Author: roovari

ಬೆಂಗಳೂರು : ರಂಗನಿರಂತರ ಅರ್ಪಿಸುವ ರಂಗಾಸಕ್ತರ ಗಮನ ಸೆಳೆದ ಈ ವರ್ಷದ ಒಂದು ಪ್ರಮುಖ ನಾಟಕ ಮಂಗಳೂರಿನ ಆಯನ ನಾಟಕದ ಮನೆ ಪ್ರಸ್ತುತ ಪಡಿಸುವ ಮೋಹನಚಂದ್ರ ಪಠ್ಯ ಮತ್ತು ನಿರ್ದೇಶನದಲ್ಲಿ ‘ಅಶ್ವತ್ಥಾಮ’ ದಿನಾಂಕ 12 ಜೂನ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಮೊದಲನೇ ಬಾರಿ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ತ್ಯಾಗರಾಜ್ 9449074898, ಕಿರಣ್ ಸಿಜಿಕೆ 9663574999 ಮತ್ತು ವಿನೋದ್ 9448063542 ಸಂಖ್ಯೆಯನ್ನು ಸಂಪರ್ಕಿಸಿರಿ. ನಾಟಕದ ಬಗ್ಗೆ : ಮಹಾಭಾರತದ ಹಲವಾರು ದುರಂತ ಪಾತ್ರಗಳಲ್ಲಿ ಅಶ್ವತ್ಥಾಮನ ಪಾತ್ರವೂ ಒಂದು. ಕುರುಕ್ಷೇತ್ರ ಯುದ್ಧದ ಬಳಿಕ ಉಪಪಾಂಡವರ ಹತ್ಯೆಯ ಕಾರಣದಿಂದಾಗಿ ಸಾವಿಲ್ಲದೆ ಸದಾ ಮರಣಕ್ಕಾಗಿ ಹಪಹಪಿಸುವ ಶಾಪಗ್ರಸ್ತ. ನಾಟಕ ಸುತ್ತುವುದೇ ಸಾವಿಲ್ಲದ ಬದುಕು ಒಂದು ಶಾಪ ಎಂದು ಗ್ರಹಿಸಿದ (ಕೃಷ್ಣನ) ಚಿಂತನೆ ; ಸತ್ತಿದ್ದರೂ ಇನ್ನೂ ಅಜರಾಮರ ಎಂದು ಬದುಕುವ (ಅಶ್ವತ್ಥಾಮನ) ಮನ:ಸ್ಥಿತಿ. ಇವೆರಡರ ನಡುವೆ ತನ್ನವರ ಕೊಲೆಯ ಪ್ರತೀಕಾರದಿಂದ ನಿರ್ಮಾಣಗೊಂಡ ಯುದ್ಧದ ಕಾರಣಗಳ ಹಿಂದಿರುವ (ಶಕುನಿಯ) ಮರ್ಮ..…

Read More

ಪುತ್ತೂರು : ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ದಿನಾಂಕ 08 ಜೂನ್ 2025ರಂದು ಡಾ. ವೆಂಕಟ ಗಿರೀಶ್ ಹಾಗೂ ಡಾ. ವಾಣಿಶ್ರೀ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ‘ಶತ ಸಂಭ್ರಮ’ ಹಾಗೂ ಆಶುಕವಿ ಪೊಟ್ಟಿಪ್ಪಲ ನಾರಾಯಣ ಭಟ್ಟರ ‘ನುಡಿ ನಮನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಿ ಡಾ. ಸುರೇಶ ನೆಗಳಗುಳಿಯವರು ಮಾತನಾಡಿ “ಎಲ್ಲರೂ ಭಾವಪೂರ್ಣರೂ ಕವಿ ಮನದವರೂ ಆಗಿರುತ್ತಾರೆ. ಆದರೆ ಅದಕ್ಕೆ ಚೌಕಟ್ಟು ಹಾಗೂ ಅವಕಾಶ ದೊರಕಿದಾಗ ಕವಿಗಳಾಗುತ್ತಾರೆ ಹಾಗೂ ಪ್ರಶಸ್ತಿಗಳು ಖರೀದಿ ಯೋಗ್ಯವಲ್ಲ” ಎಂದು ಹೇಳಿದರು. ಪುತ್ತೂರಿನ ದೇವಸ್ಥಾನದ ವ್ಯವಸ್ಥಾಪಕ ಈಶ್ವರ ಭಟ್ಟರು ದೀಪ ಪ್ರಜ್ವಲನೆ ಗೈದು ಪುತ್ತೂರು ಕ.ಸಾ.ಪ. ಅಧ್ಯಕ್ಷ ಉಮೇಶ ನಾಯಕ್ ಉದ್ಘಾಟಿಸಿದ ಸಮಾರಂಭವು ಡಾ. ವೆಂಕಟ ಗಿರೀಶ್ ರ ಸಭಾಧ್ಯಕ್ಷತೆಯಲ್ಲಿ ಮುಂದುವರಿಯಿತು. ಪೆರ್ಲದ ಉದ್ಯಮಿ ಪ್ರಸಾದ್ ಪೆರ್ಲ ಕೀರ್ತಿಶೇಷ ನಾರಾಯಣ ಭಟ್ಟರ ಗುಣಗಾನ ಮಾಡಿದರು. ಶಿವಮಣಿ ಕಲಾಸಂಘದ ಶಿವಮಣಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ ಜಯಾನಂದ ಪೆರಾಜೆ,…

Read More

ಬೆಂಗಳೂರು : ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಇವರ ಜಂಟಿ ಸಹಯೋಗದೊಂದಿಗೆ ‘ಬೆಂಗಳೂರು ಕಿರುನಾಟಕೋತ್ಸವ’ವನ್ನು ಆಯೋಜಿಸುತ್ತಿದ್ದು, ನಿರೂಪಣಾ ವಿಷಯ : ಸಮಗ್ರತೆ ಆಗಿರುತ್ತದೆ. ದಿನಾಂಕ 27 ಜೂನ್ 2025 ನೋಂದಾವಣೆಗಾಗಿ ಕೊನೆಯ ದಿನಾಂಕವಾಗಿದ್ದು, 29 ಜೂನ್ 2025ರಂದು ಪ್ರಾಥಮಿಕ ಹಂತದ ಸ್ಪರ್ಧೆ ಹಾಗೂ 12 ಜುಲೈ 2025ರಂದು ಅಂತಿಮ ಹಂತದ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9902590303 ಮತ್ತು 9686869676 ಸಂಖ್ಯೆಯನ್ನು ಸಂಪರ್ಕಿಸಿರಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ನಾಟಕ, ಪ್ರೇಕ್ಷಕರ ಆಯ್ಕೆಯ ಅತ್ಯುತ್ತಮ ನಾಟಕ, ಸ್ವರಚಿತ ಅತ್ಯುತ್ತಮ ಕಥೆ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ವಿನ್ಯಾಸ, ಅತ್ಯುತ್ತಮ ನಿರ್ವಹಣೆ ಮತ್ತು ಅತ್ಯುತ್ತಮ ಭಿತ್ತಿ ಪತ್ರ ವಿನ್ಯಾಸ ಮುಂತಾದ ಪ್ರಶಸ್ತಿಗಳು ಈ ನಾಟಕೋತ್ಸವದಲ್ಲಿ ಪ್ರಕಟಗೊಳ್ಳಲಿವೆ.

Read More

ಬೆಂಗಳೂರು : ಎಸ್.ಎಲ್. ಭೈರಪ್ಪ ಪ್ರತಿಷ್ಠಾನ (ರಿ.) ಇವರ ಉದ್ಘಾಟನಾ ಸಮಾರಂಭವನ್ನು ದಿನಾಂಕ 14 ಜೂನ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಬಸವನಗುಡಿ ರಸ್ತೆಯಲ್ಲಿರುವ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬಸವರಾಜ ಬೊಮ್ಮಾಯಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಶತಾವಧಾನಿ ಡಾ. ರಾ. ಗಣೇಶ್ ಇವರು ‘ಭೈರಪ್ಪನವರ ಕೃತಿಗಳಲ್ಲಿ ಮೌಲ್ಯಮೀಮಾಂಸೆ’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿರುವರು. ಶ್ರೀಮತಿ ಸಹನಾ ವಿಜಯಕುಮಾರ್ ಇವರು ಪ್ರಸ್ತಾವನೆ ಮಾಡಲಿದ್ದು, ಶ್ರೀಯುತರಾದ ಎಸ್.ಎಲ್. ಭೈರಪ್ಪ, ಕೃಷ್ಣ ಪ್ರಸಾದ್ ಹಾಗೂ ಅರುಣ ಇವರುಗಳು ಭಾಗವಹಿಸಲಿದ್ದಾರೆ.

Read More

ಬದಿಯಡ್ಕ : ಕವಿ ನಾಡೋಜ ಕೈಯಾರ ಕಿಂಞಣ್ಣ ರೈ ಅವರ 110ನೇ ಜನ್ಮ ದಿನಾಚರಣೆಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಹಾಗೂ ಕುಟುಂಬದ ಸಹಕಾರದೊಂದಿಗೆ ಅವರ ಮನೆಯಲ್ಲಿ ದಿನಾಂಕ 08 ಜೂನ್ 2025ರಂದು  ಆಚರಿಸಲಾಯಿತು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ಚನಿಯಪ್ಪ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎ .ಆರ್. ಸುಬ್ಬಯ್ಯಕಟ್ಟೆ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಹಿನ್ ಕೇಳೋಟ್  ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರೊಫೆಸರ್ ಶ್ರೀನಾಥ್, ಡಾ.  ಶ್ರೀನಿಧಿ ಸರಳಾಯ, ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರವಿ ನಾಯ್ಕಾಪು, ಪತ್ರಕರ್ತರುಗಳಾದ ಗಂಗಾಧರ ತೆಕ್ಕೆ ಮೂಲೆ, ಪುರುಷೋತ್ತಮ ಭಟ್, ಹರೀಶ್ ಗೋಸಾಡ, ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ಶ್ರೀ ನಿರಂಜನ್ ರೈ ಪೆರಡಾಲ, ವಸಂತ ಬಾರಡ್ಕ ಹಾಗೂ ಕಯ್ಯಾರರ ಪುತ್ರ ಪ್ರದೀಪ್ ರೈ ಹಾಗೂ ಸೊಸೆ ಆರತಿ ರೈ  ಉಪಸ್ಥಿತರಿದ್ದರು. ಕುಮಾರಿ ಶ್ರೇಯಾ ತೆಕ್ಕೆಮೂಲೆ ಪ್ರಾರ್ಥನೆ…

Read More

ಇತ್ತೀಚೆಗೆ ಗತಿಸಿದ ಕನ್ನಡದ ʻಕಾವ್ಯ ಕಾಮಧೇನುʼ ಎನಿಸಿದ ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಎಚ್.‌ಎಸ್.‌ ವೆಂಕಟೇಶಮೂರ್ತಿ ಇವರಿಗೆ ಸಾರ್ವಜನಿಕವಾಗಿ ಗೌರವಾರ್ಪಣೆ ಮಾಡುವ ಅಪೂರ್ವ ಅವಕಾಶವೊಂದನ್ನು ಕಪ್ಪಣ್ಣ ಅಂಗಳ ಹಾಗೂ ಸಮಂಜಸ ತಂಡಗಳು ದಿನಾಂಕ 08 ಜೂನ್ 2025ರಂದು ಎನ್‌.ಆರ್‌. ಕಾಲೋನಿಯ ಸಿ. ಅಶ್ವತ್ಥ ಕಲಾಭವನದಲ್ಲಿ ಕಲ್ಪಿಸಿಕೊಟ್ಟರು. ಕನ್ನಡ ಸಾಹಿತ್ಯ ಲೋಕದ ಸರ್ವ ಪ್ರಕಾರಗಳಲ್ಲೂ ಬದ್ಧತೆಯಿಂದ ಕೃಷಿ ಮಾಡಿದ ಎಚ್.ಎಸ್.ವಿ. ಇವರಿಗೆ ಆ ಎಲ್ಲಾ ಪ್ರಕಾರಗಳಲ್ಲೂ ಅಪಾರ ಅಭಿಮಾನಿಗಳು. ಪೂರ್ವಾಹ್ನ ನಿಗದಿತ ಸಮಯಕ್ಕೂ ಮುಂಚಿತವಾಗಿ ಅಭಿಮಾನಿಗಳು ಬಂದು ಸಭಾಂಗಣ ತುಂಬಿಕೊಂಡದ್ದು ನೋಡಿ ತುಸು ತಡವಾಗಿ ಬಂದ ಅತಿಥಿಗಳೂ ತಬ್ಬಿಬ್ಬು. ಕಾರ್ಯಕ್ರಮದ ಸಂಯೋಜಕರಲ್ಲೊಬ್ಬರಾದ ಶ್ರೀನಿವಾಸ ಜಿ. ಕಪ್ಪಣ್ಣ ನೂರಾರು ಕಾರ್ಯಕ್ರಮಗಳನ್ನು ಸಂಘಟಿಸಿ ರಾಜ್ಯದ ʻಅತ್ಯತ್ತಮ ಸಾಂಸ್ಕೃತಿಕ ಸಂಘಟಕʼ ಎಂದು ಹೆಸರು ಪಡೆದವರು, ತಮ್ಮ ಹೆಸರಿಗೆ ತಕ್ಕಂತೆ ಸರಳವಾಗಿಯಾದರೂ ಗಂಭೀರವಾದ ಕಾರ್ಯಕ್ರಮವನ್ನೇ ಆಯೋಜಿಸಿದ್ದರು. ಇನ್ನೋರ್ವ ಸಾಂಸ್ಕೃತಿಕ ಸಂಘಟಕ, ಸಾಹಿತಿಗಳೂ ಆದ ಕೆ.ಈ. ರಾಧಾಕೃಷ್ಣರವರು ಕಪ್ಪಣ್ಣ ಅವರಿಗೆ ಸಾಥ್‌ ನೀಡಿದರು. ಕಾರ್ಯಕ್ರಮದ ವಿನ್ಯಾಸವೇ ವಿನೂತನವಾಗಿತ್ತು. ವೇದಿಕೆಯಲ್ಲಿ ಯಾವುದೇ ಕುರ್ಚಿಗಳಿರಲಿಲ್ಲ.…

Read More

ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಇದರ ವತಿಯಿಂದ 2025ರ ವಿನೂತನ ಕಾರ್ಯಕ್ರಮ ಸರಣಿಯ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ಶ್ರೀಮತಿ ವಸಂತಿ ಆರ್. ಪಂಡಿತ್ ಕುಂದಾಪುರ ಇವರಿಂದ ‘ವೈವಿಧ್ಯಮಯ ಕಾರ್ಯಕ್ರಮ’ವನ್ನು ದಿನಾಂಕ 15 ಜೂನ್ 2025ರಂದು ಸಂಜೆ ಗಂಟೆ 4-00ರಿಂದ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.

Read More

ಬೆಂಗಳೂರು : ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್ ಪ್ರಸ್ತುತ ಪಡಿಸುವ 19ನೇ ಹಾರ್ಮೋನಿಯಂ ಹಬ್ಬ ಕಾರ್ಯಕ್ರಮವನ್ನು ಪಂಡಿತ್ ಗೋವಿಂದರಾವ್ ಪಟವರ್ಧನ್ ಇವರ ಶತಮಾನೋತ್ಸವ ಆಚರಣೆ ಪ್ರಯುಕ್ತ ದಿನಾಂಕ 15 ಜೂನ್ 2025ರಂದು ಸಂಜೆ 3-30 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸೇವಾ ಸದನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅಮೈ ಬೀಚು ಇವರ ಹಾರ್ಮೋನಿಯಂ ಸೋಲೋ, ಅನಿರುದ್ಧ ಐತಾಳ್ ಇವರ ಹಾಡುಗಾರಿಕೆ, ಪಂಡಿತ್ ಪ್ರವೀಣ್ ಶಿಯೋಲಿಕರ್ ಮತ್ತು ಡಾ. ರವೀಂದ್ರ ಗುರುರಾಜ್ ಕಟೋಟಿ ಇವರಿಂದ ವಯೋಲಿನ್ ಮತ್ತು ಹಾರ್ಮೋನಿಯಂ ದ್ವಂದ್ವ ವಾದನ, ಪಂಡಿತ್ ವಿಶ್ವನಾಥ್ ಕನ್ಹೆರೆ ಇವರಿಂದ ಹಾರ್ಮೋನಿಯಂ ಸೋಲೋ ಪ್ರಸ್ತುತಗೊಳ್ಳಲಿದ್ದು, ಇವರಿಗೆ ರೂಪಕ್ ಕಲ್ಲೂರ್ಕರ್ ಮತ್ತು ಪಂಡಿತ್ ಗುರುಮೂರ್ತಿ ವೈದ್ಯ ತಬಲಾ ಹಾಗೂ ತೇಜಸ್ ಕಟೋಟಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

Read More

ಮಂಗಳೂರು: ಕಲೆ, ಕಲಾವಿದ & ಕಲಿಕೆ ಎನ್ನುವ ಉದ್ದೇಶದಿಂದ ಮುನ್ನಡೆಯುತ್ತಿರುವ ಮಂಗಳೂರಿನ ಪ್ರತಿಷ್ಠಿತ ರಂಗ ಸಂಸ್ಥೆ ಕಲಾಭಿ ಮಂಗಳೂರು ಇದೀಗ ಮತ್ತೊಂದು ಮೈಲಿಗಲ್ಲಿನತ್ತ ಪಯಣ ಬೆಳೆಸಿದೆ. ಆಸಕ್ತ ಯಕ್ಷಗಾನ ಪ್ರಿಯರಿಗೆ ಯಕ್ಷ ನಾಟ್ಯ ಕಲಿಸುವ ಉದ್ದೇಶದಿಂದ ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರನ್ನು ಆರಂಭಿಸಿಲಾಗಿದೆ. ಕಲಾಭಿ ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ವರ್ಕಾಡಿ ಮತ್ತು ಕೇಂದ್ರದ ಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಇವರ ನೇತೃತ್ವದಲ್ಲಿ ದಿನಾಂಕ 06 ಜೂನ್ 2025ರಂದು ಉದ್ಘಾಟನೆ ನಡೆಯಿತು. ಕಲಾಭಿ ತಂಡದ ಕಲಾವಿದರು ಕಲಿಕೆಯನ್ನು ಆರಂಭಿಸಿದ್ದಾರೆ. ಆಸಕ್ತರು Kalabhi.org ಇನ್ಸ್ಟಾಗ್ರಾಮ್ ಚಾನಲ್ ಮೂಲಕ ಅಥವಾ +918431631998 ಈ ದೂರವಾಣಿಯನ್ನು ಸಂಪರ್ಕಿಸಬಹುದು.

Read More

ಮಂಜೇಶ್ವರ: ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಅವರ ಸಾರಥ್ಯದಲ್ಲಿ ಹೊರ ಬರುತ್ತಿರುವ, ಗಡಿನಾಡು ಕಾಸರಗೋಡಿನ ವಿವಿಧ ಸಾಧಕರ ಪರಿಚಯ ಕೃತಿ ಸರಣಿಯಾದ ‘ಕನ್ನಡಿಯಲ್ಲಿ ಕನ್ನಡಿಗ’ ಇದರ 3 ಮತ್ತು 4ನೇ ಸಂಚಿಕೆಯ ಲೋಕಾರ್ಪಣೆ ಹಾಗೂ ಅವಲೋಕನ ಸಮಾರಂಭವು ದಿನಾಂಕ 07 ಜೂನ್ 2025ನೇ ಶನಿವಾರದಂದು ಮೀಯಪದವು ಶ್ರೀ ವಿದ್ಯವರ್ಧಕ ಉನ್ನತ ಪ್ರೌಢಶಾಲೆಯಲ್ಲಿ ನಡೆಯಿತು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷರಾದ ಡಾ.ರಮಾನಂದ ಬನಾರಿ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಖ್ಯಾತ ಸಾಹಿತಿ ಹಾಗೂ ವಿಮರ್ಶಕರಾದ ಅರವಿಂದ ಚೊಕ್ಕಾಡಿ ಮಾತನಾಡಿ “’ಕನ್ನಡಿಯಲ್ಲಿ ಕನ್ನಡಿಗ’ ಮಾಲಿಕೆ ವಿಶಿಷ್ಟವಾದುದು. ಗಡಿಭಾಗದ ಅನೇಕ ಸಾಧಕರನ್ನು ಪರಿಚಯಿಸುವ ಪುಸ್ತಕಗಳ ಮಾಲಿಕೆಯನ್ನು ಹೊರತರುವ ಈ ಪರಿಕಲ್ಪನೆ ನಾವೀನ್ಯತೆಯಿಂದ ಕೂಡಿದ್ದು, ಗಡಿನಾಡು ಸಂಸ್ಕೃತಿ ಅನಾವರಣ ಸ್ತುತ್ಯರ್ಹ ಎಂದು ಖ್ಯಾತ ಸಾಹಿತಿ, ವಿಮರ್ಶಕ ಅರವಿಂದ ಚೊಕ್ಕಾಡಿ ಹೇಳಿದರು. ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ನಿಕಟಪೂರ್ವ ಅಧ್ಯಕ್ಷರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಖ್ಯಾತ…

Read More