Author: roovari

ಬೆಳ್ತಂಗಡಿ : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ‘ಯಕ್ಷಾವತರಣ – 6’ ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ, ಸಾಂಸ್ಥಿಕ ನೇತಾರ ಯು. ವಿಜಯ ರಾಘವ ಪಡ್ವೆಟ್ನಾಯ ಸಂಸ್ಮರಣೆ, ಯಕ್ಷಧ್ರುವ ಪಟ್ಲ ಗಾನಯಾನ ರಜತಪರ್ವ ಕಾರ್ಯಕ್ರಮಗಳನ್ನು ದಿನಾಂಕ 04 ಆಗಸ್ಟ್ 2025ರಿಂದ 10 ಆಗಸ್ಟ್ 2025ರವರೆಗೆ ಬೆಳ್ತಂಗಡಿಯ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಯು. ಶರತ್ ಕೃಷ್ಣ ಪಡ್ವೆಟ್ನಾಯ ಇವರು ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ ಸಿಂಹ ಸಾಯಕ್ ಹಾಗೂ ನ್ಯಾಯವಾದಿ ಬಿ.ಕೆ. ಧನಂಜಯ ರಾವ್ ಉಪಸ್ಥಿತರಿರುತ್ತಾರೆ. ಈ ತಾಳಮದ್ದಳೆ ಸಪ್ತಾಹದಲ್ಲಿ ಪ್ರತಿದಿನ ವಿಭಿನ್ನ ಪ್ರಸಂಗಗಳು ಹಾಗೂ ಪ್ರಸಿದ್ಧ ಕಲಾವಿದರು ಭಾಗವಹಿಸಿ ಕಲಾತ್ಮಕ ಪ್ರದರ್ಶನ ನೀಡಲಿದ್ದಾರೆ. ದಿನಾಂಕ 04 ಆಗಸ್ಟ್ 2025ರಂದು ‘ವಿಭೀಷಣ ನೀತಿ’, ದಿನಾಂಕ 05 ಆಗಸ್ಟ್ 2025ರಂದು ‘ಕರ್ಣಪರ್ವ’,…

Read More

ಉಡುಪಿ : ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಮಾರ್ಪಲ್ಲಿ ಇವರ 40ರ ಸರಣಿ ಕಾರ್ಯಕ್ರಮ ಅಂಗವಾಗಿ ದಿನಾಂಕ 27 ಜುಲೈ 2025 ಭಾನುವಾರದಂದು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಚ್ಚುಲ್ ಕೋಡು ಕುಕ್ಕಿಕಟ್ಟೆ ಇಲ್ಲಿ ‘ಶ್ರೀ ರಾಮ ದರ್ಶನ’ ಎಂಬ ಪ್ರಸಂಗದ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರು ಶ್ರೀ ಗೋಪಾಲ ಗಾಣಿಗ ಹೆರ0ಜಾಲು, ಚೆಂಡೆ ಮತ್ತು ಮದ್ದಲೆಯಲ್ಲಿ ಅಜಿತ್ ಕುಮಾರ್, ರತ್ನಾಕರ್ ಶೆಣೈ ಹಾಗೂ ಮುಮ್ಮೇಳದಲ್ಲಿ ರುಕ್ಮಾ0ಗದನಾಗಿ ಶ್ರೀಯುತ ರವಿರಾಜ್ ಪನಿಯಾಳ, ಮೋಹಿನಿಯಾಗಿ ಶ್ರೀಯುತ ಶಶಿಕಾಂತ ಶೆಟ್ಟಿ, ವಿಂದ್ಯಾವಳಿಯಾಗಿ ಶ್ರೀಯುತ ಸತೀಶ್ ನಾಯಕ್ ಬೆಳಂಜೆ, ವಿಷ್ಣು ಶ್ರೀಯುತ ಪಶುಪತಿ ಶಾಸ್ತ್ರಿ, ಧರ್ಮಂಗದ ಶ್ರೀಯುತ ಪ್ರಸಾದ್ ಭಟ್ಕಳ ಮುಂತಾದ ಸುಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು.

Read More

ಮೈಸೂರು : ಶ್ರೀ ನಟರಾಜ ಪ್ರತಿಷ್ಠಾನ ಮತ್ತು ವಾತ್ಸಲ್ಸ ಶಿಕ್ಷಣ ಮಹಾವಿದ್ಯಾಲಯ ಇದರ ವತಿಯಿಂದ ಡಾ. ಯಶೋಧರ ಕೆ. ವಿರಚಿತ ‘ವಿಚಾರಧಾರೆ’ ಪುಸ್ತಕ ಬಿಡುಗಡೆ ಸಮಾರಂಭವನ್ನು ದಿನಾಂಕ 02 ಆಗಸ್ಟ್ 2025ರಂದು ಬೆಳಿಗ್ಗೆ 11-00 ಗಂಟೆಗೆ ನಟರಾಜ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿಗಳಾದ ಡಾ. ಎಸ್. ಶಿವರಾಜಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಮಾನ್ಯ ಕುಲಪತಿಗಳಾದ ಪ್ರೊ. ಎನ್.ಕೆ. ಲೋಕನಾಥ್ ಇವರು ಗ್ರಂಥ ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಸಿ.ಜಿ. ವೆಂಕಟರಮಣ ಶೆಟ್ಟಿ ಮತ್ತು ಅಧ್ಯಾಪಕರಾದ ಶ್ರೀಮತಿ ಮಾಧುರಿ ಶ್ರೀರಾಮ್ ಇವರುಗಳು ಕೃತಿ ಕುರಿತು ಮಾತನಾಡಲಿದ್ದಾರೆ.

Read More

ಮಲ್ಪೆ : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇದರ ವತಿಯಿಂದ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ವಿದ್ಯಾರ್ಥಿಗಳಿಗೆ ದಿನಾಂಕ 28 ಜುಲೈ 2025ರಂದು ಯಕ್ಷಶಿಕ್ಷಣ ತರಬೇತಿಯು ಉದ್ಘಾಟನೆಗೊಂಡಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಹಿರಿಯ ಶಿಕ್ಷಕರಾದ ಶ್ರೀ ಸತೀಶ್ ಭಟ್ ಇವರು ವಹಿಸಿದ್ದರು. ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಮುರಲಿ ಕಡೆಕಾರ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಳೆದ ಮಾರ್ಚ್ ತಿಂಗಳಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಒಂದು ವಾರ ನಡೆದ ಸನಿವಾಸ ಶಿಬಿರದಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿಗಳು ಸ್ವತಃ ಮುಖವರ್ಣಿಕೆಯನ್ನು ಮಾಡಿಕೊಂಡು ಕುಣಿದು ಬಾಲಗೋಪಾಲ ಪ್ರದರ್ಶನಗೈದರು. ಕಾರ್ಯಕ್ರಮದಲ್ಲಿ ಶಾಲಾ ಹಳೆವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಶ್ರೀಧರ್ ಕೋಟ್ಯಾನ್, ಯಕ್ಷಗಾನ ಗುರುಗಳಾದ ಶ್ರೀ ಕೇಶವ ರಾವ್ ಬಡನಿಡಿಯೂರು ಹಾಗೂ ಯಕ್ಷಗಾನದ ಮಾರ್ಗದರ್ಶಕ ಶಿಕ್ಷಕಿಯಾದ ಶ್ರೀಮತಿ ವಾಣಿಶ್ರೀ ಉಪಸ್ಥಿತರಿದ್ದರು. ಯಕ್ಷ ಶಿಕ್ಷಣದ ವಿದ್ಯಾರ್ಥಿಗಳಿಂದ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಹಾಗೂ ಧನ್ಯವಾದ ಕಾರ್ಯಕ್ರಮ ನೆರವೇರಿತು.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮುಷ್ಟಿ ಪ್ರಜ್ಞೆಯ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಅಲ್ಪ ಸಂಖ್ಯಾತರ ಪ್ರತಿನಿಧಿಯಾಗಿ ಜೈನ ಸಮುದಾಯಕ್ಕೆ ಸೇರಿದ ಗುಡಿಬಂಡೆ ಅನುರಾಧ ಆನಂದ್ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ 9 (3)ರಲ್ಲಿ ಮಾನ್ಯ ಅಧ್ಯಕ್ಷರಿಗೆ ದತ್ತವಾಗಿರುವ ಅಧಿಕಾರದನ್ವಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ನಾಮ ನಿರ್ದೇಶನ ಮಾಡಿದ್ದಾರೆ. ಶ್ರೀಮತಿ ಗುಡಿಬಂಡೆ ಅನುರಾಧ ಆನಂದ್ ಇವರು ಎರಡು ಬಾರಿ ಗುಡಿಬಂಡೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಸ್ವತ: ಬರಹಗಾರರಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕನ್ನಡ ಪ್ರೇಮ ಮತ್ತು ನಾಡಿನ ಕುರಿತು ಅಭಿಮಾನ ಕನ್ನಡ ಸಾಹಿತ್ಯ ಪರಿಷತ್ತಿಗೆ ಇನ್ನಷ್ಟು ಕ್ರಿಯಾತ್ಮಕತೆಯನ್ನು ತರಲಿದೆ.

Read More

ಬೆಂಗಳೂರು : ಸಮತ್ವ ಫೌಂಡೇಷನ್ (ರಿ.) ಇದರ ವತಿಯಿಂದ ಸಮತ್ವ ವಾರ್ಷಿಕೋತ್ಸವವನ್ನು ದಿನಾಂಕ 03 ಆಗಸ್ಟ್ 2025ರಂದು ಬೆಂಗಳೂರು ಗಿರಿನಗರದ ಸಂಸ್ಕೃತ ಭಾರತಿ ಅಕ್ಷರಂ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಂಜೆ 4-00 ಗಂಟೆಗೆ ನಡೆಯುವ ಜೂನಿಯರ್ ಕಾನ್ಸರ್ಟ್ ನಲ್ಲಿ ಕುಮಾರಿ ಪ್ರಣವಿ ಗುರುಪ್ರಸನ್ನ, ಅಚ್ಯುತ್ ಎಂ. ಆತ್ರೇಯ, ವಿದ್ವಾನ್ ನಾಗೇಂದ್ರ ಪ್ರಸಾದ್ ಎಸ್.ಪಿ. ಮತ್ತು ಪ್ರಣವ್ ಎಸ್. ಬಾಲಕೃಷ್ಣ ಇವರುಗಳು ಕಾರ್ಯಕ್ರಮ ನೀಡಲಿದ್ದಾರೆ. 6-00 ಗಂಟೆಯಿಂದ ವಿದ್ವಾನ್ ರಮಣ ಬಾಲಚಂದ್ರನ್, ವಿದ್ವಾನ್ ಅರ್ಜುನ್ ಕುಮಾರ್ ಮತ್ತು ವಿದ್ವಾನ್ ವಾಜ್ಹಪಳ್ಳಿ ಆರ್. ಕೃಷ್ಣಕುಮಾರ್ ಇವರುಗಳು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.

Read More

ಬೆಂಗಳೂರು : ದೃಶ್ಯ ರಂಗತಂಡ ಪ್ರಯೋಗಿಸುತ್ತಿರುವ ದಾಕ್ಷಾಯಿಣಿ ಭಟ್ ಎ. ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಮೃಚ್ಛಕಟಿಕ’ ನಾಟಕ ಪ್ರದರ್ಶನವನ್ನು ದಿನಾಂಕ 01 ಆಗಸ್ಟ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಶೂದ್ರಕ ಇವರು ರಚಿಸಿದ್ದು, ಬನ್ನಂಜೆ ಗೋವಿಂದಾಚಾರ್ಯ ಇವರು ಕನ್ನಡಕ್ಕೆ ಅನುವಾದಿಸಿದ್ದು ಗಜಾನನ ಟಿ. ನಾಯ್ಕ್ ಸಂಗೀತ ನೀಡಿರುತ್ತಾರೆ.

Read More

ಉಡುಪಿ : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇವರ ವತಿಯಿಂದ ಹಾಗೂ ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಎಂ.ಜಿ.ಎಂ. ಕಾಲೇಜಿನ ಸಾಂಗತ್ಯದಲ್ಲಿ ‘ಬನ್ನಂಜೆ ಉಡುಪಿ ನಮನ’ ಕಾರ್ಯಕ್ರಮವನ್ನು ದಿನಾಂಕ 03 ಆಗಸ್ಟ್ 2025ರಂದು ಬೆಳಗ್ಗೆ 8-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 8-00 ಗಂಟೆಗೆ ಬನ್ನಂಜೆಯವರ ಮೂಡುಬೆಟ್ಟಿನ ಮೂಲ ಮನೆಯಲ್ಲಿ ಪ್ರಾರ್ಥನೆ, ಆದಿ ಉಡುಪಿ ಶಾಲೆಯಿಂದ ನಡೆಯುವ ಮೆರವಣಿಗೆಗೆ ನಾಡೋಜ ಪ್ರೊ. ಕೆ.ಪಿ. ರಾವ್ ಇವರು ಚಾಲನೆ ನೀಡಲಿದ್ದಾರೆ. 9-20 ಗಂಟೆಗೆ ಬನ್ನಂಜೆಯವರ ಕೃತಿ ಆಧಾರಿತ ಯಕ್ಷಗಾನ ಪ್ರಸ್ತುತಿ ನಡೆಯಲಿದೆ. 10-00 ಗಂಟೆಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ವೇದವ್ಯಾಸಾಚಾರ್ಯ ಶ್ರೀಶಾನಂದರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಹಿರಿಯ ಸಾಹಿತಿ ಶ್ರೀಮತಿ ವೈದೇಹಿಯವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. 11-45, 2-00ಮತ್ತು 3-45 ಗಂಟೆಗೆ ಕವಿತಾ ಉಡುಪ ಮತ್ತು ಸುಮಾ ಶಾಸ್ತ್ರಿ ಇವರಿಂದ ಬನ್ನಂಜೆಯವರ ಕವಿತೆಗಳ ಹಾಡು ಪ್ರಸ್ತುತಗೊಳ್ಳಲಿದೆ. 12-00 ಗಂಟೆಗೆ ನಡೆಯುವ…

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ಮುಂಡಾಲ ಯುವ ವೇದಿಕೆ (ರಿ.) ಮಂಗಳೂರು ಇವರ ವತಿಯಿಂದ ಆಟಿದ ಗೇನ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 03 ಆಗಸ್ಟ್ 2025ರಂದು ಬೆಳಿಗ್ಗೆ 09-30 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ತುಳು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ‘ಮಳೆಗಾಲದಲ್ಲಿ ತುಳುನಾಡು’ ಎಂಬ ವಿಷಯದ ಬಗ್ಗೆ ಮೂರು ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದ್ದು, ನೋಂದಾವಣೆ ಯನ್ನು ದಿನಾಂಕ 03 ಆಗಸ್ಟ್ 2025ರಂದು ಬೆಳಿಗ್ಗೆ 9-00 ಗಂಟೆಯವರೆಗೆ ಮಾತ್ರ ಮಾಡಲಾಗುವುದು. ಸ್ಪರ್ಧೆಯ ನಿಯಮಗಳು : • ಸ್ಪರ್ಧೆಗೆ ಭಾಗವಹಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಶಾಲಾ ಗುರುತಿನ ಚೀಟಿಯನ್ನು ಖಡ್ಡಾಯವಾಗಿ ತರತಕ್ಕದ್ದು. • ಸ್ಪರ್ಧೆಯು ಆಗೋಸ್ಟ್ 03ರಂದು ಭಾನುವಾರ ಬೆಳಿಗ್ಗೆ 9-30 ಗಂಟೆಗೆ ಸರಿಯಾಗಿ ಆರಂಭಗೊಳ್ಳಲಿರುವುದು. ಸ್ಪರ್ಧಾಳುಗಳು 30 ನಿಮಿಷಕ್ಕಿಂತ ಮುಂಚಿತವಾಗಿಯೇ ಸ್ಪರ್ಧಾಸ್ಥಳದಲ್ಲಿ ಇರತಕ್ಕದ್ದು. • A3 ಅಳತೆಯ ಡ್ರಾಯಿಂಗ್ ಶೀಟನ್ನು ಸಂಘಟಕರೇ ಒದಗಿಸುತ್ತಾರೆ. ಸ್ಪರ್ಧೆಗೆ ಬೇಕಾದ ಇತರ ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು. • ಸ್ಪರ್ಧೆಗೆ 2-00…

Read More

ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 27 ಜುಲೈ 2025ರ ಆದಿತ್ಯವಾರದಂದು ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ನಡೆಯಿತು. ಈ ಶಿಬಿರವನ್ನು ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಗುರುಗಳಾದ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರು ದೀಪ ದೀಪಬೆಳಗುವ ಮೂಲಕ ಉದ್ಘಾಟಿಸಿ “ಪ್ರಾತಃಸ್ಮರಣೀಯರಾದ ಶ್ರೀ ನೆಡ್ಲೆ ನರಸಿಂಹ ಭಟ್ ಇವರು ನಮಗೆಲ್ಲ ಗುರು ಸಮಾನರು. ಅವರು ಚೆಂಡೆ ಮದ್ದಲೆ ಬಾರಿಸುವ ವಿಧಾನವೇ ಬಹಳ ಸೊಗಸು. ಸಾಹಿತ್ಯ, ಲಯ, ಘಾತಪೆಟ್ಟುಗಳ, ಹುಸಿಪೆಟ್ಟುಗಳ ವ್ಯತ್ಯಾಸದೊಂದಿಗೆ ಸ್ಪಷ್ಟತೆಯಿಂದ, ಮಹಿಷಾಸುರಾದಿ ಬಣ್ಣದ ವೇಷಗಳ ನಡೆಗಳನ್ನು ಬಾರಿಸುವ ವಿಧಾನ ಬಹಳ ಅಂದವಾದವು. ಅವರ ಸಂಸ್ಕರಣೆಯೊಂದಿಗೆ ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ಆಯೋಜನೆಯು ಅರ್ಥಪೂರ್ಣ” ಎಂದರು. ಹಿರಿಯ ಹಿಮ್ಮೇಳ ವಾದಕರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಯಕ್ಷಗಾನ ಕ್ಷೇತ್ರದ ಮಹಾಪೋಷಕ ಶ್ರೀ ಟಿ. ಶ್ಯಾಮ ಭಟ್, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಕರ್ನಾಟಕ ಸರಕಾರ ಇವರು ಮುಖ್ಯ ಅತಿಥಿಯಾಗಿದ್ದು ಕಾರ್ಯಕ್ರಮಕ್ಕೆ…

Read More