Author: roovari

ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸಹಯೋಗದಲ್ಲಿ ಹೋಟೆಲ್ ಮೋತಿಮಹಲ್ ಸಭಾಂಗಣದಲ್ಲಿ ದಿನಾಂಕ 03-08-2023ರಂದು ‘ಭಾರತೀಯ ಭಾಷಾ ಲಿಪಿ’ ಬಗ್ಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಷಾ ತಜ್ಞ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸಕಾರ ಡಾ. ಕೆ.ಪಿ. ರಾವ್ ಅವರು ಮಾತನಾಡುತ್ತಾ “ಪ್ರತಿಯೊಬ್ಬರೂ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿ ಅದರ ಉಳಿವಿಗೆ ಪ್ರಯತ್ನಿಸಬೇಕು. ಇಂದು ಅದೆಷ್ಟೋ ಭಾಷೆಗಳು ನಶಿಸಿ ಹೋಗುತ್ತಿರುವುದು ಖೇದಕರ. ಪ್ರತಿಯೊಂದು ಭಾಷೆಯ ಬೆಳವಣಿಗೆಗೆ ನಮ್ಮಿಂದಾದಷ್ಟು ಕೊಡುಗೆ ನೀಡಬೇಕು. ವಿದ್ಯಾರ್ಥಿಗಳು ಮಾತೃ ಭಾಷೆಯ ಕುರಿತು ಅಭಿಮಾನ ಮತ್ತು ಗೌರವ ಹೆಚ್ಚಿಸಿ, ಭಾಷಾಭಿಮಾನ ಬೆಳೆಸಿಕೊಳ್ಳಬೇಕು.” ಎಂದು ಹೇಳಿದರು. ರೋಟರಿ ಅಧ್ಯಕ್ಷ ಕಿಶನ್‌ ಕುಮಾರ್ ಮಾತನಾಡಿ “ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ ವಹಿಸಿದ್ದವರಲ್ಲಿ ಡಾ.ಕೆ.ಪಿ. ರಾವ್ ಅಗ್ರಗಣ್ಯರು. ಉಚ್ಛಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸವನ್ನು ಸೃಷ್ಟಿಸಿ ಇದೇ ತರ್ಕ ಬಳಸಿ ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ ಇವರ…

Read More

ಮಂಗಳೂರು : ಆರ್ಟ್ ಕೆನರಾ ಟ್ರಸ್ಟ್ ಮಂಗಳೂರು ಮತ್ತು ಕವಿತಾ ಕುಟೀರ ಪೆರಡಾಲ ಇವರ ಸಹಯೋಗದಲ್ಲಿ ಕಾಸರಗೋಡಿನ ಪೆರಡಾಲದ ನವಜೀವನ ಹೈಸ್ಕೂಲಿನ ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಆಯೋಜಿಸಲಾಗುವ ನೂರ ಒಂದು (101) ಕತೆಗಳ ಮತ್ತು ಕವನಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವರೇ, ಅವಕಾಶ ಪಡೆಯುವುದಕ್ಕಾಗಿ ತಮ್ಮ ಬರಹಗಳನ್ನು ಸಲ್ಲಿಸಲು ಕೋರಲಾಗಿದೆ. 1) ನಾಡೋಜ ಕವಿ ಕೈಯ್ಯಾರ ಕಿಂಞಣ್ಣ ರೈ ಅವರ ಸ್ಮರಣಾರ್ಥವಾಗಿ ಪ್ರಕಟಿಸಲಾಗುವ ಈ ಕೃತಿಗೆ ನೀವು ಕಳುಹಿಸುವ ಬರಹಗಳು ಕನ್ನಡ ಭಾಷೆಯಲ್ಲಿ ಇರಬೇಕು. 2) 18ರಿಂದ 35 ವರ್ಷ ವಯೋಮಾನದವರು ಅಂದರೆ ಜನವರಿ 1988ರಿಂದ ದಶಂಬರ 2004ರ ಮಧ್ಯೆ ಜನಿಸಿದವರು ಅರ್ಹರಾಗಿರುತ್ತಾರೆ. 3) ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹುಟ್ಟಿ ಬೆಳೆದ ಹಾಗೂ ವಿದ್ಯಾರ್ಥಿಗಳಾಗಿರುವ ಎಲ್ಲರಿಗೂ ಭಾಗವಹಿಸುವ ಅವಕಾಶವಿದೆ. 4) ಬರಹಗಳ ಶಬ್ದ ಮಿತಿಯು 300 ಪದಗಳನ್ನು ಮೀರದಂತೆ ಕವನ ಮತ್ತು 500 ಪದಗಳನ್ನು ಮೀರದಂತೆ ಸಣ್ಣ ಕತೆ (micro stories) ಆಯ್ಕೆಗಾಗಿ 3ರಿಂದ 5 ಕತೆ-ಕವನಗಳು…

Read More

ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ಸರಕಾರಿ ಪ್ರೌಢ ಶಾಲೆ ಮರ್ಕಂಜ ಇದರ ಆಶ್ರಯದಲ್ಲಿ ಸಂಗೀತ ವರ್ಷಧಾರೆ ‘ಮಳೆ ಹಾಡುಗಳ ಕಲರವ’ ಕಾರ್ಯಕ್ರಮವು ದಿನಾಂಕ 10-08-2023ನೇ ಗುರುವಾರ ಸುಳ್ಯದ ಮರ್ಕಂಜದಲ್ಲಿರುವ  ಸರಕಾರಿ ಪ್ರೌಢಶಾಲೆಯಲ್ಲಿ  ಅಪರಾಹ್ನ 2.00ರಿಂದ ನಡೆಯಲಿದೆ. ಸರಕಾರಿ ಪ್ರೌಢ ಶಾಲೆ ಮರ್ಕಂಜದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಆನಂದ ಬಾಣೂರು  ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸರಕಾರಿ ಪ್ರೌಢ ಶಾಲೆ ಮರ್ಕಂಜದ ಮುಖ್ಯಶಿಕ್ಷಕಿಯಾದ ಶ್ರೀಮತಿ ವೀಣಾ ಎಂ.ಟಿ ಉಪಸ್ಥಿತರಿರುವರು. ಸುಳ್ಯದ ಭಾವನಾ ಸುಗಮ ಸಂಗೀತ ಬಳಗ (ರಿ.) ಇದರ ಶ್ರೀ ಕೆ.ಆರ್ ಗೋಪಾಲಕೃಷ್ಣ ಮತ್ತು ಬಳಗ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದು, ಕ.ಸಾ.ಪ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Read More

ಹೈದರಾಬಾದ್ : ‘ಗದ್ದರ್’ ಎಂದೇ ಮನೆಮಾತಾಗಿದ್ದ ತೆಲಂಗಾಣದ ಖ್ಯಾತ ಜಾನಪದ ಕಲಾವಿದ ಹಾಗೂ ‘ಪ್ರಜಾ ಗಾಯಕ’ ಗುಮ್ಮಡಿ ವಿಠ್ಠಲ್ ರಾವ್ (77) ಅನಾರೋಗ್ಯದಿಂದ ದಿನಾಂಕ 06-08-2023ರಂದು ಇಹಲೋಕ ವನ್ನು ತ್ಯಜಿಸಿದ್ದಾರೆ. 1949ರಲ್ಲಿ ತೆಲಂಗಾಣದ ತುಪ್ರಾನ್ ನಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಗದ್ದರ್ ನಿಜಾಮಾಬಾದಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಹಾಡುಗಳನ್ನು ಕಟ್ಟಿ ಹಾಡುತ್ತಿದ್ದ ಅವರು, ತೆಲುಗಿನ ಕೆಲವು ಕ್ರಾಂತಿಕಾರಿ ಸಿನಿಮಾಗಳಲ್ಲೂ ಅಭಿನಯಿಸಿದ್ದರು. ನಂತರದಲ್ಲಿ ಬ್ಯಾಂಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ತಮ್ಮನ್ನು ತಾವು ಸಂಪೂರ್ಣವಾಗಿ ಸಾಮಾಜಿಕ ಹೋರಾಟಗಳಿಗೆ ಅರ್ಪಿಸಿಕೊಂಡರು. ತಮ್ಮ ಕ್ರಾಂತಿ ಗೀತೆಗಳ ಮೂಲಕ ಯುವಕರನ್ನು ಮಾವೋವಾದಿ ಚಳವಳಿ ಹಾಗೂ ಪ್ರತ್ಯೇಕ ತೆಲಂಗಾಣ ಹೋರಾಟಕ್ಕೆ ಗದ್ದರ್ ಸೆಳೆದಿದ್ದರು. 2010ರವರೆಗೂ ‘ನಕ್ಸಲ್ ಚಳವಳಿ’ಯಲ್ಲಿ ಗುರುತಿಸಿಕೊಂಡಿದ್ದ ಅವರು, ತೆಲಂಗಾಣ ಪ್ರತ್ಯೇಕ ರಾಜ್ಯವಾದ ಮೂರು ವರ್ಷದ ಬಳಿಕ ಮಾವೋವಾದಿಗಳ ಸಂಪರ್ಕವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.

Read More

ಮಂಗಳೂರು : ಕೊಟ್ಟಾರದ ಭರತಾಂಜಲಿ ನೃತ್ಯ ಸಂಸ್ಥೆಯು ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಗಮಕ ಕಲಾ ಪರಿಷತ್ ಮಂಗಳೂರು ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ಭರತಾಂಜಲಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಗಮಕ ವಾಚನ ಕಾರ್ಯಕ್ರಮವು ದಿನಾಂಕ 04-08-2023ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ವಸ್ತಿಕ್ ನ್ಯಾಷನಲ್ ಶಾಲೆ ಉರ್ವ ಸ್ಟೋರ್ ಇದರ ಅಧ್ಯಕ್ಷ ರಾಘವೇಂದ್ರ ಹೊಳ್ಳ “ಭಾರತೀಯ ಸನಾತನ ಸಂಸ್ಕೃತಿಯು ತನ್ನದೇ ಆದ ಮೂಲ ಆದರ್ಶಗಳನ್ನು ಮತ್ತು ತತ್ವಗಳನ್ನು ಯಶಸ್ವಿಯಾಗಿ ರಕ್ಷಿಸುವ ಏಕೈಕ ಸಂಸ್ಕೃತಿಯಾಗಿದೆ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಸನಾತನ ಧರ್ಮದ ಅರಿವು ಮುಖ್ಯ. ನಮ್ಮ ಮಹಾ ಕಾವ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಈ ಗಮಕ ಕಲೆ ವಹಿಸುತ್ತಿರುವ ಪಾತ್ರ ಬಹು ಮಹತ್ವದ್ದಾಗಿದೆ” ಎಂದರು. ಯಕ್ಷಗಾನ ಅರ್ಥದಾರಿ ಮತ್ತು ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿಯವರು ಮಾತನಾಡಿ “ಭಾರತೀಯರ ಪ್ರಸ್ಥಾನ ತ್ರಯಗಳಲ್ಲೊಂದಾದ ಶ್ರೀ ಮದ್ರಾಮಾಯಣ ಮಹಾಕಾವ್ಯದಲ್ಲಿ ಮನುಷ್ಯ ಸಂಬಂಧದ ಬೇರೆ ಬೇರೆ ಮುಖಗಳನ್ನು ಪರಿಚಯಿಸಲಾಗಿದೆ. ಸಾಮಾಜಿಕ…

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಸಭಾ ಮಂದಿರದಲ್ಲಿ  ಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್‌.ರಾಮಚಂದ್ರ ಬಾಯರ್‌ ದತ್ತಿ, ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಹಾಗೂ ಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿ ಪ್ರಶಸ್ತಿಗಳ ಪ್ರದಾನ ಸಮಾರಂಭವು ದಿನಾಂಕ 04-8-2023ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಹಿ.ಚಿ.ಬೋರಲಿಂಗಯ್ಯನವರು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ನಿಜವಾದ ಸಾಧಕರಿಗೆ ಯೋಗ್ಯ ಪ್ರಶಸ್ತಿಗಳು ಲಭ್ಯವಾಗುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿಷ್ಟೆಯಿಂದ ಕೆಲಸ ಮಾಡುತ್ತಿದೆ. ನಮ್ಮ ದೇಶದಲ್ಲಿ ಅತಿಹೆಚ್ಚು ಜನಪದ ಕಲಾ ಪ್ರಾಕಾರಗಳು ಇವೆ. ನಮ್ಮ ನಾಡಿನಲ್ಲಿ ಬರೋಬರಿ 184 ಅಧಿಕೃತ ಕಲಾ ಪ್ರಾಕಾರಗಳನ್ನು ದಾಖಲಿಸಲಾಗಿದೆ. 21 ಜನಪದ ಮಹಾಕಾವ್ಯಗಳು ಪ್ರಕಟಗೊಂಡಿವೆ. ಆದರೂ ಕನ್ನಡ ನಾಡಿನಲ್ಲಿ ಬಹುತೇಕ ಜನಪದ ಕಲೆಗಳು ನಾಪತ್ತೆಯಾಗುವ ಹಂತಕ್ಕೆ ಬಂದಿವೆ. ಮೂಡಲಪಾಯ ಶೇ.99ರಷ್ಟು ನಾಪತ್ತೆಯಾಗಿದೆ.” ಎಂದು ಕಳವಳ ವ್ಯಕ್ತ ಪಡಿಸಿದರು. ಪ್ರಶಸ್ತಿ ಪ್ರದಾನ ಮಾಡಲು ಆಗಮಿಸಿದ…

Read More

ಮಂಗಳೂರು : ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ದ.ಕ. ಇದರ ವತಿಯಿಂದ ದಿನಾಂಕ 30-07-2023ರಂದು ‘ಭಾವೈಕ್ಯ ಸಮ್ಮಿಲನ’ದಲ್ಲಿ ಕವಿಗೋಷ್ಠಿ, ಸಾಧಕ ಸನ್ಮಾನ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮವು ಜೆರೊಸಾ ಹೈಸ್ಕೂಲ್ ಎದುರು ಜೆಪ್ಪು ಚರ್ಚ್ ಪ್ರಾಂಗಣದ ಮರಿಯಾ ಸಭಾ ಭವನದಲ್ಲಿ ದಿನ‌ಪೂರ್ತಿ ಅದ್ದೂರಿಯಾಗಿ ನೆರವೇರಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಭಾವೈಕ್ಯತಾ ಪರಿಷತ್ ಅಧ್ಯಕ್ಷರಾದ ಶ್ರೀ ಕೆ.ಎಂ. ಇಖ್ಬಾಲ್ ಬಾಳಿಲರವರು ಮಾತನಾಡುತ್ತಾ “ಭಾವೈಕ್ಯತೆ ಭಾರತ ದೇಶದ ಪರಂಪರಾಗತ ಸಂಸ್ಕೃತಿ ಮತ್ತು ಜೀವಾಳವಾಗಿದ್ದು ಅವರವರ ಧರ್ಮಾಚರಣೆಯನ್ನು ಚಾಚೂ ತಪ್ಪದೆ ಮಾಡಿದರೆ ಬದುಕು ಸಾರ್ಥಕ್ಯವನ್ನು ಪಡೆಯುತ್ತದೆ. ಸಾಹಿತ್ಯಕ್ಕೆ ಜನರನ್ನು ಒಗ್ಗೂಡಿಸುವ ಅದ್ಭುತ ಶಕ್ತಿಯಿದ್ದು ಕವಿಗಳು, ಲೇಖಕರು, ಸಾಹಿತಿಗಳು ನಾಡನ್ನು ಕಟ್ಟಲು ಪರಸ್ಪರ ಒಂದಾಗಬೇಕಾದ ಅನಿವಾರ್ಯತೆಯಿದೆ. ಭವ್ಯ ಭಾರತ ದೇಶವು ಸೌಹಾರ್ದತೆಯ ತಳಹದಿಯಲ್ಲಿ ಸಾಗಿ ಬಂದಿದ್ದು, ಕರ್ನಾಟಕ ಹಿಂದಿನಿಂದಲೂ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ಎಲ್ಲಾ ವರ್ಗದ ಜನರೂ ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಸಹಬಾಳ್ವೆ ನಡೆಸುವ ಭವ್ಯ ಪರಂಪರೆಯ ಇತಿಹಾಸ ಭಾರತದ ವೈಶಿಷ್ಟ್ಯತೆಗಳಲ್ಲೊಂದಾಗಿದ್ದು ಮಹಾನ್ ತ್ಯಾಗಿವರ್ಯರುಗಳ ಪರಿಶ್ರಮದ ಫಲವಾಗಿ…

Read More

ಮಂಗಳೂರು : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ಕ್ವಿಜಿಂಗ್ ಫೌಂಡೇಶನ್ ವತಿಯಿಂದ ಆಗಸ್ಟ್ 13ರಂದು ಪಾಂಡೇಶ್ವರ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ‘ಅಲ್ಟಿಮೇಟ್ ಇಂಡಿಯಾ ರಸಪ್ರಶ್ನೆ’ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯು ಶಾಲಾ ಮಕ್ಕಳಿಗಾಗಿ (10ನೇ ತರಗತಿಯವರೆಗೆ) ಮತ್ತು ಮುಕ್ತ ಹೀಗೆ ಎರಡು ವಿಭಾಗದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ಬೆಳಗ್ಗೆ 10 ಗಂಟೆಗೆ ಮತ್ತು ಸಾರ್ವಜನಿಕರಿಗೆ ಅಪರಾಹ್ನ 2 ಗಂಟೆಗೆ ಸ್ಪರ್ಧೆ ನಡೆಯಲಿದೆ. ರಸ ಪ್ರಶ್ನೆಯು ಭಾರತಕ್ಕೆ ಕೇಂದ್ರೀಕೃತವಾಗಿದೆ. ಎರಡೂ ವಿಭಾಗದಲ್ಲೂ ಮುಕ್ತ ಪ್ರವೇಶವಿದೆ. ರಸ ಪ್ರಶ್ನೆ ಇಂಗ್ಲಿಷ್‌ನಲ್ಲಿ ನಡೆಯಲಿದ್ದು, ಮೊದಲಿಗೆ ಲಿಖಿತ ಸುತ್ತು ನಡೆಯಲಿದೆ. ಆಯ್ಕೆಯಾದ ಮೊದಲ 6 ತಂಡಗಳು ಅಂತಿಮ ಸ್ಪರ್ಧೆಗೆ ಅರ್ಹತೆ ಪಡೆಯಲಿವೆ. ಫೈನಲ್‌ನಲ್ಲಿ ‘ಪೆಹಚಾನ್ ಕೌನ್’, ‘ಹಿಟ್‌ ಲಿಸ್ಟ್ ಕ್ರಾಸ್ ಕನೆಕ್ಷನ್’ ಮತ್ತು ‘ತೂ ತೂ ಮೈಮೈ’ನಂತಹ ಆಸಕ್ತಿದಾಯಕ ಸುತ್ತಗಳಿವೆ. ಸಾರ್ವಜನಿಕರ ವಿಭಾಗದಲ್ಲಿ ಮೊದಲ ಮೂರು ತಂಡಗಳಿಗೆ ಒಟ್ಟು ರೂ.50,000/- ಮೌಲ್ಯದ ನಗದು ಬಹುಮಾನ ದೊರೆಯಲಿದ್ದು, ಶಾಲಾ ರಸಪ್ರಶ್ನೆ ವಿಭಾಗದಲ್ಲಿ ವಿಜೇತರಿಗೆ 30 ಸಾವಿರ ರೂ.…

Read More

ಮಂಗಳೂರು : ಹಿರಿಯ ಸಾಹಿತಿ ಡಾ.ವಾಮನ ನಂದಾವರ ಅವರ ಬಹುಮಾನಿತ ‘ಸಿಂಗದನ’ ಕೃತಿಯ ಮೂರನೇ ಮುದ್ರಣವನ್ನು ನಗರದ ಬಲ್ಲಾಳ್ ಬಾಗ್‌ನ ಪತ್ತುಮುಡಿ ಸೌಧದಲ್ಲಿ ದಿನಾಂಕ 05-08-2023ರಂದು ಮೈಸೂರು ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನ ನಿರ್ದೇಶಕ ಡಾ. ಬಿ. ಶಿವರಾಮ ಶೆಟ್ಟಿ ಬಿಡುಗಡೆಗೊಳಿಸಿದರು. ಅವರು ಮಾತನಾಡುತ್ತಾ “ನಮಗೆ ಸಂಶೋಧನೆಯ ಬದಲು, ಸಂಶೋಧನ ವಿಷಯದ ಆಯ್ಕೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಾಹಿತಿ ಡಾ. ವಾಮನ ನಂದಾವರ ಅವರ ‘ಸಿಂಗದನ’ ಪುಸ್ತಕ ಜಾನಪದ ಸಂಶೋಧನೆಗೆ ದಿಕ್ಕೂಚಿ ಕೃತಿ. ಸಂಶೋಧನಾರ್ಥಿಗಳಿಗೆ ಬೇಕಾಗುವ ಅನೇಕ ಸಂಗತಿಗಳನ್ನು ಈ ಕೃತಿ ಹೊಂದಿದೆ. ನಮ್ಮತನವನ್ನು ತೋರಿಸುವ ಪ್ರಯತ್ನ, ದೇಸೀಯತೆ, ಸಾಂಸ್ಕೃತಿಕ ನೆಲೆಯಲ್ಲಿ ತುಳುವಿನ ವಿವೇಚನ ಮಾಡುವ ಚಿಂತನೆ ಈ ಪುಸ್ತಕದಲ್ಲಿ ಕಾಣಬಹುದು. ‘ಸಿಂಗದನ’’ ಕೃತಿಗೆ ಮೂರನೇ ಮರುಹುಟ್ಟು ಪ್ರಾಪ್ತವಾಗಿದೆ. 104 ಪುಟಗಳನ್ನು ಹೊಂದಿದ ಅಷ್ಟದಳದ ನಾಲ್ಕು ಲೇಖನವನ್ನು ಈ ಪುಸ್ತಕ ಹೊಂದಿದೆ. ಈ ನೆಲದ ತೌಳವ ಸಂಸ್ಕೃತಿ, ಭೂತಾರಾಧನೆಯ ಹುಟ್ಟು, ಪ್ರಸರಣ, ಮಡಿವಾಳ ಜಾತಿಗೆ…

Read More

ಮಂಗಳೂರು : ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಕಲ್ಲಾಪು ಬಳಿಯ ‘ಕದಿಕೆ’ ತುಳುಚಾವಡಿಯಲ್ಲಿ ‘ಆಷಾಢದ ಆಶಯ’ ಸಂವಾದ ಕಾರ್ಯಕ್ರಮ ದಿನಾಂಕ 03-08-2023ರಂದು ಜರಗಿತು. ಪ್ರತಿಷ್ಠಾನದ ಪ್ರಧಾನ ಸಂಚಾಲಕರಾದ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿಯವರು ಮಾತನಾಡುತ್ತಾ “ಸೂರ್ಯ ಹಾಗೂ ಚಂದ್ರರ ಚಲನೆಯನ್ನು ಅನುಸರಿಸಿ ಅವರವರ ಪದ್ಧತಿಯಂತೆ ಕಾಲದ ಪರಿಗಣನೆ ನಡೆಯುತ್ತದೆ. ತುಳುವರ ಆಟಿ ಆಚರಣೆಗಳು ಚಾಂದ್ರಮಾನ ಪದ್ಧತಿಯ ಆಷಾಢ ತಿಂಗಳಿಗೆ ಅನ್ವಯಿಸುವುದಿಲ್ಲ. ಆದ್ದರಿಂದ ಆಟಿ ಆಟಿಯೇ; ಅದನ್ನು ಆಷಾಢವೆಂದು ತಿಳಿಯುವುದು ಸರಿಯಲ್ಲ. ಪ್ರತೀ ಸಂಕ್ರಾಂತಿಯ ಮರುದಿನದಿಂದ ಸೌರಮಾನಿಗಳ ಹೊಸ ತಿಂಗಳು ಆರಂಭವಾದರೆ ಹುಣ್ಣಿಮೆ – ಅಮಾವಾಸ್ಯೆಗಳ ತಿಥಿಯನ್ನನುಸರಿಸಿ ಚಾಂದ್ರಮಾನಿಗಳು ತಿಂಗಳ ಲೆಕ್ಕಾಚಾರ ಮಾಡುತ್ತಾರೆ.” ಎಂದವರು ವಿಶ್ಲೇಷಿಸಿದರು. ಪದಾಧಿಕಾರಿಗಳಾದ ಪಿ.ಡಿ.ಶೆಟ್ಟಿ, ಲಕ್ಷ್ಮೀನಾರಾಯಣ ರೈ ಹರೇಕಳ, ಲಾಲಿತ್ಯ, ವಿಷ್ಣುಸ್ಮರಣ್ ರೈ, ವಿಜಯಲಕ್ಷ್ಮಿ ಬಿ. ಶೆಟ್ಟಿ, ನಮಿತಾ ಶಾಮ್, ಸುಮಾ ಪ್ರಸಾದ್, ಗೀತಾ ಜ್ಯುಡಿತ್ ಮಸ್ಕರೇನ್ಹಸ್,…

Read More