Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ ಅಶೋಕನಗರದ ದಂಬೆಲ್ ನಿವಾಸಿ ಪ್ರೊ. ಎಂ. ರಾಘವೇಂದ್ರ ಪ್ರಭು ವಯೋಸಹಜ ಅನಾರೋಗ್ಯದಿಂದ ದಿನಾಂಕ 26 ಸೆಪ್ಟೆಂಬರ್ 2024ರ ಗುರುವಾರ ನಿಧನರಾದರು. ಅವರಿಗೆ 83ವರ್ಷ ವಯಸ್ಸಾಗಿತ್ತು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಇತಿಹಾಸದಲ್ಲಿ ಎಂ. ಎ. ಪದವಿ ಪಡೆದಿದ್ದ ಇವರು ಕೆನರಾ ಕಾಲೇಜಿನಲ್ಲಿ 30 ವರ್ಷ ಪ್ರಾಧ್ಯಾಪಕರಾಗಿದ್ದರು. ಶಿಕ್ಷಣ ಇಲಾಖೆಗಾಗಿ ಇತಿಹಾಸದ ಪಠ್ಯ ಪುಸ್ತಕಗಳನ್ನು ರಚಿಸಿದ್ದ ಇವರ ‘ಅಸಂಗ’ ಸೇರಿದಂತೆ ಹಲವಾರು ಕಥಾ ಸಂಕಲನಗಳು ಪ್ರಕಟವಾಗಿವೆ. ಇವರು ಮಂಗಳೂರಿನ ಥಿಯೋಸಫಿಕಲ್ ಸೊಸೈಟಿ, ರಾಮಕೃಷ್ಣ ಮಠ ಸೇರಿದಂತೆ ದೇಶದ ಹಲವಾರು ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶ್ರೀಯುತರು ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಲತೆಯಂಥ ಸಪೂರ ಮಾಟದ ದೇಹಶ್ರೀ ಹೊಂದಿದ ನೃತ್ಯಚತುರೆ ಧೃತಿ ಶೆಟ್ಟಿ, ಬಿಲ್ಲಿನಂತೆ ಹೇಗೆಂದರೆ ಹಾಗೇ ಬಾಗುವ ಚೈತನ್ಯದ ಸೊಬಗಿನಿಂದ ತನ್ನ ರಂಗಪ್ರವೇಶದಲ್ಲಿ ಪ್ರದರ್ಶಿಸಿದ ಸುಮನೋಹರ ನೃತ್ಯ-ಯೋಗದ ಭಂಗಿಗಳು ಬೆರಗು ಹುಟ್ಟಿಸಿದವು. ದಿನಾಂಕ 08 ಸೆಪ್ಟೆಂಬರ್ 2024ರಂದು ಬಸವೇಶ್ವರ ನಗರದ ಕೆ.ಇ.ಎ. ರಂಗಮಂದಿರದಲ್ಲಿ ‘ಸಾಧನ ಸಂಗಮ’ ನೃತ್ಯಶಾಲೆಯ ಹಿರಿಯಗುರು ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಶ್ರೀ ಗುರುದ್ವಯರ ಶಿಷ್ಯೆ ಉದಯೋನ್ಮುಖ ಕಲಾವಿದೆ ಧೃತಿ, ಬಹು ಆತ್ಮವಿಶ್ವಾಸ ಹಾಗೂ ಲವಲವಿಕೆಯಿಂದ ತನ್ನ ಭರತನಾಟ್ಯ ನೃತ್ಯ ಪ್ರದರ್ಶಿಸಿದಳು. ಸಾಂಪ್ರದಾಯಕ ‘ಪುಷ್ಪಾಂಜಲಿ’ಯ ನೃತ್ತಾರ್ಪಣೆಯಿಂದ ತನ್ನ ಪ್ರಸ್ತುತಿಯನ್ನು ಶುಭಾರಂಭಿಸಿದ ನಂತರ ಮುಂದಿನ ‘ಗಣೇಶ ಸ್ತುತಿ’ ವಿಶೇಷವಾಗಿತ್ತು. ಸಾಮಾನ್ಯ ನಿರೂಪಣೆಯ ಗಣಪತಿಯ ವಿಶಿಷ್ಟ ರೂಪ-ಗುಣಗಳನ್ನಷ್ಟೇ ಚಿತ್ರಿಸದೆ, ಮೃದಂಗ ವಿದ್ವಾನ್ ಗುರುಮೂರ್ತಿ ಮತ್ತು ಗಾಯಕ ಬಾಲಸುಬ್ರಮಣ್ಯ ಶರ್ಮ ವಿಶೇಷವಾಗಿ ರಚಿಸಿರುವ ಗಣಪತಿ ಕುರಿತ ಹೊಸ ಪರಿಕಲ್ಪನೆಯ ಸ್ತುತಿಯ ಅರ್ಥ ಸ್ಫುರಿಸುವಂತೆ, ನೀಲಕಂಠನ ವೈಶಿಷ್ಟ್ಯವನ್ನೂ ಸಾಕಾರಗೊಳಿಸಿ, ಧೃತಿ ಚೈತನ್ಯಪೂರ್ಣವಾಗಿ ನರ್ತಿಸಿದಳು. ಗಣಪತಿಯ ಧ್ವನಿ, ಮೋಡಗಳ ಘರ್ಜನೆಯಂತಿದ್ದು, ತನ್ಮೂಲಕ ಅದು ನವಿಲುಗಳ ನರ್ತನಕ್ಕೆ ಅದಮ್ಯ…
ಮೈಸೂರು : ಡಾ. ಶ್ವೇತಾ ಮಡಪ್ಪಾಡಿ ಇವರ ಧ್ವನಿ ಫೌಂಡೇಷನ್ ನ ‘ಸ್ವರ ಕುಟೀರ’ ಎಂಬ ಸಂಗೀತ ನೃತ್ಯ ಸಭಾಂಗಣದ ಉದ್ಘಾಟನಾ ಸಮಾರಂಭವು ಮೈಸೂರಿನ ಸೋಮನಾಥ ನಗರದಲ್ಲಿ ದಿನಾಂಕ 22 ಸೆಪ್ಟೆಂಬರ್ 2024ರಂದು ನಡೆಯಿತು. ಸಭಾಂಗಣವನ್ನು ಉದ್ಘಾಟಿಸಿದ ಸಚಿವ ಡಾ. ಎಚ್.ಸಿ. ಮಹದೇವಪ್ಪ ಇವರು ಮಾತನಾಡಿ “ಸಂಗೀತ ಮನುಷ್ಯನ ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸುತ್ತದೆ. ಮನುಷ್ಯ – ಮನುಷ್ಯನ ನಡುವೆ ಸಾಮರಸ್ಯ ತರುತ್ತದೆ. ಸಂಗೀತಕ್ಕೆ ಚಿಕಿತ್ಸಕ ಗುಣವಿದೆ. ಅಂತ ಸಂಗೀತವನ್ನು ಪೋಷಿಸುವ ಕೆಲಸವನ್ನು ಧ್ವನಿ ಫೌಂಡೇಷನ್ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಧ್ವನಿ ಫೌಂಡೇಷನ್ ಮಹಿಳೆಯರ ಶಕ್ತಿಯಾಗಿ, ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡಲಿದೆ ಎಂಬುದು ಬಹಳ ಸಂತೋಷದ ಸಂಗತಿ. ನಮ್ಮ ಸಮಾಜದಲ್ಲಿ ದನಿಯಿಲ್ಲದವರಿಗೆ ಧ್ವನಿ ಫೌಂಡೇಶನ್ ಧ್ವನಿ ತಂದುಕೊಡುವ ಹಾಗಾಗಲಿ. ಮುಂಬರುವ ದಿನದಲ್ಲಿ ಧ್ವನಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವಂತಾಗಲಿ” ಎಂದು ಆಶಿಸಿದರು. ಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಬಿ. ಸುರೇಶ್ ಮಾತನಾಡಿ “ಇಂದು ಸಣ್ಣದಾಗಿ ಆರಂಭವಾಗಿರುವ ಧ್ವನಿಯ ಚಟುವಟಿಕೆಗಳು ಮುಂದೆ ಈ ನಾಡು…
ತೀರ್ಥಹಳ್ಳಿ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಮತ್ತು ಪ್ರಗತಿ ಪ್ರಕಾಶನ ಮೈಸೂರು ಇವರ ವತಿಯಿಂದ ಸರ್ಜಾಶಂಕರ್ ಹರಳಿಮಠ ಇವರ ಸಂಶೋಧನಾ ಕೃತಿ ‘ಕನ್ನಡತನ’ ದಿನಾಂಕ 28 ಸೆಪ್ಟೆಂಬರ್ 2024ರಂದು ತೀರ್ಥಹಳ್ಳಿಯಲ್ಲಿ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್ಾ. ದುರ್ಗಾದಾಸ್ ಇವರು ಮಾತನಾಡಿ ‘ದೇಶದಲ್ಲಿ ಜಾತಿ, ಕೋಮು ಸಂಘರ್ಷ ನಡೆದಾಗ ಸಾಮೂಹಿಕ ಬೆಂಬಲ ಇರುವುದಿಲ್ಲ. ಸೌಹಾರ್ದ, ಪ್ರೀತಿ ಬಯಸುವ ಬಹುಸಂಖ್ಯಾತರು ದೇಶದಲ್ಲಿದ್ದಾರೆ. ಆದರೆ ಒಗ್ಗಟ್ಟಿಗಾಗಿ ಧ್ವನಿಗೂಡಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಸಂಸ್ಕೃತ, ಹಿಂದಿ ಭಾಷಾ ಹೇರಿಕೆ ಭಿನ್ನವಾಗಿಲ್ಲ. ಕನ್ನಡದ ಯಜಮಾನಿಕೆಯ ಗಟ್ಟಿತನವನ್ನೇ ಕನ್ನಡದ ಕವಿಗಳು ಜಾಗೃತಗೊಳಿಸಿದ್ದಾರೆ. ಕುವೆಂಪು ಆ ಸಾಲಿಗೆ ಸೇರುವ ಅಗ್ರ ಗಣ್ಯರು. ಹಗೆತನ, ದ್ವೇಷ, ಅಸೂಯೆ ಬಿಟ್ಟು ಕನ್ನಡಿಗರು ಒಗ್ಗೂಡಬೇಕು. ಕನ್ನಡದ ಜೊತೆಗೆ ಬದುಕುವ ತುಳು, ಕೊಡವ, ಬಂಜಾರ ಮುಂತಾದ ಭಾಷೆಗಳಿಗೂ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿ ‘ಭಾಷೆ ಸ್ವಾಯತ್ತ ಅಲ್ಲ. ಅದನ್ನು ನುಡಿಯುವ, ಆಡುವ ಮನುಜನ ಸ್ಥಾನಮಾನಕ್ಕೆ ಹೊಂದಿಕೊಂಡಿದೆ.…
ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ, ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿ ‘ಕನ್ನಡ ಸಾಹಿತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳು’ ಎಂಬ ಹೆಸರಿನಲ್ಲಿ ಮೂರು ದಿನಗಳ ಕಮ್ಮಟವನ್ನು ಅಕ್ಟೋಬರ್ ಕೊನೆಯ ವಾರದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ, ಹಾವೇರಿ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿಯಿರುವ 20ರಿಂದ 45 ವರ್ಷ ವಯಸ್ಸುಳ್ಳ ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08 ಅಕ್ಟೋಬರ್ 2024. ಆಸಕ್ತ ಅಭ್ಯರ್ಥಿಗಳು http://karnatakasahithyaacademy.org ನಿಂದ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯು ರಿಜಿಸ್ಟ್ರಾರ್ ಕರಿಯಪ್ಪ ತಿಳಿಸಿದ್ದಾರೆ.
ಬೆಂಗಳೂರು : ಪರಂ ಹಿಸ್ಟರಿ ಸೆಂಟರ್ ಮತ್ತು ಪರಂ ಫೌಂಡೇಷನ್ ಇದರ ವತಿಯಿಂದ ಇತಿಹಾಸ ಮೇಲೊಂದು ಬೆಳಕು (ಯುವ ಮನಕ್ಕೆ ಭಾರತವನ್ನು ಅರಿಯುವ ಮಾರ್ಗ) ಎಂಬ ವಿಷಯದ ಬಗ್ಗೆ ‘ಬೀದಿ ನಾಟಕ ಸ್ಪರ್ಧೆ 2024’ಯನ್ನು ದಿನಾಂಕ 05 ಅಕ್ಟೋಬರ್ 2024ರಂದು ಬೆಂಗಳೂರಿನ ಬನಶಂಕರಿ 2ನೇ ಹಂತ, ಸುಚಿತ್ರ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯ ವಿಜೇತರಿಗೆ ಮೊದಲನೇ ಬಹುಮಾನ ರೂ.10,000/-, ಎರಡನೇ ಬಹುಮಾನ ರೂ.8,000/- ಮತ್ತು ಮೂರನೇ ಬಹುಮಾನ ರೂ.5,000/- ನಗದು ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9066123286 ನ್ನು ಸಂಪರ್ಕಿಸಿರಿ.
ಕನ್ನಡದ ಮುಖ್ಯ ಲೇಖಕಿಯರಲ್ಲೊಬ್ಬರಾದ ಶ್ರೀಮತಿ ಸುನಂದಾ ಬೆಳಗಾಂವಕರ ಇವರ ‘ಕಜ್ಜಾಯ’, ‘ಕೈತುತ್ತು’, ‘ಕೊಡುವುದೇನು ಕೊಂಬುವುದೇನು’, ‘ಕಾಕ ಭುಶುಂಡಿ’ (ಲಲಿತ ಪ್ರಬಂಧಗಳ ಸಂಕಲನ), ‘ಮೃದ್ಗಂಧ’ (ಕಥಾಸಂಕಲನ), ‘ಶಾಲ್ಮಲಿ’ (ಕವನ ಸಂಕಲನ), ‘ನಾಸು’, ‘ಝವಾದಿ’, ‘ಕಾಯಕ ಕೈಲಾಸ’ (ಕಾದಂಬರಿ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಚೊಚ್ಚಲ ಕಾದಂಬರಿಯಾದ ‘ನಾಸು’ ಇವರಿಗೆ ಕನ್ನಡ ಸಾಹಿತ್ಯದಲ್ಲಿ ಭದ್ರ ನೆಲೆಯನ್ನು ಒದಗಿಸಿದೆ. ‘ನಾಸು’ ಎಂದರೆ ‘ನಾಯಿ ಸೂಳೆಮಗ’ ಎಂಬ ಬೈಗುಳ ಪದದ ಅಪಭ್ರಂಶವಾಗಿದೆ. ಆಕರ್ಷಕವಾದ ತಲೆಬರಹದ ಬದಲು ಇಂಥ ಶೀರ್ಷಿಕೆಯನ್ನು ಇಡುವುದರ ಮೂಲಕ ಲೇಖಕಿಯು ಹೊಸತನವನ್ನು ಮೆರೆದಿದ್ದಾರೆ. ವಿದ್ವತ್ತಿಗೆ ಹೆಸರಾದ ಮಾಧ್ವ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಅನಂತಾಚಾರ್ಯರು ಬುದ್ಧಿ ಪಳಗಿದ, ಶ್ರದ್ಧೆ ಬೆಳಗಿದ ಶಿಕ್ಷಕರಾಗಿದ್ದು, ಕಾಳಿದಾಸನ ನಾಟಕಗಳು, ಕಾವ್ಯಗಳು, ವೇದಶಾಸ್ತ್ರ ಪುರಾಣಗಳನ್ನು ಅರಗಿಸಿಕೊಂಡವರು. ಜಾಣರನ್ನು ಬೆಳಗಿಸುವ ಗುರುಗಳು. ಆದರೆ ದಡ್ಡರನ್ನು ದಾರಿಗೆ ಹಚ್ಚುವ ತಾಳ್ಮೆ ಇಲ್ಲದವರು. ಅವರ ಮಕ್ಕಳ ಪೈಕಿ ವಿಷ್ಣು ಮತ್ತು ಅರುಂಧತಿಯರು ಮೇಧಾವಿಗಳಾಗಿ ತಂದೆಯ ಪ್ರೀತಿಗೆ ಪಾತ್ರರಾದರೆ, ಹಿರಿಯ ಮಗನಾಗಿ ಹುಟ್ಟಿ, ಓದು ತಲೆಗೆ ಹತ್ತದೆ…
ಕಲಬುರಗಿ : ರಂಗಮಂಡಲ ಬೆಂಗಳೂರು ಮತ್ತು ರಾಷ್ಟ್ರಕೂಟ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿರುವ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ತೃತೀಯ ಕವಿಗೋಷ್ಠಿಯನ್ನು ದಿನಾಂಕ 29 ಸೆಪ್ಟೆಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ತೊಗರಿನಾಡು ಕಲಬುರಗಿಯ ಐಡಿಯಲ್ ಫೈನ್ ಆರ್ಟ್ಸ್ ಕಾಲೇಜಿನ ಕಲಾ ನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಸಾಹಿತಿಗಳಾದ ಡಾ. ಕಾಶಿನಾಥ ಅಂಬಲಗೆ ಇವರು ಕಲಬುರಗಿ ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷರಾಗಿದ್ದು, ಹಿರಿಯ ಕವಿಗಳಾದ ಡಾ.ಬಸವರಾಜ ಸಾದರ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 11-30 ಗಂಟೆಗೆ ನಡೆಯಲಿರುವ ಕವಿಗೋಷ್ಠಿ 1ರ ಅಧ್ಯಕ್ಷತೆಯನ್ನು ಕನಕ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕರಾದ ಡಾ. ಸ್ವಾಮಿರಾವ ಕುಲಕರ್ಣಿ ಇವರು ವಹಿಸಲಿದ್ದು ಹಾಗೂ ಮಧ್ಯಾಹ್ನ 2-00 ಗಂಟೆಗೆ ನಡೆಯಲಿರುವ ಕವಿಗೋಷ್ಠಿ 2ರ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಮತ್ತು ಕಾದಂಬರಿಕಾರ್ತಿ ಡಾ. ಜಯದೇವಿ ಗಾಯಕವಾಡ ಇವರು ವಹಿಸಲಿರುವರು. ಸಂಜೆ ಸರ್ವಾಧ್ಯಕ್ಷರೊಂದಿಗೆ ಸಂವಾದ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.
ಮೈಸೂರು : ರಂಗಾಯಣ ಮೈಸೂರು ಇದರ ವತಿಯಿಂದ ರಂಗಾಯಣ ವಾರಾಂತ್ಯ ರಂಗಪ್ರದರ್ಶನದ ಪ್ರಯುಕ್ತ ಸಮುದಾಯ ರಾಯಚೂರು ಪ್ರಸ್ತುತ ಪಡಿಸುವ ಡಾ. ವಿಕ್ರಮ್ ವಿಸಾಜಿಯವರ ‘ರಕ್ತ ವಿಲಾಪ’ ನಾಟಕ ಪ್ರದರ್ಶನವು ದಿನಾಂಕ 29 ಸೆಪ್ಟೆಂಬರ್ 2024ರಂದು ಸಂಜೆ 6-00 ಗಂಟೆಗೆ ಮೈಸೂರು ರಂಗಾಯಣದ ಭೂಮಿಗೀತದಲ್ಲಿ ನಡೆಯಲಿದೆ. ಈ ನಾಟಕದ ನಿರ್ದೇಶನ ಪ್ರವೀಣ್ ರೆಡ್ಡಿ ಗುಂಜಹಳ್ಳಿ ಹಾಗೂ ಸಹ ನಿರ್ದೇಶನ ಶ್ರೀಮತಿ ನಿರ್ಮಲಾ ವೇಣುಗೋಪಾಲ ಇವರು ಮಾಡಿದ್ದು, ಸಂಗೀತ ಇನ್ಸಾಫ್ ಹೊಸಪೇಟೆ ನೀಡಿದ್ದು, ಬೆಳಕು – ಲಕ್ಷ್ಮಣ ಮಂಡಲಗೇರಾ, ಪ್ರಸಾಧನ – ವೆಂಕಟ್ ನರಸಿಂಹಲು ಹಾಗೂ ರಂಗ ಸಜ್ಜಿಕೆ ನಾಗರಾಜ ಸಿರವಾರ ಇವರುಗಳು ಸಹಕರಿಸಲಿದ್ದಾರೆ.
ಮೈಸೂರು : ನಟನ ರಂಗಶಾಲೆಯ ವತಿಯಿಂದ ನಟನ ಪಯಣ ರೆಪರ್ಟಿರಿ ತಂಡದ ಪ್ರಯೋಗದ ಪ್ರಯುಕ್ತ ದಿನಾಂಕ 29 ಸೆಪ್ಟೆಂಬರ್ 2024ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ‘ಅಂಧಯುಗ’ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ನಾಟಕದ ಮೂಲ ರಚನೆ ಧರ್ಮವೀರ ಭಾರತಿ, ಕನ್ನಡಾನುವಾದ ಸಿದ್ಧಲಿಂಗ ಪಟ್ಟಣ ಶೆಟ್ಟಿ ಹಾಗೂ ತಿಪ್ಪೇಸ್ವಾಮಿ. ದಿಶಾ ರಮೇಶ್ ಸಂಗೀತ ಮತ್ತು ದೃಶ್ಯ ಸಂಯೋಜನೆ ವಿನ್ಯಾಸ ಮೇಘ ಸಮೀರ ಮಾಡಿದ್ದು, ಮಂಡ್ಯ ರಮೇಶ್ ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.