Subscribe to Updates
Get the latest creative news from FooBar about art, design and business.
Author: roovari
ಪಡುಕುತ್ಯಾರ್ : ಶ್ರೀಮದ್ ಜಗದ್ಗುರು ಆನೆಗುಂದಿ ಸಂಸ್ಥಾನ, ಸರಸ್ವತೀ ಪೀಠ, ಪಡುಕುತ್ಯಾರು ಮಠದಲ್ಲಿ ಚಾತುರ್ಮಾಸ್ಯ ನಿರತರಾಗಿರುವ ಪೀಠಾಧಿಪತಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರ ಸಮಕ್ಷಮದಲ್ಲಿ ಪ್ರತಿಭಾನ್ವಿತ ಕಲಾವಿದೆ ಸಂಜನಾ ರಾವ್ ಬಾಗ್ಲೋಡಿಯವರ ಕೊಳಲು ವಾದನ ಕಛೇರಿ ದಿನಾಂಕ 17-08-2023 ರಂದು ನಡೆಯಿತು. ಮುಡಿಪು ಇಲ್ಲಿಯ ಇನ್ಫೋಸಿಸ್ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಈಕೆ ಕೊಳಲು ವಾದನದಲ್ಲಿ ಸೀನಿಯರ್ ಪರೀಕ್ಷೆ ತೇರ್ಗಡೆ ಹೊಂದಿದ್ದು, ಕರ್ನಾಟಕ ಹಾಗೂ ಕೇರಳದ ಅನೇಕ ಕಡೆಗಳಲ್ಲಿ ಕಾರ್ಯಕ್ರಮ ನೀಡಿರುವರು. ಪಕ್ಕ ವಾದ್ಯದಲ್ಲಿ ಬಿ.ಎಸ್.ಕಿಶನ್ ಮೃದಂಗ ಹಾಗೂ ಪ್ರಥಮ್ ಆಚಾರ್ಯ ಕೃಷ್ಣಾಪುರ ತಬಲಾದಲ್ಲಿ ಸಂಜನಾ ರಾವ್ ಇವರಿಗೆ ಸಾಥ್ ನೀಡಿದರು. ಈಕೆ ಬಾಗ್ಲೋಡಿ ರಾಜೇಶ್ ರಾವ್ ಮತ್ತು ಗೀತಾ ರಾವ್ ದಂಪತಿಗಳ ಸುಪುತ್ರಿ .
ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಆಕಾಡೆಮಿಯು ಹಮ್ಮಿಕೊಂಡ ‘ನೃತ್ಯಾಂತರಂಗ’ದ 103ನೇ ಸರಣಿ ಕಾರ್ಯಕ್ರಮವು ದಿನಾಂಕ 13-08-2023ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪುಟಾಣಿಗಳಾದ ಕುಮಾರಿ ಮಾತಂಗಿ ಮತ್ತು ಕುಮಾರಿ ಅಕ್ಷರಿ ಇವರ ಭರತನಾಟ್ಯ ಪ್ರದರ್ಶನ ನೆರವೇರಿತು. ಪುಷ್ಪಾಂಜಲಿಯಿಂದ ಕಾರ್ಯಕ್ರಮ ಪ್ರಾರಂಭವಾಗಿ, ನಂತರ ನರ್ತಿಸಿದ ನಟೇಶ ಕೌತ್ವಂ ನಲ್ಲಿ ತಟವನದಲ್ಲಿ ಶಿವನು ಮುನಿಗಳಿಂದ, ರಾಕ್ಷಸರಿಂದ ಪೂಜಿಸಲ್ಪಟ್ಟು, ಶಿವನು ನರ್ತಿಸುವಾಗ ಕಾಲಿನಲ್ಲಿರುವ ಗೆಜ್ಜೆಗಳು ಝಣ,ಝಣ ಎಂದು ಶಬ್ದವನ್ನು ಮಾಡುತ್ತಾ ತ್ರಿಶೂಲ ಮತ್ತು ಡಮರುಗವನ್ನು ತನ್ನ ಕೈಗಳಲ್ಲಿ ಹಿಡಿದು ನರ್ತಿಸುವ ನಟರಾಜನ ವರ್ಣನೆಯನ್ನು ಕಲಾವಿದರು ಸೊಗಸಾಗಿ ಅನಾವರಣಗೊಳಿಸಿದರು. ನಂತರ ನರ್ತಿಸಿದ ಓಂಕಾರ ಬಿಂದುವಿನಲ್ಲಿ ದೇವಿಯ ವರ್ಣನೆಯನ್ನು ಮಾಡಲಾಗಿದೆ. ಇಲ್ಲಿ ದೇವಿಯು ಮಹಿಷಾಸುರನನ್ನು ಸಂಹರಿಸಿ ಮಹಿಷಾಸುರ ಮರ್ಧಿನಿಯಾದ ಕಥಾ ಭಾಗವನ್ನು ಪುಟಾಣಿ ಕಲಾವಿದರು ಮನಮುಟ್ಟುವಂತೆ ಪ್ರಸುತ ಪಡಿಸಿದರು. ಕೊನೆಯದಾಗಿ ಕೃಷ್ಣನ ಕುರಿತು ಕನಕದಾಸರು ರಚಿಸಿದ ಬಾರೋ ಕೃಷ್ಣಯ್ಯ ದೇವರನಾಮಕ್ಕೆ ನರ್ತಿಸಲಾಯಿತು. ಕೈಯಲ್ಲಿ ಕೊಳಲನ್ನು ಹಿಡಿದು, ಕಾಲಿನಲ್ಲಿ ಗೆಜ್ಜೆಯ ಸದ್ದನ್ನು ಮಾಡುತ್ತಾ ತಮ್ಮ…
ಸವಣೂರು : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ವತಿಯಿಂದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಹೈಸ್ಕೂಲ್, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಪ್ರಬಂಧಗಳು 3 ಪುಟಕ್ಕೆ ಮೀರದಂತಿರಬೇಕು. ಪ್ರಬಂಧ ಸ್ಪರ್ಧೆಯ ವಿಷಯಗಳು : ಹೈಸ್ಕೂಲ್ ವಿಭಾಗಕ್ಕೆ ‘ದುಶ್ಚಟ ಮಕ್ಕಳ ಬೆಳವಣಿಗೆಗೆ ಮಾರಕ’, ಕಾಲೇಜು ವಿಭಾಗಕ್ಕೆ ‘ದುಶ್ಚಟದಿಂದ ಕುಟುಂಬದ ಮೇಲೆ ಆಗುವ ಪರಿಣಾಮ’, ಸಾರ್ವಜನಿಕ ವಿಭಾಗಕ್ಕೆ ‘ಮಾದಕ ಮುಕ್ತ ಸಮಾಜ’. ಸ್ಪರ್ಧಾಳುಗಳು ದಿನಾಂಕ 09-09-2023ರೊಳಗೆ ಹೆಸರು, ವಿಳಾಸ, ವಯಸ್ಸು, ವಿಭಾಗ, ಮೊ. ಸಂಖ್ಯೆ ವಿವರಗಳೊಂದಿಗೆ ನೊಂದಾಯಿತ ಅಂಚೆ ಮೂಲಕ ಮಹೇಶ್ ಕೆ, ಸವಣೂರು, ಅಧ್ಯಕ್ಷರು ಕಡಬ ತಾಲೂಕು ಜನಜಾಗೃತಿ ವೇದಿಕೆ, ಅಶ್ವಿನಿ ಕಾಂಪ್ಲೆಕ್ಸ್, ಸವಣೂರು ಗ್ರಾಮ ಮತ್ತು ಅಂಚೆ, ಕಡಬ ತಾಲೂಕು, ದ.ಕ. 574202 ಇಲ್ಲಿಗೆ ಕಳುಹಿಸಬಹುದು.
‘ಪಾತ್ರ, ಸನ್ನಿವೇಶ ಸೇರಿದಾಗ ಕಾದಂಬರಿ’ ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಲೇಖಕಿಯರ ಸಂಘ ಜಂಟಿಯಾಗಿ ಆಯೋಜಿಸಿದ ‘ನಾನು ಮತ್ತು ನನ್ನ ಕಾದಂಬರಿ ರಚನೆ’ ಕಾರ್ಯಕ್ರಮವು ದಿನಾಂಕ 19-07-2023ರ ಶನಿವಾರದಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ವಿಮರ್ಶಕಿ ಎನ್. ಸಂಧ್ಯಾರಾಣಿ “ಹಲವಾರು ಪಾತ್ರ ಹಾಗೂ ಸನ್ನಿವೇಶಗಳು ಸೇರಿದಾಗ ಕಾದಂಬರಿ ಹುಟ್ಟುತ್ತದೆ ಪ್ರತಿಯೊಂದು ಭಾವ ಕೂಡ ಸಾಹಿತ್ಯದ ಯಾವುದೇ ಪ್ರಕಾರವನ್ನು ಪಡೆದುಕೊಳ್ಳಬೇಕಾದರೆ, ಅದಕ್ಕೆ ಬೇಕಾದ ಸ್ವರೂಪ ಅಥವಾ ಮಾಧ್ಯಮವನ್ನು ಅದೇ ಹುಟ್ಟುಹಾಕುತ್ತದೆ. ಕೆಲವೊಮ್ಮೆ ನಮ್ಮ ಭಾವನೆಗಳು ಕವನಗಳಿಗೆ ಮಾತ್ರ ಮೀಸಲಾಗುತ್ತದೆ. ಇನ್ನು ಕೆಲವೊಮ್ಮೆ ಮತ್ತಷ್ಟು ಹೆಚ್ಚಿನ ವಿಚಾರವನ್ನು ಪಡೆದು. ಭಾವನೆ ಕಾದಂಬರಿಯ ರೂಪವನ್ನು ಪಡೆದುಕೊಳ್ಳುತ್ತದೆ” ಎಂದು ಹೇಳಿದರು. ಲೇಖಕಿ ಆಶಾ ರಘು ಮಾತನಾಡುತ್ತಾ “ಕಾದಂಬರಿಯ ಪ್ರಕ್ರಿಯೆ ಒಂದು ಶೋಧ ಕಾರ್ಯವಾಗಿದೆ. ವ್ಯಾಪ್ತಿಯಲ್ಲಿ ವಿಸ್ತರಿಸುತ್ತಾ ವಿವರಗಳೊಂದಿಗೆ ಸಾಗುವಾಗ ಪಾತ್ರಗಳ ಮನೋಭೂಮಿಕೆಯ ಆಳವನ್ನು ಶೋಧಿಸುತ್ತ ಹೋಗುವ ಕ್ರಮ ಇದಾಗಿದೆ. ಜಗತ್ತಿನಲ್ಲಿ ಮಾನವ ಮತ್ತು ಪ್ರಕೃತಿ, ಮಾನವ…
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ, ಕರ್ನಾಟಕ ಲೇಖಕಿಯರ ಸಂಘ (ರಿ) ಚಾಮರಾಜಪೇಟೆ ಬೆಂಗಳೂರು ಮತ್ತು ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಲೇಖ ಲೋಕ 9’ ಲೇಖಕಿಯರ ಬದುಕು ಮತ್ತು ಬರಹ ಕುರಿತ ಕಾರ್ಯಕ್ರಮವು ದಿನಾಂಕ 29-08-2023 ಮತ್ತು 30-08-2023ರಂದು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ದಿನಾಂಕ 29-08-2023ರಂದು ಬೆಳಿಗ್ಗೆ 10 ಘಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿಯ ಕುಲಪತಿಗಳಾದ ಪ್ರೊ. ಜಯರಾಜ್ ಅಮೀನ್ ಇವರು ಉದ್ಘಾಟಿಸಲಿರುವರು. ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಖ್ಯೆ, ಮಂಗಳಗಂಗೋತ್ರಿಯ ಅಧ್ಯಕ್ಷರಾದ ಪ್ರೊ. ಸೋಮಣ್ಣನವರು ಅಧ್ಯಕ್ಷತೆ ವಹಿಸಲಿದ್ದು, ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪರವರು ಆಶಯ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಯಾದ ಡಾ. ಸಬಿಹಾ ಭೂಮಿಗೌಡ ಮತ್ತು ಮಂಗಳೂರು ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ…
27.04.1970ರಂದು ನಾಗೇಶ್ ಹಾಗೂ ಪುಷ್ಪ ಇವರ ಮಗನಾಗಿ ದಯಾನಂದ ಕೋಡಿಕಲ್ ಅವರ ಜನನ. II PUC, ITI ಇವರ ವಿದ್ಯಾಭ್ಯಾಸ. ಮನೆಯ ಹತ್ತಿರ ಇರುವ ಚಾಮುಂಡೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಒಂದು ವಾರದ ಕೂಟ ನಡೆಯುತ್ತಿತ್ತು, ಅಲ್ಲಿ ಯಾವಾಗಲೂ ಹೋಗಿ ಯಕ್ಷಗಾನ ನೋಡಿ ಯಕ್ಷಗಾನದ ಮೇಲೆ ಆಸಕ್ತಿ ಹುಟ್ಟಿತು. ಹೀಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ಯಕ್ಷಗಾನ ಗುರುಗಳು:- ಭಾಗವತಿಕೆಯಲ್ಲಿ ಪ್ರಾರಂಭದಲ್ಲಿ ಕೃಷ್ಣಪ್ಪ ಕರ್ಕೇರ, ಮತ್ತೆ ಮಾಂಬಾಡಿ ಸುಬ್ರಹ್ಮಣ್ಯ ಭಟ್. ಮದ್ದಳೆ:- ಕುದುರೆಕೂಡ್ಲು ರಾಮ ಭಟ್. ಚೆಂಡೆಯನ್ನು ನೋಡಿಯೇ ಕಲಿತದ್ದು. ಹಿಂಧೋಳ, ಕಾನಡ, ಶಿವರಂಜಿನಿ, ಅಮೃತವರ್ಷಿಣಿ, ಮೋಹನ, ಅಭೇರಿ ನೆಚ್ಚಿನ ರಾಗಗಳು. ಪಂಚವಟಿ, ಕೃಷ್ಣಾರ್ಜುನ, ಗುರುದಕ್ಷಿಣೆ, ಗದಾಯುದ್ಧ, ಕೋಟಿ ಚೆನ್ನಯ ಹಾಗೂ ಹೆಚ್ಚಿನ ಎಲ್ಲಾ ಪೌರಾಣಿಕ ಪ್ರಸಂಗ ಇವರ ನೆಚ್ಚಿನ ಪ್ರಸಂಗಗಳು. ಪುತ್ತಿಗೆ ರಘುರಾಮ ಹೊಳ್ಳ ನೆಚ್ಚಿನ ಭಾಗವತರು. ಪೆರುವಾಯಿ ಕೃಷ್ಣ ಭಟ್, ದೇಲಂತಮಜಲು, ಪ್ರಭಾಕರ ಗೋರೆ ಹಾಗೂ ಈಗಿನ ಎಲ್ಲಾ ಯುವ ಮದ್ದಲೆಗಾರರು ನೆಚ್ಚಿನ ಹಿಮ್ಮೇಳವಾದಕರು. ಅಮೃತ ತೀರ್ಥ, ಜ್ವಾಲಾಮುಖಿ, ಸ್ವರ್ಣ…
ಮೈಸೂರು : ಕುಮಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ (ರಿ.) ಮೈಸೂರು ಪ್ರಸ್ತುತಪಡಿಸುವ 26ನೇ ‘ರಾಷ್ಟ್ರೀಯ ನಿರಂತರ ಕಲೆಮನೆ ಉತ್ಸವ’ವು ದಿನಾಂಕ 27-08-2023ರಂದು ಸಂಜೆ 3.00ರಿಂದ ಮೈಸೂರಿನ ಹೆಬ್ಬಾಳ 2ನೇ ಹಂತದ ಸರಕಾರಿ ಪದವಿಪೂರ್ವ ಕಾಲೇಜಿನ ಹಿಂಭಾಗದ ಅಭಿಷೇಕ್ ವೃತ್ತದ ಬಳಿ ಇರುವ ಕಲೆಮನೆ ಸಭಾಂಗಣದಲ್ಲಿ ನಡೆಯಲಿರುವುದು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಾಟ್ಯಾರಾಧನ ಸಂಸ್ಥೆಯ ಸ್ಥಾಪಕಿ ಮತ್ತು ನಿರ್ದೇಶಕಿಯಾದ ಗುರು ವಿದುಷಿ ವೀಣಾ ಶ್ರೀಧರ್ ಮೊರಬ್ ಇವರ ಶಿಷ್ಯವೃಂದದವರಿಂದ ಭರತನಾಟ್ಯ ಪ್ರದರ್ಶನ, ಬೆಂಗಳೂರಿನ ನಟನ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ಇದರ ಸ್ಥಾಪಕಿ ಮತ್ತು ನಿರ್ದೇಶಕಿಯಾದ ಗುರು ವಿದುಷಿ ಡಾ.ರಕ್ಷಾ ಕಾರ್ತಿಕ್ ಮತ್ತು ಶಿಷ್ಯವೃಂದದವರಿಂದ ‘ದಾಸ ಶ್ರೇಷ್ಠ ಪುರಂದರ’ ಎಂಬ ನೃತ್ಯರೂಪಕ, ಬೆಂಗಳೂರಿನ ಶ್ರೀ ಮಾರಿಕಾಂಬಾ ನೃತ್ಯ ಕಲಾಕೇಂದ್ರ ಇದರ ಸ್ಥಾಪಕಿ ಮತ್ತು ನಿರ್ದೇಶಕಿಯಾದ ಗುರು ವಿದುಷಿ ಸ್ಮಿತಾ ಪ್ರಕಾಶ್ ಶಿರಸಿ ಇವರ ಶಿಷ್ಯವೃಂದದವರಿಂದ ಹೆಜ್ಜೆ ಗೆಜ್ಜೆ ನೃತ್ಯ ಸಂಭ್ರಮ ಹಾಗೂ ಬೆಂಗಳೂರಿನ ಸ್ವಯುಕ್ತಿ ನಾಟ್ಯಾಶಾಲಾ ಇದರ ಸ್ಥಾಪಕಿ ಮತ್ತು ನಿರ್ದೇಶಕಿಯಾದ ವಿದುಷಿ ರಾಗಿಣಿ…
ಮಂಗಳೂರು : ನಿವೃತ್ತ ಪ್ರಾಧ್ಯಾಪಕ ಡಾ.ವಿ.ಕೆ.ಯಾದವ್ ಸಸಿಹಿತ್ಲು ಇವರ ‘ಮೊಗವೀರೆರ್ನ ಸಾಂಸ್ಕೃತಿಕ ಬದ್ಕ್ ಬೊಕ್ಕ ಆರ್ಥಿಕ ಚಿಂತನೆ’ ಎಂಬ ತುಳುವಿನಲ್ಲಿ ಪ್ರಕಟಿತ ಮೊದಲ ಪಿ.ಎಚ್.ಡಿ. ಅಧ್ಯಯನಪೂರ್ಣ ಗ್ರಂಥವೊಂದನ್ನು ರಚಿಸಿದ್ದು, ತುಳು ಭಾಷೆಯಲ್ಲೂ ಸಂಶೋಧನಾ ಗ್ರಂಥ ಬಂತು ಎಂಬುದು ತುಳು ನಾಡಿಗೆ ಹೆಮ್ಮೆಯನ್ನು ತಂದಿದೆ. ದಿನಾಂಕ 27-08-2023ರಂದು ಅಪರಾಹ್ನ 2.45ಕ್ಕೆ ಈ ಗ್ರಂಥ ಬಪ್ಪನಾಡು ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಸಾಂಸ್ಕೃತಿಕ ಹರಿಕಾರ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ನಾಡೋಜ ಡಾ. ಜಿ.ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿರುವರು. ಕಾರ್ಯಕ್ರಮದಲ್ಲಿ ಮಂಗಳೂರು ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಮಹಾಲಿಂಗ ಭಟ್ ಕೆ. ಅವರು ಗ್ರಂಥವನ್ನು ಪರಿಚಯಿಸುವರು. ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಅವರು ಶುಭ ಹಾರೈಸಲಿದ್ದು, ಶಾಸಕರಾದ ಉಮಾನಾಥ ಕೋಟ್ಯಾನ್, ಯಶ್ಪಾಲ್ ಸುವರ್ಣ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅಪರಾಹ್ನ 2 ಘಂಟೆಗೆ ಬಜಪೆ…
ಮಂಗಳೂರು : ಗುರುತು ಪ್ರಕಾಶನ ಮುಂಬೈ ಸಮರ್ಪಿಸುವ ಶ್ರೀ ಬಾಬು ಶಿವ ಪೂಜಾರಿ ಮತ್ತು ಬಳಗದ ‘ಬಿಲ್ಲವರ ಗುತ್ತು ಬರ್ಕೆಗಳು’ ಸಂಶೋಧನಾ ಗ್ರಂಥ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮವು ದಿನಾಂಕ 27-08-2023ರ ಆದಿತ್ಯವಾರ ಬೆಳಗ್ಗೆ 9:30ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಳದ ಕೊರಗಪ್ಪ ಕಲ್ಯಾಣ ಮಂಟಪದ ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಸುಮಾರು 7 ವರ್ಷಗಳ ಕಾಲದ ಸುದೀರ್ಘ ಸಂಶೋಧನೆಯ ಫಲವಾಗಿ ಬಿಲ್ಲವರ ಪ್ರತಿಷ್ಠಿತ ಮನೆತನಗಳ ಅಪೂರ್ವ ಇತಿಹಾಸವಿರುವ ಮುಂಬಯಿ ಶ್ರೀ ಬಾಬು ಶಿವ ಪೂಜಾರಿ ಅವರ ಮುಂದಾಳತ್ವದಲ್ಲಿ ರಚನೆಗೊಂಡ ಬಿಲ್ಲವರ ಗುತ್ತು (ಬರ್ಕೆ, ಬೀಡು, ಬಾವ, ಜನನ, ಗುರಿಕಾರಮನೆ, ಭಂಡಾರ ಮನೆ ನಟ್ಟಿಲ್ಲು ಮತ್ತು ಸಾನದ ಮನೆ) ಎಂಬ ಸಂಶೋಧನಾ ಗ್ರಂಥ ಇದಾಗಿದೆ. ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನೂ ಸ್ವಾಗತಿಸುತ್ತಿದ್ದೇವೆ. ಅಪೂರ್ವ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಬಿಲ್ಲವರ ಅನೇಕ ಪ್ರತಿಷ್ಠಿತ ಮನೆತನಗಳ ದಾಖಲೀಕರಣವಾಗಿರುವ ಈ ಗ್ರಂಥವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರವಾದ ಕಾರ್ಯ ನಮ್ಮಿಂದ ಆಗಬೇಕಾಗಿದೆ. ಅದಕ್ಕಾಗಿ ಈ ಕಾರ್ಯಕ್ರಮಕ್ಕೆ ನಮ್ಮೆಲ್ಲರ…
ಕಾಸರಗೋಡು : ಕಲಾಕುಂಚ ಗಡಿನಾಡ ಘಟಕ ಕೇರಳ ಶಾಖೆಯ ಸಹಯೋಗದೊಂದಿಗೆ ಶ್ರೀಮತಿ ಲಕ್ಷ್ಮೀ ವಿ. ಭಟ್ ಇವರ ‘ಭಕ್ತಿ ಮಂಜರಿ’, ‘ಸುಚರಿತರು’, ‘ಕಲರವ’, ‘ಭಾರತಾಂಬೆಗೆ ನಮನ’ ಮತ್ತು ‘ಭಾವ ಸ್ಪರ್ಶ’ ಎಂಬ ಪಂಚ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 29-08-2023ರಂದು ಕಾಸರಗೋಡು ಜಿಲ್ಲೆಯ ಉಪ್ಪಳದ ಶ್ರೀ ಕ್ಷೇತ್ರ ಕೊಂಡೆವೂರು ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕೊಂಡೆವೂರಿನ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಲೇಖಕಿ ಶ್ರೀಮತಿ ಲಕ್ಷ್ಮೀ ವಿ.ಭಟ್ ಇವರಿಂದ ಆಶಯ ನುಡಿ ಮತ್ತು ಕು. ಅದಿತಿಲಕ್ಷ್ಮೀ ಇವರಿಂದ ಪೂಜಾ ನೃತ್ಯವಿದೆ. ಶ್ರೀ ಶ್ರೀ ಶ್ರೀ ಗಳವರು ತಮ್ಮ ದಿವ್ಯ ಹಸ್ತಗಳಿಂದ ‘ಭಕ್ತಿ ಮಂಜರಿ’ ಕೃತಿ ಲೋಕಾರ್ಪಣೆ ಮಾಡಿ ಕೃತಿಯ ಕುರಿತು ಮಾತನಾಡಲಿದ್ದಾರೆ. ಕು. ಸುಪ್ರಜಾ ರಾವ್ ಹಾಗೂ ಶ್ರೀಮತಿ ರಾಧಾಮಣಿ ಆರ್.ರಾವ್ ಕೃತಿಯಲ್ಲಿನ ಕವನಗಳನ್ನು ಹಾಡಲಿದ್ದಾರೆ. ಶ್ರೀ ಪಿ. ನಾರಾಯಣ ಮೂಡಿತ್ತಾಯ ಇವರು ‘ಸುಚರಿತರು’ ಕೃತಿ ಲೋಕಾರ್ಪಣೆ ಮಾಡಿ ಕೃತಿಯ…