Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಕೊಂಕಣಿಯನ್ನು ಉಳಿಸಿ, ಬೆಳೆಸಿ, ಶೃಂಗರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ತನ್ನ ಧ್ಯೇಯವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮಕ್ಕಳ ಪ್ರತಿಭಾ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದು ಈ ಸಾಲಿನ ನವದಿನಗಳ ವೋಪ್ (ಒಪ್ಪ) ಶಿಬಿರದ ಉದ್ಘಾಟನೆ 27-04-24 ರಂದು ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು. ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರಿಂದ ಈ ಶಿಬಿರಕ್ಕೆ ಮಾನ್ಯತೆ ದೊರೆತ ಈ ಶಿಬಿರವನ್ನು ಗಾಯಕ ಮತ್ತು ಸಂಗೀತಗಾರ ರಿತೇಶ್ ಒಝೇರಿಯೊ ಮಣ್ಣಿನ ಮೂರ್ತಿಗೆ ಚಿನ್ನದ ಬಣ್ಣ ಬಳಿದು ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿದರು. ಪ್ರಸಿದ್ಧ ನಾಟಕಕಾರ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಮುಖ್ಯ ಅತಿಥಿಯಾಗಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಡಲಾಯಿತು. ಅಧ್ಯಕ್ಷ ಲುವಿ ಪಿಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರುಣ್ ರಾಜ್ ರೊಡ್ರಿಗಸ್ ಪ್ರಸ್ತಾವಿಕವಾಗಿ ಮಾತನಾಡಿ, ಶಿಬಿರ ವ್ಯವಸ್ಥಾಪಕ ವಿಕ್ಟರ್ ಮತಾಯಸ್ ಶಿಬಿರದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಕೇರನ್ ಮಾಡ್ತಾ…
ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶನ ಪತ್ರಿಕೆ ವತಿಯಿಂದ ನಡೆದ 40ನೆಯ ಸರಣಿ ಕೃತಿ, ವೀಣಾ ರಾವ್ ವಿಟ್ಲ ಇವರ ‘ತಿರುವು’ ಕಥಾ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 29-04-2024 ರಂದು ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತನ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಇವರ ಅಧ್ಯಕ್ಷತೆಯಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಾದ ಕೆ. ರವೀಂದ್ರ ರೈ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಗರಿ ಎಂಟರ್ಪ್ರೈಸಸ್ ಮಾಲಿಕರಾದ ಉದ್ಯಮಿ ಅಗರಿ ರಾಘವೇಂದ್ರ ರಾವ್ ಭಾಗವಹಿಸಿದರು. ಡಾ. ಅರುಣಾ ನಾಗರಾಜ್ ಕೃತಿ ಪರಿಚಯಿಸಿ, ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ ಮಾಲತಿ ಶೆಟ್ಟಿ ಸ್ವಾಗತಿಸಿ, ಕವಿಯತ್ರಿ ಹಾಗೂ ಶಿಕ್ಷಕಿಯಾದ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.
ಉಳ್ಳಾಲ : ಖ್ಯಾತ ಕವಿ ವೆಂಕಟೇಶ್ವರ ಗಟ್ಟಿ ಆಯೋಜಿಸಿದ ಮನೆಯಂಗಳದಲ್ಲಿ ಸಾಹಿತ್ಯ ಗೋಷ್ಠಿ ಹಾಗೂ ಕವಿಗೋಷ್ಢಿ ಕಾರ್ಯಕ್ರಮವು ದಿನಾಂಕ 27-04-2024ರಂದು ಮಾಡೂರಿನ ಸತ್ಯನಾರಾಯಣ ನಗರದಲ್ಲಿರುವ ಖ್ಯಾತ ಕವಿ ವೆಂಟೇಶ್ವರ ಗಟ್ಟಿಯವರ ಮನೆಯಂಗಳದಲ್ಲಿ ನಡೆಯಿತು. ರೇಖಾ ಸುದೇಶ್ ರಾವ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಜಪ್ಪಿನ ಮೊಗರಿನ ಆದಿಮಾಯೆ ಸನ್ನಿಧಿಯ ಧರ್ಮದರ್ಶಿ ಶ್ರೀ ದಯಾನಂದ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಕವಿರತ್ನ ಕಾಳಿದಾಸ ಇಲ್ಲಿ ನೆಲಸಿದಂತೆ ಭಾಸವಾಗುತ್ತದೆ. ಸಾಹಿತ್ಯ ಸೇವೆಯಿಂದ ಮಾನಸಿಕಮೌಲ್ಯ ವರ್ಧನೆಯಾಗುತ್ತದೆ.ಅಂತಹ ಭಾಗ್ಯ ಸರ್ವರಿಗೂ ಪ್ರಾಪ್ತವಾಗಲಿ.” ಎಂದು ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ನಾಗರಾಜ ಗಟ್ಡಿ, ಗಣೇಶ ಪ್ರಸಾದ್ ಜೀ ಹಾಗೂ ರೇಮಂಡ್ ಡಿ’ಕೂನ್ಹಾ ತಾಕೊಡೆ ಯವರು ಶುಭಹಾರೈಕೆಯ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಪಂಗಳ ಈಶ್ವರ ಭಟ್ ಮಾತನಾಡಿ “ವಾಲ್ಮೀಕಿಗೆ ಪ್ರಾಪ್ತವಾದ ಬೀಜ ಮಂತ್ರವೇ ಬೃಹತ್ ರಾಮಾಯಣವನ್ನು ಬರೆಸಿದಂತೆ ತಂಪಾದ ಮಾವಿನ ನೆರಳೂ ಇಂಪಾದ ಕೋಗಿಲೆ ಗಾಯನವೂ ಪ್ರಾಪ್ತವಾಗುವ ಈ ಮನೆಯಂಗಳವು ಇಂದು ಸಾಹಿತ್ಯ ಪೂರ ಹರಿಸುವುದು…
ಮೂವತ್ತು ವರ್ಷಗಳ ಹಿಂದಿನ ಮಾತು. ಬೀದಿಯಲ್ಲಿ ಯಾವುದೋ ಮೆರವಣಿಗೆ. ಡುಂ ಟಕ ಡುಂ ಟಕ ಲಯಬದ್ಧ ತಮಟೆಯ ಸದ್ದು… ವಾದ್ಯಗಳ ನಾದಸ್ವರ, ನನ್ನ 3 ವರ್ಷದ ಮಗ ಎದ್ದನೋ ಬಿದ್ದನೋ ಎನ್ನುವಂತೆ ರಸ್ತೆಗೆ ಓಡಿದ. ನಾನೂ ಅವನ ಹಿಂದೆ ಓಟ. ಗುಂಪು ಜನಜಾತ್ರೆ. ಯಾವುದೋ ಉತ್ಸವ ಇರಬೇಕು. ಪಟಾಲಮ್ಮನೋ, ಮಾರಮ್ಮನೋ, ಚೌಡಮ್ಮನೋ… ಅಲಂಕೃತ ಮೂರ್ತಿ ಪಲ್ಲಕ್ಕಿಯ ಮೇಲೆ. ಮೆರವಣಿಗೆಯ ಮುಂದೆ ಕುದುರೆ, ಕೀಲುಗೊಂಬೆಗಳ ಮೇಲೆ ರಾಜಾ- ರಾಣಿಯರ ಸವಾರಿ ಕುಣಿತ. ನನ್ನ ಮಗ ಆವೇಶಿತನಾಗಿ ಆ ಗುಂಪಿನಲ್ಲಿ ತೂರಿ ತಾಳಬದ್ದವಾಗಿ ಹೆಜ್ಜೆ ಹಾಕಿ ಕುಣಿಯುತ್ತಿದ್ದ. ನೃತ್ಯದ ಸೆಳೆತ ಅವನನ್ನು ಆವರಿಸಿತ್ತು. ಎಂಥವರಿಗೂ ಖುಷಿಯಾದಾಗ ಉಲ್ಲಾಸದಿಂದ ‘ಥಕ ಥೈ’ ಎಂದು ಕುಣಿದು ಬಿಡುತ್ತಾರಂತೆ. ಬಹುಶಃ ನೃತ್ಯ ಆವರಿಸುವ ಹೊತ್ತು- ಗೊತ್ತು, ಸಮಯ- ಸಂದರ್ಭ ಯಾವುದೂ ಗೊತ್ತಾಗಲ್ಲ, ಒಟ್ಟಿನಲ್ಲಿ ಖುಷಿಯ ಅಭಿವ್ಯಕ್ತಿ ‘ಕುಣಿತ’ ಅರ್ಥಾತ್ ಈ ‘ನೃತ್ಯ’. ಇದು ಕೆಲವರಿಗೆ ಹುಚ್ಚು ಹಿಡಿಸಿಬಿಡುತ್ತೆ. ಕುಣಿತ ಎನ್ನುವುದಕ್ಕಿಂತ ‘ನಾಟ್ಯ’ ಎನ್ನುವುದು ಹೆಚ್ಚು ಶಿಷ್ಟ ಭರತಮುನಿ ಸಾವಿರಾರು…
ಉದ್ಯಾವರ : ಶ್ರೀ ಅರಸು ಮಂಜಿಸ್ನಾರ್ ಶ್ರೀ ದೈವಗಳ ಉತ್ಸವ ಸಮಿತಿ – ಉದ್ಯಾವರ ಮಾಡ ಇದರ ವತಿಯಿಂದ ಹರಿಕಥಾ ಪರಿಷತ್ ಮಂಗಳೂರು ಸಹಯೋಗದಲ್ಲಿ ‘ಹರಿಕಥಾ ಸಪ್ತಾಹ’ವು ದಿನಾಂಕ 01-05-2024ರಿಂದ 07-05-2024ರವರೆಗೆ ಪ್ರತಿದಿನ ಸಂಜೆ ಗಂಟೆ 6-00ಕ್ಕೆ ಉದ್ಯಾವರ ಮಾಡದಲ್ಲಿ ನಡೆಯಲಿದೆ. ದಿನಾಂಕ 01-05-2024ರಂದು ತೋನ್ಸೆ ಪುಷ್ಕಳ ಕುಮಾರ್ ಇವರಿಂದ ‘ಭಕ್ತ ಸುಧಾಮ’, ದಿನಾಂಕ 02-05-2024ರಂದು ಮಂಜುಳ ಬಿ. ರಾವ್ ಇರ ಇವರಿಂದ ‘ಭಕ್ತ ಆಂಜನೇಯ’, ದಿನಾಂಕ 03-05-2024ರಂದು ಶಂನಾಡಿಗ ಕುಂಬ್ಳೆಯವರಿಂದ ‘ಕೋಳೂರ ಕೊಡಗೂಸು’, ದಿನಾಂಕ 04-05-2024ರಂದು ಡಾ. ಯಸ್.ಪಿ. ಗುರುದಾಸ್ ಇವರಿಂದ ‘ಭಕ್ತ ದಾಮಾಜಿಪಂಥ’, ದಿನಾಂಕ 05-05-2024ರಂದು ಜಯಾನಂದ ಹೊಸದುರ್ಗ ಇವರಿಂದ ‘ಸಂತ ತುಕಾರಾಮ’, ದಿನಾಂಕ 06-05-2024ರಂದು ಯಜ್ಞೇಶ್ ಹೊಸಬೆಟ್ಟು ಇವರಿಂದ ‘ದುರ್ವಾಸ ಆತಿಥ್ಯ’ ಮತ್ತು ದಿನಾಂಕ 07-05-2024ರಂದು ದೇವಕಿ ತನಯ ಕೂಡ್ಲು ಇವರಿಂದ ‘ಸೀತಾ ಕಲ್ಯಾಣ’ ಹರಿಕಥಾ ಪ್ರವಚನಗಳು ನಡೆಯಲಿದೆ. ಸತ್ಯನಾರಾಯಣ ಐಲ, ರಮೇಶ್ ಹೆಬ್ಬಾರ್, ಶ್ರೀಪತಿ ಭಟ್, ಮಂಗಳ್ ದಾಸ್ ಗುಲ್ವಾಡಿ, ಜಗದೀಶ್ ಉಪ್ಪಳ, ಕೌಶಿಕ್ ಮಂಜನಾಡಿ…
ಕಾರ್ಕಳ : ಗುಪ್ತಗಾಮಿನಿ ಸಾಹಿತ್ಯ ಶಾಲೆ ಈದು ಕಾರ್ಕಳ ಇದರ ವತಿಯಿಂದ ಅನಂತಶಯನ ವಿಶ್ವೇಶ್ವರ ವೇಣುಗೋಪಾಲ ದೇವಸ್ಥಾನದ ಸಭಾಂಗಣದಲ್ಲಿ ಅಭಿಜಾತ ಕವಯಿತ್ರಿ ಕೊಪ್ಪಲ ಸುಶೀಲಾಬಾಯಿ ಮರಾಠೆ ನೆನಪಿನ ಕಾರ್ಯಕ್ರಮದಲ್ಲಿ ‘ಜೈಮಿನಿ ಭಾರತ ಕಾವ್ಯ ಸೌಂದರ್ಯ’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 21-04-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ವಿದ್ವಾಂಸ, ಅಷ್ಟಾವಧಾನಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರವರು “ಕಾವ್ಯದಲ್ಲಿ ಇರಬೇಕಾದ ಲಯ, ರಸಸೃಷ್ಟಿ ಮತ್ತು ಗೇಯಗುಣದಿಂದ ಲಕ್ಷ್ಮೀಶನ ಜೈಮಿನಿ ಭಾರತ ಕನ್ನಡ ಕಾವ್ಯ ಪರಂಪರೆಯ ಸಾರ್ವಕಾಲಿಕವಾದ ಶ್ರೇಷ್ಠ ಮಹಾಕಾವ್ಯ. ಕನ್ನಡ ಸಾಹಿತ್ಯ ಲೋಕದಲ್ಲಿ ಕವಿಗಳ ಪಾಲಿಗೆ ಅದೊಂದು ದೊಡ್ಡ ನಿಧಿಯಾಗಿದೆ” ಎಂದು ನುಡಿದರು. ಕಾರ್ಕಳ ತಾಲೂಕು ಚಿತ್ಪಾವನ ಬ್ರಾಹ್ಮಣ ಸಮಾಜದ ಅಧ್ಯಕ್ಷ ರತ್ನಾಕರ ಮರಾಠೆ, ಗಾಯಕ ಅನಂತಪದ್ಮನಾಭ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರಾವಣಿ ಶಾಸ್ತ್ರಿ ಸ್ವಾಗತಿಸಿ, ಕೆ. ಶ್ರೀಕರ ಭಟ್ ಪ್ರಾಸ್ತಾವಿಕ ಮಾತನಾಡಿದರು. ವಿಜಯ ನಾರಾಯಣ ಕಾರ್ಯಕ್ರಮ ನಿರ್ವಹಿಸಿ, ಜಗದೀಶ ಗೋಖಲೆ ವಂದಿಸಿದರು.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ವತಿಯಿಂದ ಪಾಕ್ಷಿಕ ತಾಳಮದ್ದಳೆ ಹಾಗೂ ಇತ್ತೀಚೆಗೆ ನಿಧನರಾದ ಬಡಗುತಿಟ್ಟಿನ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಇವರ ಕುರಿತು ನುಡಿನಮನ ಕಾರ್ಯಕ್ರಮವು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ದಿನಾಂಕ 27-04-2024ರಂದು ನಡೆಯಿತು. ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ್ ಬಾರ್ಯ, ಕು೦ಬ್ಳೆ ಶ್ರೀಧರರಾವ್ ಗುಡ್ಡಪ್ಪಬಲ್ಯ, ಬಡೆಕ್ಕಿಲ ಚಂದ್ರಶೇಖರ ಭಟ್, ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷ ಪ್ರೇಮಲತಾ ರಾವ್ ನುಡಿನಮನ ಸಲ್ಲಿಸಿದರು. ಬಳಿಕ ‘ಕುಂಭಕರ್ಣ ಕಾಳಗ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ ಮತ್ತು ಮಾ.ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಕು೦ಬ್ಳೆ ಶ್ರೀಧರ್ ರಾವ್, ಭಾಸ್ಕರ್ ಬಾರ್ಯ, ಗುಡ್ಡಪ್ಪ ಬಲ್ಯ, ಬಡೆಕ್ಕಿಲ ಚಂದ್ರಶೇಖರ ಭಟ್, ಸಚ್ಚಿದಾನಂದ ಪ್ರಭು ಅಜೇರು, ಅಚ್ಯುತ ಪಾಂಗಣ್ಣಾಯ ಮತ್ತು ಪ್ರೇಮಲತಾ ರಾವ್ ಸಹಕರಿಸಿದರು.
ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ ವತಿಯಿಂದ ನಾಡೋಜ ಚೆನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತಿ ಕನ್ನಡದ ಯುವ ಲೇಖಕರಿಗಾಗಿ ‘ನಾಡೋಜ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆ- 2024’ ಸೂಚನೆಗಳು : * ಸ್ಪರ್ಧೆಯಲ್ಲಿ ಭಾಗವಹಿಸುವವರ ವಯೋಮಿತಿ 18ರಿಂದ 35 ವರ್ಷ * ಬರಹಗಳನ್ನು ಕಳಿಸಲು ಕೊನೆಯ ದಿನಾಂಕ 20-05-2024 * ಕಡ್ಡಾಯವಾಗಿ ಆಧಾರ ಕಾರ್ಡ ಝರಾಕ್ಸ್ ಪ್ರತಿ ಕಳಿಸಬೇಕು. * ಕಥೆ ಮತ್ತು ಕವನಗಳು ಸ್ವತಂತ್ರವಾಗಿರಬೇಕು. * ವಿಷಯದ ಆಯ್ಕೆಯ ಸ್ವಾತಂತ್ರ್ಯವಿರುತ್ತದೆ. * ಈವರೆಗೂ ಎಲ್ಲಿಯೂ ಪ್ರಕಟವಾಗಿರಬಾರದು. * ನುಡಿ ತಂತ್ರಾಂಶದೊಂದಿಗೆ ವರ್ಡ್ ಫೈಲ್ ನಲ್ಲಿ ಟೈಫ್ ಮಾಡಿ ಇ-ಮೇಲ್ ಮೂಲಕ ಕಳಿಸಬೇಕು. * ನಿರ್ಣಾಯಕರ ನಿರ್ಣಯವೇ ಅಂತಿಮ. * ಎರಡೂ ವಿಭಾಗಗಳಲ್ಲಿ ಆಯ್ಕೆಯಾದ ಮೊದಲ ಮೂರು ಕವನಗಳಿಗೆ/ಬರಹಗಳಿಗೆ ಜೂನ್ 25ರಂದು ಡಾ. ಚನ್ನವೀರ ಕಣವಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು. * ಕವನ ಮತ್ತು…
ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ದಿನಾಂಕ 22-04-2024ರ ಸಂಜೆ ಕಾರ್ಯಕ್ರಮದಲ್ಲಿ ಉಡುಪಿಯ ಕುಮಾರಿ ಶ್ರದ್ಧಾ ಕೆ. ಭಟ್ ಇವರು ನೃತ್ಯ ಪ್ರದರ್ಶನ ನೀಡಿದರು. ಸಾಂಪ್ರದಾಯಿಕ ಪುಷ್ಪಾಂಜಲಿ ನೃತ್ಯದೊಂದಿಗೆ ಹೆಜ್ಜೆ ಹಾಕಿದ ಶ್ರದ್ಧಾ ಅವರು ತಿಲ್ಲಾನದೊಂದಿಗೆ ಕೊನೆಗೊಳಿಸಿದರು. ನಡುವೆ ಪ್ರದರ್ಶಿಸಿದ ‘ಆಡಿಸಿದಳೇ ಯಶೋಧ ಜಗದೋದ್ಧಾರನ’ ಮತ್ತು ‘ದುರ್ಗೆ’ ನೃತ್ಯವು ಪ್ರೇಕ್ಷಕರನ್ನು ಕಣ್ಮನಗೊಳಿಸಿತ್ತು. ಕೀಳಂಜೆ ಶ್ರೀ ಕೃಷ್ಣರಾಜ ಭಟ್ ಮತ್ತು ಶ್ರೀಮತಿ ವಸುಧಾ ಭಟ್ ದಂಪತಿಯ ಸುಪುತ್ರಿಯಾದ ಕುಮಾರಿ ಶ್ರದ್ಧಾ ಕೆ. ಭಟ್ ಇವರು ಪ್ರಸ್ತುತ ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ತೃತೀಯ ಬಿಸಿಎಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನದ ಗುರುಗಳಾದ ನೃತ್ಯ ವಿದುಷಿ ಶ್ರೀಮತಿ ವೀಣಾ ಸಾಮಗ ಅವರ ಬಳಿ ನೃತ್ಯಭ್ಯಾಸ ಮಾಡುತ್ತಿದ್ದು, ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ…
ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮಂಗಳೂರು ಇವರ ವತಿಯಿಂದ ಶ್ರೀ ಶಾರದಾ ಸೇವಾ ಸಮಿತಿ ಇದರ ಸಹಯೋಗದೊಂದಿಗೆ 16ನೇ ವರ್ಷದ ವಾರ್ಷಿಕೋತ್ಸವವು ದಿನಾಂಕ 03-05-2024ರಂದು ಸಂಜೆ 5.30 ಗಂಟೆಗೆ ಸರಿಯಾಗಿ ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜು ಬಯಲು ರಂಗಭೂಮಿಯ ದಿ. ಅಗರಿ ರಘುರಾಮ ಭಾಗವತ ವೇದಿಕೆಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಕುಸೇಲ್ದರಸೆ ನವೀನ್ ಡಿ. ಪಡೀಲ್ ಇವರಿಗೆ ಶ್ರೀಮತಿ ಪ್ರಭಾವತಿ ಶೆಣೈ ಹಾಗೂ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ‘ರಂಗಭಾಸ್ಕರ ಪುರಸ್ಕಾರ -2024 ಪ್ರಶಸ್ತಿ’ ಮತ್ತು ದಿವಂಗತ ಪಿ.ಸಿ. ಜನಾರ್ದನ ರಾವ್ ಸ್ಮಾರಕ ‘ರಂಗ ಪ್ರಶಸ್ತಿ’ಯನ್ನು ಶ್ರೀಮತಿ ಸಾವಿತ್ರಿ ಶ್ರೀನಿವಾಸ ರಾವ್ ಇವರಿಗೆ ಪ್ರದಾನ ಮಾಡಲಾಗುವುದು. ಈ ಕಾರ್ಯಕ್ರಮವು ಅಗರಿ ಎಂಟರ್ಪ್ರೈಸಸ್ ಇದರ ಮಾಲಕರಾದ ಶ್ರೀ ಅಗರಿ ರಾಘವೇಂದ್ರ ರಾವ್, ಕಲಾ ಪೋಷಕರಾದ ಉಡುಪಿ ವಿಶ್ವನಾಥ ಶೆಣೈ, ಕೆನರ ಹೈಸ್ಕೂಲ್ ಅಸೋಸಿಯೇಷನ್ ಇದರ ಗೌರವ ಕಾರ್ಯದರ್ಶಿಯಾದ ಶ್ರೀ ರಂಗನಾಥ ಭಟ್, ಪ್ರಸಿದ್ಧ ರಂಗ ಮನೆ ನಿರ್ದೇಶಕರಾದ ಡಾ.…