ತು ತೃತೀಯ ಬಹುಮಾನ ದಕ್ಷಿಣ ಕನ್ನಡ ಜಿಲ್ಲೆಯ ಜಾಲ್ಸೂರಿನ ಶ್ರೀಮತಿ ಪೂರ್ಣಿಮಾ ಎಂ. ಪಡೆದಿರುತ್ತಾರೆ. ಈಗಾಗಲೇ ತಿಳಿಸಿದ ಸ್ಪರ್ಧೆಯ ನಿಯಮದಂತೆ ಯಾವುದೇ ಸಭೆ ಸಮಾರಂಭಗಳಿಲ್ಲದೇ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ವಿಜೇತರಾದವರಿಗೆ ಮಾತ್ರ ಅವರು ಕೊಟ್ಟ ವ್ಯಾಟ್ಸಪ್‌ ಸಂಖ್ಯೆಗೆ ಫಲಿತಾಂಶ, ಅವರ ಭಾವಚಿತ್ರದೊ೦ದಿಗೆ ಪ್ರಮಾಣಪತ್ರ ಕಳಿಸಲಾಗುವುದು ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಸೇರಿದಂತೆ ಸಂಸ್ಥೆಯ ಸರ್ವ ಸದಸ್ಯರು, ಪದಾಧಿಕಾರಿಗಳು ಬಹುಮಾನ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Read More

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕಳೆದ ಮೂರುವರೆ ದಶಕಗಳಿಂದ ರಾಜ್ಯ, ಅಂತರರಾಜ್ಯ ಮಟ್ಟದಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಯಕ್ಷಗಾನ, ಆಧ್ಯಾತ್ಮಿಕ ಹೀಗೆ ಹತ್ತು ಹಲವು ನಿರಂತರ ಕಾರ್ಯ ಚಟುವಟಿಕೆಗಳೊಂದಿಗೆ, ಕ್ರಿಯಾಶೀಲವಾಗಿದ್ದು ಸಾವಿರಾರು ಮಕ್ಕಳಿಗೆ, ಮಹಿಳೆಯರಿಗೆ ಅವಕಾಶ ವಂಚಿತ ಪ್ರತಿಭೆಗಳಿಗೆ ಮುಕ್ತವಾದ, ಸೂಕ್ತವಾದ ವೇದಿಕೆ ಕಲ್ಪಿಸಿ ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಹೊಸ ಹೊಸ ಪರಿಕಲ್ಪನೆಗಳ ಸಮಾರಂಭದ ಕುರಿತು ‘ಕುಂಚ ಕೈಪಿಡಿ’ ಕಿರು ಹೊತ್ತಿಗೆಗೆ ಸಾರ್ವಜನಿಕವಾಗಿ ಲೇಖನಗಳಿಗೆ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮೊದಲೇ ಪರೀಕ್ಷೆ ಪೂರ್ವಬಾವಿ ತಯಾರಿ ಉಚಿತ ಕಾರ್ಯಾಗಾರ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಪರಿಪೂರ್ಣ ಅಂಕ ಪಡೆದ ಮಕ್ಕಳಿಗೆ ‘ಕನ್ನಡ ಕೌಸ್ತುಭ’ ರಾಜ್ಯ ಪ್ರಶಸ್ತಿಯನ್ನು ಈಗಾಗಲೇ 36 ಸಾವಿರ ಮಕ್ಕಳಿಗೆ ಅದ್ದೂರಿಯಾಗಿ ಸಮಾರಂಭದಲ್ಲಿ ವಿಜೃಂಭಣೆಯಿಂದ ವಿತರಿಸಿದ ಸವಿನೆನಪಿನ ಪ್ರಶಸ್ತಿ ಪುರಸ್ಕೃತರು ಅವರ ಪೋಷಕರು ತಮ್ಮ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಸಂಕ್ಷಿಪ್ತವಾಗಿ ಒಂದು ಪುಟಕ್ಕೆ ಮೀರದಂತೆ ಬರೆದು 15-11-2023ರೊಳಗೆ ಈ ಕೆಳಗಿನ ವಿಳಾಸಕ್ಕೆ ಅಥವಾ…

Read More