Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ.ಜಿಲ್ಲಾ ಸಮಿತಿಯಿಂದ ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ‘ಸ್ವರಾಜ್ಯ-ಸುರಾಜ್ಯ ಕವಿಗೋಷ್ಠಿ’ಯು ದಿನಾಂಕ 10-08-2023ರಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಕುಮಾರ್ ಶೆಟ್ಟಿ ಪಿ. ಮಾತನಾಡಿ “ಕವಿಗಳು ತಮ್ಮ ಕವನಗಳ ಮೂಲಕ ಸಮಾಜಕ್ಕೆ ಸದ್ವಿಚಾರದ ಸಂದೇಶ ಪಸರಿಸಬೇಕು. ಯುವ ಮನಸ್ಸುಗಳಲ್ಲಿ ಉತ್ತಮ ಭಾವನೆ ಮೂಡಿಸಲು ಪ್ರಯತ್ನಿಸಬೇಕು” ಎಂದರು. ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಜೊತೆ ಕಾರ್ಯದರ್ಶಿ ಡಾ.ಅರ್ಜುನ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಅ.ಭಾ.ಸಾ.ಪ. ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷರಾದ ಶ್ರೀ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಅ.ಭಾ.ಸಾ.ಪ. ಕಾರ್ಯದರ್ಶಿ ಪರಿಮಳ ರಾವ್, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಕೋಶಾಧಿಕಾರಿ ಶ್ರೀ ಭಾಸ್ಕರ ರೈ ಕಟ್ಟ, ಜೊತೆ ಕಾರ್ಯದರ್ಶಿ ಶ್ರೀಲಕ್ಷ್ಮಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಜಯಾನಂದ ಪೆರಾಜೆ ಮತ್ತು ಕೃಷ್ಣ ಡಿ.ಎಸ್. ಉಪಸ್ಥಿತರಿದ್ದರು. ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಗಿರಿಯಪ್ಪ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 40ಕ್ಕೂ ಅಧಿಕ…
ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಮತ್ತು ಶ್ರೀಮತಿ ವನಜಾಕ್ಷಿ ಚಾರಿಟೆಬಲ್ ಟ್ರಸ್ಟ್ ಜಂಟಿಯಾಗಿ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದ ಮಹಾಕವಿ ರತ್ನಾಕರವರ್ಣಿ ಸಭಾಂಗಣದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಕನ್ನಡ ಭಾಷಾ ಬೋಧಕರಿಗಾಗಿ ಆಯೋಜಿಸಿದ ‘ಕನ್ನಡ ಭಾಷಾ ಬೋಧನಾ ಕಾರ್ಯಾಗಾರ’ ದಿನಾಂಕ 09-08-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಶ್ರೀ ಅಭಯಚಂದ್ರ ಜೈನ್ ಮಾತನಾಡುತ್ತಾ “ಉತ್ತಮ ಅಧ್ಯಯನದ ಮುಖಾಂತರ ತರಗತಿಯಲ್ಲಿ ಕನ್ನಡ ಭಾಷೆಯ ಮೇಲಿನ ಒಲವನ್ನು ಹೆಚ್ಚಿಸಬೇಕು. ಕನ್ನಡ ಭಾಷೆ ಪ್ರತಿಯೊಬ್ಬರ ಜವಾಬ್ದಾರಿ. ಕನ್ನಡದ ಬಗ್ಗೆ ನಮಗೆ ಗೌರವವಿರಬೇಕು. ಇತ್ತೀಚೆಗಿನ ದಿನಗಳಲ್ಲಿ ರಾಮಾಯಣ ಮಹಾಭಾರತದಂತಹ ಪುರಾಣಗಳ ಚಿಂತನೆಯನ್ನು ಜನರಿಗೆ ತಲುಪಿಸಲು ಯಕ್ಷಗಾನದ ಬಳಕೆಯಾಗುತ್ತಿರುವುದು ಒಂದರ್ಥದಲ್ಲಿ ಕನ್ನಡ ಭಾಷಾ ಬೆಳವಣಿಗೆಗೆ ಸಹಕಾರಿ. ಕನ್ನಡದ ಬಗ್ಗೆ ಶಿಕ್ಷಕರಲ್ಲಿ ಒಲವು ಇರಬೇಕು. ಇಂಗ್ಲೀಷ್ ಪರಿವರ್ತನೆಗೆ ಒಳಗಾಗುತ್ತಿರುವ ಶಿಕ್ಷಕರಿಗೆ ತರಗತಿಯಲ್ಲಿ ಕನ್ನಡ ಭಾಷಾ ಬೋಧನೆಯ ಕುರಿತು ಹಮ್ಮಿಕೊಂಡಿರುವ ವಿಶೇಷ ಕಾರ್ಯಾಗಾರ ಅವರ ಜ್ಞಾನ ಭಂಡಾರ…
ಉಡುಪಿ : ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ, ಶ್ರೀಕೃಷ್ಣ ಮಠದ ಆಸ್ಥಾನ ವಿದ್ವಾಂಸ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಸ್ಕೃತ ವಿದ್ವಾಂಸರಾದ ವಿದ್ವಾನ್ ಹರಿದಾಸ ಉಪಾಧ್ಯಾಯರು ದಿನಾಂಕ 09-08-2023ರಂದು ನಿಧನರಾದರು. ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಸ್ಥಾಪಕ ಅಧ್ಯಕ್ಷರಾಗಿದ್ದ ಅವರು, ಉಡುಪಿ ಅಷ್ಟಮಠಾಧೀಶರಿಂದ ಗೌರವಿಸಲ್ಪಟ್ಟಿದ್ದರು. ಸಂಸ್ಕತದಲ್ಲಿ 5 ಯಕ್ಷಗಾನ ಪ್ರಸಂಗ ರಚಿಸಿ ಉಜ್ಜಯಿನಿ ಮೊದಲಾದೆಡೆಗಳಲ್ಲಿ ಪ್ರದರ್ಶಿಸಿದ್ದರು. ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಆನೇಕ ಮಂದಿ ಶಿಷ್ಯರಿಗೆ ವಿದ್ಯಾದಾನ ಮಾಡಿದ್ದರು. ಪ್ರಿನ್ಸಿಪಾಲ್ ಎಂಬ ಆಂಗ್ಲ ಪದಕ್ಕೆ ಕನ್ನದಲ್ಲಿ ‘ಪ್ರಾಂಶುಪಾಲ’ ಎಂಬ ಪದ ನಿಕ್ಷೇಪಿಸಿದ ಕೀರ್ತಿ ಉಪಾಧ್ಯಾಯರಿಗೆ ಸಲ್ಲುತ್ತದೆ. ಶಿಕ್ಷಣ ವಿಚಾರತಜ್ಞ, ವೇದಾಂತ ಭೂಷಣಮ್, ಶ್ರೀಹಯವದನ ವಾದಿರಾಜಾನುಗ್ರಹ, ವಿದ್ಯಾರಾಜಮಣಿ, ಶಾಸ್ತ್ರರತ್ನಮ್ ಸಹಿತ 24 ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಉಪಾಧ್ಯಾಯರು, ಕರ್ನಾಟಕ ಸರಕಾರ ಹಾಗೂ ಅನೇಕ ಸಂಘ ಸಂಸ್ಥೆಗಳಿಂದಲೂ ಗೌರವ, ಸನ್ಮಾನ ಹಾಗೂ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ತಮ್ಮ ಜೀವಮಾನದ ಅದ್ಭುತ ಸಾಧನೆಗಾಗಿ ಕೇಂದ್ರ ಸರಕಾರದಿಂದ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ತಮ್ಮ ಜೀವನದ ಕೊನೆಯ ಘಳಿಗೆಯವರೆಗೂ ಅಧ್ಯಯನ, ಅಧ್ಯಾಪನ…
‘ಹಂಸಾಯನ’ ರಾಜ್ಯಪ್ರಶಸ್ತಿ ವಿಜೇತ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಾವಿತ್ರಿ ಮನೋಹರ್ (ಹಂಸಾ) ಅವರ ಆತ್ಮಕಥೆ. ಲೇಖಕರ ಮಾತೃಶ್ರೀ ಹಂ.ಪು. ನಾಗಮ್ಮ ಕಳಸ ಇವರು,”ನನ್ನ ಎಂಭತ್ತನೇ ವಯಸ್ಸಿನಲ್ಲಿ ನನ್ನ ನೆನಪಿನಂಗಳ ಕೆದಕಿ ಕೆದಕಿ ನನ್ನ ಅನುಭವವನ್ನು ಪುಸ್ತಕವನ್ನಾಗಿಸಿ ಸಾಹಿತ್ಯ ಲೋಕಕ್ಕೆ ತನ್ನ ಕಾಣಿಕೆ ಅರ್ಪಿಸಿದ ಮಗಳು, ನನ್ನ ಎಂಭತ್ತೇಳರ ಪ್ರಾಯದಲ್ಲಿ ಅವಳ ಅನುಭವ ಕಥನ ‘ಹಂಸಾಯನ’ಕ್ಕೆ ನನ್ನಿಂದ ಶುಭನುಡಿ ಬರೆಸಿದ್ದಾಳೆ” ಎಂದಿದ್ದಾರೆ. ಮುನ್ನುಡಿಯಲ್ಲಿ ಡಾ. ವಸಂತಕುಮಾರ್ ಪೆರ್ಲ ಅವರು, “ಹಂಸಾಯನ ಎಂದರೆ ಏನು? ‘ಆಯನ’ ಎಂದರೆ ಪಥ, ದಾರಿ, ದಿಕ್ಕು, ದೆಸೆ, ನಡೆ ಎಂದೆಲ್ಲ ಅರ್ಥಗಳಿವೆ. ‘ಹಂ’ದಿಗೋಡಿನ ‘ಸಾ’ವಿತ್ರಿಯವರು ಸಾಗಿಬಂದ ಪಥ ಈ ಹಂಸಾಯನ. ಹಂದಿಗೋಡು ಚಿಕ್ಕಮಗಳೂರಿನ ಕಳಸದ ಬಳಿಯ ಒಂದು ಹಳ್ಳಿ. ಹಂದಿಗೋಡಿನ ತವರಿನಿಂದ ಕಾರ್ಕಳದ ಮನೋಹರ್ ಎಂಬವರನ್ನು ವಿವಾಹವಾಗಿ ಘಟ್ಟ ಇಳಿದು ಬಂದು ಕಾರ್ಕಳವಾಸಿಯಾದ ಸಾವಿತ್ರಿಯವರು ಮುಂದಿನ ಮೂವತ್ತೈದು ವರ್ಷಗಳ ಬದುಕಿನಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಹೆಜ್ಜೆಗುರುತುಗಳನ್ನು ಈ ಕೃತಿ ರಸವತ್ತಾದ ಕಾದಂಬರಿಯ ರೂಪದಲ್ಲಿ ನಮ್ಮ ಮುಂದಿಡುತ್ತದೆ” ಎಂದಿದ್ದಾರೆ.…
ಮಡಿಕೇರಿ : ಸಾಹಿತಿ ಹಾಗೂ ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಕೆ. ಭರತ್ ಅವರು ಬರೆದ ಹನಿಗವನಗಳ ಸಂಕಲನ ‘ಧ್ಯಾನಕ್ಕೆ ಬಿದ್ದ ಅಕ್ಷರಗಳು’ ಕೃತಿ ದಿನಾಂಕ 06-08-2023ರಂದು ಅನಾವರಣಗೊಂಡಿತು. ಕೊಡಗು ಪ್ರೆಸ್ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್ ಕೊಡಗು ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು “ಸಂಕಷ್ಟ ಮತ್ತು ನೋವಿನ ಬದುಕಿನಲ್ಲಿ ಸುಂದರವಾದ ಕವನ ಹುಟ್ಟುತ್ತದೆ. ಕೆಲವರ ಬರವಣಿಗೆಯಲ್ಲಿ ಸಂದೇಶಗಳಿರುವುದಿಲ್ಲ, ಚಂದವಾಗಿ ಕಾಣುತ್ತದಷ್ಟೆ. ಅಂತಹ ಬರಹಗಾರರು ಹೆಚ್ಚಿದ್ದಾರೆ. ಆದರೆ ಅನುಭವವನ್ನು ಬರಹಕ್ಕೆ ಇಳಿಸುವವರ ಸಂಖ್ಯೆ ಕಡಿಮೆ ಇದೆ” ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಮಾರುತಿ ದಾಸಣ್ಣವರ್, ಮಿಲನಾ ಭರತ್ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು, ಮತ್ತಷ್ಟು ಕೃತಿಗಳನ್ನು ಹೊರತರಲು ಮುಂದಾಗಬೇಕೆಂದು ಹೇಳಿದರು. ಪುಸ್ತಕದ ಕುರಿತು ಮಾತನಾಡಿದ ಸಾಹಿತಿ ಕಾಜೂರು ಸತೀಶ್, ಸಂವಹನ ವಿಭಾಗದ ಮುಖ್ಯಸ್ಥೆ…
ಬೆಳ್ತಂಗಡಿ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ರಿ.) ಕರ್ನಾಟಕ, ಬೆಳ್ತಂಗಡಿ ತಾಲೂಕು ಸಮಿತಿಯ ಆಶ್ರಯದಲ್ಲಿ ದಿನಾಂಕ 06-08-2023 ರವಿವಾರದಂದು ‘ಸಮರಸ ಸಾಹಿತ್ಯದೊಂದಿಗೆ ಕುಟುಂಬೋತ್ಸವ’ ಕಾರ್ಯಕ್ರಮವು ಅ.ಭಾ.ಸಾ.ಪ. ಮಂಗಳೂರು ವಿಭಾಗ ಸಂಯೋಜಕರಾಗಿರುವ ಉರುವಾಲು ಗ್ರಾಮದ ಎಂಜಿರಪಳಿಕೆ ಶ್ರೀ ಸುಂದರ ಶೆಟ್ಟಿಯವರ ಸ್ವಗೃಹದಲ್ಲಿ ನಡೆಯಿತು. ಮುಖ್ಯ ಅತಿಥಿಯಾದ ಉಪನ್ಯಾಸಕಿ ಶ್ರೀಮತಿ ವಸಂತಿ ಕುಳಮರ್ವ ಇವರು ಯುವಜನತೆಗೆ ಸಂಸ್ಕಾರದ ಪಾಠವು ಮನೆಯಿಂದಲೇ ನಡೆಯಬೇಕು ಎನ್ನುವುದನ್ನು ರಾಮಾಯಣದ ಭರತನ ಕಥೆಯ ನಿರೂಪಣೆಯೊಂದಿಗೆ ಮನಮುಟ್ಟುವಂತೆ ವಿವರಿಸಿದರು. ಸಮಿತಿ ಅಧ್ಯಕ್ಷರಾದ ಪ್ರೊ.ಗಣಪತಿ ಭಟ್ ಕುಳಮರ್ವರವರು ಸಾಹಿತ್ಯದಿಂದ ಸಾಮರಸ್ಯವನ್ನು ಸಾಧಿಸುವ ಬಗ್ಗೆ ಮತ್ತು ಡಾ.ಮಾಧವ ಎಂ.ಕೆ. ಇವರು ಕೌಟುಂಬಿಕ ಮೌಲ್ಯಗಳ ಬಗ್ಗೆ ಮಾತನಾಡಿದರು. ಮನೆಯ ಹಿರಿಯ ಮಾತೆ ಶ್ರೀಮತಿ ವಾಸಮ್ಮ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವು ಕು.ಅನನ್ಯರವರ ಶಾರದಾ ಸ್ತುತಿಯೊಂದಿಗೆ ಆರಂಭಗೊಂಡಿತು. ಕು.ದಿವ್ಯ, ಕು.ಆದಿರ, ಕು.ವೈಭವಿ, ಶ್ರೀಮತಿ ರಾಧಿಕ, ಶ್ರೀಮತಿ ದೀಕ್ಷ ಇವರು ಭಕ್ತಿಗೀತೆಗಳನ್ನು ಹಾಡಿದರೆ, ಶ್ರೀಮತಿ ಸುನಂದರವರು ಶ್ರೀ ರಾಮರಕ್ಷಾ ಸ್ತೋತ್ರವನ್ನು ಹೇಳಿದರು. ಶ್ರೀಮತಿ ವಾಸಮ್ಮ ಮತ್ತು ಮಕ್ಕಳು…
ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ್ ಪರ್ಬದ ಸರಣಿ ವೈಭವೊ-6’ ಇದರ ಅಂಗವಾಗಿ ದಿನಾಂಕ 18-08-2023ರಂದು ‘ತುಳುವರೆ ಹಳ್ಳಿ ಗೊಬ್ಬುಲು’ ಹಾಗೂ ದಿನಾಂಕ 19-08-2023ರಂದು ‘ತುಳು ಪ್ರತಿಭಾ ಪುರಸ್ಕಾರ ಪ್ರದಾನ -2023’ ಈ ಎರಡೂ ಕಾರ್ಯಕ್ರಮಗಳು ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ. ದಿನಾಂಕ 18-08-2023ರಂದು ತುಳು ಕೂಟದ ಅಧ್ಯಕ್ಷರಾದ ಶ್ರೀ ಬಿ. ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯುವುದು. ಮಂಗಳೂರಿನ ಅಳಪೆಯಲ್ಲಿರುವ ಜ್ಞಾನ ವಿಕಾಸ ಕೇಂದ್ರದ ಸಂಯೋಜಕರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸರಳಾ ಕುಲಾಲ್ ಇವರು ದೀಪ ಪ್ರಜ್ವಲನೆ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರಾದ ಶ್ರೀ ಬಿ. ಪದ್ಮನಾಭ ಕೋಟ್ಯಾನ್, ಮೇರಮಜಲು ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀ ಸತೀಶ ನಾಯಗ ಮತ್ತು ಕೊಡ್ಮಾಣ್ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಟಿ. ಭಾಸ್ಕರ್…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಗಂಣದಲ್ಲಿ ಡಾ.ವಿನಾಯಕ ಕೃಷ್ಣ ಗೋಕಾಕರ 104ನೇ ಜನ್ಮ ದಿನಾಚರಣೆಯು ದಿನಾಂಕ 10-08-2023ರಂದು ನಡೆಯಿತು. ಗೋಕಾಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು “ಕನ್ನಡ ಸಾಹಿತ್ಯಕ್ಕೆ ಧೀಮಂತಿಕೆ ತಂದು ಕೊಟ್ಟ ಬರಹಗಾರ ಡಾ.ವಿನಾಯಕ ಕೃಷ್ಣ ಗೋಕಾಕರು. ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಮೊದಲ ಕನ್ನಡಿಗ ಅಧ್ಯಕ್ಷರು. ಜೊತೆಗೆ ಜ್ಞಾನಪೀಠ ಆಯ್ಕೆ ಸಮಿತಿಯ ಅಧ್ಯಕ್ಷರಾದ ಮೊದಲ ಕನ್ನಡದ ಅಕ್ಷರ ಸಂತರು. ಡಾ.ವಿನಾಯಕ ಕೃಷ್ಣ ಗೋಕಾಕರೆಂದರೆ ನಮ್ಮ ಕಣ್ಣಮುಂದೆ ನಿಲ್ಲುವ ಎತ್ತರದ ವ್ಯಕ್ತಿತ್ವ, ಕನ್ನಡಕದ ಹಿಂದಿನ ಆಳವಾದ ಒಳನೋಟದ ಕಣ್ಣು, ಗಂಭೀರ ನಿಲುವು. ಬಾಹ್ಯ ನೋಟಕ್ಕೆ ಮಾತ್ರವಲ್ಲದೆ ವ್ಯಕ್ತಿತ್ವದಿಂದಲೂ ಗೋಕಾಕರು ಎತ್ತರದ ವ್ಯಕ್ತಿಯಾಗಿದ್ದರು. ಗುರು ಗೋವಿಂದ ಭಟ್ಟರನ್ನು ಹಾಗೂ ಶಿಶುನಾಳ ಶರಿಫರ ಬಗೆಗಿನ ಸಾಕಷ್ಟು ಮಾಹಿತಿಗಳು ಅವರಲ್ಲಿತ್ತು.. ಗೋಕಾಕರಿಗೆ 1960ರಲ್ಲಿ ‘ದ್ಯಾವಾ ಪೃಥವೀ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1961ರಲ್ಲಿ ಕೇಂದ್ರ ಸರ್ಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿ, ‘ಭಾರತ ಸಿಂಧುರಶ್ಮಿ’…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ ಹಾಗೂ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಗುಂಡ್ಮಿ ಇದರ ಆಶ್ರಯದಲ್ಲಿ ‘ಕಾದಂಬರಿ ಮರು ಓದು – ವಿಮರ್ಶೆ’ ಕಾರ್ಯಕ್ರಮವು ದಿನಾಂಕ 13-08-2023ರಂದು ಗುಂಡ್ಮಿಯ ಸದಾನಂದ ರಂಗ ಮಂದಿರದಲ್ಲಿ ಸಂಜೆ 4.00ರಿಂದ ನಡೆಯಲಿದೆ. ಯಕ್ಷ ಕಲಾವಿದರಾದ ಕೆ.ಸೀತಾರಾಮ ಸೋಮಯಾಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕ.ಸಾ.ಸ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ. ಕಲಾ ಕೇಂದ್ರದ ಕಾರ್ಯದರ್ಶಿಯಾದ ವಿ.ರಾಜಶೇಖರ ಹೆಬ್ಬಾರರ ಉಪಸ್ಥಿತಿಯಲ್ಲಿ ಕ.ಸಾ.ಪ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಗುಂಡ್ಮಿ ರಾಮಚಂದ್ರ ಐತಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ ಇವರು ‘ಮಹಾಭಾರತದ ಪಾತ್ರ’ ಕೃತಿಯ ಬಗ್ಗೆ ಹವ್ಯಕ ಭಾಷೆಯಲ್ಲಿ ಮತ್ತು ನಿವೃತ್ತ ಶಿಕ್ಷಣಾಧಿಕಾರಿಗಳಾದ ಶ್ರೀ ಶಿವಾನಂದ ಮಯ್ಯ ಇವರು ಡಾ.ಶಿವರಾಮ ಕಾರಂತರ ಕೃತಿಯಾದ ‘ಧರ್ಮರಾಯನ ಸಂಸಾರ’ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಪುತ್ತೂರು : ಪುತ್ತೂರಿನ ಬೊಳುವಾರಿನಲ್ಲಿರುವ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘವು ‘ಶ್ರೀ ಆಂಜನೇಯ 55’ಕ್ಕೆ ಪೂರಕವಾಗಿ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಶ್ರೀ ರಾಘವೇಂದ್ರಸ್ವಾಮಿ ಮಠ, ಕಲ್ಲಮೆ ಸರ್ವೆ, ಪುತ್ತೂರು ಇದರ ಸಹಭಾಗಿತ್ವದಲ್ಲಿ ದಿನಾಂಕ 26-08-2023ರಿಂದ 01-09-2023ರವರೆಗೆ ನಡೆಯುವ ‘ಶ್ರೀ ರಾಮಾಯಣ ದರ್ಶನಂ’ ತಾಳಮದ್ದಳೆ ಸಪ್ತಾಹದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಠದ ಧರ್ಮದರ್ಶಿ ಡಾ.ಸೀತಾರಾಮ ಭಟ್ ಇವರು ಬಿಡುಗಡೆಗೊಳಿಸಿ ಶುಭಹಾರೈಸಿದರು. ಸಂಘದ ಅಧ್ಯಕ್ಷರಾದ ಶ್ರೀ ಭಾಸ್ಕರ್ ಬಾರ್ಯ ಪ್ರಾರ್ಥನೆ ಸಲ್ಲಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಆನಂದ ಸವಣೂರು ವಂದಿಸಿದರು. ಶ್ರೀಮತಿ ಅನುರಾಧ ಎಸ್. ಭಟ್, ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ ರಾವ್, ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್, ಸಹಕಾರ್ಯದರ್ಶಿ ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಅರ್ಚಕರಾದ ಸುಧೀಂದ್ರ ಅಡಿಗ, ನಿರಂಜನ ಭಟ್ ಮೂಡಬಿದ್ರೆ, ಗುಂಪೆ ಕೇಶವ ಭಟ್ ಮೊದಲಾದವರು ಉಪಸ್ಥಿತರಿದ್ದರು.