Author: roovari

ಪುತ್ತೂರು : ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ರೋಟರಿ ಕ್ಲಬ್ ಪುತ್ತೂರು ಯುವ ಇದರ ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇವರ ಸಂಯೋಜನೆಯಲ್ಲಿ ಸುವರ್ಣ ಸಂಭ್ರಮ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಮಹನೀಯರನ್ನು ನೆನಪಿಸುವ ಸಲುವಾಗಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ರಾಜ್ಯೋತ್ಸವ ಕವಿಗೋಷ್ಠಿಯು ದಿನಾಂಕ 05-11-2023ರ ಆದಿತ್ಯವಾರ ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ಪೂರ್ವಾಹ್ನ ಘಂಟೆ 10.00ರಿಂದ ನಡೆಯಲಿದೆ. ಈ ಕವಿಗೋಷ್ಠಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಕವನಗಳನ್ನು ಮಾತ್ರ ವಾಚನ ಅಥವಾ ಗಾಯನ ಮಾಡಲು ಅವಕಾಶವಿದ್ದು, ಗಾಯನದಲ್ಲಿ ಕರೋಕೆ ಉಪಯೋಗಿಸಲು ಅವಕಾಶವಿಲ್ಲ. ಉತ್ತಮ ಗಾಯನ /ವಾಚನ ಮಾಡಿದವರಿಗೆ  ಪುಸ್ತಕ ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು. ಭಾಗವಹಿಸುವ ಪ್ರತಿಯೊಬ್ಬ ಕವಿಗಳಿಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ. ಆಸಕ್ತ ಗಾಯಕರು/…

Read More

ಬೆಂಗಳೂರು : ಕರ್ಣಾಟಕ ಯಕ್ಷಧಾಮ ಪ್ರಸ್ತುತ ಪಡಿಸುವ ‘ನೃತ್ಯೋಲ್ಲಾಸ – ಯಕ್ಷವಿಲಾಸ’ದಲ್ಲಿ ಕೂಚುಪುಡಿ ನರ್ತನ, ಸಭಾವಂದನ ಮತ್ತು ಯಕ್ಷಗಾನ ಪ್ರದರ್ಶನವು ದಿನಾಂಕ 29-10-2023 ಭಾನುವಾರ ಸಂಜೆ ಗಂಟೆ 3ಕ್ಕೆ ಬೆಂಗಳೂರಿನ ಚಾಮರಾಜ ಪೇಟೆಯ ಉದಯಭಾನು ಕಲಾ ಸಂಘದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಡಾ. ಪಿ. ಸದಾನಂದ ಮಯ್ಯ, ನಾಗರಾಜ ಉಪಾಧ್ಯಾಯ ಬಿ., ಪಿ. ನಾರಾಯಣ ಹೇರ್ಳೆ, ಎಮ್. ಸುಧೀಂದ್ರ ಹೊಳ್ಳ, ಎಸ್‌. ಪ್ರದೀಪ ಕುಮಾರ ಕಲ್ಕೂರ, ಗೋಪಾಲಕೃಷ್ಣ ಸೋಮಯಾಜಿ, ಜಿ. ವೆಂಕಟರಮಣ ಸೋಮಯಾಜಿ, ಎಮ್. ಸುಂದರೇಶ ಹೊಳ್ಳ, ರತ್ನಾಕರ ಜೈನ್ ಮಂಗಳೂರು ಇವರ ಗೌರವ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣಮೂರ್ತಿ ಐತಾಳ ದ್ವಾರಕ ಮತ್ತು ಶ್ರೀಮತಿ ಎಮ್. ರಾಜಶ್ರೀ ನಾಗರಾಜ ಹೊಳ್ಳ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಶ್ರೀಮತಿ ಎಮ್. ರಾಜಶ್ರೀ ನಾಗರಾಜ ಹೊಳ್ಳ ಇವರಿಂದ ಕೂಚುಪುಡಿ ನೃತ್ಯ ಪ್ರದರ್ಶನ ನಡೆಯಲಿದೆ. ಯಕ್ಷ ಕಣ್ಮಣಿಗಳಾದ ಸುಬ್ರಾಯ ಹೆಬ್ಬಾರ, ಅಕ್ಷಯ ಕುಮಾರ, ಶ್ರೀನಿವಾಸ ಪ್ರಭು, ಪ್ರಸನ್ನ ಶೆಟ್ಟಿಗಾರ, ಶಶಿಕಾಂತ ಶೆಟ್ಟಿ, ಸುಜಯೀಂದ್ರ ಹಂದೆ,…

Read More

ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇವರು ಉಡುಪಿಯ ವೆಂಟನಾ ಪೌಂಡೇಶನ್‌ನ ಸಹಯೋಗದಲ್ಲಿ ಆಯೋಜಿಸಿದ ‘ಜನಪದ ಸರಣಿ ಕಲಾ ಕಾರ್ಯಾಗಾರ’ದ ಏಳನೇ ಆವೃತ್ತಿಯು ಬಡಗುಪೇಟೆಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ದಿನಾಂಕ 14-10-2023 ಮತ್ತು 15-10-2023ರಂದು ಎರಡು ವಿಭಾಗಗಳಲ್ಲಿ ನಡೆಯಿತು. ಈ ಕಾರ್ಯಾಗಾರವನ್ನು ವೆಂಟನಾ ಪೌಂಡೇಶನ್‌ ಇದರ ಟ್ರಸ್ಟಿಗಳಾದ ಶಿಲ್ಪಾ ಭಟ್‌ ಇವರು ಉದ್ಘಾಟನೆ ಮಾಡಿ ಮಾತನಾಡುತ್ತಾ “ಉಡುಪಿಯ ಕಲಾಪ್ರೇಮಿಗಳಿಗೆ ಈ ತೆರನಾದ ಕಾರ್ಯಾಗಾರಗಳು ಬಹು ಉಪಯುಕ್ತವಾಗಲಿದ್ದು, ಭಾರತೀಯ ದೇಶೀಯ ಕಲೆಯ ಉಳಿಸುವಿಕೆ ಹಾಗೂ ಬೆಳೆಸುವಿಕೆಯಲ್ಲಿ ಇದೊಂದು ಮೈಲಿಗಲ್ಲಾಗಬಹುದು ಮತ್ತು ವೆಂಟನಾ ಪೌಂಡೇಶನ್ ಈ ತೆರನಾದ ಕಾರ್ಯಕ್ರಮಗಳಿಗೆ ಸದಾ ಬೆಂಬಲವನ್ನೀಯುತ್ತದೆ” ಎಂದರು. ಮುಖ್ಯ ಅತಿಥಿಗಳಾದ ವೈಟ್ ಲೋಟಸ್ ಹೋಟೆಲ್‌ನ ಆಡಳಿತ ನಿರ್ದೇಶಕರಾದ ಯುವ ಉದ್ಯಮಿ, ಅಜಯ್ ಪಿ. ಶೆಟ್ಟಿಯವರು “ಭಾರತವು ಹಲವಾರು ವೈವಿಧ್ಯಮಯ ಆಚಾರ-ವಿಚಾರ, ಸಂಸ್ಕೃತಿಗಳಿಂದ ಕೂಡಿದ್ದಾಗಿದೆ. ಇವುಗಳ ನಡುವೆ ಹಂಚಿಹೋಗಿರುವ ಕಲಾ ಪ್ರಕಾರಗಳನ್ನೆಲ್ಲ ಉಡುಪಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ. ಇದರ ಪ್ರಯೋಜನವನ್ನು ಕರಾವಳಿಯ…

Read More

ಸುಳ್ಯ : ರಂಗ ನಿರ್ದೇಶಕ, ನಟ, ನಾಟಕಕಾರ, ವರ್ಣ ಚಿತ್ರ ಕಲಾವಿದ ಮೋಹನ ಸೋನ ಇವರ ಮೂರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ‘ಸೋನ ನೆನಪು’ ದಿನಾಂಕ 14-10-2023ರಂದು ಅವರ ನಿವಾಸ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿಯ ನಡುಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರವಾರದ ಕರಾವಳಿ ಮುಂಜಾವು ಪತ್ರಿಕೆಯ ಹಿರಿಯ ಸಂಪಾದಕ ಗಂಗಾಧರ ಹಿರೇಗುತ್ತಿ ಹಾಗೂ ಅಂಕೋಲಾದ ಗಾಯಕರಾದ ದೇವಾನಂದ ಗಾಂವ್ಕರ್ ಭಾಗವಹಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಂಗಾಧರ ಹಿರೇಗುತ್ತಿ ಅವರು ತನ್ನ ಪತ್ರಿಕೋದ್ಯಮ ಜೀವನದಲ್ಲಿ ಅನುಭವಿಸಿದ ಕೆಲವೊಂದು ಸವಾಲುಗಳೊಂದಿಗೆ ಕಲಾವಿನದ ಮೋಹನ ಸೋನ ಮತ್ತು ಅವರು ಪರಿಚಯಗೊಂಡ ಬಗೆಯನ್ನು ವಿವರಿಸಿದರು. ಅಲ್ಲದ ಹಿರಿಯ ಚಿತ್ರ ಕಲಾವಿದ ಸುದೇಶ್ ಮಹಾನ್ ಹಾಗೂ ಕಿರಿಯ ಚಿತ್ರಗಾರ್ತಿ ಆದ್ಯ ರಾಜೇಶ್ ಮಹಾನ್ ಇವರ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ದೇವಾನಂದ ಗಾಂವ್ಕರ್ ಮಾತನಾಡುತ್ತಾ ಕಳೆದ 2017ನೇ ಇಸವಿಯಲ್ಲಿ ಕಾರವಾರದ ಕಡಲ ಕಿನಾರೆಯಲ್ಲಿ ಅಲ್ಲಿನ ಬುಡಕಟ್ಟು ಜನಾಂಗದ ಜೀವನ ಶೈಲಿಯನ್ನು ಬಿಂಬಿಸುವ ಶಿಲ್ಪಕಲಾ ಉದ್ಯಾನ…

Read More

ಬೆಂಗಳೂರು : ಕರ್ನಾಟಕದ ಕ್ರಿಯಾಶೀಲ ರಂಗ ತಂಡಗಳಲ್ಲಿ ಜನಪದರು ಈಗ ತನ್ನ ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಪ್ರದರ್ಶನ ಸರಣಿ “ರಂಗ ಮಾಲೆ -75” ಅಮೃತ ಮಹೋತ್ಸವ ತಿಂಗಳು. ಈ ಕಾರಣಕ್ಕೆ ದಿನಾಂಕ 14-10-2023ರಿಂದ ಮೂರು ದಿನಗಳ ರಂಗ ಸಂಭ್ರಮ ಆಯೋಜನೆ ಮಾಡಿದ್ದು, ಉದ್ಘಾಟನೆ ಮಾಡಿದ ನಾಡಿನ ಸಾಂಸ್ಕೃತಿಕ ರಾಯಭಾರಿ ಸಾಣಿ ಹಳ್ಳಿಯ ಶ್ರೀ ಮಠದ ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ “ಜನಪದರು ರಂಗ ಮಂದಿರ ನೋಡಿ ಮಹಾಸಂತಸವಾಗಿದೆ. ನಾನು ರಾಷ್ಟ್ರದ ಹಲವಾರು ರಂಗ ಮಂದಿರ ನೋಡಿದ್ದು, ಆಧುನಿಕ ರಿವಾ ಲಿಂಗ್ ಹೈಡ್ರಾಲಿಕ್ ಅಲ್ಲದೆ ಸುಸಜ್ಜಿತ ಧ್ವನಿ ಬೆಳಕುಗಳು ಹೊಂದಿದೆ. ಶ್ರೇಷ್ಠ ಆಸನ ಹಾಗೂ ಹವಾ ನಿಯಂತ್ರಿತ ಸೌಲಭ್ಯ ಕೇವಲ ಜನರ ಸಹಕಾರದಿಂದ ಮಾಡಿದ ಈ ಘನ ಕಾರ್ಯ ಅಧ್ಯಕ್ಷ ಪಾಪಣ್ಣ ಕಾಟಂ ನಲ್ಲೂರು ಮತ್ತು ತಂಡ ಅಭಿನಂದನಾರ್ಹರು. ಇದರೊಂದಿಗೆ ನಮ್ಮ ಶಿವಸಂಚಾರ ಹಾಗೂ ಇತರೇ ರಂಗ ತಂಡಗಳ ನಾಟಕ ನಿಮಗೆ ತಲುಪಿಸಲು ಹಾಗೆ, ದಾಸೋಹದ ಅರಿವು…

Read More

ಮಂಗಳೂರು : ಪೇಜಾವರ ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ಯಕ್ಷನಿಧಿ (ರಿ) ಸಂಸ್ಥೆಯ ‘ದಶಮಾನೋತ್ಸವ ಸಂಭ್ರಮ’ವು ದಿನಾಂಕ 14-10-2023ರಂದು ಪೊರ್ಕೋಡಿಯ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡಬಿದ್ರೆ ಶಾಸಕ ಶೀ ಉಮಾನಾಥ ಕೋಟ್ಯಾನ್ ಇವರು ಮಾತನಾಡುತ್ತಾ “ಯುಕ್ಷರಂಗವು ಇಂದು ಸಮೃದ್ಧವಾಗಿ ಬೆಳೆದು ನಿಲ್ಲಲು ಹವ್ಯಾಸಿ ರಂಗಭೂಮಿಯೂ ಕಾರಣ. ಎಷ್ಟೋ ಹವ್ಯಾಸಿ ಕಲಾವಿದರು ಪ್ರಬುದ್ಧತೆ ಮೆರೆದು ಯಕ್ಷರಂಗ ಭೂಮಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ರವಿ ಅಲೆವೂರಾಯರಂತಹಾ ಯಕ್ಷಗುರುಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನೇಕ ಕಡೆಗಳಲ್ಲಿ ಯಕ್ಷ ತರಗತಿಗಳನ್ನು ನಡೆಸುತ್ತಾ ಮುಂದಿನ ಯಕ್ಷ ಪೀಳಿಗೆಗಳನ್ನು ಈ ರಂಗಕ್ಕೆ ಕೊಡುಗೆಯಾಗಿ ನೀಡಿ ಯಕ್ಷಮಾತೆಯ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇಂದು ಶ್ರೀ ಸೋಮನಾಥೇಶ್ವರ ಯಕ್ಷ ನಿಧಿ ಸಂಸ್ಥೆ ಅವರಿಗೆ ಗೌರವ ಸನ್ಮಾನವನ್ನು ನೀಡಿದೆ. ಅವರಿಂದ ಇನ್ನೂ ಸ್ಫೂರ್ತಿಯುತವಾಗಿ ಯಕ್ಷ ಸೇವೆ ಜರಗಲಿ” ಎ೦ದು ಹೇಳಿದರು. ಸನ್ಮಾನಕ್ಕೆ ಉತ್ತರಿಸುತ್ತಾ ಯಕ್ಷಗುರು ಶ್ರೀ…

Read More

ತುಮಕೂರು : ಯಕ್ಷಗಾನ ಸಾಂಸ್ಕೃತಿಕ ವೇದಿಕೆ ತುಮಕೂರು ಮತ್ತು ಶ್ರೀ ಕೃಷ್ಣ ಮಂದಿರ ತುಮಕೂರು ಇವರ ಸಹಯೋಗದಲ್ಲಿ ‘ಸುಧನ್ವ ಕಾಳಗ’ ಯಕ್ಷಗಾನ ಬಯಲಾಟವು ದಿನಾಂಕ 28-10-2023ರ ಶನಿವಾರ ಸಂಜೆ ಘಂಟೆ 4.30ಕ್ಕೆ ತುಮಕೂರಿನ ಶ್ರೀ ಕೃಷ್ಣ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಕರ್ನಾಟಕ ಯಕ್ಷಧಾಮ ಮಂಗಳೂರು ಇವರ ನೇತೃತ್ವದಲ್ಲಿ ಯಕ್ಷಗಾನದ ಅಗ್ರಗಣ್ಯ ಕಲಾವಿದರ ಕೂಡುವಿಕೆಯಲ್ಲಿ ಪ್ರಸ್ತುತಪಡಿಸುವ ಈ ಯಕ್ಷಗಾನ ಪೌರಾಣಿಕ ಪ್ರಸಂಗದ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಸರ್ವಶ್ರೀಗಳಾದ ಸುಬ್ರಾಯ ಹೆಬ್ಬಾರ, ಅಕ್ಷಯ ಕುಮಾರ, ಶ್ರೀನಿವಾಸ ಪ್ರಭು, ಪ್ರಸನ್ನ ಶೆಟ್ಟಿಗಾರ, ಶಶಿಕಾಂತ ಶೆಟ್ಟಿ, ಪ್ರಶಾಂತ ಹೆಗಡೆ, ಜನಾರ್ದನ ಹಂದೆ, ರಾಮಕೃಷ್ಣ ಭಟ್, ಅಂಬರೀಷ ಭಟ್‌ ಹಾಗೂ ಲಕ್ಷ್ಮೀ ಪ್ರಸಾದ ಭಾಗವಹಿಸಲಿದ್ದಾರೆ. ಕಲಾವಿದ , ಕವಿ, ಸಾಹಿತಿ, ಗಾಯಕ ಮತ್ತು ಸಂಘಟಕರಾದ ಹೆಚ್‌. ಜನಾರ್ದನ ಹಂದೆ ಮಂಗಳೂರು ಇವರು ಈ ಕಾರ್ಯಕ್ರಮದ ಸಂಯೋಜಕರಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಯ.ಸಾಂ. ವೇದಿಕೆ ತುಮಕೂರಿನ ಪ್ರಧಾನ ಸಂಚಾಲಕರುಗಳಾದ ನಾಗರಾಜಧನ್ಯ.ಕೆ ಹಾಗೂ ಅನಂತರಾವ್.ಕೆ ಮತ್ತು ಸಂಚಾಲಕರುಗಳು ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.

Read More

ಸ್ಟಾಕ್‌ ಹೋಂ : ಈ ಬಾರಿಯ ‘ಸಾಹಿತ್ಯದ ನೊಬೆಲ್’ ಪಾರಿತೋಷಕಕ್ಕೆ ಭಾಜನರಾಗಿರುವ ಕಾದಂಬರಿ, ಕವಿತೆ, ಪ್ರಬಂಧ, ಮಕ್ಕಳ ಸಾಹಿತ್ಯದಲ್ಲಿ ಶ್ರೇಷ್ಟ ಕೃತಿಗಳನ್ನು ಬರೆದಿರುವ ನಾರ್ವೆಯ ಖ್ಯಾತ ಲೇಖಕ ಜಾನ್ ಫೋಸ್ಸೆ ಅವರು ಸೃಜನಶೀಲ ಲೇಖಕರೆನ್ನಿಸಿಕೊಂಡಿದ್ದಾರೆ. ಫೋಸ್ಸೆ ಬಳಸುವ ನ್ಯೂ ನಾರ್ವೆ ಭಾಷೆಯನ್ನು ದೇಶದ ಕೇವಲ ಶೇ.10 ಜನ ಮಾತ್ರ ಬಳಸುತ್ತಾರೆ. ಈ ಭಾಷೆಯನ್ನು 19ನೇ ಶತಮಾನದಲ್ಲಿ ಗ್ರಾಮೀಣ ಆಡುಭಾಷೆಯೊಂದಿಗೆ ರೂಪಿಸಲಾಗಿದೆ. ಅಲ್ಲಿ ಹೆಚ್ಚಾಗಿ ಮಾತನಾಡುವ ಡ್ಯಾನಿಶ್ ಭಾಷೆ‌ಗೆ ಪರ್ಯಾಯವಾಗಿ ಸ್ಥಳೀಯ ಭಾಷೆ ಎಂದು ಇದನ್ನು ಪರಿಗಣಿಸಲಾಗುತ್ತದೆ. ನಾರ್ವೆಯ ಅಧಿಕೃತ ಭಾಷೆಯಾದ ‘ನಾರ್ವೇಜಿಯನ್ ನೈನೋರ್‌ಸ್ಟ್’ ನಲ್ಲಿ ಅವರು ಸಾಹಿತ್ಯ ಕೃಷಿ ಮಾಡಿದ್ದಾರೆ. ಪ್ರಾದೇಶಿಕ ಅಸ್ಮಿತೆ ಮತ್ತು ಭಾಷೆಯ ಜತೆ ಅವರು ಆಧುನಿಕ ಕಲಾತ್ಮಕ ತಂತ್ರಗಳನ್ನು ಬೆಸೆದಿರುವುದು ವಿಶೇಷ. ಖ್ಯಾತ ಸಾಹಿತಿಗಳಾದ ಸ್ಯಾಮ್ಯೂಯಲ್ ಬೆಕೆಟ್, ಥಾಮಸ್ ಬೆರ್ನಾರ್ಡ್ ಅವರನ್ನು ಫೋಸ್ಸೆ ಅವರ ಬರಹಗಳು ನೆನಪಿಸುತ್ತವೆ. ಹೊಸ ನಮೂನೆಯ ನಾಟಕಗಳು ಮತ್ತು ಧ್ವನಿ ಇಲ್ಲದವರಿಗೆ ಧ್ವನಿಯಾದ ಗದ್ಯಕ್ಕಾಗಿ ಜಾನ್ ಫೋಸ್ಸೆ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ…

Read More

ಉಡುಪಿ : ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಪ್ರಸ್ತುತ ಪಡಿಸುವ ‘ವಿಜಯದಶಮಿ ಸಂಗೀತೋತ್ಸವ ಮತ್ತು ರಜತ ಸಂಭ್ರಮ -2023’ ಕಾರ್ಯಕ್ರಮವು ಉಡುಪಿಯ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ದಿನಾಂಕ 24-10-2023ರಂದು ಬೆಳಿಗ್ಗೆ 8.30ರಿಂದ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಕ್ಯಾಪ್ಟನ್ ಶ್ರೀ ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಮತ್ತು ಪರ್ಕಳದ ಉದ್ಯಮಿಗಳಾದ ರೊ. ಎಂ.ಪಿ.ಎಚ್.ಎಫ್.ಶ್ರೀ ಮಂಜುನಾಥ ಉಪಾಧ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಪಾಡಿಗಾರು ಶ್ರೀ ಲಕ್ಷ್ಮೀನಾರಾಯಣ ಉಪಾಧ್ಯ ಅವರನ್ನು ಅಭಿನಂದಿಸಿ ಗೌರವಿಸಲಾಗುವುದು. ಬೆಳಿಗ್ಗೆ 8.30ರಿಂದ ಪಿಳ್ಳಾರಿ ಗೀತೆಗಳು, 9.00ಕ್ಕೆ ಹೊಸ ಸಂಗೀತ ಪಾಠ, 10.20ರಿಂದ ಕು.ನೀಹಾರಿಕಾ ದೇರಾಜೆ ಅವರ ಹಿಂದುಸ್ತಾನಿ ಗಾಯನಕ್ಕೆ ತಬಲಾದಲ್ಲಿ ಭಾರವಿ ದೇರಾಜೆ ಮತ್ತು ಹಾರ್ಮೋನಿಯಂನಲ್ಲಿ ಆದಿತ್ಯ ಭಟ್ ಪಾಣೆಮಂಗಳೂರು ಇವರು ಸಾಥ್ ನೀಡಲಿದ್ದಾರೆ. 11.30ರಿಂದ ‘ಕೃಷ್ಣ ಗಾನ ಸುಧಾ’ ಸದಸ್ಯರಾದ ಉಷಾ ಹೆಬ್ಬಾರ್ ಮತ್ತು ಶಿಷ್ಯರಿಂದ ಭಕ್ತಿ ಸಂಗೀತ…

Read More

ಕಾಸರಗೋಡು : ರಂಗ ಚಿನ್ನಾರಿ ಕಾಸರಗೋಡು (ರಿ.) ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ರಂಗಚಿನ್ನಾರಿಯ ಸಂಗೀತ ಘಟಕ ‘ಸ್ವರ ಚಿನ್ನಾರಿ’ ಏರ್ಪಡಿಸುವ ‘ಸ್ವರ ಸಂಗೀತ ಶಿಬಿರ’ವು ದಿನಾಂಕ 28-10-2023ರಂದು ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕ, ಅಂತರಾಷ್ಟ್ರೀಯ ಖ್ಯಾತಿಯ ಮೆಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ ನಿರ್ದೇಶನದಲ್ಲಿ ಈ ಶಿಬಿರವು ನಡೆಯಲಿದ್ದು, ಭಾಗವಹಿಸುವವರು ಶಿಬಿರ ಸಂಚಾಲಕರಾದ ಸ್ವರ ಚಿನ್ನಾರಿಯ ಕಾರ್ಯದರ್ಶಿಯಾದ ಕಿಶೋರ್ ಪೆರ್ಲ 8075284452 ಮತ್ತು ಜೊತೆ ಕಾರ್ಯದರ್ಶಿಯಾದ ಪ್ರತಿಜ್ಞಾ ರಂಜಿತ್ 9741919699 ಇವರಲ್ಲಿ ಹೆಸರು ನೋಂದಾಯಿಸಬಹುದು.

Read More