Author: roovari

ಮಂಗಳೂರು: ‘ಯಕ್ಷಾಂಗಣ ಮಂಗಳೂರು’, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ರಂಗದ ಸಾಧಕರು ಮತ್ತು ಯಕ್ಷಗಾನ ಕಲಾಪೋಷಕರಿಗಾಗಿ ನೀಡುವ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ವನ್ನು ಈ ಬಾರಿ ಎಸ್. ಪ್ರದೀಪ ಕುಮಾರ್ ಕಲ್ಕೂರ ಅವರಿಗೆ ನೀಡಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಕಲ್ಕೂರಾ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಮ್ಮ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಎಡೆಬಿಡದೆ ಮಾಡಿದ ಹಲವು ಬಗೆಯ ಸೇವಾ ಕಾರ್ಯಗಳಿಗಾಗಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಬಹುಮುಖೀ ಸಾಧಕ ಕಲ್ಕೂರ: 16 ನವೆಂಬರ್ 1960 ರಂದು ಉಡುಪಿಯ ಸಗ್ರಿಯಲ್ಲಿ ಮಂಜುನಾಥ ಕಲ್ಕೂರ ಮತ್ತು ಲಲಿತಾ ಕಲ್ಕೂರ ದಂಪತಿಗೆ ಹಿರಿಯ ಪುತ್ರನಾಗಿ ಜನಿಸಿದ ಪ್ರದೀಪ ಕುಮಾರ ಕಲ್ಕೂರ ಪ್ರಾಥಮಿಕ ಶಿಕ್ಷಣವನ್ನು ಕಡಿಯಾಳಿ ಶಾಲೆ, ಪ್ರೌಢಶಾಲೆಯನ್ನು ಕಮಲಾ ಬಾಯಿ ಹೈಸ್ಕೂಲ್ ನಲ್ಲಿ ಪೂರೈಸಿದರು. ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ, ಬಳಿಕ…

Read More

ಸಾಸ್ತಾನ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕ ಆಯೋಜಿಸುವ ‘ಸಾಹಿತ್ಯ ಪ್ರೇರಣೆ’ ಸರಣಿಯ ‘ಸಾಹಿತ್ಯ ಸಂಚಾರ – 31’ನೇ ಕಾರ್ಯಕ್ರಮವು ದಿನಾಂಕ 30 ಅಕ್ಟೋಬರ್ 2024ರ ಬುಧವಾರ ಪೂರ್ವಾಹ್ನ ಘಂಟೆ 11.00ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ಮಿ ಸಾಸ್ತಾನ ಇಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ, ಪ್ರೋ. ಉಪೇಂದ್ರ ಸೋಮಯಾಜಿ ಚಿತ್ರಪಾಡಿ, ಕ. ಸಾ. ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಐತಾಳ ಗುಂಡ್ಮಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಜಿ. ನಾಗೇಶ ಮಯ್ಯ ಹಾಗೂ ಕ. ಸಾ. ಪ. ಕೋಟ ಹೋಬಳಿಯ ಅಧ್ಯಕ್ಷರಾದ ಶ್ರೀ ಅಚ್ಚುತ ಪೂಜಾರಿ ಕಾರ್ಕಡ ಭಾಗವಹಿಸಲಿದ್ದಾರೆ.

Read More

ಮಂಗಳೂರು : ಸಂಗೀತ ಪರಿಷತ್ತು ಮಂಗಳೂರು ಇವರು ಭಾರತೀಯ ವಿದ್ಯಾಭವನ ಇದರ ಸಹಯೋಗದೊಂದಿಗೆ   ಆಯೋಜಿಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯು ದಿನಾಂಕ 20 ಅಕ್ಟೋಬರ್ 2024 ರಂದು ಮಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯಿತು. ಸೀನಿಯರ್ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಡಾ. ಎಸ್. ಸುಂದರ್ ಹಾಗೂ ಶ್ರೀಮತಿ ಜೆ. ಬಿ. ಕೀರ್ತನ ಇವರ ಶಿಷ್ಯೆ ಪ್ರಾರ್ಥನಾ ಬಿ. ಪ್ರಥಮ, ಶ್ರೀ ಅನೀಶ್ ವಿ. ಭಟ್ ಇವರ ಶಿಷ್ಯೆಯಾದ ಅನ್ವಿತಾ ಟಿ. ದ್ವಿತೀಯ, ಗಿರಿಜಾ ಭಟ್ ಸುರತ್ಕಲ್ ಇವರ ಶಿಷ್ಯೆಯಾದ ಸುಧೀಕ್ಷಾ ಆರ್. ಸಮಾಧಾನಕರ ಹಾಗೂ ಶ್ರೀಮತಿ ವೀಣಾ ರಾಘವೇಂದ್ರ ಇವರ ಶಿಷ್ಯೆ ಆತ್ಮಶ್ರೀ ಎಂ. ಸಮಾಧಾನಕರ ಬಹುಮಾನ ಪಡೆದಿರುತ್ತಾರೆ. ಜೂನಿಯರ್ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಶ್ರೀಮತಿ ಅನುಸೂಯ ಪಾಠಕ್ ಇವರ ಶಿಷ್ಯ ಶ್ರೀವರ್ಚಸ್ ಪ್ರಥಮ, ಶ್ರೀಮತಿ ವಾರಿಜಾಕ್ಷಿ ಭಟ್ ಇವರ ಶಿಷ್ಯ ಪ್ರಣವ್ ಅಡಿಗ ದ್ವಿತೀಯ, ಶ್ರೀಮತಿ ಚೇತನಾ ಆಚಾರ್ಯ ಉಡುಪಿ ಇವರ ಶಿಷ್ಯ ಪರ್ಜನ್ಯ ಕೆ. ರಾವ್ ತೃತೀಯ ಹಾಗೂ ಶ್ರೀಮತಿ…

Read More

ಕಾರ್ಕಳ : ಯಕ್ಷರಂಗಾಯಣ ಕಾರ್ಕಳ ಇದರ ವತಿಯಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ತಿಂಗಳ ನಾಟಕ’ ಪ್ರದರ್ಶನವನ್ನು ದಿನಾಂಕ 30 ಅಕ್ಟೋಬರ್ 2024ರಂದು ಸಂಜೆ 6-00 ಗಂಟೆಗೆ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕೆ.ಪಿ. ಲಕ್ಷ್ಮಣ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಂಗಳೂರಿನ ಆಯನ ನಾಟಕ ಮನೆ ಇವರು ಪ್ರಸ್ತುತ ಪಡಿಸುವ ‘ದ್ವೀಪ’ ನಾಟಕದಲ್ಲಿ ಚಂದ್ರಹಾಸ ಉಳ್ಳಾಲ ಮತ್ತು ಪ್ರಭಾಕರ ಕಾಪಿಕಾಡ್ ಅಭಿನಯಿಸಲಿದ್ದಾರೆ.

Read More

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ 2024ನೇ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಉಡುಪಿಯ ಶ್ರೀಮತಿ ಪೂರ್ಣಿಮ ಸುರೇಶ್ ಅವರ ‘ಸಂತೆಯೊಳಗಿನ ಏಕಾಂತ’ ಮತ್ತು ಕಲಬುರ್ಗಿಯ ‘ಶ್ರೀಮತಿ ಕಾವ್ಯಶ್ರೀ ಮಹಾಗಾಂವಕರ ಅವರ ‘ಒಲವ ಒರತೆಯ ಜಾಡಿನಲ್ಲಿ’ ಎಂಬ ಎರಡು ಹಸ್ತಪ್ರತಿಗಳು ಗೆದ್ದುಕೊಂಡಿವೆ. ಈ ಎರಡೂ ಹಸ್ತಪ್ರತಿಗಳು ತೀರ್ಪುಗಾರರಿಂದ ಸಮಾನ ಅಂಕಗಳನ್ನು ಪಡೆದಿರುವುದರಿಂದ ಎರಡು ಹಸ್ತಪ್ರತಿಗಳನ್ನು ಕೂಡಾ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಕನ್ನಡ ಸಂಘದ ಸ್ಥಾಪಕಾಧ್ಯಕ್ಷರಾದ ಡಾ.ನಾ.ಮೊಗಸಾಲೆಯವರು ಘೋಷಿಸಿದ್ದಾರೆ.  ಈ ಸಾಲಿನ ಸ್ಪರ್ಧೆಗೆ ಐವತ್ತ ಒಂಬತ್ತು ಹಸ್ತಪ್ರತಿಗಳು ಬಂದಿದ್ದು ಪ್ರಸಿದ್ಧ ವಿಮರ್ಶಕ ಮತ್ತು ಕತೆಗಾರ ಬೆಳಗೋಡು ರಮೇಶ ಭಟ್ (ವಿಭಾವರಿ ಭಟ್),ಮೈಸೂರು, ಹೊಸಪೀಳಿಗೆಯ ಮಹತ್ವದ ವಿಮರ್ಶಕರಾಗಿ ಬೆಳೆಯುತ್ತಿರುವ ವಿಕಾಸ ಹೊಸಮನಿ ಹಾವೇರಿ ಹಾಗೂ ಡಾ. ರವಿಶಂಕರ ಜಿ. ಕೆ. ಉಜಿರೆ ಇವರುಗಳು ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಗಳನ್ನು ನಿರ್ಣಯಿಸಲಾಗಿದೆ.      1979ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು…

Read More

ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ‘ವಿಂಶತಿ’ ಕಾರ್ಯಕ್ರಮದ ಅಂಗವಾಗಿ ಸರಣಿ ತಾಳಮದ್ದಳೆ – 9 ಪುತ್ತೂರು ದರ್ಭೆ ಸಮೀಪದ ಆನಂದಾಶ್ರಮ ಸೇವಾ ಟ್ರಸ್ಟ್ ‌(ರಿ.) ಇದರ ಆಶ್ರಯದಲ್ಲಿ ಡಾ. ಗೌರಿ ಪೈ ಎ೦.ಡಿ. ಇವರ ಸಹಕಾರದೊಂದಿಗೆ ದಿನಾಂಕ 24 ಅಕ್ಟೋಬರ್ 2024ರಂದು ‘ಶರಸೇತು ಬಂಧ’ ಪ್ರಸಂಗದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಆನಂದ ಸವಣೂರು, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಹನೂಮಂತ), ಅರ್ಜುನ (ಕಿಶೋರಿ ದುಗ್ಗಪ್ಪ ನಡುಗಲ್ಲು), ವೃದ್ಧ ವಿಪ್ರ (ಹರಿಣಾಕ್ಷಿ ಜೆ. ಶೆಟ್ಟಿ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಡಾ. ಗೌರಿ ಪೈ ಕಲಾವಿದರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು ಮತ್ತು ಸದಾಶಿವ ಪೈ ವಂದಿಸಿದರು.

Read More

ಕಾರ್ಕಳ : ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಯುವ ಬರಹಗಾರರ ಸಮ್ಮೇಳನ ‘ಅಕ್ಷರಯಾನ – ಬರವಣಿಗೆಯ ಮೆರವಣಿಗೆ’ ಕಾರ್ಯಕ್ರಮವು 30 2024ರ ಮಂಗಳವಾರ ಬೆಳಗ್ಗೆ 09.30ಕ್ಕೆ ಆರಂಭಗೊಳ್ಳಲಿದೆ. ಈ ಸಮಾರಂಭದ ಉದ್ಘಾಟಕರಾಗಿ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ರೀ ವಿ. ಸುನಿಲ್ ಕುಮಾರ್ ಇವರು ಆಗಮಿಸಲಿದ್ದಾರೆ. ಯುವ ಸಾಹಿತ್ಯಾಸಕ್ತರಿಗೆ ಸ್ಪೂರ್ತಿದಾಯಕ ಮಾತುಗಳ ಜೊತೆಯಲ್ಲಿ ಸಂವಾದದಲ್ಲಿ ಖ್ಯಾತ ರಂಗ ಕಲಾವಿದ, ನಟ, ನಿರ್ದೇಶಕರಾಗಿರುವ ಶ್ರೀ ಎಸ್. ಎನ್. ಸೇತುರಾಮ್, ಲೇಖಕ, ಕನ್ನಡ ಸಿನಿಮಾರಂಗದ ಪ್ರಮುಖ ನಿರ್ದೇಶಕ ಮತ್ತು ನಟರಾಗಿರುವ ಶ್ರೀ ಪ್ರಕಾಶ್ ಬೆಳವಾಡಿ ಹಾಗೂ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವ, ತೀಕ್ಷ್ಣ ಲೇಖನ,  ಯುವಪ್ರಜ್ಞೆ ಮತ್ತು ಉತ್ಸಾಹದ ಪ್ರತಿನಿಧಿಯಂತೆ ರಾಜಕೀಯದಲ್ಲೂ ತಮ್ಮ ಗುರುತು ಕಟ್ಟಿಕೊಂಡಿರುವ ಮಾಜಿ ಸಂಸದರಾದ ಶ್ರೀ ಪ್ರತಾಪ್ ಸಿಂಹ…

Read More

ಕಲಾವಿದ ಕೋಲ್ಯಾರು ರಾಜು ಶೆಟ್ಟಿ   ಅವರು ಮುಂಬೈ ಮಹಾನಗರದಲ್ಲಿ ಕಳೆದ ಆರು ದಶಕಗಳಿಂದ ಮಾಡುತ್ತಾ ಬಂದಿರುವ ಸಾಂಸ್ಕೃತಿಕ ಪರಿಚಾರಿಕೆ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಸದ್ದು ಗದ್ದಲವಿಲ್ಲದೆ ಅವರು ಗೈದ ನುಡಿಸೇವೆ ಮಹತ್ವದ್ದು. ಈಗ ಅವರಿಗೆ ಎಂಬತ್ತರ ಸಂಭ್ರಮ. ಅವರ  33ನೆಯ ಕೃತಿ ಇದೀಗ ಕನ್ನಡ ವಿಭಾಗದ ನೂತನ ಪ್ರಕಟಣೆಯಾಗಿ ಬೆಳಕು ಕಂಡಿದೆ . ರಾಜು ಶೆಟ್ಟಿ ಅವರ  ಸಾಹಿತ್ಯ ಸಾಧನೆ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆಯ ಕಿರು ಅವಲೋಕನ ಇಲ್ಲಿದೆ. ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ. ಯಕ್ಷಗಾನ ರಂಗಭೂಮಿಗೆ ಮುಂಬೈ ಕೊಟ್ಟ ಕೊಡುಗೆಯೂ ಗಮನಾರ್ಹವಾದುದು. ವಾಣಿಜ್ಯ ನಗರವಾದ ಮುಂಬೈಯನ್ನು ಸಾಂಸ್ಕೃತಿಕ ನಗರವಾಗಿ ಬೆಳೆಸುವಲ್ಲಿ ಅನೇಕ ಕನ್ನಡ ಮನಸ್ಸುಗಳು ಶ್ರಮಿಸಿವೆ.ಅವರಲ್ಲಿ ಕೋಲ್ಯಾರು ಅವರೂ ಒಬ್ಬರು.  ಹಿರಿಯ ಕಲಾವಿದ ಕೋಲ್ಯಾರು ರಾಜು ಶೆಟ್ಟಿ ಅವರು ಮುಂಬೈಯ ತುಳು ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ಪ್ರಾಚೀನ ಕನ್ನಡ ಕಾವ್ಯದ ಕುರಿತು ವಿಶೇಷವಾದ ಆಸ್ಥೆ, ಅಭಿರುಚಿ, ನಾಡು ನುಡಿಗಳ ಬಗೆಗೆ ಒಂದು ರೀತಿಯ ಆಸಕ್ತಿ,…

Read More

ಪಣಂಬೂರು : ‘ನಗುವ ನಗಿಸುವ ಗೆಳೆಯರು ( ನನಗೆ) ಕುಳಾಯಿ ಪಣಂಬೂರು ವತಿಯಿಂದ ಆಯೋಜಿಸಿದ ಸಾಹಿತಿ ಪಿ. ರವಿಶಂಕರ್ ಅವರ ‘ಚಿವುಟುವ ಚುಟುಕಗಳು, ಕುಟು ಕುವ ಕವಿತೆಗಳು’ ಕೃತಿಗಳ ಲೋಕರ್ಪಣಾ ಸಮಾರಂಭವು ದಿನಾಂಕ 20 ಅಕ್ಟೋಬರ್ 2024ರ ರವಿವಾರದಂದು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ರಾಜರತ್ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ನಿವೃತ್ತ ಪ್ರೊಫೆಸರ್ ಹಾಗೂ ಸಾಹಿತಿ ಡಾ. ಎಂ. ಕೃಷ್ಣ ಗೌಡ ಮಾತನಾಡಿ “ಇಂದು ಬರೆಯುವ, ಓದುವ ಹವ್ಯಾಸ ಕಡಿಮೆಯಾಗುತ್ತಿರುವ ದಿನ ಮಾನಸದಲ್ಲಿ ಮತ್ತೆ ಪುಸ್ತಕದತ್ತ ಎಳೆಯುವ ರವಿಶಂಕರ ಕಾರಂತ ಅವರ ಪ್ರಯತ್ನ ಮೆಚ್ಚುವಂತಹುದು. ಕಾರಂತರ ಕವಿತೆಗಳು ಮನಸ್ಸಿಗೆ ಮುದ ನೀಡುತ್ತವೆ. ಜತೆಗೆ ಕಚಗುಳಿ ಸಹ ಇಡುತ್ತವೆ. ಕೆಲವೊಂದು ಹಾಸ್ಯ ಭರಿತವಾಗಿದ್ದರೆ, ದೇಶ – ಪ್ರೇಮ, ಮಕ್ಕಳಿಗೆ ಬುದ್ದಿವಾದ ಹೇಳುವ ಸಂದೇಶವೂ ಆಡಗಿದೆ. ಕವಿತೆಗಳು ಪ್ರಶ್ನಾರ್ಥಕವಾಗಿದ್ದಾಗ ಇತರರನ್ನು ಚಿಂತನೆಗೊಳಪಡಿಸುತ್ತವೆ ಅಂತಹ ಕವಿತೆಗಳು ಇವರಿಂದ ಮೂಡಿಬಂದಿದೆ.” ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ  ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಘಟಕದ ಅಧ್ಯಕ್ಷರಾದ…

Read More

ಕಾಸರಗೋಡು : ಯಕ್ಷಗಾನ ಎಂಬ ಶ್ರೇಷ್ಠಕಲೆಯನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕೆಲಸವನ್ನು ಶ್ರೀಸ್ಕಂದ ಯಕ್ಷಗಾನ ಕೇಂದ್ರ, ಪಾಯಿಚ್ಚಾಲು ಎಂಬ ಗ್ರಾಮೀಣ ಪ್ರದೇಶದಲ್ಲಿ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಕಾಸರಗೋಡು ಚಿನ್ನಾರವರು ಅಭಿಪ್ರಾಯಪಟ್ಟರು. ಯಕ್ಷಗಾನವು ನಾಟ್ಯ, ಅಭಿನಯ, ಮುದ್ರೆ, ಮಾತುಗಾರಿಕೆ ಇವೆಲ್ಲವನ್ನೂ ಒಳಗೊಂಡ ಪರಿಪೂರ್ಣ ಕಲೆಯಾಗಿದೆ. ಭಾರತೀಯ ಯಾವುದೇ ಕಲಾಪ್ರಕಾರಗಳಲ್ಲಿ ಹೀಗೆ ಕಾಣುವುದಕ್ಕೆ ಸಾಧ್ಯವಿಲ್ಲ ಹಾಗಾಗಿಯೇ ಯಕ್ಷಗಾನವು ಈಗಲೂ ಉನ್ನತ ಸ್ಥಾನದಲ್ಲಿದೆ ಎಂದು ಹೇಳಿದರು, ಅವರು ದಿನಾಂಕ 20 ಅಕ್ಟೋಬರ್ 2024 ರಂದು ಸ್ಕಂದ ಯಕ್ಷಗಾನಕೇಂದ್ರದ ರಂಗಪ್ರವೇಶ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾದ್ಯಾಯರು, ಕ್ಷೇತ್ರಕಲೆಯಾದ ಯಕ್ಷಗಾನವನ್ನು ಬೆಳೆಸುವಲ್ಲಿ ಕ್ಷೇತ್ರದ ಪಾತ್ರಹಿರಿದು. ಅದನ್ನು ಪೂರೈಸುವಲ್ಲಿ ಶ್ರೀಸ್ಕಂದ ಯಕ್ಷಗಾನ ಕೇಂದ್ರಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು. ಕೂಡ್ಲು ಯಕ್ಷಗಾನದ ತವರು. ಆ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಯಕ್ಷಗಾನ ಕೇಂದ್ರಗಳು ಅನಿವಾರ್ಯ ಮಾತ್ರವಲ್ಲ ಮಕ್ಕಳಿಗೆ ಪುರಾಣಗಳ ಅರಿವೂ ಸಾಧ್ಯ ಎಂದು ಕೇಂದ್ರದ…

Read More