Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ.) ಹೆಬ್ರಿ ಪ್ರಾಯೋಜಿತ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ನೀಡುವ ‘ಶಾರದಾ ಕೃಷ್ಣ’ ಪ್ರಶಸ್ತಿ -2025ಕ್ಕೆ ಈ ಬಾರಿ ಕನ್ನಡ ರಂಗಭೂಮಿಯ ಪ್ರಸಿದ್ಧ ರಂಗನಿರ್ದೇಶಕ, ನಟ, ರಂಗ ಶಿಕ್ಷಕ, ಸಂಘಟಕ ಡಾ. ಜೀವನ್ ರಾಂ ಸುಳ್ಯ ಇವರು ಆಯ್ಕೆಯಾಗಿದ್ದಾರೆ. ಜನವರಿ ತಿಂಗಳಲ್ಲಿ ನಡೆಯುವ ‘ಸಂಸ್ಕೃತಿ ಉತ್ಸವ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪತ್ರ, ಫಲಕ ಹಾಗೂ ರೂಪಾಯಿ 25,000 ನಗದಿನೊಂದಿಗೆ ಗೌರವಿಸಲಾಗುವುದು ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ರವಿರಾಜ್ ಎಚ್.ಪಿ.ಯವರು ತಿಳಿಸಿರುತ್ತಾರೆ. ಡಾ. ಜೀವನ್ ರಾಂ ಸುಳ್ಯ ಕಿರು ಪರಿಚಯ ಕರ್ನಾಟಕದ ಸೃಜನಶೀಲ ರಂಗನಿರ್ದೇಶಕರ ಸಾಲಿನಲ್ಲಿ ಕೇಳಿ ಬರುವ ಪ್ರಮುಖ ಹೆಸರು ಡಾ. ಜೀವನ್ ರಾಂ ಸುಳ್ಯ. ನಟ, ನಿರ್ದೇಶಕ, ರಂಗಭೂಮಿ ತಜ್ಞ, ಜನಪದ ಕಲಾವಿದ, ಯಕ್ಷಗಾನ ಪರಿಣತ, ಗಾಯಕ, ಸಂಗೀತ ವಾದ್ಯ ಪ್ರವೀಣ, ಸಂಘಟಕ, ಚಿತ್ರನಟ, ಚಿತ್ರ ಕಲಾವಿದ, ಕಲಾ ನಿರ್ದೇಶಕ, ಜಾದೂಗಾರ, ಸಾಕ್ಷ್ಯಚಿತ್ರ ನಿರ್ದೇಶಕ, ವಸ್ತ್ರವಿನ್ಯಾಸಕ ಇತ್ಯಾದಿ…
ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರ ವತಿಯಿಂದ ಬ್ರಹ್ಮಾವರದ ಪ್ರದರ್ಶನ ಸಂಘಟನಾ ಸಮಿತಿ ಇವರ ಸಹಕಾರದಲ್ಲಿ ‘ಕಿಶೋರ ಯಕ್ಷಗಾನ ಸಂಭ್ರಮ 2024’ ಮಹಾಭಿಯಾನವು ದಿನಾಂಕ 23 ನವೆಂಬರ್ 2024ರಂದು ಬ್ರಹ್ಮಾವರದಲ್ಲಿ ಉದ್ಘಾಟನೆಗೊಂಡಿತು. ಉಡುಪಿ ಶಾಸಕರು, ಯಕ್ಷಶಿಕ್ಷಣ ಟ್ರಸ್ಟಿನ ಅಧ್ಯಕ್ಷರೂ ಆದ ಯಶ್ ಪಾಲ್ ಸುವರ್ಣರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ರಘುರಾಮ ಮಧ್ಯಸ್ಥ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿ. ಭುಜಂಗ ಶೆಟ್ಟಿ, ಧನಂಜಯ ಅಮೀನ್, ಬಿ.ಎನ್. ಶಂಕರ ಪೂಜಾರಿ, ಮಾರಾಳಿ ಪ್ರತಾಪ್ ಹೆಗ್ಡೆ, ರಾಜೀವ್ ಕುಲಾಲ್, ನಿತ್ಯಾನಂದ ಬಿ.ಆರ್. ಭಾಗವಹಿಸಿದ ಸಮಾರಂಭದ ಆರಂಭದಲ್ಲಿ ಬ್ರಹ್ಮಾವರ ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಬ್ರಹ್ಮಾವರ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಎಚ್.ಎನ್. ಶೃಂಗೇಶ್ವರ ಧನ್ಯವಾದ ಸಲ್ಲಿಸಿದರು. ಯಕ್ಷಗಾನ ಕಲಾರಂಗದ ಕಾರ್ಯಕರ್ತರಾದ ಯು.ಎಸ್. ರಾಜಗೋಪಾಲ ಆಚಾರ್ಯ, ಕೆ. ಆನಂದ ಶೆಟ್ಟಿ ಉಪಸ್ಥಿತರಿದ್ದರು. ಸಭೆಯ ಬಳಿಕ ನಿರ್ಮಲ ಇಂಗ್ಲೀಷ್ ಮೀಡಿಯಂ ಪ್ರೌಢಶಾಲಾ…
ಪುತ್ತೂರು : ಸಂಘಟನೆ, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸಾರ ಜೋಡುಮಾರ್ಗ, ರೋಟರಿ ಪುತ್ತೂರು ಎಲೈಟ್ ಮತ್ತು ನಿರತ ನಿರಂತ ಬಹುವಚನಂ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ‘ಅಟ್ಟಾಮುಟ್ಟಾ’ ಮಕ್ಕಳ ನಾಟಕೋತ್ಸವವನ್ನು ದಿನಾಂಕ 28 ನವೆಂಬರ್ 2024ರಿಂದ 30 ನವೆಂಬರ್ 2024ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಪುತ್ತೂರಿನ ಎಡ್ವರ್ಡ್ ಹಾಲ್ ಸುದಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 28 ನವೆಂಬರ್ 2024ರಂದು ಸಾಗರದ ಕಿನ್ನರ ಮೇಳ ತುಮರಿ ಇದರ ಕಲಾವಿದರು ನಿಧಿ ಎಸ್. ಶಾಸ್ತ್ರಿ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಅಭಿನಯಿಸುವ ಮಕ್ಕಳ ನಾಟಕ ‘ಇರುವೆ ಪುರಾಣ’. ಈ ನಾಟಕಕ್ಕೆ ದಿಗ್ವಿಜಯ ಹೆಗ್ಗೋಡು ಸಂಗೀತ, ಸಚಿನ್ ಕುಮಾರ್ ಎಸ್.ವಿ. ಇವರ ಸಹಾಯ ಹಾಗೂ ಕೆ.ಜಿ. ಕೃಷ್ಣ ಮೂರ್ತಿ ನಿರ್ಮಾಣ ಮಾಡಿರುತ್ತಾರೆ. ದಿನಾಂಕ 29 ನವೆಂಬರ್ 2024ರಂದು ನಡೆನುಡಿ ಕೊಂಬೆಟ್ಟು ಶಾಲಾ ಮಕ್ಕಳ ನಾಟಕ ಸಾಂಗತ್ಯ ಅಭಿನಯಿಸುವ ‘ಕತ್ತೆ & ದೆವ್ವ’ ನಾಟಕಕ್ಕೆ ಐ.ಕೆ. ಬೊಳುವಾರು ಇವರು ರಂಗಪಠ್ಯ ಮತ್ತು…
ಬ್ರಹ್ಮಾವರ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕ ಪ್ರಸ್ತುತಪಡಿಸುವ ‘ಗ್ರಾಮ ಸಾಹಿತ್ಯ ಸಮ್ಮೇಳನ’ ಕ್ಯಾದಿಗೆ-2024 ಕಾರ್ಯಕ್ರಮವು ದಿನಾಂಕ 30 ನವೆಂಬರ್ 2024ರ ಶನಿವಾರ ಅಪರಾಹ್ನ ಘಂಟೆ 2.30ರಿಂದ ಕಾರ್ಕಡ ಸೀತಾರಾಮ ಸೋಮಯಾಜಯವರ ಮನೆಯಂಗಳದಲ್ಲಿ ನಡೆಯಲಿದೆ. ಶ್ರೀ ಕೆ. ತಾರನಾಥ ಹೊಳ್ಳ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ ಸಮರ್ಪಣೆ, ಸ್ವರಚಿತ ಕವನ ವಾಚನ, ಗ್ರಾಮೀಣ ಕಂಠಸ್ಥ ಸಾಹಿತ್ಯ, ಕನ್ನಡಗೀತೆ, ಬಹುವಿಧ ಗೋಷ್ಠಿ, ಕಾರ್ತಿಕ ಮಾಸದ ತುಳಸಿ ಭಜನೆ, ಗ್ರಾಮ ಇತಿಹಾಸ ಹಾಗೂ ಸಾಲಿಗ್ರಾಮದ ಆರಾಧನಾ ಮೆಲೋಡಿಸ್ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ವಿಭಾಗವು ‘ದಿ ಮಲ್ಯ ರೆಸಿಡೆನ್ಸ್’ ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನವನ್ನು ಗುರುವಾರ ದಿನಾಂಕ 21 ನವೆಂಬರ್ 2024ರಂದು ಕೊಡಿಯಾಲ್ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಉದ್ಘಾಟಿಸಿತು. ಸ್ವಾತಂತ್ರ್ಯೃ ಹೋರಾಟಗಾರ ಮತ್ತು ದಕ್ಷಿಣ ಕನ್ನಡದ ಮೊದಲ ಸಂಸದ ಉಳ್ಳಾಲ ಶ್ರೀನಿವಾಸ ಮಲ್ಯ ಅವರ 122ನೇ ಜನ್ಮದಿನದಂದು ಪ್ರಸ್ತುತಪಡಿಸಲಾದ ಈ ಪ್ರದರ್ಶನವು ಇಂಟಾಕ್ನ ವಿಶ್ವ ಪರಂಪರೆಯ ಸಪ್ತಾಹದ ಆಚರಣೆಯ ಭಾಗವಾಗಿದೆ. ಪ್ರದರ್ಶನವು ಅಪರೂಪದ ಛಾಯಾಚಿತ್ರಗಳು ಮತ್ತು ವಾಸ್ತುಶಿಲ್ಪದ ರೇಖಾಚಿತ್ರಗಳೊಂದಿಗೆ ಮಲ್ಯ ಅವರು ತಮ್ಮ ಬಾಲ್ಯವನ್ನು ಕಳೆದ ನಗರದ ರಥಬೀದಿಯಲ್ಲಿರುವ ಪೂರ್ವಜರ ಮನೆಯ ವಿವರವಾದ ದಾಖಲಾತಿಯನ್ನು ನೀಡುತ್ತದೆ. ಇಂಟಾಕ್ನ ಮಂಗಳೂರು ವಿಭಾಗದಿಂದ ಸಂಕಲಿಸಲಾದ ಪ್ರದರ್ಶನವು ಮಲ್ಯ ಅವರ ಜೀವನದ ವಿಶೇಷ ಒಳನೋಟಗಳನ್ನು ಒದಗಿಸುತ್ತದೆ. ಇಂಟಾಕ್ ಮಂಗಳೂರು ಸಂಚಾಲಕ ಸುಭಾಸ್ ಚಂದ್ರ ಬಸು ಅವರ ಸ್ವಾಗತ ಭಾಷಣದ ನಂತರ ತಂಡದ ಸದಸ್ಯೆ ಶರ್ವಾಣಿ ಭಟ್ ಇವರು ನಿಖರವಾದ ದಾಖಲಾತಿ ಪ್ರಕ್ರಿಯೆಯನ್ನು ವಿವರಿಸಿದರು.…
ಬೆಂಗಳೂರು : ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಇದರ ವತಿಯಿಂದ ದಿನಾಂಕ 15 ಡಿಸೆಂಬರ್ 2024ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ‘ಮಹಿಳೆಯರಿಗಾಗಿ ಜಾನಪದ ಗೀತೆ ಸ್ಪರ್ಧೆ, ಭಾವಗೀತೆ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ’ ಹೀಗೆ ಮೂರು ವಿಭಾಗಗಳಲ್ಲಿ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದವರಿಗೆ ಪಾರಿತೋಷಕದೊಂದಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ಬಿ. ಶೃಂಗೇಶ್ವರ ಇವರ ವಾಟ್ಸಾಪ್ ನಲ್ಲಿ (99008 45757) ತಮ್ಮ ಹೆಸರು, ವಯಸ್ಸು, ಊರು, ಸ್ಪರ್ಧಾ ವಿಭಾಗ ಮತ್ತು ವಾಟ್ಸಾಪ್ ಸಂಖ್ಯೆಯನ್ನು ನಮೂದು ಮಾಡುವುದರ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳುವುದು. ನಿಯಮಗಳು :- 1) ಸ್ಪರ್ಧೆಯು 20ರಿಂದ 45 ವಯಸ್ಸಿನೊಳಗಿನ ಮಹಿಳೆಯರಿಗೆ ಮಾತ್ರ ತೆರೆದಿದೆ. 2) ಮೂರು ವಿಭಾಗಗಳಲ್ಲಿ ಸ್ಪರ್ಧೆ ಇರುವುದಾದರೂ ಸ್ಪರ್ಧಾರ್ಥಿಗಳು ಮೂರರಲ್ಲಿ ಒಂದು ವಿಭಾಗದಲ್ಲಿ ಮಾತ್ರ ಸ್ಪರ್ಧಿಸಬಹುದಾಗಿದೆ. 3) ದಿನಾಂಕ 15 ಡಿಸೆಂಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ಸರಿಯಾಗಿ ಸ್ಪರ್ಧೆ ಪ್ರಾರಂಭವಾಗುವ…
ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ತಾಲ್ಲೂಕು ಘಟಕ ಅರಸೀಕೆರೆ ವತಿಯಿಂದ ಹೋಬಳಿ ಘಟಕ ಉದ್ಘಾಟನೆ, ಜಿಲ್ಲಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 25 ನವೆಂಬರ್ 2024ರಂದು ಜಾವಗಲ್ ಪಟ್ಟಣದ ಹಳೇಬೀಡು ರಸ್ತೆಯಲ್ಲಿರುವ ಖಾದ್ರಿಯಾ ಕಾಂಪ್ಲೆಕ್ಸ್ ಹೊರಾಂಗಣ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುವೆಂಪು ವಿ. ವಿ. ಇದರ ಪ್ರಾಧ್ಯಾಪಕಿಯಾದ ಡಾ. ಹಸೀನಾ ಎಚ್. ಕೆ. ಮಾತನಾಡಿ ರಾಜ್ಯೋತ್ಸವ ಎಂಬುದು ಕನ್ನಡ ನಾಡುನುಡಿಗೆ ಸಂಬಂಧಿಸಿದ ಆಚರಣೆ, ಇದು ಕನ್ನಡಿಗರ ಭಾವನಾತ್ಮಕ ಅನುಸಂಧಾನ. ಜಾತಿ, ಮತ, ಧರ್ಮ, ಲಿಂಗದೆಲ್ಲೆಗಳ ಮೀರಿದ ನಿರಂತರ ನಿತ್ಯೋತ್ಸವ. ಈಗಾಗಲೇ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ನಿರಂತರವಾಗಿ ವರ್ಷದುದ್ದಕ್ಕೂ ಕನ್ನಡದ ಕೈಂಕರ್ಯವನ್ನು ಮಾಡುತ್ತಾ ಬಂದಿದೆ. ನಾಡುನುಡಿಯ ಬಗೆಗಿನ ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲಿಯೂ ಅಂತರ್ಗತವಾದ ಅಂಶ. ಕೆಲವು ಸಂಸ್ಥೆಗಳು ಪ್ರತಿವರ್ಷ ನವೆಂಬರ್ ಬಂದಾಗ ಮಾತ್ರ ಕನ್ನಡ ಧ್ವಜಹಾರಿಸಿ, ಆಚರಣೆ ಮಾಡಿ…
ಉಡುಪಿ : ರಾಗ ಧನ ಉಡುಪಿ (ರಿ) ಸಂಸ್ಥೆ ಆಯೋಜಿಸುವ ರಾಗರತ್ನ ಮಾಲಿಕೆ ಸರಣಿಯ 31ನೇ ‘ರಂಜನಿ ಸಂಸ್ಮರಣಾ ಸಂಗೀತ ಕಛೇರಿ’ ದಿನಾಂಕ 24 ನವೆಂಬರ್ 2024ರ ಆದಿತ್ಯವಾರ ಸಂಜೆ ಘಂಟೆ 3.00 ರಿಂದ 6:30ರ ವರೆಗೆ ಉಡುಪಿ ಪರ್ಕಳದ ‘ಸರಿಗಮ ಭಾರತಿ ಸಂಗೀತ ವಿದ್ಯಾಲಯ’ದಲ್ಲಿ ನಡೆಯಿತು. ಪ್ರಸಿದ್ಧ ಸಂಗೀತ ಕಲಾವಿದರಾದ ಬೆಂಗಳೂರಿನ ಶ್ರೀ ಹೆಮ್ಮಿಗೆ ಎಸ್. ಪ್ರಶಾಂತ್ ಇವರು ಸಂಗೀತ ಕಚೇರಿಯನ್ನು ನಡೆಸಿಕೊಟ್ಟರು. ಇವರ ಗುರುಗಳಲ್ಲೊಬ್ಬರಾದ ಶ್ರೇಷ್ಠ ವಿದ್ವಾಂಸ ಕೆ. ವಿ. ನಾರಾಯಣ ಸ್ವಾಮಿಯವರ ಛಾಪನ್ನು ಇವರ ಸಂಗೀತದಲ್ಲಿಯೂ ಕಾಣಬಹುದಾಗಿದೆ. ಶ್ರೀ ಪ್ರಶಾಂತ್ ಅವರು ಆರಿಸಿಕೊಂಡ ಎಲ್ಲಾ ಪ್ರಸ್ತುತಿಗಳಲ್ಲಿಯೂ ಆಯಾ ರಾಗಗಳ ಸಂಚಾರದಲ್ಲಿನ ನಿಖರತೆ, ಸ್ವರಪ್ರಸ್ತಾರಗಳಲ್ಲಿನ ಖಚಿತತೆ, ಲಯ ಬದ್ಧತೆ ಎಲ್ಲವೂ ಎದ್ದು ಕಾಣುತ್ತಿತ್ತು. ಅವರು ಆರಿಸಿಕೊಂಡ ವರ್ಣ ನೆರನಮ್ಮಿತಿ -ಕಾನಡಾ- ಅಟತಾಳ ಸಂಪ್ರದಾಯಬದ್ಧವಾಗಿತ್ತು. ಮುಂದಕ್ಕೆ ‘ನೀವಾಡ ನೇಗಾನ’ (ಸಾರಂಗ- ಖಂಡ ಛಾಪು- ತ್ಯಾಗರಾಜ) ಚಿಕ್ಕ ಚೊಕ್ಕದಾದ ಸ್ವರಪ್ರಸ್ತಾರದಿಂದ ಕೂಡಿತ್ತು. ಮುಂದೆ (ಲೇಕನಾ ನಿನ್ನು ಜೂಟಿ- ಅಸಾವೇರಿ- ಆದಿತಾಳ ವಿಳಂಬ)…
ತೀರ್ಥಹಳ್ಳಿ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತೀರ್ಥಹಳ್ಳಿ ಲೀಜನ್ ಇವರು ಆಯೋಜಿಸಿದ ‘ಭಾವಗೀತೆಗಳ ಕಲಿಕಾ ಶಿಬಿರ ಮತ್ತು ಸಂಗೀತ ಸಂಜೆ’ ಕಾರ್ಯಕ್ರಮವು ಎಲೆ ಮನೆ, ಹಾಲಿಡೇ ರಿಟ್ರೀಟ್, ಮ್ರಗವಧೆ ಇಲ್ಲಿ ಕನ್ನಡನಾಡಿನ ಹೆಸರಾಂತ ಗಾಯಕರು, ಸಂಗೀತ ನಿರ್ದೇಶಕರಾದ ಉಪಾಸನಾ ಮೋಹನ್ ಇವರ ಮಾರ್ಗದರ್ಶನದಲ್ಲಿ ದಿನಾಂಕ 24 ನವೆಂಬರ್ 2024ರಂದು ನೆರವೇರಿತು. ಸುಮಾರು 25 ಶಿಬಿರಾರ್ಥಿಗಳು ಚನ್ನಗಿರಿ, ಭದ್ರಾವತಿ, ಶಿವಮೊಗ್ಗ, ಕೊಪ್ಪ ಮತ್ತು ತೀರ್ಥಹಳ್ಳಿ ತಾಲೂಕುಗಳಿಂದ ಭಾವಗೀತೆಗಳ ಕಲಿಕಾ ಶಿಬಿರದಲ್ಲಿ ಭಾಗವಹಿಸಿದರು. ಶ್ರೀ ಮಲ್ಲಿಕಾರ್ಜುನ ದೇವಾಲಯ ಮ್ರಗವಧೆ ಇದರ ಅಧ್ಯಕ್ಷರು ಶ್ರೀ ಉದಯಶಂಕರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸೀನಿಯರ್ ಹೆಚ್.ಎನ್. ಸೂರ್ಯನಾರಾಯಣ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಉಪಾಸನಾ ಮೋಹನ್ ಇವರು ಕೆಲವು ಪ್ರಸಿದ್ಧ ಭಾವಗೀತೆಗಳನ್ನು ಮಕ್ಕಳಿಗೆ ಶ್ರುತಿ ಬದ್ದವಾಗಿ ಹಾಡುವ ವಿಧಾನವನ್ನು ತಿಳಿಸಿದರು. ಸಂಜೆ ನಡೆದ ಮುಕ್ತಾಯ ಸಮಾರಂಭದಲ್ಲಿ ಶ್ರೀ ಉಪಾಸನಾ ಮೋಹನ್ ಇವರನ್ನು ಸನ್ಮಾನಿಸಲಾಯಿತು. ಉಪಾಸನಾ ಮೋಹನ್ ಇವರ ಜೊತೆ ಶ್ರೀ ರಾಘವೇಂದ್ರ ಕಿರಣಕೆರೆ, ಕುಮಾರಿ ನಿಧಿ,…
ಬೆಂಗಳೂರು : ಜಯನಗರದ ಯುವಕ ಸಂಘದ ಬೆಂಗಳೂರು ಆರ್ಟ್ ಗ್ಯಾಲರಿಯಲ್ಲಿ ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಹಯೋಗದೊಂದಿಗೆ ಉಡುಪಿಯ ಕಲಾವಿದ ಜನಾರ್ದನ ರಾವ್ ಹಾವಂಜೆಯವರ ‘ಕಾವ್ಯರೇಖಾ’ ಕಾವಿ ಕಲೆಯ ಏಕವ್ಯಕ್ತಿ ಕಲಾ ಪ್ರದರ್ಶನವು 25 ನವೆಂಬರ್ 2024ರಂದು ಉದ್ಘಾಟನೆಗೊಂಡಿತು. ಈ ಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಡನ್ ಆಂಡ್ ಪರ್ಟ್ ನರ್ಸ್ ಸಂಸ್ಥಾಪಕರಾದ ಅರವಿಂದ ಹೆಗಡೆಯವರು ಮಾತನಾಡಿ “ಪುರಾತನ ಕಟ್ಟಡಗಳಲ್ಲಿನ ಕಾವಿ ಕಲೆ ನನ್ನ ಬಾಲ್ಯದ ದಿನಗಳಲ್ಲಿ ಶಿರಸಿಯ ಭಾಗಗಳಲ್ಲೆಲ್ಲ ನೋಡಿದ ನೆನಪು ಇಂದು ಹಸಿರಾದಂತಾಯಿತು. ಅಳಿವಿನಂಚಿನಲ್ಲಿನ ನಮ್ಮ ಕರ್ನಾಟಕದ ಈ ಕಲೆಯನ್ನು ಕಾಪಿಡಲು ಹಾಗೂ ಅದನ್ನು ಈ ತೆರನಾದ ಕಲಾಪ್ರದರ್ಶನದ ಮೂಲಕ ಇನ್ನಷ್ಟು ಜನರಿಗೆ ಹಂಚಲು ಉತ್ಸುಕರಾಗಿರುವ ಕಲಾವಿದ ಜನಾರ್ದನ ಹಾವಂಜೆಯವರ ಶ್ರಮ ಅಭಿನಂದನೀಯ. ಇನ್ನಷ್ಟು ಯುವ ಕಲಾವಿದರು ಈ ಕಲೆಯಲ್ಲಿ ತೊಡಗಿಸಿಕೊಂಡು ನಮ್ಮ ಸಂಸ್ಕೃತಿಯ ಭಾಗವೇ ಆಗಿರುವ ಕರಾವಳಿಯ ಕಲೆಯನ್ನು ಬೆಳೆಸುವಂತಾಗಲಿ” ಎಂಬುದಾಗಿ ಆಶಿಸಿದರು. “ಸುಣ್ಣ ಮತ್ತು ಕೆಮ್ಮಣ್ಣಿನಲ್ಲಿ ಗೀರಿ ನಿರ್ಮಾಣವಾಗುವ ಕಾವಿ ಕಲೆ…