Author: roovari

ಉಡುಪಿ : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು ಮಂಗಳೂರು ಇದರ ಈ ಆರ್ಥಿಕ ವರುಷದ ಐದನೇ ಕಾರ್ಯಕ್ರಮ ಕಿಶೋರ ಪ್ರತಿಭೋತ್ಸವ 2023. ಕಾರ್ಯಕ್ರಮವು  ದಿನಾಂಕ 10-09-2023ರ ಆದಿತ್ಯವಾರದಂದು ಸಂಜೆ ಉಡುಪಿಯ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಿತು. ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಳದ ಧರ್ಮದರ್ಶಿಗಳಾಗಿರುವ ಡಾ.ನಿ.ಬಿ.ವಿಜಯಬಲ್ಲಾಳ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, “ದೇವಸ್ಥಾನಗಳಲ್ಲಿ ಲಲಿತ ಕಲೆಗಳಿಗೆ ಯಾವತ್ತೂ ಅವಕಾಶ ಪ್ರೋತ್ಸಾಹ ನಮ್ಮ ತಂದೆಯ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಇನ್ನೂ ಮುಂದೆಯೂ ಇಂತಹ ಮಕ್ಕಳ ಕಾರ್ಯಕ್ರಮಕ್ಕೆ ಈ ವೇದಿಕೆ ಸದಾ ಇದೆ.” ಎಂದು ಪರಿಷತ್ತಿನ ಮುಂದಿನ ಕಾರ್ಯಕ್ರಮದ ಬಗ್ಗೆ ಪ್ರೋತ್ಸಾಹದ ನುಡಿಯ ಮುಖಾಂತರ ಶುಭ ಹಾರೈಸಿದರು. ಹದಿನಾರು ಕಿಶೋರ ಪ್ರತಿಭೆಗಳಿಗೆ ಮೆಚ್ಚು ಪತ್ರವನ್ನು ಕೊಟ್ಟು ಗೌರವಿಸಿ, ಪರಿಷತ್ತಿನ ಮಾರ್ಗದರ್ಶಕರಾದ ವಿದ್ವಾನ್ ಪಿ. ಕಮಲಾಕ್ಷ ಆಚಾರ್ ಮಾತನಾಡಿದರು. ಪರಿಷತ್ತಿನ ಉಪಾಧ್ಯಕ್ಷರಾದ ವಿದ್ವಾನ್ ಚಂದ್ರಶೇಖರ ನಾವಡ, ಶ್ರೀಮತಿ ರಾಜಶ್ರೀ,  ಪರಿಷತ್ತಿನ ಕೋಶಾಧಿಕಾರಿಗಳಾದ ವಿದ್ವಾನ್ ಸುರೇಶ್ ಅತ್ತಾವರ್,  ಸದಸ್ಯರಾದ ರಾಮಕೃಷ್ಣ ಕೊಡಂಚ ಮತ್ತು…

Read More

ಉಜಿರೆ: ಯಕ್ಷ ಭಾರತಿ ಕನ್ಯಾಡಿ (ರಿ)ಬೆಳ್ತಂಗಡಿ ಇದರ 9ನೇ ವಾರ್ಷಿಕೋತ್ಸವು ದಿನಾಂಕ 10-09 2023 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪುತ್ತೂರು ಬೊಳುವಾರಿನ ಆಂಜನೇಯ  ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ ಇವರಿಗೆ ಯಕ್ಷಭಾರತಿ ಪ್ರಶಸ್ತಿ 2023 ಪ್ರದಾನ ಮಾಡಿ ಗೌರವಿಸಲಾಯಿತು. ಯಕ್ಷ ಭಾರತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಅಭಿನಂದನ ನುಡಿಗಳನ್ನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತರು “ಯಕ್ಷಗಾನ ನನ್ನ ಉಸಿರು, ಇದು ಬರೀ ಮನೋರಂಜನೆ ಅಲ್ಲ ಇದು ಮನಃ ಪರಿವರ್ತನೆಗೊಳ್ಳುವ ವಿಧಾನ. ಇತ್ತೀಚೆಗಿನ ದಿನಗಳಲ್ಲಿ ಅಧಿಕವಾದ ನೃತ್ಯ, ಭಾಗವತರು ಇನ್ನೊಬ್ಬರ ಅನುಕರಣೆ ಮಾಡುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸನ್ನಿವೇಶಗಳು ಬಹಳ ಬೇಸರವನ್ನುಂಟುಮಾಡಿದೆ. ನಾವು ಒಂದು ಮೂರ್ತಿಯನ್ನು ಕಂಡಾಗ ಹೇಗೆ ಅದನ್ನು ಪೂಜಿಸುತ್ತೇವೆಯೋ, ಹಾಗೆಯೇ ಅಂತಹ ದೇವರ ಪುರಾಣಗಳನ್ನು ಜನರಿಗೆ ತಲುಪಿಸುವ ಸನಾತನ ಧರ್ಮದ ಒಂದು ಭಾಗ ನಾವು. ಇದನ್ನು ಹಿಂದಿನಿಂದ ಹಾಗೂ ಪ್ರತ್ಯಕ್ಷದರ್ಶಿಗಳಾಗಿ ಗಮನಿಸುವ ಜನರಿದ್ದಾರೆ.…

Read More

ಕಟೀಲು : ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ಘಟಕದ ವತಿಯಿಂದ ಹಿರೇಮಗಳೂರು ಕಣ್ಣನ್ ಜೊತೆ ಹರಟೆ ಕಾರ್ಯಕ್ರಮವು ದಿನಾಂಕ 10-09-2023ರ ಭಾನುವಾರದಂದು ಕಟೇಲಿನಲ್ಲಿ ನಡೆಯಿತು. ‘ಕನ್ನಡದ ಪೂಜಾರಿ’ ಖ್ಯಾತಿಯ ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ “ಭಾರತ ದೇಶದ ಮಣ್ಣಿನ ಗುಣ ಶ್ರೇಷ್ಟವಾದುದು. ಜಗತ್ತಿಗೇ ಮಾರ್ಗದರ್ಶನ ಮಾಡಿದ ಸನಾತನ ಧರ್ಮದ ಮೇಲೆ ಪೆಟ್ಟು ಕೊಡುವ ಕೆಲಸ ಸರಿಯಾದುದಲ್ಲ. ಇಸ್ರೇಲ್ ನಿಂದ ನಮ್ಮೂರಿಗೆ ಸಂಸ್ಕೃತ ಕಲಿಯಲು ಬಂದವರು ನಾವು ಜ್ಞಾನ ಸಂಪಾದನೆಗಾಗಿ ಬಂದಿದ್ದೇವೆ ಎಂದಿದ್ದರು. ದ್ವೈತ, ಆದ್ವೈತ, ವಿಶಿಷ್ಟಾದ್ವೈತ ಸಿದ್ದಾಂತಗಳು ರಾದ್ದಾಂತಗಳಾಗಬಾರದು ಎಂದ ಕಣ್ಣನ್ ಇತ್ತೀಚಿಗೆ ನಮ್ಮ ಮನೆಯ  ನಾಗರಿಕ ಸಂಸ್ಕೃತಿ ಹೇಗಿದೆಯೆಂದರೆ ಪದ್ಮಾವತಿ ನಿಲಯ ವೆಂಕಟೇಶ್ವರ ಪ್ರಸನ್ನ ತಂದೆ ತಾಯಿಯ ಅಶೀರ್ವಾದ ಎಂದೆಲ್ಲ ಹಾಕಿ “ನಾಯಿಗಳಿವೆ ಎಚ್ಚರಿಕೆ” ಎಂಬ ಅಪಸಂಸ್ಕೃತಿ ಬೋರ್ಡನ್ನೂ ನೇತು ಹಾಕುತ್ತೇವೆ. ಮುದ್ದಣ ಮನೋರಮೆಯರ ಸಾಹಿತ್ಯ ಬರೆದ ಕವಿ ಕಷ್ಟದಲ್ಲಿದ್ದ. ಆದರೆ ಅಂತಹ ಶ್ರೇಷ್ಟ ಸಾಹಿತ್ಯವನ್ನು ಮುಂದಿಟ್ಟು ಡಾಕ್ಟರೇಟ್ ಮಾಡಿದವರು ಎಷ್ಟೋ ಮಂದಿ ಇದ್ದಾರೆ. ಮುಳಿಯ ತಿಮ್ಮಪ್ಪಯ್ಯ, ಡಿವಿಜಿ ಮತ್ತು …

Read More

ಅವಿನಾಶ್ ಬೈಪಾಡಿತ್ತಾಯ ಹುಟ್ಟಿದ್ದು 14.09.1974 ರಂದು ಈಗಿನ ಕಡಬ ತಾಲೂಕಿನ, ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕೆಂಚಭಟ್ರೆ ಎಂಬ ಗ್ರಾಮದಲ್ಲಿ. ಅಪ್ಪ ಹರಿನಾರಾಯಣ ಬೈಪಾಡಿತ್ತಾಯ, ಅಮ್ಮ ಲೀಲಾವತಿ ಬೈಪಾಡಿತ್ತಾಯ. ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸದ ಬಳಿಕ ಮನೆಯ ಆರ್ಥಿಕ ಸ್ಥಿತಿಗತಿ ಅನುಕೂಲವಿಲ್ಲದ ಕಾರಣದಿಂದಾಗಿ ತಿಪಟೂರಿನಲ್ಲಿ ಎಕ್ಕಾರಿನ ಸದಾನಂದ ರಾಯರ ಕೃಪೆಯಿಂದ ಅವರ ಹೋಟೆಲಲ್ಲಿ ಕೆಲಸ ಮಾಡುತ್ತಾ, ಕಲ್ಪತರು ಕಾಲೇಜಿನಲ್ಲಿ ಬಿಎಸ್ಸಿ (ಸಿಬಿಝಡ್) ವಿದ್ಯಾಭ್ಯಾಸ ಪೂರೈಸಿದೆ. ಕಡಬ, ಕೆಂಚಭಟ್ರೆ ಸುತ್ತಮುತ್ತ ಯಾವುದೇ ಪೂಜೆ, ಪುನಸ್ಕಾರ ಅಥವಾ ಶುಭ ಸಮಾರಂಭಗಳಲ್ಲಿ ಸಂಜೆ ಯಕ್ಷಗಾನ ತಾಳಮದ್ದಳೆ ಇರುತ್ತಿತ್ತು. ಅದೇ ರೀತಿ ಆ ಪರಿಸರವೇ ಯಕ್ಷಗಾನದ ಪರಿಸರವಾಗಿತ್ತು. ಹೀಗಾಗಿ, ಅಪ್ಪ ಅಮ್ಮನ ಜೊತೆಗೆ ಹೋಗುತ್ತಿದ್ದೆ. ರಕ್ತಗತವಾಗಿ ಯಕ್ಷಗಾನದ ಆಕರ್ಷಣೆಯಿತ್ತು. ಸಣ್ಣವನಿರುವಾಗಲೇ ಅಂದರೆ ನಾನಿನ್ನೂ ಅಂಗನವಾಡಿಯಲ್ಲಿರುವಾಗಲೇ ಅಪ್ಪ-ಅಮ್ಮ ಇಬ್ಬರೂ ಸೇರಿಕೊಂಡು ಅಣ್ಣನಿಗೆ ಚೆಂಡೆ, ನನಗೆ ಮದ್ದಳೆ ಕಲಿಸಿದರು. ಅದು ಶಾಸ್ತ್ರೀಯವಾದ ಕಲಿಕೆ ಆಗಿರಲಿಲ್ಲ. ತಾಳಕ್ಕೆ ಮತ್ತು ಪದ್ಯಕ್ಕೆ ನುಡಿಸುವುದನ್ನು ಮನೆಯಲ್ಲೇ ಹೇಳಿಕೊಟ್ಟಿದ್ದರು. ಆ ಕಾಲದಲ್ಲಿ ಹಿಮ್ಮೇಳದವರು ಕಡಿಮೆ. ಹೀಗಾಗಿ ಬಾಲವಾಡಿಯಲ್ಲಿರುವಾಗಲೇ ರಾಮಕುಂಜದ…

Read More

ಮೂಡುಬಿದಿರೆ : ವಿದ್ಯಾಗಿರಿಯ ‘ಕುವೆಂಪು ಸಭಾಂಗಣ’ದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗ ಮತ್ತು ಕೆ.ಎನ್. ಭಟ್ ಶಿರಾಡಿಪಾಲ್ ಜನ್ಮಶತಮಾನೋತ್ಸವ ಸಮಿತಿ ಏರ್ಪಡಿಸಿದ ‘ಹಿಂದಿ ದಿವಸ್’ ಕಾರ್ಯಕ್ರಮವು ದಿನಾಂಕ 14-09-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆಯವರು ಕೆ.ಎನ್. ಭಟ್ ಶಿರಾಡಿಪಾಲ್ ಜನ್ಮಶತಮಾನೋತ್ಸವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ “ಬದುಕಿನುದ್ದಕ್ಕೂ ಕಷ್ಟ ಪರಂಪರೆಗಳನ್ನೇ ಎದುರಿಸಿದ ಶಿಕ್ಷಕರಾಗಿದ್ದ ಕೆ.ಎನ್. ಭಟ್ ಶಿರಾಡಿಪಾಲ್ 38 ಕೃತಿಗಳ ರಚನೆ ಮಾಡಿದ್ದಾರೆ. ಅವರ ಅನೇಕ ಲೇಖನಗಳು ಆ ಕಾಲದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರವೀಂದ್ರನಾಥ ಠಾಗೋರರ ‘ಸಾಧನಾ’ ಕೃತಿಯನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯ ಮತ್ತು ಗದ್ಯ ಎರಡೂ ಪ್ರಕಾರಗಳಲ್ಲಿ ನಿರಂತರ ಬರೆದ ಶಿರಾಡಿಪಾಲ್ ಅವರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಗೊಳ್ಳಬೇಕು” ಎಂದು ಹೇಳಿದರು. ಸಮಾರಂಭದಲ್ಲಿ ಪಾಲಡ್ಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಆಂಡ್ಯ್ಯೂ ಡಿ’ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ‘ಹಿಂದಿ ದಿವಸ್’ನ ಮಹತ್ತ್ವವನ್ನು ವಿವರಿಸಿದರು. ಶತನಮನ ಶತಸನ್ಮಾನ…

Read More

ಮಂಗಳೂರು : ಸನಾತನ ನಾಟ್ಯಾಲಯದ ಆಶ್ರಯದಲ್ಲಿ ‘ಸನಾತನ ನೃತ್ಯೋತ್ಸವ’ವು ದಿನಾಂಕ 17-09-2023ರಂದು ಸಂಜೆ 5.30ಕ್ಕೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಲಿದೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಯುವ ವಾಗ್ಮಿ ಲತೇಶ್ ಬಾಕ್ರಬೈಲ್ ಇವರು ‘ಶಿಕ್ಷಣದಲ್ಲಿ ರಾಷ್ಟ್ರೀಯತೆ’ ವಿಷಯದಲ್ಲಿ ಭಾಷಣ ಮಾಡಲಿದ್ದಾರೆ. ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶೀಲತಾ ನಾಗರಾಜ್ ಶಿಷ್ಯವೃಂದದವರಿಂದ ಭರತನಾಟ್ಯ ವೈವಿದ್ಯ ನಡೆಯಲಿದೆ.

Read More

ಮಂಗಳೂರು : ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆಯ ಆಶ್ರಯದಲ್ಲಿ ನಡೆಯುವ ಸರಣಿ ಕಾರ್ಯಕ್ರಮ ‘ಥ್ರೂ ಮೈ ವಿಂಡೋ’ ದಿನಾಂಕ 02-09-2023ರ ಶನಿವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆಯಿತು. ಲೂವಿಸ್ ಕಣ್ಣಪ್ಪ ಅವರ ಭಾವಚಿತ್ರಕ್ಕೆ ಫುಷ್ಪನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೊಂಕಣಿಯ ಪ್ರಪ್ರಥಮ ಪತ್ರಿಕೆ ‘ದರ‍್ವೆಂ’ ಸ್ಥಾಪಕ ಮತ್ತು ವ್ಯವಸ್ಥಾಪಕ ಸರದಾರ ಲೂವಿಸ್ ಕಣ್ಣಪ್ಪ ಅವರ ಬದುಕು ಮತ್ತು ಬರೆಹದ ಕುರಿತು ನವದೆಹಲಿ ಸಾಹಿತ್ಯ ಅಕಾಡೆಮಿಯ ಶ್ರೀಮತಿ ಶ್ಯಾಮಲಾ ಮಾಧವ ವಿಶೇಷ ಉಪನ್ಯಾಸ ನೀಡಿದರು. “ನಾವೆಲ್ಲರೂ ಕಾನಾಟಿ (ಅರ್ಥಾತ್ ದಪ್ಪ ಕನ್ನಡಕ ಧರಿಸುವ) ಅಜ್ಜ ಎಂದೇ ಕರೆಯುತಿದ್ದ ನಮ್ಮಜ್ಜ ಲೂವಿಸ್ ಕಣ್ಣಪ್ಪನವರಿಂದಲೇ ನನ್ನ ಬರವಣಿಗೆಗೆ ಮೊದಲ ಪ್ರೇರಣೆ ದೊರೆಯಿತು. ಸ್ವಾತಂತ್ಯ ಪರ್ವದಲ್ಲಿ ಮದ್ರಾಸ್‌ ವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಮ್.ಎ. ಮತ್ತು ಎಲ್. ಟಿ. ಪದವಿ ಪಡೆದಿದ್ದ ಲೂವಿಸ್ ಕಣ್ಣಪ್ಪನವರು ಮಂಗಳೂರು ಹಂಪನಕಟ್ಟೆಯ ಸರಕಾರಿ ಕಾಲೇಜಿನಲ್ಲಿ (ಇಂದಿನ ವಿಶ್ವವಿದ್ಯಾನಿಲಯ ಕಾಲೇಜು) ಪ್ರಾಂಶುಪಾಲರಾಗಿ, ನಂತರ ದಕ್ಷಿಣ ಕನ್ನಡ ಜಿಲ್ಲೆಯ…

Read More

ಮಂಗಳೂರು : ಶ್ರೀ ಶಾರದಾ ನಾಟ್ಯಾಲಯ ಹೊಸಬೆಟ್ಟು ಇದರ ರಜತ ಸಂಭ್ರಮದ ಪ್ರಯುಕ್ತ ‘ನೃತ್ಯ ಶರಧಿ’ ಸರಣಿ ಕಾರ್ಯಕ್ರಮವು ದಿನಾಂಕ 07-09-2023ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ) ಇದರ ನೃತ್ಯ ನಿರ್ದೇಶಕರಾದ ನಾಟ್ಯ ವಿಶಾರದ ಶ್ರೀ ಯು.ಕೆ. ಪ್ರವೀಣ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು ಮತ್ತು ಈರ್ವರೂ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಪುಷ್ಪಾಂಜಲಿ, ಗಣಪತಿ ಸ್ತುತಿಯೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮ ನಾಟ್ಯದ ಅಧಿದೇವನಾದ ನಟರಾಜನಿಗೆ, ರಂಗ ದೇವತೆಗಳಿಗೆ, ದಿಕ್ಪಾಲಕರಿಗೆ ಹಾಗೂ ಗುರುಗಳಿಗೆ ನಮಿಸಿ ಕಾರ್ಯಕ್ರಮ ಮುಂದುವರಿಯಿತು. ಪುಟಾಣಿ ಮಕ್ಕಳು ಶ್ಯಾಮಲೆ ಮೀನಾಕ್ಷಿ ಅವರ ಹಾಡಿಗೆ ನರ್ತಿಸಿದರು. ನಟರಾಜ, ಸರಸ್ವತಿ, ಗುರು ಹಾಗೂ ಪ್ರೇಕ್ಷಕರಿಗೆ ವಂದಿಸುವ ನಾಟ್ಯಗಣಪತಿಗೆ ನಮನ ಎಂಬ ನೃತ್ಯ ಪ್ರೇಕ್ಷಕರ ಮನಸ್ಸಿಗೆ ಮುದನೀಡಿತು. ಶಿವನ ಕುರಿತಾದ ‘ನಟನಂ ಆಡಿನಾರ್’ ಮತ್ತು ‘ಕಂಡೆ…

Read More

ಉಡುಪಿ: ಬೈಲೂರು ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಿಂಹ ಮಾಸದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ತರಣಿ ಸೇನ ಕಾಳಗ’ ಪ್ರಸಂಗದ ಯಕ್ಷಗಾನ ತಾಳ ಮದ್ದಳೆ ಕೂಟ ದಿನಾಂಕ 08-09-23ರ ಶುಕ್ರವಾರ ಸಂಜೆ ನಡೆಯಿತು. ಬೈಲೂರು ಮಹಿಷಮರ್ದಿನಿ ಯಕ್ಷಗಾನ ಮಂಡಳಿ ಸದಸ್ಯರು ಹಾಗೂ ಅತಿಥಿ ಕಲಾವಿದರು ಸೇರಿ ನಡಿಸಿಕೊಟ್ಟ ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಯುತ ದೇವಿಪ್ರಸಾದ್ ಕಟೀಲ್, ಮೃದಂಗದಲ್ಲಿ ಗುರುಗಳಾದ ಶ್ರೀಯುತ ಮುರಳಿಧರ್ ಭಟ್ ಕಟೀಲ್, ಚಂಡೆಯಲ್ಲಿ  ಶ್ರೀಯುತ ಗಣೇಶ್ ಭಟ್, ಚಕ್ರತಾಳದಲ್ಲಿ ಶ್ರೀಯುತ ಜಯಕರ ಬೈಲೂರು ಸಹಕರಿಸಿದರು. ಅರ್ಥದಾರಿಗಳಾಗಿ ಶ್ರೀರಾಮನಾಗಿ ಶ್ರೀಯುತ ಜಯರಾಮ ಆಚಾರ್, ವಿಭಿಷಣನಾಗಿ ಶ್ರೀಯುತ ಗಣೇಶ್ ಭಟ್ ಉಡುಪಿ, ತರಣಿ ಸೇನನಾಗಿ ಶ್ರೀಯುತ ಶ್ರೀಶ ಆಚಾರ್ ಮಟ್ಟು ಕಟಪಾಡಿ, ರಾವಣನಾಗಿ ಶ್ರೀಯುತ ನಾಗರಾಜ್ ಉಪಾಧ್ಯ ಮಾರ್ಪಳ್ಳಿ ಭಾಗವಹಿಸಿದರು.

Read More

ಮಂಗಳೂರು: ವಿದ್ವಾನ್ ಡಾ. ಪ್ರಭಾಕರ ಅಡಿಗ ಕದ್ರಿ ಸಂಪಾದಿತ ಕೃತಿ ‘ಲಘು ಶಾಕಲಮ್’ ಬಿಡುಗಡೆ ಕಾರ್ಯಕ್ರಮವು ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ದಿನಾಂಕ 16-09-2023ರಂದು ಸಂಜೆ 4.30ಕ್ಕೆ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದ ವಾದಿರಾಜ ಮಂಟಪದಲ್ಲಿ ನಡೆಯಲಿದೆ. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆಗೊಳಿಸುವರು. ಉಡುಪಿ ಸಂಸ್ಕೃತ ಕಾಲೇಜಿನ ಡಾ. ಶಿವಪ್ರಸಾದ ತಂತ್ರಿ ಶುಭಾಶಂಸನೆಗೈಯ್ಯಲಿದ್ದು ಕೃತಿಕಾರ ಡಾ. ಪ್ರಭಾಕರ ಅಡಿಗರು ಕೃತಿಯನ್ನು ಪರಿಚಯಿಸಲಿದ್ದಾರೆ. ಜೋಯಿಸರು, ಪುರೋಹಿತರಾಗಿರುವ ವಿದ್ವಾನ್ ಹರಿಪ್ರಸಾದ ಭಟ್ ಅವರ ಪ್ರಾಯೋಜಕತ್ವದಲ್ಲಿ ಮುದ್ರಣಗೊಂಡಿರುವ ಈ ಕೃತಿ ಬಿಡುಗಡೆ ಸಮಾರಂಭದಲ್ಲಿ ಅರ್ಚಕ ಬೆಳ್ಮಣ್ ಬಿ. ಶ್ರೀಧರ ಭಟ್, ಜ್ಯೋತಿಷಿ ವಿದ್ವಾನ್ ಮುರಲೀ ತಂತ್ರಿ ಬೈಲೂರು, ಅರ್ಚಕ, ಜ್ಯೋತಿಷಿ ವೇ.ಮೂ. ಶ್ರೀಕಾಂತ ಸಾಮಗ ಭಾಗವಹಿಸಲಿದ್ದಾರೆ.

Read More