Subscribe to Updates
Get the latest creative news from FooBar about art, design and business.
Author: roovari
ಕಾರ್ಕಳ : ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ. ಇ. ಕಾಮತ್ ಕುಶಲಕರ್ಮಿಗಳ ತರಬೇತಿ ಸಂಸ್ಥೆಯಲ್ಲಿ ಕಲ್ಲು ,ಮರ ಹಾಗೂ ಲೋಹ ಶಿಕ್ಷಣ ವಿಭಾಗಗಳಲ್ಲಿ 18 ತಿಂಗಳ ಅವಧಿಯ ಉಚಿತ ತರಬೇತಿಯ ಹೊಸ ಬ್ಯಾಚ್ ದಿನಾಂಕ 15 ಸೆಪ್ಟೆಂಬರ್ 2025ರಂದು ಪ್ರಾರಂಭವಾಗಲಿದ್ದು, ಈ ತರಗತಿಗೆ ಸೇರಲಿಚ್ಛಿಸುವ 18 ರಿಂದ 35 ವರ್ಷದೊಳಗಿನ 7ನೇ ತರಗತಿ ಕಲಿತ ಆಸಕ್ತ ಯುವಜನರು ಕೂಡಲೇ ಸಂಸ್ಥೆಯ ಆವರಣದಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಬೆಳಿಗ್ಗೆ 10.30 ರಿಂದ ಸಂಜೆ 4.00 ಗಂಟೆಯ ಒಳಗೆ ಹಾಜರಾಗಬೇಕು. ಸಂದರ್ಶನಕ್ಕೆ ಬರುವಾಗ ಅಭ್ಯರ್ಥಿಯು ತಂದೆ ಅಥವಾ ತಾಯಿಯ ಜೊತೆಗೆ ಬರಬೇಕು ಹಾಗೂ ಈ ಕೆಳಗೆ ನಮೂದಿಸಿದ ದಾಖಲೆ ಪ್ರತಿಗಳನ್ನು ತರಬೇಕು. 1. ಅಭ್ಯರ್ಥಿಯ ಆಧಾರ್ ಕಾರ್ಡ್ 2. ಪೋಷಕರ ಆಧಾರ್ ಕಾರ್ಡ್ 3. ರೇಷನ್ ಕಾರ್ಡ್ 4. Marks ಕಾರ್ಡ್ 5. ವರ್ಗಾವಣೆ ಪ್ರಮಾಣ ಪತ್ರ (ಟಿ. ಸಿ.) 6. ಇಬ್ಬರು ಗಣ್ಯ ವ್ಯಕ್ತಿಗಳಿಂದ ನಡತೆ ಪ್ರಮಾಣ ಪತ್ರ 7. ಪಾಸ್ ಪೋರ್ಟ್…
ಪುತ್ತೂರು : ‘ಬಹುವಚನಂ’ ಪುತ್ತೂರು ಆಯೋಜಿಸುವ ‘ಭೂತಾರಾಧನೆ’ ಪ್ರಸ್ತುತ ಪರಿಸ್ಥಿತಿ ಯಲ್ಲಿನ ವರ್ತಮಾನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 14 ಸೆಪ್ಟೆಂಬರ್ 2025ರ ರವಿವಾರದಂದು ಪುತ್ತೂರು ದರ್ಬೆಯ ವಿದ್ಯಾನಗರದಲ್ಲಿರುವ ಪದ್ಮನೀ ಸಭಾಭವನದಲ್ಲಿ ನಡೆಯಲಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜು ಉಜಿರೆ ಇಲ್ಲಿನ ಉಪನ್ಯಾಸಕರು ಹಾಗೂ ದೈವ ನರ್ತಕರಾದ ಡಾ. ರವೀಶ್ ಪಡುಮಲೆ ಇವರು ಭೂತಾರಾಧನೆಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಮಂಗಳೂರು : ವಿಶ್ವಹಿಂದೂ ಪರಿಷತ್ ಆಶ್ರಯದ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣ ಸಮಿತಿ ನೇತೃತ್ವದಲ್ಲಿ ಬೃಹತ್ ಜನಾಗ್ರಹ ಸಭೆಯು ಮಂಗಳೂರಿನ ಕದ್ರಿ ಪಾರ್ಕ್ ಬಳಿಯ ಗೋರಕ್ಷ ಜ್ಞಾನ ಮಂದಿರದಲ್ಲಿ ದಿನಾಂಕ 09 ಸೆಪ್ಟೆಂಬರ್ 2025ರ ಮಂಗಳವಾರದಂದು ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆ, ಯಕ್ಷಗಾನ, ನಾಟಕ, ದೈವಕೋಲ, ನೇಮ, ಭರತನಾಟ್ಯ ಸಹಿತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಮತ್ತು ಸಾರ್ವಜನಿಕ ಕಾರ್ಯಕ್ರಮಕ್ಕೆ ಅನುಮತಿ ನೀಡುವ ತೊಂದರೆಗಳನ್ನು ನಿವಾರಿಸಿ ಈ ಹಿಂದಿನಂತೆಯೇ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡಬೇಕು. ಮುಂದೆ ಬರುವ ನಾಡಹಬ್ಬ ದಸರಾ ಸಂದರ್ಭದಲ್ಲಿ ನಿಯಮಾವಳಿ ಪ್ರಕಾರ 12 ದಿನಗಳ ಕಾಲ ರಿಯಾಯಿತಿ ಕೊಟ್ಟು ಸರಕಾರ ಆದೇಶಿಸಬೇಕು ಎಂದು ಸಮಿತಿ ವತಿಯಿಂದ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಶಾಸಕರ ಮುಖೇನ ಮನವಿ ಸಲ್ಲಿಸಲಾಯಿತು. ಯಕ್ಷಗಾನದ ಹಿಮ್ಮೇಳ, ಮುಮ್ಮೇಳದವರು, ವಿವಿಧ ನಾಟಕ ತಂಡದ ಕಲಾವಿದರು, ತಂತ್ರಜ್ಞರು, ದೈವ ನರ್ತಕರು, ಕಾರ್ಮಿಕರು, ಸೌಂಡ್ಸ್ ಆ್ಯಂಡ್ ಲೈಟ್ಸ್ನವರು, ಶಾಮಿಯಾನ, ಫ್ಲವರ್ ಡೆಕೊರೇಟರ್ ಗಳು, ಕ್ಯಾಟರಿಂಗ್,…
ಮಡಿಕೇರಿ : ಚೆಂಬು ಸಾಹಿತ್ಯ ವೇದಿಕೆಯ ವತಿಯಿಂದ ಏರ್ಪಡಿಸಲಾಗಿದ್ದ 7ನೇ ವರ್ಷದ ಎಂ. ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಯ ಫಲಿತಾಂಶವು ಪ್ರಕಟಗೊಂಡಿದ್ದು, ಸ್ಪರ್ಧೆಗೆ ಬಂದಂತಹ 35 ಕವಿತೆಗಳಲ್ಲಿ 3 ಕವಿತೆಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಸ್ಪರ್ಧೆಗೆ ಬಂದಂತಹ ಉಳಿದೆಲ್ಲಾ ಕವಿತೆಗಳನ್ನು ಬರೆದವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು ಎಂದು ಸ್ಪರ್ಧೆಯ ಆಯೋಜಕರು ತಿಳಿಸಿದ್ದಾರೆ. ಕವಿತೆಗಳ ಮೌಲ್ಯಮಾಪಕರಾಗಿ ಕವಯಿತ್ರಿ ಶ್ರೀಮತಿ ಸ್ಮಿತಾ ಅಮೃತರಾಜ್ ಉಪಸ್ಥಿತರಿದ್ದರು. ಬಹುಮಾನಗಳ ಪ್ರಾಯೋಜಕರಾಗಿ ಬಾರಿಯಂಡ ಜೋಯಪ್ಪ ಹಾಗೂ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ತಲಾ 1 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಪ್ರಥಮ ಬಹುಮಾನ ಜೀವನ್ ಪುರ ಇವರು ಬರೆದಂತಹ “ಬೊದ್ದು ಬಾಳಲಿನಂಗೆ” ಕವಿತೆಗೆ, ದ್ವಿತೀಯ ಬಹುಮಾನ ವಿಮಲಾರುಣ ಪಡ್ಡಂಬೈಲು ಇವರು ಬರೆದಂತಹ “ಆಟಿ” ಕವಿತೆಗೆ ಹಾಗೂ ತೃತೀಯ ಬಹುಮಾನ ಬಿಟ್ಟರ ಚೋಂದಮ್ಮ ಬೆಂಗಳೂರು ಇವರು ಬರೆದಂತಹ “ನೆಂದೇ ಬಾತ್” ಕವಿತೆಗೆ ಲಬಿಸಿದೆ.
ಹಾಸನ : ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸಿದ ಜಿಲ್ಲಾ ಮಟ್ಟದ ಕವಿಗೋಷ್ಠಿ ದಿನಾಂಕ 08 ಸೆಪ್ಟೆಂಬರ್ 2025 ರಂದು ಆಚಾರ್ಯ ವಾಣಿಜ್ಯ ಪಿ. ಯು. ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ “ಕಾವ್ಯ ಸಮಾಜದ ಎಲ್ಲಾ ಸ್ಥರದ ಅದರಲ್ಲೂ ತಳ ಸಮುದಾಯದ ತಲ್ಲಣಗಳಿಗೆ ಧ್ವನಿಯಾಗಬೇಕೆಂದರೆ ಕವಿಗೂ ಆ ಸಾಮಾಜಿಕ ಬದ್ಧತೆ, ಹೃದಯ ವೈಶಾಲ್ಯತೆ ಅತ್ಯಗತ್ಯ. ಇತಿಹಾಸವನ್ನು ಅರಿಯದವ ಇತಿಹಾಸವನ್ನು ಹೇಗೆ ಸೃಷ್ಠಿಸಲಾರನೋ.. ಹಾಗೆಯೇ ಕಾವ್ಯೇತಿಹಾಸದ ಪರಿವಿಲ್ಲದವ ಸೃಜನಾತ್ಮಕ ಕಾವ್ಯ ಸೃಷ್ಠಿಸಲಾರ. ಪ್ರತಿಯೊಬ್ಬ ಕವಿಗೂ ನಮ್ಮ ಪರಂಪರೆಯ ಅರಿವಿರಬೇಕು. ಕಾವ್ಯವೆಂಬುದು ಪರಂಪರೆಗಳನ್ನು ಬೆಸೆಯುವ ಕೊಂಡಿ. ಕವಿಗಳು ಪರಂಪರೆಯ ಇತಿಹಾಸಕಾರರು. ಕಾವ್ಯವೆಂಬುದು ಕೇವಲ ಕಲ್ಪನಾತೀತವಾಗದೆ ವಾಸ್ತವ ಬದುಕಿನ ಮೇಲೆ ಬೆಳಕು ಚೆಲ್ಲಬೇಕು. ವೈಚಾರಿಕ, ವೈಜ್ಞಾನಿಕ ದೃಷ್ಠಿಕೋನಗಳನ್ನು ಒಳಗೊಂಡಿದ್ದರೆ ಮಾತ್ರ ಅಂತಹ ಕಾವ್ಯ ಕಾಲಗರ್ಭದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. ಬರೆದದ್ದೆಲ್ಲಾ ಕಾವ್ಯವಾಗುವುದಿಲ್ಲ. ಗದ್ಯಕ್ಕೂ-ಪದ್ಯಕ್ಕೂ ವ್ಯಾತ್ಯಾಸವಿದೆ. ಕಾವ್ಯಕ್ಕೆ ನಿರ್ದಿಷ್ಟ ವ್ಯಾಖ್ಯಾನವಿಲ್ಲದಿದ್ದರೂ…
ಸಾಲಿಗ್ರಾಮ : ಸಂಗೀತ ಅವಿನಾಶಿ ಪ್ರತಿಷ್ಠಾನ ಮತ್ತು ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ ಸಮರ್ಪಿಸುವ ‘ಅವಿನಾಶ್ ಹೆಬ್ಬಾರ್ ದಶಮ ಸಂಸ್ಮರಣೆ’ ಕಾರ್ಯಕ್ರಮವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಮುಂಜಾನೆ 10-00 ಗಂಟೆಗೆ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಆಯೋಜಿಸಲಾಗಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಗಾಯನ, ಸಂತೂರ್ ವಾದನ ಮತ್ತು ಕೊಳಲು ವಾದನ ಪ್ರಸ್ತುತಗೊಳ್ಳಲಿದೆ. ಮುಂಜಾನೆ 10-00 ಗಂಟೆಗೆ ಚೈತನ್ಯ ಭಟ್ಟ ಇವರಿಂದ ಸಂತೂರ್ ವಾದನ, ಶ್ರೀಧರ ಹೆಗಡೆ ಕಲಭಾಗ ಮತ್ತು ವಿನಾಯಕ ಹೆಗಡೆ ಮುತಮರಡು ಇವರಿಂದ ಗಾಯನ, ನಾಗರಾಜ ಹೆಗಡೆ ಶಿರನಾಳ ಇವರಿಂದ ಕೊಳಲು ವಾದನಕ್ಕೆ ಗುರುರಾಜ ಹೆಗಡೆ ಮತ್ತು ಅಕ್ಷಯ ಭಟ್ಟ ತಬಲಾ ಹಾಗೂ ಶಂಭು ಭಟ್ಟ ಕೋಟ ಮತ್ತು ಶಶಿಕಿರಣ ಮಣಿಪಾಲ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಬೆಂಗಳೂರು : ಶಾಂಡಿಲ್ಯಾ ಐ.ಎನ್.ಸಿ. ಪಸ್ತುತ ಪಡಿಸುವ ‘ಕನ್ನಡ ನಾಟಕೋತ್ಸವ’ ಸಮಾರಂಭವನ್ನು ದಿನಾಂಕ 13 ಸೆಪ್ಟೆಂಬರ್ 2025ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಆಯೋಜಿಸಲಾಗಿದೆ. ಸಂಜೆ 7-30 ಗಂಟೆಗೆ ನಟನ ಪಯಣ ರೆಪರ್ಟರಿ ತಂಡದ ಪ್ರಯೋಗ ‘ಕಣಿವೆಯ ಹಾಡು’ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಮೂಲ ರಚನೆ ಅತೊಲ್ ಫ್ಯೂಗಾರ್ಡ್ ಇವರದ್ದು, ಕನ್ನಡಕ್ಕೆ ಡಾ. ಮೀರಾ ಮೂರ್ತಿ ಅನುವಾದಿಸಿದ್ದು, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಇವರು ಸಂಗೀತ ನೀಡಿದ್ದು, ಡಾ. ಶ್ರೀಪಾದ ಭಟ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.
ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಬ್ರಹ್ಮ್ಯೆಕ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪಂಚಮ ವಾರ್ಷಿಕ ಆರಾಧನೆ ಪ್ರಯುಕ್ತ ದಿನಾಂಕ 11 ಸೆಪ್ಟೆಂಬರ್ 2025ರಂದು ವೇಣುವಾದನ ಮತ್ತು ಯಕ್ಷಗಾನ ಪ್ರದರ್ಶನವನ್ನು ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9-30 ಗಂಟೆಗೆ ವೇಣುವಾದನ ಕಾರ್ಯಕ್ರಮದಲ್ಲಿ ವಿದ್ವಾನ್ ಎಂ.ಕೆ. ಪ್ರಾಣೇಶ್ ಕೊಳಲು, ವಿದ್ವಾನ್ ಜನಾರ್ದನ್ ಶ್ರೀನಾಥ್ ವಯಲಿನ್, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಮೃದಂಗ, ವಿದ್ವಾನ್ ಗುರುಪ್ರಸನ್ನ ಖಂಜರಿ ಮತ್ತು ಬೆಂಗಳೂರಿನ ವಿದ್ವಾನ್ ರಾಜಶೇಖರ ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ. ಸಂಜೆ 5-00 ಗಂಟೆಗೆ ಉಡುಪಿ ಸಿದ್ಧಾಪುರದ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ (ರಿ.) ಇವರಿಂದ ದಿ. ಕಾಳಿಂಗ ನಾವುಡ ವಿರಚಿತ ‘ನಾಗಶ್ರೀ’ ಬಡಗುತಿಟ್ಟು ಯಕ್ಷಗಾನ ಬಯಲಾಟ ಮತ್ತು ರಾತ್ರಿ 9-00 ಗಂಟೆಗೆ ‘ಅಗ್ರಪೂಜೆ’ ತೆಂಕುತಿಟ್ಟು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಬೆಂಗಳೂರಿನ ಜಿಗಣಿ ಸಮೀಪದ ನಿಸರ್ಗ ಲೇ ಔಟ್ ನಲ್ಲಿರುವ ‘ಪುರಂದರ ಮಂಟಪ’ದಲ್ಲಿ ‘ಲಯಾಭಿನಯ ಕಲ್ಚುರಲ್ ಫೌಂಡೇಶನ್’ ನೃತ್ಯ ಸಂಸ್ಥೆಯ ನೃತ್ಯಗುರು ಡಾ. ಜಯಶ್ರೀ ರವಿ ಇವರ ಶಿಷ್ಯೆ ಉದಯೋನ್ಮುಖ ನೃತ್ಯ ಕಲಾವಿದೆ ಕುಮಾರಿ ಆರಾಧನಾ ಎಬಿತ್ ಇತ್ತೀಚೆಗೆ ತನ್ನ ‘ಗೆಜ್ಜೆಪೂಜೆ’ಯನ್ನು ವಿದ್ಯುಕ್ತವಾಗಿ ನೆರವೇರಿಸಿಕೊಂಡಳು. ಹತ್ತು ವರ್ಷದ ಬಾಲಪ್ರತಿಭೆ ತನ್ನ ವಯಸ್ಸಿಗೂ ಮೀರಿದ ಕಲಾನೈಪುಣ್ಯವನ್ನು ಪ್ರದರ್ಶಿಸಿ ಕಲಾರಸಿಕರ ಮೆಚ್ಚುಗೆ ಗಳಿಸಿದಳು. ನುರಿತ ನರ್ತಕಿಯಂತೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದ ಆರಾಧನಾ ಎಬಿತ್, ಅತ್ಯಂತ ಲವಲವಿಕೆಯಿಂದ ನಿರಾಯಾಸವಾಗಿ ನರ್ತಿಸಿದ್ದು ಅವಳ ನೃತ್ಯಪ್ರತಿಭೆಗೆ ಸಾಕ್ಷಿಯಾಯಿತು. ಕಲಾವಿದೆ ತನ್ನ ಭಾವಪುರಸ್ಸರ ಬೊಗಸೆ ಕಣ್ಣುಗಳ ಅಭಿವ್ಯಕ್ತಿಯಿಂದ, ಕೃತಿಯ ಅಭಿನಯಕ್ಕೆ ಪೂರಕವಾಗಿ ಭಾವಾಭಿನಯ ನೀಡುತ್ತಿದ್ದುದು ವಿಶೇಷವಾಗಿತ್ತು. ಮೂರ್ತಿ ಪುಟ್ಟದಾದರೂ ಕೀರ್ತಿ ದೊಡ್ಡದು ಎಂಬಂತೆ ಬಾಲ ಕಲಾವಿದೆ ಸೊಗಸಾದ ಸುಂದರ ಆಂಗಿಕಾಭಿನಯ, ತನ್ನ ಖಚಿತ ಅಡವು, ಹಸ್ತಮುದ್ರೆ ಮತ್ತು ಅಂಗಶುದ್ಧ ನರ್ತನದಿಂದ ಪ್ರೇಕ್ಷಕರನ್ನು ಸೆಳೆದಳು. ಸಾಂಪ್ರದಾಯಕ ‘ಪುಷ್ಪಾಂಜಲಿ’ಯಿಂದ ಕಲಾವಿದೆ ಪ್ರಸ್ತುತಿ ಆರಂಭಿಸಿದಳು. ರಂಗಾಕ್ರಮಣದಲ್ಲಿ ದೇವಾನುದೇವತೆಗಳಿಗೆ, ಗುರು-ಹಿರಿಯರಿಗೆ, ಭೂಮಾತೆಗೆ, ವಾದ್ಯಗೋಷ್ಠಿ ಮತ್ತು ಕಲಾರಸಿಕರಿಗೆ ನಮ್ರಭಾವದಿಂದ…
ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ 114ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ವು ದಿನಾಂಕ 09 ಸೆಪ್ಟೆಂಬರ್ 2025ರಂದು ಮಂಗಳೂರು ರಥಬೀದಿಯಲ್ಲಿರುವ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ಶ್ರೀ ಶ್ರೀನಿವಾಸ ಕೆ.ಟಿ. ಅವರು “ಪ್ರಥಮ ಕನ್ನಡ ಪತ್ರಿಕೆ ಬಿಡುಗಡೆಯಾದದ್ದು ಮಂಗಳೂರಿನಲ್ಲಿ, ಅನೇಕ ಕವಿಗಳ ತವರೂರು ಮಂಗಳೂರು ಆದರೆ ಇತ್ತೀಚಿಗೆ ಸಾಹಿತ್ಯದ ಕಡೆಗೆ ಯುವ ಪೀಳಿಗೆಯ ಒಲವು ಕಡಿಮೆಯಾಗಿದ್ದು, ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು, ಸಾಹಿತ್ಯವನ್ನು ಸಮೃದ್ಧವಾಗಿ ಬೆಳೆಸಬೇಕು” ಎಂದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮೈ ಅಂತರಾತ್ಮ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಸಂಸ್ಥಾಪಕರು ಹಾಗೂ ಅಂಕಣಕಾರರಾಗಿರುವ ಶ್ರೀ ವೇಣುಶರ್ಮ “ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬಳಕೆ ಅತಿ ಅಗತ್ಯ ಆದರೆ ನಾವು ಅವಶ್ಯಕತೆ ಇದ್ದಷ್ಟು ಬಳಸಬೇಕು. ಮೊಬೈಲ್ ಬಳಕೆಯಿಂದ ಅನೇಕ ಅನುಕೂಲಗಳಿವೆ ಆದರೆ…