Author: roovari

ನೀರ್ಚಾಲು : ಶ್ರೀ ಶಂಕರ ಶರ್ಮ ಕುಳಮರ್ವ ಇವರು ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಮಹಾಕಾವ್ಯ ‘ಉತ್ತರಕಾಂಡ ಕಾವ್ಯಧಾರ’ ಗ್ರಂಥದ ಲೋಕಾರ್ಪಣಾ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಸಹಯೋಗದೊಂದಿಗೆ ದಿನಾಂಕ 18 ಆಗಸ್ಟ್ 2024ರ ಭಾನುವಾರ ಅಪರಾಹ್ನ 2-30 ಗಂಟೆಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಉನ್ನತ ಪ್ರೌಢಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶಾಲಾ ಪ್ರಬಂಧಕರಾದ ಶ್ರೀ ಜಯದೇವ ಖಂಡಿಗೆ ಇವರು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಹಾಯಕ ಶಿಕ್ಷಕರಾದ ಶ್ರೀಮತಿ ಬಿ. ಶೈಲಜಾ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಮುಖ್ಯ ಅತಿಥಿಗಳಾಗಿದ್ದು, ವಿಶ್ರಾಂತ ಪ್ರಾಂಶುಪಾಲರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ವಿಶ್ರಾಂತ ಪ್ರಾಂಶುಪಾಲರಾದ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಇವರು ಕೃತಿ ಅವಲೋಕನ ಮಾಡಲಿರುವರು. ವಿಶ್ರಾಂತ…

Read More

ಬಂಟ್ವಾಳ : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ, ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ತಾಳಮದ್ದಳೆ ಕೂಟದ ಅಂಗವಾಗಿ ದಿನಾಂಕ 13 ಆಗಸ್ಟ್ 2024ನೇ ಮಂಗಳವಾರ ಗಣೇಶ್ ಕೊಲೆಕ್ಕಾಡಿ ವಿರಚಿತ ‘ಸಮರ ಸೌಗಂಧಿಕಾ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ಮುಳಿಯಾಲ, ಚೆಂಡೆ ಮತ್ತು ಮದ್ದಳೆಗಳಲ್ಲಿ ಮುರಳೀಧರ ಆಚಾರ್ಯ ನೇರಂಕಿ, ಶ್ರೀ ವತ್ಸ ಸೋಮಯಾಜಿ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ (ಭೀಮ), ಭಾಸ್ಕರ ಬಾರ್ಯ (ಹನೂಮಂತ), ನಾ. ಕಾರಂತ ಪೆರಾಜೆ (ದ್ರೌಪದಿ), ಸುಬ್ಬಪ್ಪ ಕೈಕಂಬ (ಕುಬೇರ) ಸಹಕರಿಸಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾಗೇಂದ್ರ ಪೈ ಸ್ವಾಗತಿಸಿ, ವಂದಿಸಿದರು.

Read More

ಪೆರ್ಲ : ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯ ಇಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಆಯೋಜಿಸಿದ  ‘ರಾಷ್ಟ್ರೀಯ ಭಾವೈಕ್ಯತಾ ಕವಿ ಗೋಷ್ಠಿ’ ಕಾರ್ಯಕ್ರಮವು 15 ಆಗಸ್ಟ್ 2024 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಮೊಳಕ್ಕಾಲ್ ಮಾತನಾಡಿ “ಗ್ರಂಥಾಲಯಗಳು ಸಮೃದ್ಧ ಸಮಾಜದ ವಿದ್ಯಾದೇಗುಲಗಳು. ಸಮತಾಭಾವವನ್ನು ಕಟ್ಟಿಕೊಡುವುದರೊಂದಿಗೆ ನಮ್ಮನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ. ಈ ಮೂಲಕ ಶ್ರೇಷ್ಠ ಭಾರತವನ್ನು ಕಟ್ಟಲು ಸಾಧ್ಯವಿದೆ.” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಭಾಗವಹಿಸಿದ್ದರು. ಕವಿಗಳಾದ  ನವ್ಯಾಶ್ರೀ  ಸ್ವರ್ಗ ‘ನೈಜತೆ’,  ಆನಂದ ರೈ ಅಡ್ಕಸ್ಥಳ ‘ದೇಶ ಸೇವೆ’, ಹಿತೇಶ್ ಕುಮಾರ್ ನೀರ್ಚಾಲ್ ‘ರಾಷ್ಟ್ರೀಯತೆ’, ಸುಜಿತ್ ಕುಮಾರ್ ಬೇಕೂರು ‘ಐಕ್ಯತೆ’, ಸುಂದರ ಬಾರಡ್ಕ ‘ಅಂಬೇಡ್ಕರ್ – ಗಾಂಧೀಜಿ’ ಬಾಲಕೃಷ್ಣ ಬೇರಿಕೆ ‘ಆಕ್ರಮಣ’, ಪ್ರಿಯಾ ಬಾಯಾರ್ ‘ಗಾಂಧಿ ತಾತ’, ಕು. ಮನ್ವಿತಾ ‘ಪ್ರಕೃತಿ’,  ಸನ ಎಂ. ಪಿ.  ‘ಭಾರತ ಸೈನ್ಯ’,  ರಿಷಾ ಎಸ್. ‘ಉತ್ಸವ’, ರಾಮ ಪಟ್ಟಾಜೆ ‘ಪೊರಕೆ’ ಹಾಗೂ ವನಜಾಕ್ಷಿ…

Read More

ಮಂಗಳೂರು : ಮಂಗಳೂರಿನ ಉರ್ವದಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರ ಇದರ ತ್ರಿಂಶೋತ್ಸವದ ಅಂಗವಾಗಿ ನಡೆಯುವ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಮೃತ -8’ ಅಂಗವಾಗಿ ನಾಟ್ಯಾರಾಧನಾ ಕಲಾ ಕೇಂದ್ರದ ಪ್ರೌಢ ಹಂತದ ನೃತ್ಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ “ಪದ್ಮ ಪಲ್ಲವ” ವೈವಿಧ್ಯಮಯ ಭರತನಾಟ್ಯ ಕಾರ್ಯಕ್ರಮವು 18 ಆಗಸ್ಟ್ 2024ರ ಭಾನುವಾರದಂದು ಸಂಜೆ ಘಂಟೆ 4.00 ರಿಂದ 7.30ರವರೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಭವನ ಪುರಭವನದಲ್ಲಿ ಜರುಗಲಿದೆ. ತ್ರಿಂಶೋತ್ಸವದ ಸಹ ಸಮಿತಿಗಳ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ಮುಲ್ಕಿ ಸೀಮೆಯ ಅರಸರಾದ ಶ್ರೀ ಎಂ. ದುಗ್ಗಣ್ಣ ಸಾವಂತರು ಉದ್ಘಾಟಿಸಲಿದ್ದು, ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಯು.ಎ.ಇ ಇಲ್ಲಿನ ಯಕ್ಷಗಾನ ಅಭ್ಯಾಸ ಕೇಂದ್ರದ ಯಕ್ಷ ಗುರುಗಳಾದ ಶ್ರೀ ಡಿ. ಶೇಖರ ಶೆಟ್ಟಿಗಾರ್, ದುಬೈ ಬ್ರಾಹ್ಮಣ ಸಂಘದ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಪ್ರಸಾದ್ ರಾವ್, ಶಾರದಾ ನಾಟ್ಯಾಲಯ ಹೊಸಬೆಟ್ಟು ಇದರ ನಿರ್ದೇಶಕರಾಗಿರುವ ವಿದುಷಿ ಭಾರತೀ ಸುರೇಶ್, ಬಜ್ಪೆ ಅಂಚೆ ಕಚೇರಿಯ ಎಲ್.ಎಸ್.ಜಿ.ಪಿ.ಎ ಶ್ರೀಮತಿ ಶಶಿಕಲಾ ನಿತ್ಯಾನಂದ…

Read More

ಕಲ್ಲಡ್ಕ : ವಿವೇಕಾನಂದ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಯೋಜಿತ ‘ವ್ಯಕ್ತಿತ್ವ ನಿರ್ಮಾಣದಲ್ಲಿ ಸಮಯಪ್ರಜ್ಞೆ’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವು 14 ಆಗಸ್ಟ್ 2024ರಂದು ಕಲ್ಲಡ್ಕದ ಶ್ರೀರಾಮ ಪದವಿ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆ ಮೈಸೂರು ಇದರ ಮುಖ್ಯಸ್ಥರಾದ  ಸ್ವಾಮಿ ಡಾ. ಮಹಾಮೇಧಾನಂದಜೀ ಮಾತನಾಡಿ “ತ್ಯಾಗ ಮತ್ತು ಸೇವೆ ಇವೆರಡು ಉತ್ತಮ ವ್ಯಕ್ತಿತ್ವದ ಎರಡು ಮುಖಗಳು. ಸತ್ಯ ಪರಿಪಾಲನೆ ಹಾಗೂ ಪರೋಪಕಾರ ಇತ್ಯಾದಿ ಮೌಲ್ಯಗಳ ಅಳವಡಿಕೆಯ ಜೊತೆಗೆ ನಿಸ್ವಾರ್ಥಿಯಾಗಿ ಸಮಯ ನಿರ್ವಹಣೆ ಮಾಡುವುದು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಹಾದಿ.” ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ  ಡಾ. ಪ್ರಭಾಕರ ಭಟ್ ಭಾರತೀಯ ಸಂಸ್ಕೃತಿಯಲ್ಲಿ ವ್ಯಕ್ತಿತ್ವದ ಮಹತ್ವವನ್ನು ಕೆಲವು ದೃಷ್ಟಾಂತಗಳ ಮೂಲಕ ತಿಳಿಸಿದರು. ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರು ಹೆಗಡೆ,…

Read More

ಮಂಗಳೂರು : ನಮ್ಮ ಕೇದಿಗೆ ಪ್ರತಿಷ್ಠಾನ ಮಂಗಳೂರು ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಇವರ ಸಹಯೋಗದಲ್ಲಿ ಪ್ರಸ್ತಕ ಸಾಲಿನ ‘ಲಕ್ಷ್ಮೀ ಭಾಸ್ಕರ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 17 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ವಿಕ್ರಂ ದತ್ತಾ (ರಾಷ್ಟ್ರ ಸೇವೆ), ಸುಧಾಕರ ರಾವ್ ಪೇಜಾವರ (ಸಮಾಜ ಸೇವೆ), ಸೂರ್ಯ ಆಚಾರ್ ವಿಟ್ಲ (ಚಿತ್ರಕಲೆ), ದಯಾ ಪ್ರಸಾದ್ ಚೀಮುಳ್ಳು (ಕೃಷಿ) ಹಾಗೂ ಎಲ್ಲೂರು ರಾಮಚಂದ್ರ ಭಟ್ (ಯಕ್ಷಗಾನ), ರಾಮಶೇಷ ಶೆಟ್ಟಿ (ಹಿರಿಯ ಸೇನಾನಿ) ಹಾಗೂ ಶ್ರೀ ಮೂಕಾಂಬಿಕಾ ಚೆಂಡೆ ತಂಡದ ಸಹೋದರಾದ ಚಂದ್ರಹಾಸ್ ಕೊಂಚಾಡಿ, ದೇವಿಪ್ರಸಾದ್ ಕೊಂಚಾಡಿ, ಸುನೀಲ್ ಕೊಂಚಾಡಿ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಪ್ರಮುಖರಾದ ಕ್ಯಾ. ಗಣೇಶ್ ಕಾರ್ಣಿಕ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಕೇದಿಗೆ ಪ್ರತಿಷ್ಠಾನ ಮಂಗಳೂರಿನ ಅಧ್ಯಕ್ಷರಾದ ಡಾ. ಕೇದಿಗೆ ಅರವಿಂದ ರಾವ್ ತಿಳಿಸಿದ್ದಾರೆ.

Read More

ಪುತ್ತೂರು : ರಾಮಕೃಷ್ಣ ಮಿಷನ್‌ ಮಂಗಳಾದೇವಿ ಮಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಮಂಗಳಗಂಗೋತ್ರಿ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಸಹಯೋಗದೊಂದಿಗೆ ‘ನನ್ನ ಏಳಿಗೆಗೆ ನಾನೇ ಶಿಲ್ಪಿ’ ವಿವೇಕ ಜಾಗೃತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 14 ಆಗಸ್ಟ್‌ 2024ರಂದು ಪುತ್ತೂರಿನ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವೈದೇಹಿ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಮೈಸೂರು ಇದರ ಮುಖ್ಯಸ್ಥರಾದ ಸ್ವಾಮಿ ಮಹಾಮೇಧಾನಂದಜಿ ಮಾತನಾಡಿ “ನಾವು ಬದುಕುವ ಪ್ರತಿಕ್ಷಣವೂ ಕೂಡ ನಮ್ಮ ಭವಿಷ್ಯತ್ತನ್ನು ನಿರ್ಧಾರ ಮಾಡುತ್ತಾ ಹೋಗುತ್ತದೆ. ನಮ್ಮ ಯೋಚನಾ ಶಕ್ತಿಯು ನಮ್ಮ ಜ್ಞಾನದ ವಿಸ್ತಾರವನ್ನು ತಿಳಿಸುತ್ತದೆ. ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಅವನ ಭವಿಷ್ಯವನ್ನು ರೂಪಿಸುವಲ್ಲಿ ಕಾರ್ಯಮಗ್ನನಾಗಬೇಕಿದೆ. ಕಲಿಕೆ ಎಂಬುದು ವಿದ್ಯಾರ್ಥಿಗಳಿಗೆ ಸೀಮಿತವಾಗಬೇಕಿಲ್ಲ, ಜೀವನಪರ್ಯಂತ ನಿರಂತರವಾದ ಜ್ಞಾನಾರ್ಜನೆಗೆ ಸರ್ವರಿಗೂ ಅವಕಾಶವಿದೆ. ಸತ್ಯದ ಪರಿಪಾಲನೆ, ಆತ್ಮಸಂಯಮ, ಪರೋಪಕಾರ ಈ ಮೂರು ಆದರ್ಶಗಳನ್ನು ನಾವು ಪರಿಪಾಲಿಸಿದಲ್ಲಿ ನಮ್ಮ…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 19-08-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ವಿದುಷಿ ಸುಪ್ರಭಾ ಕಲ್ಕೂರ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶ್ರೀಮತಿ ಸುರೇಖಾ ಕಲ್ಕೂರ ಮತ್ತು ಶ್ರೀ ಪ್ರಸನ್ನ ಕಲ್ಕೂರ ದಂಪತಿಗಳ ಸುಪುತ್ರಿಯಾದ ವಿದುಷಿ ಸುಪ್ರಭಾ ಕಲ್ಕೂರ ಇವರು ನೃತ್ಯನಿಕೇತನ ಕೊಡವೂರು ಸಂಸ್ಥೆಯ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಇವರ ಶಿಷ್ಯೆಯಾಗಿ ಕಳೆದ 18 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಶ್ರೀಮತಿ ವಸಂತಿ ಆಚಾರ್ಯ ಹಾಗೂ ವಿದುಷಿ ವಿನುತ ಆಚಾರ್ಯ ಇವರಲ್ಲಿ ಕರ್ನಾಟಕ ಸಂಗೀತ ಅಭ್ಯಾಸ ಮಾಡಿದ್ದು, ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ವಿದ್ವಾನ್ ರವಿಕುಮಾರ್ ಮೈಸೂರು…

Read More

ಉಡುಪಿ: ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಇವರ ಚಾತುರ್ಮಾಸ್ಯ ವ್ರತಾಚಾರಣೆಯ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ‘ಶ್ರೀರಾಮ ಕಾರುಣ್ಯ ಕಲಾಸಂಘ’ದ ದಶಮಾನೋತ್ಸವ ಕಾರ್ಯಕ್ರಮವು 08 ಆಗಸ್ಟ್ 2024ರಂದು ಭಟ್ಕಳದ  ಕರಿಕಲ್ಲಿನ ಧ್ಯಾನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನ ಪರಂಪರೆಯ ಉಳಿವು ಹಾಗೂ ಬೆಳವಣಿಗೆಗೆ ಧಾರ್ಮಿಕ ಸಂಸ್ಥೆಗಳ ಸಹಕಾರ ಅತ್ಯಗತ್ಯ. ಯಕ್ಷಗಾನ ಪ್ರದರ್ಶನಕ್ಕೆ ಸ್ವಾಮೀಜಿ ಅವಕಾಶ ನೀಡಿರುವುದಲ್ಲದೆ ಸಾಧಕ ಕಲಾವಿದರನ್ನು ಸನ್ಮಾನಿಸಿರುವುದು ಪ್ರಶಂಸನೀಯ. ಯಕ್ಷಗಾನ ಕಲೆಗೆ ಕೇವಲ ಕಲಾವಿದರು ಹಾಗೂ ಪ್ರೋತ್ಸಾಹಕರಿದ್ದರೆ ಸಾಲದು. ಕಲೆಯನ್ನು ಆಸ್ವಾದಿಸುವ ಮನಸ್ಸುಗಳು ಅಗತ್ಯ.” ಎಂದರು. ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ “ಬದುಕಿನಲ್ಲಿ ಆನಂದ ಹಾಗೂ ಸುಖ ಪ್ರಾಪ್ತಿಗೆ ಧರ್ಮ ಪಾಲಿಸಬೇಕು. ಚಾತುರ್ಮಾಸ್ಯದ 50 ದಿನಗಳಲ್ಲಿ 50 ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಚಿಂತನೆ ನಡೆಸಿದ್ದೇವೆ.” ಎಂದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಸಂಘಟಕ ಬಿ. ಜನಾರ್ದನ ಅಮ್ಮುಂಜೆ ಹಾಗೂ ಕಲಾವಿದ…

Read More

ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ಸ್ವಾತಂತ್ರ್ಯೋತ್ಸವದ ಶುಭಾಶಯಗಳೊಂದಿಗೆ ಸನಾತನ ನಾಟ್ಯಾಲಯದ ನೃತ್ಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ಭರತನಾಟ್ಯ ವೈವಿಧ್ಯ ‘ಸನಾತನ ನೃತ್ಯೋತ್ಸವ’ ಕಾರ್ಯಕ್ರಮವು ದಿನಾಂಕ 17 ಆಗಸ್ಟ್ 2024ರಂದು ಸಂಜೆ ಗಂಟೆ 6-00ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಶ್ರೀಮತಿ ರೇವತೀ ಸುನೀಲ್ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ‘ಲಕ್ಷ್ಮೀಯೂ ಅವಳೇ ದುರ್ಗೆಯೂ ಅವಳೇ’ ಎಂಬ ವಿಷಯದ ಬಗ್ಗೆ ಕಾರ್ಕಳದ ಕುಮಾರಿ ಅಕ್ಷಯಾ ಗೋಖಲೆ ಇವರು ಮುಖ್ಯ ಭಾಷಣ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶೀಲತಾ ನಾಗರಾಜ್ ಇವರ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶನ ಪ್ರಸ್ತುತಗೊಳ್ಳಲಿದೆ.

Read More