Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಇವರ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ‘ಕಲಾ ನಿಧಿ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 27 ಸೆಪ್ಟೆಂಬರ್ 2025ರಂದು ನಾಟ್ಯ ಮಯೂರಿ ಟ್ರಸ್ಟ್ ಆಶ್ರಯದಲ್ಲಿ ಬೆಂಗಳೂರಿನ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಟ್ರಸ್ಟಿನ ಸ್ಥಾಪಕರಾದ ಪ್ರೇಮಾಂಜಲಿಯವರು ತಿಳಿಸಿದ್ದಾರೆ. ಡಾ. ಮಾಲತಿ ಶೆಟ್ಟಿ ಮಾಣೂರುರವರು ಕಳೆದ 20 ವರುಷಗಳಿಂದ ಸಾಹಿತ್ಯ ಪತ್ರಿಕೋದ್ಯಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಳೆದ 12 ವರುಷಗಳಿಂದ ಸಾಹಿತ್ಯಪರ ಅಮೃತ ಪ್ರಕಾಶ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಈಗಾಗಲೇ 9 ಕೃತಿಗಳನ್ನು ಪ್ರಕಟಿಸಿದ್ದು, ಇತರ ಹಿರಿಯ ಲೇಖಕರ 45 ಕೃತಿಗಳನ್ನು ಸರಣಿ ಕೃತಿಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಸರಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯದ ಪ್ರೀತಿ ಮೂಡುವ ಸಲುವಾಗಿ ಉಚಿತವಾಗಿ ಯಶಸ್ವಿಯಾಗಿ 114 ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಅಭಿರುಚಿ ಕಾರ್ಯಕ್ರಮವನ್ನು ಮಾಡಿದ್ದಾರೆ. ಮಂಗಳೂರಿನ ಅತ್ತಾವರದ ‘ಸಾಹಿತ್ಯ ನಂದನ’ದಲ್ಲಿ ವಾಸವಾಗಿದ್ದಾರೆ.
ಮಂಗಳೂರು : ಕನ್ನಡ ಭವನದ ಸಂದ್ಯಾರಾಣಿ ಟೀಚರ್ ಸಾರತ್ಯದ ಕನ್ನಡ ಭವನ ಪ್ರಕಾಶನದ ಒಂಬತ್ತನೇ ಕೃತಿ ‘ಅನುಕರಣೀಯ ವ್ಯಕ್ತಿತ್ವ -ಆದರ್ಶ ಮಹಿಳೆ -ಶ್ರೀಮತಿ ಗಾಯತ್ರಿ ನಾಗೇಶ್’ ಎಂಬ ವ್ಯಕ್ತಿ ಚಿತ್ರಣ ಕೃತಿ ದಿನಾಂಕ 09 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಮಂಗಳೂರಿನಲ್ಲಿ ಶರವು ದೇವಸ್ಥಾನದ ಬಳಿಯ ಬಾಳಮ್ ಭಟ್ ಹಾಲ್ ನಲ್ಲಿ ಜರಗುವ ‘ಗಾಯತ್ರಿ ನಾಗೇಶ್ ಸಂಸ್ಮರಣೆ -ನುಡಿ ನಮನ -ಕೃತಿ ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಕನ್ನಡ ಭವನ ಪ್ರಕಾಶನ ಜಂಟಿಯಾಗಿ ಆಯೋಜಿಸಲಿದ್ದು, ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ರೇಖಾ ಸುದೇಶ್ ರಾವ್ ಹಾಗೂ ಕನ್ನಡ ಭವನ ಪ್ರಕಾಶನದ, ಪ್ರಕಾಶಕಿ ಸಂದ್ಯಾರಾಣಿ ಟೀಚರ್ ಜಂಟಿಯಾಗಿ ತಿಳಿಸಿದ್ದಾರೆ. ಸಂದ್ಯಾ ರಾಣಿ ಟೀಚರ್ ಕೃತಿ ರಚಿಸಿದ್ದಾರೆ.
ಕೋಟ : ಕರ್ಣಾಟಕ ಯಕ್ಷಧಾಮ ಮಂಗಳೂರು, ಸಾಲಿಗ್ರಾಮ ಮಕ್ಕಳ ಮೇಳ ಕೋಟ, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಗುರುವಂದನೆ, ಸಾಧಕ ದಂಪತಿಗಳಿಗೆ ಸನ್ಮಾನ ಮತ್ತು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ದಿನಾಂಕ 07 ಸೆಪ್ಟೆಂಬರ್ 2025ರಂದು ಕೋಟ ಶ್ರೀ ಹಂದೆ ಮಹಾಗಣಪತಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಕಲ್ಕೂರ ಪ್ರತಿಷ್ಠಾನದ ಎಸ್. ಪ್ರದೀಪ ಕುಮಾರ ಕಲ್ಕೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ಇಂದಿನ ಮಕ್ಕಳು ಕಂಪ್ಯೂಟರ್ ಗೊಂಬೆಗಳಾಗಿದ್ದಾರೆ, ಸನಾತನ ಶ್ರದ್ಧೆ, ನಂಬಿಕೆ ದೂರವಾಗಿದೆ. ಅವರಲ್ಲಿ ಧಾರ್ಮಿಕ ತತ್ವಗಳನ್ನು ಬೆಳೆಸಿ ಸನಾತನ ಸಂಸ್ಕೃತಿಯನ್ನು ಉಳಿಸಬೇಕಾಗಿದೆ, ಯಕ್ಷಗಾನದ ಆಸಕ್ತಿ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಅರಳಿಸಬಲ್ಲದು” ಎಂದರು. ಈ ಸಂದರ್ಭದಲ್ಲಿ ವಿದ್ವಾಂಸ, ಯಕ್ಷಗಾನ ಕಲಾವಿದ ಡಾ. ಎಂ. ಪ್ರಭಾಕರ ಜೋಶಿ ಮಂಗಳೂರು ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಾಧಕರಾದ ಪ್ರಗತಿಪರ ಕೃಷಿಕ, ಹೈನುಗಾರ, ಸಮಾಜ ಸೇವಕ ಕುಪ್ಪಾರು ಅನಂತ ಉಡುಪ – ಲಕ್ಷ್ಮಿ ಉಡುಪ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಹೆಚ್.…
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಮತ್ತು ಅನುಗ್ರಹ ಪದವಿ ಪೂರ್ವ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು : ಉಪನ್ಯಾಸಮಾಲೆ – 8ರಲ್ಲಿ ಗಿರೀಶ್ ಕಾರ್ನಾಡ್ ಇವರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 09 ಸೆಪ್ಟೆಂಬರ್ 2025ರಂದು ಬೆಳಗ್ಗೆ 11-00 ಗಂಟೆಗೆ ಉಜಿರೆಯ ಅನುಗ್ರಹ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ಡಿ. ಯದುಪತಿ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಉಪನ್ಯಾಸ ಮಾಲೆಯಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜು (ಸ್ವಾಯತ್ತ) ಕನ್ನಡ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಭವ್ಯಶ್ರೀ ಆರ್. ಬಲ್ಲಾಳ್ ಇವರು ಉಪನ್ಯಾಸ ನೀಡಲಿದ್ದಾರೆ. ಉಜಿರೆಯ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾ. ವಿಜಯ್ ಲೋಬೊ ಇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ‘ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್ ದತ್ತಿ ಪ್ರಶಸ್ತಿ’ಗೆ ಹಿರಿಯ ಸಂಶೋಧಕ ಮೈಸೂರಿನ ಡಾ. ಬಿ.ಎಸ್. ಪ್ರಣತಾರ್ತಿಹರನ್ ಇವರನ್ನು ಆಯ್ಕೆ ಮಾಡಲಾಗಿದೆ. ಕನ್ನಡದ ಹಿರಿಯ ವಿದ್ವಾಂಸರಾದ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರ ಅಭಿಮಾನಿಗಳು ಮತ್ತು ಬಂಧುಗಳು 2001ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿ ನಿಧಿಯನ್ನು ಸ್ಥಾಪಿಸಿದ್ದು, ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ಕಾರ್ಯ ನಿರ್ವಹಿಸಿದ ಹಳಗನ್ನಡ ಸಾಹಿತ್ಯದ ಅಧ್ಯಯನ, ಛಂದಸ್ಸು, ವ್ಯಾಕರಣ, ನಿಘಂಟು ರಚನೆ, ಗ್ರಂಥ ಸಂಪಾದನೆ, ಭಾಷಾ ಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಬೇಕೆಂಬುದು ದತ್ತಿಯ ಆಶಯವಾಗಿದೆ. 2025ನೆಯ ಸಾಲಿಗೆ ‘ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್ ಪ್ರಶಸ್ತಿ’ಗೆ ಆಯ್ಕೆಯಾಗಿರುವ ಡಾ. ಬಿ.ಎಸ್. ಪ್ರಣತಾರ್ತಿಹರನ್ ಬಾನುಲಿ ನಿಲಯದಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿದ ನಂತರ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ 25 ವರ್ಷ ಸೇವೆ ಸಲ್ಲಿಸಿದವರು. ಸಂಕೇತಿ ಸಮುದಾಯದ ಅಧ್ಯಯನಕ್ಕೆ ಪಿ.ಎಚ್.ಡಿ. ಪದವಿಯನ್ನು ಪಡೆದು, ಜೊತೆಗೆ ‘ಸಂಕೇತಿ’…
ಉಪ್ಪಿನಂಗಡಿ : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ (ರಿ.) ಉಪ್ಪಿನಂಗಡಿ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ನಡೆಸಲ್ಲಡುತ್ತಿರುವ ಶ್ರೀ ಮಹಾಭಾರತ ಸರಣಿಯ ಸುವರ್ಣ ಶತಕ ತಾಳಮದ್ದಳೆಯ ಅಂಗವಾಗಿ ದಿನಾಂಕ 06 ಸೆಪ್ಟೆಂಬರ್ 2025ರಂದು ತಾಳಮದ್ದಳೆ ಕಾರ್ಯಕ್ರಮವು ಉಪ್ಪಿನಂಗಡಿ ರಾಮ ನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ‘ಕರ್ಣ ಭೇದನ’ ಎಂಬ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಯಲ್.ಯನ್. ಭಟ್, ಚೆಂಡೆ ಮದ್ದಳೆಗಳಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ಗುಡ್ಡಪ್ಪ ಬಲ್ಯ (ಕರ್ಣ), ದುಗ್ಗಪ್ಪ ನಡುಗಲ್ಲು (ಸೂರ್ಯ), ಕಿಶೋರಿ ದುಗ್ಗಪ್ಪ ನಡುಗಲ್ಲು (ಕುಂತಿ) ಸಹಕರಿಸಿದರು.
ಬೆಳಗಾವಿ : ರಂಗಶಂಕರ ಬೆಂಗಳೂರಿನ ಒಂದು ವಿಶೇಷ ವಿಭಿನ್ನ ರೀತಿಯ ರಂಗಯೋಜನೆಗೆ ನಮ್ಮ ಹೆಮ್ಮೆಯ ರಂಗಸಂಪದ ಬೆಳಗಾವಿಯ ತಂಡ ಆಯ್ಕೆಯಾಗಿದೆ ಎಂಬುದು ಅಭಿಮಾನದ ಸಂಗತಿ. ಇದರ ಅಡಿಯಲ್ಲಿ ಎನ್.ಎಸ್.ಡಿ. ಪದವೀಧರೆ ಸವಿತಾ ಬೈರಪ್ಪ ಇವರು ಎಸ್. ಸಂಧ್ಯಾರವರ ‘ನಕ್ಷತ್ರ ಯಾತ್ರಿಕರು’ ಎಂಬ ನಾಟಕವನ್ನು ನಿರ್ದೇಶಿಸಿ ರಂಗಸಂಪದ ಬೆಳಗಾವಿಯ ತಂಡಕ್ಕೆ ತಯಾರಿಸುತ್ತಿದ್ದಾರೆ. ಇದರ ತಾಲೀಮು ದಿನಾಂಕ 28 ಸೆಪ್ಟೆಂಬರ್ 2025ರಿಂದ ಪ್ರಾರಂಭವಾಗುವದು. ಇದರ ಮೊದಲ ಪ್ರದರ್ಶನ ದಿನಾಂಕ 02 ನವೆಂಬರ್ 2025ರಂದು ಬೆಳಗಾವಿಯಲ್ಲಿ ನಂತರ ದಿನಾಂಕ 15 ನವೆಂಬರ್ 2025ರಂದು ಸಿದ್ದಾಪುರದಲ್ಲಿ ನಂತರ ಧಾರವಾಡ, ಹಾನಗಲ್ಲ, ಬೆಂಗಳೂರು ಇತ್ಯಾದಿ ಕಡೆಗಳಲ್ಲಿ ಜರುಗುವದು. ಈ ನಾಟಕಕ್ಕಾಗಿ ಕಲಾವಿದರ ಆಯ್ಕೆಯನ್ನು ರಂಗಸಂಪದ ಬೆಳಗಾವಿಯ ತಂಡ ಸವಿತಾ ಬೈರಪ್ಪರವರ ಉಪಸ್ಥಿತಿಯಲ್ಲಿ ಈ ಕೆಳಗಿನ ದಿನ ಮತ್ತು ಸ್ಥಳಗಳಲ್ಲಿ ಮಾಡುತ್ತಿದೆ. 1) ಶನಿವಾರ ದಿನಾಂಕ 27 ಸೆಪ್ಟೆಂಬರ್ 2025ರಂದು ಸಂಜೆ ಗಂಟೆ 4-30ರಿಂದ 7-30 ಶ್ರೀ ಗುರುನಾಥ ಕುಲಕರ್ಣಿಯವರ ಸ್ವಗೃಹ, ಎರಡನೆಯ ಮಹಡಿ, ಕಲಾಶ್ರೀ ಅಪಾರ್ಟ್ಮೆಂಟ್, ಎಚ್.ಪಿ. ಆಫೀಸ…
ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು ಇವರು ಆಯೋಜಿಸಿದ್ದ ವಿದ್ವಾನ್ ಎಂ. ಲಕ್ಷ್ಮೀನಾರಾಯಣ ಭಟ್ ಸಂಸ್ಮರಣಾರ್ಥ ದಿನಾಂಕ 30 ಆಗಸ್ಟ್ 2025ರಂದು ಮಂಗಳೂರು ಶರವು ರಸ್ತೆಯ ಶ್ರೀ ರಾಧಾಕೃಷ್ಣ ದೇವಸ್ಥಾನದ ಆಶ್ರಯದಲ್ಲಿ ‘ಹರಿಕಥಾ ಸಪ್ತಾಹ’ವು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಾರದೀ ಪ್ರಕಾಶನ ಪ್ರಕಟಿಸಿದ ಲಕ್ಷ್ಮೀನಾರಾಯಣ ಭಟ್ಟರ ಕುರಿತಾದ ಪುಸ್ತಕ ‘ನುಡಿನಮನ’ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ “ಹರಿಕಥಾ ರಂಗಕ್ಕೆ ಬಹಳಷ್ಟು ಕೊಡುಗೆ ನೀಡಿರುವ ಖ್ಯಾತ ತಬ್ಲಾ ವಾದಕ ಕೀರ್ತಿಶೇಷ ಎಂ. ಲಕ್ಷ್ಮೀನಾರಾಯಣ ಭಟ್ಟರಂತಹ ಹಿರಿಯ ಕಲಾವಿದರ ಸಂಸ್ಮರಣೆ ಯುವಕಲಾವಿದರಿಗೆ ಪ್ರೇರಣೆಯಾಗುವುದಲ್ಲದೆ ಹರಿಕಥಾ ಪರಂಪರೆಯ ಪೋಷಣೆಗೆ ಸಹಕಾರಿಯಾಗುತ್ತದೆ” ಎಂದು ಅಭಿಪ್ರಾಯಪಟ್ಟರು. ರಾಧಾಕೃಷ್ಷ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಎಂ. ಕೇಶವ ಭಟ್ ಸಪ್ತಾಹವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹರಿಕಥಾ ಪರಿಷತ್ತಿನ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಹರಿಕಥಾ ರಂಗಕ್ಕೆ ಲಕ್ಷ್ಮೀನಾರಾಯಣ ಭಟ್ಟರ ಕೊಡುಗೆಯನ್ನು ಸ್ಮರಿಸಿದರು. ‘ನುಡಿನಮನ’ ಪುಸ್ತಕದ ಸಂಪಾದಕರಾದ ಡಾ. ಎಲ್. ದತ್ತಾತ್ರೇಯ…
ಮಧೂರು : ಉಳಿಯ ದನ್ವಂತರಿ ಯಕ್ಷಗಾನ ಕಲಾಸಂಘ ಮಧೂರು ಇದರ ವಾರದ ಕೂಟ ಉಳಿಯ ಮನೆಯ ಸುಧಾ ಮಂದಿರದಲ್ಲಿ ದಿನಾಂಕ 07 ಸೆಪ್ಟೆಂಬರ್ 2025 ಭಾನುವಾರದಂದು ‘ಯಾಗ ಸನ್ನಾಹ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರು ಶ್ರೀ ವಾಸುದೇವ ಕಲ್ಲೂರಾಯ ಮಧೂರು ಹಾಗೂ ಮದ್ದಳೆಯಲ್ಲಿ ಬ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಇವರುಗಳು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಕೃಷ್ಣ : ಬ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಧರ್ಮರಾಯ : ಶ್ರೀ ಗೋಪಾಲ ಅಡಿಗಳು ಕೂಡ್ಲು, ಭೀಮ : ಶ್ರೀ ಮಯೂರ ಆಸ್ರ ಉಳಿಯ, ಅರ್ಜುನ : ಶ್ರೀಮತಿ ರಕ್ಷಾ ರಾಮ್ ಕಿಶೋರ ಆಸ್ರ, ಇಂದ್ರಸೇನ : ಶ್ರೀಮತಿ ಧನ್ಯಮುರಳಿ ಕೃಷ್ಣ ಆಸ್ರ ಇವರುಗಳು ಭಾಗವಹಿಸಿದ್ದರು.
ಮೂಡುಬಿದಿರೆ : ಇರುವೈಲು ಮೇಳದ ಹಿರಿಯ ಹಾಸ್ಯ ಕಲಾವಿದ ಅನಂತ ಪ್ರಭು ಕಟ್ಟಣೆಗೆ (84) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇರುವೈಲು ಗ್ರಾಮದ ನಿವಾಸಿಯಾಗಿರುವ ಕಟ್ಟಣಿಕೆ ಅವರು ಯಕ್ಷಗಾನದಲ್ಲಿ ಹಾಸ್ಯಗಾರರಿಗೆ ಸ್ಟಾರ್ ವ್ಯಾಲ್ಯೂ ಇಲ್ಲದಂತಹ ಕಾಲದಲ್ಲಿ ರಂಗಸ್ಥಳದಲ್ಲಿ ಹಾಸ್ಯಗಾರನಾಗಿ ಪ್ರೇಕ್ಷಕರನ್ನು ರಂಜಿಸಿರುವ ಇವರು ಇರುವೈಲು ಮೇಳದ ಪ್ರಮುಖ ಹಾಸ್ಯ ಕಲಾವಿದರಾಗಿದ್ದರು. ದಿನ್ನಕ 25 ಜನವರಿ 1945ರಲ್ಲಿ ಇರುವೈಲಿನ ನಡುಬಾಳಿಕೆಯಲ್ಲಿ ಜನಿಸಿದ ಇವರು ತಮ್ಮ 12ನೇ ವಯಸ್ಸಿನಲ್ಲಿ ಯಕ್ಷಗಾನದ ರಂಗಸ್ಥಳವನ್ನು ಪ್ರವೇಶಿಸಿದರು. ಕಟೀಲು ಮೇಳವನ್ನು ಮುನ್ನಡೆಸುತ್ತಿದ್ದ ದಿ. ಅಣ್ಣಪ್ಪ ಸಾಮಂತರಿಂದಾಗಿ ಯಕ್ಷಗಾನದ ಒಲವು ಬೆಳೆಸಿಕೊಂಡಿದ್ದರು. ಇರುವೈಲು ವಾಸುದೇವ ಆಚಾರಿಯವರಲ್ಲಿ ಹೆಜ್ಜೆಗಾರಿಕೆಯನ್ನು ಕಲಿತು, ಸಂಜೀವ ಪ್ರಭು ಕಟ್ಟಣಿಗೆಯವರ ಮಾರ್ಗದರ್ಶನದಲ್ಲಿ, ಇರುವೈಲು ಶ್ರೀರಾಮ ಅಸ್ರಣ್ಣ ಮತ್ತು ಜನಾರ್ದನ ಆಚಾರಿ ಕಲ್ಲಮರಾಯಿ ನೇತೃತ್ವದಲ್ಲಿ ಪುನರ್ ಸಂಘಟಿತವಾದ ಇರುವೈಲು ಮೇಳದಲ್ಲಿ ಯಶಸ್ವಿ ಹಾಸ್ಯ ಕಲಾವಿದರಾಗಿ ಯಕ್ಷಗಾನ ರಂಗದಲ್ಲಿ ಮಿಂಚಿದರು. ಆರೋಗ್ಯ ಸಂಬಂಧಿ ಸಮಸ್ಯೆಯಿಂದಾಗಿ ಕಳೆದ 18 ವರ್ಷಗಳಿಂದ ಯಕ್ಷಗಾನದಿಂದ ದೂರ ಉಳಿದರೂ, ಯಕ್ಷಗಾನದತ್ತ ಸದಾ ಚಿತ್ತವಿರಿಸಿಕೊಂಡಿದ್ದರು. ಅವರ ಸೇವೆಗೆ ಹಲವು ಪ್ರಶಸ್ತಿ,…