Author: roovari

ಬೆಂಗಳೂರು: ‘ನಮ್ಮ ಸಂವಿಧಾನವನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ’ ಎಂದು ಖ್ಯಾತ ಪತ್ರಕರ್ತ, ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರಾದ ಪಿ. ಸಾಯಿನಾಥ್ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನಲ್ಲಿ ಇಂದು ‘ಬಹುರೂಪಿ’ ಪ್ರಕಾಶನ ಹಮ್ಮಿಕೊಂಡಿದ್ದ ಪಿ ಸಾಯಿನಾಥ್ ಅವರ, ಜಿ ಎನ್ ಮೋಹನ್ ಅವರು ಕನ್ನಡಕ್ಕೆ ಅನುವಾದಿಸಿರುವ ‘ಕೊನೆಯ ಹೀರೋಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ‘ಬಹುರೂಪಿ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಿ ಸಾಯಿನಾಥ್ ಅವರ ‘ಕೊನೆಯ ಹೀರೋಗಳು’ ಕೃತಿಯನ್ನು ಹಿರಿಯ ವಿದ್ವಾಂಸರಾದ ಪ್ರೊ ಪುರುಷೋತ್ತಮ ಬಿಳಿಮಲೆ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀಜಾ ವಿ ಎನ್, ಡಾ ವಿಜಯಮ್ಮ, ಸ್ವಾತಂತ್ರ್ಯ ಹೋರಾಟದ ಕುಟುಂಬಸ್ಥರು, ಎಚ್ ಎನ್ ನಾಗಮೋಹನ ದಾಸ್, ಎನ್ ಆರ್ ವಿಶುಕುಮಾರ್, ಜಿ ಎನ್ ಮೋಹನ್ ಉಪಸ್ಥಿತರಿದ್ದರು. ನಮ್ಮ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ನಾಶವನ್ನು ತಡೆಯುವುದ ತುರ್ತು ಅಗತ್ಯವಾಗಿದೆ. ಕೇಂದ್ರ ಸರಕಾರವು ರೂಪಿಸುತ್ತಿರುವ ಕಾಯಿದೆಗಳು ಜನ ವಿರೋಧಿಯಾಗಿದೆ. ಸಮಾಜವನು ನಿಧಾನವಾಗಿ ಉಸಿರುಗಟ್ಟಿಸುತ್ತಿದೆ. ರೈತರು ದೆಹಲಿಯಲ್ಲಿ  ನಡೆಸಿದ ಪ್ರತಿಭಟನೆ ರೈತರ ಹಕ್ಕುಗಳನ್ನು ರಕ್ಷಿಸುವುದು ಮಾತ್ರವಾಗಿರಲಿಲ್ಲ,…

Read More

ಮಂಗಳೂರು: ಹಿರಿಯ ನೃತ್ಯ ಗುರು ಕರ್ನಾಟಕ ಕಲಾಶ್ರೀ ನಾಟ್ಯಾಚಾರ್ಯ ಗುರು ಬಿ.ಪ್ರೇಂನಾಥ್ ದಿನಾಂಕ 01-10-2023ರಂದು ಮಧ್ಯಾಹ್ನ ತಮ್ಮ 87ನೇ ವಯಸ್ಸಿನಲ್ಲಿ ಇಹವನ್ನು ತ್ಯಜಿಸಿದ್ದಾರೆ. ಗುರು ಪರಂಪರೆಯಿಂದ ಬಂದ ಶಾಸ್ತ್ರೀಯ ನೃತ್ಯ ಕಲೆಯ ಶುದ್ಧತೆಯನ್ನು ಉಳಿಸಿ ಬೆಳೆಸಿ ನೃತ್ಯ ಕಲೆಗೆ ನ್ಯಾಯ ಒದಗಿಸಿದ ನೃತ್ಯ ಗುರುಗಳಲ್ಲಿ ಹಿರಿಯರಾದ ಪ್ರೇಂನಾಥ್ ಇವರೂ ಒಬ್ಬರು. 1961ರಲ್ಲಿ ‘ಲಲಿತ ಕಲಾ ಸದನ’ ಎಂಬ ಹೆಸರಿನಲ್ಲಿ ನೃತ್ಯ ಸಂಗೀತ ಶಾಲೆಯನ್ನು ಮಂಗಳೂರಿನ ಉರ್ವಸ್ಟೋರ್ ನಲ್ಲಿ ಸ್ಥಾಪಿಸಿದರು. ಗುರುಗಳು ತಾವು ಮಾತ್ರ ನೃತ್ಯ ಶಾರದೆಯ ಸೇವೆ ಮಾಡಿದ್ದಲ್ಲದೆ ತಮ್ಮ ಪೂರ್ಣ ಕುಟುಂಬವೇ ಭರತನಾಟ್ಯ ಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಮಕ್ಕಳಿಗೆ ಮಾರ್ಗದರ್ಶನ ಮಾಡಿದವರು. ಅಭಿನಯ ಶಿರೋಮಣಿ ಗುರು ರಾಜರತ್ನಂ ಪಿಳ್ಳೆಯವರಿಂದ ಪಂದನಲ್ಲೂರು ಶೈಲಿಯ ಭರತನಾಟ್ಯ ಪಾಠವನ್ನು ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಸಮರ್ಪಣಾ ಭಾವದಿಂದ ಕಲಾಮಾತೆಗೆ ನ್ಯಾಯ ಒದಗಿಸಿದ್ದಾರೆ. ದೇಶ-ವಿದೇಶಗಳಲ್ಲಿ ಶಿಷ್ಯರನ್ನು ಹೊಂದಿದ್ದ ಇವರು ಕಥಕ್ಕಳಿ, ಭರತನಾಟ್ಯ ಅಭ್ಯಾಸದೊಂದಿಗೆ ಸಂಗೀತ, ಮೃದಂಗ ವಾದನವನ್ನೂ ಕಲಿತಿದ್ದರು. ಕರಾವಳಿ ನೃತ್ಯ ಕಲಾ ಪರಿಷತ್…

Read More

ಕೊಚ್ಚಿ : ಮಾತಂಗಿ ಮತ್ತು ಅಕ್ಬರ್ ಟ್ರಾವೆಲ್ಸ್ ಪ್ರಸ್ತುತಪಡಿಸುವ ‘ಮಾತಂಗಿ ಫೆಸ್ಟಿವಲ್ 2023’ ಕಾರ್ಯಕ್ರಮವು ದಿನಾಂಕ 02-10-2023ರಿಂದ 06-10-2023ರವರೆಗೆ ಕೊಚ್ಚಿಯ ತ್ರಿಪುನಿಥುರ, ಜೆ.ಟಿ.ಪಿ.ಎ.ಸಿ.ಯಲ್ಲಿ ನಡೆಯಲಿದೆ. ದಿನಾಂಕ 02-10-2023ರಂದು ನವ್ಯಾ ನಾಯರ್, ದಿನಾಂಕ 03-10-2023ರಂದು ರಮಾ ವೈದ್ಯನಾಥನ್, ದಿನಾಂಕ 04-10-2023ರಂದು ಮೀನಾಕ್ಷಿ ಶ್ರೀನಿವಾಸನ್, ದಿನಾಂಕ 05-10-2023ರಂದು ಪ್ರಿಯದರ್ಶಿನಿ ಗೋವಿಂದ್ ಮತ್ತು ದಿನಾಂಕ 06-10-2023ರಂದು ಜಾನಕಿ ರಂಗರಾಜನ್ ಇವರುಗಳು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ನವ್ಯಾ ನಾಯರ್ : ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಎದ್ದು ಕಾಣುವ ನಟಿಯರಲ್ಲಿ ಒಬ್ಬರಾದ ನವ್ಯಾ ನಾಯರ್ ಭಾರತೀಯ ನೃತ್ಯ ಸಂಪ್ರದಾಯವನ್ನು ಮೀರಿದ ಅಯಸ್ಕಾಂತೀಯ ಆಕರ್ಷಣೆಯನ್ನು ಹೊಂದಿದ್ದಾರೆ. ಅವರ ನೃತ್ಯ ಕೌಶಲ್ಯವು ಭಾವನೆಗಳ ಸ್ವರಮೇಳವಾಗಿದೆ. ಸೊಗಸಾದ ಚಲನೆಗಳು ಮತ್ತು ಅಭಿವ್ಯಕ್ತಿಯು ಸನ್ನೆಗಳ ಮತ್ತು ಭಂಗಿಗಳ ಮೂಲಕ ವ್ಯಕ್ತವಾಗುತ್ತದೆ. ಈ ಭಾವಪೂರ್ಣವಾದ ಪ್ರದರ್ಶಕರು ಕೇರಳ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಂದ ಗೌರವ ಪಡೆದಿದ್ದಾರೆ. ಸಂಸ್ಥಾಪಕಿಯಾಗಿ ‘ಮಾತಂಗಿ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ನ್ನು ನೃತ್ಯ ಕ್ಷೇತ್ರದ ಪ್ರದರ್ಶನ…

Read More

ಸುವರ್ಣ ಕುಮಾರಿ ಹಾಗೂ ಮಧೂರು ಮೋಹನ ಕಲ್ಲೂರಾಯ ಇವರ ಮಗನಾಗಿ 02.02.1996ರಂದು ರಾಮಪ್ರಕಾಶ ಕಲ್ಲೂರಾಯ ಮಧೂರು ಅವರ ಜನನ. M-tech in mechanical engineering ಇವರ ವಿದ್ಯಾಭ್ಯಾಸ. ಮನೆಯ ವಾತಾವರಣ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣಂದಿರು ಹಾಗೂ ಹಿಮ್ಮೇಳದ ಮೇಲಿನ ಆಸಕ್ತಿ ಯಕ್ಷಗಾನ ಚೆಂಡೆ ಹಾಗೂ ಮದ್ದಳೆ ಕಲಿಯಲು ಪ್ರೇರಣೆಯಾಯಿತು. ಯಕ್ಷಗಾನದ ಚೆಂಡೆ ಮದ್ದಲೆ ಗುರುಗಳು:-  ಮುಂಡೃಪ್ಪಾಡಿ ಶ್ರೀಧರ್ ರಾವ್. ಮೋಹನ ಬೈಪಡಿತ್ತಾಯ. ಚಂದ್ರ ಶೇಖರ್ ಆಚಾರ್ಯ ಗುರುವಾಯನಕೆರೆ. ಕೃಷ್ಣ ಪ್ರಕಾಶ ಉಳಿತ್ತಾಯ. ಕನ್ನಡಿಕಟ್ಟೆ, ಬಲಿಪರು, ಪ್ರದೀಪ್ ಕುಮಾರ್ ಗಟ್ಟಿ, ಹೊಳ್ಳ, ತಲಪಾಡಿ ಆಳ್ವ, ಅಮ್ಮಣ್ಣಾಯ, ಗಿರೀಶ್ ಕಕ್ಕೆಪದವು, ಕಾವ್ಯಶ್ರೀ ನೆಚ್ಚಿನ ಭಾಗವತರು. ಶಂಕರನಾರಾಯಣ ಪದ್ಯಾಣ, ದೇಲಂತಮಜಲು ಸುಬ್ರಮಣ್ಯ ಭಟ್ , ಮಣಿಮುಂಡ ಸುಬ್ರಮಣ್ಯ ಶಾಸ್ತ್ರಿ, ಕೃಷ್ಣ ಪ್ರಕಾಶ ಉಳಿತ್ತಾಯ, ಚೈತನ್ಯ ಪದ್ಯಾಣ ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು. ದೇವಿ ಮಹಾತ್ಮೆ, ದುಶ್ಯಾಸನ ವಧೆ, ಸುಧಾಮ, ಇಂದ್ರಜಿತು ಎಲ್ಲಾ ಪುರಾಣ ಪ್ರಸಂಗಗಳು ನೆಚ್ಚಿನ ಪ್ರಸಂಗಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ…

Read More

ಕುಳಾಯಿ : ಕುಳಾಯಿಯ ವಿಷ್ಣುಮೂತಿ೯ದೇವಸ್ಥಾನದಲ್ಲಿ ನಡೆಯುವ ಮಾಸಿಕ ಹುಣ್ಣಿಮೆಯ ಯಕ್ಷಗಾನ ತಾಳಮದ್ದಳೆ ಕಾಯ೯ಕ್ರಮದ ಅಂಗವಾಗಿ ‘ಇಂದ್ರಜಿತು’ ಪ್ರಸಂಗದ ತಾಳಮದ್ದಳೆ ದಿನಾಂಕ 29-09-2023ರ ಶುಕ್ರವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಅರ್ಥಧಾರಿಗಳಾಗಿ ಶ್ರೀರಾಮನಾಗಿ ಹಿರಿಯ ಹವ್ಯಾಸಿ ಅರ್ಥದಾರಿ ಶ್ರೀ ರಾಧಾಕೃಷ್ಣ ಭಟ್, ಇಂದ್ರಜಿತು ಪಾತ್ರದಲ್ಲಿ ಉದಯೋನ್ಮುಖ ಪ್ರತಿಭೆ ಶ್ರೀ ಚಂದ್ರಶೇಖರ ಕೊಡಿಪ್ಪಾಡಿ, ಹನುಮಂತನ ಪಾತ್ರದಲ್ಲಿ ಹಿರಿಯ ಹವ್ಯಾಸಿ ಅರ್ಥದಾರಿ ಹಾಗೂ ಪ್ರವಚನಕಾರ, ಶ್ರೀ ಮನೋಹರ ಕುಂದರ್ ಬಡಾ ಎರ್ಮಾಳು, ಲಕ್ಷ್ಮಣನಾಗಿ ಈ ಸಂಘದ ಸಂಚಾಲಕ ಹಾಗೂ ಹಿರಿಯ ಅರ್ಥದಾರಿಗಳಾದ ಶ್ರೀ ವಾಸುದೇವ ಆಚಾರ್ಯ ಕುಳಾಯಿ, ಮಾಯಾಸೀತೆ ಪಾತ್ರದಲ್ಲಿ ಮಹಿಳಾ ಯಕ್ಷಗಾನ ಸಂಘದ ಸದಸ್ಯೆ ಹಾಗೂ ನಿವೃತ್ತ ಕಾಲೇಜು ಉಪನ್ಯಾಸಕಿರಾಗಿರುವ ಶ್ರೀಮತಿ ಲಲಿತಾ ಭಟ್ ತಾಳ್ತಜೆ ಹಾಗೂ ವಿಭೀಷಣನ ಪಾತ್ರದಲ್ಲಿ ಯವ ಪ್ರತಿಭೆ ಮತ್ತು ರಂಗಭೂಮಿ ಕಲಾವಿದ ಶ್ರೀ ವೈಶಾಖ್ ಸಹಕರಿಸಿದರು. ಹಿಮ್ಮೇಳದಲ್ಲಿ ಹಿರಿಯ ಭಾಗವತರಾದ ಶ್ರೀ ದಯಾನಂದ ಕೋಡಿಕಲ್, ಚೆಂಡೆಯಲ್ಲಿ ಯುವ ಕಲಾವಿದ ಕಟೀಲು ಮೇಳದ ಮದ್ದಳೆಗಾರರಾದ ಶ್ರೀ ಸೂರಜ್ ಆಚಾರ್ಯ ಮುಲ್ಕಿ,ಮದ್ದಳೆಯಲ್ಲಿ ಶ್ರೀ ಎಸ್.ಎನ್.ಭಟ್…

Read More

ಕಾಸರಗೋಡು : ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನೋತ್ಸವದ ಅಂಗವಾಗಿ ‘ಪುರಾತನ ಕಲಾಕೃತಿ ಮತ್ತು ಕರಕುಶಲ ವಸ್ತು ಪ್ರದರ್ಶನ’ವನ್ನು ದಿನಾಂಕ 23-09-2023ರಂದು ಏರ್ಪಡಿಸಲಾಗಿತ್ತು. ಈ ವೇಳೆ ಹಿಂದಿನ ತಲೆಮಾರುಗಳ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ತಾಳೆಗರಿ, ವಾಲುರುಳಿ, ಚಾಪೆ, ಗೆರಸೆ, ತೈಲ ಬಾಂಡಲೆ, ರಾಟೆ, ಪೀಕದಾನಿ, ಬುಡ್ಡಿದೀಪ, ಕುಂಭ, ಕಡೆಗೋಲು, ಭಸ್ಮ ಪೆಟ್ಟಿಗೆ, ಚಿಮಣಿ ದೀಪ, ಗೆರಟೆಯ ವಿವಿಧ ವಸ್ತುಗಳು, ಪೂಜಾ ದೀಪಗಳು, ಟೇಪ್ ರೆಕಾರ್ಡರ್, ಕ್ಯಾಸೆಟ್, ಪ್ರಾಚೀನ ಕಾಲದ ಡಯಲ್‌ ಗಳು ಇತ್ಯಾದಿ ಗಮನ ಸೆಳೆದವು. ವಸ್ತು ಪ್ರದರ್ಶನವು ಹೊಸ ಪೀಳಿಗೆಗೆ ಆಸಕ್ತಿದಾಯಕವಾಗಿ ಆಕರ್ಷಿಸಿದವು. ಅಲ್ಲದೆ ಗೆರಟೆ, ಹುಲ್ಲು, ತ್ಯಾಜ್ಯ ವಸ್ತುಗಳನ್ನು ಬಳಸಿ ತಯಾರಿಸಿದ ಕರಕುಶಲ ಮತ್ತು ಚಿತ್ರಕಲೆಗಳನ್ನು ಪ್ರದರ್ಶಿಸಲಾಯಿತು. ವಸ್ತು ಪ್ರದರ್ಶನ ವೀಕ್ಷಿಸಲು ಪರಿಸರದ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರು. ಇದೇ ಸಂದರ್ಭ ನಡೆದ ವಿಜ್ಞಾನ ಮೇಳ, ಸಮಾಜ ವಿಜ್ಞಾನ ಮೇಳ, ಗಣಿತ ಮೇಳ, ಐಟಿ ಮೇಳ ಹಾಗೂ ವೃತ್ತಿ…

Read More

ಮಂಗಳೂರಿನ ಹಲವಾರು ರಂಗ ಸಂಘಟನೆಗಳು ಜೊತೆಯಾಗಿ, ಸಂತ ಅಲೋಷಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ‘ಗಾಯಗಳು’ ಎಂಬ ಸುಂದರ ನಾಟಕ ಪ್ರದರ್ಶನವನ್ನು ದಿನಾಂಕ 28-09-2023ರಂದು ಆಯೋಜನೆ ಮಾಡಿದ್ದರು. ಶ್ರೀರಂಗಪಟ್ಟಣದ ‘ನಿರ್ದಿಗಂತ’ ನಾಟಕ ತಂಡ ಅಭಿನಯಿಸಿದ ಈ ನಾಟಕದ ಪರಿಕಲ್ಪನೆ ಮತ್ತು ನಿರ್ದೇಶನ ಖ್ಯಾತ ರಂಗ ನಿರ್ದೇಶಕರಾದ ಡಾ.ಶ್ರೀಪಾದ ಭಟ್ ಅವರದ್ದು. ಗಾಯಗಳು ರಂಗಪ್ರಯೋಗ ಆಳವಾದ ಅನುಭವ ನೀಡಿದ ನಾಟಕ. ಒಂದೇ ನಾಟಕದೊಳಗೆ ನಾಲ್ಕು ಕತೆಗಳಿವೆ ನಾಲ್ಕೂ ಮನಸ್ಸಿಗಾದ ಗಾಯದ ಕತೆಗಳು.  ದೇಶದ ಯುದ್ಧಕ್ಕಾಗಿ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಿ, ಅವರು ಹಿಂದಿರುಗಿ ಬರುತ್ತಾರೋ, ಇಲ್ಲವೋ ಎಂದು ಕಾಯುತ್ತಾ ಪರಿತಪಿಸುವ ತಂದೆ ತಾಯಂದಿರು. ತಮ್ಮ ಮಕ್ಕಳನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದೇವೆ ಎಂದು ಗರ್ವದಿಂದ ಎದೆ ಉಬ್ಬಿಸಿಕೊಳ್ಳುತ್ತಲೇ ಒಳಗೊಳಗೇ ಕೊರಗುವ ನೋವನ್ನು ಅನುಭವಿಸುವ ಪೋಷಕರು. ಮಹಾಭಾರತದ ಸ್ಮಶಾನ ಕುರುಕ್ಷೇತ್ರ ಪ್ರಸಂಗದಲ್ಲಿ ಸತ್ತು ಹೋದ ತಮ್ಮ ಮಕ್ಕಳನ್ನು ಹುಡುಕುತ್ತಿರುವ ಕೌರವ ಮತ್ತು ಪಾಂಡವ ಪಡೆಯ ಪೋಷಕರು ತಮ್ಮ ಮಕ್ಕಳ ಹೆಣವನ್ನು ಕಂಡಾಗ ನೋವಿಗೆ ದುಃಖಕ್ಕೆ ಪಕ್ಷ ಬೇಧ…

Read More

ನಿತೀಶ್ ಪಿ. ಬೈಂದೂರು ಇವರ ಛಾಯಾಚಿತ್ರ ಕ್ಷೇತ್ರದ ಸಾಧನೆಗಾಗಿ, ಪಬ್ಲಿಕ್ ರಿಲೇಷನ್ ಸೊಸೈಟಿ ಆಫ್ ಇಂಡಿಯಾ, ನವದೆಹಲಿಯಲ್ಲಿ ಆಯೋಜಿಸಿದ ‘ಕೌಟಿಲ್ಯ ಅವಾರ್ಡ್ಸ್ – 2023’ರ ‘ಯಂಗ್ ಫೋಟೋಗ್ರಾಫರ್ ಆಫ್ ದ ಇಯರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೈಂದೂರಿನ ಶ್ರೀಮತಿ ಕಲಾವತಿ ಮತ್ತು ಪಿ. ಸುಬ್ರಾಯ ದಂಪತಿಯ ಸುಪುತ್ರ. ಪದವಿ ಶಿಕ್ಷಣವನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದು, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದು ಕೊಂಡಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯ ಆಯೋಜಿಸಿದ ಕರ್ನಾಟಕ ರಾಜ್ಯ ಉಪನ್ಯಾಸಕರ ಆರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಪ್ರಸ್ತುತ ಡಾ.ಬಿ.ಶೈಲಶ್ರೀ ಅವರ ಮಾರ್ಗದರ್ಶನದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮದ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್‌.ಡಿ. ಸಂಶೋಧನಾ ಅಧ್ಯಯನವನ್ನು ನಡೆಸುತ್ತಿದ್ದಾರೆ. ಛಾಯಚಿತ್ರ ಪ್ರಶಸ್ತಿ: • ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಸ್ಪಾಟ್ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, • ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಶ್ರೀದೇವಿ ಕಾಲೇಜಿನಲ್ಲಿ ಆಯೋಜಿಸಿದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, • ಮಂಗಳೂರು ವಿಶ್ವವಿದ್ಯಾನಿಲಯದ ಟೂರಿಸಂ…

Read More

ಬೆಂಗಳೂರು : ಬೆಂಗಳೂರಿನ ‘ತಿಂಮ ಸೇನೆ’ ತಂಡ ಆಯೋಜಿಸುವ ಸಂವಾದ ಕಾರ್ಯಕ್ರಮವು ದಿನಾಂಕ 28-09-2023ರಂದು ಬೆಂಗಳೂರಿನ ಜೆ.ಪಿ ನಗರದ 8ನೇ ಹಂತದ ಜಂಬೂ ಸವಾರಿ ದಿಣ್ಣೆಯ ಟಿ.ಕೆ ದೀಪಕ್ ಲೇಔಟಿನಲ್ಲಿ ನಡೆಯಿತು. ತಿಂಮಸೇನೆಯ ಈ ವಿಶೇಷ ಕಾರ್ಯಕ್ರಮಕ್ಕೆ ಕಳೆ ತಂದವರು ಸಾಹಿತಿ, ಕವಿ, ಗೀತರಚನಕಾರರಾದ  ಶ್ರೀ ಜಯಂತ್ ಕಾಯ್ಕಿಣಿ. ಈ ಕಾರ್ಯಕ್ರಮದಲ್ಲಿ 40 ಪದಗಳಿಗೆ ಮೀರದ ಒಂದು ಸಣ್ಣಕತೆಯ ರಚನೆಯನ್ನು ಎಲ್ಲ ಸದಸ್ಯರು ಮಾಡಿ, ಅದನ್ನು ಅಲ್ಲಿ ಓದಿದರು. ಒಬ್ಬೊಬ್ಬರದೂ ಒಂದೊಂದು ರೀತಿಯ ವಿನ್ಯಾಸ, ವಿಷಯ ವೈವಿಧ್ಯ ಮತ್ತು ನಿರೂಪಣಾ ಚಾತುರ್ಯ.  ಆ ಕತೆಗಳ ಬಗ್ಗೆ ಮಾತನಾಡುತ್ತಲೇ, ತಮ್ಮ ನೆನಪಿನ ಬುತ್ತಿಯಿಂದ ಅನೇಕ ಸಂಗತಿಗಳನ್ನು ಹೊರ ತೆಗೆದು ಕತೆಗಳ ಬಗ್ಗೆ ವಿಶೇಷ ವ್ಯಾಖ್ಯಾನವನ್ನು ಜಯಂತ ಕಾಯ್ಕಿಣಿಯವರು ಮಾಡಿದರು. ಬಳಿಕ ಮಾತನಾಡಿದ ಅವರು ‘ಕತೆ ಅನುಭವದಿಂದ ಉದ್ಭವಿಸಿದರೂ, ಅದು ಕತೆಗಾರರನ್ನು ಮೀರಿದ್ದು’ ಎಂದರು. ಸಂವೇದನಾ ಭರಿತ ಅವರ ಮಾತುಗಳು, ಕೇಳುಗರ ಮನಸ್ಸು ಸೆಳೆದುದಷ್ಟೇ ಅಲ್ಲದೆ ಕಥೆಯ ರಚನೆಗೆ ಬೇಕಾದ ಅನೇಕ ಸಲಹೆ, ಮಾರ್ಗದರ್ಶನವನ್ನು…

Read More

ಬೆಂಗಳೂರು : ಹಿಂದೂಸ್ತಾನಿ ಸಂಗೀತದ ಅಧ್ಯಯನ ಮತ್ತು ಅಧ್ಯಾಪನದಲ್ಲಿ 20 ವರ್ಷಗಳಿಂದ ಕಾರ್ಯನಿರತವಾಗಿರುವ ಸ್ವರ ಗಾಂಧಾರ ಸಂಗೀತ ವಿದ್ಯಾಲಯ ಅರ್ಪಿಸುವ ವಿಂಶತಿ ಗಾನ ಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮವು ದಿನಾಂಕ 02-10-2023ರ ಸೋಮವಾರದಂದು ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅಖಿಲ ಹವ್ಯಕ ಮಹಾಸಭಾದಲ್ಲಿ ಸಂಜೆ ಘಂಟೆ 5.00 ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿಗಳಾದ ಡಾ.ಅಹಲ್ಯಾ ಶರ್ಮಾ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ.ಮಲ್ಲೇಪುರಂ ಜಿ.ವೆಂಕಟೇಶ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬೆಳಗ್ಗೆ ಘಂಟೆ  9.00ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯ ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ ಪ್ರಸ್ತುತಿ ನಡೆಯಲಿದ್ದು, ತಬಲಾದಲ್ಲಿ ಶ್ರೀ ಪ್ರಕಾಶ ದೇಶಪಾಂಡೆ, ಶ್ರೀ ನಾಗರಾಜ ಹೆಗಡೆ, ಶ್ರೀ ಮಂಜುನಾಥ ಭಟ್ ಹಾಗೂ ಹಾರ್ಮೋನಿಯಂನಲ್ಲಿ ಶ್ರೀಮತಿ ಪ್ರತಿಭಾ ಹೆಗಡೆ ಸಹಕರಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಸಂಜೆ ಘಂಟೆ 6.00ರಿಂದ ನಡೆಯಲಿರುವ ‘ಗಾನ ಸಂಭ್ರಮ’ದಲ್ಲಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ವಿದುಷಿ…

Read More