Author: roovari

ಮಂಗಳೂರು : ನೃತ್ಯಾಂಗನ್ ಸಂಸ್ಥೆ ಆಯೋಜಿಸಿದ ‘ನೃತ್ಯಲಹರಿ’ ಶಾಸ್ತ್ರೀಯ ನೃತ್ಯ ಮಹೋತ್ಸವದ ಸರಣಿ ಕಾರ್ಯಕ್ರಮ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ‌ ಎಲ್. ಸಿ. ಆರ್. ಐ. ಸಭಾಂಗಣದಲ್ಲಿ ದಿನಾಂಕ 20 ಅಕ್ಟೋಬರ್ 2024 ರಂದು ಉದ್ಘಾಟನೆಗೊಂಡಿತು. ಕಲಾಪೋಷಕರಾದ ಡಾ. ‌ಸಿ. ಕೆ. ಬಲ್ಲಾಳ್, ಶ್ರೀ ಪಿ. ನಿತ್ಯಾನಂದ ರಾವ್ ಹಾಗೂ ಹಿರಿಯ ನೃತ್ಯಗುರುಗಳಾದ ಉಳ್ಳಾಲ ಮೋಹನ‌ಕುಮಾರ್, ನೃತ್ಯಪಟು ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ನೃತ್ಯಲಹರಿ ಕಾರ್ಯಕ್ರಮದ ರೂಮಾರಿ ‘ನೃತ್ಯಾಂಗನ್’ ಸಂಸ್ಥೆಯ ನಿರ್ದೇಶಕಿ ರಾಧಿಕಾ ಶೆಟ್ಟಿ ಉಪಸ್ಥಿತರಿದ್ದರು. ಈ ಸರಣಿಯ ಪ್ರಥಮ‌ ಕಾರ್ಯಕ್ರಮವಾಗಿ ರಾಧಿಕಾ ಶೆಟ್ಟಿಯವರು ಸಂಯೋಜಿಸಿ, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ನೃತ್ಯ ನಿರ್ದೇಶನದಲ್ಲಿ ಅವಿಭಜಿತ ದ. ಕ. ಹಾಗೂ ಉಡುಪಿ ಜಿಲ್ಲೆಯ ಎಂಟು ನೃತ್ಯಗುರುಗಳ ಶಿಷ್ಯೆಯಂದಿರು ನೃತ್ಯಪ್ರದರ್ಶನವನ್ನು ನೀಡಿದರು. ಮೊದಲ ಪ್ರಸ್ತುತಿಯಲ್ಲಿ ಅಷ್ಟನಾಯಿಕಾ ಭಾವವನ್ನು ಎಂಟು ಕಲಾವಿದರು ಅಚ್ಚುಕಟ್ಟಾಗಿ ನಿರ್ವಹಿಸಿ, ಎರಡನೆಯದಾಗಿ ತಿಲ್ಲಾನವನ್ನು ಪ್ರದರ್ಶಿಸಲಾಯಿತು. ಮಯೂರದ ನಡೆಗಳನ್ನೇ ಮುಖ್ಯವಾಗಿ ನೃತ್ಯದಲ್ಲಿ ಅಳವಡಿಸಿಕೊಂಡಿದ್ದು, ನೃತ್ಯ ಸಂಯೋಜನೆ ಎಲ್ಲಾ ನೋಡುಗರ ಮೆಚ್ಚುಗೆಯನ್ನು ಪಡೆಯಿತು. …

Read More

ದಾವಣಗೆರೆ : ಗದಗಿನ ಡಾ. ವ್ಹಿ.ಬಿ. ಹಿರೇಮಠದ ಮಹಾ ವೇದಿಕೆ, ಡಾ. ವ್ಹಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಹಾಗೂ ಅಶ್ವಿನಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ 3ನೇ ಸಾಹಿತ್ಯ ಸಮ್ಮೇಳನ ಹಾಗೂ ಡಾ. ವ್ಹಿ.ಬಿ. ಹಿರೇಮಠರವರ 11ನೇ ಪುಣ್ಯಸ್ಮರಣೆ ಮತ್ತು 78ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ದಿನಾಂಕ 3 ನವಂಬರ್ 2024ರಂದು ಭಾನುವಾರ ಗದುಗಿನ ಶ್ರೀರಾಮ ಬಂಜಾರ ಭವನದಲ್ಲಿ ‘ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ’ ಎಂದೇ ಪ್ರಖ್ಯಾತರಾದ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ, ಸಾಮಾಜಿಕ ಕಾಳಜಿಯ ಆಧ್ಯಾತ್ಮ ಪರಂಪರೆಯ ಸಾಧನೆಗಳನ್ನು ಗುರಿತಿಸಿ, ಸಾಲಿಗ್ರಾಮ ಗಣೇಶ್ ಶೆಣೈ ಇವರನ್ನು ‘ಪಂಡಿತ ಪಂಚಾಕ್ಷರಿ ಗವಾಯಿಗಳವರ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಗಳ ಅಧ್ಯಕ್ಷರಾದ ಶ್ರೀಮತಿ ಡಾ. ವ್ಹಿ.ಬಿ. ಹಿರೇಮಠ ತಿಳಿಸಿದ್ದಾರೆ. ನಿರಂತರವಾಗಿ ಪ್ರಶಸ್ತಿಗಳ ಸರಮಾಲೆಯನ್ನು ಮುಡಿಗೇರಿಸಿಕೊಳ್ಳುವ ಶೆಣೈಯವರಿಗೆ ಕಲಾಕುಂಚ, ಯಕ್ಷರಂಗ, ಕರ್ನಾಟಕ ಸುಗಮ ಸಂಗೀತ ಪರಿಷತ್, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ. ಸಿನಿಮಾಸಿರಿ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ ಮುಂತಾದ…

Read More

ಪುಟಾಣಿ ಮುದ್ದುಕೃಷ್ಣನಿಂದ ಹಿಡಿದು ಹದಿವಯದವರೆಗೂ ಏಳೆಂಟು ಜನ ತುಂಟ ಕೃಷ್ಣಂದಿರು ತೋರಿದ ಲೀಲಾ ವಿನೋದಗಳು ಒಂದೆರೆಡಲ್ಲ. ಅವರ ಅದಮ್ಯ ಚೇತನದ ಲವಲವಿಕೆಯ ಆಕರ್ಷಕ ಚಟುವಟಿಕೆಗಳು,  ಮನಸೆಳೆದ ರಮ್ಯ ಪ್ರಕರಣಗಳು, ಹೃದಯಸ್ಪರ್ಶಿ  ಘಟನೆಗಳು, ಪೂರಕ ಸನ್ನಿವೇಶಗಳು, ಪಾತ್ರಗಳ ಸಮರ್ಥ ಅಭಿನಯ- ಕಮನೀಯ ನರ್ತನದಿಂದ ಪ್ರೇಕ್ಷಕರನ್ನು ದ್ವಾಪರ ಯುಗಕ್ಕೆ ಕೊಂಡೊಯ್ದವು. ಕಣ್ಮುಂದೆ ಸುಳಿದ ಪ್ರಕರಣಗಳ ಸಂಪೂರ್ಣ ಚಿತ್ರಣಗಳು- ಕೃಷ್ಣ ಕಥಾವಳಿಯನ್ನು ಒಳಗೊಂಡ ‘ಶ್ರೀ ಕೃಷ್ಣ ಲೀಲಾಮೃತಂ’  ವರ್ಣರಂಜಿತ ನೃತ್ಯರೂಪಕ ಅಸದೃಶವಾಗಿತ್ತು. ಸೇವಾಸದನ ವೇದಿಕೆಯ ಮೇಲೆ ಖ್ಯಾತ ‘ಕಲಾನಿಧಿ ಆರ್ಟ್ಸ್ ಅಕಾಡೆಮಿ’ಯ ಹಿರಿಯ ನೃತ್ಯಗುರು ಶ್ರೀಮತಿ ಪವಿತ್ರ ಶ್ರೀಧರ್ ಅವರ ನೇತೃತ್ವದಲ್ಲಿ ಅವರ ಶಿಷ್ಯರಿಂದ ಸಾಕ್ಷಾತ್ಕಾರಗೊಂಡ ‘ಸರ್ವಂ ಕೃಷ್ಣಮಯ’ವಾಗಿ ಕಂಗೊಳಿಸಿ ದೈವೀಕ ಅನುಭವವನ್ನು ಕಟ್ಟಿಕೊಟ್ಟ ‘ಶ್ರೀ ಕೃಷ್ಣ ಲೀಲಾಮೃತಂ’  ನೃತ್ಯರೂಪಕ ಅದ್ಭುತಪ್ರಸ್ತುತಿ ಎಂದರೆ ಅತಿಶಯೋಕ್ತಿಯಲ್ಲ. ವಿದುಷಿ ಪವಿತ್ರಾ ಶ್ರೀಧರ್ ಅನನ್ಯವಾಗಿ ನೃತ್ಯ ಸಂಯೋಜಿಸಿದ  ಶ್ರೀಕೃಷ್ಣ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ಸಲ್ಲಿಸಿದ ವಿಶೇಷ ನೃತ್ಯಾರಾಧನೆಯಾಗಿತ್ತು. ಆಕರ್ಷಕ ಆಹಾರ್ಯ- ವೇಷಭೂಷಣಗಳಲ್ಲಿ ಮಿಂಚಿದ ಮುದ್ದುಪುಟಾಣಿಗಳ ಮನಮೋಹಕ ನರ್ತನ ಪ್ರತಿಭೆಗೆ…

Read More

ಕರಾವಳಿಯ ಸೌಂದರ್ಯದ ಕಲೆ ಯಕ್ಷಗಾನದ ಮುಮ್ಮೇಳದ ಸೂತ್ರವಿರುವುದು ಹಿಮ್ಮೇಳದಲ್ಲಿ. ಇಂತಹ ಹಿಮ್ಮೇಳದಲ್ಲಿರುವ ಚೆಂಡೆ, ಮದ್ದಳೆಯ ನಾದ ಮಾಧುರ್ಯದಲ್ಲಿ ರಂಗಸ್ಥಳ ರಂಗೇರುತ್ತದೆ. ಹೀಗೆ ಯಕ್ಷಗಾನ ರಂಗದಲ್ಲಿ ತಮ್ಮ ಚೆಂಡೆವಾದನದಿಂದ ರಂಗಸ್ಥಳ ರಂಗೆರಿಸುತ್ತಿರುವ ಕಲಾವಿದ ಪ್ರಜ್ವಲ್  ಮುಂಡಾಡಿ. 31.05.2006 ರಂದು ಬಸವ ಮರಕಾಲ ಹಾಗೂ ಗಿರಿಜ   ದಂಪತಿಗಳ ಮಗನಾಗಿ ಜನನ. ತಂದೆ ಯಕ್ಷಗಾನದಲ್ಲಿ ಇರುವ ಕಾರಣ ಚಿಕ್ಕ ವಯಸ್ಸಿನಿಂದ ಯಕ್ಷಗಾನದ ಮೇಲೆ ಪ್ರೀತಿ ಬಹಳ ತಂದೆಯವರು ಮನೆಯಲ್ಲಿ ಚಂಡೆ ಮದ್ದಲೆ ಮುಟ್ಟುವುದಕ್ಕೆ  ಬಿಡ್ತಾ ಇರ್ಲಿಲ್ಲ ತಂದೆಯವರ ಜೊತೆ ಯಕ್ಷಗಾನ ಕಾರ್ಯಕ್ರಮಕ್ಕೆ ಹೋಗಿ ನೋಡಿ ಕಲಿತು, ಮೇಳಗಳಿಗೆ ಬದಲಿಗೆ ಹೋಗಿ ಚಂಡೆವಾದನ್ನು ಕಲಿತೆ ಎಂದು ಹೇಳುತ್ತಾರೆ ಮುಂಡಾಡಿ. ಶ್ರೀಕಾಂತ್ ಶೆಟ್ಟಿ ಯಾಡಮಗೆ, ರಾಕೇಶ್ ಮಲ್ಯ, ಸುನಿಲ್ ಭಂಡಾರಿ, ಅಕ್ಷಯ ಆಚಾರ್ಯ, ಶಶಾಂಕ್ ಆಚಾರ್ಯ, ಚೈತನ್ಯ ಕೃಷ್ಣ ಪದ್ಯಾಣ, ಸುಜನ್ ಕುಮಾರ್ ನೆಚ್ಚಿನ ಚೆಂಡೆ ಮದ್ದಳೆ ವಾದಕರು. ಗದಾಯುದ್ಧ, ಅಭಿಮನ್ಯು ಕಾಳಗ, ರತ್ನಾವತಿ ಕಲ್ಯಾಣ, ನಾಗಶ್ರೀ ನೆಚ್ಚಿನ ಪ್ರಸಂಗಗಳು. ರಾಘವೇಂದ್ರ ಆಚಾರ್ಯ ಜನ್ಸಾಲೆ, ಹೆರೆಂಜಾಲು ಗೋಪಾಲ್ ಗಾಣಿಗ,…

Read More

ಗೋಣಿಕೊಪ್ಪಲು : ನಿವೃತ್ತ ಪ್ರಾಂಶುಪಾಲರು ಡಾ. ಕಮಲಾಕ್ಷ .ಕೆ ಅವರ ವಿನೂತನ ಕೃತಿ ‘ಭೂಮಿಯಿಂದ ಮೊಳೆತು ಬಂದ ಪಾಟ್ ಕಥೆಗಳು’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 12 ಅಕ್ಟೋಬರ್ 2024ರಂದು ಗೋಣಿಕೊಪ್ಪಲಿನ ಬಳಿಯ ಅರವತ್ತೊಕ್ಕಲಿನ ಲಕ್ಷ್ಮೇಶ್ವರ ಎಸ್ಟೇಟ್ ಇದರ ‘ಬೆಳದಿಂಗಳು’ ಕಾರೆಕಾಡು ಇಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪಿ‌. ಕೇಶವ ಕಾಮತ್ “ಜನಪದ ಕಲೆ ಹಾಗೂ ಸಂಸ್ಕೃತಿ ತುಂಬಾ ಅನನ್ಯವಾದದ್ದು. ಪ್ರಾಚೀನ ಜನಪದ ಬದುಕಿನ ಆಳಕ್ಕಿಳಿದು ಅಧ್ಯಯನ ಮಾಡಿದರೆ ಅನೇಕ ಮಹತ್ವದ ವಿಚಾರಗಳು ನಮ್ಮ ಅರಿವಿಗೆ ದಕ್ಕುತ್ತದೆ. ವಿವಿಧ ಪ್ರದೇಶಗಳ ಜಾನಪದೀಯ ಅಂಶಗಳನ್ನು ಕಲೆಹಾಕಿ ಪ್ರಸ್ತುತ ಕಾಲಘಟ್ಟಕ್ಕೆ ಇವನ್ನು ಸಮನ್ವಯ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಾ. ಕೆ. ಕಮಲಾಕ್ಷ ಇವರ ಕಾರ್ಯ ಅಭಿನಂದನೀಯ. ಡಾ. ಕಮಲಾಕ್ಷ. ಕೆ ಇವರು ಈ ಹಿಂದೆ ಬರೆದ “ಕೇರಳದ ಜನಪದ ವೀರ ತಚ್ಚೋಳಿ ಒದೆನನ್” ಹಾಗೂ “ಅಂಕ ಕಲಿಗಳ ವೀರಗಾಥೆ” ಅನುವಾದಿತ…

Read More

ಅಂಕೋಲಾ : ಡಾ. ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಯು ಹೊನ್ನಾಳಿಯ ಶಿಕ್ಷಕ ಹಾಗೂ ಲೇಖಕ ಸದಾಶಿವ ಸೊರಟೂರು ಇವರ ‘ಗಾಯಗೊಂಡ ಸಾಲುಗಳು’ ಕಾವ್ಯ ಸಂಕಲನಕ್ಕೆ ಲಭಿಸಿದೆ. ಡಾ. ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ 72 ಸಂಕಲನಗಳು ಬಂದಿದ್ದವು. ಬೆಂಗಳೂರಿನ ಎಚ್.ಎಲ್. ಪುಷ್ಪಾ, ಸುಬ್ಬು ಹೊಲಿಯಾರ, ಧಾರವಾಡದ ಬಸು ಬೇವಿನಗಿಡದ ಹಾಗೂ ಡಾ. ಶ್ರೀಧರ ಹೆಗಡೆ ಭದ್ರನ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಪ್ರಶಸ್ತಿಯನ್ನು ದಿನಾಂಕ 10 ನವೆಂಬರ್ 2024ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ದಿನಕರ ದೇಸಾಯಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಮೋಹನ ಹಬ್ಬು ತಿಳಿಸಿದ್ದಾರೆ. ಸದಾಶಿವ ಸೊರಟೂರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಮಲೇ ಬೆನ್ನೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ (ಕವನ ಸಂಕಲನ), ದೇವರೆ ಅವಳು ಸಿಗದಿರಲಿ (ಪ್ರೇಮಪತ್ರಗಳು), ಆ ಹಾದಿ ( ಒಂದು ರಸ್ತೆಯ ಕಥಾನಕ), ಅರ್ಧ ಬಿಸಿಲು…

Read More

ಉಡುಪಿ : ಆಂಧ್ರ ಪ್ರದೇಶದ ಹಿಂದೂಪುರದ ‘ಅಭಿಜ್ಞಾನ ನೃತ್ಯಾಲಯಂ ಅಕಾಡೆಮಿ’ ಇದರ ಆಶ್ರಯದಲ್ಲಿ ಪರ್ಯಾಯ ಪುತ್ತಿಗೆ ಕೃಷ್ಣ ಮಠದ ಸಹಯೋಗದೊಂದಿಗೆ ಶ್ರೀಕೃಷ್ಣ ಮಠದ ಮಧ್ವಮಂಟಪ ಹಾಗೂ ರಾಜಾಂಗಣದಲ್ಲಿ 100 ಮಂದಿ ನೃತ್ಯ ಕಲಾವಿದರಿಂದ ಸತತ 14 ಗಂಟೆಗಳ ಶಾಸ್ತ್ರೀಯ ನೃತ್ಯ ಪ್ರದರ್ಶನ ಗುರುವಾರ ದಿನಾಂಕ 17 ಅಕ್ಟೋಬರ್ 2024ರಂದು ನಡೆಯಿತು. ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಆಯ್ದ 100 ನೃತ್ಯ ಕಲಾವಿದರು ಪ್ರದರ್ಶನದಲ್ಲಿ ಭಾಗವಹಿಸಿದರು. 5ರಿಂದ 60 ವರ್ಷದವರೆಗಿನ ಹಿರಿ ಕಿರಿಯ ಒಟ್ಟು 100 ಮಂದಿ ಕಲಾವಿದೆಯರು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಾಗಿ ಸತತ 14 ಗಂಟೆಗಳ ಕಾಲ ಎಡೆಬಿಡದೆ ಕೂಚುಪುಡಿ, ಭರತನಾಟ್ಯ,ಆಂಧ್ರ ನೃತ್ಯ ಹಾಗೂ ತೆಲಂಗಾಣ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದರು. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನೃತ್ಯ ಪ್ರದರ್ಶನ ಉದ್ಘಾಟಿಸಿ, ಶುಭ ಹಾರೈಸಿದರು. ಅಭಿಜ್ಞಾನ ನೃತ್ಯಾಲಯಂ ಅಕಾಡೆಮಿ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಸಂಚಾಲಕಿ ಚಂದ್ರಭಾನು ಚತುರ್ವೇದಿ, ಪುತ್ತಿಗೆ…

Read More

ಯಕ್ಷಗಾನ ಅಂದಕೂಡಲೇ ನೆನಪಾಗುವುದು ಚೆಂಡೆಯ ಶಬ್ದ, ಕಲಾವಿದನ ಮಾತಿನ ಝೇಂಕಾರ, ಕಾಲ್ಗೆಜ್ಜೆಯ ಸ್ವಚ್ಛವಾದ ನಡೆ – ನಾಟ್ಯ.  ಯಕ್ಷಗಾನ ರಂಗದಲ್ಲಿ ತಮ್ಮ ವೇಷ ಹಾಗೂ ನಾಟ್ಯದಿಂದ ರಂಗಸ್ಥಳ ರಂಗೇರಿಸುತ್ತಿರುವ ಕಲಾವಿದ ಪ್ರವೀಣ್ ಗಾಣಿಗ ಕೆಮ್ಮಣ್ಣು. 01.10.1978ರಂದು ಆನಂದ ಗಾಣಿಗ ಹಾಗೂ ಹೆಚ್. ಪಾರ್ವತಿ ಇವರ ಮಗನಾಗಿ ಜನನ. ಮಾವ ಹಾರಾಡಿ ಸರ್ವೋತ್ತಮ ಗಾಣಿಗ ಅವರ ಪ್ರೇರಣೆಯಿಂದ ಪ್ರವೀಣ್ ಅವರು ಯಕ್ಷಗಾನ ರಂಗಕ್ಕೆ ಬಂದರು. ತೋನ್ಸೆ ಜಯಂತ್ ಕುಮಾರ್ ಹಾಗೂ ಬಡಾನಿಡಿಯೂರು ಕೇಶವ ರಾವ್ ಇವರ ಯಕ್ಷಗಾನ ಗುರುಗಳು. ಭಾಗವತರೊಡನೆ ಮಾತುಕತೆ, ಸಹಕಲಾವಿದರೊಡನೆ ಚರ್ಚೆ, ಮುಖವರ್ಣಿಕೆಯ ಸಮಯದಲ್ಲಿ ನನ್ನ ಪಾತ್ರದ ಬಗ್ಗೆ ಅವಲೋಕನ ಮಾಡಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪ್ರವೀಣ್ ಗಾಣಿಗ ಕೆಮ್ಮಣ್ಣು. ಅಭಿಮನ್ಯು ಕಾಳಗ, ಸುಧನ್ವ ಕಾಳಗ, ಶ್ರೀ ರಾಮ ಪಟ್ಟಾಭಿಷೇಕ, ಭೀಷ್ಮ ಪ್ರತಿಜ್ಞೆ, ಲವ ಕುಶ, ರಂಗನಾಯಕಿ, ಹಿರಿಯಡ್ಕ ಕ್ಷೇತ್ರ ಮಹಾತ್ಮೆ, ಮಂದಾರ್ತಿ ಕ್ಷೇತ್ರ ಮಹಾತ್ಮೆ, ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಇತ್ಯಾದಿ ನೆಚ್ಚಿನ…

Read More

ಮಂಗಳೂರು : ಶ್ರೀ ಶಾರದಾ ಮಹೋತ್ಸವದ ಶೋಭಾ ಯಾತ್ರೆಯ ಪ್ರಯುಕ್ತ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾ ವರ್ಧಕ ಸಂಘ ಆಯೋಜಿಸಿದ್ದ ಯಕ್ಷಗಾನ ಬಯಲಾಟ ಕಾರ್ಯಕ್ರಮವು ದಿನಾಂಕ 14 ಅಕ್ಟೋಬರ್ 2024ರಂದು ಮಂಗಳೂರಿನ ಮಹಾಮಾಯಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಮಿತ್ತಬೈಲು ಬಾಲಚಂದ್ರ ನಾಯಕ್ ಮಾತನಾಡಿ “ಯಕ್ಷಗಾನದಂತಹ ಕಲೆ ಎಲ್ಲರಿಗೂ ಒಲಿಯುವುದಿಲ್ಲ.ಹಾಗಾಗಿ ಈ ಕಲೆಯಲ್ಲಿ ತೊಡಗಿಸಿಕೊಂಡ ಇಂತಹ ಸಂಸ್ಥೆಗಳಿಗೆ ಸಾಧ್ಯವಾದಷ್ಟು ಧನ ಸಹಾಯ ಮಾಡುವ ಮೂಲಕ ಆಸಕ್ತರು ಈ ಕಲೆಯನ್ನು ಸವಿಯಲು ಅವಕಾಶ ಮಾಡಿ ಕೊಡೋಣ.” ಎಂದರು. ಇದೇ ಸಂದರ್ಭದಲ್ಲಿ ಪ್ರವೃತ್ತಿಯಲ್ಲಿ ಯಕ್ಷಗಾನ ಅರ್ಥಧಾರಿ ಹಾಗೂ ಹರಿದಾಸರಾಗಿ ಪ್ರಸಿದ್ಧರಾದ ಮಹಾಬಲ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತರು “ನಾನು ಅರ್ಥಧಾರಿಯಾಗಲು ಶೇಣಿ ಗೋಪಾಲಕೃಷ್ಣ ಭಟ್ಟರು ಹಾಗೂ ಹರಿಕಥಾ ಕ್ಷೇತ್ರಕ್ಕೆ ಕಾಲಿಡಲು ಮಲ್ಪೆ ರಾಮದಾಸ ಸಾಮಗರು ಸ್ಪೂರ್ತಿ. ಹರಿಕಥಾ ಕ್ಷೇತ್ರ ಪೌರಾಣಿಕ ಜ್ಞಾನವನ್ನು ಹಾಗೂ ಜೀವನ ಕ್ರಮಗಳನ್ನು ತಿಳಿಸಿಕೊಡಲು ಅತ್ಯಂತ ಸೂಕ್ತ ಎಂದರು.”  ಸಮ್ಮಾನ ಪತ್ರವನ್ನು ಅಶೋಕ್…

Read More

ದಿನಾಂಕ16-10-24ರಂದು ಚಿತ್ರಕಲಾ ಪರಿಷತ್ತಿನಲ್ಲಿ ಏಳು ಕಲಾವಿದರಿಂದ ‘ಸಪ್ತ’ ಎನ್ನುವ ಹೆಸರಿನಲ್ಲಿ ಸಮೂಹ ಕಲಾಪ್ರದರ್ಶನ ಅನಾವರಣಗೊಂಡಿತು. ತುಂಬಾ ಆಪ್ತವೆನಿಸುವ ಕಲಾಕೃತಿಗಳು ಅವು ಆಗಿದ್ದವು. ಅಲ್ಲೊಂದು ಹದವಾದ ಸಂಗೀತವಿತ್ತು. ನಾವು ದಿನನಿತ್ಯ ನೋಡುವ, ಬಳಸುವ, ಆರಾಧಿಸುವ ವಿಷಯಗಳನ್ನು ಕಲಾವಿದರು ಆಯ್ದು ಕೊಂಡಾಗ ನೋಡುಗರಿಗೆ ಕಲಾಕೃತಿಗಳು ಹತ್ತಿರವಾಗುತ್ತವೆ. ಇಂತಹ ವಿಷಯಗಳನ್ನೇ ಮುಖ್ಯವಾಗಿಸಿಕೊಂಡು ಕಲಾ ಪ್ರದರ್ಶನ ಏರ್ಪಡಿಸಿದವರು ರಾಜ್ಯದ ವಿವಿಧ ಭಾಗದ ಕಲಾವಿದರು. ಇಲ್ಲಿ ಬೇಲೂರು, ಹಳೇಬೀಡು ಶೈಲಿಯ ಶಿಲ್ಪದಿಂದ ಸ್ಪೂರ್ತಿ ಪಡೆದಂತ ಕಲಾಕೃತಿಗಳು ಗದುಗಿನ ನವೀನ್ ಪತ್ತಾರ್ ಅವರದಾದರೆ, ಬೆಳಗಾವಿಯ ಸುಶೀಲ್ ತರ್ಬಾರ್, ತಿಮ್ಮಣ್ಣಗೌಡ ಪಾಟೀಲ್ ಮತ್ತು ದರ್ಶನ್ ಚೌಧರಿ ಅವರ ಚಿತ್ರಗಳು ನಿಸರ್ಗ ಮತ್ತು ಸಮುದ್ರ ತೀರದ ಅನುಭವಗಳನ್ನು ಕಟ್ಟಿಕೊಡುತ್ತದೆ. ವಿಜಯ ಧೊಂಗಡಿ ಅವರ ಚಿತ್ರಗಳು ನಮ್ಮ ಸಂಸ್ಕೃತಿ, ಸಂಸ್ಕಾರದ  ಪ್ರತೀಕವಾದ ದೊಡ್ಡ ತಿಲಕವಿಟ್ಟುಕೊಂಡ ಭಾರತೀ ನಾರಿಯರ ಚಿತ್ರಗಳನ್ನು ಪ್ರತಿಬಿಂಬಿಸುತ್ತಿವೆ. ತುಮಕೂರಿನ  ಬಿ. ಎನ್. ಹರಿಪ್ರಸಾದ್ ಅವರ ಚಿತ್ರಗಳು ಹಳ್ಳಿಯ ಜನಜೀವನ, ಹೂ ಮಾರುವ ಹೆಂಗಸು ಇತ್ಯಾದಿ ಚಿತ್ರಗಳು ನಿಮ್ಮನ್ನು ಹಿಡಿದ ನಿಲ್ಲಿಸುತ್ತವೆ. ಚೇತನ್ ಕುಮಾರ್…

Read More