Author: roovari

ಮೂಡುಬಿದಿರೆ: ಮೂಡುಬಿದಿರೆಯ ಕನ್ನಡ ಭವನದ ತುಳುಕೂಟದ ಕಛೇರಿಯಲ್ಲಿ ತಿಂಗಳ ಸಭೆ ಹಾಗೂ ಸರಣಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ದಿನಾಂಕ 07-10-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ಸಂಘಟಕರೂ ಆಗಿರುವ ಎಂ. ದೇವಾನಂದ ಭಟ್ “ ತುಳುನಾಡಿನ ಯಕ್ಷಗಾನ” ಕುರಿತು ಮಾತನಾಡುತ್ತಾ ರಂಗ ಪ್ರವೇಶಕ್ಕೆ ಮುನ್ನ ಯಕ್ಷಗಾನ ಕಲೆಯಲ್ಲಿರುವ ವಿವಿಧ ಹಂತಗಳನ್ನು ಅವರು ಸಮಗ್ರವಾಗಿ ವಿವರಿಸಿದರು. ಕಲಾವಿದನಿಗೆ ನಾಟ್ಯ, ಮಾತುಗಾರಿಕೆ ಮತ್ತು ಪುರಾಣ ಜ್ಞಾನದ ಜೊತೆ ಬಣ್ಣಗಾರಿಕೆಯ ಬಗ್ಗೆಯೂ ಸಂಪೂರ್ಣ ತಿಳುವಳಿಕೆ ಇರಬೇಕಾಗುತ್ತದೆ. “ಯಕ್ಷಗಾನವು ಸಮೃದ್ಧ ಹಾಗೂ ಪರಿಪೂರ್ಣವಾದ ಕಲೆಯಾಗಿದ್ದು ತುಳು ಭಾಷೆಗೂ ಯಕ್ಷಗಾನದ ಕೊಡುಗೆ ಗಣನೀಯವಾಗಿದೆ.”ಎನ್ನುತ್ತಾ ಬೇರೆ ಬೇರೆ ಪಾತ್ರಗಳಿಗೆ ಬಳಸುವ ಬಣ್ಣಗಾರಿಕೆ ಮತ್ತು ವಸ್ತ್ರ ವಿನ್ಯಾಸದ ಬಗ್ಗೆ ವಿವರಣೆ ನೀಡಿದರು. ವಿಶೇಷವಾಗಿ ಬಣ್ಣಗಾರಿಕೆ ಮತ್ತು ವೇಷ ಭೂಷಣಗಳ ಬಗ್ಗೆ ವಿವರಿಸಿದರು. ಕೆಲವು ಪ್ರಸಂಗಗಳ ಆಯ್ದ ತುಳು, ಕನ್ನಡ ಪದ್ಯಗಳನ್ನು ಭಾಗವತರಾದ ಶಿವಪ್ರಸಾದ್ ಭಟ್ ಅವರು ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ದೇವಾನಂದ ಭಟ್ ಸಹಕರಿಸಿದರು. ಸಂವಾದ ಕಾರ್ಯಕ್ರಮದ ಕೊನೆಯಲ್ಲಿ…

Read More

ಪುತ್ತೂರು : ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ. ಕೋಟ ಶಿವರಾಮ ಕಾರಂತರ ಬಾಲವನ ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಇದರ ವತಿಯಿಂದ ಕಡಲ ತಡಿಯ ಭಾರ್ಗವ, ಜ್ಞಾನಪೀಠ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ ಮತ್ತು ‘ಕಾರಂತ ಬಾಲವನ ಪ್ರಶಸ್ತಿ’ ಪ್ರದಾನ ಸಮಾರಂಭ ಪುತ್ತೂರು ಪರ್ಲಡ್ಕದ ಬಾಲವನದಲ್ಲಿ ದಿನಾಂಕ 10-10-2023ರಂದು ನಡೆಯಿತು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಮಟ್ಟದ ವರ್ಣ ಚಿತ್ರಕಲಾವಿದ ಕೆ. ಚಂದ್ರನಾಥ ಆಚಾರ್ಯ ಅವರಿಗೆ ‘ಕಾರಂತ ಬಾಲವನ ಪ್ರಶಸ್ತಿ’ ಪ್ರದಾನ ಮಾಡಿ ಆಚಾರ್ಯ ದಂಪತಿಗಳಿಗೆ ಶಾಲು ಹೊದಿಸಿ, ಹಾರ ಹಾಕಿ ಪೇಟವಿರಿಸಿ, ಫಲಕ, ಕಾರಂತರ ಪುತ್ಥಳಿ, ಫಲಪುಷ್ಪಗಳೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್‌ ರೈ, “ವಿಶ್ವಕ್ಕೇ ಸಾಧಕರಾಗಿ ಗುರುತಿಸಿಕೊಂಡ ಡಾ. ಶಿವರಾಮ ಕಾರಂತರ ಕರ್ಮಭೂಮಿ ಬಾಲವನ ಇನ್ನಷ್ಟು ಅಭಿವೃದ್ಧಿಯಾಗಬೇಕು. ಕಾರಂತರ ಒಡನಾಡಿಗಳು, ಮುಂದಿನ ಪೀಳಿಗೆಗೆ ಕಾರಂತರ…

Read More

ಯಕ್ಷಗಾನವು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಹುಟ್ಟಿಕೊಂಡ ಸಾಂಪ್ರದಾಯಿಕ ನೃತ್ಯ ನಾಟಕ ರೂಪವಾಗಿದೆ. ಪ್ರಾಚೀನ ಕಾಲದಿಂದಲೂ ಯಕ್ಷಗಾನವು ಶ್ರೀಮಂತ ಮತ್ತು ರೋಮಾಂಚಕ ಕಲಾ ಪ್ರಕಾರವಾಗಿ ವಿಕಸನಗೊಂಡಿದೆ. ಅದು ತನ್ನ ವರ್ಣರಂಜಿತ ವೇಷಭೂಷಣಗಳು, ಲಯಬದ್ಧ ಸಂಗೀತ ಮತ್ತು ಕ್ರಿಯಾತ್ಮಕ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಹೀಗೆ ಈ ಶ್ರೀಮಂತ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ನೀಡುತ್ತಿರುವ ಹಿರಿಯ ಕಲಾವಿದರು ಪೆರ್ಲ ಜಗನ್ನಾಥ ಶೆಟ್ಟಿ. ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಯ ಪಟ್ಲದಲ್ಲಿ 21.10.1966ರಂದು ಮಂಜಪ್ಪ ಶೆಟ್ಟಿ ಹಾಗೂ ಕಮಲಾ ಎಂ ಶೆಟ್ಟಿ ಇವರ ಮಗನಾಗಿ ಜನನ.  ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ನಾಟ್ಯಾಭ್ಯಾಸವನ್ನು ನಾಟ್ಯ ಗುರುಗಳು ಕುಂಞರಾಮ ಮಣಿಯಾಣಿ (ಪ್ರಥಮ ಗುರುಗಳು)ಯವರಿಂಧ ಕಲಿತು ನಂತರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್, ಕೆ.ಗೋವಿಂದ ಭಟ್ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿರುತ್ತಾರೆ. ಒಡನಾಡಿ ಹಿರಿಯರು ಗುರು ಸ್ವರೂಪರೆನಿಸಿದವರು ತೆಕ್ಕಟ್ಟೆ ಆನಂದ ಮಾಸ್ತರರು. ಯಕ್ಷಗಾನ ರಂಗದಲ್ಲಿ ಸರ್ವ ಸಾಧಾರಣ ಎಲ್ಲಾ ವೇಷಗಳು ಮಾಡಿರುವ ಅನುಭವ ಪೆರ್ಲ ಜಗನ್ನಾಥ ಶೆಟ್ಟಿ…

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ಹಾಗೂ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಕುಂಜಿಬೆಟ್ಟು ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಕವಿಗೋಷ್ಠಿಯನ್ನು ದಿನಾಂಕ 21-10-2023ರಂದು ಶನಿವಾರ ಬೆಳಗ್ಗೆ 11:30ಕ್ಕೆ ಉಡುಪಿ ಕುಂಜಿಬೆಟ್ಟು ಇಲ್ಲಿರುವ ಯು.ಪಿ.ಎಂ.ಸಿ.ಯ ಉಪೇಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಆಶಾ ಕುಮಾರಿಯವರು ಕವಿಗೋಷ್ಠಿಯ ಉದ್ಘಾಟನೆಯನ್ನು ಮಾಡಲಿದ್ದು, ಸಭಾಧ್ಯಕ್ಷತೆಯನ್ನು ಕಸಾಪ ಉಡುಪಿ ತಾಲೂಕು ಅಧ್ಯಕ್ಷರಾದ ಶ್ರೀ ರವಿರಾಜ್ ಹೆಚ್.ಪಿ. ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಸಾಪ ಉಡುಪಿ ಜಿಲ್ಲೆಯ ಕೋಶಾಧ್ಯಕ್ಷರಾದ ಮನೋಹರ್ ಮತ್ತು ಕವಿಗೋಷ್ಠಿಯ ಸಂಚಾಲಕರಾದ ಉಪನ್ಯಾಸಕ ರಾಘವೇಂದ್ರ ಜಿ.ಜಿ. ಭಾಗವಹಿಸಲಿದ್ದು, ಕವಿಗೋಷ್ಠಿಯ ಆಶಯ ನುಡಿಯನ್ನು ಕವಯಿತ್ರಿ ಶ್ರೀಮತಿ ಪೂರ್ಣಿಮಾ ಸುರೇಶ್ ನಿರ್ವಹಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಉಡುಪಿಯ ಕವಿ ಹಾಗೂ ರಂಗನಟ ರಾಜೇಶ್ ಭಟ್ ಪಣಿಯಾಡಿ ವಹಿಸಲಿದ್ದು, ಸುಮಾರು ಹನ್ನೊಂದು ಮಂದಿ ಯುವ ಕವಿಗಳು ಭಾಗವಹಿಸಲಿದ್ದಾರೆ ಎಂದು ಕ.ಸಾ.ಪ. ಉಡುಪಿ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಹಾಗೂ ರಂಜಿನಿ ವಸಂತ್ ತಿಳಿಸಿರುತ್ತಾರೆ.

Read More

ಮೈಸೂರು : ಮಂಗಳೂರಿನ ‘ಭರತಾಂಜಲಿ’ ಪ್ರಸ್ತುತಪಡಿಸುವ ‘ನೃತ್ಯ ಲಾಲಿತ್ಯ’ ಭರತನಾಟ್ಯ ಕಾರ್ಯಕ್ರಮವು ಮೈಸೂರು ದಸರಾ ಉತ್ಸವದ ಅಂಗವಾಗಿ ದಿನಾಂಕ 21-10-2023ರಂದು ಮೈಸೂರಿನ ಜಗನ್ಮೋಹನ ಪ್ಯಾಲೇಸ್ ಆವರಣದಲ್ಲಿ ನಡೆಯಲಿದೆ. ವಿದುಷಿ ಪ್ರತಿಮಾ ಶ್ರೀಧರ್ ಇವರ ನಿರ್ದೇಶನ ಮತ್ತು ನೃತ್ಯ ಸಂಯೋಜನೆ ಹಾಗೂ ಗುರು ಶ್ರೀಧರ್ ಹೊಳ್ಳ ಇವರ ಸಲಹೆ ಮತ್ತು ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಭಾರತಾಂಜಲಿಯ ನಿರ್ದೇಶಕರ ಬಗ್ಗೆ :  ವಿದುಷಿ ಪ್ರತಿಮಾ ಶ್ರೀಧರ್ ಇವರು 6ನೇ ವಯಸ್ಸಿನ ಎಳವೆಯಲ್ಲಿ ಕದ್ರಿಯ ನೃತ್ಯಗುರು ಯು.ಎಸ್. ಕೃಷ್ಣರಾವ್ ಇವರಲ್ಲಿ ನೃತ್ಯಭ್ಯಾಸ ಮಾಡಿ ಮುಂದೆ ಕರ್ನಾಟಕ ಕಲಾಶ್ರೀ ಪುರಸ್ಕೃತೆ ಗುರು ವಿದುಷಿ ಶ್ರೀಮತಿ ಕಮಲಾ ಭಟ್ ಇವರಲ್ಲಿ 17 ವರ್ಷಗಳ ಸತತ ಅಧ್ಯಯನದ ನಡೆಸಿದರು. ಇದರ ಫಲವಾಗಿ ಪ್ರತಿಮಾ ಅವರಿಗೆ 1985-86ರ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂ ಕ್. 1990-91ರಲ್ಲಿ ಸೀನಿಯರ್ ವಿಭಾಗ ಮತ್ತು 1994-95ರಲ್ಲಿ ವಿದ್ವತ್ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದು ಇವರ ಕಲಾ ಸಾಧನೆಗೆ ಹಿಡಿದ…

Read More

ಉಡುಪಿ : ಭಾವನಾ ಫೌಂಡೇಷನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇವರು ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘ (ರಿ.) ಉಡುಪಿ ಇವರ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ‘ಸಿಂಧೂರ’ ಕಾವಿಕಲೆಯಲ್ಲಿ ನವದುರ್ಗೆಯರ ಸಾಕ್ಷಾತ್ಕಾರ ಪ್ರದರ್ಶನವು ದಿನಾಂಕ 20-10-2023ರಂದು ಉಡುಪಿಯ ಕುಂಜಿಬೆಟ್ಟು ಇಲ್ಲಿನ  ಶ್ರೀ ಶಾರದಾ ಕಲ್ಯಾಣ ಮಂಟಪದ ಕೆ. ಆನಂದ ರಾವ್ ಹಾಲ್ ಗ್ಯಾಲರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಕಲಾವಿದ ಡಾ. ಜನಾರ್ದನ ರಾವ್ ಹಾವಂಜೆಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವಾದ  ‘ಸಿಂಧೂರ’ವನ್ನು ಕಾರ್ಪೋರೇಶನ್ ಬ್ಯಾಂಕಿನ ನಿವೃತ್ತ ಡಿ.ಜಿ.ಎಂ. ಆದ ಶ್ರೀ ಸಿ.ಎಸ್.ರಾವ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿಯ ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀ ಗಣೇಶ್ ಹೆಬ್ಬಾರ್ ಹಾಗೂ  ಭಾವನಾ ಫೌಂಡೇಶನ್ ಹಾವಂಜೆಯ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್ ಭಾಗವಹಿಸಲಿರುವರು. ಉಡುಪಿಯ ಶ್ರೀ ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಕೆ.ಮಂಜುನಾಥ ಹೆಬ್ಬಾ‌ರ್ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗುರು ಹಾವಂಜೆ ಮಂಜುನಾಥಯ್ಯ ಹಾಗೂ ವಿದುಷಿ ಅಕ್ಷತಾ ವಿಶು ರಾವ್‌ ಇವರಿಂದ “ಶ್ರೀ…

Read More

ಹೊಸಕೋಟೆ : ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ ತನ್ನ ಪ್ರತಿ ತಿಂಗಳ ಎರಡನೇ ಶನಿವಾರದ ಸರಣಿ ನಾಟಕ ಪ್ರದರ್ಶನ “ರಂಗಮಾಲೆ” – 75ರ ಅಮೃತ ಮಹೋತ್ಸವ ಸಮಾರಂಭದ ಮೂರು ದಿನಗಳ ರಂಗ ಸಂಭ್ರಮ – ಸೋಮವಾರ ದಿನಾಂಕ 16-10-2023ರಂದು ಸಮಾರೋಪಗೊಂಡಿತು. ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ಪ@ ಪಾಪಣ್ಣ ಕಾಟಂ ನಲ್ಲೂರ ಇವರ  ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಂ. ಪೂ ತಾಲ್ಲೂಕು ಜಿ. ಪಂ.ಕಾ.ನಿ ಅಭಿಯಂತರರಾದ ವಸಂತರವರು ಮಾತನಾಡಿ “ಕೇವಲ ಜನರ ಸಹಕಾರದಿಂದ ನಡೆಯುವ ಈ ರಂಗ ಕಾರ್ಯ ಬಲು ಅಪರೂಪ. ಜೊತೆಗೆ ಸಭಿಕರೆಲ್ಲರಿಗೂ ಉಚಿತ ದಾಸೋಹ ಮತ್ತು ಜಾಗೃತಿಗಳ ಮೇಳ ನಡೆಸುವ ‘ಜನಪದರು’ ತಂಡದ ಕಾರ್ಯ ಅಭಿನಂದನಾರ್ಹ” ಎಂದರು. ಇದೇ ಸಂದರ್ಭದಲ್ಲಿ ರಂಗ ಮಾಲೆ ಹಾಗೂ ರಂಗ ಮಂದಿರದ ನಿರ್ಮಾಣಕ್ಕೆ ಸಹಕಾರ ನೀಡಿದ ಮಹನೀಯರು, ಕಲಾವಿದರು, ತಂತ್ರಜ್ಞರು ಹಾಗೂ ದಾಸೋಹಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದೊಡ್ಡಬನಹಳ್ಳಿ ಗ್ರಾ.ಪಂ.ಅಧ್ಯಕ್ಷ ಅನಿಲ್ ಕುಮಾರ ಅತಿಥಿಯಾಗಿ ಭಾಗವಹಿಸಿದರು. ಪದಾಧಿಕಾರಿಗಳಾದ ಸಿದ್ದೇಶ್ವರ ನನಸು ಮನೆ. ಜಗದೀಶ್…

Read More

ಬ್ರಹ್ಮಾವರ : ಬೈಕಾಡಿಯ ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆಯು ಕನ್ನಡ ರಾಜ್ಯೋತ್ಸವದ ಸಂಭ್ರಮಾಚಾರಣೆ ಪ್ರಯುಕ್ತ ‘ನುಡಿ ಚಿತ್ತಾರ -2023’ ಮಕ್ಕಳಿಗಾಗಿ ಕಥೆ ಹೇಳುವ ಸ್ಪರ್ಧೆ ಮತ್ತು ಸಾರ್ವಜನಿಕರಿಗಾಗಿ ಛದ್ಮವೇಷ ಸ್ಪರ್ಧೆಯನ್ನು (ವಿಷಯ : ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿ) ಆಯೋಜಿಸುತ್ತಿದೆ. ಸ್ಪರ್ಧೆಗಳು ದಿನಾಂಕ 05-11-2023ರಂದು ಬ್ರಹ್ಮಾವರದ ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಕಥೆ ಹೇಳುವ ಸ್ಪರ್ಧೆಯ ನಿಯಮ ನಿಬಂಧನೆಗಳು : > 8ರಿಂದ 14 ವರ್ಷದ ಒಳಗಿನ ಮಕ್ಕಆಗೆ ಮಾತ್ರ ಅವಕಾಶ. ವೈಯಕ್ತಿಕ ವಿಭಾಗ ಮಾತ್ರ. > ಪ್ರವೇಶ ಉಚಿತ. > ಕಡ್ಡಾಯವಾಗಿ ಕನ್ನಡದಲ್ಲೇ ಕಥೆ ಹೇಳತಕ್ಕದ್ದು. > ಸಮಯಮಿತಿ ಗರಿಷ್ಠ 5 ನಿಮಿಷ > ಕಥೆಯ ಆಯ್ಕೆ, ಸ್ಪಷ್ಟತೆ, ಪ್ರಸ್ತುತಿ ಹಾಗೂ ಒಟ್ಟು ಪರಿಣಾಮ ಇವು ಮುಖ್ಯವಾಗಿ ಪರಿಗಣಿಸಲ್ಪಡುವ ಅಂಶಗಳು. > ನೋಂದಾವಣೆ ಕಡ್ಡಾಯ. ಸೀಮಿತ ಅವಕಾಶವಿದ್ದು ಮೊದಲು ನೋಂದಾಯಿಸಿದವರಿಗೆ ಆದ್ಯತೆ. > ತೀರ್ಪುಗಾರರ ತೀರ್ಮಾನವೇ ಅಂತಿಮ. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಪ್ರಥಮ ರೂಪಾಯಿ 2,000/-,…

Read More

ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇವರು ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ಆಯೋಜಿಸಿದ ‘ವಿಶ್ವಕರ್ಮ ಕಲಾ ಸಿಂಚನ 2023’ ಕಾರ್ಯಕ್ರಮವು ದಿನಾಂಕ 08-10-2023ರ ಭಾನುವಾರ ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಸೇನಾಧಿಕಾರಿ ಬೃಜೇಶ್ ಚೌಟ “ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಜಗತ್ತೇ ಭಾರತದತ್ತ ಚಿತ್ತಹರಿಸುತ್ತಿದೆ. ದೇಶವು ಮತ್ತೆ ವಿಶ್ವಗುರುವಿನ ಸ್ಥಾನಕ್ಕೆ ಏರಬೇಕಾದರೆ ನಮ್ಮ ಕಲೆ ಸಂಸ್ಕೃತಿ, ಸಂಸ್ಕಾರ ಗತವೈಭವಕ್ಕೆ ಮರಳಬೇಕು. ಈ ನಿಟ್ಟಿನಲ್ಲಿ ವಿಶ್ವಕರ್ಮ ಸಮಾಜಕ್ಕೆ ವಿಶೇಷ ಜವಾಬ್ದಾರಿ ಇದೆ. ಹಲವು ದಾಳಿಗಳ ಹೊರತಾಗಿಯೂ ಸನಾತನ ಭಾರತೀಯ ನಾಗರೀಕತೆ ಮೂಲಸತ್ವವನ್ನು ಉಳಿಸಿಕೊಂಡು ಜಗತ್ತೇ ಗುರುತಿಸುವಂತೆ ಬೆಳೆದಿದೆ. ಇದರ ಕಲೆ, ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ವಿಶ್ವಕರ್ಮರು. ಜನ ಜೀವನ, ದೇಶ ದೇಶಗಳ ನಡುವಿನ ಸಂಬಂಧಗಳು ಮತ್ತು ಸಂಸ್ಕೃತಿಗಳು ಬದಲಾಗಿವೆ. ಕಲೆಯ ವಾರಸುದಾರರಾದ ವಿಶ್ವಕರ್ಮರು ಅವುಗಳನ್ನು ಹಂಚಿ ಕೊಂಡು, ಇನ್ನಷ್ಟು ವಿಸ್ತರಿಸಿ ದೇಶದ ವೈಭವವನ್ನು ಮತ್ತಷ್ಟು ಎತ್ತರಕ್ಕೆ ಏರಿಸಬೇಕು”…

Read More

ಬ್ರಹ್ಮಾವರ : ಶ್ರೀ ದಶಾವತಾರ ಯಕ್ಷ ಶಿಕ್ಷಣ ಕೇಂದ್ರ (ರಿ) ಬ್ರಹ್ಮಾವರ ಇದರ ನಾಲ್ಕನೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 15-10-2023 ರಂದು ಬ್ರಹ್ಮಾವರ ಸಾಲಿಕೇರಿಯ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಾಲಿಕೇರಿ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮುಕ್ತೇಸರರಾದ ಎಸ್. ಸುರೇಶ್ ಶೆಟ್ಟಿಗಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಸವ್ಯಸಾಚಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಉಪನ್ಯಾಸಕ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾದ ಕೋಟ ಸುಜಯೀಂದ್ರ ಹಂದೆ “ಜಗತ್ತಿನ ಶ್ರೀಮಂತ ಕಲೆ ಯಕ್ಷಗಾನ. ಯಕ್ಷಗಾನದ ಈ ಶ್ರೀಮಂತಿಕೆಗೆ ಅದರದೇ ಆದ ಅನನ್ಯತೆಯೊಂದು ಕಾರಣವಾದರೆ, ಮತ್ತೊಂದು ಕಾರಣ ತಮ್ಮ ಮನೆ, ಸಂಸಾರದಿಂದ ದೂರವುಳಿದು ಸರಿಯಾದ ನಿದ್ದೆ ಮುದ್ದೆಯಿಲ್ಲದೆ ರಂಗವನ್ನು ಸಂಪನ್ನಗೊಳಿಸಿದ ಹಿರಿಯ ಕಲಾವಿದರು. ಆಧುನಿಕ ಸೌಲಭ್ಯಗಳಿಲ್ಲದ ಆ ಕಾಲದಲ್ಲೂ ಕಲೆಯ ಮೇಲಿರುವ ಅವರೆಲ್ಲರ ಶ್ರದ್ಧಾ ಭಕ್ತಿಯ ರಸಪಾಕವೇ ಯಕ್ಷಗಾನದ ಹಿರಿಮೆ. ಹಾಗಾಗಿ ಇಂದಿನ ಕಲಾವಿದರಿಗೆ ಸಿಕ್ಕ ಯಾವುದೇ ಪ್ರಶಸ್ತಿ, ಪುರಸ್ಕಾರ ಅರ್ಪಿತವಾಗಬೇಕಾದುದು ಅಂದಿನ ಮೇರು…

Read More