Author: roovari

ಮೈಸೂರು : ರಂಗರಥ ಬೆಂಗಳೂರು ಅರ್ಪಿಸುವ ಸಂಚಲನ ಮೈಸೂರು (ರಿ.) ಇವರ ಸಹಕಾರದೊಂದಿಗೆ ಕನ್ನಡ ಹಾಸ್ಯ ನಾಟಕ ‘ಇದ್ದಾಗ ನಿಮ್ದು ಕದ್ದಾಗ ನಮ್ದು’ ಪ್ರದರ್ಶನವನ್ನು ದಿನಾಂಕ 12 ಜನವರಿ 2025ರಂದು ಸಂಜೆ 7-00 ಗಂಟೆಗೆ ಮೈಸೂರಿನ ಕಿರುರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಮೂಲ : ದಾರಿಯೋ ಫೋ (ದ ವರ್ಚುವಸ್ ಬರ್ಗಲರ್) ಕನ್ನಡಕ್ಕೆ ಅನುವಾದ : ಕೆ.ವಿ. ಅಕ್ಷರ, ರಂಗಪಠ್ಯ : ಆಸಿಫ್ ಕ್ಷತ್ರಿಯ, ಸಂಗೀತ: ಭಿನ್ನಷಡ್ಜ ಮತ್ತು ಆಸಿಫ್ ಕ್ಷತ್ರಿಯ ಮತ್ತು ಶ್ವೇತ ಶ್ರೀನಿವಾಸ್ ಇವರ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕಕ್ಕೆ 15 ನಿಮಿಷ ಮುಂಚಿತವಾಗಿ ಬನ್ನಿ ಹಾಗೂ ಟಿಕೆಟ್ ಗಳಿಗಾಗಿ 8050157443 / 9448386776 ಸಂಪರ್ಕಿಸಿ. ರಂಗರಥ ಸಂಸ್ಥೆಯ ಬಗ್ಗೆ : ಭಾರತೀಯ ಪ್ರದರ್ಶನ ಕಲಾ ಸಂಸ್ಥೆಯಾದ ‘ರಂಗರಥ’ ಎಂಬುದು ರಂಗಪ್ರೇಕ್ಷಕರ ಮನಸೂರೆಗೊಂಡ ಬೆಂಗಳೂರಿನ ಕೆಲವು ರಂಗತಂಡಗಳಲ್ಲಿ ಒಂದು. ಹಲವು ವರ್ಷಗಳ ರಂಗಾನುಭವದ ಆಧಾರದ ಮೇಲೆ ರಂಗರಥದ ಪಯಣ ಸಾಗಿದೆ. ಅನುಭವೀ ರಂಗಕರ್ಮಿಗಳು, ನಾಟಕಕಾರರು, ಸಾಹಿತಿಗಳು, ಸಂಗೀತ ಸಂಯೋಜಕರು ಒಂದಾಗಿ,…

Read More

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಮತ್ತು ಸಪ್ನ ಬುಕ್ ಹೌಸ್ ಬೆಂಗಳೂರು ಇವರ ಸಹಯೋಗದಲ್ಲಿ “ವಿಶ್ವಸಂಸ್ಕೃತಿಯ ಮಹಾಯಾನ” ಸಂಪುಟ 2 ಗದ್ಯ ಮಹಾಕಾವ್ಯ ಬಿಡುಗಡೆ ಸಮಾರಂಭವು ದಿನಾಂಕ 12 ಜನವರಿ 2025ರಂದು ಬೆಳಿಗ್ಗೆ 11-00 ಗಂಟೆಗೆ ಮೂಡುಬಿದಿರೆಯ ವಿದ್ಯಾಗಿರಿ ಆಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿರುವ ಡಾ. ವಿ.ಎಸ್. ಆಚಾರ್ಯ ಸಭಾಭವನದಲ್ಲಿ ನಡೆಯಲಿದೆ. ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಇವರ ದಿವ್ಯ ಸಾನ್ನಿಧ್ಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ನಿವೃತ್ತ ಆಂಗ್ಲ ಪ್ರಾಧ್ಯಾಪಕರಾದ ಪ್ರೊ. ಸಿ. ನಾಗಣ್ಣ ಇವರು ಗ್ರಂಥ ಬಿಡುಗಡೆ ಮಾಡಲಿದ್ದು, ಗ್ರಂಥದ ಕುರಿತು ಖ್ಯಾತ ಸಾಹಿತಿ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ ಇವರು ಮಾತನಾಡಲಿದ್ದಾರೆ.

Read More

ವಯಸ್ಸಿಗೂ ಮೀರಿದ ಬಾಲಪ್ರತಿಭೆ ಇಷಿತಾ ಭಾರಧ್ವಾಜ್, ಸೇವಾಸದನದ ವೇದಿಕೆಯ ಮೇಲೆ ಪಾದರಸದಂತೆ ಚುರುಕಿನ ಹೆಜ್ಜೆಗಳಿಂದ ರಂಗವನ್ನು ಪ್ರವೇಶಿಸಿ, ಮೃದಂಗದ ಕೊನ್ನಕೋಲುಗಳಿಗೆ ಕರಾರುವಾಕ್ಕಾಗಿ ಜತಿಗಳನ್ನು ಅಡವುಗಳಲ್ಲಿ ಎರಕ ಹುಯ್ದದ್ದು ನಿಜಕ್ಕೂ ಅದ್ಭುತವಾಗಿತ್ತು. ಹೊಸಬಗೆಯ ‘ಪುಷ್ಪಾಂಜಲಿ’ ಪುಳಕ ತಂದಿತ್ತು. ನಾಟ್ಯಗುರು ಅಭಿನಯ ನಟರಾಜನ್ ಪ್ರಯೋಗಾತ್ಮಕ ನೃತ್ಯಸಂಯೋಜನೆ ಇಷಿತಳ ರಂಗಪ್ರವೇಶದುದ್ದಕ್ಕೂ ದೃಗ್ಗೋಚರವಾಗಿತ್ತು. ‘ನಟರಾಜರಂಗಂ ಸ್ಕೂಲ್ ಆಫ್ ಡ್ಯಾನ್ಸ್’ ನೃತ್ಯ ಸಂಸ್ಥೆಯ ನಾಟ್ಯಗುರು ಮತ್ತು ನೃತ್ಯ ಕಲಾವಿದೆ ಶ್ರೀಮತಿ ಅಭಿನಯ ನಟರಾಜನ್ ಅವರ ಶಿಷ್ಯೆ ಕು. ಇಷಿತಾ ಭಾರಧ್ವಾಜ್ ತನ್ನ ಮನೋಜ್ಞ ನೃತ್ಯವಲ್ಲರಿಯಿಂದ ನುರಿತ ನೃತ್ಯ ಕಲಾವಿದೆಯಂತೆ ಲೀಲಾಜಾಲವಾಗಿ ಬಹು ಸುಮನೋಹರವಾಗಿ ನೆರೆದ ಕಲಾರಸಿಕರ ಕಣ್ಮನ ಸೂರೆಗೊಂಡಳು. ಅವಳ ಹಸನ್ಮುಖದ, ಅಂಗಶುದ್ಧ ನರ್ತನ, ಅನುಪಮ ಭಂಗಿಗಳು, ಆತ್ಮವಿಶ್ವಾಸದ ಹೆಜ್ಜೆ-ಗೆಜ್ಜೆಗಳು ಝೇಂಕಾರಗೈದವು. ಮನೋಲ್ಲಾಸದಿಂದ ಕೂಡಿದ ನರ್ತನದಲ್ಲಿ ಮಿಂಚಿದ ದೈವೀಕ ಪ್ರಭೆ ಪರಿಣಾಮಕಾರಿಯಾಗಿದ್ದವು. ಗುರು ಅಭಿನಯ ನಟರಾಜನ್ ಸಶಕ್ತ ನಟುವಾಂಗದ ಜತಿಗಳಿಗೆ ಇಷಿತಾ, ಲಯಾತ್ಮಕವಾಗಿ ತಾಳಬದ್ಧ ಹೆಜ್ಜೆಗಳನ್ನು ಹಾಕಿದ್ದು ನೋಡಲು ಆನಂದದಾಯಕವಾಗಿತ್ತು. ಗಣಪತಿಯ ವಂದನೆಯ ನಂತರ ಪ್ರಸ್ತುತವಾದ ‘ಅಲರಿಪು’ ಎಂದಿನ…

Read More

ಉಡುಪಿ : ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಎಂ.ಜಿ.ಎಂ. ಕಾಲೇಜಿನ ಸಹಕಾರದೊಂದಿಗೆ ರಂಗಭೂಮಿ (ರಿ.) ಉಡುಪಿ ಆಯೋಜಿಸುವ ‘ಅಂಬಲಪಾಡಿ ನಾಟಕೋತ್ಸವ’ವನ್ನು ದಿನಾಂಕ 12 ಜನವರಿ 2025 ಮತ್ತು 13 ಜನವರಿ 2025ರಂದು ಸಂಜೆ 6-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕೋತ್ಸವವನ್ನು ರಂಗಭೂಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ.ಬೀ. ವಿಜಯ ಬಲ್ಲಾಳ ಇವರು ಉದ್ಘಾಟಿಸಲಿದ್ದಾರೆ. ದಿನಾಂಕ 12 ಜನವರಿ 2025ರಂದು ಭವಭೂತಿ ರಚನೆ ಹಾಗೂ ಅಕ್ಷರ ಕೆ.ವಿ. ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರಿಂದ ‘ಮಾಲತೀ ಮಾಧವ’ ಮತ್ತು ದಿನಾಂಕ 13 ಜನವರಿ 2025ರಂದು ಅಭಿರಾಮ್ ಭಡ್ಕಮ್ಕರ್ ರಚಿಸಿರುವ ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿರುವ ವಿದ್ಯಾನಿಧಿ ವನಾರಸೆ ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರಿಂದ ‘ಅಂಕದ ಪರದೆ’…

Read More

ಆಲೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು ಕೇಂದ್ರ ಸಮಿತಿಯ ಮಾರ್ಗದರ್ಶನದಲ್ಲಿ ಹಾಸನ ಜಿಲ್ಲೆಯ ಆಲೂರು ತಾಲೂಕು ಘಟಕ ಇದರ ವತಿಯಿಂದ ದಿನಾಂಕ 12 ಜನವರಿ 2025 ಭಾನುವಾರದಂದು ಆಲೂರು ತಾಲೂಕಿನ ಹರಿಹಳ್ಳಿಯಲ್ಲಿ ‘ಆಲೂರು ತಾಲೂಕು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಹಿರಿಯ ಪತ್ರಕರ್ತೆ, ಲೇಖಕಿ ಲೀಲಾವತಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ರವಿ ನಾಕಲಗೂಡು ಉದ್ಘಾಟಿಸಲಿದ್ದು, ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಜೆ. ಕೃಷ್ಣೇಗೌಡರವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಸಮಾಜ ಸೇವಕರಾದ ಕಟ್ಟೆಗದ್ದೆ ನಾಗರಾಜ್ ವೇದಿಕೆಯ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಎಸ್. ಶಿವಮೂರ್ತಿ ಆಶಯ ನುಡಿಗಳನ್ನಾಡುವರು. ಸಾಹಿತಿ ಹಾಗೂ ಪತ್ರಕರ್ತ ನಾಗರಾಜ್ ಹೆತ್ತೂರುರವರು ಕವಿ ವಿಶ್ವಾಸ್ ಡಿ. ಗೌಡರವರ “ನೆನಪುಗಳ ಖಾತೆ” ಕೃತಿ ಲೋಕಾರ್ಪಣೆ…

Read More

ಮಂಗಳೂರು : “ನಮ್ಮ ಸಂಸ್ಕೃತಿ… ನಮ್ಮ ಹೆಮ್ಮೆ” ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ನಾಲ್ಕು ದಶಕಗಳಿಂದ ತನ್ನ ಸದಸ್ಯರ ಮಕ್ಕಳ ಮತ್ತು ವಿವಿಧ ಶಾಲಾ ಮಕ್ಕಳ ಭಾರತೀಯ ಕಲೆ, ಸಂಗೀತ, ನೃತ್ಯ ಕಲೆ, ಶಾಸ್ತ್ರೀಯ ಸಂಗೀತ ಇತ್ಯಾದಿಗಳ ಅಭ್ಯಾಸ, ಪ್ರದರ್ಶನ, ಸ್ಪರ್ಧೆಗಳಿಗೆ ಸೂಕ್ತ ವೇದಿಕೆ ನಿರ್ಮಾಣದ ಮೂಲಕ ಪ್ರಸಿದ್ಧವಾದ ಸಂಸ್ಥೆ ರಾಗ ತರಂಗ (ರಿ.) ಮಂಗಳೂರು. 2024-25ನೇ ಸಾಲಿನ ಉಡುಪಿ, ಮಂಗಳೂರು ಮತ್ತು ಕಾಸರಗೋಡು ವ್ಯಾಪ್ತಿಯ ಶಾಲಾ ಮಕ್ಕಳ ಅಂತರ್ ಶಾಲಾ ಮಟ್ಟದ ವಿವಿಧ ಸ್ಪರ್ಧೆಗಳು ದಿನಾಂಕ 13 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ ಜರುಗಿದ್ದು, ಇವುಗಳ ಬಹುಮಾನ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭ ಮತ್ತು ವಿಜೇತ ಮಕ್ಕಳ ಪ್ರತಿಭಾ ಪ್ರದರ್ಶನದ ‘ಬಾಲ ಪ್ರತಿಭೋತ್ಸವ’ ಕಾರ್ಯಕ್ರಮವು ದಿನಾಂಕ 05 ಜನವರಿ 2025ನೇ ಆದಿತ್ಯವಾರ ಮಂಗಳೂರಿನ ಸುಬ್ರಹ್ಮಣ್ಯ ಸಭಾದಲ್ಲಿ ಜರುಗಿತು. ಸಮಾರಂಭದಲ್ಲಿ ಮುಖ್ಯ ಆಹ್ವಾನಿತರಾಗಿ 92.7 Big FMನ ಪ್ರಖ್ಯಾತ RJ ನಯನಾ ಶೆಟ್ಟಿ ಭಾಗವಹಿಸಿ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ…

Read More

ಬಂಟ್ವಾಳ: ಪಾವಂಜೆ ಮೇಳದ ಸಂಚಾಲಕರು ಹಾಗೂ ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರು ಕಲಾಸೇವೆಯಲ್ಲಿ 25 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಬಿ. ಸಿ. ರೋಡಿನ ಹೊಟೇಲ್ ರಂಗೋಲಿ ಸಹೋದರರು ವಿಶಿಷ್ಟ ರೀತಿಯ ಸಂಯೋಜನೆಯಿಂದ ಆಯೋಜಿಸಿದ ಯಕ್ಷಗಾನ ಬಯಲಾಟದ ರಂಗಸ್ಥಳದಲ್ಲಿ ಸನ್ಮಾನಿಸಲಾಯಿತು. ದಿನಾಂಕ 03 ಜನವರಿ 2025ರಂದು ಬಂಟ್ವಾಳ ತಾಲೂಕಿನ ಕೂರಿಯಾಳ ಪಡುವಿನ ಚಂದ್ರತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಲ ಸತೀಶ್ ಶೆಟ್ಟಿ ಇವರನ್ನು ಸನ್ಮಾನಿಸಿ ಮಾತನಾಡಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ “ಯಕ್ಷಗಾನ ಕಲಾಭಿಮಾನಿಗಳ ಕಣ್ಮಣಿ, ಯಕ್ಷರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಖ್ಯಾತ ಭಾಗವತರಾದ ಇವರು ಯಕ್ಷಗಾನ ರಂಗದ ಸೆಲೆಬ್ರಿಟಿಯಾಗಿದ್ದಾರೆ. ಪ್ರಥಮ ಶ್ರೇಣಿಯ ಭಾಗವತಿಕೆಯ ಮೂಲಕ ಯಕ್ಷಗಾನದಲ್ಲಿ ಜೀವಂತಿಕೆಯನ್ನು ಉಳಿಸಿಕೊಂಡಿರುವ ಇವರು ದೇಶ ಮಾತ್ರವಲ್ಲ ವಿದೇಶದಲ್ಲೂ ಯಕ್ಷಗಾನದ ಕಂಪನ್ನು ಪಸರಿಸಿರುವ ಅದ್ಭುತ ಸಂಘಟಕರೂ ಆಗಿದ್ದಾರೆ. ಪಟ್ಲ ಫೌಂಡೇಶನ್ ಮೂಲಕ ಶಾಶ್ವತವಾದ ಯೋಜನೆಯನ್ನು ರೂಪಿಸಿ ಕಲಾವಿದರಿಗೆ ಮನೆ ಸಹಿತ ವಿವಿಧ ನೆರವು ನೀಡುತ್ತಿರುವ…

Read More

ತೆಕ್ಕಟ್ಟೆ: ಕರಾವಳಿಯ ಅಭಿಮಾನದ ಕಲಾಸಂಸ್ಥೆಯಾದ ಯಶಸ್ವೀ ಕಲಾವೃಂದದ ಆಶ್ರಯದಲ್ಲಿ ಇನ್ನು ಮುಂದೆ ಬಡಗಿನ ಹಿಮ್ಮೇಳದೊಂದಿಗೆ ತೆಂಕುತಿಟ್ಟು ಹಿಮ್ಮೇಳ ತರಗತಿಯೂ ನಡೆಯಲಿದೆ. ತಾಳ ಮದ್ದಳೆಯೊಂದಿಗೆ ಜಾಗಟೆಯ ಮಧುರ ಮೈತ್ರಿ ಬಯಸುವ ಕಲಾಸಕ್ತರಿಗೆ ಬೆಳ್ಳಿ ಹಬ್ಬದ ಸಂಸ್ಥೆ ನೀಡಿದ ಸುವರ್ಣ ಅವಕಾಶವಿದು. ಒಂದೇ ಕಲಿಕಾ ಕೇಂದ್ರದಲ್ಲಿ ಯಕ್ಷಗಾನ ಕಲಾಮಾತೆಯ ಯುಗ್ಮ ನಯನಗಳಂತಿರುವ ಎರಡು ತಿಟ್ಟುಗಳ ಸಶಕ್ತ ಶಿಕ್ಷಣ ಸಿಗುವುದೆಂದರೆ ನಿಜಕ್ಕೂ ಕಲಾಭ್ಯಾಸಿಗಳ ಭಾಗ್ಯವೆನ್ನಬೇಕು. ಯಶಸ್ವೀ ಕಲಾವೃಂದದ ಕಲಾತ್ಮಕ ಯೋಚನೆಯ ಮಹತ್ವಪೂರ್ಣ ನಡೆಯಿದು. ತೆಂಕು ತಿಟ್ಟಿನ ಅಗ್ರಮಾನ್ಯ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಗುರುತನದಲ್ಲಿ ತರಗತಿಗಳು ನಡೆಯುವ ಸಂಗತಿ ಅತ್ಯಂತ ಸಂತೋಷ ಕೊಡುತ್ತದೆ. ಸಿರಿಬಾಗಿಲು ರಾಮಕೃಷ್ಣ ಮಯ್ಯರು, ಪಟ್ಲ ಸತೀಶ ಶೆಟ್ಟಿಯವರಂತಹ ಘಟಾನುಘಟಿ ಕಲಾ ದಿಗ್ಗಜ ಶಿಷ್ಯರ ಗುರುಗಳಾದ ಮಾಂಬಾಡಿಯವರ ಗುರುತನ ಕರಾವಳಿಗೂ ಸುಲಲಿತವಾಗಿ ದಕ್ಕಲಿದೆ. 11 ಜನವರಿ 2025 ರಂದು ಬೆಳಿಗ್ಗೆ ಘಂಟೆ 10.00ಕ್ಕೆ ತೆಕ್ಕಟ್ಟೆ ಹಯಗ್ರೀವದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಉದ್ಘಾಟಕರಾಗಿ ಆಗಮಿಸುವ ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ತಿಳಿಸಿದ್ದಾರೆ.

Read More

ಮಂಡ್ಯ : ಸ್ಪೋರ್ಟ್ಸ್ ಆಂಡ್ ಕಲ್ಚರ್ ಅಕಾಡಮಿ ಫಾರ್ ಡಿಫರೆಂಟ್ಲಿ ಏಬಲ್ಡ್ (ರಿ.) ಇವರು ಆಶಾಸದನ ಮಂಡ್ಯ ಇವರ ಸಹಯೋಗದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಕಾರ್ಯಕ್ರಮ ‘ಸಕಾಡೋತ್ಸವ -2025’ ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯಮಟ್ಟದ ಜನಪದ ನೃತ್ಯೋತ್ಸವ ಸ್ಪರ್ಧೆಯನ್ನು ದಿನಾಂಕ 11 ಜನವರಿ 2025 ಮತ್ತು 12 ಜನವರಿ 2025ರಂದು ಬೆಳಿಗ್ಗೆ 10-30 ಗಂಟೆಗೆ ಮಂಡ್ಯ ಸುಭಾಷ್ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ದಿನಾಂಕ 11 ಜನವರಿ 2025ರಂದು ಈ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ. ಕುಮಾರ್ ಭಾ.ಆ.ಸೇ. ಇವರು ಉದ್ಘಾಟಿಸಲಿದ್ದು, ಮಂಡ್ಯದ ಸೈಂಟ್ ಥೋಮಸ್ ಮಿಷನ್ ಸೊಸೈಟಿ ವಲಯ ನಿರ್ದೇಶಕರಾದ ಗುರುಗಳು ಸೋಜನ್ ಎಂ.ಎಸ್.ಟಿ. ಇವರು ಆಶೀರ್ವಚನ ನೀಡಲಿದ್ದಾರೆ. ದಿನಾಂಕ 12 ಜನವರಿ 2025ರಂದು ಸಮಾರೋಪ ಸಮಾರಂಭ ನಡೆಯಲಿದೆ.

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯಾಂತರಂಗ 120’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 11 ಜನವರಿ 2025ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗುರು ಅನ್ನಪೂರ್ಣ ರಿತೇಶ್ ಇವರ ಶಿಷ್ಯೆ ಕುಮಾರಿ ರಿದ್ಧಿ ಹೆಚ್. ಶೆಟ್ಟಿ ಇವರು ನೃತ್ಯ ಪ್ರದರ್ಶನ ನೀಡಲಿದ್ದು, ಪುತ್ತೂರು ಇನ್ನರ್ ವೀಲ್ ಕ್ಲಬ್ ಇದರ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಆಚಾರ್ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು.

Read More