Subscribe to Updates
Get the latest creative news from FooBar about art, design and business.
Author: roovari
ಸುಳ್ಯ : ಜಲಶ್ರೀ ಪ್ರತಿಷ್ಠಾನ ಕಡ್ಲಾರು ಹಾಗೂ ಎನ್.ಎ. ಟೈಮ್ಸ್ ಯೂಟ್ಯೂಬ್ ಚಾನಲ್ ಇದರ ಸಂಯುಕ್ತ ಆಶ್ರಯದಲ್ಲಿ ‘ಕವನ ವಾಚನ ವಿಡಿಯೋ ಸ್ಪರ್ಧೆ 2025’ಯನ್ನು ಹಮ್ಮಿಕೊಳ್ಳಲಾಗಿದೆ. ನಿಯಮಗಳು : * ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ : 16 – 45 ವರ್ಷದೊಳಗಿನ ಮತ್ತು 45 ವರ್ಷ ಮೇಲ್ಪಟ್ಟ. * ಕನ್ನಡದಲ್ಲಿನ ಸ್ವರಚಿತ ಕವನವನ್ನು ವಾಚನ ಮಾಡುತ್ತಿರುವಂತಹ ವಿಡಿಯೋವನ್ನು ಮಾಡಿ ಕಳುಹಿಸಿಕೊಡಬೇಕು. * ಯಾವುದೇ ವ್ಯಕ್ತಿ, ಜಾತಿ, ಧರ್ಮ, ಸಮಾಜ, ಸಂಸ್ಥೆ, ಸರ್ಕಾರಗಳಿಗೆ ಸಂಬಂಧಪಟ್ಟಂತೆ ದ್ವೇಷಪೂರಿತ ಕವನಗಳಿಗೆ ಆಸ್ಪದವಿಲ್ಲ. * ತಾವು ವಾಚಿಸುವಂತಹ ಕವನವು ಕನಿಷ್ಠ 20 ಸಾಲುಗಳಿಗಿಂತ ಹೆಚ್ಚಿರಲಿ. * ವಿಡಿಯೋ ರೆಕಾರ್ಡಿಂಗ್ ಮಾಡುವಾಗ ಯಾವುದೇ ಸಂಗೀತವನ್ನು ಬಳಸುವಂತಿಲ್ಲ. * ಕವನ ವಾಚನವು ಸ್ಪಷ್ಟತೆಯಿಂದ ಕೂಡಿರಲಿ. * ತಾವು ವಾಚಿಸುವಂತಹ ಕವನವು ಸಾಮಾಜಿಕ ಜಾಲತಾಣ, ಪತ್ರಿಕೆ ಸೇರಿದಂತೆ ಯಾವುದೇ ಮಾಧ್ಯಮಗಳಲ್ಲಿ ಪ್ರಕಟವಾಗಿರಬಾರದು. * ವಿಡಿಯೋ ಮಾಡುವಾಗ ಲ್ಯಾಂಡ್ ಸ್ಕೇಪ್ ನಲ್ಲಿ ಇರಬೇಕು. (ಅಂದರೆ ಮೊಬೈಲ್ ಅನ್ನು ಅಡ್ಡವಾಗಿ ಹಿಡಿದುಕೊಂಡು ವಿಡಿಯೋ…
ಕೊಪ್ಪಳ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚುಟುಕು ಸಂಗಮ ಕವಿಗೋಷ್ಠಿ ಹಾಗೂ ಜಾನಪದ ಸಾಹಿತ್ಯದಲ್ಲಿ ಹಾಸ್ಯ ಎನ್ನುವ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 06 ಜುಲೈ 2025ರ ಭಾನುವಾರದಂದು ಕೊಪ್ಪಳದ ಗಂಜ್ ಸರ್ಕಲ್ ಹತ್ತಿರವಿರುವ ವಿ. ಹೆಚ್. ಎಂ. ಲಾ ಅಸೋಶಿಯಟ್ಸ್ ಮತ್ತು ಬಾಳಪ್ಪ ಎಸ್ ವೀರಾಪುರ ವಕೀಲರ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯ ಸಿ. ವಿ. ಜಡಿಯವರ್ ಮಾತನಾಡಿ “ಎಲ್ಲಾ ಬಗೆಯ ಸಾಹಿತ್ಯ ಪ್ರಕಾರಗಳಿಗಿಂತ ಮೂಲ ಜಾನಪದ ಸಾಹಿತ್ಯಕ್ಕೆ ಶ್ರೇಷ್ಠತೆ ಇದೆ. ಜಾನಪದ ಸಾಹಿತ್ಯವು ಪ್ರತಿಯೊಬ್ಬರಿಗೂ ತಾಯಿ ಬೇರು ಇದ್ದಂತೆ, ಅದನ್ನು ಪೋಷಿಸಿ ಬೆಳೆಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ, ಇಂದಿನ ಆಧುನಿಕ ಯುಗದಲ್ಲಿ ಮೂಲ ಜಾನಪದ ಕಲಾವಿದರನ್ನು ಕಣೆಗಣಿಸಿ ಜಾನಪದಕ್ಕೆ ತದ್ವಿರುದ್ಧ (ನಕಲಿ )ಜಾನಪದ ಕಲಾವಿದರಿಗೇ ಹೆಚ್ಚಿನ ಪ್ರಮಾಣದಲ್ಲಿ ಮನ್ನಣೆ ದೊರೆಯುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಆಧುನಿಕತೆ ಹೆಸರಿನಲ್ಲಿ ಜಾನಪದ ನಶಿಸುತ್ತಿದೆ, ಇಂದು ಜಾತಿ, ಮತ, ಪಂಥಗಳಿಂದ ಸೌಹಾದ೯ತೆ ಮಾಯವಾಗುತ್ತಿದೆ. ಜನರ…
ಮಂಗಳೂರು : ಬಳ್ಕೂರು ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕ ಶ್ರೀನಾಥ್ ಬಸ್ರೂರು ಇವರು ಬರೆದ ‘ಒಮ್ಮೊಮ್ಮೆ ಅನಿಸಿದ್ದು’ ಅಂಕಣ ಬರಹಗಳ ಪುಸ್ತಕವನ್ನು ದಿನಾಂಕ 10 ಜುಲೈ 2025ರಂದು ಮಂಗಳೂರಿನ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಲಾಯಿತು. ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಪುಟ್ಟಣ ಕುಲಾಲ್ ಪ್ರತಿಸ್ಥಾನದ ಅಧ್ಯಕ್ಷ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರು, “ಹಲವು ವಿಚಾರಗಳಿಗೆ ತನ್ನೊಳಗಿನ ಚಿಂತನೆಯನ್ನು ಸೇರಿಸಿ ಓದುಗರಿಗೆ ಉಣಬಡಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಲೇಖಕರು ಮಾಡಿದ್ದಾರೆ. ಇದರಲ್ಲಿ ಕಿವಿಮಾತು, ಸರಿ- ತಪ್ಪು, ನ್ಯಾಯ ಅನ್ಯಾಯಗಳ ಬಗ್ಗೆ ತುಲನಾತ್ಮಕ ಚಿಂತನೆ ಇದೆ. ಯುವ ಜನತೆಗೆ ಒಂದಷ್ಟು ಪ್ರೇರಣ ಸಾಹಿತ್ಯ ನೀಡುವಲ್ಲಿ ಇದು ಯಶಸ್ವಿಯಾಗಲಿ” ಎಂದು ತಿಳಿಸಿದರು. ಲೇಖಕ ಶ್ರೀನಾಥ್ ಬಸ್ರೂರು ಮಾತನಾಡಿ, “ಮುಂಜಾವಿನ ನಡಿಗೆ ಸಮಯದಲ್ಲಿ ಒಮ್ಮೊಮ್ಮೆ ಅನಿಸಿದ, ಹಲವೊಮ್ಮೆ ನೆನಪಾದ, ಕೆಲವು ವಿಷಯಗಳನ್ನು ಬರೆದು ಪುಸ್ತಕ ರೂಪದಲ್ಲಿ ಓದುಗರ ಮುಂದೆ ಇಟ್ಟಿದ್ದೇನೆ. ಇದು ಮೊದಲ ಪ್ರಯತ್ನವಾಗಿದ್ದು ಓದುಗರ ಪ್ರೀತಿಯ ಹಾರೈಕೆಯ…
ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ‘ವಿದ್ಯಾರ್ಥಿಗಳಿಗೆ ಏಕದಿನ ಸಾಹಿತ್ಯ ಅಭಿಯಾನ -3’ ಕನ್ನಡದ ನಡಿಗೆ ಶಾಲೆಯ ಕಡೆಗೆ ಕಾರ್ಯಕ್ರಮವನ್ನು ದಿನಾಂಕ 12 ಜುಲೈ 2025ರಂದು ಬೆಳಿಗ್ಗೆ 10-00 ಗಂಟೆಗೆ ಕಾಸರಗೋಡಿನ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು ಆಡಳಿತ ಸೇವಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಬೆಜಪ್ಪೆ ಇವರ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಸಂಚಾಲಕರಾದ ಡಾ. ವಾಮನ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಟೀಚರ್ ಇವರು ಉದ್ಘಾಟನೆ ಮಾಡಲಿದ್ದಾರೆ. ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ ಮತ್ತು ಸಾಹಿತಿ ವಿರಾಜ್ ಅಡೂರು ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಹಂಗಾರಕಟ್ಟೆ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ಸಂಸ್ಕೃತಿ ಸಂಭ್ರಮದಲ್ಲಿ ‘ಯಕ್ಷ ವರ್ಷ’ ಕಾರ್ಯಕ್ರಮದಡಿ ಕಲಾಪೀಠ ಕೋಟ ಸಂಯೋಜನೆಯಲ್ಲಿ ಧ್ವಜಪುರದ ನಾಗಪ್ಪಯ್ಯ ವಿರಚಿತ “ನಳ ದಮಯಂತಿ” ಯಕ್ಷಗಾನ ಪ್ರದರ್ಶನವು ಶ್ರೀ ಕೆ.ನರಸಿಂಹ ತುಂಗ ಇವರ ನಿರ್ದೇಶನದಲ್ಲಿ ದಿನಾಂಕ 15 ಜುಲೈ 2025ರ ಮಂಗಳವಾರ ಸಂಜೆ ಘಂಟೆ 6:00ಕ್ಕೆ ನಡೆಯಲಿದೆ. ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸರ್ವಶ್ರೀಗಳಾದ ಉದಯಕುಮಾರ ಹೊಸಾಳ, ಗಣೇಶ ಶೆಣೈ, ವಾಗ್ವಿಲಾಸ ಭಟ್ಟ, ರಾಘವೇಂದ್ರ ಐತಾಳ, ಅಭಿನವ ತುಂಗ, ಮಹಾಲಕ್ಷ್ಮೀ ಸೋಮಯಾಜಿ, ಅನುಷಾ ಉರಾಳ, ಅನಂತ ನಾವುಡ, ಅನುಪ ಉರಾಳ, ಪುಣ್ಯವತಿ ನಾವುಡ, ಸಾತ್ವಿಕ, ಧನುಶ್ರೀ, ಇಂಚರ, ಲಿಖಿತಾ, ನೂತನ, ಈಶಾನಿ, ತನಿಷಾ, ಮನೋಮಯ್ ಭಾಗವಹಿಸಲಿದ್ದಾರೆ.
ಮಂಗಳೂರು : ಸನಾತನ ನಾಟ್ಯಾಲಯ ಇದರ ವತಿಯಿಂದ ‘ಭರತನಾಟ್ಯ’ ಕಾರ್ಯಕ್ರಮವನ್ನು ದಿನಾಂಕ 13 ಜುಲೈ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ನೃತ್ಯ ಗುರು ನಾಟ್ಯಾಚಾರ್ಯ ಪಿ. ಕಮಲಾಕ್ಷ ಆಚಾರ್ ಇವರಿಂದ ಗುರು ಸಂಸ್ಮರಣೆ, ಬಾಲ ಸಂರಕ್ಷಣ ಕೇಂದ್ರ ಅನಾಥ ಶ್ರಮದ ಸ್ಥಾಪಕ ಸಂಚಾಲಕರಾದ ಡಾ. ಪಿ. ಅನಂತ ಕೃಷ್ಣ ಭಟ್ ಇವರಿಂದ ಗುರು ನಮನ, ನೃತ್ಯ ನಿರ್ದೇಶಕರಾದ ಶ್ರೀಮತಿ ರಾಧಿಕಾ ಶೆಟ್ಟಿ ಇವರಿಂದ ಗುರು ಪ್ರೇರಣ ಹಾಗೂ ನೃತ್ಯ ಗುರು ಡಾ. ಕೃಪಾ ಫಡ್ಕೆ ಇವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಪ್ರಸ್ತುತಗೊಳ್ಳುವ ಭರತನಾಟ್ಯಕ್ಕೆ ಹಾಡುಗಾರಿಕೆಯಲ್ಲಿ ಶರತ್ ಕುಮಾರ್, ಮೃದಂಗದಲ್ಲಿ ರಾಖೇಶ್ ಹೊಸಬೆಟ್ಟು ಮತ್ತು ಮೇಧಾ ಉಡುಪ ಕೊಳಲಿನಲ್ಲಿ ಸಹಕರಿಸಲಿದ್ದಾರೆ.
ಕುಕನೂರು : ಚುಟುಕು ಸಾಹಿತ್ಯ ಪರಿಷತ್ ಕುಕನೂರು ತಾಲೂಕಿನ ನೂತನ ಅಧ್ಯಕ್ಷರಾಗಿ ಶಿಕ್ಷಕ ಬಸವರಾಜ್ ಉಪ್ಪಿನ್ ನೇಮಕವಾಗಿದ್ದಾರೆ. ಚು. ಸಾ. ಪ. ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಇವರು ಕೊಪ್ಪಳದಲ್ಲಿ ನಡೆದ ಚುಟುಕು ಸಾಹಿತ್ಯ ಪರಿಷತ್ ಇದರ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕುಕನೂರು ತಾಲೂಕಿಗೆ ಕ್ರಿಯಾಶೀಲ ಶಿಕ್ಷಕ, ಉತ್ಸಾಹಿ ಸಾಹಿತಿ ಬಸವರಾಜ್ ಉಪ್ಪಿನ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು. ಪ್ರಸ್ತುತ ಕುಕನೂರು ತಾಲೂಕಿನ ಗಾವರಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಇದರ ಜೊತೆಗೆ ಕುಕನೂರು ತಾಲೂಕು ಪದವೀಧರ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಲೇಖನ, ಕಥೆ, ಕವನಗಳು ಪ್ರಕಟಗೊಂಡಿವೆ. ಅಲ್ಲದೇ ಶ್ರೀಯುತರು ಇನ್ನೂರಕ್ಕೂ ಹೆಚ್ಚು ಆಧುನಿಕ ವಚನಗಳನ್ನು ರಚಿಸಿದ್ದಾರೆ. ಕನ್ನಡದ ಕ್ರಿಯಾಶೀಲ ಶಿಕ್ಷಕರಾಗಿ, ಕನ್ನಡ ಮತ್ತು ಇಂಗ್ಲಿಷ್ ಗ್ರಾಮರ್ ಪುಸ್ತಕ ಬರೆದು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉಪಯುಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಟಿ. ಈ. ಟಿ. ಮಾರ್ಗದರ್ಶಿ, ಪರೀಕ್ಷಾ ಮಾರ್ಗದರ್ಶಿ, ಇಂಗ್ಲಿಷ್ ವ್ಯಾಕರಣ ಸೇರಿ ಹಲವು ಉಪಯುಕ್ತ ಪುಸ್ತಕ…
ಬೆಂಗಳೂರು : ಸ್ವಪ್ನ ಬುಕ್ ಹೌಸ್ ಭಾರತದ ಅತಿ ದೊಡ್ಡ ಪುಸ್ತಕ ಭಂಡಾರ ಇದರ ವತಿಯಿಂದ 15 ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 12 ಜುಲೈ 2025ರಂದು ಸಂಜೆ 5-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಚಲನ ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಕನ್ನಡ ಪ್ರಭ ಪ್ರಧಾನ ಪುರವಣಿ ಸಂಪಾದಕರಾದ ಜೋಗಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಿ.ವಿ. ಗುರುಪ್ರಸಾದ್ ಇವರ ಅಂಕಣ ಬರಹಗಳು : ‘ಕೈಂ ಡೈರಿ’ ಭಾಗ 1-4 ಮತ್ತು ‘ಕೊಕೇನ್ ರಾಜರಹಸ್ಯ’, ಎಚ್. ಡುಂಡಿರಾಜ್ ಅವರ ನಗೆಬರಹಗಳು : ‘ನೀವು ಹೆಂಡತಿಗೆ ಹೆದರುತ್ತೀರಾ?’, ಎಂ.ಕೆ. ಇಂದಿರಾ ಅವರ ಕಾದಂಬರಿಗಳು : ‘ಪೂರ್ವಾಪರ’, ‘ಆತ್ಮಸಖಿ’, ‘ಬ್ರಹ್ಮಚಾರಿ’, ‘ಆಭರಣ’, ‘ವಿಚಿತ್ರ ಪ್ರೇಮ’ ಮತ್ತು ‘ಯಾರು ಹಿತವರು’, ಜಯಪ್ರಕಾಶ್ ನಾಗತಿಹಳ್ಳಿಯವರ ಬರಹಗಳ ಸಂಗ್ರಹ ‘ಲೈಫು ನಂದೇನೆ’, ‘ವ್ಯಕ್ತಿತ್ವ ದರ್ಪಣ’ ಮತ್ತು ‘ವ್ಯಕ್ತಿತ್ವ ಪರಿವರ್ತನೆ’ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ.
ಕನ್ನಡ ಸಾಹಿತ್ಯ ವಲಯದಲ್ಲಿ ಚಿರಪರಿಚಿತ ಹೆಸರು ಡಾ. ಜನಾರ್ದನ ಭಟ್ ಅವರದ್ದು. ಕಥೆ, ಕಾದಂಬರಿ, ವಿಮರ್ಶೆ, ಸಾಹಿತ್ಯದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೋಸ್ಕರ ಪರಾಮರ್ಶನ ಗ್ರಂಥಗಳ ರಚನೆ -ಹೀಗೆ ನಿರಂತರವಾಗಿ ಬರೆಯುತ್ತ ವಿದ್ವತ್ ವಲಯದಲ್ಲೂ ಹೆಸರಾದವರು ಅವರು. ಇತ್ತೀಚೆಗೆ ಅವರು ಪ್ರಕಟಿಸಿದ ಬೃಹತ್ ಕೃತಿ ‘ಕನ್ನಡ ಕಾದಂಬರಿ ಮಾಲೆ’ ಅವರ ನೂರನೆಯ ಕೃತಿ. ಅದರ ನಂತರವೂ ಅವರ ಕೃತಿಗಳು ಪ್ರಕಟವಾಗುತ್ತಲೇ ಇವೆ. ‘ಉತ್ತರಾಧಿಕಾರ’ ಜನಾರ್ದನ ಭಟ್ಟರ ಮೊದಲ ಕಾದಂಬರಿ. 205 ಪುಟಗಳ ಈ ಕಾದಂಬರಿಯಲ್ಲಿ ನಾವು ಕಾಣುವುದು ಗ್ರಾಮ ಭಾರತದ ಇಂಚಿಂಚಾದ ಚಿತ್ರಣ. ಕಥೆ ನಡೆಯುವ ಕಾಲ ಇಪ್ಪತ್ತನೇ ಶತಮಾನದ ಆರಂಭದಿಂದ ತೊಡಗಿ ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿಯ ತನಕ. ಕಾದಂಬರಿಯ ವಸ್ತು ಒಂದು ಗ್ರಾಮದಲ್ಲಿ ಮಣ್ಣಿನಲ್ಲಿ ಹೂತುಹೋಗಿ ಜೀರ್ಣಾವಸ್ಥೆಯಲ್ಲಿದ್ದ ಒಂದು ಮಹಾಲಿಂಗೇಶ್ವರನ ಗುಡಿಯ ಜೀರ್ಣೋದ್ಧಾರದ ಕೆಲಸವು ಯಾರ್ಯಾರ ಮುತುವರ್ಜಿಯಿಂದ ಯಾರ್ಯಾರ ಸಹಾಯದಿಂದ ಹೇಗೆ ನಡೆಯುತ್ತದೆ ಅನ್ನುವುದು. ಈ ವಸ್ತು ಅನ್ನುವುದು ಒಂದು ನೆಪ ಮಾತ್ರ. ಗ್ರಾಮದಲ್ಲಿ ಜನರು ಹೇಗೆ ಬದುಕುತ್ತಿದ್ದಾರೆ, ಅವರ ನಂಬಿಕೆಗಳೇನು,…
ಉಡುಪಿ : ಯಕ್ಷಗಾನ ಕಲಾರಂಗ (ರಿ.) ಇದರ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 12 ಜುಲೈ 2025ರಂದು ಅಪರಾಹ್ನ 4-30 ಗಂಟೆಗೆ ಉಡುಪಿಯ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ ಮೆಂಟ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಕರ್ತೃ ಡಾ. ಜಿ. ಭೀಮೇಶ್ವರ ಜೋಶಿ ಇವರ ವಹಿಸಲಿದ್ದು, ಪ್ರವರ್ತಕರಾದ ಪ್ರಮೋದ ಹೆಗಡೆ ಇವರು ಶುಭಾಶಂಸನೆಗೈಯ್ಯಲಿದ್ದಾರೆ. ಹಿರಿಯ ತಾಳಮದ್ದಲೆ ಅರ್ಥಧಾರಿ ಹಾಗೂ ಹವ್ಯಾಸಿ ವೇಷಧಾರಿಗಳಾದ ಡಾ. ಜಿ.ಎಲ್. ಹಗಡೆ ಕುಮಟಾ ಇವರಿಗೆ ‘ಮಟ್ಟಿ ಮುರಳೀಧರ ರಾವ್ ಪ್ರಶಸ್ತಿ’ ಮತ್ತು ಸರ್ಪಂಗಳ ಈಶ್ವರ ಭಟ್ ಸುರತ್ಕಲ್ ಇವರಿಗೆ ‘ಪೆರ್ಲ ಕೃಷ್ಣ ಭಟ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಅಪರಾಹ್ನ 1-30 ಗಂಟೆಗೆ ‘ಕರ್ಣಾರ್ಜುನ’ ಎಂಬ ಪ್ರಸಂಗದ ತಾಳಮದ್ದಲೆ ಜರಗಲಿದೆ.