Subscribe to Updates
Get the latest creative news from FooBar about art, design and business.
Author: roovari
ಮೈಸೂರು : ಸ್ಪಂದನ ಸಾಂಸ್ಕೃತಿಕ ಪರಿಷತ್ತು ಮೈಸೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಮತ್ತು ವಿಸ್ಮಯ ಪ್ರಕಾಶನ ಮೈಸೂರು ಇದರ ವತಿಯಿಂದ ‘ಯುಗಾದಿ ಕವಿ-ಕಾವ್ಯ ಸಂಭ್ರಮ’ ರಾಜ್ಯ ಮಟ್ಟದ ಕವಿಮೇಳವನ್ನು ದಿನಾಂಕ 06 ಏಪ್ರಿಲ್ 2025ರಂದು ಬೆಳಗ್ಗೆ 10-00 ಗಂಟೆಗೆ ಮೈಸೂರು ವಿಜಯ ನಗರ ಮೊದಲ ಹಂತ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇದರ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭವನ್ನು ಪ್ರಸಿದ್ಧ ಸಾಹಿತಿ ಡಾ. ಸಬಿಹಾ ಭೂಮಿ ಗೌಡ ಇವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಂಡ್ಯದ ಕವಯಿತ್ರಿ ಹಾಗೂ ಅಂಕಣಕಾರರಾದ ಡಾ. ಶುಭಶ್ರೀ ಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ 01 ಹಾಗೂ ಸಾಹಿತಿ ಮತ್ತು ಪ್ರಗತಿಪರ ಚಿಂತಕರಾದ ಶ್ರೀ ಹಡವನಹಳ್ಳಿ ವೀರಣ್ಣ ಗೌಡ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ 02 ಪ್ರಸ್ತುತಗೊಳ್ಳಲಿದೆ. ಸಂಜೆ 4-00 ಗಂಟೆಗೆ ಸಮಾರೋಪ…
ಮಂಗಳೂರು : ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಇದರ ವತಿಯಿಂದ ‘ರಂಗ ಸ್ವರೂಪ ರಂಗೋತ್ಸವ 2025’ ಮಕ್ಕಳ ಬೇಸಿಗೆ ಶಿಬಿರವನ್ನು ಕುಂಜತ್ತಬೈಲ್ ಮರಕಡದ ದ.ಕ.ಜಿ.ಪಂ.ಮಾ.ಹಿ.ಪ್ರಾ. ಶಾಲೆಯಲ್ಲಿ ದಿನಾಂಕ 16-04-2025ರಿಂದ 19-04-2025ರವರೆಗೆ ಹಮ್ಮಿಕೊಳ್ಳಲಾಗಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಾನಪದ ವಿದ್ವಾಂಸರಾದ ಕೆ.ಕೆ. ಪೇಜಾವರ ಇವರಿಗೆ ರಂಗ ಸ್ವರೂಪ ಪ್ರಶಸ್ತಿ ಪ್ರದಾನ ಮಾಡಲಾಗುವುದು. ದಿನಾಂಕ 19-04-2025ರಂದು ಸಂಜೆ ಗಂಟೆ 5-00ಕ್ಕೆ ಪ್ರತಿಭಾ ಪ್ರದರ್ಶನ, ಸಮಾರೋಪ ಸಮಾರಂಭ ಹಾಗೂ ಶಿಬಿರಾರ್ಥಿಗಳಿಂದ ‘ಸಾಂಸ್ಕೃತಿಕ ಸಂಜೆ’ ಕಾರ್ಯಕ್ರಮಗಳು ನಡೆಯಲಿದೆ. ನೋಂದಾವಣೆಗಾಗಿ ಸಂಪರ್ಕಿಸಿರಿ 9880835659 ಮತ್ತು 9964022578.
ಮಧೂರು : ಮಧೂರು ಶ್ರೀ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪ್ರತಿದಿನ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿನಾಂಕ 27 ಮಾರ್ಚ್ 2025ರಂದು ಬೆಂಗಳೂರಿನ ನೃತ್ಯ ಕುಟೀರದ ಗುರು ವಿದುಷಿ ದೀಪಾ ಭಟ್ ಮತ್ತು ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗಣೇಶ ನಟರಾಜ ಹಾಗೂ ದೇವಿ ಕೃತಿಗಳಿಗೆ ಸುಂದರ ನೃತ್ಯಬಂಧಗಳನ್ನು ಪ್ರದರ್ಶಿಸಲಾಯಿತು. ವಿಶೇಷವಾಗಿ ‘ಶಿವ ನವರಸ ಲಾಸ್ಯ’ ಎಂಬ ನೃತ್ಯ ರೂಪಕದ ಮುಖೇನ ಶಿವಪುರಾಣದ ಅನೇಕ ಕಥೆಗಳ ಮೂಲಕ ಶಿವನ ನವರಸ ಭಾವ ನೃತ್ಯದಲ್ಲಿ ಮೆರೆದಿದ್ದು ನೆರೆದಿದ್ದ ಅಪಾರ ಭಕ್ತ ವೃಂದದ ಮೆಚ್ಚುಗೆಗೆ ಪಾತ್ರವಾಯಿತು.
ಹುಬ್ಬಳ್ಳಿ : ಅಕ್ಷರ ಸಾಹಿತ್ಯ ವೇದಿಕೆಯು ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆ ಅವರ ಸ್ಮರಣಾರ್ಥ ‘ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಸ್ಪರ್ಧೆ-2025’ ಏರ್ಪಡಿಸಿದೆ. ವಿಜೇತರಿಗೆ ರೂ. ಐದು ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ಕೊಡಲಾಗುವುದು. ವಿದ್ಯಾರ್ಥಿಗಳು ಕಾಗದದ ಒಂದು ಮಗ್ಗುಲಲ್ಲಿ ಅಪ್ರಕಟಿತ ಸ್ವರಚಿತ ಕಥೆ ಕಳುಹಿಸಬೇಕು. ಇ-ಮೇಲ್ ಮೂಲಕವೂ ಕಳುಹಿಸಬಹುದು. ಅದರ ಜೊತೆಗೆ ಪ್ರತ್ಯೇಕವಾಗಿ ಕಾಲೇಜು ಮುಖ್ಯಸ್ಥರ ದೃಢೀಕೃತ ಪ್ರಮಾಣಪತ್ರ ಇರಬೇಕು. ಕಥೆಗಳನ್ನು ಕಳುಹಿಸಲು 30 ಏಪ್ರಿಲ್ ಕೊನೆಯ ದಿನವಾಗಿರುತ್ತದೆ. ಸಂಪರ್ಕ ವಿಳಾಸ : ‘ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ/ನಿ ಕಥಾಸ್ಪರ್ಧೆ, ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ, ಸುನಂದಾ ಪ್ರಕಾಶ ಕಡಮೆ, # 90, ‘ನಾಗಸುಧೆ’ 6/ಬಿ ಕ್ರಾಸ್, ಕಾಳಿ ದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ – 580031. ದೂ. ಸಂಖ್ಯೆ 98457 79387. ಇ-ಮೇಲ್: [email protected]
ಬೆಂಗಳೂರು : ರಾಮ್ಕಿ ಮಾಚೇನಹಳ್ಳಿ ಸಾರಥ್ಯದಲ್ಲಿ ಕನ್ನಡ ಸಾಹಿತ್ಯಲೋಕಕ್ಕೆ ಅಪ್ಪ ಅವ್ವ ಅಕ್ಷರ ಪಬ್ಲಿಕೇಷನ್ಸ್ ಇವರ ವತಿಯಿಂದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 06 ಏಪ್ರಿಲ್ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಬುಡಕಟ್ಟಿನ ಕನ್ನಡತಿ ಡಾ. ಬಿ.ಟಿ. ಲಲಿತಾ ನಾಯಕ್ ಅಭಿನಂದನಾ ಗ್ರಂಥ, ಸಾಹಿತ್ಯ-ಸಂಸ್ಕೃತಿ ಅನುಸಂಧಾನ, ನೆಲೆ ಬೆಲೆ – ಕಾದಂಬರಿ, ಹಬ್ಬ ಮತ್ತು ಬಲಿ – ಕಥಾ ಸಂಕಲನ, ಬಿ.ಟಿ. ಲಲಿತಾ ನಾಯಕ್ ರವರ ಸಮಗ್ರ ಕವಿತೆಗಳು – ಕವನ ಸಂಕಲನ, ಗತಿ – ಕಾದಂಬರಿ, GATI – English, RAFTAR – Hindi, ವಿದ್ಯಾರ್ಥಿಗಳೇ ಪರೀಕ್ಷೆಯನ್ನು ನಗುತ್ತಾ ಎದುರಿಸಿ, ಅನುಪಮ ಸಾಧಕರು, ಕೃಷಿ ಋಷಿಗಳು, ಸಾವಯವ ಕೃಷಿ, ಮರೆಯಲಾಗದವರು ಭಾಗ -1, ಸೋತು ಗೆದ್ದವರು ಭಾಗ -1, ಅತಿರಥರು ಭಾಗ -1 ಮುಂತಾದ ಕೃತಿಗಳು ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿವೆ.
ಕೊಡಗು : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಮತ್ತು ಅಮ್ಮತ್ತಿ ಕೊಡವ ಸಮಾಜದ ಸಹಯೋಗದಲ್ಲಿ ‘ಕೊಡವ ಬಲ್ಯ ನಮ್ಮೆ 2025’ ಎರಡು ದಿನಗಳ ಕಾರ್ಯಕ್ರಮವು ದಿನಾಂಕ 29 ಮತ್ತು 30 ಮಾರ್ಚ್ 2025ರಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಯ ಕೊಡವ ಸಮಾಜದಲ್ಲಿ ನಡೆಯಿತು. ಕೊಡವ ಅಕಾಡೆಮಿಯ ಗೌರವ ಪ್ರಶಸ್ತಿ, ಪುಸ್ತಕ ಪ್ರಶಸ್ತಿ ಮತ್ತು ದುಡಿ ತಾಳ ಕೊಡ್ ಪ ಆಯಿಮೆ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕೊಡವ ಭಾಷೆಯ ಕವಿಗೋಷ್ಠಿಯೂ ನಡೆಯಿತು. ಆಹ್ವಾನಿತ ಕವಿಗಳಾದ ಶ್ರೀಮತಿ ಪುತ್ತಾಮನೆ ವಿದ್ಯಾ ಜಗದೀಶ್, ಕೋಟೆರ ಉದಯ ಪೂಣಚ್ಚ, ಶ್ರೀಮತಿ ಅಜ್ಜಿಕುಟ್ಟಿರ ಭವ್ಯ ಬೋಪಣ್ಣ, ಶ್ರೀ ವೈಲೇಶ ಪಿ.ಎಸ್. ಕೊಡಗು, ಶ್ರೀಮತಿ ಬಾದುಮಂಡ ಬೀನ ಕಾಳಯ್ಯ, ಶ್ರೀ ಕಾಣತಂಡ ವಿವೇಕ್ ಅಯ್ಯಪ್ಪ, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಶ್ರೀ ಕೊಟ್ರಂಡ ಶ್ರೀಕಾಂತ್ ಪೂವಣ್ಣ, ಶ್ರೀ ಪಂದ್ಯಂಡ ರೇಣುಕಾ ಸೋಮಯ್ಯ ಮತ್ತು ಹಿರಿಯ ಕವಯಿತ್ರಿ ಶ್ರೀಮತಿ ಮೂಕೊಂಡ ಪುಷ್ಪ ಪೂಣಚ್ಚ ಇವರುಗಳು ಕವನ ವಾಚನ…
ಕೋಟ: ಕೋಟದ ಬಳಿ ಇರುವ ಕೋಡಿ ಕನ್ಯಾಣದ ಶ್ರೀ ರಾಮ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಮೂರನೇ ವರ್ಷದ ‘ರಾಮ ಪರ್ವ’ ಕಾರ್ಯಕ್ರಮ ದಿನಾಂಕ 12 ಏಪ್ರಿಲ್ 2025ರಂದು ಕೋಡಿ ಕನ್ಯಾಣದ ಶ್ರೀರಾಮಮಂದಿರದ ವಠಾರದಲ್ಲಿ ಜರಗಲಿದೆ. ಈ ಕಾರ್ಯಕ್ರಮದಲ್ಲಿ ನೀಡಲಾಗುವ ‘ರಾಮ ಪರ್ವ ಪುರಸ್ಕಾರ’ಕ್ಕೆ ಖ್ಯಾತ ಜಾನಪದ ಕಲಾವಿದೆ ಪದ್ಮಶ್ರೀ ಬಿ. ಮಂಜಮ್ಮ ಜೋಗತಿ ಇವರನ್ನು ಆಯ್ಕೆಮಾಡಲಾಗಿದೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕಲ್ಲುಕಂಬ ಗ್ರಾಮದಲ್ಲಿ ಹನುಮಂತಯ್ಯ ಮತ್ತು ಜಯಲಕ್ಷ್ಮಿ ದಂಪತಿಗಳಿಗೆ ಜನಿಸಿದ ಇವರು ನೃತ್ಯ ಶಿಕ್ಷಕಿ ಕಾಳವ್ವ ಜೋಗತಿ ಅವರ ಬಳಿ ಜೋಗತಿ ನೃತ್ಯವನ್ನು ಕಲಿತರು. ಬಳಿಕ ಮಂಜಮ್ಮ ಇವರು ಕಾಳವ್ವ ಜೋಗತಿಯ ನೃತ್ಯ ತಂಡದಲ್ಲಿ ಖಾಯಂ ನೃತ್ಯಗಾರ್ತಿಯಾಗಿ ಭಾರತದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡಿದರು. ಕಾಳವ್ವ ಮರಣಾ ನಂತರ ಮಂಜಮ್ಮ ತಂಡದ ನೇತೃತ್ವ ವಹಿಸಿಕೊಂಡು ಜನರಲ್ಲಿ ಕುಣಿತವನ್ನು ಜನಪ್ರಿಯಗೊಳಿಸಿದರು. 2010ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಇವರು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾರ್ಕಳ : ಯುವ ಕತೆಗಾರ, ಕನ್ನಡ ನಾಡಿನ ಪ್ರತಿಷ್ಠಿತ ಟೊಟೋ ಪ್ರಶಸ್ತಿ ಪುರಸ್ಕೃತ ಬರಹಗಾರ ಕಾರ್ಕಳದ ಪ್ರಸಾದ್ ಶೆಣೈ ಆರ್.ಕೆ. ಇವರ ಮೂರನೇ ಕೃತಿ ‘ನೇರಳೆ ಐಸ್ ಕ್ರೀಂ’ ಕಥಾ ಸಂಕಲನದ ಬಿಡುಗಡೆ ಕಾರ್ಯಕ್ರಮವು ದಿನಾಂಕ 30 ಮಾರ್ಚ್ 2025ರಂದು ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು ಕೃತಿ ಅನಾವರಣಗೊಳಿಸಿ ಲೇಖಕರಿಗೆ ಶುಭ ಹಾರೈಸಿದರು. ಕಾದಂಬರಿಗಾರ್ತಿ ಸಹನಾ ವಿಜಯ್ ಕುಮಾರ್, ವಿಮರ್ಶಕ ಬಸವರಾಜ್ ಸರಬದ, ಸಾಹಿತಿ ಡಾ. ಬೈರಮಂಗಲ ರಾಮೇಗೌಡ, ವೀರಲೋಕದ ಪ್ರತಿಷ್ಠಾನದ ವೀರಕಪುತ್ರ ಶ್ರೀನಿವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ವೀರಲೋಕ ಪ್ರಕಾಶನದ ಸಾಹಿತ್ಯ ಯುಗಾದಿ ಕಾರ್ಯಕ್ರಮದಲ್ಲಿ ಹತ್ತು ಲೇಖಕರ ಕೃತಿಗಳನ್ನು ವಿಭಿನ್ನವಾಗಿ ಅನಾವರಣಗೊಳಿಸಲಾಯಿತು. ತಾಳಮದ್ದಲೆ ಮೂಲಕ ಲೇಖಕರ ಹಾಗೂ ಪುಸ್ತಕಗಳ ಪರಿಚಯವನ್ನು ವಿಭಿನ್ನವಾಗಿ ಮಾಡಲಾಯಿತು. ಪ್ರಸಾದ್ ಶೆಣೈಯವರ ‘ನೇರಳೆ ಐಸ್ ಕ್ರೀಂ’ ಕೃತಿಯಲ್ಲಿ ಪ್ರಜಾವಾಣಿ ಮತ್ತು ಟೋಟೋ ಪುರಸ್ಕಾರ ಪಡೆದ ಕತೆಗಳಿವೆ. ‘ನೇರಳೆ ಐಸ್…
ಉಡುಪಿ : ಭೂಮಿಕಾ (ರಿ.) ಹಾರಾಡಿ ಇದರ ವತಿಯಿಂದ ಹಾಗೂ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ‘ಬಣ್ಣ ನಾಟಕೋತ್ಸವ’ವನ್ನು ದಿನಾಂಕ 09 ಏಪ್ರಿಲ್ 2025ರಿಂದ 13 ಏಪ್ರಿಲ್ 2025ರವರೆಗೆ ಪ್ರತಿದಿನ ಸಂಜೆ ಗಂಟೆ 6-45ಕ್ಕೆ ಬ್ರಹ್ಮಾವರದ ಎಸ್.ಎಮ್.ಎಸ್. ಮಕ್ಕಳ ಮಂಟಪದಲ್ಲಿ ಆಯೋಜಿಸಲಾಗಿದೆ. ದಿನಾಂಕ 09 ಏಪ್ರಿಲ್ 2025ರಂದು ಗಣೇಶ್ ಮಂದಾರ್ತಿ ಇವರ ನಿರ್ದೇಶನದಲ್ಲಿ ರಂಗಾಯಣ ಮೈಸೂರು ತಂಡದವರಿಂದ ‘ಮೈ ಫ್ಯಾಮಿಲಿ’, ದಿನಾಂಕ 10 ಏಪ್ರಿಲ್ 2025ರಂದು ಶ್ರವಣ್ ಹೆಗ್ಗೋಡು ಇವರ ನಿರ್ದೇಶನದಲ್ಲಿ ರಂಗಾಯಣ ಮೈಸೂರು ತಂಡದವರಿಂದ ‘ರೆಕ್ಸ್ ಅವರ್ಸ್’, ದಿನಾಂಕ 11 ಏಪ್ರಿಲ್ 2025ರಂದು ಡಾ. ಸಾಸ್ವೇಹಳ್ಳಿ ಸತೀಶ್ ಇವರ ನಿರ್ದೇಶನದಲ್ಲಿ ಹೊಂಗಿರಣ ಶಿವಮೊಗ್ಗ ತಂಡದವರಿಂದ’ ಮಹಿಳಾ ಭಾರತ’, ದಿನಾಂಕ 12 ಏಪ್ರಿಲ್ 2025ರಂದು ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ ಇವರ ನಿರ್ದೇಶನದಲ್ಲಿ ಭೂಮಿಕಾ (ರಿ.) ಹಾರಾಡಿ ತಂಡದವರಿಂದ ‘ಬರ್ಬರೀಕ’, ದಿನಾಂಕ 13 ಏಪ್ರಿಲ್ 2025ರಂದು ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಸುಮನಸಾ ಕೊಡವೂರು ತಂಡದವರಿಂದ ‘ಈದಿ’ ನಾಟಕಗಳು…
ಮಲ್ಲತಹಳ್ಳಿ : ಯುಗಾದಿ ಹಬ್ಬದ ಪ್ರಯುಕ್ತ ‘ಪದ’ ಸಂಸ್ಥೆ ಹಾಗೂ ಚಿರಂತ ಟ್ರಸ್ಟ್ ವತಿಯಿಂದ ಆಯೋಜಿಸಿದ ‘ಬೇವುಬೆಲ್ಲ ಬಲ್ಲವರೆಲ್ಲ’ ಎಂಬ ಶೀರ್ಷಿಕೆಯಲ್ಲಿ ಸಂಸ್ಕೃತಿಕ ಕಾರ್ಯಕ್ರಮವು ದಿನಾಂಕ 30 ಮಾರ್ಚ್ 2025ರಂದು ಬೆಂಗಳೂರಿನ ಮಲ್ಲತಹಳ್ಳಿಯಲ್ಲಿ ನಡೆಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರ ಅಧ್ಯಕ್ಷತೆಯಲ್ಲಿ ನಡೆಡಾ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊಫೆಸರ್ ಎಲ್ಲೆನ್ ಮುಕುಂದರಾಜ್, ಡಾಕ್ಟರ್ ಶ್ರೀನಿವಾಸ್ ಮೂರ್ತಿ ಮತ್ತು ರಂಗಿಕರ್ಮಿ ಮೈಕೋ ಶಿವಶಂಕರ ಭಾಗವಹಿಸಿದರು. ಪದಾದೇವರಾಜ್ ಪ್ರಾಸ್ತಾವಿಕ ಮಾತನಾಡಿ, ಶಂಕರ್ ಭಾರತಿಪುರ ಸ್ವಾಗತಿಸಿ, ರವೀಂದ್ರನಾಥ್ ಸಿರಿವರ ಕಾರ್ಯಕ್ರಮವನ್ನು ನಿರ್ವಹಿಸಿ, ಸುಮಾರು ಹತ್ತು ಜನ ಕವಿಗಳು ಕವನ ವಾಚನ ಮಾಡಿದರು. ಪದ್ಮ ಟಿ., ಚಿನ್ಮಯಿ, ವಿಜಯಲಕ್ಷ್ಮೀ ನುಗ್ಗೆ ಹಳ್ಳಿ, ಡಾ. ಸುಬ್ರಮಣ್ಯ ಸ್ವಾಮಿ, ಡಾ. ಲಕ್ಷ್ಮಿ ನಾರಾಯಣ, ಟಿ. ರಂಗಸ್ವಾಮಿ, ಎಂ. ಎಂ. ಆನಂದ್, ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಮುಂತಾದವರು ಕವನವಾಚನ ಮಾಡಿದರು. ಪ್ರೊಫೆಸರ್ ಮುಕುಂದರಾಜು ಮಾತನಾಡಿ “ಸರಕಾರವನ್ನು ನಂಬಿ ಕುಳಿತುಕೊಳ್ಳಬಾರದು.…