Subscribe to Updates
Get the latest creative news from FooBar about art, design and business.
Author: roovari
ಬಾಗಲಕೋಟೆ : ನಟರಾಜ್ ಸಂಗೀತ ನೃತ್ಯ ನಿಕೇತನ ಇದರ ವತಿಯಿಂದ ದಿನಾಂಕ 19 ಅಕ್ಟೋಬರ್ 2024ರಂದು ಬೆಳಗ್ಗೆ 10-00ರಿಂದ ಮತ್ತು 20 ಅಕ್ಟೋಬರ್ 2024ರಂದು ಬೆಳಗ್ಗೆ 9-00 ಗಂಟೆಗೆ ಬಾಗಲಕೋಟೆಯ ವಿದ್ಯಾಗಿರಿ ನಟರಾಜ ಸಂಗೀತ ನೃತ್ಯ ನಿಕೇತನದಲ್ಲಿ ಎರಡು ದಿನಗಳ ನೃತ್ಯ ಕಾರ್ಯಾಗಾರ ಮತ್ತು ಭರತನಾಟ್ಯ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಕರಾವಳಿಯ ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕರಾದ ಗುರು ನೃತ್ಯ ವಿದುಷಿ ಶುಭದಾ ದೇಶಪಾಂಡೆಯವರು ತಿಳಿಸಿರುತ್ತಾರೆ. ದಿನಾಂಕ 20 ಅಕ್ಟೋಬರ್ 2024ರಂದು ಸಂಜೆ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.
ಕಾಸರಗೋಡು : ಮಹಿಳೆಯರ ಸಾಧನೆ ಗುರುತಿಸಲ್ಪಡಬೇಕು. ವಿವಿಧ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಬಹಳಷ್ಟು ಸಾಧನೆಗಳನ್ನು ಮಾಡುತ್ತಿದ್ದು, ಯಾರಿಗೂ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿದ್ದಾರೆ. ರಂಗಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯ ಮೂಲಕ ಕಾಸರಗೋಡಿನ ಎಲೆಮರೆಯ ಪ್ರತಿಭೆಗಳನ್ನು ಗುರುತಿಸಿ ಮುಂಚೂಣಿಗೆ ತರುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ.” ಎಂದು ರಂಗನಟಿ ರೂಪಶ್ರೀ ವರ್ಕಾಡಿ ಹೇಳಿದರು. ಅವರು ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ನಾರಿ ಚಿನ್ನಾರಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ದಸರಾ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ ಸಾಂಸ್ಕೃತಿಕ ವೈಭವ ‘ನವ ವನಿತಾ’ ಕಾರ್ಯಕ್ರಮವನ್ನು ದಿನಾಂಕ 12 ಅಕ್ಟೋಬರ್ 2024ರಂದು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಉದ್ಘಾಟಿಸಿ ಮಾತನಾಡಿದರು. ನಾರಿ ಚಿನ್ನಾರಿ ಕಾರ್ಯಾಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದೆ ಸುಶೀಲ ಮಾಧವ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ನಾರಿ ಚಿನ್ನಾರಿ ಗೌರವ ಅಧ್ಯಕ್ಷೆ ತಾರಾ ಪ್ರಸಾದ್ ಉಪಸ್ಥಿತರಿದ್ದರು. ಹಿರಿಯ ವೈದ್ಯ ಡಾ. ಬಿ.…
ವಿಜಯಪುರ : ಶರನ್ನವರಾತ್ರಿ ಪರ್ವದ ನಿಮಿತ್ತ ನಗರದ ಬಾಗಲಕೋಟೆ ರಸ್ತೆಯ ವಜ್ರಹನುಮಾನ್ ನಗರದಲ್ಲಿರುವ ಶ್ರೀ ಶಂಕರ ಮಠದಲ್ಲಿ ದಿನಾಂಕ 05 ಅಕ್ಟೋಬರ್ 2024ರಂದು ಪ್ರಥಮ ಬಾರಿಗೆ ‘ಗಮಕ ದುಂದುಭಿ’ ಮೊಳಗಿತು. ಕರ್ನಾಟಕ ಗಮಕ ಪರಿಷತ್ತು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಆಶ್ರಯದಲ್ಲಿ ಗಮಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಜಯಪುರ ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ಶ್ರೀ ಬಿ. ಎಂ. ಪಾಟೀಲರು ಕಾರ್ಯಕ್ರಮ ಆಯೋಜಿಸಿದ್ದರು. ಹಿರಿಯ ಗಮಕಿ ಶ್ರೀಮತಿ ಶಾಂತಾ ಕೌತಾಳರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂತ ಕವಿ ಕನಕದಾಸರು ರಚಿಸಿರುವ ‘ನಳ ದಮಯಂತಿ’ ಷಟ್ಪದಿ ಕಾವ್ಯದ ‘ನಳ ದಮಯಂತಿ ವಿವಾಹ’ ಪ್ರಸಂಗವು ಮಠದ ಭಕ್ತರಲ್ಲಿ ಭಕ್ತಿಯ ಹೊಳೆ ಹರಿಸುವಲ್ಲಿ ಸಫಲವಾಯಿತು. ಗಮಕಿಗಳಾದ ಶ್ರೀಮತಿ ಪುಷ್ಪಾ ಕುಲಕರ್ಣಿ ಹಾಗೂ ಸರಸ್ವತಿ ಕುಲಕರ್ಣಿ ಇವರುಗಳು ಆರಂಭದಲ್ಲಿ ಪ್ರಾರ್ಥನಾ ಪದ್ಯವಾದ ‘ಶ್ರೀರಮಣ ಸರಸಿಜದಳಾಕ್ಷ, ಸಾಕಾರ ಚೆನ್ನಿಗರಾಯ ಪಾಲಿಸು ಜಗಕೆ ಮಂಗಳವ’ ಎಂಬ ನಾಂದೀ ಪದ್ಯವನ್ನು ಸುಶ್ರಾವ್ಯವಾಗಿ ಹಾಡಿದರು. ಕಾವ್ಯಕ್ಕೆ ವ್ಯಾಖ್ಯಾನ ನೀಡಿದ ಗಮಕಿ ಕಲ್ಯಾಣರಾವ್…
ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವಗ್ರಹ ಗುಡಿಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆಯು ದಿನಾಂಕ 14 ಅಕ್ಟೋಬರ್ 2024ರಂದು ‘ಶರ ಸೇತು’ ಎಂಬ ಆಖ್ಯಾನದೊಂದಿಗೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಚೆಂಡೆ ಮತ್ತು ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಹನೂಮಂತ), ಗುಂಡ್ಯಡ್ಕ ಈಶ್ವರ ಭಟ್ (ಅರ್ಜುನ), ಗುಡ್ಡಪ್ಪ ಬಲ್ಯ (ವೃದ್ಧ ಬ್ರಾಹ್ಮಣ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು.
ಮಂಗಳೂರು : ಚಿತ್ರಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಂಗಳೂರಿನ ಬ್ಲ್ಯಾಕ್ ಅಂಡ್ ಬ್ಲೂ ಈವೆಂಟ್ ಸಂಸ್ಥೆ ಪುಟಾಣಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 2 ಅಕ್ಟೋಬರ್ 2024ರಂದು ನಗರದ ಉರ್ವಾಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಆಯೋಜಿಸಿತು. ಚಿತ್ರಕಲಾ ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ನಡೆಸಲಾಗಿದೆ. 1ನೇ ತರಗತಿಯಿಂದ 3ನೇ ತರಗತಿಯವರೆಗೆ ಹಾಗೂ 4ನೇ ತರಗತಿಯಿಂದ 7ನೇ ತರಗತಿಯವರೆಗಿನ ಮಕ್ಕಳಿಗೆ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಮೊದಲ ವಿಭಾಗದಲ್ಲಿ ‘ಭಾರತೀಯ ಹಬ್ಬ’ ಸ್ಪರ್ಧೆಯ ವಿಷಯವಾಗಿತ್ತು. ಈ ವಿಭಾಗದಲ್ಲಿ ವಿಜೇತರ ಪೈಕಿ ಅಹಾನ್ – ಪ್ರಥಮ, ಶಾನ್ವಿ- ದ್ವಿತೀಯ ಹಾಗೂ ಆದಿತ್ಯ ತಂತ್ರಿ – ತೃತೀಯ ಸ್ಥಾನ ಪಡೆದರು. ಎರಡನೇ ವಿಭಾಗದಲ್ಲಿ ‘ಕಡಲ ಕಿನಾರೆ’ ಸ್ಪರ್ಧೆಯ ವಿಷಯವಾಗಿತ್ತು. ಈ ವಿಭಾಗದಲ್ಲಿ ಹನ್ಸಿಕಾ – ಪ್ರಥಮ, ಸಚಿ ಕೆ. – ದ್ವಿತೀಯ, ಮನ್ವಿತ್ ಕೆ.ಎಲ್. – ತೃತೀಯ ಸ್ಥಾನ ಪಡೆದರು. ಈ ಚಿತ್ರಕಲಾ ಸ್ಪರ್ಧೆಯಲ್ಲಿ ಚಿತ್ರ ಕಲಾವಿದ ಅನುದೀಪ್ ಕರ್ಕೇರ ಮತ್ತು ಸಂತ ಅಲೋಶಿಯಸ್ ಹೈಸ್ಕೂಲಿನ ಚಿತ್ರಕಲಾ ಶಿಕ್ಷಕ ಜೋನ್ ಚಂದ್ರನ್…
ಪುತ್ತೂರು : ಶ್ರೀ ಮುಕಾಂಬಿಕಾ ಕಲ್ಚರಲ್ ಅಕಾಡೆಮಿಯ 3ನೇ ವರ್ಷದ ‘ನೃತ್ಯೋತ್ಕ್ರಮಣ -2024’ ಕಾರ್ಯಕ್ರಮವು ದಿನಾಂಕ 17 ಅಕ್ಟೋಬರ್ 2024ರಂದು ಸಂಜೆ 5-30 ಗಂಟೆಗೆ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ತಿಳಿಸಿದ್ದಾರೆ. ಸಭಾ ಕಾರ್ಯಕ್ರಮವನ್ನು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಉದ್ಘಾಟಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಲಾದೀಪ ನೃತ್ಯ ದಂಪತಿಗಳಾದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಇವರು ಯುಗಳ ನೃತ್ಯ ಪ್ರದರ್ಶನವನ್ನು ಹಿಮ್ಮೇಳ ಸಹಿತ ನೀಡುತ್ತಿದ್ದು, ನಟುವಾಂಗದಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು, ಹಾಡುಗಾರಿಕೆಯಲ್ಲಿ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ವಿವೇಕ್ ಕೃಷ್ಣ ಬೆಂಗಳೂರು ಸಹಕಾರ ನೀಡಲಿದ್ದಾರೆ. ದೇವ್ ಪ್ರೋ ಸೌಂಡ್ಸ್ ಮಂಗಳೂರು ಧ್ವನಿ ಮತ್ತು ಬೆಳಕು ನೀಡಿದರೆ, ಪುತ್ತೂರು ಭಾವನಾ ಕಲಾ ಆರ್ಟ್ಸ್…
ಮುಂಬೈ : ಮುಂಬೈಯ ಹಿರಿಯ ಲೇಖಕ, ಅನುವಾದಕ, ಉದ್ಯಮಿ, ಚಿತ್ರ ಕಲಾವಿದ ವೆಂಕಟ್ರಾಜ ರಾವ್ ಅವರ ಚೊಚ್ಚಲ ಕನ್ನಡ ಕೃತಿ ‘ಪಟೇಲರ ಹುಲಿ ಬೇಟೆ’ ಕಥಾ ಸಂಕಲನವು ದಿನಾಂಕ 19 ಅಕ್ಟೋಬರ್ 2024ರ ಶನಿವಾರ ಮಧ್ಯಾಹ್ನ 2-00 ಗಂಟೆಗೆ ಮುಂಬೈ ವಿಶ್ವವಿದ್ಯಾಲಯದ ಜೆ.ಪಿ. ನಾಯಕ ಭವನದಲ್ಲಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯ ಇವರು ವಹಿಸಲಿದ್ದು, ಈ ಕೃತಿಯ ಕುರಿತು ಲೇಖಕರಾದ ಸವಿತಾ ಅರುಣ್ ಶೆಟ್ಟಿಯವರು ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಲಾವಿದ, ಲೇಖಕ ಕೋಲ್ಯಾರು ರಾಜು ಶೆಟ್ಟಿ ಹಾಗೂ ಹಿರಿಯ ಸಾಹಿತಿ ಮಿತ್ರಾ ವೆಂಕಟ್ರಾಜ ಇವರುಗಳ ಕೃತಿಗಳು ಕೂಡಾ ಬಿಡುಗಡೆ ಕಾಣಲಿದೆ. ಈ ಕೃತಿಯನ್ನು ಶ್ರೀರಾಮ ಮಂಡ್ಯ ಪ್ರಕಟಿಸಿದೆ. ವೆಂಕಟ್ರಾಜ ರಾವ್ : ಮುಂಬೈಯಲ್ಲಿ ನೆಲೆಸಿ ಲೇಖಕರಾಗಿ, ಉದ್ಯಮಿಯಾಗಿ, ಚಿತ್ರ ಕಲಾವಿದರಾಗಿ, ಸಮಾಜಸೇವಕರಾಗಿ ಹೆಸರು ಮಾಡಿರುವ ವೆಂಕಟ್ರಾಜ ರಾವ್ ಅವರು ಹೊನ್ನಾವರದಲ್ಲಿ 1941ರಲ್ಲಿ ಜನಿಸಿದರು. ಅವರ ವಿದ್ಯಾಭ್ಯಾಸ ಬಿ.ಎಸ್ಸಿ. ತನಕ ಉಡುಪಿಯಲ್ಲಾಯಿತು.…
ಹಾಸನ : ಪ್ರತಿವರ್ಷವೂ ಕೊಡಮಾಡುವಂತೆ ಪ್ರಸಕ್ತ ಸಾಲಿನಲ್ಲಿಯೂ 2024ನೇ ಸಾಲಿನ ಮಾಣಿಕ್ಯ ಪ್ರಕಾಶನದ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರದ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಸಾಧಕರನ್ನು ಗುರುತಿಸಲಾಗಿದೆ. ಹಿರಿಯ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್, ನಾಗರಾಜ್ ಹೆತ್ತೂರು, ನಾಗರಾಜ್ ದೊಡ್ಡಮನಿ, ಡಾ. ಎಚ್.ಕೆ. ಹಸೀನಾ ಹಾಗೂ ವಾಸು ಸಮುದ್ರವಳ್ಳಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಈ ಕೆಳಕಂಡಂತೆ ಸಾಧಕರನ್ನು ಗುರುತಿಸಿದೆ. ದಿನಾಂಕ 10 ನವೆಂಬರ್ 2024ರಂದು ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿರುವ ಪ್ರಕಾಶನದ ರಾಜ್ಯ ಮಟ್ಟದ ಒಂಭತ್ತನೇ ಕವಿಕಾವ್ಯ ಸಂಭ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ. ರಾಜ್ಯ ಮಟ್ಟದ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ 2024 : ಯು.ಎಸ್. ಬಸವರಾಜು ಹಾಸನ (ಶರಣ ತತ್ತ್ವ ಪ್ರಸಾರ), ಪೂಜಾ ರಂಘುನಂದನ್ ಹಾಸನ (ರಂಗಭೂಮಿ), ಶ್ರೀನಿವಾಸ ಪಿ.ಎ. ಹಾಸನ, (ಮಾಧ್ಯಮ), ಗ್ಯಾರಂಟಿ ರಾಮಣ್ಣ ಹಾಸನ (ಜಾನಪದ), ನಲ್ಲಪ್ಪ ಹಾಸನ (ಪೌರಕಾರ್ಮಿಕ ಸೇವೆ). ರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ 2024 : ಕೃಷ್ಣ ಪದಕಿ…
ಕುಂದಾಪುರ: ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ-75’ನೇ ಕಾರ್ಯಕ್ರಮವಾಗಿ 13ನೇ ವರ್ಷದ ಹೂವಿನಕೋಲು ತಿರುಗಾಟದ ಸಮಾರೋಪ ಸಮಾರಂಭವು ದಿನಾಂಕ 13 ಅಕ್ಟೋಬರ್ 2024ರಂದು ಕುಂದಾಪುರದ ಕಲಾ ಪೋಷಕ ಡಾ. ಆದರ್ಶ ಹೆಬ್ಬಾರ್ ಇವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಮಾರೋಪದ ನುಡಿಗಳನ್ನಾಡಿದ ಡಾ. ಆದರ್ಶ ಹೆಬ್ಬಾರ್ “ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸದಾ ಶ್ರಮಿಸುತ್ತಿರುವ ಸಂಸ್ಥೆ ಯಶಸ್ವೀ ಕಲಾವೃಂದ. ಪ್ರಾಚೀನ ಕಲೆಯಾದ ಹೂವಿನಕೋಲು ನಶಿಸಿ ಹೋದ ಕಾಲದಲ್ಲಿ ಅದನ್ನು ಕೈಗೆತ್ತಿಕೊಂಡು ಮನೆ ಮನೆ ಸುತ್ತಿ ಮತ್ತೆ ಕಲೆ ಹಸಿರಾಗಿ ಉಳಿಯುವಂತೆ ಮಾಡಿದ ಸಂಸ್ಥೆ ಇದೀಗ 25ನೇಯ ವರ್ಷಾಚರಣೆಯಲ್ಲಿ ಜಾತಿ-ಧರ್ಮ, ಬಡವ- ಬಲ್ಲಿದ ಭೇದ ಮರೆತು 495 ಮನೆಗಳಿಗೆ ಭೇಟಿ ನೀಡಿ ಕಲೆಯನ್ನು, ಸಂಸ್ಕೃತಿಯನ್ನು ಮತ್ತೆ ನೆನಪಿಸಿದ ಸಂಸ್ಥೆಯ ಸಾಧನೆ ಸಣ್ಣದಲ್ಲ. ಜೀವನೋಪಾಯಕ್ಕಾಗಿಯೂ, ಬೆಳೆಯುವ ಕಲಾವಿದರಿಗೆ ಕಲಿಕೆ ನಿರಂತರವಾಗಿರಬೇಕೆನ್ನುವುದಕ್ಕಾಗಿಯೋ, ಮಕ್ಕಳಿಗೆ ಯಕ್ಷಗಾನದ ಅಭಿರುಚಿಯನ್ನು.. ಪೌರಾಣಿಕ ಕಥೆಯ ಸಾರವನ್ನು ಅಭ್ಯಾಸ ಮಾಡುವುದಕ್ಕಾಗಿಯೋ ಬಹಳ ಹಿಂದೆ ಹುಟ್ಟಿಕೊಂಡ ಕಲಾ ಪ್ರಕಾರ ಹೂವಿನಕೋಲು ಮರೆಯಾದ ಕಾಲಘಟ್ಟದಲ್ಲಿ ಪುನರುಜ್ಜೀವನಗೊಳಿಸಿದ ಸಂಸ್ಥೆ…
ಗೋಣಿಕೊಪ್ಪ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿಯು ದಿನಾಂಕ 11 ಅಕ್ಟೋಬರ್ 024 ರಂದು ಗೋಣಿಕೊಪ್ಪದ ಕಾವೇರಿ ಕಲಾ ವೇದಿಕೆಯಲ್ಲಿ ನಡೆಯಿತು. ಕನ್ನಡಾಂಬೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ “ಕನ್ನಡ ಪರ ಹೋರಾಟ ನಿರಂತರವಾಗಿರಬೇಕಿದೆ. ಗಡಿಭಾಗವಾದ ಕುಟ್ಟ ವ್ಯಾಪ್ತಿಯಲ್ಲಿ ಕನ್ನಡ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕವಿಗಳ ಸಂಖ್ಯೆ ಕೂಡ ಹೆಚ್ಚಾಗಬೇಕಿದೆ.” ಎಂದು ಅಭಿಪ್ರಾಯಪಟ್ಟರು. ಸಾಹಿತಿ ಡಾ. ಜೆ. ಸೋಮಣ್ಣ ಮಾತನಾಡಿ “ಪಂಪ ತನ್ನ ಕಾವ್ಯದ ನಾಯಕನಾದ ಅರ್ಜುನನೊಂದಿಗೆ ಶತ್ರುವಾಗಿದ್ದ ಕರ್ಣನನ್ನು ಹೊಗಳುವುದರ ಮೂಲಕ ಕವಿ ಮನಸ್ಸಿನ ಶ್ರೇಷ್ಠತೆಯನ್ನು ಮೆರೆದಿದ್ದ. ಕವನ ಹುಟ್ಟುವುದೇ ಹೀಗೆ.” ಎಂದರು. ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲಚಂಡ ಪ್ರಮೋದ್ ಗಣಪತಿ ಮಾತನಾಡಿ “ಮುಂದಿನ ಪೀಳಿಗೆಗೆ ಕವಿಗಳು ಅನಿವಾರ್ಯ…