Author: roovari

ಬೆಂಗಳೂರು : ಕರ್ನಾಟಕ ಯಕ್ಷಧಾಮ ಮಂಗಳೂರು, ಪದ್ಮ ಕಮಲ ಟ್ರಸ್ಟ್ ಬೆಂಗಳೂರು, ಕಲ್ಕೂರ ಪ್ರತಿಷ್ಠಾನಗಳ ಸಹಯೋಗದೊಂದಿಗೆ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಪರ್ವ’ ಸರಣಿ ಕಾರ್ಯಕ್ರಮದ ಅಂಗವಾಗಿ ಸುವರ್ಣ ಸಂಮಾನ – ಯಕ್ಷಗಾನ ಪ್ರದರ್ಶನ ದಿನಾಂಕ 09 ಜೂನ್ 2025ರಂದು ಬೆಂಗಳೂರಿನ ಪರಂಪರಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಯಕ್ಷಗಾನ ಸಂಶೋಧಕ ಹಾಗೂ ವಿದ್ವಾಂಸರಾದ ಆನಂದರಾಮ ಉಪಾಧ್ಯ ಮಾತನಾಡಿ “ಸಂಘಟನೆ ಮತ್ತು ನಿರಂತರತೆ ಎರಡೂ ಸುಲಭದ್ದಲ್ಲ. ಎಪ್ಪತ್ತರ ದಶಕದಲ್ಲಿ ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ, ಸುಮಾರು ಐವತ್ತು ವರ್ಷಗಳ ಸಾರ್ಥಕ ದಿಗ್ವಿಜಯವನ್ನು ಸಾಧಿಸಿದ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರು ಯಕ್ಷ ಯುಗ ಪ್ರವರ್ತಕರು. ಅನೇಕ ಮಕ್ಕಳ ಮೇಳಗಳು ಇವತ್ತು ಹುಟ್ಟಿ, ಪ್ರದರ್ಶನಗೊಳ್ಳುವಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಯಶಸ್ಸಿನ ಗಾಥೆಯೇ ಮೂಲ ಪ್ರೇರಣೆ. ಮುಗ್ಧ ಮನಸ್ಸಿನ ಮಕ್ಕಳಲ್ಲಿ ಪರಂಪರೆಯ ಯಕ್ಷಗಾನದ ಅಭಿರುಚಿಯನ್ನು ಮೂಡಿಸಿ, ಯಕ್ಷಗಾನ ಪ್ರೇಕ್ಷಕರ ಸಹೃದಯತೆಯನ್ನು ತಿದ್ದಿದ ಮಕ್ಕಳ ಮೇಳ ಐತಿಹಾಸಿಕ ದಾಖಲೆಯನ್ನು ಮೆರೆದಿದೆ” ಎಂದು…

Read More

ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಖ್ಯಾತ ಕವಿ, ಸಾಹಿತಿ ಹೆಚ್. ಎಸ್. ವೆಂಕಟೇಶಮೂರ್ತಿ ಇವರಿಗೆ ನುಡಿ ನಮನ ಹಾಗೂ ಖ್ಯಾತಿ ಗಾಯಕಿ ಸಂಗೀತ ಕಟ್ಟಿ ಇವರಿಂದ ಗಾಯನ ಕಾರ್ಯಕ್ರಮ ದಿನಾಂಕ 15 ಜೂನ್ 2025ರ ಭಾನುವಾರ ಬೆಳಗ್ಗೆ ಘಂಟೆ 10.00 ರಿಂದ ಕೆಂಗೇರಿ ಉಪನಗರದ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಯಶವಂತಪುರ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಧೀಂದ್ರ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಖ್ಯಾತ ಕವಿ ಡಾ. ಬಿ. ಆರ್. ಲಕ್ಷ್ಮಣರಾವ್ ನುಡಿ ನಮನ ಸಲ್ಲಿಸಲಿದ್ದಾರೆ. ಪ್ರಜಾವಾಣಿ ಸಂಪಾದಕರಾದ ರವೀಂದ್ರ ಭಟ್, ಖ್ಯಾತ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಪ್ರಾಧ್ಯಾಪಕಿ ಹಾಗೂ ಲೇಖಕಿಯಾದ ಡಾ. ವತ್ಸಲ ಮೋಹನ್, ಎಚ್. ಎಸ್. ವಿ. ಕುರಿತು ಮಾತನಾಡಲಿದ್ದಾರೆ‌ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ ಪ್ರಕಾಶಮೂರ್ತಿ ಡಾ. ಜೈರಾಮ್, ಡಾ. ಮಂಜುನಾಥ್, ಡಾ. ವೆಂಕಟಸ್ವಾಮಿ, ಡಾ, ವಿನಯ್ ಪಾಲ್ಗೊಳ್ಳಲಿದ್ದಾರೆ. ಹೆಚ್. ಎಸ್.…

Read More

ಉಡುಪಿ : ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ ಪಂಡಿತ ಪೆರ್ಲ ಕೃಷ್ಣ ಭಟ್ ಇವರ ನೆನಪಿನಲ್ಲಿ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಅನುಕ್ರಮವಾಗಿ ಅರ್ಥಧಾರಿ ಹವ್ಯಾಸಿ ವೇಷಧಾರಿ ಸಂಘಟಕ ಡಾ. ಜಿ.ಎಲ್. ಹೆಗಡೆ ಹಾಗೂ ಅರ್ಥಧಾರಿ ಹವ್ಯಾಸಿ ವೇಷಧಾರಿ ಸರ್ಪಂಗಳ ಈಶ್ವರ ಭಟ್ ಇವರು ಆಯ್ಕೆಯಾಗಿದ್ದಾರೆ. ದಿನಾಂಕ 12 ಜುಲೈ 2025ರಂದು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ತಾಳಮದ್ದಲೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂಬುವುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ. ಪ್ರಶಸ್ತಿಯು ರೂ.20,000/- ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ.

Read More

ಮಡಿಕೇರಿ : ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಮೊದಲಬಾರಿಗೆ ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿ ಬಿ.ಎ.ಪಿ.ಎನ್. ಹಿಂದೂ ದೇವಾಲಯದಲ್ಲಿ ದಿನಾಂಕ 31 ಮೇ 2025ರಂದು ನಡೆದ ಗುರುವಂದನಾ ಸಂಸ್ಕೃತಿ ಸಿಂಚನ ಕಾರ್ಯಕ್ರಮದಲ್ಲಿ ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ. ಗಣೇಶ್ ರೈ ಇವರಿಗೆ ‘ಸಂಸ್ಕೃತಿ ಶಿಲ್ಪಕಲಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸನಾತನ್ ವೇದಿಕ್ ಸಂಸ್ಥಾನದ ಗುರುಗಳಾದ ಶ್ರೀ ಶ್ರೀ ಶ್ರೀ ಪ್ರೋಫೆಸರ್ ಸ್ವಾಮಿ ಚೈತನ್ಯಾನಂದ ಸರಸ್ವತಿಯವರ ಸಮ್ಮುಖದಲ್ಲಿ ಕಲಾವಿದೆ ಬಿ.ಕೆ. ಗಣೇಶ್ ರೈ ಹಾಗೂ ಮಂಜುಳಾ ಗಣೇಶ್ ರೈ ದಂಪತಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಹಿಂದೂ ಮಂದಿರದ ಅವರಣದಲ್ಲಿರುವ ಪ್ರಮುಖ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬುಧಾಬಿ ಹಿಂದೂ ಮಂದಿರದ ಮುಖ್ಯಸ್ಥರಾದ ಶ್ರೀ ಬ್ರಹ್ಮವಿಹಾರಿ ದಾಸ್ ಸ್ವಾಮೀಜಿ, ಬೆಳಗಾವಿ ನಿಡಸೋಸಿ ಶ್ರೀ ಜಗದ್ಗುರು ದುರುದುಂಡೇಶ್ವರ ಮಠದ ಶ್ರೀ ಶ್ರೀ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ, ಗೋವಾ ರಾಜ್ಯದ ಶ್ರೀ ದತ್ತ ಪದ್ಮನಾಭ ಪೀಠದ ಪದ್ಮಶ್ರೀ ಪುರಸ್ಕೃತ ಶ್ರೀ ಶ್ರೀ ಸದ್ಗುರು ಬ್ರಹ್ಮೇಶನಂದನಾಚಾರ್ಯ…

Read More

ಕುಂದಾಪುರ : ಶ್ರೀ ಗೆಜ್ಜೆನಾದ ಯಕ್ಷಗಾನ ಕಲಾಮಂಡಳಿ ಕುಂದಾಪುರ ಇವರ 5ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಂಘದ ಕಲಾವಿದರು ಮತ್ತು ಬಡಗಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 14 ಜೂನ್ 2025ರಂದು ಸಂಜೆ 7-30 ಗಂಟೆಗೆ ಕುಂದಾಪುರದ ಹೇರಿಕುದ್ರು ಮಾನಸ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಮಹಾಬಲ ಪೂಜಾರಿ ಅವರ ಪದ್ಯ ರಚನೆಯ ಶ್ರೀಕಾಂತ್ ಕಲ್ಕೂರ್ ಅವರ ಕಥಾ ಹಂದರ ಹಂಗಳೂರಿನ ಮಹಿಮೆಯನ್ನು ಸಾರುವ ಪುಣ್ಯ ಕಥನಕ ‘ಹಂಗಳೂರು ಶ್ರೀ ಬ್ರಹ್ಮಲಿಂಗೇಶ್ವರ ಮಹಿಮೆ’ ಎಂಬ ಪ್ರಸಂಗ ಪ್ರದರ್ಶನಗೊಳ್ಳಲಿದೆ.

Read More

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಈ ಶೈಕ್ಷಣಿಕ ವರ್ಷದ 2025ನೇ ಸಾಲಿನ 105ನೇ ‘ಸಾಹಿತ್ಯ ಅಭಿರುಚಿ’ ಕಾರ್ಯಕ್ರಮವು ದಿನಾಂಕ 10 ಜೂನ್ 2025ರಂದು ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಚೇರ್ಮೆನ್ ರವೀಂದ್ರ ಶೆಟ್ಟಿ ಉಳಿದೊಟ್ಟು ಇವರು ವಹಿಸಿದ್ದು, ಮುಖ್ಯ ಸಂಪನ್ಮೂಲ ಅತಿಥಿಯಾಗಿ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರು ಹಾಗೂ ಲೇಖಕರಾದ ರವೀಂದ್ರ ರೈ ಕಲ್ಲಿಮಾರ್ ಹಾಗೂ ಹೆಸರಾಂತ ನಿರೂಪಕಿ ನಮ್ಮ ಕುಡ್ಲ ಚಾನೆಲ್ ಕಾರ್ಯಕ್ರಮ ನಿರೂಪಕಿ ಡಾ. ಪ್ರಿಯ ಹರೀಶ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ…

Read More

ಬದಿಯಡ್ಕ: ಬದಿಯಡ್ಕದಲ್ಲಿರುವ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಸಾರ್ವಜನಿಕ ಗ್ರಂಥಾಲಯದಲ್ಲಿ ಕವಿಯ 110ನೇ ಜನ್ಮ ದಿನಾಚರಣೆ ಹಾಗೂ ಕವಿ ನಮನ ಕಾರ್ಯಕ್ರಮ ದಿನಾಂಕ 08 ಜೂನ್ 2025ರ ಭಾನುವಾರದಂದು ನಡೆಯಿತು. ಕಾರ್ಯಕ್ರಮವನ್ನು ಕಯ್ಯಾರರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವವಕ ಮೂಲಕ ಉದ್ಘಾಟಿಸಿದ ನಿವೃತ್ತ ಮುಖ್ಯೋಪಾಧ್ಯಾಯ, ಸಾಹಿತಿ ಡಾ. ಬೇ. ಸೀ. ಗೋಪಾಲಕೃಷ್ಣ ಭಟ್ ಮಾತನಾಡಿ “ನಾಡೋಜ ಕವಿ ಕಿಂಞಣ್ಣ ರೈಗಳು ಡಾ. ಕಯ್ಯಾರ ಮುನ್ನಡೆಸಿದ ಕನ್ನಡ ಪರ ಚಳವಳಿಗಳು ಎಂದಿಗೂ ಅಪೂರ್ವವಾದುದು. ಅವರ ಕಾವ್ಯಕ್ಕಿದ್ದ ಶಕ್ತಿ ವ್ಯವಸ್ಥೆಯನ್ನು ಬಡಿದೆಬ್ಬಿಸ ಬಹುದಾದ ಯುಗ ಪ್ರವರ್ತಕ” ಎಂದು ನುಡಿದರು. ಗ್ರಂಥಾಲಯ ಸಮಿತಿಯ ಅಧ್ಯಕ್ಷರಾದ ರಾಜೀವನ್‌ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಬದಿಯಡ್ಕ ಗ್ರಾ. ಪಂ. ಇದರ ಮಾಜಿ ಉಪಾಧ್ಯಕ್ಷೆ ಮಾಹಿನ್ ಕೇಳೋಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಿಕ್ಷಕಿ ಅನಿತಾ ಮಾತನಾಡಿ “ಮಹಾನ್ ಕವಿಗಳಾಗಿದ್ದ ಕಯ್ಯಾರರು ಅವಕಾಶಗಳಿದ್ದರೂ ಬೇರೆಡೆ ಹೋಗದೆ ಹುಟ್ಟೂರಲ್ಲೇ ನಿರ್ಮಿಸಿದ ಸಾಧನೆಗಳು ಅಪೂರ್ವವಾದುದು. ಅವರು ಅಧ್ಯಕ್ಷರಾಗಿದ್ದ ವೇಳೆ ಕುಗ್ರಾಮವಾಗಿದ್ದ ವಿದ್ಯಾಗಿರಿ ಹಾಗೂ ಉದಯಗಿರಿಗಳಲ್ಲಿ…

Read More

ಉಡುಪಿ ; ಕೊಡವೂರು ಶ್ರೀ ಶಂಕರನಾರಾಯಣ ದೇವಳ ಹಾಗೂ ನೃತ್ಯ ನಿಕೇತನ ಕೊಡವೂರು ಜಂಟಿಯಾಗಿ ಆಯೋಜಿಸಿದ್ದ ನೃತ್ಯ ಶಂಕರ ನಾಟ್ಯ ಸರಣಿಯ ನೂರನೇ ಕಾರ್ಯಕ್ರಮ ದಿನಾಂಕ 09 ಜೂನ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ ಶ್ರದ್ಧೆ, ಬದ್ಧತೆಯಿಂದ ಶ್ರೇಷ್ಠತೆ ಪಡೆದುಕೊಂಡ ನೃತ್ಯ ನಿಕೇತನ ಕೊಡವೂರು ಸಂಸ್ಥೆ ಹಲವಾರು ನೃತ್ಯ ವಿದ್ಯಾರ್ಥಿಗಳೊಂದಿಗೆ ನೃತ್ಯ ಗುರುಗಳನ್ನೂ ಸೃಷ್ಟಿಸಿ ನಮ್ಮ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದೆ. ಕಲೆ ಯಾವತ್ತೂ ಕಲಿಕೆಗೆ ಪೂರಕವಾಗಿದ್ದು ಅದು ಎಂದಿಗೂ ಮಾರಕವಾಗಿರಲು ಸಾಧ್ಯವಿಲ್ಲ” ಎಂಬ ಆಶಯ ವ್ಯಕ್ತ ಪಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಜಿ. ಕೊಡವೂರು ಅಭಿನಂದನಾ ಮಾತುಗಳನ್ನಾಡಿದರು . ಉದ್ಯಮಿಗಳಾದ ಸಾಧು ಸಾಲಿಯಾನ್, ಕಲಾ ಪೋಷಕರಾದ ವಿಶ್ವನಾಥ್ ಶೆನೋಯ್, ರಂಗ ಕಲಾವಿದ ಎಮ. ಶ್ರೀನಿವಾಸ್ ಭಟ್ ಶುಭ ಹಾರೈಸಿದರು. ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಾಜ…

Read More

ಮನಸ್ಸು” ಸೇವಾಶ್ರಮ! ಭಾವಲೋಕಕ್ಕೆ ಸುಸ್ವಾಗತ ಕಾರು ನಿಲ್ಲಿಸಿ ಗೇಟಿನ ಮೇಲೆ ತೂಗು ಹಾಕಿದ್ದ ಫಲಕವನ್ನೊಮ್ಮೆ ಓದಿದ ಸಾಗರ್. “ಹ್ಮ್……ಎಷ್ಟು ಚೆಂದದ ಹೆಸರು, ಮನಸ್ಸು…..ಹಾ ಮನಸ್ಸು” ಪುನರುಚ್ಛರಿಸಿದವನು ಕಾರನ್ನು ಗೇಟಿನ ಹೊರಗಡೆಯಿದ್ದ ದೇವದಾರು ಮರದ ಕೆಳಗೆ ನಿಲ್ಲಿಸಿ ಮೊಬೈಲ್ ತೆಗೆದು ಕರೆ ಮಾಡಿದ. “ಮಹೋದಯ, ಬಂದಿದ್ದೇನೆ…..ಗೇಟಿನ ಹೊರಗಿರುವೆ” ಎಂದಾಗ “ಸರಿ, ಒಳಗೆ ಬನ್ನಿ” ಅತ್ತ ಕಡೆಯಿಂದ ಹೇಳಿದ್ದೇ ಗೇಟಿನ ಬಳಿ ಬಂದು ನಿಂತ. “ಕೌನ್ ಹೋ ತುಮ್?” ಸೆಕ್ಯೂರಿಟಿ ಗಾರ್ಡ್ ಪ್ರಶ್ನೆಗೆ “ಮಹೋದಯ್ ಬುಲಾಯ” ಎಂದು ಹೇಳಿದಾಗ “ಠೀಕ್ ಹೈ ಸಾಬ್” ಗೇಟು ತೆರೆದು ಒಳಬಿಟ್ಟ. ಗೇಟು ದಾಟಿ ಒಳಬಂದವನ ಮನಸ್ಸೂ ಚಿಟ್ಟೆಯ ಲಾರ್ವದಂತೆ ಮೆಲ್ಲಮೆಲ್ಲನೆ ತೆವಳಲಾರಂಭಿಸಿತು ಮಹೋದಯರ ಕೊಠಡಿ ಕಡೆಗೆ. ನಡೆಯುತ್ತಿದ್ದವನೊಮ್ಮೆ ಸುತ್ತಲೂ ಕಣ್ಣಾಡಿಸಿದ. ಐದಾರು ವರ್ಷದ ಪುಟ್ಟ ಮಗುವಿನಿಂದ ಹಿಡಿದು ಎಂಬತ್ತರ ಹರೆಯದವರೆಗಿನ ಬದುಕಿನ ಎಲ್ಲಾ ಮುಖ್ಯಘಟ್ಟಗಳೂ ಒಂದೇ ಬಿಂದುವಿನಲ್ಲಿ ಸಂಧಿಸಿದಂತೆ ಕಂಡಿತು. ಎಲ್ಲರೂ ತಂತಮ್ಮ ಪಾಡಿಗೆ ತಮ್ಮದೇ ಲೋಕದಲ್ಲಿ ವಿಹರಿಸುವವರು ಹೊರಗಿನ ಆಗುಹೋಗುಗಳ ಕುರಿತು ಚಿಂತೆಯಿಲ್ಲ. ಎಷ್ಟು ಚೆಂದದ…

Read More

ಮಂಗಳೂರು: ಮಂಗಳೂರಿನ ನೃತ್ಯಾಂಗನ್ ಸಂಸ್ಥೆ ಆಯೋಜಿಸಿದ್ದ ‘ಯುವ ನೃತ್ಯೋತ್ಸವ – 2025’ ಕಾರ್ಯಕ್ರಮವು ದಿನಾಂಕ 08 ಜೂನ್ 2025ರ ಭಾನುವಾರದಂದು ಮಂಗಳೂರಿನ ಡಾನ್‌ ಬಾಸ್ಕೊ ಹಾಲ್‌ನಲ್ಲಿ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರಿನ ಭರತಾಂಜಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ಮಾತನಾಡಿ “’ನೃತ್ಯಾಂಗನ್’ನ ‘ರಾಧಿಕಾ ಶೆಟ್ಟಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ವೇದಿಕೆ ಒದಗಿಸುತ್ತಿದ್ದಾರೆ” ಎಂದರು. ಭರತನಾಟ್ಯದ ಲಾಲಿತ್ಯ, ಒಡಿಸ್ಸಿ ನೃತ್ಯದ ಭಕ್ತಿ ಭಾವ, ಸಮೂಹ ನೃತ್ಯದ ಸೊಬಗಿನೊಂದಿಗೆ ಯುವ ಕಲಾವಿದೆಯರು ಕಲಾರಸಿಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಉಡುಪಿಯ ಶ್ರೇಷ್ಠಾ ದೇವಾಡಿಗ, ಮೈಸೂರಿನ ಪೂಜಾ ಸುಗಮ್ ಮತ್ತು ಕಿನ್ನಿಗೋಳಿಯ ಶ್ರೇಯಾ ಜಿ. ಭರತನಾಟ್ಯ, ಬೆಂಗಳೂರಿನ ಪೃಥ್ವಿ ನಾಯಕ್ ಒಡಿಸ್ಸಿ ನೃತ್ಯ ಪ್ರದರ್ಶನ ನೀಡಿದರು. ನಗರದ ಭರತಾಂಜಲಿ ಸಂಸ್ಥೆಯ ಸದಸ್ಯೆಯರಿಂದ ಸಮೂಹ ನೃತ್ಯ ಪ್ರದರ್ಶಿಸಲ್ಪಟ್ಟಿತು.    ಶ್ರೇಷ್ಠಾ ದೇವಾಡಿಗ    ಪೂಜಾ ಸುಗಮ್      ಶ್ರೇಯಾ ಜಿ. ಪೃಥ್ವಿ ನಾಯಕ್

Read More