Author: roovari

ಕಾಸರಗೋಡು : ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಸ್ಥೆ ರಂಗ ಚಿನ್ನಾರಿಯ ಅಂಗ ಸಂಸ್ಥೆಯಾದ ನಾರಿಚಿನ್ನಾರಿಯ 7ನೇ ಸರಣಿ ಕಾರ್ಯಕ್ರಮ ‘ಶ್ರಾವಣ ಧಾರಾ’ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ದಿನಾಂಕ 30-07-2023ರಂದು ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನವ ಹಕ್ಕು ಸಂಘಟನೆ ಕಾಸರಗೋಡಿನ ರಾಜ್ಯಾಧ್ಯಕ್ಷೆ ಜುಲೇಖಾ ಮಾಹಿನ್ ನಾರಿಚಿನ್ನಾರಿಯ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ ಇದರ ಯಶಸ್ಸಿನ ಹಿಂದೆ ಸದಸ್ಯರ ಪರಿಶ್ರಮ ಎದ್ದು ಕಾಣುತ್ತದೆ ಎಂದು ಹೇಳಿದರು. ಆರೋಗ್ಯ ತಜ್ಞೆ ಡಾ. ಸಂಗೀತ ಸಚ್ಚಿದಾನಂದ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಾವ್ರತಿ ಮಂಜುಳಾ ರಾವ್ ಹಾಗೂ ಸಮಾಜ ಸೇವಕಿ ಚಂದ್ರಾವತಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ನಾರಿಚಿನ್ನಾರಿಯ ಗೌರವಾಧ್ಯಕ್ಷೆ ತಾರಾ ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೆ ಸವಿತಾ ಟೀಚರ್ ಅತಿಥಿಗಳಿಗೆ ಹೂ ಕುಂಕುಮದ ಆತಿಥ್ಯವನ್ನು ನೀಡಿದರು. ಬಳಿಕ ನಡೆದ ವಿಚಾರ ಸಂಕಿರಣದಲ್ಲಿ ಡಾ. ಸಂಗೀತ ಸಚ್ಚಿದಾನಂದ್ ಅವರು ‘ಮಳೆಗಾಲದ ಆಹಾರ…

Read More

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಂಗಳೂರು ಜರ್ನಿ ಥಿಯೇಟರ್ ಗ್ರೂಫ್ ಹಾಗೂ ಹಳೆ ವಿದ್ಯಾರ್ಥಿಸಂಘದ ಸಹಯೋಗದಲ್ಲಿ ನಡೆದ ಒಂದು ದಿನದ ರಂಗ ಚಟುವಟಿಕೆಗಳ ಕುರಿತ ಕಾರ್ಯಗಾರವು ದಿನಾಂಕ 23-07-2023ರಂದು ನಡೆಯಿತು. ಕಟೀಲು ದೇಗುಲದ ಅರ್ಚಕರಾದ ಶ್ರೀಹರಿನಾರಾಯಣದಾಸ ಆಸ್ರಣ್ಣನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಪುರಾಣ, ಇತಿಹಾಸಗಳ ವಿಚಾರಗಳನ್ನು ತಿಳಿಸಿ ಚಿಂತನಾಶಕ್ತಿಯನ್ನು ಹೆಚ್ಚಿಸಿ ಬದುಕಿನ ಪಾಠ ಹೇಳಿಕೊಡುವ ಕಾರ್ಯವನ್ನು ರಂಗಭೂಮಿ, ನಾಟಕಗಳು ಮಾಡುತ್ತವೆ” ಎಂದು ಹೇಳಿದರು. ಶಿಬಿರಾರ್ಥಿಗಳಿಂದ ರಂಗಗೀತೆ ಹಾಗೂ ಕಿರು ಪ್ರಹಸನ ಪ್ರದರ್ಶನಗೊಂಡವು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಕಟೀಲು ಪ.ಪೂ. ಕಾಲೇಜಿನ ಪ್ರಾಚಾರ್ಯೆ ಕುಸುಮಾವತಿ, ಶಿಕ್ಷಕರಾದ ರಾಜಶೇಖರ್, ಶೈಲಜಾ, ತನುಜಾ, ಜರ್ನಿ ಥಿಯೇಟರ್ ಗ್ರೂಪಿನ ಅರ್ಜುನ್ ಆಚಾರ್ಯ, ರಾಘವ ಸೂರಿ. ಸುಧೀಶ್ ಕೂಡ್ಲು, ರೋಹನ್. ಎಸ್. ಉಚ್ಚಿಲ್, ಚಿನ್ಮಯಿ. ವಿ. ಭಟ್ ಮತ್ತು ಶಶಾಂಕ್ ಐತಾಳ್ ಉಪಸ್ಥಿತರಿದ್ದರು.

Read More

ಹೊಸಕೋಟೆ : ಹೊಸಕೋಟೆಯ ನಿಂಬೆಕಾಯಿಪುರದ ‘ಜನಪದರು ರಂಗ ಮಂದಿರ’ದಲ್ಲಿ, ರಂಗಪಯಣ ತಂಡ ಬೆಂಗಳೂರು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗಾಗಿ ಜುಲೈ 31ರಂದು 31 ಜಿಲ್ಲೆಗಳ 31 ರಂಗ ಮಂದಿರಗಳಲ್ಲಿ 31 ಕಲಾವಿದರು ಏಕಕಾಲದಲ್ಲಿ ನಿಗದಿತ ಸಮಯ ಸಂಜೆ 7-10ರಿಂದ 8-05ರವರೆಗೆ ರಾಜಗುರು ಹೊಸಕೋಟೆಯವರ ರಚನೆ – ಸಂಗೀತ – ನಿರ್ದೇಶನದಲ್ಲಿ – “55 ನಿಮಿಷದ ಒಂದು ಪ್ರೇಮ ಕಥೆ…” ನಾಟಕವನ್ನು ಬೆ೦ಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ‘ಜನಪದರು ತಂಡ’ದ ನಟ ನಾಗೇಶ್ ಬೋಧನ ಹೊಸಹಳ್ಳಿಯವರು ನಟಿಸಿ ಸೈ ಎನಿಸಿಕೊಂಡರು. ಪ್ರೇಕ್ಷಕರು ಕುತೂಹಲದಿಂದ ಏಕವ್ಯಕ್ತಿ ಪ್ರದರ್ಶನ ಸವಿದರು. ಅತಿಥಿಗಳಾಗಿ ಸಾಹಿತಿ ಡಾ. ಬಾಲಗುರುಮೂರ್ತಿ, ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿ.ಎನ್. ನಾರಾಯಣಸ್ವಾಮಿ ಹಾಗೂ ಕಲಾವಿದ ನಾಗೇಶರನ್ನು ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ರ ಪಾಪಣ್ಣ ಕಾಟಂ ನಲ್ಲೂರು ಸನ್ಮಾನಿಸಿ ಗೌರವಿಸಿದರು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್, ಸಿದ್ದೇಶ್ವರ ದೊಡ್ದ ಬನಹಳ್ಳಿ, ಚಲಪತಿ ಹಾಗೂ ಮುನಿರಾಜು ಮತ್ತು ಇತರರು ಉಪಸ್ಥಿತರಿದ್ದರು. ನಾಗೇಶ್ ಬೋಧನ ಹೊಸಹಳ್ಳಿ ‘ಬಯಸಿದಂತೆ…

Read More

ಮಂಗಳೂರು : ಮಂಗಳೂರಿನ ಗದ್ದೆಕೇರಿ ರಸ್ತೆಯಲ್ಲಿರುವ ಶ್ರೀ ಮಹಮ್ಮಾಯಿ ದೇವಸ್ಥಾನದ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ, ತನ್ನ 101 ನೆಯ ವರ್ಷದಲ್ಲಿ ‘ ಶ್ರೀ ರಾಮ ಚರಿತಾಮೃತ’ ಎನ್ನುವ ಶ್ರೀ ರಾಮನ ಕಥಾನಕವನ್ನು ವರ್ಷ ಪೂರ್ತಿ ಪ್ರತಿ ಭಾನುವಾರ ವಿಶೇಷ ಕೂಟಗಳ ಮೂಲಕ ಪ್ರಸ್ತುತಪಡಿಸಿ ಈಗ ಶಿವ ಪುರಾಣದ ಕಥೆಗಳನ್ನು ಆಯ್ದುಕೊಂಡು ತನ್ನ 102 ನೆಯ ವರ್ಷದ ಯಕ್ಷಗಾನ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಈ ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 30.07.2023ರಂದು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ‘ತ್ರಿಪುರ ಮಥನ’ ಯಕ್ಷಗಾನ ತಾಳಮದ್ದಳೆ ಜರಗಿತು. ಕಾರ್ಯಕ್ರಮದಲ್ಲಿ ಭಾಗವತರಾಗಿ ಅಶೋಕ್ ಬೋಳೂರು ಹಾಗೂ ಶೋಭಾ ಐತಾಳ್, ಮದ್ದಳೆ ವಾದನದಲ್ಲಿ ಸಂಜಯ ಕುಮಾರ್, ಚೆಂಡೆ ವಾದನದಲ್ಲಿ ಶಿವಪ್ರಸಾದ್ ಪ್ರಭು, ಅರ್ಥಧಾರಿಗಳಾಗಿ ಶಿವಾನಂದ ಪೆರ್ಲಗುರಿ, ಪ್ರಭಾಕರ ಕಾಮತ್, ರಮೇಶ ಆಚಾರ್ಯ, ಸಂಜಯ ಕುಮಾರ್ ಮತ್ತು ಶ್ರೇಯಸ್ ಪಾಲ್ಗೊಂಡರು.

Read More

ದಿನಾಂಕ 10-07-2023ರಂದು ಒಂದು ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಹ ಅವಕಾಶ ನನಗೆ ಒದಗಿ ಬಂತು. ಇದು ತುಳುಲಿಪಿಯ ಪುನರುಜ್ಜೀವನದ ಕಾರ್ಯದಲ್ಲಿ ಐತಿಹಾಸಿಕ ಘಟನೆ ಎಂದರೆ ತಪ್ಪಾಗಲಾರದು ಎಂದು ಭಾವಿಸುತ್ತೇನೆ. ಯಾಕೆಂದರೆ ನಿನ್ನೆ ತುಳುಲಿಪಿಯ ಪ್ರಪ್ರಥಮ ಭಗವದ್ಗೀತೆ ಪುಸ್ತಕದ ಬಿಡುಗಡೆ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ ಸಮ್ಮುಖದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠದಲ್ಲಿ ನಡೆಯಿತು. ಇದರ ಲೇಖಕರು ವಿದುಷಿ ಶ್ರೀಮತಿ ಅಪರ್ಣಾ ಕೊಡಂಕಿರಿಯವರು. ಇವರು ಮೂಲತಃ ನೃತ್ಯ ವಿದ್ವಾಂಸರಾದರೂ ಸಹ ತಮಗೆ ತುಳು ಭಾಷೆಯ ಮೇಲಿರುವ ಅಕ್ಕರೆಯನ್ನು, ಗ್ರಾಂಥಿಕವಾಗಿ ತುಳುನಾಡಿನ ಸಮಸ್ತ ಜನರಿಗೂ ಭಗವದ್ಗೀತೆ ಅನುವಾದದ ಮೂಲಕ ಸಮರ್ಪಿಸಿದರು. ಇವರ ಅನುಜ ಮುಕುಂದ ಉಂಗ್ರುಪುಳಿತ್ತಾಯ ಅವರು ಉಡುಪಿಯಲ್ಲಿ ಜ್ಯೋತಿಷ್ಯ ಶಾಸ್ತ್ರ ಅಧ್ಯಯನ ಮಾಡುವಲ್ಲಿ ತುಳು ಲಿಪಿಯ ಪರಿಚಯವಾಯಿತು. ತಮ್ಮನಿಂದ ಕಲಿತ ಲಿಪಿಯನ್ನು ಹವ್ಯಾಸಕ್ಕಾಗಿ ಅಭ್ಯಾಸ ಮಾಡುತ್ತಿರುವಾಗ ಬಂದಂತಹ ಆಲೋಚನೆಯೇ ಈ ಪುಸ್ತಕದ ಹಿಂದಿನ ಸ್ಪೂರ್ತಿ. ಅಷ್ಟಕ್ಕೂ ಈ ಪುಸ್ತಕದಲ್ಲೇನಿದೆ ಮಹಾ! ಇನ್ನೊಂದು ಭಗವದ್ಗೀತೆಯ ಅನುವಾದವಷ್ಟೇ ಎಂದುಕೊಂಡರೆ ಮೂರ್ಖತನವಾಗುವುದು, ಏಕೆಂದರೆ, ಈ ಅನುವಾದ ತುಳು…

Read More

ಧಾರಾಕಾರವಾಗಿ ಮಳೆಸುರಿದು ತೊಯ್ದನೆಲ. ತುಂಬಿ ತುಳುಕಿ ಹರಿಯುತ್ತಿರುವ ನಂದಿನೀ ನದಿ. ಸೊಂಪಾಗಿ ಬೆಳೆದಿರುವ ಸಸ್ಯರಾಶಿ. ದಿನಾಂಕ 23-07-2023ರ ಷಷ್ಠಿ ತಿಥಿಯಂದು ಕಟೀಲಮ್ಮನ ದರ್ಶನಕ್ಕೆಂದು ಬಂದು ಹೋಗುತ್ತಿರುವ ಭಕ್ತ ಸಮೂಹ. ದೇವ ಸಾನಿಧ್ಯದಲ್ಲಿ ಯಾವತ್ತೂ ನಡೆಯುವ ಪೂಜೆ ಪುನಸ್ಕಾರಗಳು. ಶ್ರೀ ದುರ್ಗಾಪರಮೇಶ್ವರಿಯ ಆರಾಧನೆಯ ಸುತ್ತಮುತ್ತ ನಡೆಯುತ್ತಿದ್ದ ಈ ಎಲ್ಲ ಚಟುವಟಿಕೆಗಳ ಚಲನಶೀಲತೆಯೊಂದಿಗೆ ಮಧುರವಾಗಿ ವೇಣುವಾದನದ ಸ್ವರ ಸಮೂಹವೂ ಹುಮ್ಮಸ್ಸಿನಿಂದ ಮೇಳೈಸಿದ ಅನುಭವವನ್ನು ಇತ್ತೀಚೆಗೆ ನಾವು ಪಡೆಯುವಂತಾಯಿತು. ಸಂದರ್ಭವೊದಗಿದ್ದು ಹೀಗೆ- ಹಿರಿಯ ಸಂಗೀತ ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯ ಅವರ ನೇತೃತ್ವದ ಮಧುರಧ್ವನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ‘ಮಧುರಧ್ವನಿ-ಸುಪ್ರಭಾತ ಸೇವೆ’ ಎಂಬ ಕಾರ್ಯಕ್ರಮದಲ್ಲಿ ವಿದ್ವಾನ್ ಕೃಷ್ಣ ಪವನ್ ಕುಮಾರರ ವೇಣುವಾದನ ಕಛೇರಿ. ಒಂದು ಗಂಟೆಯ ಅವಧಿಗೆ ಸೀಮಿತವಾಗಿದ್ದರೂ ಹದವರಿತ ಪ್ರಸ್ತುತಿ, ಯಾವುದೇ ಓಟ ಎಳೆತಗಳಿಲ್ಲ, ದೇವಸಾನ್ನಿಧ್ಯದ ಚಲನಶೀಲತೆಯ ಲಯದೊಂದಿಗೆ ಹೊಂದಿಕೊಂಡಿದ್ದರೂ ಶ್ರವಣೇಂದ್ರಿಯಗಳ ಮೂಲಕ ಚಿತ್ತವನ್ನು ಸೆಳೆದ ರಾಗಲಹರಿ. ಏಳು ಸಂಗೀತ ರಚನೆಗಳಿಂದ ಬದ್ಧವಾಗಿತ್ತು ಆ ಸುಪ್ರಭಾತ ಸಂಗೀತ ಸೇವೆ. ಎಲ್ಲವೂ ದೇವಿಯ ವಿವಿಧ ರೂಪಗಳ,…

Read More

ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಕೊಡವ ಎಂ.ಎ ಸ್ನಾತಕೋತ್ತರ ವಿಭಾಗ ಹಾಗೂ ಕೊಡವ ಮಕ್ಕಡ ಕೂಟ (ರಿ) ಇವರ ಸಹಕಾರದೊಂದಿಗೆ ಜಾಲಿ ಸೋಮಣ್ಣ ಕೊಟ್ಟುಕತ್ತಿರ ವಿರಚಿತ ‘ಕರ್ಮ-ಪ್ರಾರಬ್ಧ’ ಕೃತಿಯ ಬಿಡುಗಡೆ ಸಮಾರಂಭವು ದಿನಾಂಕ 05-8-2023ರ ಬೆಳಿಗ್ಗೆ 10.30ಕ್ಕೆ ಎಫ್.ಎಂ.ಕೆ.ಎಂ.ಸಿ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಮೇಜರ್ ರಾಘವ ವಹಿಸುತ್ತಿದ್ದು, ಅತಿಥಿಗಳಾಗಿ ಕಾಲೇಜಿನ ಎಂ.ಎ ಕೊಡವ ವಿಭಾಗದ ಸಂಯೋಜಕರಾದ ಶ್ರೀ ಮೇಚಿರ ರವಿಶಂಕರ ನಾಣಯ್ಯ, ಎಂ.ಎ ಕೊಡವ ವಿಭಾಗದ ಉಪನ್ಯಾಸಕ ಮತ್ತು ಸಾಹಿತಿಯಾದ ಶ್ರೀ ಬಾಚರಣಿಯಂಡ ಪಿ. ಅಪ್ಪಣ್ಣ,  ಎಂ.ಎ ಕೊಡವ ವಿಭಾಗದ ಉಪನ್ಯಾಸಕಿ ಮತ್ತು ಸಾಹಿತಿಯಾದ ಶ್ರೀಮತಿ ಬಾಚರಣಿಯಂಡ ರಾಣು ಅಪ್ಪಣ್ಣ, ಸಾಹಿತಿ ಮತ್ತು ಪುಸ್ತಕದ ಲೇಖಕರಾದ ಜಾಲಿ ಸೋಮಣ್ಣ ಕೊಟ್ಟುಕತ್ತಿರ, ಕೊಡವ ಎಂ.ಎ ವಿದ್ಯಾರ್ಥಿ ಹಾಗೂ ಕೊಡವ ಮಕ್ಕಳ ಕೂಟದ ಅಧ್ಯಕ್ಷರಾದ ಶ್ರೀ ಬೊಳ್ಳಜಿರ ಬಿ. ಅಯ್ಯಪ್ಪ  ಭಾಗವಹಿಸಲಿದ್ದಾರೆ.

Read More

ಮಂಗಳೂರು : ಯುವವಾಹಿನಿ ಕೇಂದ್ರ ಸಮಿತಿ ಹಾಗೂ ಯುವಸಿಂಚನ ಸಂಪಾದಕ ಮಂಡಳಿಯ ಆಶ್ರಯದಲ್ಲಿ ದಿನಾಂಕ 30-07-2023ರಂದು ಮಂಗಳೂರು ಉರ್ವ ಸ್ಟೋರ್‌ನ ಯುವವಾಹಿನಿ ಸಭಾಂಗಣದಲ್ಲಿ ಸಾಹಿತ್ಯ ಸಂಗಮ ಬರಹಗಾರರ ಸಮಾಗಮ ಕಾರ್ಯಕ್ರಮವು ಉದ್ಘಾಟನೆ ಗೊಂಡಿತು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ರಾಜೇಶ್ ಬಿ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಬಿ.ಎಂ.ರೋಹಿಣಿಯವರು ಮಂಗಳ ದೀಪವನ್ನು ಬೆಳಗಿ ಉದ್ಘಾಟಿಸಿ ಮಾತನಾಡುತ್ತಾ “ಸಾಹಿತ್ಯವನ್ನು ಪ್ರೀತಿಸಲು ಕಲಿಯಿರಿ, ಬರವಣಿಗೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಸಮಾಜವನ್ನು ನೋಡುವ ದೃಷ್ಟಿಕೋನವನ್ನು ಸಾಹಿತ್ಯದ ರೂಪದಲ್ಲಿ ನಾವು ಕಂಡುಕೊಳ್ಳಬಹುದು. ಮಹಿಳೆಯರು ಸಾಹಿತ್ಯ ಕ್ಷೇತ್ರವನ್ನು ಬಹು ಬೇಗ ರೂಢಿಸಿಕೊಳ್ಳುತ್ತಾರೆ.” ಎಂದರು ಕಾರ್ಯಕ್ರಮದಲ್ಲಿ ದಾವಣಗೆರೆಯ ಉಪನ್ಯಾಸಕ ಫ್ರಾನ್ಸಿಸ್ ಗ್ಸೇವಿಯರ್ ಅವರು ‘ಕೃತಿ ಸಾಮ್ಯತೆ ಹಾಗೂ ಪ್ರಕಾಶನದ ಬಗ್ಗೆ’,  ಮೂಡಬಿದಿರೆಯ ಆಳ್ವಾಸ್‌ನ ಉಪನ್ಯಾಸಕರಾದ ಡಾ. ಯೋಗೀಶ್ ಕೈರೋಡಿಯವರು ‘ಬರವಣಿಗೆಯಲ್ಲಿ ಅಧ್ಯಯನಶೀಲತೆ’ಎಂಬ  ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶ್ರೀ ಅನೀಶ್ ಪೂಜಾರಿ ವೇಣೂರು ಇವರು ನಮ್ಮ ಮನಸ್ಸಿನ ಗಟ್ಟಿತನ…

Read More

ಧಾರವಾಡ : ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ವತಿಯಿಂದ ಪ್ರೊ. ಎಸ್.ಸಿ. ಪಾಟೀಲರ 68ನೇ ಜನ್ಮದಿನ ಸಂಭ್ರಮದ ಅಂಗವಾಗಿ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ 23-07-2023ರಂದು ಆಯೋಜಿಸಿದ್ದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾಧಿಕಾರಿ ಡಾ. ಕೆ. ಪ್ರೇಮಕುಮಾರ್ ಮಾತನಾಡುತ್ತಾ “ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಲಲಿತಕಲಾ ವಿಶ್ವವಿದ್ಯಾಲಯದ ಅವಶ್ಯಕತೆ ಇದೆ. ಸರ್ಕಾರ ಆದಷ್ಟು ಬೇಗ ಈ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು. ಈಗಾಗಲೇ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ವಿಶೇಷಾಧಿಕಾರಿಯ ನೇಮಕ ಮಾಡಲಾಗಿದೆ. ಬಾದಾಮಿಯಲ್ಲಿ 430 ಎಕರೆ ಜಾಗ ಗುರುತಿಸಲಾಗಿದೆ. ವಿಶ್ವವಿದ್ಯಾಲಯದ ಕರಡು ಅಧಿನಿಯಮವನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಷ್ಠಾನ ಮಾತ್ರ ಬಾಕಿ ಇದೆ. ಸರ್ಕಾರ ಆ ಕೆಲಸವನ್ನು ಕೂಡಲೇ ಮಾಡಬೇಕು” ಎಂದು ಆಗ್ರಹಿಸಿದರು. ಡಾ.ಪ್ರೇಮಾನಂದ ಲಕ್ಕಣ್ಣವರ ರಚಿಸಿದ ‘ಕರ್ನಾಟಕದ ಚಿತ್ರಕಲಾ ಸಾಹಿತ್ಯ: ಒಂದು ವೈಚಾರಿಕ ಅಧ್ಯಯನ’ ಎಂಬ ಗ್ರಂಥವನ್ನು ಕರ್ನಾಟಕ ವಿಶ್ವವಿದ್ಯಾಲಯದ ಡಾ. ಚಂದ್ರಶೇಖರ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಶಾಸನ ಶಾಸ್ತ್ರ ಡಿಪ್ಲೋಮಾ ತರಗತಿಯ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನ ಕಾರ್ಯಕ್ರಮ ದಿನಾಂಕ 27-07-2023 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಕನ್ನಡ ಸಾಹಿತ್ಯ, ಇತಿಹಾಸ, ಸೇರಿದಂತೆ ಭಾಷೆ ಮತ್ತು ಸಂಸ್ಕೃತಿಯ ಮೂಲ ತಿಳಿಯುವ ಅವಶ್ಯಕತೆ ಇದೆ. ಅವುಗಳೆಲ್ಲವೂ ದಾಖಲಾಗಿರುವುದು ನಮ್ಮಲ್ಲಿಯ ಶಾಸನಗಳಲ್ಲಿ. ಅದನ್ನು ಅರಿಯಲು ಕನ್ನಡ ಶಾಸನಗಳ ಅಧ್ಯಯನ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಶಾಸನಗಳ ಅಧ್ಯಯನ ಹಾಗೂ ಶೋಧ ಕಾರ್ಯಕ್ಕೆ ಪರಿಷತ್ತು ಹೆಚ್ಚಿನ ಒತ್ತು ನೀಡಲಿದೆ. ಕನ್ನಡದ ಮೊದಲ ಶಾಸನವಾಗಿರುವ ಹಲ್ಮಿಡಿ ಶಾಸನದ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಇತಿಹಾಸ ಸಂಶೋಧನೆಗೆ ಶಾಸನಗಳ ಅಧ್ಯಯನ ತುಂಬಾ ಅಗತ್ಯವಾಗಿದೆ. ಆದ್ದರಿಂದ ಶಾಸನ ಶಾಸ್ತ್ರ ಅಧ್ಯಯನ ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಮುಂದುವರೆಯಲಿದ್ದಾರೆ ಎನ್ನುವ ಭರವಸೆ ಇದೆ.” ಎಂದು ಅಭಿಪ್ರಾಯ ಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರ ಡಿಪ್ಲೋಮಾ…

Read More