Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್ : ಸುರತ್ಕಲ್ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿ ಸೆನೆಟ್ ಮತ್ತು ಲಲಿತಕಲಾ ಸಂಘದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ದಿನಾಂಕ 05-10-2023 ರಂದು ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ನರಸಿಂಹ ಮೂರ್ತಿ ಆರ್ “ಸ್ಪರ್ಧಾತ್ಮಕ ಆಧುನಿಕ ಬದುಕಿನಲ್ಲಿ ಉತ್ತಮ ಕಲಿಕಾ ಸಾಧನೆಯೊಂದಿಗೆ ಸಂವಹನ ಕಲಾ ಕೌಶಲ್ಯ ಹಾಗೂ ನಾಯಕತ್ವದ ಗುಣಗಳು ಮುಖ್ಯ. ವಿದ್ಯಾರ್ಥಿಗಳು ತಮಗೆ ದೊರಕುವ ಅವಕಾಶ ಬಳಸಿಕೊಂಡು ಉತ್ತಮ ಕೌಶಲಗಳನ್ನು ಪಡೆದುಕೊಳ್ಳಬೇಕು” ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ “ಕಾಲೇಜಿನ ಲಲಿತಕಲಾ ಸಂಘವು ಕಲಾಸಕ್ತ ವಿದ್ಯಾರ್ಥಿಗಳನ್ನು ನಿರಂತರವಾಗಿ ಪ್ರೋತ್ಸಾಹಿಸಿ ತರಬೇತಿ ನೀಡಿದ ಫಲವಾಗಿ ಅಂತರಾಷ್ಟ್ರೀಯ ಮಟ್ಟದಲ್ಲೂ ಕಾಲೇಜಿನ ಕೀರ್ತಿಯನ್ನು ಬೆಳಗಿಸಿದೆ” ಎಂದರು. ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ರಮೇಶ್ ಕುಳಾಯಿ ಕಾಲೇಜಿನ ಕಾರ್ಯಚಟುವಟಿಕೆಗಳನ್ನು ಪರಿಚಯಿಸಿದರು. ಉಪಪ್ರಾಂಶುಪಾಲ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ್ ಭಟ್ ಎಸ್.ಜಿ ಪ್ರತಿಜ್ಞಾವಿಧಿ ಬೋಧಿಸಿದರು. ಲಲಿತಕಲಾ ಸಂಘದ ಸಂಯೋಜಕರಾದ ಡಾ. ಸೌಮ್ಯ ಪ್ರವೀಣ್ ಕೆ.,…
ನವದೆಹಲಿ : ದೆಹಲಿ ಕರ್ನಾಟಕ ಸಂಘದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ದೆಹಲಿ ಘಟಕ ಮತ್ತು ಸುಳ್ಯದ ಬೆಳ್ಳಾರೆಯ ತಂಟೆಪ್ಪಾಡಿ ನಿನಾದ ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ ‘ಯಕ್ಷಧ್ರುವ ಪಟ್ಲ ಸಂಭ್ರಮ-2023’ನ್ನು ದಿನಾಂಕ 30-09-2023ರಂದು ಹಿರಿಯ ಕಲಾವಿದ, ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಸಂಪೂರ್ಣ ಕಲೆಗಾರಿಕೆಯನ್ನು ಯಕ್ಷಗಾನದಲ್ಲಿ ಮಾತ್ರ ಕಾಣಲು ಸಾಧ್ಯ. ಅದೊಂದು ಅದ್ಭುತ ಲೋಕ. ಇಂದು ಯಕ್ಷಗಾನ ಕೇವಲ ದೇಶ ಮಾತ್ರವಲ್ಲ, ಜಾಗತಿಕವಾಗಿ ತನ್ನ ಹೆಜ್ಜೆಗುರುತನ್ನು ಮೂಡಿಸಿದೆ. ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ತಾವು ಮಾತ್ರ ಬೆಳೆಯದೆ ತಮ್ಮೊಂದಿಗಿರುವವರನ್ನೂ ಬೆಳೆಸಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಷನ್ ಮೂಲಕ ಹತ್ತಾರು ಪ್ರತಿಭೆಗಳು ಹೊರಬರುವಂತೆ ಮಾಡಿದ್ದಾರೆ” ಎಂದು ಹೇಳಿದರು. ವಿಶೇಷ ಅತಿಥಿಯಾಗಿ ಪಾಲ್ಗೊಂಡ ಜಮ್ಮು-ಕಾಶ್ಮೀರ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿ ರಾಜೇಶ್ ಪ್ರಸಾದ್ ಹಿರಿಯಡ್ಕ, “ಇಂದಿನ ಮಕ್ಕಳಿಗೆ ನಾವು ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಕಲಿಸಬೇಕು. ಪಟ್ಲ ಸತೀಶ್ ಶೆಟ್ಟಿ ಅವರಿಗೆ ಹಾಡುಗಾರಿಕೆಯ ದೈವಿಕ ಶಕ್ತಿ ಒಲಿದಿದೆ. ಒಂದು ಜನಸಮೂಹವನ್ನೇ ಸೆಳೆಯುವಂತಹ ಅದ್ಭುತ ಸಾಮರ್ಥ್ಯವನ್ನು ಅವರಿಗೆ…
ಯಕ್ಷಗಾನ – ಇದೊಂದು ಗಂಡು ಕಲೆ. ಕರ್ನಾಟಕದ ಅತ್ಯಂತ ವಿಶಿಷ್ಠ ಕಲೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಲೆಗಳಲ್ಲಿ ಯಕ್ಷಗಾನ ಅತೀ ಪ್ರಮುಖವಾದದ್ದು. ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಮೈವೆತ್ತಿರುವ ಯಕ್ಷಗಾನ ಕಲೆಯಲ್ಲಿ ಪ್ರಜ್ವಲಿಸುತ್ತಿರುವ ಪ್ರತಿಭೆ ಶ್ರೇಯಾ ರಾವ್ ಶರವೂರು. 08.10.2000ರಂದು ಶರವೂರು ಶ್ರೀನಿವಾಸ್ ರಾವ್ ಹಾಗೂ ರಾಧಿಕಾ ಶ್ರೀನಿವಾಸ್ ರಾವ್ ಇವರ ಮಗಳಾಗಿ ಜನನ. ಮೂಡಬಿದ್ರೆಯ ಆಳ್ವಾಸ್ ನಲ್ಲಿ ಯಕ್ಷಗಾನದಲ್ಲಿ ಡಿಪ್ಲೊಮಾ ಇವರ ವಿದ್ಯಾಭ್ಯಾಸ. ಕಾರ್ತಿಕ್ ರಾವ್ ಕೊರ್ಡೆಲ್, ರಾಕೇಶ್ ರೈ ಅಡ್ಕ, ಬಲಿಪ ಶಿವಶಂಕರ್ ಭಟ್, ಎನ್.ಜಿ ಹೆಗಡೆ, ಶ್ರೀ ಸುಬ್ರಹ್ಮಣ್ಯ ಧಾರೇಶ್ವರ, ಸದಾನಂದ ಐತಾಳ್ ಇವರ ಯಕ್ಷಗಾನ ಗುರುಗಳು. ನಿರ್ಮಲಾ ಮಂಜುನಾಥ್ ಇವರ ಭರತನಾಟ್ಯ ಗುರುಗಳು. ದೇವಿ ಮಹಾತ್ಮೆ, ಸುದರ್ಶನ ವಿಜಯ, ಸೀತಾ ಪರಿತ್ಯಾಗ, ಮಾನಿಷಾದ, ಶಶಿಪ್ರಭೆ ಪರಿಣಯ ಇತ್ಯಾದಿ ನೆಚ್ಚಿನ ಪ್ರಸಂಗಗಳು. ಸುದರ್ಶನ, ಮಾಲಿನಿ, ಲಕ್ಷ್ಮೀ, ದೇವಿ, ದಾಕ್ಷಾಯಿಣಿ, ವಿಷ್ಣು, ಮನ್ಮಥ, ಸತ್ಯಭಾಮೆ, ಸೀತೆ ನೆಚ್ಚಿನ ವೇಷಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಪ್ರಸಂಗ…
ಮೈಸೂರು : ರಂಗಸೌರಭ ಪ್ರಸ್ತುತಪಡಿಸುವ ವರಕವಿ ಡಾ. ದ.ರಾ. ಬೇಂದ್ರೆಯವರ ಬದುಕು ಮತ್ತು ಬರಹಗಳ ಆಧಾರಿತ ನಾಟಕ ‘ಗಂಗಾವತರಣ’ ದಿನಾಂಕ 08-10-2023 ರಂದು ಮೈಸೂರಿನ ನಟನ ರಂಗಶಾಲೆಯಲ್ಲಿ ನಡೆಯಲಿದೆ. ಎಲೆಕ್ಟ್ರಾನಿಕ್ ಮಾಧ್ಯಮ, ಆಧುನಿಕ ಸಿನಿಮಾ, ಧಾರವಾಹಿಗಳು ‘ಗಂಗಾವತರಣ’ ಕಥೆಯಲ್ಲಿ ಘಟಿಸುತ್ತವೆ. ಒಂದು ಅರ್ಥದಲ್ಲಿ ಕಥಾನಾಯಕ ಅವಮಾನ ಅನುಭವಿಸುತ್ತಾ ಹೊಸ ಪ್ರಲೋಭನೆಗಳಿಗೆ ಒಳಗಾಗದೆ ನರಳುವುದು, ಕೊನೆಗೆ ಬೇಂದ್ರೆ ಹೇಳುವ ಸರಳ ಆತ್ಮಬಲದ ಜೀವನ ಸಂದೇಶವನ್ನು ತನ್ನದಾಗಿಸಿಕೊಳ್ಳುವುದು ಕಥೆಯ ಚೌಕಟ್ಟು. ಈ ಕಥಾನಕಕ್ಕೆ ಬೇಂದ್ರೆಯವರ 16 ಸುಪ್ರಸಿದ್ಧ ಕವಿತೆಗಳನ್ನು ಬಳಸಿಕೊಳ್ಳಲಾಗಿದೆ. ಕುಣಿಯೋಣ ಬಾರ, ನಾನು ಬಡವಿ, ಇಳಿದು ಬಾ, ನಾಕುತಂತಿ, ಪಾತರಗಿತ್ತಿ, ಚೈತನ್ಯ ಯಾತ್ರೆ, ಇತ್ಯಾದಿ. ಗಂಗಾವತರಣ ಕವಿತೆಯನ್ನು ಸಾಂದರ್ಭಿಕವಾಗಿ ಬಳಸಿಕೊಂಡು ನಾಡಿನಲ್ಲಿರುವ ಹಲವು ಕೊಳೆಯನ್ನು ತೊಳೆಯಲು ನೂರಾರು ಭಗೀರಥರು ಮತ್ತು ಗಂಗೆಯರು ಬರಬೇಕೆಂದು ಸಾಮಾಜಿಕ ಸಂದೇಶವಾಗುತ್ತದೆ. ಈ ನಾಟಕದ ರಚನೆ, ವಿನ್ಯಾಸ ಮತ್ತು ನಿರ್ದೇಶನ ರಾಜೇಂದ್ರ ಕಾರಂತ ಅವರದ್ದು, ಪ್ರದರ್ಶನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 95353 22169 ಮತ್ತು 9742119911 ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಶಕ್ತಿನಗರ : 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭವು ವಿಶ್ವ ಕೊಂಕಣಿ ಕೇಂದ್ರದಲ್ಲಿ ದಿನಾಂಕ 04-10-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಂಕಣಿ ಕವಿ ಟೈಟಸ್ ನೊರೊನ್ಹಾ ಇವರು ಮಾತನಾಡುತ್ತಾ “ಸಾಹಿತ್ಯ ಸಮ್ಮೇಳನಗಳು ಭಾಷೆ ಮತ್ತು ಸಾಹಿತ್ಯದ ವೈವಿಧ್ಯತೆಯನ್ನು ಸಂಭ್ರಮಿಸುವ ಹಬ್ಬಗಳಾಗಿವೆ. 1939ರಲ್ಲಿ ಕುಮಟಾದ ವಕೀಲ ಮಾಧವ ಮಂಜುನಾಥ ಶಾನುಭಾಗರ ದೂರದೃಷ್ಟಿಯ ಫಲಶ್ರುತಿ ಅಖಿಲ ಭಾರತ ಕೊಂಕಣಿ ಪರಿಷತ್ ಈವರೆಗೆ ದೇಶದ ವಿವಿಧ ಭಾಗಗಳಲ್ಲಿ 24 ರಾಷ್ಟ್ರ ಮಟ್ಟದ ಕೊಂಕಣಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗಿದೆ. ದಿನಾಂಕ 04-11-2023 ಮತ್ತು 05-11-2023ರಂದು ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ದೇಶದ ವಿವಿಧ ಭಾಗಗಳಿಂದ ಸುಮಾರು 800 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ವಿನಾಯತಿ ನೀಡಲಾಗಿದೆ. ಪ್ರತಿನಿಧಿಗಳಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದ್ದು,…
ಬೆಂಗಳೂರು : ‘ಕನ್ನಡ ನನ್ನ ಮೊದಲ ಪ್ರೀತಿ, ಎರಡನೆಯ ಪ್ರೀತಿಯೂ ಅದೇ’ ಎಂದು ಕನ್ನಡಕ್ಕಾಗಿ ಜೀವನಪರ್ಯಂತ ದುಡಿದು ತಮ್ಮ ಬರಹದ ಮೂಲಕ ಕನ್ನಡ ಚಿಂತನೆಗೆ ಘನತೆ ತಂದು ಕೊಟ್ಟ ಡಾ. ಹಾ.ಮಾ. ನಾಯಕ ಹೆಸರಿನಲ್ಲಿ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ವಾಗಿ ನಗದು ಪ್ರಶಸ್ತಿಯನ್ನು ನೀಡಲು ನಿರ್ಧರಿಸಿರುವ ಕನ್ನಡ ಗೆಳೆಯರ ಬಳಗವು ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಕುರಿತು ರಚಿಸಿರುವ ಪುಸ್ತಕಗಳನ್ನು ಆಹ್ವಾನಿಸಿದೆ. ಪ್ರತಿ ವರ್ಷದಂತೆ ಈ ವರ್ಷವು ಅತ್ಯುತ್ತಮ ಪುಸ್ತಕಕ್ಕೆ ಪ್ರಥಮ ಪ್ರಶಸ್ತಿಯಾಗಿ ಐದು ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಎರಡನೇ ಪುಸ್ತಕಕ್ಕೆ ಸಮಾಧಾನಕರ ಪ್ರಶಸ್ತಿಯಾಗಿ ಎರಡು ಸಾವಿರ ರೂಪಾಯಿ ನಗದು ಬಹುಮಾನವನ್ನು ನೀಡಲಾಗುವುದು. ಈ ಪ್ರಶಸ್ತಿಗೆ ಪುಸ್ತಕ ಕಳುಹಿಸಲು ಇಚ್ಛಿಸುವವರು ಎರಡು ಪ್ರತಿಗಳನ್ನು ದಿನಾಂಕ 01-11-2023ರೊಳಗೆ ರಾ.ನಂ.ಚಂದ್ರಶೇಖರ, ಸಂಚಾಲಕ, ಕನ್ನಡ ಗೆಳೆಯರ ಬಳಗ, ನಂ.1, ‘ಶ್ರೀನಿಲಯ’ ಮಾರಮ್ಮ ದೇವಸ್ಥಾನದ ರಸ್ತೆ, ಕತ್ರಗುಪ್ಪೆ, ಬೆಂಗಳೂರು -560085 ಇಲ್ಲಿಗೆ ಕಳುಹಿಸಿಕೊಡಲು ತಿಳಿಸಿದೆ. ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಕನ್ನಡ…
ಮಂಗಳೂರು : ಮಾಂಡ್ ಸೊಭಾಣ್ ಇದರ ಗಾಯನ ತಂಡ ಸುಮೇಳ್ ವತಿಯಿಂದ ದಿನಾಂಕ 01-10-2023ರಂದು ಶಕ್ತಿನಗರದ ಕಲಾಂಗಣದಲ್ಲಿ ‘ಅಂತರ್ ರಾಷ್ಟ್ರೀಯ ಸಂಗೀತ ದಿನಾಚರಣೆ’ಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕ ಸೈಮನ್ ಪಾಯ್ಸ್ ಬಜಾಲ್ ಇವರನ್ನು ಸನ್ಮಾನಿಸಲಾಯಿತು. ಸುನಿಲ್ ಮೊಂತೇರೊ ಸನ್ಮಾನ ಪತ್ರ ವಾಚಿಸಿದರು. ಪದಾಧಿಕಾರಿಗಳಾದ ಲುವಿಸ್ ಜೆ. ಪಿಂಟೊ, ನವೀನ್ ಲೋಬೊ, ಎಲ್ರೊನ್ ರೊಡ್ರಿಗಸ್ ಮತ್ತು ಸುಮೇಳ್ ಸಮನ್ವಯಿ ರೈನಾ ಸಿಕ್ವೇರಾ ಉಪಸ್ಥಿತರಿದ್ದು ಸನ್ಮಾನ ನೆರವೇರಿಸಿದರು. ಸನ್ಮಾನಿತ ಸೈಮನ್ ಪಾಯ್ಸ್ ಬಜಾಲ್ ಇವರು ಗಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ 262ನೇ ತಿಂಗಳ ವೇದಿಕೆಯಲ್ಲಿ ‘ವಿಜೆ ವಿಣೆ ವಿಯೊಲ್ ವಿಣೆ’ (unplugged) ಸಂಗೀತ ಸಂಜೆ ಪ್ರದರ್ಶನಗೊಂಡಿತು. ಕೊಂಕಣಿ, ಹಿಂದಿ, ಕನ್ನಡ, ಬಂಗಾಲಿ, ಇಂಗ್ಲೀಷ್, ಸ್ಪಾನಿಶ್ ಮತ್ತು ಶ್ರೀಲಂಕನ್ ಭಾಷೆಯ 12 ಹಾಡುಗಳು ಹಾಗೂ ಒಂದು ವಾದ್ಯ ಸಂಗೀತವನ್ನು ಸಾದರ ಪಡಿಸಿದರು. ಐರಿನ್ ರೆಬೆಲ್ಲೊ, ರೈನಾ ಸಿಕ್ವೇರಾ, ಜಾಸ್ಮಿನ್ ಲೋಬೊ, ಪ್ರೀತಿ ಲೋಪಿಸ್, ಕವಿತಾ ಜೊರ್ಜ್, ಸೋನಲ್ ಮೊಂತೇರೊ, ಸಿಮೊನ್…
ಉಡುಪಿ : ಸಂಗೀತ ಸಭಾ ಹಾಗೂ ಆಭರಣ ಜುವೆಲರ್ಸ್ ಸಹಯೋಗದೊಂದಿಗೆ ದಿನಾಂಕ 08-10-2023ರ ಸಂಜೆ 4.30ರಿಂದ ಅಜ್ಜರಕಾಡು ಟೌನ್ ಹಾಲ್ ಸಭಾಂಗಣದಲ್ಲಿ ‘ಸಂಗೀತ ಸೌರಭ’, ಭಕ್ತಿ ಮತ್ತು ನಾಟ್ಯ ಸಂಗೀತ ಕಾರ್ಯಕ್ರಮವು ಜರಗಲಿದೆ. 1962ರಲ್ಲಿ ವಿಜಯನಾಥ್ ಶೆಣೈ ಅವರಿಂದ ಪ್ರಾರಂಭಿಸಲ್ಪಟ್ಟ ‘ಸಂಗೀತ ಸಭಾ’ ಹತ್ತು ಹಲವಾರು ಸ೦ಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಜನಮನ್ನಣೆಗೆ ಪಾತ್ರವಾಗಿದೆ. ಸಂಗೀತ ಸೌರಭ-2023ರ ಸಂಗೀತ ಸಂಭ್ರಮದಲ್ಲಿ ಈಗಾಗಲೇ ಹಲವೆಡೆ ತಮ್ಮ ಗಾನ ಪಾಂಡಿತ್ಯದಿಂದ ಗಾನ ರಸಿಕರ ಮನಸೂರೆಗೊಂಡ, ಝೀ ಸರಿಗಮಪ ಲಿಟ್ಲ್ ಚಾಂಪ್ಸ್ ಖ್ಯಾತಿಯ ಜ್ಞಾನೇಶ್ವರಿ ಗಾಡಗೆ ಭಜನ ಮತ್ತು ನಾಟ್ಯ ಸಂಗೀತ ಪ್ರಸ್ತುತಪಡಿಸಲಿದ್ದಾರೆ. ಹಾರ್ಮೋನಿಯಂನಲ್ಲಿ ಬಾಲ ಪ್ರತಿಭೆ, ಸಹೋದರಿ ಕಾರ್ತಿಕೀ ಗಾಡಗೆ ಜತೆಯಾಗಲಿದ್ದಾರೆ. ಸಹ ಕಲಾವಿದರಾದ ನಿತೇಶ್ ತೊಂಬ್ರೆ (ಪಕವಾಜ್), ವಿಶಾಲ್ ಪಾಟೀಲ್ (ತಬಲಾ) ಹಾಗೂ ಸೂರಜ್ ಪಾಟೀಲ್ (ಸೈಡ್ ರಿದಂ) ಪಾಲ್ಗೊಳ್ಳಲಿದ್ದಾರೆ. ಬಾಲಪ್ರತಿಭೆಗಳ ಪೋಷಕರಾದ ಗಣೇಶ್ ಗಾಡಗೆ, ರಾಧಾ ಗಾಡಗೆ ಕೋರಸ್ ಮೂಲಕ ಸಾಥ್ ನೀಡಲಿದ್ದಾರೆ. ಸಂಗೀತಾಸಕ್ತರಿಗೆ ‘ಪಾಸ್’ ಮುಖೇನ ಉಚಿತ ಪ್ರವೇಶ ಇದ್ದು,…
6.10.2007ರಂದು ವೆಂಕಟೇಶ.ಡಿ ಹಾಗೂ ಜ್ಯೋತಿ ಎಂ.ಜಿ. ಇವರ ಮಗಳಾಗಿ ಸ್ವಸ್ತಿಶ್ರೀ ಅವರ ಜನನ. ಎಸೆಸಲ್ಸಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಎಕ್ಸ್ಪರ್ಟ್ ಕಾಲೇಜ್ ನಲ್ಲಿ ಪ್ರಥಮ PUC ಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ತಾಯಿ ಮತ್ತು ತಂದೆಯ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದ ಇವರು, ಯಕ್ಷಗಾನ ಗುರು ಮಂಜುನಾಥ ಕುಲಾಲ್ ಐರೋಡಿ ಹಾಗೂ ಸೀತಾರಾಮ ಕುಮಾರ್ ಕಟೀಲ್ ಇವರ ಬಳಿ ಯಕ್ಷಗಾನವನ್ನು ಕಲಿಯುತ್ತಿದ್ದಾರೆ. ಪಾತ್ರದ ಹಿಡಿತ, ಪಾತ್ರಕ್ಕೆ ಬೇಕಾದ ತಯಾರಿಯನ್ನು ಈಗಾಗಲೇ ಆ ಪಾತ್ರದಲ್ಲಿ ಅನುಭವ ಇರುವ ಪಾತ್ರಧಾರಿಯಿಂದ ತಿಳಿದು, ಕಲಿತು ಹಾಗೂ ಭಾಗವತರಿಂದ ಸರಿಯಾಗಿ ಅರಿತು ರಂಗದ ನಡೆಗೆ ಚ್ಯುತಿ ಬಾರದಂತೆ ಅಳವಡಿಸಿ ಯಕ್ಷಗಾನವನ್ನು ಚಾಚು ತಪ್ಪದಂತೆ ಬೆಳೆಸುವುದರೊಂದಿಗೆ ತಾನು ಬೆಳೆಯುತ್ತೇನೆ ಎಂದು ಹೇಳುತ್ತಾರೆ ಸ್ವಸ್ತಿಶ್ರೀ. ಅಭಿಮನ್ಯು ಕಾಳಗ, ಜಾಂಬವತಿ ಕಲ್ಯಾಣ, ಮೀನಾಕ್ಷಿ ಪರಿಣಯ, ಬಬ್ರುವಾಹನ ಕಾಳಗ, ಶ್ರೀ ಕೃಷ್ಣ ಲೀಲಾಮೃತ, ಪಾಂಚಜನ್ಯ, ಪಂಚವಟಿ ನೆಚ್ಚಿನ ಪ್ರಸಂಗಗಳು. ಮೀನಾಕ್ಷಿ, ಅಭಿಮನ್ಯು, ಷಣ್ಮುಖ, ರುಕ್ಮಾಂಗ, ಅಸಿಕೆ, ಕೃಷ್ಣ, ಬಬ್ರುವಾಹನ ಹಾಗೂ ಇನ್ನು ಅನೇಕ ಇವರ ನೆಚ್ಚಿನ…
ಮಡಿಕೇರಿ : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ದಿನಾಂಕ 20-10-2023ರಂದು ನಗರದ ಗಾಂಧಿ ಮೈದಾನದಲ್ಲಿ 10ನೇ ವರ್ಷದ ದಸರಾ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಮಕ್ಕಳ ದಸರಾ ಸ್ಪರ್ಧೆಗಳು ದಿನಾಂಕ 20-10-2023ರಂದು ಬೆಳಗ್ಗೆ 9.30 ಗಂಟೆಯಿಂದ ಪ್ರಾರಂಭವಾಗಲಿದೆ. ಮಕ್ಕಳಿಂದ ಸಂತೆ ಮತ್ತು ಮಕ್ಕಳಿಂದ ಅಂಗಡಿ – ಎಸ್ಎಸ್ಎಲ್ಸಿ ಒಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿತವಾದ ಮಕ್ಕಳ ಸಂತೆಯಲ್ಲಿ ಒಂದು ತಂಡದಲ್ಲಿ ಗರಿಷ್ಠ 5 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಮಕ್ಕಳ ಅಂಗಡಿಯಲ್ಲಿ ಗರಿಷ್ಠ ಇಬ್ಬರು ಸ್ಪರ್ಧಿಗಳಿಗೆ ಅವಕಾಶವಿದೆ. ಮಕ್ಕಳಿಂದ ಮಂಟಪ- 10 ನಿಮಿಷದ ಪ್ರದರ್ಶನಾವಧಿಯುಳ್ಳ ಮಂಟಪ ತಯಾರಿಕಾ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ 6 ಮಕ್ಕಳು ಪಾಲ್ಗೊಳ್ಳಬಹುದು. ಎಲ್.ಕೆ.ಜಿ.ಯಿಂದ 1 ನೇ ತರಗತಿ, 2 – 4ನೇ ತರಗತಿ, 5 – 7 ನೇ ತರಗತಿಗಳ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಛದ್ಮವೇಷ ಸ್ಪರ್ಧೆಗಳು ನಡೆಯಲಿದ್ದು, ಗರಿಷ್ಠ 2 ನಿಮಿಷದ ಪ್ರದರ್ಶನಕ್ಕೆ ಮಾತ್ರ ಅವಕಾಶ ಇದೆ. ವಸ್ತಾಲಂಕಾರಕ್ಕೆ…