Subscribe to Updates
Get the latest creative news from FooBar about art, design and business.
Author: roovari
ಕುತ್ತಾರು : ಉಳ್ಳಾಲದ ‘ಮಂತ್ರ ನಾಟ್ಯಕಲಾ ಗುರುಕುಲ’ದ 12ನೇ ವರ್ಷದ ಗುರುಕುಲ ಉತ್ಸವದಲ್ಲಿ “ಯಕ್ಷ ಮಂತ್ರ್ಯಕ” ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಜನವರಿ 2025 ರಂದು ಶ್ರೀ ರಾಜ ರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ “ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹೊಣೆಗಾರಿಕೆ ಉಳ್ಳವನೇ ನಿಜವಾದ ಗುರು. ಭರತನಾಟ್ಯ, ಯಕ್ಷಗಾನದಂತಹ ಕಲೆಗಳು ಗುರು ಪರಂಪರೆಯಿಂದ ಬಂದಂತವು, ಸ್ವಸ್ಥ ಸಮಾಜದ ನಿರ್ಮಾಣ ಗುರುವಿನಿಂದಲೇ ಸಾಧ್ಯ” ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಗಣೇಶ್ ಶೆಣೈ ಮಾತನಾಡಿ “ಮಂತ್ರ ನಾಟ್ಯಕಲಾ ಗುರುಕುಲವು ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ” ಎಂದರು. ಕುತ್ತಾರು ಶ್ರೀ ರಾಜ ರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಅಧ್ಯಕ್ಷರಾದ ಶ್ರೀ ರಾಜೇಶ್ ಅತ್ತಾವರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಸೋಮನಾಥ ದೇವಸ್ಥಾನ ಸೋಮೇಶ್ವರ ಇದರ ಮಾಜಿ ಮುಕ್ತೇಸರರಾದ ಶ್ರೀ ಪವಿತ್ರ ಕುಮಾರ್ ಗಟ್ಟಿ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ…
ರಂಗ ಕರ್ಮಿ ಮ್ಯಾಥ್ಯೂ ಸುರಾನಿ ಅವರ ಸುರಾನಿಯ ನಿವಾಸದ ಆವರಣದಲ್ಲಿ ದಿನಾಂಕ 24 ಜನವರಿ 2025ರ ಸಂಜೆ ಅಡುಗೆಯ ಘಮ ಘಮ ಮತ್ತು ಅಡುಗೆಯದ್ದೇ ಮಾತುಗಳು !! ಇದನ್ನು ಆಸ್ವಾದಿಸಲು ಮತ್ತು ಮಾತುಗಳನ್ನು ಕೇಳಿಸಿಕೊಳ್ಳಲು ರಂಗಾಸಕ್ತರು ಮತ್ತು ಗ್ರಾಮಸ್ಥರು ಕುತೂಹಲದಿಂದ ಬಂದು ಸೇರಿದ್ದರು. ಇದೇನು ಅಡುಗೆ ಮಾತಿರಬಹುದು ಎಂದು ಆಗಮಿಸಿದ್ದ ರಂಗಾಸಕ್ತರಿಗೆ ನಿರಾಶೆಯಂತೂ ಖಂಡಿತಾ ಆಗಲಿಲ್ಲ. ಏಕೆಂದರೆ ಅಡುಗೆ ಮನೆಯಲ್ಲಿ ಹೆಣ್ಣೊಬ್ಬಳು ಅಡುಗೆ ಮಾಡುವಾಗ ಪಡುವ ಪಡಿಪಾಟಲುಗಳು ಅನಾವರಣಗೊಂಡಿದ್ದು ಮಾತ್ರವಲ್ಲ, ಅಡುಗೆ ಮಾಡಿ ಬಳಸುವುದರಲ್ಲಿಯೇ ಸುಖ ಕಾಣುವ ಅವಳ ಸಹನಾಶೀಲ ಗುಣವೂ ಅಭಿವ್ಯಕ್ತವಾಯಿತು. ಲಕ್ಷಾಧೀಶ್ವರ, ಕೋಟ್ಯಾಧೀಶರಾದರೂ ಬದುಕಲು ಹಣ ತಿನ್ನಲಾಗುತ್ತದೆಯೇ ?? ಹಸಿವ ನೀಗಿಸಿಕೊಳ್ಳಲು ಅಡುಗೆ ಮಾಡಲೇಬೇಕು. ಈ ಅಡುಗೆ ತಯಾರಿಗೆ ಬೇಕಲ್ಲವೆ ಅಕ್ಕಿ, ಜೋಳ, ರಾಗಿ, ಧಾನ್ಯಗಳು, ತರಕಾರಿಗಳು. ಇದೇನು ಯಾವುದಾದರೂ ಕಾರ್ಖಾನೆಯಲ್ಲಿ ತಯಾರಾಗಿ ಬರುತ್ತವೆಯೇ?! ಅಡುಗೆಗೆ ಪದಾರ್ಥಗಳು ಬರುವುದೇ ರೈತರಿಂದ ತಾನೆ ? ಅಂದ ಹಾಗೆ ಎಲ್ಲರ ಹಸಿವ ನೀಗಿಸುವ ಈ ರೈತ ಸುಖವಾಗಿದ್ದಾನೆಯೇ ?? ಇದೆಲ್ಲವನ್ನೂ ಪ್ರಸಿದ್ದ…
ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಪ್ರತಿವರ್ಷ ನಡೆಸುವ ‘ಸಂಸ್ಕೃತಿ ಉತ್ಸವ’ವು ಈ ಬಾರಿ ದಿನಾಂಕ 30 ಮತ್ತು 31 ಜನವರಿ 2025ರಂದು ಸಂಜೆ 5-30 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಹವಾ ನಿಯಂತ್ರಿತ ಸಭಾಂಗಣದಲ್ಲಿ ನಡೆಯಲಿದೆ. ಎರಡು ದಿನ ನಡೆಯುವ ಈ ಉತ್ಸವದಲ್ಲಿ ದಿನಾಂಕ 30 ಜನವರಿ 2025ರಂದು ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ) ಹೆಬ್ರಿ ಪ್ರಾಯೋಜಿತ ‘ಶಾರದಾ ಕೃಷ್ಣ ಪುರಸ್ಕಾರ’ವನ್ನು ರಂಗ ನಿರ್ದೇಶಕರಾದ ಜೀವನ ರಾಮ್ ಸುಳ್ಯ ಇವರಿಗೆ ನೀಡಲಾಗುವುದು. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀಮತಿ ವೈದೇಹಿ ರಚನೆಯ, ಜೀವನ ರಾಮ್ ಸುಳ್ಯ ನಿರ್ದೇಶನದ ‘ನಾಯಿಮರಿ’ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 31 ಜನವರಿ 2025ರಂದು ರಂಗಭೂಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್ ಇವರಿಗೆ…
ಸುತ್ತೂರು : ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ.) ಕದ್ರಿ ರೋಡ್, ಮಂಗಳೂರು ಇವರ ವತಿಯಿಂದ ಸುತ್ತೂರು ಜಾತ್ರಾ ಮಹೋತ್ಸವ 2025 ಪ್ರಯುಕ್ತ ‘ಭಸ್ಮಾಸುರ ಮೋಹಿನಿ’ ನೃತ್ಯ ರೂಪಕದ ಪ್ರಸ್ತುತಿಯನ್ನು ದಿನಾಂಕ 29 ಜನವರಿ 2025ರಂದು ಸಂಜೆ 7-00 ಗಂಟೆಗೆ ಸುತ್ತೂರು ಗದ್ದಿಗೆ ಮೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನೃತ್ಯ ರೂಪಕವು ನಾಟ್ಯ ವಿಶಾರದ, ಗುರುಕುಲ ಭೂಷಣ ವಿದ್ವಾನ್ ಯು.ಕೆ. ಪ್ರವೀಣ್ ಇವರ ನಿರ್ದೇಶನದಲ್ಲಿ ನಡೆಯಲಿದೆ.
ಸುರತ್ಕಲ್ : ಶ್ರೀ ಶಾರದಾ ನಾಟ್ಯಾಲಯ ಕುಳಾಯಿ – ಹೊಸಬೆಟ್ಟುವಿನ ವತಿಯಿಂದ ಹಿಂದೂ ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್ ಇದರ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಲಲಿತಕಲಾ ಸಂಘದ ಸಹಯೋಗದಲ್ಲಿ ಸಂಗೀತ ವಿದುಷಿ ಶೀಲಾ ದಿವಾಕರ್ ಇವರಿಗೆ ಅರ್ಪಿಸಿದ ಗಾನ ಶಾರದೆಗೆ ನಮನ… ಗುರುವಿಗೊಂದು ನಾಟ್ಯ ನಮನ ಕಾರ್ಯಕ್ರಮವು ದಿನಾಂಕ 26 ಜನವರಿ 2025ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ಗೋಪಾಲ ಎಂ. ಗೋಖಲೆ ಮಾತನಾಡಿ “ಸಂಗೀತವು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಒಲಿದು ಬರುವಂತಹ ಕಲೆಯಾಗಿದ್ದು ವಿದುಷಿ ಶೀಲಾ ದಿವಾಕರ್ ಅವರು ತಮ್ಮ ಸುಮಧುರ ಕಂಠದ ಮೂಲಕ ಪ್ರಸಿದ್ಧರಾಗಿದ್ದಾರೆ. ಶ್ರೇಷ್ಠ ಸಂಗೀತಗಾರ್ತಿಯಾಗಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿ ಅನೇಕ ಶಿಷ್ಯರನ್ನು ಸಂಗೀತ ಲೋಕಕ್ಕೆ ಅರ್ಪಿಸಿದ ಅವರ ಸಾಧನೆ ಅನನ್ಯವಾದದ್ದು” ಎಂದರು. ನುಡಿ ನಮನ ಸಲ್ಲಿಸಿದ ವಿದ್ವಾನ್ ಕೆ. ಮುರಳೀಧರ್ ಉಡುಪಿ ಮಾತನಾಡಿ ”ಶೀಲಾ ದಿವಾಕರ್…
ಕನ್ನಡ ಸಾಹಿತ್ಯ ಸಾರಸ್ವತ ಲೋಕದಲ್ಲಿ ವಿಜೃಂಭಿಸಿರುವ ಮೇರು ತಾರೆಗಳ ಸಾಲಿನಲ್ಲಿ ಸೇರಿದ ಸಾ.ಶಿ. ಮರುಳಯ್ಯನವರು ಕವಿ, ವಿಮರ್ಶಕ, ಸಂಶೋಧಕ, ಕನ್ನಡದ ಖ್ಯಾತ ಬರಹಗಾರ ವಿದ್ವಾಂಸ, ಶಿಕ್ಷಣತಜ್ಞ, ಉತ್ತಮವಾಗ್ಮಿ ಹಾಗೂ ಆಡಳಿತಗಾರರೆಂದು ಹೆಸರಾಗಿದ್ದವರು. ಇಂತಹ ಬಹುಮುಖ ಪ್ರತಿಭಾನ್ವಿತ ಅಪ್ರತಿಮ ಸಾಹಿತಿಯವರ ಪೂರ್ಣ ಹೆಸರು ಸಾಸಲು ಶಿವರುದ್ರಯ್ಯ ಮರುಳಯ್ಯ ಎಂದು. 1931ರ ಜನವರಿ 28ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಸಲು ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಶಿವರುದ್ರಯ್ಯನವರು, ತಾಯಿ ಸಿದ್ಧಮ್ಮನವರು. ಸಾಸಲು ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಚಿತ್ರದುರ್ಗದಲ್ಲಿ ಕಾಲೇಜು ಶಿಕ್ಷಣ ಪಡೆದರು. ಇಂಟರ್ಮೀಡಿಯಟ್ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಕೆಲಕಾಲ ಗುಮಾಸ್ತರಾಗಿ ಕೆಲಸ ಮಾಡಿದರು. ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಬಂದ ಸಾ.ಶಿ. ಮರುಳಯ್ಯ ಬಿ.ಎ ಆನರ್ಸ್ನಲ್ಲಿ ಡಿ.ಎಲ್.ಎನ್., ತ.ಸು. ಶಮರಾಯ, ಎಸ್.ವಿ. ಪರಮೇಶ್ವರ ಭಟ್ಟ, ಎಸ್.ವಿ. ರಂಗಣ್ಣ, ಕುವೆಂಪು, ದೇಜಗೌರಂಥ ವಿದ್ವಾಂಸರ ಮಾರ್ಗದರ್ಶನ ಪಡೆದರು. ಎಂ.ಎ. ಓದಲು ಅಡಚಣೆಯಾಗಿ ಮತ್ತೆ ಉದ್ಯೋಗಕ್ಕೆ ಸೇರಿದರು. ಚಾಮರಾಜನಗರ ಕಾಲೇಜಿನ ಅರೆಕಾಲಿಕ…
ಉಡುಪಿ : ಮೂರುದಶಕಗಳ ಉಡುಪಿಯ ಪ್ರಗತಿಯ ಕುರಿತಾಗಿ ಚಿತ್ರಗಳ ಮೂಲಕ ಸಾಕ್ಷೀಕರಿಸುವ ವಿಶಿಷ್ಟ ‘ಮಿನಿ ಕಾಫಿಟೇಬಲ್’ ಪುಸ್ತಕ ದಿನಾಂಕ 01 ಫೆಬ್ರವರಿ 2025ರಂದು ಸಂಜೆ 4-30 ಗಂಟೆಗೆ ಉಡುಪಿಯ ಶಾರದಾ ಕಲ್ಯಾಣ ಮಂಟಪದ ಬಳಿ ಇರುವ ಯಕ್ಷಗಾನ ಕಲಾ ರಂಗದ ಐ.ವೈ.ಸಿ. ಹವಾ ನಿಯಂತ್ರಿಕ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಣಿಪಾಲ ವಿ.ವಿ.ಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಕೃತಿ ಬಿಡುಗಡೆಗೊಳಿಸಲಿದ್ದು, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಇದರ ಕಾರ್ಯನಿರ್ವಾಹಕ ಅಧ್ಯಕ್ಷರಾದ ಶ್ರೀ ಸತೀಶ್ ಯು. ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಯಶ್ ಪಾಲ ಸುವರ್ಣ, ಅದಾನಿ ಸಮೂಹದ ಕಾರ್ಯ ನಿರ್ವಾಹಕ ಅಧ್ಯಕ್ಷ ಶ್ರೀ ಕಿಶೋರ್ ಆಳ್ವ, ಹಿರಿಯ ಛಾಯಾಚಿತ್ರ ಕಲಾವಿದ ಯಜ್ಞ ಮಂಗಳೂರು ಇವರ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಭೂತರಾಜ ಪ್ರಕಾಶನದ 4ನೇ ಕೃತಿ ಇದಾಗಿದ್ದು, ಉಡುಪಿಯ 30 ವರ್ಷಗಳ ಬೆಳವಣಿಗೆ…
ಮಂಗಳೂರು : ಸೋಮೇಶ್ವರ ಕೊಲ್ಯದಲ್ಲಿರುವ ನಾಟ್ಯನಿಕೇತನ (ರಿ.) ಅರ್ಪಿಸುವ ‘ಕರ್ನಾಟಕ ರಾಜ್ಯೋತ್ಸವ’, ‘ಶಾಂತಲಾ ನಾಟ್ಯ’ ಪ್ರಶಸ್ತಿ’ ಪುರಸ್ಕೃತ ನೃತ್ಯ ಗುರು ನಾಟ್ಯಾಚಾರ್ಯ ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರ 90ನೇ ವರ್ಷಾಚರಣೆಯ ಪ್ರಯುಕ್ತ ನೃತ್ಯ ಸರಣಿ-ಮಾಲಿಕೆ 13 ‘ನಾಟ್ಯ ಮೋಹನ ನವತ್ಯುತ್ಸಹ ನೃತ್ಯಶ್ರೀ’ ಮತ್ತು ನಾಟ್ಯಾಂಜಲಿ ನಲ್ವತ್ತರ ನಲಿವು -3 ಕಾರ್ಯಕ್ರಮವನ್ನು ದಿನಾಂಕ 29 ಜನವರಿ 2025ರಂದು ಸಂಜೆ 6-30 ಗಂಟೆಗೆ ಕೊಲ್ಯದ ನಾಟ್ಯನಿಕೇತನ ನೃತ್ಯಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಕಲಾ ತಿಲಕ, ನಾಟ್ಯಾಚಾರ್ಯ ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರಿಂದ ದೇವತಾ ಜ್ಯೋತಿ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ನೃತ್ಯ ಕಲಾವಿದ ಶ್ರೀ ಗೋಪಿನಾಥ್ ಶೇಟ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ಕಲಾವಿದ ಸುರೇಶ್ ಕಾಸರಗೋಡು ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.
ಕಾಸರಗೋಡು : ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೇರಳ ರಾಜ್ಯ ಘಟಕ ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025ರಂದು ನಡೆಯುವ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ, ರಾಜ್ಯಮಟ್ಟದ ವಿದ್ಯಾರ್ಥಿ ಚುಟುಕು ಕವಿಗೋಷ್ಠಿ, ರಾಜ್ಯಮಟ್ಟದ ಚುಟುಕು ಕಥಾಗೋಷ್ಠಿಯಲ್ಲಿ ಭಾಗವಹಿಸುವ ಕವಿ ಸಾಹಿತಿಗಳಿಗೆ ಪುಸ್ತಕ ಕೊಡುಗೆ ನೀಡುವುದಕ್ಕಾಗಿ ಪುಸ್ತಕ ಹಬ್ಬ, ಪುಸ್ತಕದಾನ, ಶ್ರೇಷ್ಠದಾನ ಯೋಜನೆಯಲ್ಲಿ ಸಾಹಿತ್ಯ ಕೃತಿಗಳನ್ನು ಉದಾರವಾಗಿ ನೀಡುವಂತೆ ಭಿನ್ನವಿಸಿಕೊಳ್ಳಲಾಗಿದೆ. ಕೇರಳ ಕರ್ನಾಟಕ ಹಾಗೂ ಇತರ ರಾಜ್ಯಗಳಲ್ಲಿ ನೆಲೆಸಿ ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಹೆಮ್ಮೆಯ ಕವಿ, ಸಾಹಿತಿ, ಲೇಖಕ, ಬರಹಗಾರ, ಪ್ರಕಾಶಕ ಹಾಗೂ ಕಲಾವಿದರು ಮಾಧ್ಯಮದವರು ಮತ್ತು ಸಾಹಿತ್ಯ ಕ್ಷೇತ್ರದ ಪೋಷಕರು ಸಾಹಿತ್ಯ ಅಭಿಮಾನಿಗಳು ಕನ್ನಡ ಅಭಿಮಾನಿಗಳು ತಮ್ಮಲ್ಲಿರುವ ಹೆಚ್ಚುವರಿ ಸಾಹಿತ್ಯ…
ಕಟೀಲು : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸಿದ ಪೇಜಾವರ ಸದಾಶಿವರಾಯರು ವಾಸವಿದ್ದ ಕಟೀಲಿನ ನೂರ ಇಪ್ಪತ್ತೈದು ವರುಷಗಳ ಹಿಂದಿನ ಮನೆಯ ಅಂಗಳದಲ್ಲಿ ‘ಪೇಜಾವರ ಸದಾಶಿವ ರಾವ್ ನೆನಪು’ ಕಾರ್ಯಕ್ರಮ ದಿನಾಂಕ 26 ಜನವರಿ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖ್ಯಾತ ಸಾಹಿತಿ ಡಾ. ಬಿ. ಜನಾರ್ದನ ಭಟ್ ಇವರು ಮಾತನಾಡಿ “ಕನ್ನಡದ ಮೊದಲ ನವ್ಯ ಕವಿ, 27ನೇ ವಯಸ್ಸಿಗೇ ಇಟೆಲಿಯಲ್ಲಿ ನಿಧನರಾದ ಪೇಜಾವರ ಸದಾಶಿವ ರಾಯರು ಕನ್ನಡದ ವಿಶಿಷ್ಟ ಸಾಹಿತಿಯಾಗಿದ್ದಾರೆ. ಅವರನ್ನು ನೆನಪಿಸುವ, ಅವರ ಸಾಹಿತ್ಯವನ್ನು ಇನ್ನಷ್ಟು ಮಂದಿಗೆ ತಲುಪಿಸುವ ಕೆಲಸಗಳು ಆಗಬೇಕಾಗಿದೆ. ಐವತ್ತೆರಡು ಕವಿತೆ, ಮೂರು ನಾಟಕ, ಒಂಭತ್ತು ಸಣ್ಣ ಕಥೆಗಳು, ವಿಮರ್ಶೆ ಬರಹಗಳ ಮೂಲಕ ಶ್ರೇಷ್ಟ ಸಾಧನೆ, ಕೆಲಸ ಮಾಡಿದದವರು ಪೇಜಾವರರು. ಇಟಲಿ ಭಾಷೆಯನ್ನು ಕಲಿತು ಪಿ.ಎಚ್.ಡಿ. ಪದವಿಯನ್ನು ಇಟಲಿಯಲ್ಲಿ ಪಡೆದು, ಅಲ್ಲಿ ಅನಾರೋಗ್ಯದಿಂದ ನಿಧನರಾದ ಸದಾಶಿವರ ರಾಯರು, ಇಟೆಲಿ ಭಾಷೆಯಲ್ಲೂ ಲೇಖನಗಳನ್ನು ಬರೆದಿದ್ದಾರೆ. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗ ಆಗಿನ…