Author: roovari

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಸುಬ್ರಹ್ಮಣ್ಯ ಭಟ್ ಇವರು ಬರೆದ ‘ ಅಮ್ಮ ಹೇಳಿದ ಕತೆಗಳು’ ಕಥಾಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 29 ಡಿಸೆಂಬರ್ 2024ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಅಮೃತಹಸ್ತದಿಂದ ಕೃತಿ ಲೋಕಾರ್ಪಣೆಗೊಳಿಸಿದರು. ಕೃತಿಕರ್ತ ಡಾ. ಸುಬ್ರಹ್ಮಣ್ಯ ಭಟ್, ಅವರ ಪತ್ನಿ ಭವ್ಯ ಜಿ. ಜಿ. ಹಾಗೂ ಮಕ್ಕಳಾದ ಅಭಿಗಮ್ಯ ರಾಮ್ ಮತ್ತು ಆಶ್ಮನ್ ಕೃಷ್ಣ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ಟರ ಎರಡನೇ ಕಥಾ ಸಂಕಲನ ಇದಾಗಿದ್ದು, ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕಿ ಉಮಾ ಅನಂತ್ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಖ್ಯಾತ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿಯವರು ಶುಭನುಡಿಗಳನ್ನು ಬರೆದಿದ್ದು, ಮಲೆನಾಡು ಪ್ರಕಾಶನ ಚಿಕ್ಕಮಗಳೂರು ಈ ಕೃತಿಯನ್ನು ಪ್ರಕಟಿಸಿದೆ. ಕೃತಿಯ ಪ್ರತಿಗಳಿಗಾಗಿ ಲೇಖಕರನ್ನು 9448951856 ವಾಟ್ಸಪ್ ಮೂಲಕ ಸಂಪರ್ಕಿಸಬಹುದಾಗಿದೆ.

Read More

ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ, ಮಕ್ಕಳ ವಿಭಾಗದ ವತಿಯಿಂದ ಚಿಣ್ಣರ ರಂಗ ಸಂಕ್ರಾಂತಿ ಸಮಾರಂಭವನ್ನು ದಿನಾಂಕ 03 ಜನವರಿ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಜೆ.ಸಿ. ರೋಡ್, ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಈ ಸಮಾರಂಭದಲ್ಲಿ 2 ನಾಟಕಗಳ ಉತ್ಸವ ಮತ್ತು ಶ್ರೀ ಕೃಷ್ಣಮೂರ್ತಿ ಬಿಳಿಗೆರೆಯವರಿಗೆ ಸನ್ಮಾನ ಮಾಡಲಾಗುವುದು. ಡಾ. ಎಸ್.ವಿ. ಕಶ್ಯಪ್ ರಚಿಸಿರುವ ಡಾ. ಸುಷ್ಮಾ ಎಸ್. ವಿ. ಇವರ ನಿರ್ದೇಶನದಲ್ಲಿ ‘ಋಷ್ಯಮೂಕ’ ಮತ್ತು ಡಾ. ಎಸ್.ವಿ. ಕಶ್ಯಪ್ ಇವರು ರಚಿಸಿ ನಿರ್ದೇಶನ ಮಾಡಿರುವ ‘ಕೃಬು’ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9844152967, 9845265967, 9845734967, 9844017881, 9880033018.

Read More

ಮಂಗಳೂರು : ಕಳೆದ 25 ವರ್ಷಗಳಿಂದ ಮಂಗಳೂರು ಕೇಂದ್ರವಾಗಿ ‘ಸಾಹಿತ್ಯ, ಸಂಸ್ಕೃತಿ, ಕಲೆ, ಸಂಘಟನೆ, ಸದ್ವಿಚಾರ’ ಎಂಬ ನೆಲೆಯಲ್ಲಿ ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ದೇಶ ವಿದೇಶಗಳಲ್ಲಿ ಸಾಹಿತ್ಯ ಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಕಲ್ಲಚ್ಚು ಪ್ರಕಾಶನ ಸಂಸ್ಥೆಯ ಬೆಳ್ಳಿ ಹಬ್ಬ ಪ್ರಯುಕ್ತ ‘ರಜತ ರಂಗು’ ಸಮಾರಂಭವು ದಿನಾಂಕ 05 ಜನವರಿ 2025ರಂದು ಮಂಗಳೂರಿನ ಕೊಡಿಯಾಲ್ ಬೈಲ್ ನವಭಾರತ ಸರ್ಕಲ್ ಇಲ್ಲಿರುವ ದಿ ಓಷನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ವಿಶ್ರಾಂತ ಉಪಕಾರ್ಯದರ್ಶಿ ಡಾ. ಮಹಾಲಿಂಗೇಶ್ವರ ಎಸ್.ಪಿ. ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಹೊರಬರುವ ಕಲ್ಲಚ್ಚು ಪ್ರಕಾಶನದ ಮಹೇಶ ಆರ್. ನಾಯಕ್ ಇವರ ‘ಅನೂಗೂಡುನೂ ಬಾ’ ಕೃತಿಯನ್ನು ಸಾಹಿತಿಗಳಾದ ಡಾ. ಪ್ರಭಾಕರ ನೀರ್ ಮಾರ್ಗ ಬಿಡುಗಡೆಗೊಳಿಸಲಿದ್ದು, ಕಥೆಗಾರರಾದ ಡಾ. ಸಂಪೂರ್ಣಾನಂದ ಬಳ್ಕೂರು ಕೃತಿ ಪರಿಚಯ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮತ್ತು ಬೆಂಗಳೂರಿನ ಉದ್ಯಮಿ ಜಯಂತ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಡಾ.…

Read More

ಉಚ್ಚಿಲ : ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಆಯೋಜಿಸುತ್ತಿರುವ ‘ಕಿಶೋರ ಯಕ್ಷಗಾನ ಸಂಭ್ರಮ 2024’ ಪ್ರಯುಕ್ತ ಕಾಪು ವಿಧಾನ ಸಭಾ ವ್ಯಾಪ್ತಿಗೆ ಸೇರಿದ ಎಂಟು ಶಾಲೆಗಳ ಯಕ್ಷಗಾನ ಪ್ರದರ್ಶನವು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಆಶ್ರಯದಲ್ಲಿ, ದೇವಳದ ವಠಾರದಲ್ಲಿ ನಡೆದಿದ್ದು, ಅದರ ಸಮಾರೋಪ ಸಮಾರಂಭವು ದಿನಾಂಕ 23 ಡಿಸೆಂಬರ್ 2024ರಂದು ಜರಗಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರ್ಮೆ ಸುರೇಶ ಶೆಟ್ಟಿಯವರು ಮಾತನಾಡಿ “ಯಕ್ಷ ಶಿಕ್ಷಣ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಶಾಲೆಗಳಿಗೆ ಇದನ್ನು ವಿಸ್ತರಿಸೋಣ” ಎಂದರು. ಈ ಮಹಾಭಿಯಾನದ ಯಶಸ್ಸಿಗೆ ಕಾರಣರಾದ ಕಲಾರಂಗದ ಕಾರ್ಯಕರ್ತರನ್ನು ಅಭಿನಂದಿಸಿದರು. ಮಂಗಳೂರಿನ ಖ್ಯಾತ ವೈದ್ಯ ಡಾ. ಜೆ.ಎನ್. ಭಟ್, ಗುರು ಬನ್ನಂಜೆ ಸಂಜೀವ ಸುವರ್ಣ, ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರಶೇಖರ ಶೆಟ್ಟಿ, ಕ್ಷೇತ್ರ ಆಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ, ದ.ಕ. ಮೊಗವೀರ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ ಹೆಜಮಾಡಿ, ಕಲಾ ಗಂಗೋತ್ರಿಯ ಸದಾಶಿವ…

Read More

‘ಕೆಂಡದ ರೊಟ್ಟಿ’ ಕಥೆಗಾರ್ತಿ ಉಷಾ ನರಸಿಂಹನ್ ಇವರ ಇತ್ತೀಚಿನ ಕಾದಂಬರಿ. ಕೆಂಡದ ಮೇಲೆ ಸುಡುವ ರೊಟ್ಟಿಯ ರೂಪಕದ ಮೂಲಕ ದಾಂಪತ್ಯ ಬದುಕಿನ ಯಶಸ್ಸು-ವೈಫಲ್ಯಗಳ ಮೇಲೆ ಲೇಖಕಿ ಬೆಳಕು ಚೆಲ್ಲಿದ್ದಾರೆ. ಗಂಡನಾಗಲಿ ಹೆಂಡತಿಯಾಗಲಿ ತುಸು ಎಚ್ಚರ ತಪ್ಪಿದರೂ ಬದುಕಿನ ಹದ ತಪ್ಪಿ ವಿನಾಶದ ಅಂಚಿಗೆ ದೂಡಲ್ಪಡುತ್ತದೆ ಅನ್ನುವ ಸತ್ಯದತ್ತ ಕಾದಂಬರಿ ಬೆರಳು ಮಾಡಿ ತೋರಿಸುತ್ತದೆ. ಇಲ್ಲಿ ಆ ರೀತಿ ಬಾಳು ಹದ ತಪ್ಪಿ ಮುರಿದು ಹೋಗುವ ಮೂರು ದಾಂಪತ್ಯಗಳು ಒಂದೇ ಕುಟುಂಬದ ಸತ್ಯಾ-ರಾಮಣ್ಣ, ನಾಗವೇಣಿ-ಗೋಪಾಲರಾಯ ಮತ್ತು ರಮ್ಯಾ-ಪ್ರಶಾಂತರದ್ದು.‌ ಸತ್ಯಾ ಸುಂದರಿಯಾದರೂ ಅಹಂಕಾರವಿಲ್ಲದ ಸರಳ-ಸಾಧು ಹೆಣ್ಣು. ಹಳ್ಳಿಯ ಬದುಕಿಗೆ ಚೆನ್ನಾಗಿ ಹೊಂದಿಕೊಂಡು ದೊಡ್ಡ ಕುಟುಂಬದ ಎಲ್ಲ ಕೆಲಸಗಳನ್ನು ಸಮರ್ಥವಾಗಿ ತೂಗಿಸಿಕೊಂಡು ಹೋಗುತ್ತಾಳೆ. ಆದರೆ ಅವಳ ಗಂಡ ರಾಮಣ್ಣ ಬೇಜವಾಬ್ದಾರಿ ಗಂಡಸು. ಮೇಲಾಗಿ ಪುರುಷ ಪ್ರಾಧಾನ್ಯದಲ್ಲಿ ನಂಬಿಕೆಯಿಟ್ಟವನು. ಹೆಣ್ಣಾದವಳು ಸದಾ ತಗ್ಗಿ ಬಗ್ಗಿ ಇರಬೇಕು ಮತ್ತು ಗಂಡ ಅವಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು ಅನ್ನುವವನು. ಅದ್ದರಿಂದ ಹೆಂಡತಿಯನ್ನು ಸದಾ ಕ್ರೂರವಾಗಿ ನಡೆಸಿಕೊಳ್ಳುತ್ತಾನೆ. ಪರಿಣಾಮವಾಗಿ ಸತ್ಯಾಸತ್ಯಳ ವೈಯಕ್ತಿಕ ಬದುಕಿನಲ್ಲಿ…

Read More

ಮಂಗಳೂರು : ಹೃದಯವಾಹಿನಿ ಮಂಗಳೂರು ಮತ್ತು ಎಸ್.ಕೆ. ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ (ರಿ.) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ 20ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ದಿನಾಂಕ 09 ಜನವರಿ 2025ರಂದು ಬೆಳಿಗ್ಗೆ 9-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಹಾಸ್ಯೋತ್ಸವ, ರಸಮಂಜರಿ, ಭಾಷಾ ಸೌಹಾರ್ದಗೋಷ್ಠಿ, ಕವಿಗೋಷ್ಠಿ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9886510087.

Read More

ಅಜ್ಜನಿಂದ ತಾಯಿ ಯಕ್ಷಗಾನದ ಪ್ರೇರೇಪಣೆಗೊಂಡು.. ತಾಯಿಯಿಂದ ಮಗಳಿಗೆ ಯಕ್ಷಗಾನದ ಆಸಕ್ತಿ ಹುಟ್ಟಿಕೊಂಡು ಪ್ರಸ್ತುತ ಯಕ್ಷ ರಂಗದಲ್ಲಿ ಛಾಪು ಮೂಡಿಸುತ್ತಿರುವ ಕಲಾವಿದೆ ಶ್ರೀರಕ್ಷಾ ಬಿ. ಕಾಸರಗೋಡಿನ ಶ್ರೀಮತಿ ಲತಾ ವಿಜಯಬಾನು ದಂಪತಿಯ ಕಿರಿಯ ಪುತ್ರಿಯಾಗಿ ಮೇ 2ರಂದು ಶ್ರೀರಕ್ಷಾ ಬಿ. ಅವರ ಜನನ. ಪ್ರಸ್ತುತ ಫಾದರ್ ಮುಲ್ಲರ್ ಹೊಮಿಯೋಪತಿ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರಿನಲ್ಲಿ 3ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ತಾಯಿಯ ತಂದೆ ವಿಶ್ವನಾಥ ಅವರು ಹವ್ಯಾಸಿ ಯಕ್ಷ ಕಲಾವಿದರು. ಇದರಿಂದ ತಾಯಿಗೂ ತಾಯಿಯಿಂದ ಮಗಳಿಗೂ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು. ಯಕ್ಷಗಾನ ಗುರುಗಳು:-  ಶ್ರೀ ದಿವಾಣ ಶಿವಶಂಕರ ಭಟ್ ಶ್ರೀ ಧರ್ಮೇಂದ್ರ ಆಚಾರ್ಯ ಬಾಯಾರ್ ನೆಚ್ಚಿನ ಪ್ರಸಂಗಗಳು:- ಶ್ರೀ ದೇವಿ ಮಹಾತ್ಮೆ, ಶ್ರೀ ಕೃಷ್ಣ ಲೀಲೆ, ದಕ್ಷಾಧ್ವರ. ನೆಚ್ಚಿನ ವೇಷಗಳು:- ಶ್ರೀ ದೇವಿ, ಶ್ರೀ ಕೃಷ್ಣ, ದಾಕ್ಷಾಯಿಣಿ, ಸುದರ್ಶನ, ವಿಷ್ಣು. “ಭಾಗವತರಲ್ಲಿ ಹಾಗೂ ಹಿರಿಯ ಕಲಾವಿದರಲ್ಲಿ ಅಭಿಪ್ರಾಯ ಕೇಳಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ”…

Read More

ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-91’ ಕಾರ್ಯಕ್ರಮದಡಿಯಲ್ಲಿ ‘ನಾಟಕಾಷ್ಟಕ’ದ ಮೂರನೇ ದಿನದ ಕಾರ್ಯಕ್ರಮ ದಿನಾಂಕ 28 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಲಾಪೋಷಕ ಡಾ. ಆದರ್ಶ ಹೆಬ್ಬಾರ್‌ ಇವರನ್ನು ಗೌರವಿಸಿದ ಗುರುರಾಜ್ ಮಾತನಾಡಿ “ಗಳಿಸಿದ ಒಂದಂಶವನ್ನು ಕಲೆಗಾಗಿ ಮುಡಿಪಾಗಿಡುವ ಗುಣ ಹಲವರಲ್ಲಿರುವುದಿಲ್ಲ. ಪ್ರತಿಭಾನ್ವಿತ ಯಕ್ಷಗಾನಾಸಕ್ತ ಹಾಗೂ ಸಂಗೀತಾಸಕ್ತ ಡಾ. ಆದರ್ಶ ಹೆಬ್ಬಾರ್ ಕಲಾ ಪೋಷಕರಾಗಿ ಹೆಸರಾದವರು. ಶ್ವೇತಯಾನದಲ್ಲಿ ‘ಭೀಷ್ಮ ವಿಜಯ’ ಪ್ರಸಂಗದಲ್ಲಿ ಸಾಲ್ವನ ಪಾತ್ರವನ್ನು ವಿಭಿನ್ನವಾಗಿ ರಂಗದಲ್ಲಿ ಕಟ್ಟಿಕೊಟ್ಟವರು. ಎಳವೆಯಲ್ಲಿ ಕಲಿತ ಹೆಜ್ಜೆಯನ್ನು ನಲವತ್ತು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿ ರಂಗವೇರಿ ಸೈ ಎನಿಸಿಕೊಂಡವರು. ಅವರ ಕಲೋತ್ಸಾಹ ನಿಜಕ್ಕೂ ಕಲಾಪ್ರಪಂಚಕ್ಕೆ ಆಸ್ತಿ ಎಂಬುದು ಜನಜನಿತವಾಗಿದೆ.” ಎಂದರು. ಖ್ಯಾತ ರಂಗ ತಜ್ಞ ರಾಮಕೃಷ್ಣ ಹೇರ್ಳೆ, ನಟನ ರಂಗಶಾಲೆಯ ಚೇತನ್, ಬಿ. ವಿ. ಕಾರಂತ್ ಕೋಣಿ, ಸತ್ಯನಾರಾಯಣ ಅರಸರು, ರಂಗ ನಿರ್ದೇಶಕ ವಾಸು ಗಂಗೇರ…

Read More

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಇದರ ವತಿಯಿಂದ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ – 2025’ವನ್ನು ತುಳು ಹಾಗೂ ಕನ್ನಡ ಚಲನಚಿತ್ರ ಮತ್ತು ರಂಗಭೂಮಿಯ ಪ್ರಸಿದ್ಧ ಕಲಾವಿದ ನವೀನ್ ಡಿ. ಪಡೀಲ್ ಇವರಿಗೆ ನೀಡಿ ಪುರಸ್ಕರಿಸಲಾಗುವುದು. ಈ ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ ಹಾಗೂ ಒಂದು ಲಕ್ಷ ರೂಪಾಯಿ ನಗದು ಒಳಗೊಂಡಿರುತ್ತದೆ. ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸದ್ರಿ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು. ನವೀನ್ ಡಿ. ಪಡೀಲ್ : ರಂಗಭೂಮಿ ಮತ್ತು ಚಲನಚಿತ್ರ ನಟರಾಗಿದ್ದು, ತುಳು ಭಾಷೆಯಲ್ಲಿ 15 ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ನಟಿಸಿದ್ದಾರೆ. ‘ಮಾಸ್ಟರ್ ಆಫ್ ಕಾಮೆಡಿ ಅಂಡ್ ಟ್ರಾಜಿಡಿ’ನಂತಹ ನಟನಾ ಪ್ರದರ್ಶನಗಳಿಂದ ತುಳು ರಂಗಭೂಮಿ ವಲಯಗಳಲ್ಲಿ ವ್ಯಾಪಕವಾಗಿ ಪ್ರಸಿದ್ಧರಾಗಿರುವ ಇವರನ್ನು ‘ಕುಸಲ್ದ ಅರಸೆ’ (ತಮಾಶೆಯ ರಾಜ) ಎಂದು ಕರೆಯುತ್ತಾರೆ. ಹಾಸ್ಯಮಯ ಪಾತ್ರಗಳಲ್ಲಿ ಮುಖ್ಯವಾಗಿ ಇವರು ನಟಿಸಿದ್ದು, ದೇವದಾಸ್ ಕಾಪಿಕಾಡ್ ಮತ್ತು…

Read More

ದೇವುಡು ನರಸಿಂಹ ಶಾಸ್ತ್ರಿಯವರು 1896 ಡಿಸೆಂಬರ್ 29 ರಂದು ಮೈಸೂರಿನಲ್ಲಿ ವೇದ ಶಾಸ್ತ್ರ ಪಾರಂಗತ ಮತ್ತು ಆಗರ್ಭ ಶ್ರೀಮಂತ ಕುಟುಂಬದಲ್ಲಿ ತಾಯಿ ಸುಬ್ಬಮ್ಮ ಮತ್ತು ತಂದೆ ಶ್ರೀ ಕೃಷ್ಣ ಶಾಸ್ತ್ರಿಯವರ ಪುತ್ರರಾಗಿ ಜನಿಸಿದರು. ದೇವುಡು ಎಂದೇ ಖ್ಯಾತರಾದ ಇವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲಿ ಒಬ್ಬರು. ತಮ್ಮ ಐದನೇ ವಯಸ್ಸಿನಲ್ಲಿ ತಂದೆಯನ್ನು ಕಳಕೊಂಡ ಇವರು ಆಗಲೇ ಸಂಸ್ಕೃತದ “ಅಮರ ಶಬ್ದ ಕೋಶ” ಮತ್ತು “ಶಬ್ದ ಮತ್ತು ರಘು ವಂಶ”ಗಳನ್ನು ಕಲಿತಿದ್ದರು. ಪ್ರಾಥಮಿಕ ಶಾಲೆಯಿಂದ ಮಾಧ್ಯಮಿಕ ಶಾಲೆಗೆ ಬರುವಾಗಲೇ ದೇವುಡು “ರಾಮಾಯಣ”, “ಮಹಾಭಾರತ”, “ಭಾಗವತ”, “ಬ್ರಹ್ಮಾಂಡ ಪುರಾಣ”ಗಳನ್ನು ಓದಿ ಮುಗಿಸಿದ್ದರು, ಮತ್ತು ಎಲ್ಲಾ ತರದ ಆಟಗಳಲ್ಲಿ ಭಾಗವಹಿಸಿ ದೇಹದಾರ್ಡ್ಯದ ಕಡೆಗೂ ಗಮನ ನೀಡಿದ್ದರು. ತಮ್ಮ ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪೂರೈಸಿದ ಇವರು 1917 ರಿಂದ 1922ರವರೆಗೆ ಮೈಸೂರು ಮಹಾರಾಜ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು. ಖ್ಯಾತ ಸಾಹಿತಿ ವಿ.ಸೀತಾರಾಮಯ್ಯ ಮತ್ತು ದೇವುಡು ಇವರು ಮೈಸೂರಿನಲ್ಲಿ ಸಹಪಾಠಿಗಳಾಗಿದ್ದು,…

Read More