Author: roovari

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಶ್ರೀಮತಿ ಟಿ. ಗಿರಿಜಾ ದತ್ತಿ ಸಾಹಿತ್ಯ ಪ್ರಶಸ್ತಿಯು ಪ್ರಕಟವಾಗಿದ್ದು, 2024ನೇ ಸಾಲಿನ ಪುರಸ್ಕಾರಕ್ಕೆ ಖ್ಯಾತ ಅನುವಾದಕಿ ಮತ್ತು ಭಾಷಾತಜ್ಞರಾದ ಡಾ. ವನಮಾಲಾ ವಿಶ್ವನಾಥ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶೈಲಜ ಟಿ. ಎಸ್. ಇವರು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ದಾವಣಗೆರೆಯವರಾದ ಸೂಕ್ಷ್ಮ ಸಂವೇದನಾಶೀಲ ಲೇಖಕಿ ಟಿ. ಗಿರಿಜಾ ಅವರ ಹೆಸರಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಮತ್ತು ಗುಣಾತ್ಮಕ ಸಾಧನೆ ಮಾಡಿದ ಅರ್ಹ ಮಹಿಳಾ ಸಾಹಿತಿಗಳಿಗೆ ಪ್ರತಿ ವರ್ಷವೂ ಪ್ರಶಸ್ತಿಯನ್ನು ನೀಡುವಂತೆ ದತ್ತಿಯನ್ನು ಸ್ಥಾಪಿಸಿದ್ದಾರೆ. 2024ನೆಯ ಸಾಲಿನ ಶ್ರೀಮತಿ ಟಿ. ಗಿರಿಜಾ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಹೆಸರಾಂತ ಅನುವಾದಕರು ಮತ್ತು ಭಾಷಾತಜ್ಞರಾದ ಡಾ. ವನಮಾಲಾ ವಿಶ್ವನಾಥ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು ವಿಶ್ವವಿದ್ಯಾನಿಲಯ ಹಾಗೂ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಗ್ರಾಮೀಣ ಪ್ರತಿಭೆಗಳನ್ನು ರೂಪಿಸುವಲ್ಲಿ, ಪಠ್ಯ ಪುಸ್ತಕಗಳ ರಚನೆಯಲ್ಲಿ ಅವರ ಪಾತ್ರ ಬಹಳ…

Read More

ಬೆಂಗಳೂರು : ಸಂಗೀತ ಸಾಮ್ರಾಟ್ ವಿಜಯಭಾಸ್ಕರ್ ಜನ್ಮ ಶತಮಾನೋತ್ಸವ ಮತ್ತು ಎನ್.ಎಸ್. ಶ್ರೀಧರ ಮೂರ್ತಿಯವರು ಬರೆದಿರುವ  ವಿಜಯಭಾಸ್ಕರ್ ಜೀವನ ಮತ್ತು ಸಾಧನೆ ಕುರಿತ ʼಎಲ್ಲೆಲ್ಲು ಸಂಗೀತವೇʼ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 20 ಅಕ್ಟೋಬರ್ 2024ನೇ ಭಾನುವಾರ ಮಧ್ಯಾಹ್ನ ಘಂಟೆ 2-00 ಗಂಟೆಗೆ ಬೆಂಗಳೂರಿನ ಇಂದಿರಾನಗರದಲ್ಲಿರುವ ಸಂಗೀತ ಸಭಾ ಪುರಂದರ ಭವನದಲ್ಲಿ ನಡೆಯಲಿದೆ. ಮಧ್ಯಾಹ್ನ ಎರಡು ಗಂಟೆಗೆ ‘ಚಿತ್ರರಂಗಕ್ಕೆ ವಿಜಯಭಾಸ್ಕರ್ ಅವರ ಕೊಡುಗೆಗಳುʼ ಎಂಬ ಮೊದಲ ಗೋಷ್ಠಿಯು ಪದ್ಮಶ್ರೀ ಡಾ. ದೊಡ್ಡ ರಂಗೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ನಾಡೋಜ ಡಾ. ಬಿ.ಕೆ. ಸುಮಿತ್ರ, ಎಸ್.ಆರ್. ರಾಮಕೃಷ್ಣ, ಪ್ರೊ. ಮನು ಚಕ್ರವರ್ತಿ ಹಾಗೂ ಚಿದಂಬರ ಕಾಕತ್ಕರ್, ವಿಜಯಭಾಸ್ಕರ್ ಅವರ ಕೊಡುಗೆಗಳನ್ನು ವಿಶ್ಲೇಷಿಸಲಿದ್ದಾರೆ. ‘ವಿಜಯಭಾಸ್ಕರ್ ಒಡನಾಟದ ನೆನಪುಗಳುʼ ಎಂಬ ಎರಡನೇ ಗೋಷ್ಠಿಯು ಪ್ರಣಯರಾಜ ಡಾ. ಶ್ರೀನಾಥ್ ಇವರು ಅಧ್ಯಕ್ಷತೆಯಲ್ಲಿ ನಡೆಯಲಿದ್ದು,  ರಾಮಕೃಷ್ಣ, ಶ್ರೀಧರ್, ಕಸ್ತೂರಿ ಶಂಕರ್, ಎಚ್.ಎಂ.ಎಂ. ಪ್ರಕಾಶ್, ವಿಜಯಭಾಸ್ಕರ್ ಜೊತೆಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿ ಕೊಳ್ಳಲಿದ್ದಾರೆ. ಡಾ. ಟಿ.ಎಸ್. ನಾಗಾಭರಣ ಇವರ ಅಧ್ಯಕ್ಷತೆಯಲ್ಲಿ…

Read More

ಬೆಂಗಳೂರು : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇದರ ವತಿಯಿಂದ ಸ್ವರಮಾಂತ್ರಿಕ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಸಂಸ್ಮರಣೆಯ ಪ್ರಯುಕ್ತ ‘ಯಕ್ಷಗಾನ ತಾಳಮದ್ದಳೆ ಅಷ್ಟಾಹ’ವನ್ನು ದಿನಾಂಕ 20 ಅಕ್ಟೋಬರ್ 2024ರಿಂದ 27 ಅಕ್ಟೋಬರ್ 2024ರವರೆಗೆ ಬೆಂಗಳೂರು ಮಹಾನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 20 ಅಕ್ಟೋಬರ್ 2024ರಂದು ಸಂಜೆ 4-00 ಗಂಟೆಗೆ ಕೋರಮಂಗಲ 5ನೇ ಬ್ಲಾಕ್, 1ನೇ ಕ್ರಾಸ್, ನಂ.137, ಶ್ರೀ ಕೃಷ್ಣ ದೇವಸ್ಥಾನ, ಶ್ರೀ ಎಡನೀರು ಮಠದಲ್ಲಿ ‘ಕೃಷ್ಣ ಸಂಧಾನ’, ದಿನಾಂಕ 21 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಕನಕಪುರ ರಸ್ತೆ, ದೊಡ್ಡಕಲ್ಲಸಂದ್ರ ಮೆಟ್ರೋ ಹತ್ತಿರ, ಶಂಕರ ಫೌಂಡೇಶನ್, ಎಲಿಫೆಂಟ್ ಹೈ ಕೆಫೆ ಇಲ್ಲಿ ‘ವಾಲಿವಧೆ’, ದಿನಾಂಕ 22 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಕರಿಹೋಬನಹಳ್ಳಿ ನಾಗಸಂದ್ರ ಅಂದ್ರಹಳ್ಳಿ ಮುಖ್ಯರಸ್ತೆ ಎಸ್.ಎಲ್.ಎನ್. ಬಡಾವಣೆ 2ನೇ ಕ್ರಾಸ್ ಶಬರಿ ಗಿರಿ ಇಲ್ಲಿ ‘ರಾಮ ದರ್ಶನ’, ದಿನಾಂಕ 23 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಸಂಜಯನಗರ, ಲಾಸ್ಯ…

Read More

ಮಂಗಲ್ಪಾಡಿ : ಸಾಧನಾ ಸಂಗೀತ ಪ್ರತಿಷ್ಠಾನ ಪುತ್ತೂರು ಇದರ ಸದಸ್ಯರಿಂದ ಏಕಾಹ ಭಾಜನಾ ಮಂದಿರ ಮಂಗಲ್ಪಾಡಿ ಇಲ್ಲಿನ ನವರಾತ್ರಿ ಉತ್ಸವದ ಪ್ರಯುಕ್ತ ಡಾ. ವಿದುಷಿ ಸುಚಿತ್ರಾ ಹೊಳ್ಳ ಇವರ ಶಿಷ್ಯವೃಂದದವರಿಂದ ‘ಗೋಷ್ಠಿ ಗಾಯನ’ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ದಿನಾಂಕ 09 ಅಕ್ಟೋಬರ್ 2024ರಂದು ಮಂದಿರದ ಆವರಣದಲ್ಲಿ ನಡೆಯಿತು. ಶ್ರೀಮತಿಯರಾದ ದಿವ್ಯಾ ಕಾರಂತ್ ಮಂಗಲ್ಪಾಡಿ, ರಾಧಾಮಣಿ ರಾವ್ ಮೀಯಪದವು, ಗೀತಾ ರಾಜೇಶ್ ಮಂಗಳೂರು, ಸುಮನಾ ರಾವ್ ಪುತ್ತೂರು, ಮೈತ್ರಿ ರಾವ್ ಪುತ್ತೂರು, ಸಹನಾ ಕುಕ್ಕಿಳ ಹಾಗೂ ಕುಮಾರಿ ಸುಧೀಕ್ಷಾ ಆರ್. ಮಂಗಳೂರು ಇವರ ಹಾಡುಗಾರಿಕೆಗೆ ಪಿಟೀಲಿನಲ್ಲಿ ಶ್ರೀ ಜಗದೀಶ್ ಕೋರೆಕ್ಕಾನ ಹಾಗೂ ಮೃದಂಗದಲ್ಲಿ ಶ್ರೀ ವಸಂತ ಕೃಷ್ಣ ಕಾಂಚನ ಸಹಕರಿಸಿದರು.

Read More

ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999  ಶ್ವೇತಯಾನ- 76” ಕಾರ್ಯಕ್ರಮದಡಿಯಲ್ಲಿ ಬೆಂಗಳೂರು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದ ವಿದ್ವಾನ್ ಗಣಪತಿ ಭಟ್ ಹಾಗೂ ಸುಜಯೀಂದ್ರ ಹಂದೆ ಕೋಟ ಇವರಿಗೆ ಅಭಿನಂದನಾ ಕಾರ್ಯಕ್ರಮ ದಿನಾಂಕ 17 ಅಕ್ಟೋಬರ್ 2024ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಭಾಜನರಾದ ಗೌರವಾನ್ವಿತರನ್ನು ಅಭಿನಂದಿಸಿ ಮಾತನ್ನಾಡಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ “ನಿರಂತರವಾಗಿ ಯಕ್ಷಗಾನ ಚಿಂತನೆಯಲ್ಲಿರುವ ಸಾಧಕರಿಗೆ ಪ್ರಶಸ್ತಿ ಸಂದಿದೆ. ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ದೊರೆತಾಗ ಪ್ರಶಸ್ತಿಗೆ ಗೌರವ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ವಿದ್ವಾನ್ ಗಣಪತಿ ಭಟ್ ಹಾಗೂ ಹಂದೆಯವರಿಗೆ ಪ್ರಶಸ್ತಿ ಲಭಿಸಿದೆ. ಇಪ್ಪತ್ತೈದು ವರ್ಷ ನೆಲೆಯನ್ನು ಕಂಡುಕೊಂಡು 108 ಕಾರ್ಯಕ್ರಮವನ್ನು ಹಮ್ಮಿಕೊಂಡ ಯಶಸ್ವೀ ಕಲಾವೃಂದಕ್ಕೆ ಸರ್ವರೂ ನೆರವಾಗಬೇಕು. ಅನೇಕ ಮಕ್ಕಳನ್ನು ರಂಗಕ್ಕೆ ತಂದ ಸಂಸ್ಥೆಯನ್ನು ಸರಕಾರವೂ ಗುರುತಿಸಬೇಕು.” ಎಂದರು. ಬಹು ಮೇಳಗಳ ಯಜಮಾನರಾದ ಪಿ. ಕಿಶನ್ ಹೆಗ್ಡೆ ಮಾತನಾಡಿ “ಮಕ್ಕಳ ಮೇಳ ಸಾಲಿಗ್ರಾಮ ವಿಶ್ವದಲ್ಲಿಯೇ ಗುರುತಿಸಿಕೊಂಡಿದೆ. ಅಂತಹ ಮೇಳವನ್ನು ಮುನ್ನಡೆಸುತ್ತಿರುವ…

Read More

ಪುತ್ತೂರು : ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ ಸದಸ್ಯೆ ಶ್ರದ್ಧಾ ಮತ್ತು ಶ್ರಾವ್ಯ ಇವರು ಶಿಶಿಲದಲ್ಲಿ ಆರಂಭಿಸಿದ ‘ನೃತ್ಯಭೂಷಿಣಿ’ ಕಲಾ ಶಾಲೆಯನ್ನು ಕಲಾ ಅಕಾಡೆಮಿ ಸಂಸ್ಥಾಪಕಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ಇವರು ದಿನಾಂಕ 09 ಅಕ್ಟೋಬರ್ 2024ರಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿದುಷಿ ಶಾಲಿನಿ ಆತ್ಮಭೂಷಣ್‌ “ನನ್ನ ಶಿಷ್ಯೆಯರಾದ ಶ್ರದ್ದಾ ಮತ್ತು ಶ್ರಾವ್ಯ ಇವರು ಈಗ ನೃತ್ಯ ಶಿಕ್ಷಕಿಯರಾಗಿ ಶಾಸ್ತ್ರೀಯ ನೃತ್ಯ ಪಸರಿಸಲು ಮುಂದಾಗಿರುವುದು ಶ್ಲಾಘನೀಯ. ಇಂದಿನ ಜನಮಾನಸದಲ್ಲಿ ಕಲೆ, ಸಂಸ್ಕೃತಿಯ ಉಳಿವಿಗೆ ಇಂತಹ ಪ್ರಯತ್ನಗಳು ಮನನೀಯ” ಎಂದು ಹಾರೈಸಿದರು. ಈ ಸಂದರ್ಭ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಇವರನ್ನು ಸಹೋದರಿಯರಾದ ಶ್ರದ್ಧಾ ಮತ್ತು ಶ್ರೇಯ ಸನ್ಮಾನಿಸಿ, ಗೌರವಿಸಿ ಆಶೀರ್ವಾದ ಪಡೆದುಕೊಂಡರು. ಶಿಶಿಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಧಿನ್, ಇಳಂತಿಲ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಚಂದ್ರಿಕಾ ಭಟ್, ಶಾಲಾ ಮುಖ್ಯಗುರು ರತ್ನಾ ಬಿ., ಅರ್ಚಕ ಯೋಗೀಶ್ ದಾಮ್ಲೆ, ಶಾಲಾ ಗುರುಗಳಾದ ಕುಂಞ ಮಿತ್ತಿಲ ಮತ್ತಿತರರಿದ್ದರು. ಶಿಶಿಲ…

Read More

ಕಾಸರಗೋಡು : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಇದರ ಆಶ್ರಯದಲ್ಲಿ ಬಂದಡ್ಕ ಗ್ರಾಮ ಗೌಡ ಸಮಿತಿ ಕೇರಳ ಇದರ ಸಹಕಾರದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ-2024’ ದಿನಾಂಕ 27 ಅಕ್ಟೋಬರ್ 2024ರಂದು ಕಾಸರಗೋಡಿನ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಮಂಟಪ ಸಭಾ ಭವನದಲ್ಲಿ ನಡೆಯಲಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಇದರ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಗೌಡರ ಯುವ ಸೇವಾ ಸಂಘ (ರಿ.) ಇದರ ಅಧ್ಯಕ್ಷರಾದ ಶ್ರೀ ಪಿ. ಎಸ್. ಗಂಗಾಧರ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುತ್ತಿಗೋಲು ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಶ್ರೀ ಮುರಳಿ ಪಯ್ಯಂಗಾನ, ಕಾರಡ್ಕ ಬ್ಲಾಗ್ ಪಂಚಾಯತ್ ಇದರ ಸದಸ್ಯರಾದ ಶ್ರೀ ಕೃಷ್ಣನ್ ಬಿ., ಕುತ್ತಿಗೋಲು ಗ್ರಾಮ ಪಂಚಾಯತ್ ಇದರ ಸದಸ್ಯರಾದ ಶ್ರೀ ಕುಂಞರಾಮನ್ ತವನಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಡಿಕೇರಿ ಇದರ ಸಹಾಯಕ ನಿರ್ದೇಶಕರಾದ ಶ್ರೀ ಕುಮಾರ್ ಹಾಗೂ…

Read More

ಜೀವನ ಸುಂದರವಾಗಿರಬೇಕೆಂದರೆ ಬದುಕಿನಲ್ಲಿ ಸಂಭ್ರಮಗಳಿರಬೇಕು. ಕಲೆ, ಸಂಗೀತ, ಸಾಹಿತ್ಯ, ಶಿಲ್ಪ, ವಾಸ್ತು, ನಾಟಕ, ನೃತ್ಯ  ಇವೆಲ್ಲವನ್ನೂ ಆಸ್ವಾದಿಸುವ ಮನೋಭಾವನೆ ಬೆಳೆಸಿಕೊಂಡಲ್ಲಿ ಬದುಕು ಇನ್ನೂ ಶ್ರೀಮಂತವಾಗುತ್ತದೆ. ಅದಲ್ಲದೇ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಊರು, ತನ್ನ ಮನೆತನ, ತನ್ನ ಪರಂಪರೆ, ತಾನು ಕಲಿತ ಶಾಲೆಯ ಬಗ್ಗೆ ಅಪಾರವಾದ ಪ್ರೀತಿ, ಗೌರವ ಸಹಜವಾಗಿಯೇ ಇರುತ್ತದೆ. ಇಂತಹ ಅಭಿಮಾನದಿಂದ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ತಾವು ಕಲಿತ ಕಲಾ ಶಾಲೆಯ ವಜ್ರಮಹೋತ್ಸವ  ಸಂಭ್ರಮ ಆಚರಿಸಿದ್ದು  ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ. ಕಳೆದ ತಿಂಗಳ ದಿನಾಂಕ ಸೆಪ್ಟೆಂಬರ್20, 21ಮತ್ತು22ನೇ 2024ರಂದು ದಾಕಹವಿಸ ದಾವಣಗೆರೆ ಕಲಾ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘಟನೆ ತಾವು ಕಲಿತ ಕಲಾ ಕಾಲೇಜಿನ 60ವರ್ಷದ ವಜ್ರಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಿತು.  ಈ ಸಮ್ಮಿಲನ ಕಾರ್ಯಕ್ರಮ ಕಾಲೇಜಿನೊಂದಿಗೆ, ಪರಸ್ಪರ ಕಲಾ ಸ್ನೇಹಿತರೊಂದಿಗೆ, ಸಹಪಾಠಿಗಳೊಂದಿಗೆ ಆಂತರಿಕ  ಸಂಬಂಧವನ್ನು ಹೆಚ್ಚಿಸಿದ  ಸಂಭ್ರಮ. ಸಾವಿರ ಸಾವಿರ ಕಲಾ ವಿದ್ಯಾರ್ಥಿಗಳ ಹೃದಯಕ್ಕೆ ಅಮೃತಸ್ಪರ್ಶದ ಅನುಭವವಾದ ಸಂಭ್ರಮ. ಅವರೆಲ್ಲರ ಸ್ವಯಂ ಪ್ರೇರಣೆಯ ಕಾರ್ಯೋತ್ಸಾಹ, ಹೊಸ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ನಾನೂರಕ್ಕೂ…

Read More

ಮಂಗಳೂರು : ದ.ಕ ಮತ್ತು ಉಡುಪಿ ಜಿಲ್ಲಾ ವಿಭಾಗೀಯ ಕಾರ್ಯನಿರ್ದೇಶಕರ ಸಂಯಕ್ತ ಘಟಕ ಶಾ.ಕು.ವಿ.ಮಂಡಳಿ, ದ.ಕ ತಾಲೂಕು ಮಾತೃ ಸಮನ್ವಯ ಸಮಿತಿ ಶಾ. ಕು. ವಿ. ಮಂಡಳಿ ಪುತ್ತೂರು ಇದರ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಪ್ರಾಥಮಿಕ ಯೋಜನೆಯ ವಿದ್ಯಾರ್ಥಿ ಸಬಲೀಕರಣ ಮತ್ತು ರಕ್ಷಾ ನಿಧಿ ಕಾರ್ಯಯಾನ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭವು ದಿನಾಂಕ 27 ಅಕ್ಟೋಬರ್ 2024ರ ಆದಿತ್ಯವಾರ ಪುತ್ತೂರಿನ ರೋಟರಿ ಕ್ಲಬ್ ಇದರ ‘ಮನಿಷಾ’ ಸಭಾಂಗಣದಲ್ಲಿ ನಡೆಯಲಿದೆ. ಆ ಪ್ರಯುಕ್ತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್ ಲೈನ್ ಮತ್ತು ನೇರ ವೇದಿಕೆಯ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ಅದರ ವಿವರಗಳು ಈ ರೀತಿ ಇವೆ. 3 ವರ್ಷದ ಒಳಗಿನ ಮಕ್ಕಳಿಗೆ ( ಛದ್ಮ ವೇಷ), 3 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ (ಛದ್ಮ ವೇಷ), 1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ (ಛದ್ಮ ವೇಷ ಹಾಗೂ ಅಭಿನಯ ಗೀತೆ), 4…

Read More

ಸುಳ್ಯ : ಮೋಹನ ಸೋನ ಕಲಾ ಗ್ಯಾಲರಿ ಇದರ ವತಿಯಿಂದ ರಂಗಕರ್ಮಿ ಹಾಗೂ ವರ್ಣಚಿತ್ರ ಕಲಾವಿದ ಮೋಹನ ಸೋನ ಇವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ‘ಸೋನ ನೆನಪು’ ದಿನಾಂಕ 19 ಅಕ್ಟೋಬರ್ 2024ನೇ ಶನಿವಾರ ಸಂಜೆ 6-00 ಗಂಟೆಗೆ ಸುಳ್ಯದ ಸೋಣಂಗೇರಿ, ಸೋನ ಕಲಾ ಗ್ಯಾಲರಿಯಲ್ಲಿ ನಡೆಯಲಿದೆ. ಹಿರಿಯ ಕಲಾವಿದ  ಶ್ರೀಯುತ ಎಂ. ಜೆ. ಕಜೆ ಇವರು ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡುವುದರ ಮೂಲಕ  ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಲಿದ್ದಾರೆ. ಇನ್ನೋರ್ವ ಮುಖ್ಯ ಅತಿಥಿಯಾಗಿ ಖ್ಯಾತ ಹಿರಿಯ ರಂಗಕರ್ಮಿ ಮೂರ್ತಿ ದೇರಾಜೆ ಇವರು ಭಾಗವಹಿಸಲಿದ್ದು , ಕಲಾವಿದ ಮೋಹನ ಸೋನರ ಬಗೆಗಿನ ಸಂಸ್ಮರಣಾ ಮಾತುಗಳನ್ನಾಡಲಿದ್ದಾರೆ. ಕಾರ್ಯಕ್ರಮದ ಭಾಗವಾಗಿ ಕೆ. ವಿ. ರಮೇಶ್ ಇವರ ನೇತೃತ್ವದ ಕಾಸರಗೋಡಿನ ಪಿಲಿಕುಂಜೆಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಇವರಿಂದ  ‘ನರಕಾಸುರ ವಧೆ ಗುರುಡ ಗರ್ವಭಂಗ’ ಬೆಂಬೆಯಾಟ ಪ್ರದರ್ಶನ ನಡೆಯಲಿದೆ.

Read More