Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಪುತ್ತೂರಿನ ಪರ್ಲಡ್ಕದ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ. ಕೋಟ ಶಿವರಾಮ ಕಾರಂತ ಬಾಲವನ ಸಮಿತಿ ಪುತ್ತೂರು ಮತ್ತು ಉಪವಿಭಾಗಾಧಿಕಾರಿ ಕಚೇರಿ ಆಶ್ರಯದಲ್ಲಿ ದಿನಾಂಕ 10 ಅಕ್ಟೋಬರ್ 2025ರಂದು ಡಾ. ಶಿವರಾಮ ಕಾರಂತರ 124ನೇ ಜನ್ಮದಿನೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಾಲವನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಬಿ.ಎ. ವಿವೇಕ ರೈ “ಡಾ. ಶಿವರಾಮ ಕಾರಂತರ ಬಾಲವನ ನಿರಂತರ ಚಟುವಟಿಕೆಯ ಕೇಂದ್ರವಾಗಬೇಕು. ಬಾಲವನಕ್ಕೆ ಮೇಲ್ವಿಚಾರಕರನ್ನು ನೇಮಿಸಿ ಪ್ರತಿ ವಾರಾಂತ್ಯದಲ್ಲಿ ಮಕ್ಕಳ ನಾಟಕ, ಹಾಡು, ಕುಣಿತ, ಪೇಂಟಿಂಗ್, ವೈಚಾರಿಕ ವಿಚಾರಸಂಕಿರಣ ನಡೆಸಬೇಕು. ವರ್ಷಕ್ಕೆ ಒಂದೂ ಬಾರಿಯಾದರೂ ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡು 2 ದಿನಗಳ ಕಾರಂತ ಉತ್ಸವ ನಡೆಸಬೇಕು. ಕಾರಂತರ ಆಶಯಗಳಿಗೆ ಮರುಜೀವ ಕೊಡಬೇಕು. ಹಾಗಾದರೆ ಮಾತ್ರ ಬಾಲವನ ಪುತ್ತೂರಿಗೆ ಆಕರ್ಷಣೆಯಾಗುತ್ತದೆ” ಎಂದು ಹೇಳಿದರು. ಕಾರಂತ ಸ್ಮರಣೆ ಮಾಡಿದ ಶಿವರಾಮ ಕಾರಂತರ ಸೋದರಳಿಯ, ಸಾಹಿತಿ ಶಾಂತಾರಾಮ ರಾವ್ ಮಾತನಾಡಿ “ಕಾರಂತರು ಎಲ್ಲ ಕ್ಷೇತ್ರದಲ್ಲೂ…
ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ವರ್ಷದ ‘ಗೌರವ ಪ್ರಶಸ್ತಿ’ ಮತ್ತು ’ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟಿಸಿದ್ದು, ಐವರು ವರ್ಷದ ಗೌರವ ಪ್ರಶಸ್ತಿಗೆ ಮತ್ತು 10 ಮಂದಿ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪುರಸ್ಕೃತರ ಪಟ್ಟಿ ಪ್ರಕಟಿಸಿದ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಇವರು, 2024ನೇ ಸಾಲಿನ ವರ್ಷದ ‘ಗೌರವ ಪ್ರಶಸ್ತಿ’ಗೆ ಡಾ. ಎಂ. ಬಸವಣ್ಣ (ಚಾಮರಾಜನಗರ), ಶೂದ್ರ ಶ್ರೀನಿವಾಸ್ (ಬೆಂಗಳೂರು), ಪ್ರತಿಭಾ ನಂದಕುಮಾರ್ (ಬೆಂಗಳೂರು), ಡಾ. ಡಿ.ಬಿ. ನಾಯಕ್ (ಕಲಬುರಗಿ) ಮತ್ತು ಡಾ. ವಿಶ್ವನಾಥ್ ಕಾರ್ನಾಡ್ (ಮುಂಬಯಿ) ಇವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ರೂ. ಐವತ್ತು ಸಾವಿರ ನಗದು, ಪ್ರಶಸ್ತಿ ಫಲಕ, ಫಲತಾಂಬೂಲ ಒಳಗೊಂಡಿದೆ. 2024ನೇ ಸಾಲಿನ ‘ಸಾಹಿತ್ಯ ಪ್ರಶಸ್ತಿ’ಗೆ ಡಾ. ಬಿ.ಎಂ. ಪುಟ್ಟಯ್ಯ- ಚಿಕ್ಕಮಗಳೂರು, ಡಾ. ಕೆ.ವೈ. ನಾರಾಯಣಸ್ವಾಮಿ- ಬೆಂಗಳೂರು, ಪದ್ಮಾಲಯ ನಾಗರಾಜ್- ಕೋಲಾರ, ಡಾ. ಬಿ.ಯು. ಸುಮಾ- ತುಮಕೂರು, ಡಾ. ಮಮತಾ ಸಾಗರ- ಶಿವಮೊಗ್ಗ, ಡಾ. ಸಬಿತಾ ಬನ್ನಾಡಿ-ಉಡುಪಿ, ಅಬ್ದುಲ್ ಹೈ…
ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ ಕನ್ನಡ ವಿಭಾಗ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಮತ್ತು ಬೆಳ್ತಂಗಡಿ ಹೋಬಳಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಸಾಹಿತಿ ಪದ್ಮಭೂಷಣ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ ನುಡಿನಮನ ಮತ್ತು ವಿದ್ಯಾರ್ಥಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ 16 ಅಕ್ಟೋಬರ್ 2025ರಂದು ಮಧ್ಯಾಹ್ನ 2-15 ಗಂಟೆಗೆ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಇವರ ಅಧ್ಯಕ್ಷತೆಯಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಇವರು ಉದ್ಘಾಟನೆ ಮಾಡಲಿದ್ದಾರೆ. ಶಾಖಾ ಪ್ರಬಂಧಕರಾದ ಶಿವಪ್ರಸಾದ್ ಸುರ್ಯ ಇವರು ನುಡಿನಮನಗಳನ್ನಾಡಲಿದ್ದು, ಡೀನ್ ಡಾ. ಭಾಸ್ಕರ ಹೆಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಂದ ಧರ್ಮಶ್ರೀ, ಜಲಪಾತ, ನಾಯಿ ನೆರಳು, ತಬ್ಬಲಿಯು…
ಬೆಂಗಳೂರು : ರಂಗದರ್ಶನ ಪ್ರದರ್ಶನ ಕಲಾಕೇಂದ್ರ ಬೆಂಗಳೂರು ಇದರ ವತಿಯಿಂದ ಒಡನಾಡಿ ಬಂಧು ಸಿಜಿಕೆ – 75 ಮಾಸದ ನೆನಪು ಸರಣಿ ಕಾರ್ಯಕ್ರಮ -05 ದಿನಾಂಕ 14 ಅಕ್ಟೋಬರ್ 2025ರಂದು ಸಂಜೆ ಗಂಟೆ 6-45ಕ್ಕೆ ಬೆಂಗಳೂರಿನ ಕಲಾಗ್ರಾಮ ಮಲ್ಲತ್ತಹಳ್ಳಿಯ ಸಮುಚ್ಚಯ ರಂಗಮಂದಿರದಲ್ಲಿ ನಡೆಯಲಿದೆ. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ ಮತ್ತು ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಭಾ ಕಾರ್ಯಕ್ರಮದ ಬಳಿಕ ಮೈಕೊ ಶಿವಶಂಕರ್ ಇವರ ನಿರ್ದೇಶನದಲ್ಲಿ ‘ದಾಳ’ ನಾಟಕ ಪ್ರದರ್ಶನಗೊಳ್ಳಲಿದೆ.
ಉಡುಪಿ : ಜೀವವಿಮ ನಿಗಮದ ನಿವೃತ್ತ ಅಧಿಕಾರಿ, ಕಲಾಪೋಷಕರು ಆಗಿದ್ದ, ಸರ್ಪಂಗಳ ಸುಬ್ರಮಣ್ಯ ಭಟ್ ಇವರ ನೆನಪಿನಲ್ಲಿ 14ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 11 ಅಕ್ಟೋಬರ್ 2025ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೖಸಿ ಸಭಾಂಗಣದಲ್ಲಿ ಜರಗಿತು. ಸುರತ್ಕಲ್, ಹನುಮಗಿರಿ ಮುಂತಾದ ವಿವಿಧ ಮೇಳಗಳಲ್ಲಿ 54 ವರ್ಷ ತಿರುಗಾಟ ಮಾಡಿದ ಹಿರಿಯ ಕಲಾವಿದರಾದ ವೇಣೂರು ಸದಾಶಿವ ಕುಲಾಲ್ ಇವರಿಗೆ ‘ಸರ್ಪಂಗಳ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮೂರು ದಶಕಗಳ ಕಾಲ ಚಕ್ರತಾಳ ಕಲಾವಿದರಾಗಿ ಸೇವೆ ಸಲ್ಲಿಸಿದ ಸುರತ್ಕಲ್ಲಿನ ಪಿ. ಸುರೇಶ್ ಕಾಮತ್ ಇವರಿಗೆ ಸರ್ಪಂಗಳ ಪುರಸ್ಕಾರ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಪ್ರಶಸ್ತಿ ಪ್ರದಾನ ನೆರವೇರಿಸಿದರು. ಶ್ರೀಮತಿ ನಳಿನಿ ಸುಬ್ರಹ್ಮಣ್ಯ ಭಟ್ ಮತ್ತು ಮಕ್ಕಳು ಪ್ರಾಯೋಜಿಸಿದ ಈ ಕಾರ್ಯಕ್ರಮದಲ್ಲಿ ಡಾ. ಶೈಲಜಾ ಭಟ್, ಡಾ. ನರೇಂದ್ರ ಶೆಣೈ, ಅವಂತಿಕಾ, ಅನಿರುದ್ಧ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಸಭಾ ಕಾರ್ಯಕ್ರಮದ…
ಪೆರಿಯ : ಗೋವುಗಳಿಗೋಸ್ಕರ ಸಂಗೀತ ಸೇವೆ ನಡೆಯುವ ವಿಶ್ವದ ಏಕೈಕ ಗೋಶಾಲೆ ಎಂದು ಕರೆಯಲ್ಪಡುವ ಬೇಕಲ್ ಗೋಕುಲಂ ಗೋಶಾಲೆಯು ತನ್ನ 13 ದಿನಗಳ ಐದನೇ ದೀಪಾವಳಿ ರಾಷ್ಟ್ರೀಯ ಸಂಗೀತ ಉತ್ಸವವನ್ನು ದಿನಾಂಕ 20 ಅಕ್ಟೋಬರ್ 2025ರಂದು ಬೆಳಿಗ್ಗೆ 9-00 ಗಂಟೆಗೆ ಪ್ರಾರಂಭಿಸಲಿದೆ. ವೀಣೆಗೆ ಒತ್ತು ನೀಡುವ ಈ ವರ್ಷದ ಸಂಗೀತ ಉತ್ಸವವು ಉಡುಪಿ ಪವನ ಆಚಾರ್ ನೇತೃತ್ವದ ಸಂಗೀತ ಕಚೇರಿಯೊಂದಿಗೆ ಪ್ರಾರಂಭವಾಗಲಿದ್ದು, ಅಲ್ಲಿ ಐದು ವೀಣೆಗಳು ಒಟ್ಟಿಗೆ ಸೇರುತ್ತವೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಸಿಂಗಾಪುರ ಮತ್ತು ದುಬೈನ ಸುಮಾರು ನಾಲ್ಕು ನೂರು ಕಲಾವಿದರು ಬೆಳಿಗ್ಗೆ 9-00ರಿಂದ ರಾತ್ರಿ 10-00ರವರೆಗೆ ಸತತ ಸಂಗೀತ ಕಚೇರಿಗಳಲ್ಲಿ ಭಾಗವಹಿಸಲಿದ್ದಾರೆ. ಗೋಕುಲಂ ಗೋಶಾಲೆ ಸಂಗೀತಗಾರರು ಮತ್ತು ಸಂಗೀತ ಪ್ರಿಯರನ್ನು ಸ್ವಾಗತಿಸಲು ಸಜ್ಜಾಗಿದೆ. 2010ರಲ್ಲಿ ಒಂದು ವೇಚೂರ್ ಹಸು ಮತ್ತು ಹೋರಿಯೊಂದಿಗೆ ಪ್ರಾರಂಭವಾದ ಈ ಗೋಶಾಲೆಯು, ಹದಿನೈದು ವರ್ಷಗಳ ನಂತರ ವೇಚೂರ್, ಕಾಸರಗೋಡು ಗಿಡ್ಡ, ಹಳ್ಳಿಕಾರ್, ಮಲೆನಾಡು ಗಿಡ್ಡ, ಬರ್ಗೂರ್, ಗಿರ್, ಕಂಕ್ರೆಜ್, ಓಂಗೋಲ್…
ಉಡುಪಿ : ಸಮಕಾಲೀನ ಕಲೆಯನ್ನು ಜನ ಸಾಮಾನ್ಯರೊಂದಿಗೆ ಬೆಸೆಯುವ ಪ್ರಯತ್ನದ ಶಿಕಾಗೋ ಅಂತರರಾಷ್ಟ್ರೀಯ ಟೆರ್ರೈನ್ ಬಿನಾಲೆಯು ದಿನಾಂಕ 01 ಅಕ್ಟೋಬರ್ 2025ರಿಂದ 15 ನವೆಂಬರ್ 2025ರ ತನಕ ವಿಶ್ವದಾದ್ಯಂತ ನಡೆಯುತ್ತಿದ್ದು, ಉಡುಪಿಯ ಕಾವಿ ಕಲಾವಿದ ಡಾ. ಜನಾರ್ದನ ಹಾವಂಜೆಯವರ ‘ಯಕ್ಷ’ ಕಲಾಕೃತಿಯು ಇದೇ ಸಂದರ್ಭದಲ್ಲಿ ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಅಮೇರಿಕಾ, ಡೆನ್ಮಾರ್ಕ್, ಜರ್ಮನಿ, ಗ್ರೀಸ್, ಇಟೆಲಿ ಮೊದಲಾದ ವಿಶ್ವದ ಸುಮಾರು 60ಕ್ಕೂ ಮಿಕ್ಕಿದ ಕಡೆಗಳಲ್ಲಿ 80ಕ್ಕೂ ಮಿಕ್ಕಿ ಸಮಕಾಲೀನ ಕಲಾಕೃತಿಗಳು ಇದರ ಭಾಗವಾಗಿ ಪ್ರದರ್ಶನಗೊಳ್ಳುತ್ತಿದ್ದು ಭಾರತದ ಹತ್ತು ಕಡೆಗಳಲ್ಲಿನ ಕಲಾಕೃತಿಗಳು ಈ ಪ್ರದರ್ಶನಕ್ಕೆ ಆಯ್ಕೆಯಾಗಿವೆ ಎಂಬುದಾಗಿ ಭಾರತದ ಕಲಾಪ್ರದರ್ಶನದ ಸಂಯೋಜಕಿ ಭಾಗ್ಯ ಅಜಯ್ ಕುಮಾರ್ ತಿಳಿಸಿದ್ದಾರೆ. ಹಾವಂಜೆಯಲ್ಲಿ ಪ್ರದರ್ಶನಗೊಳ್ಳುತ್ತಿರುವ ‘ಯಕ್ಷ’ ಮಿಶ್ರ ಮಾಧ್ಯಮದ ಕಲಾಕೃತಿಯು ಗ್ರಾಮೀಣ ಬದುಕನ್ನು ದರ್ಶಿಸುವ ಯಕ್ಷ ಕಲಾವಿದನೋರ್ವನ ಬದುಕನ್ನು ಸೆರೆಹಿಡಿದು ಪ್ರದರ್ಶನಗೊಳ್ಳುತ್ತಿದೆ. ನಿಜ ಜೀವನದ ಯಕ್ಷನನ್ನು ಬಿಂಬಿಸಿದ ಈ ಕಲಾಕೃತಿಯು ಕಾವಿ ಕಲೆಯ ಸಾಂಪ್ರದಾಯಿಕ ಸೊಗಡನ್ನು ದುಡಿಸಿಕೊಂಡು, ಗದ್ದೆಯ ಮಣ್ಣಿನ ಜೊತೆಗೆ ಕೆಮ್ಮಣ್ಣು,…
ಮಂಗಳೂರು : ಕಲ್ಕೂರ ಪ್ರತಿಷ್ಠಾನ ಇದರ ವತಿಯಿಂದ ‘ಕಾರಂತ ಹುಟ್ಟುಹಬ್ಬ’ವನ್ನು ದಿನಾಂಕ 14 ಅಕ್ಟೋಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿಶ್ರಾಂತ ಉಪ ಕುಲಪತಿಗಳಾದ ಬಿ.ಎ. ವಿವೇಕ ರೈ ಇವರಿಂದ ಪುಷ್ಪ ನಮನ, ಉಪಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರಿಂದ ಪ್ರಶಸ್ತಿ ಪ್ರದಾನ ಮತ್ತು ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಇವರಿಂದ ಕಾರಂತ ಸಂಸ್ಮರಣೆ ನಡೆಯಲಿದ್ದು, ಶಾಸಕರಾದ ಡಿ. ವೇದವ್ಯಾಸ ಕಾಮತ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ಣಾಟಕ ವಿಧಾನ ಪರಿಷತ್ತು ಸಭಾಪತಿಗಳಾದ ಬಸವರಾಜ ಹೊರಟ್ಟಿ ಇವರಿಗೆ ‘ಕಾರಂತ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತು ಸದಸ್ಯರಾದ ಐವನ್ ಡಿ.ಸೋಜ ಇವರಿಂದ ಪ್ರಬಂಧ ಸ್ಪರ್ಧೆ ಹಾಗೂ ಸಂತ ಅಲೋಶಿಯಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ಫಾ. ಜಾನ್ ಸನ್ ಪಿಂಟೋ ಎಸ್.ಜೆ. ಇವರಿಂದ ಚಿತ್ರಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದೆ.
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ ಇದರ ವತಿಯಿಂದ ಶ್ರೀಸಾಮಾನ್ಯರಿಗೆ ಪ್ರಾಚೀನ ಕನ್ನಡ ಸಾಹಿತ್ಯ ಸರಣಿ ಉಪನ್ಯಾಸ ಮಾಲಿಕೆಯ ಮೊದಲ ಕಂತು ದಿನಾಂಕ 13, 14 ಮತ್ತು 15 ಅಕ್ಟೋಬರ್ 2025ರಂದು ಮಂಗಳೂರು ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ. ದಿನಾಂಕ 13 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಂಗಳೂರು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರು ಉದ್ಘಾಟನೆ ಮಾಡಲಿದ್ದಾರೆ. ಪಂಪ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಬಿ.ಎ. ವಿವೇಕ ರೈ ಇವರು ‘ಪಂಪನ ಕಾವ್ಯಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಸಂಜೆ 6-30 ಗಂಟೆಗೆ ಕುಮಾರಿ ಶ್ರೀ ರಕ್ಷಾ ಎಸ್.ಎಚ್. ಪೂಜಾರಿ ಇವರಿಂದ ವೀಣಾ ವಾದನ ನಡೆಯಲಿದೆ. ಉಪನ್ಯಾಸದ ಬಳಿಕ ದಿನಾಂಕ 14 ಅಕ್ಟೋಬರ್ 2025ರಂದು ಶ್ರದ್ಧಾ ನಾಯರ್ಪಳ್ಳ ಮತ್ತು ಮೇಧಾ ನಾಯರ್ಪಳ್ಳ ಇವರಿಂದ ಗಮಕ ಪ್ರಸ್ತುತಿ ಹಾಗೂ ದಿನಾಂಕ 15 ಅಕ್ಟೋಬರ್ 2025ರಂದು…
ಬೆಂಗಳೂರು : ನೀನಾಸಮ್ ತಿರುಗಾಟ – 2025 ಹೊಸ ನಾಟಕಗಳೊಂದಿಗೆ ಪ್ರಾರಂಭವಾಗಲಿದ್ದು, ಮನಸ್ಸಿಗೆ ಸ್ಪರ್ಶಿಸುವ ‘ಹೃದಯದ ತೀರ್ಪು’ ಮತ್ತು ಮನನಕ್ಕೊಳಿಸುವ ‘ಅವತಾರಣಮ್ ಭಾಂತಾಲಯಮ್’ ನಾಟಕ ಪ್ರದರ್ಶನ ದಿನಾಂಕ 14 ಮತ್ತು 15 ಅಕ್ಟೋಬರ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗಶಂಕರದಲ್ಲಿ ನಡೆಯಲಿದೆ ದಿನಾಂಕ 14 ಅಕ್ಟೋಬರ್ 2025ರಂದು ಬಾನು ಮುಸ್ತಾಕ್ ಆಧಾರಿತ ‘ಹೃದಯದ ತೀರ್ಪು’ ನಾಟಕ ಪ್ರದರ್ಶನ ಡಾ. ಎಮ್. ಗಣೇಶ ರಂಗರೂಪ ಮತ್ತು ನಿರ್ದೇಶನದಲ್ಲಿ ಮತ್ತು ದಿನಾಂಕ 14 ಅಕ್ಟೋಬರ್ 2025ರಂದು ಮೂಲ ಕೃತಿ: ಜಿ. ಶಂಕರ್ ಪಿಳ್ಳೆ (ಮಲಯಾಳಂ) ಕನ್ನಡಕ್ಕೆ: ನಾ. ದಾಮೋದರ ಶೆಟ್ಟಿ ‘ಅವತಾರಣಮ್ ಭಾಂತಾಲಯಮ್’ ನಾಟಕ ಪ್ರದರ್ಶನ ಕಂಕಣ ವೆಂಕಟೇಶ್ವರ್ ಇವರ ನಿರ್ದೇಶನದಲ್ಲಿ ಪ್ರಸ್ತುತಗೊಳ್ಳಲಿದೆ. ಟಿಕೆಟ್ ದರ : ರೂ.200/- ಟಿಕೆಟ್ಗಳು ಲಭ್ಯ: bookmyshowನಲ್ಲಿ https://in.bookmyshow.com/plays/avataranam-bhrantalayam/ET00463612