Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಉದಯರಾಗ – 58’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ತಳಭಾಗದಲ್ಲಿ ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ದಿನಾಂಕ 05 ಜನವರಿ 2025ರಂದು ಬೆಳಗ್ಗೆ 6-00 ಗಂಟೆಗೆ ನಡೆಯಲಿದೆ. ಮಂಗಳೂರಿನ ಆರೋಹಣಂ ಸ್ಕೂಲ್ ಆಫ್ ಮ್ಯೂಜಿಕ್ ಇದರ ವಿದ್ವಾನ್ ಅನೀಶ್ ವಿ. ಭಟ್ ಇವರ ಶಿಷ್ಯಂದಿರಾದ ಶ್ರೀವರದಾ ಪಟ್ಟಾಜೆ, ಸುಮನಾ ಕೆ., ಚಿನ್ಮಯಿ ವಿ. ಭಟ್, ಹವ್ಯಶ್ರೀ ಕೆ.ಟಿ. ಮತ್ತು ರಕ್ಷಾ ಎ.ಆರ್. ಇವರುಗಳ ಹಾಡುಗಾರಿಕೆಗೆ ಶ್ರೀಮತಿ ಸುನಂದಾ ಪಿ.ಎಸ್. ವಯಲಿನ್ ಮತ್ತು ಶ್ರೀ ಅವಿನಾಶ್ ಬಿ. ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ.…
ಗಂಜಿಮಠ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಹಾಗೂ ಪ್ರಾದೇಶಿಕ ಘಟಕಗಳ ಸಹಯೋಗದೊಂದಿಗೆ ಯಕ್ಷಧ್ರುವ – ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 08 ಜನವರಿ 2025ರಂದು ಪೂರ್ವಾಹ್ನ 9-00 ಗಂಟೆಗೆ ಗಂಜಿಮಠದ ಒಡ್ಡೂರು ಫಾರ್ಮ್ಸ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಕೀರ್ತಿಶೇಷ ಮಿಜಾರುಗುತ್ತು ಆನಂದ ಆಳ್ವ ವೇದಿಕೆಯಲ್ಲಿ ಪೂರ್ವಾಹ್ನ 8-40 ಗಂಟೆಗೆ ಚೌಕಿ ಪೂಜೆ ನಡೆಯಲಿದ್ದು, ಬಳಿಕ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಯು. ಇವರಿಂದ ಈ ಸಮಾರಂಭ ಉದ್ಘಾಟನೆಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಪೊಳಲಿಯ ರಾಜರಾಜೇಶ್ವರಿ ಪ್ರೌಢ ಶಾಲೆಯ ಮಕ್ಕಳಿಂದ ‘ಗಿರಿಜಾ ಕಲ್ಯಾಣ’, ಮಂಚಿ ಕೊಳ್ನಾಡು ಸರಕಾರಿ ಪ್ರೌಢ ಶಾಲೆಯ ಮಕ್ಕಳಿಂದ ‘ಶಶಿಪ್ರಭಾ ಪರಿಣಯ’, ಮಣಿನಾಲ್ಕೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ‘ಸುದರ್ಶನ ವಿಜಯ’, ಮಧ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ‘ಪುಣ್ಯಕೋಟಿ’, ಫರಂಗಿಪೇಟೆ ಶ್ರೀರಾಮ ಪ್ರೌಢ ಶಾಲೆಯ ಮಕ್ಕಳಿಂದ ‘ಹನುಮೋದ್ಭವ’, ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆ ಮಕ್ಕಳಿಂದ ‘ನರಕಾಸುರ ಮೋಕ್ಷ’, ಮುಲ್ಲಕಾಡು ಸರಕಾರಿ ಪ್ರೌಢ…
ತುಮಕೂರು: ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಕೊಡಮಾಡುವ 2024ನೇ ಸಾಲಿನ ‘ಸಿದ್ಧಗಂಗಾ ಶ್ರೀ’ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಗೊ. ರು. ಚನ್ನಬಸಪ್ಪ ಆಯ್ಕೆ ಆಗಿದ್ದಾರೆ. ಪ್ರಶಸ್ತಿಯು ರೂಪಾಯಿ ಒಂದು ಲಕ್ಷ ನಗದು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದ್ದು, ಸಿದ್ಧಗಂಗಾ ಮಠದಲ್ಲಿ 21 ಜನವರಿ 2025ರಂದು ನಡೆಯುವ ಶಿವಕುಮಾರ ಸ್ವಾಮೀಜಿಯವರ 6ನೇ ವರ್ಷದ ಪುಣ್ಯಸ್ಮರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕವಿ, ವಿದ್ವಾಂಸ, ಬರಹಗಾರ ಹಾಗೂ ಕನ್ನಡ ಜಾನಪದ ತಜ್ಞರಾದ ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ ಇವರು ರುದ್ರಪ್ಪ ಮತ್ತು ಅಕ್ಕಮ್ಮ ದಂಪತಿಯ ಪುತ್ರರಾಗಿ 1930ರಲ್ಲಿ ಚಿಕ್ಕಮಗಳೂರಿನ ಗೊಂಡೇದಹಳ್ಳಿಯಲ್ಲಿ ಜನಿಸಿದರು. ಮಂಡ್ಯದ ನಿಡಗಟ್ಟದ ಶಾಲೆಯೊಂದರಲ್ಲಿ ಇಂಗ್ಲೀಷ್ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಸರ್ಕಾರಿ ವಲಯದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಜಾನಪದ ಮತ್ತು ವಚನ ಸಾಹಿತ್ಯದ ಮೇಲೆ ವಿಶೇಷ ಆಸಕ್ತಿ ಹೊಂದಿದ್ದ ಇವರು ‘ಸಾಕ್ಷಿಕಲ್ಲು’, ‘ಹೊನ್ನ ಬಿಟ್ಟೆವು ಹೊಲಕೆಲ್ಲ’,’ಕರ್ನಾಟಕ ಪ್ರಗತಿಪಥ’, ‘ಚೆಲುವಾಂಬಿಕೆ’, ‘ಕುಣಾಲ’, ‘ಬಾಗೂರು ನಾಗಮ್ಮ…
ಬೆಂಗಳೂರು : ಲೇಖಕಿ ಡಾ. ಎಲ್.ಜಿ. ಸುಮಿತ್ರಾ ಇವರು ದಿನಾಂಕ 01 ಜನವರಿ 2025 ರಂದು ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು. ಕನ್ನಡದ ಹಿರಿಯ ವಿದ್ವಾಂಸರಾದ ಡಿ. ಎಲ್. ಗುಂಡಪ್ಪ ಹಾಗೂ ಶಾರದಮ್ಮ ದಂಪತಿಯ ಪುತ್ರಿಯಾಗಿ 14 ಮಾರ್ಚ್ 1934 ರಂದು ಬೆಂಗಳೂರಿನಲ್ಲಿ ಜನಿಸಿದರು. ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ‘ಕಾವ್ಯಕಾವೇರಿ’, ‘ಸ್ಪರ್ಶರೇಖೆ’, ‘ಕರ್ನಾಟಕ ವೃತ್ತಿಗಾಯಕರು’ ಹಾಗೂ ‘ಭಾರತದ ಸಂಗೀತ ವಾದ್ಯಗಳು’ ಇವರ ಪ್ರಮುಖ ಕೃತಿಗಳು. ರೇಡಿಯೋ ಮಾಧ್ಯಮದಲ್ಲಿ ಉನ್ನತ ಜವಾಬ್ದಾರಿ ನಿರ್ವಹಿಸಿದ್ದ ಇವರು ಹೊಸದಿಲ್ಲಿಯಲ್ಲಿ ವಾರ್ತಾ ಮತ್ತು ಸಂಗೀತ ವಿಭಾಗದ ನಿರ್ದೇಶಕಿಯಾಗಿ, ಎನ್. ಸಿ. ಇ. ಆರ್. ಟಿ. ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ, ಆಕಾಶವಾಣಿಯ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರ ಸಾಹಿತ್ಯ ಕೃಷಿಗೆ ಜಾನಪದ ಲೋಕ ಹಾಗೂ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ‘ಜಾನಪದ ತಜ್ಞೆ’ ಪ್ರಶಸ್ತಿ, ಎಂಟನೆಯ ಸಂಗೀತ ಸಮ್ಮೇಳನ ಪ್ರಶಸ್ತಿ ಹಾಗೂ ಹಲವಾರು ಪ್ರಶಸ್ತಿ ಮತ್ತು ಸನ್ಮಾನಗಳು ಸಂದಿವೆ.
ಪುತ್ತೂರು : ಸಂಪ್ಯ ಉದಯಗಿರಿಯಲ್ಲಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಸ್ಯಮಂತಕ ಮಣಿ’ ಎಂಬ ತಾಳಮದ್ದಳೆ ದಿನಾಂಕ 31 ಡಿಸೆಂಬರ್ 2025ರಂದು ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು ಹಾಗೂ ಚೆಂಡೆ, ಮದ್ದಲೆಗಳಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಜಯಂತಿ ಹೆಬ್ಬಾರ್ (ಶ್ರೀಕೃಷ್ಣ), ಪ್ರೇಮಲತಾ ರಾವ್ (ನಾರದ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವ), ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ) ಸಹಕರಿಸಿದರು. ರಾಧಾಕೃಷ್ಣ ಬೋರ್ಕರ್ ಸ್ವಾಗತಿಸಿ, ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ವಂದಿಸಿ, ರಂಗನಾಥ್ ರಾವ್ ಸಹಕರಿಸಿದರು. ಕಲಾವಿದರಿಗೆ ದೇವಾಲಯದ ಅರ್ಚಕ ಪ್ರೀತಂ ಪುತ್ತೂರಾಯ ಶ್ರೀ ದೇವರ ಪ್ರಸಾದವನ್ನಿತ್ತು ಗೌರವಿಸಿದರು. ನಂತರ ಧಾರ್ಮಿಕ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಅವರನ್ನು ಅರೆಮಾದನ ಹಳ್ಳಿ ಜಗದ್ಗುರು ಪೀಠದ ಶ್ರೀ…
ಮಂಗಳೂರು : ಮೂಲ್ಕಿ ತಾಲೂಕು ಎರಡನೆಯ ಸಾಹಿತ್ಯ ಸಮ್ಮೇಳನ 08 ಫೆಬ್ರವರಿ 2025ರ ಶನಿವಾರದಂದು ಕಿನ್ನಿಗೋಳಿಯ ಐಕಳದ ಪೋಂಪೈ ಕಾಲೇಜಿನಲ್ಲಿ ನಡೆಯಲಿದ್ದು ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಸಾಹಿತಿ ಶ್ರೀಧರ ಡಿ. ಎಸ್. ಆಯ್ಕೆಯಾಗಿದ್ದಾರೆ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ತಿಳಿಸಿದ್ದಾರೆ. ಶ್ರೀಧರ ಡಿ. ಎಸ್. : ಯಕ್ಷಗಾನ ಅರ್ಥಧಾರಿ, ಪ್ರಸಂಗ ಕರ್ತೃ, ಯಕ್ಷಗಾನ ವಿಮರ್ಶಕ, ಕಥೆಗಾರ, ಕವಿ, ಕಾದಂಬರಿಕಾರರಾದ ಶ್ರೀಧರ ಡಿ. ಎಸ್. ಮೂರು ದಶಕಗಳ ಕಾಲ ಕಿನ್ನಿಗೋಳಿಯ ಪೋಂಪೈ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಿನ್ನಿಗೋಳಿಯಲ್ಲಿ ಸಮಾನ ಆಸಕ್ತ ಗೆಳೆಯರೊಂದಿಗೆ ಸೇರಿ ತಾಳಮದ್ದಲೆಗಾಗಿ ‘ಯಕ್ಷಲಹರಿ’ ಎಂಬ ಸಂಸ್ಥೆಯನ್ನು ರೂಪಿಸಿ ನಿರಂತರ ಯಕ್ಷಗಾನ ಸೇವೆ ಗೈಯುತ್ತಿದ್ದಾರೆ. ಶಿವಮೊಗ್ಗದಲ್ಲಿ ನಡೆದ 11ನೇ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಇವರು 40ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಇವರ ಬಿಡಿ ಪದ್ಯಗಳನ್ನೂ ಪರಿಗಣಿಸಿದರೆ ಐದು ಸಾವಿರಕ್ಕೂ ಹೆಚ್ಚಿನ ಯಕ್ಷಗಾನ…
ಬೆಂಗಳೂರು: ಕಲಬುರಗಿಯ ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ನಿಂದ ಕೊಡಮಾಡುವ 2025ನೇ ಸಾಲಿನ ‘ಬಸವ ಪ್ರಶಸ್ತಿ’ಗೆ ಕವಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂಪಾಯಿ 50,000 ನಗದು ಮತ್ತು ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು 11 ಜನವರಿ 2025ರಂದು ಸಂಜೆ 5.30ಕ್ಕೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದ್ದು, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಿ .ಎಸ್. ಸಿದ್ದಲಿಂಗಯ್ಯ : ಖ್ಯಾತ ವಿಮರ್ಶಕ, ಕವಿ, ಸಾಹಿತಿ ಡಾ. ಜಿ .ಎಸ್. ಸಿದ್ದಲಿಂಗಯ್ಯನವರು ದಿನಾಂಕ 20 ಫೆಬ್ರವರಿ 1931ರಂದು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಸಂಗಮ್ಮ ಹಾಗೂ ಜಿ. ಬಿ. ಶ್ರೀಕಂಠಯ್ಯನವರ ಪುತ್ರರಾಗಿ ಜನಿಸಿದರು. ಮೈಸೂರು ವಿ.ವಿ. ಮಹಾರಾಜ ಕಾಲೇಜಿನಿಂದ ಬಿ.ಎ., ಮೈಸೂರು ವಿ.ವಿ.ಯಿಂದ ಎಂ. ಎ. ಪದವಿ ಪಡೆದ ಇವರು ಸರ್ಕಾರಿ ಕಾಲೇಜಿನ ಅಧ್ಯಾಪಕ, ಪ್ರಾಧ್ಯಾಪಕ, ಪ್ರಾಂಶುಪಾಲ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು. 1989 ರಿಂದ 1992 ರವರೆಗೆ ಕನ್ನಡ ಸಾಹಿತ್ಯ…
ಕಟೀಲು : ಕಳೆದ ಹದಿನಾರು ವರುಷಗಳಿಂದ ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳನ್ನು ಮಕ್ಕಳಿಗೆ ಕಲಿಸಿಕೊಡುತ್ತಿರುವ ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ ಕಲಾಪರ್ವ ಕಟೀಲಿನ ಸರಸ್ವತೀ ಸದನದಲ್ಲಿ ದಿನಾಂಕ 28 ಡಿಸೆಂಬರ್ 2024 ಮತ್ತು ದಿನಾಂಕ 29 ಡಿಸೆಂಬರ್ 2024ರಂದು ಸಂಪನ್ನಗೊಂಡಿತು. ಯಕ್ಷಗಾನದ ಪೂರ್ವರಂಗ, ಒಡ್ಡೋಲಗಗಳು, ತಾಳಮದ್ದಲೆ, ಗಾನವೈಭವ ಯಕ್ಷಗಾನ ಪ್ರಸಂಗಗಳನ್ನು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕೋಡಂಗಿ ಬಾಲಗೋಪಾಲರಾಗಿ ಮನೀಷ್ ಗಿಡಿಗೆರೆ, ತೇಜಸ್ ಸುಂಕದಕಟ್ಟೆ, ಮನೀಷ್, ಸುಶ್ವಿತ್ ಶೆಟ್ಟಿ, ತೇಜಸ್ವಿ ಆಚಾರ್ಯ, ಜೀವನ್. ಮುಖ್ಯ ಸ್ತ್ರೀವೇಷದಲ್ಲಿ ಮೈತ್ರಿ ಕುಲಾಲ್, ಸಾನ್ವಿ ಕೋಟ್ಯಾನ್, ಹೊಗಳಿಕೆಯಲ್ಲಿ ಶಿವಾನಿ, ಷಣ್ಮುಖ ಸುಬ್ರಾಯದಲ್ಲಿ ಕ್ಷಿತಿಜ್ ಕುಲಾಲ್ ಪಾತ್ರ ವಹಿಸಿದರು. ರಂಗರಂಗಿಯನ್ನು ಶ್ರಾವ್ಯಾ, ಶ್ರೇಯಾ, ಕೋಲಾಟವನ್ನು ಸುಶ್ಮಿತಾ, ಭವ್ಯಾ, ಶ್ರೀನಿಧಿ, ಅದ್ವಿಕ್, ಧನ್ಯಶ್ರೀ, ಸುದೀಷ್ಣ, ಧನ್ಯಶ್ರೀ ಆಚಾರ್ಯ, ಶ್ರೇಯಾ ಆಚಾರ್ಯ, ಧನ್ವಿಕಾ, ಹಂಸಿಕಾ, ಪೀಠಿಕಾ ಸ್ತ್ರೀವೇಷವನ್ನು ತನ್ಮಯಿ, ಆಕಾಶ್ ಎಲ್. ಕುಲಾಲ್ ಪ್ರದರ್ಶಿಸಿದರು. ಅರ್ಧನಾರೀಶ್ವರ ಅಭೀಷ್ಣಾ, ಚಪ್ಪರ ಮಂಚವನ್ನು ಪ್ರೀತಿಕಾ ಪ್ರದರ್ಶಿಸಿದರು. ರಾಮನ ಒಡ್ಡೋಲಗವನ್ನು ಭುವನ್ ಮತ್ತು ಡಿಂಪಲ್…
ಮೈಸೂರು : “ಯಾವುದೇ ಯಶಸ್ಸಾದರೂ ಅದು ಕೇವಲ ಶ್ರಮದ ಮೇಲೆ ನಿಂತಿರುತ್ತದೆ” ಎಂದು ಬಲವಾಗಿ ನಂಬಿದವಳು ನಾನು. ಅಂತ ಒಂದು ಯಶಸ್ಸನ್ನು ದಿನಾಂಕ 28 ಡಿಸೆಂಬರ್ 2024ರ ಶನಿವಾರದಂದು ಅಕ್ಷರಶಃ ಅನುಭವಿಸಿದೆ. ‘ಸ್ವರ’ ಮತ್ತು ‘ಧ್ವನಿ’ ಓದುತ್ತಿರುವ ‘ಅರಿವು ವಿದ್ಯಾಸಂಸ್ಥೆ’ಯು ಪ್ರತೀ ವರ್ಷ ಪೋಷಕರು ಹಾಗೂ ಶಿಕ್ಷಕರಿಗಾಗಿ ‘ಅರಿವು ಹಬ್ಬ’ವನ್ನು ಆಚರಿಸುತ್ತದೆ. ಇದರಲ್ಲಿ ಆಸಕ್ತ ಪೋಷಕರು ಭಾಗವಹಿಸಬಹುದು. ಮಗಳ ಒತ್ತಾಯಕ್ಕಾಗಿ ಈ ಬಾರಿ ನಾನು ಭಾಗವಹಿಸಲು ನಿರ್ಧರಿಸಿದೆ. ‘ಕರಾವಳಿ ಜನಪದ ಪ್ರಕಾರ’ಗಳನ್ನು ಪೋಷಕರ ಮೂಲಕ ರಂಗದ ಮೇಲೆ ತರಬೇಕೆಂದು ಆಲೋಚಿಸಿದೆ. ಶಾಲೆಯ ಆಡಳಿತ ಮಂಡಳಿಯು ಇದಕ್ಕೆ ಒಪ್ಪಿತು. ಕಳೆದ ಒಂದುವರೆ ತಿಂಗಳಿಂದ ಮನೆ, ಮಕ್ಕಳು, ಹೋಟೇಲ್ ಎಲ್ಲವನ್ನೂ ಮರೆತೇ ಬಿಟ್ಟಿದ್ದೆ. ಮೊರ, ಮುಟ್ಟಾಳೆ, ಬೀಸುವ ಕಲ್ಲು, ಒನಕೆ, ಹಸಿರು ಹುಲ್ಲು ಹೀಗೆ ಕಾರಿನ ತುಂಬೆಲ್ಲ ‘ಅರಿವು ಹಬ್ಬ’ದ ಸಂಭ್ರಮವನ್ನು ಕಟ್ಟಿಕೊಂಡು ಓಡಾಡಿದ್ದಾಯಿತು. ಸುಮಾರು 15 ಜನ ಪೋಷಕರ ತಂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಜ್ಜಾದರು. ಎಲ್.ಕೆ.ಜಿ.ಯಿಂದ ಹಿಡಿದು 10ನೇ ತರಗತಿಯವರೆಗಿನ ಮಕ್ಕಳ ಪೋಷಕರ…
ವಜ್ರದಂತೆ ಪ್ರತಿಭೆಯೊಂದು ಯಕ್ಷಲೋಕದಲ್ಲಿ ತನ್ನ ಛಾಪು ಮೂಡಿಸುತ್ತಾ ಹಲವಾರು ವೇದಿಕೆ ಏರಿ ಕಲಾ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತಿರುವ ಅಪ್ರತಿಮ ಪ್ರತಿಭಾನ್ವಿತ ಕಲಾವಿದ ವಿಕೇಶ್ ರೈ ಶೇಣಿ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿ ಸಮೀಪದ ಶೇಣಿಯ ನಾರಾಯಣ ರೈ ಶೇಣಿ ಹಾಗೂ ಸರಸ್ವತಿ ಎನ್ ರೈ ಇವರ ಮಗನಾಗಿ 02.03.1991ರಂದು ವಿಕೇಶ್ ರೈ ಶೇಣಿ ಅವರ ಜನನ. ಸುಳ್ಯದ ನೆಹರು ಸ್ಮಾರಕ ಕಾಲೇಜಿನಿಂದ ಬಿಬಿಎಮ್ ಪದವಿ ಪಡೆದರು. ಯಕ್ಷಗಾನ ಗುರುಗಳು:- ನಾಟ್ಯ:-ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಶ್ರೀ ಕೋಡ್ಲ ಗಣಪತಿ ಭಟ್. ಭಾಗವತಿಗೆ:- ಶ್ರೀ ವಿಶ್ವವಿನೋದ ಬನಾರಿ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಯಾರು:- ಊರಿನಲ್ಲಿ ಯಕ್ಷಗಾನಕ್ಕೆ ಪೂರಕವಾದ ವಾತಾವರಣ ಇತ್ತು, ಅನೇಕ ಕಲಾವಿದರೂ ಇದ್ದರು. ಹಾಗಾಗಿ ಯಕ್ಷಗಾನದ ಆಸಕ್ತಿ ಬೆಳೆಯಿತು. ಮುಖ್ಯವಾಗಿ ಪ್ರೋತ್ಸಾಹಿಸಿದವರು ಡಾ. ಪ್ರಭಾಕರ ಶಿಶಿಲ, ಡಾ. ಚಂದ್ರಶೇಖರ ಧಾಮ್ಲೆ. ದಿ. ಶ್ರೀ ಸತ್ಯನ್ ದೇರಾಜೆ, ಶ್ರೀ ಭಕ್ತವತ್ಸಲ ಭಟ್ ನೀರಬಿದಿರೆ. ನೆಚ್ಚಿನ ಪ್ರಸಂಗಗಳು:-…