Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ರಂಗ ಸಂಭ್ರಮ 2025 ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 05 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿಯವರು ಉದ್ಘಾಟಿಸುವರು. ಈ ಸಂದರ್ಭದಲ್ಲಿ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸುವರು. ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ಸಾಹಿತ್ಯ ಸೇವೆಗಾಗಿ ಪ್ರತಿಷ್ಠಿತ ‘ಪಂಪ ಸದ್ಭಾವನಾ’ ರಾಜ್ಯ ಪ್ರಶಸ್ತಿಯನ್ನು ನಿವೃತ ಲೋಕಾಯುಕ್ತ ಹಾಗೂ ನ್ಯಾಯಮೂರ್ತಿಗಳಾದ ಎನ್. ಸಂತೋಷ ಹೆಗ್ಡೆಯವರು ಪ್ರಧಾನ ಮಾಡುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ.ವಿ. ನಾಗರಾಜ್ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತ ರಾವ್ ಪಾಟೀಲ್, ನಿವೃತ್ತ ಡಿ.ಸಿ. ಡಾ. ಡಿ. ವಿಶ್ವನಾಥ್, ಡಾ. ಲಕ್ಷ್ಮೀದೇವಿ ಬೆಂಗಳೂರು, ವೀರೇಶ್ ಮುತಿನ ಮಠ, ಕೆಂಚನೂರು ಶಂಕರ್ ಉಪಸ್ಥಿತರಿರುವರು. ಡಾ. ಮಾಲತಿ ಶೆಟ್ಟಿ ಮಾಣೂರು…
ಬೆಂಗಳೂರು : ಸೈಡ್ ವಿಂಗ್ (ರಿ.) ಬೆಂಗಳೂರು ಪ್ರಸ್ತುತ ಪಡಿಸುವ ಶೈಲೇಶ್ ಕುಮಾರ್ ಎಂ.ಎಂ. ಇವರ ರಚನೆ, ನಿರ್ಮಾಣ ಮತ್ತು ನಿದೇಶನದಲ್ಲಿ ‘ನನ್ನ್ಯಾಕ್ ಹುಟ್ಸುದ್ಯೋ ನನ್ನಪ್ನೇ’ ನಾಟಕ ಪ್ರದರ್ಶನವನ್ನು ದಿನಾಂಕ 05 ಏಪ್ರಿಲ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ಸೇವಾ ಸದನದಲ್ಲಿ ಆಯೋಜಿಸಲಾಗಿದೆ. ಟಿಕೆಟ್ ದರ ರೂ.150/- ಆಗಿದ್ದು, ಹೆಚ್ಚಿನ ಮಾಹಿತಿಗಾಗಿ 9845087901 ಸಂಖ್ಯೆಯನ್ನು ಸಂಪರ್ಕಿಸಿರಿ.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗಳಲ್ಲೊಂದಾದ ‘ಸತ್ಯವತಿ ವಿಜಯರಾಘವ ಚಾರಿಟೇಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿ ಪ್ರಶಸ್ತಿ’ಗೆ ಕನ್ನಡ ಹೋರಾಟಗಾರ ಗುರುದೇವ ನಾರಾಯಣ ಕುಮಾರ ಮತ್ತು ಲೇಖಕಿ ಡಿ.ಬಿ. ರಜಿಯಾ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದದ ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಪಾರ ಗೌರವದಿಂದ ಮೈಸೂರಿನ ಡಾ. ಎ. ಪುಷ್ಪ ಅಯ್ಯಂಗಾರ್ ಅವರು ‘ಸತ್ಯವತಿ ವಿಜಯರಾಘವ ಚಾರಿಟೇಬಲ್ ಟ್ರಸ್ಟ್ ಧರ್ಮದರ್ಶಿ’ಗಳ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಇರಿಸಿದ್ದಾರೆ. ಕನ್ನಡ ನಾಡು, ನುಡಿ, ಜಲ ಕುರಿತ ಚಿಂತಕರು, ಕನ್ನಡ ಪರ ಹೋರಾಟಗಾರರು ಅಥವಾ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಇಬ್ಬರಿಗೆ ಪ್ರತಿ ವರ್ಷ ಪುರಸ್ಕಾರ ನೀಡಬೇಕೆಂಬುದು ದತ್ತಿದಾನಿಗಳ ಆಶಯ. 2024ನೆಯ ಸಾಲಿನ ಈ ಪುರಸ್ಕಾರಕ್ಕೆ…
ಪ್ರಜ್ವಲಾ ಶೆಣೈ ಕಾರ್ಕಳ ಇವರ ‘ಭರವಸೆಯ ಹೆಜ್ಜೆಗಳು’ ಎಂಬ ಕೃತಿಯು ಬದುಕಿನ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ 42 ಲೇಖನಗಳ ಸುಂದರ ಸಂಕಲನವಾಗಿದೆ. ಈ ಕೃತಿಯು ಪ್ರತಿಯೊಬ್ಬರ ದೈನಂದಿನ ಬದುಕಿನ ಅನೇಕ ಅಂಶಗಳನ್ನು ಸ್ಫುಟವಾಗಿ ಚರ್ಚಿಸುತ್ತದೆ. ಅದರಲ್ಲಿ ವ್ಯಕ್ತವಾಗುವ ಭಾವನೆಗಳು, ಯಥಾರ್ಥದ ಮೇಲಿನ ವಿಶ್ಲೇಷಣೆ ಮತ್ತು ಸುತ್ತಮುತ್ತಲಿನ ಸಾಮಾಜಿಕ-ನೈತಿಕ ಪ್ರಶ್ನೆಗಳ ಕುರಿತಾದ ಚಿಂತನೆ ಈ ಕೃತಿಯನ್ನು ಓದುಗರಿಗೆ ಹತ್ತಿರ ಮಾಡುತ್ತದೆ. ಪುಸ್ತಕದ ವಿಷಯ ಮತ್ತು ಶೈಲಿ : ಭರವಸೆಯ ಹೆಜ್ಜೆಗಳು ಪುಸ್ತಕದ ಲೇಖನಗಳು ಸರಳವಾಗಿಯೇ ಇರುವಂತಿದ್ದರೂ, ತೀವ್ರ ಅರ್ಥಭರಿತವಾಗಿವೆ. ಪ್ರತಿ ಲೇಖನವೂ ಒಂದು ವಿಶಿಷ್ಟ ಕಥೆಯನ್ನು ಹೊತ್ತಿದ್ದು, ಸಮಾಜದ ಪ್ರಬಲ ತಿರುಚುಗಳು, ವ್ಯಕ್ತಿಗಳ ಭಾವನೆಗಳು ಮತ್ತು ಜೀವನದ ಸತ್ಯಗಳ ಕುರಿತು ದರ್ಶನ ನೀಡುತ್ತದೆ. ಈ ಲೇಖನಗಳಲ್ಲಿ ಆಳವಾದ ವಿಚಾರಧಾರೆ, ನೈಜ ಅನುಭವಗಳ ಶಾಖಾ-ಪ್ರಶಾಖೆಗಳು ಮತ್ತು ಜೀವನದ ಸೂಕ್ಷ್ಮ ವೈಶಿಷ್ಟ್ಯಗಳನ್ನು ತೆರೆದಿಡುವ ಪ್ರಯತ್ನವಾಗಿದೆ. ಲೇಖನಗಳ ಶೈಲಿ ಬಹಳ ಪರಿಣಾಮಕಾರಿ ಮತ್ತು ಓದುಗರಿಗೆ ಹತ್ತಿರದ ರೀತಿಯಲ್ಲಿ ರೂಪುಗೊಂಡಿದೆ. ಪ್ರಜ್ವಲಾ ಶೆಣೈಯವರ ಬರವಣಿಗೆಯ ವಿಶೇಷತೆ ಅಂದರೆ, ಅವರು…
ಉಡುಪಿ : ಹಿರಿಯ ಕಲಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಇವರನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರನ್ನಾಗಿ ನೇಮಕ ಮಾಡಿ ಅಕಾಡೆಮಿ ಆದೇಶ ಹೊರಡಿಸಿದೆ. ಉದಯವಾಣಿ ಮಣಿಪಾಲ ಆವೃತ್ತಿಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಆಸ್ಟ್ರೋ ಮೋಹನ್ ಕಳೆದ ಮೂರುವರೆ ದಶಕಗಳಿಂದ ಸುದ್ದಿ ಹಾಗೂ ಕಲಾತ್ಮಕ ಛಾಯಾಗ್ರಹಣದಲ್ಲಿ ಸುಪ್ರಸಿದ್ಧರು. ಸುಮಾರು 750ಕ್ಕೂ ಅಧಿಕ ರಾಷ್ಟ್ರೀಯ-ಅಂತಾರಾಷ್ಟೀಯ ಪುರಸ್ಕಾರಗಳನ್ನು ಪಡೆದಿದ್ದಾರೆ. ಉಡುಪಿ – ಮಣಿಪಾಲ ಕುರಿತಂತೆ ಐದು, ಪೇಜಾವರ ಶ್ರೀ ಹಾಗೂ ಪತ್ರಿಕಾ ಛಾಯಾಗ್ರಹಣ ಕುರಿತಂತೆ ಎಂಟು ಪುಸ್ತಕಗಳು ಪ್ರಕಟವಾಗಿವೆ. ಆಂಧ್ರಪ್ರದೇಶ ಫೋಟೋಗ್ರಫಿ ಅಕಾಡೆಮಿಯೂ ಇವರ ಕೃತಿಗಳ ಕುರಿತಾಗಿ ಪುಸ್ತಕವನ್ನು ಪ್ರಕಟಿಸಿದೆ. ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕ ಸಂಸ್ಥೆಯು ಆಸ್ಟ್ರೋ ಮೋಹನ್ ಇವರನ್ನು ಅಸಿಸ್ಟೆಂಟ್ ಕಂಟ್ರಿ ಮೆಂಬರ್ಶಿಪ್ ಡೈರೆಕ್ಟರ್ ಆಗಿ ಆಯ್ಕೆಮಾಡಿಕೊಂಡಿದೆ.
ಸೊರಬ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೊರಬ ಶಿವಮೊಗ್ಗ ಜಿಲ್ಲೆ ಇದರ ವತಿಯಿಂದ ‘ಜಿಲ್ಲಾ ಮಟ್ಟದ ಯುಗಾದಿ ಕವಿಗೋಷ್ಠಿ -2025’ಯನ್ನು ದಿನಾಂಕ 06 ಏಪ್ರಿಲ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಹೆಸರನ್ನು ನೋಂದಾಯಿಸಲು 9611002416, 9632861570, 9741470173 ಮತ್ತು 9113820718 ಹಾಗೂ ಪ್ರವೇಶ ಶುಲ್ಕ ರೂ.100/- ಆಗಿದ್ದು, ಫೋನ್ ಪೇ ಸಂಖ್ಯೆ 9980571552 ಸಂಪರ್ಕಿಸಿರಿ.
ಕೋಲಾರ : ಆಕೃತಿ ಪುಸ್ತಕ, ಜಂಗಮ ಕಲೆಕ್ವಿವ್, ಬೀ ಕಲ್ಚರ್, ಬಯಲು ಬಳಗ, ತಮಟೆ ಮೀಡಿಯಾ, ಬುಡ್ಡಿದೀಪ ಇವರ ಸಹಯೋಗದಲ್ಲಿ ಹುಸೇನಜ್ಜನ ನೆನಪಿನಲ್ಲಿ ಕೋಟಗಾನಹಳ್ಳಿ ರಾಮಯ್ಯನವರ ‘ದರ್ಗಾ ಮಾಳದ ಚಿತ್ರಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 08 ಏಪ್ರಿಲ್ 2025ರಂದು ಸಂಜೆ 4-30 ಗಂಟೆಗೆ ಕೋಲಾರ ಪಾಪರಾಜನಹಳ್ಳಿ ಬುಡ್ಡಿದೀಪ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಡಾ. ನೆಲ್ಲುಕುಂಟೆ ವೆಂಕಟೇಶಯ್ಯ ಮತ್ತು ದೀಪಾ ಧನರಾಜ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕೆ. ಚಂದ್ರಶೇಖರ್ ಇವರ ನಿರ್ದೇಶನದಲ್ಲಿ ಜಂಗಮ ಕಲೆಕ್ವಿವ್ ತಂಡದಿಂದ ‘ಪಂಚಮ ಪದ’ ಪ್ರಸ್ತುತಗೊಳ್ಳಲಿದೆ.
ಮಂಗಳೂರು : ಸಪ್ತಕ ಬೆಂಗಳೂರು ಇದರ ವತಿಯಿಂದ ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಮತ್ತು ರಾಮಕೃಷ್ಣ ಮಠ ಮಂಗಳೂರು ಇವರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಪಂಡಿತ್ ಓಂಕಾರ ಗುಲ್ವಾಡಿಯವರಿಗೆ ಸನ್ಮಾನ ‘ಸಂಗೀತ್ ಸಮ್ಮಾನ್’ ಕಾರ್ಯಕ್ರಮವನ್ನು ದಿನಾಂಕ 13 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದೆ. ಸಂಜೆ 5-00 ಗಂಟೆಗೆ ನಡೆಯಲಿರುವ ಅಂಕುಶ್ ನಾಯಕ್ ಮತ್ತು ಕಾರ್ತಿಕ್ ಭಟ್ ಇವರ ಸಿತಾರ್ ಕೊಳಲು ಜುಗಲ್ ಬಂದಿಗೆ ಧಾರವಾಡದ ಹೇಮಂತ್ ಜೋಶಿ ತಬಲಾ ಸಾಥ್ ನೀಡಲಿದ್ದಾರೆ. 6-00 ಗಂಟೆಗೆ ಪಂಡಿತ್ ವೆಂಕಟೇಶ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ. 6-30 ಗಂಟೆಗೆ ಧಾರವಾಡದ ಪಂಡಿತ್ ವೆಂಕಟೇಶ್ ಕುಮಾರ್ ಇವರ ಹಾಡುಗಾರಿಕೆಗೆ ಪಂಡಿತ್ ಓಂಕಾರ ಗುಲ್ವಾಡಿ ತಬಲಾ ಹಾಗೂ ಮುಂಬೈಯ ಪಂಡಿತ್ ಸುಧೀರ್ ನಾಯಕ್ ಸಂವಾದಿನಿ ನುಡಿಸಲಿದ್ದಾರೆ.
ಮಂಗಳೂರು: ಗಾನ ನೃತ್ಯ ಅಕಾಡೆಮಿ ಆಶ್ರಯದಲ್ಲಿ ಸಂಸ್ಥೆಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯರಿಂದ ‘ಪ್ರೇರಣಾ’ ಭರತನಾಟ್ಯ ಕಾರ್ಯಕ್ರಮ ದಿನಾಂಕ 29 ಮಾರ್ಚ್ 2025ರಂದು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಎಲ್. ಸಿ. ಆರ್. ಐ. ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ವಾನ್ ಚಂದ್ರಶೇಖರ್ ನಾವಡ ಮಾತನಾಡಿ “ಭಾರತೀಯ ಪರಂಪರೆಯನ್ನು ಉಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕ. ಇಂತಹ ಪ್ರತಿಭೆಗಳನ್ನು ರೂಪಿಸುವಲ್ಲಿ ಗುರುಗಳ ಹಾಗೂ ಹೆತ್ತವರ ಪಾತ್ರ ಮಹತ್ವದ್ದು” ಎಂದು ತಿಳಿಸಿದರು. ಸಂಸ್ಥೆಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಇವರು ಪ್ರಾಸ್ತಾವಿಕ ಭಾಷಣದ ಮೂಲಕ ಪ್ರೇರಣಾ ಕಾರ್ಯಕ್ರಮದ ಉದ್ದೇಶವನ್ನು ತಿಳಿಸುತ್ತಾ ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರೇಕ್ಷಕರ ಪಾತ್ರವನ್ನು ಉಲ್ಲೇಖಿಸಿದರು. ಬೆಂಗಳೂರು ದೂರದರ್ಶನದ ಗ್ರೇಡೆಡ್ ಕಲಾವಿದರಾಗಿ ಆಯ್ಕೆಗೊಂಡಿರುವ ತ್ವಿಷಾ ಶೆಟ್ಟಿ, ಮೈತ್ರೇಯಿ ನಾವಡ ಹಾಗೂ ದಿಶಾ ಗಿರೀಶ್ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಹಾಡುಗಾರಿಕೆಯಲ್ಲಿ ಗುರು ವಿದ್ಯಾಶ್ರೀ ರಾಧಾಕೃಷ್ಣ, ನಟುವಾಂಗದಲ್ಲಿ ಅನಂತಕೃಷ್ಣ, ಮೃದಂಗದಲ್ಲಿ ಬಾಲಚಂದ್ರ ಭಾಗವತ್ ಹಾಗೂ ಕೊಳಲಿನಲ್ಲಿ ನಿತೀಶ್ ಅಮ್ಮಣ್ಣಾಯ ಸಹಕರಿಸಿದರು. ಸಂಸ್ಥೆಯು ಕಾರ್ಯದರ್ಶಿ…
ಮಂಗಳೂರು: ಕೇಂದ ಸರ್ಕಾರದ ಸಂಸ್ಕೃತಿ ಸಚಿವಾಲಯದಡಿ ಬರುವ ಸಾಹಿತ್ಯ ಅಕಾಡೆಮಿಯ ಪಶ್ಚಿಮ ವಲಯ ಪ್ರಾದೇಶಿಕ ಭಾಷಾ ಸಲಹಾ ಸಮಿತಿಗೆ ಮ೦ಗಳೂರಿನ ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್ ನೇಮಕಗೊಂಡಿದ್ದಾರೆ. ಈ ವಲಯದಲ್ಲಿ ಗುಜರಾತಿ, ಮರಾಠಿ, ಸಿಂಧಿ ಮತ್ತು ಕೊಂಕಣಿ ಭಾಷೆಳಿದ್ದು, ಮೆಲ್ವಿನ್ ಅವರು ಕೊಂಕಣಿ ಭಾಷಾ ಸಲಹಾ ಸಮಿತಿ ಮುಖ್ಯಸ್ಥರಾಗಿದ್ದಾರೆ. ಕವಿತಾ ಟ್ರಸ್ಟ್ ಇದರ ಸ್ಥಾಪಕರಾಗಿರುವ ಮೆಲ್ವಿನ್ ಕೊಂಕಣಿ ಕಾವ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಆರು ಕವನ ಸಂಕಲನಗಳು, ಎರಡು ಪ್ರಬಂಧ ಸಂಕಲನಗಳು, ಮೂರು ಭಾಷಾಂತರಗೊಂಡ ಕೃತಿಗಳು, ಆರು ಸಂಪಾದಿತ ಕೃತಿಗಳು, ಒಂದು ನೀಳ್ಗತೆ ಸೇರಿ ಸುಮಾರು 34 ಕೃತಿಗಳನ್ನು ಪ್ರಕಟಿಸಿದ್ದಾರೆ. ಕೊಂಕಣಿ ಕಾವ್ಯಕ್ಕೆ ಸಂಬಂಧಿಸಿದಂತೆ ಸುಮಾರು 220 ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಇವರ ಕೊಂಕಣಿ ಹಾಡುಗಳ ಧ್ವನಿ ಸುರುಳಿಗಳೂ ಬಿಡುಗಡೆಗೊಂಡಿವೆ.