Author: roovari

ಆಂಧ್ರಪ್ರದೇಶ : ಇಂಡಿಯನ್ ಮ್ಯಾಜಿಕ್ ಅಸೋಶಿಯೇಶನ್ (ಐ.ಎಂ.ಎ.) ಸಂಸ್ಥೆಯು ಕರ್ನಾಟಕದ ಜಾದೂ ಕಲಾವಿದ ಕುದ್ರೋಳಿ ಗಣೇಶ್ ಇವರಿಗೆ ಪ್ರತಿಷ್ಟಿತ ‘ಗೋಲ್ಡನ್ ಮ್ಯಾಜಿಷಿಯನ್’ ರಾಷ್ಟ್ರೀಯ ಜಾದೂ ಪ್ರಶಸ್ತಿ ನೀಡಿ ಗೌರವಿಸಿದೆ. ಕುದ್ರೋಳಿ ಗಣೇಶ್ ರವರು ಜಾದೂ ರಂಗದಲ್ಲಿ ಮಾಡಿರುವ ಸೃಜನಾತ್ಮಕ ಪ್ರಯೋಗಗಳನ್ನು ಗುರುತಿಸಿ ಜೀವಿತಾವಧಿಯ ಸಾಧನೆಗಾಗಿ ಈ ಪ್ರಶಸ್ತಿ ಸಂದಾಯವಾಗಿದೆ. ಆಂಧ್ರಪದೇಶದ ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಜಾದೂ ದಿನಾಚರಣೆಯ ನೆನಪಿಗಾಗಿ ದಿನಾಂಕ 23 ಫೆಬ್ರವರಿ 2025ರಂದು ನಡೆದ ಅದ್ದೂರಿ ಸಮಾರಂಭದಲ್ಲಿ ವಿಶಾಖಪಟ್ಟಣದ ಲೋಕಸಭಾ ಸದಸ್ಯರಾದ ಶ್ರೀ ಶ್ರೀಭರತ್ ಮುತ್ತುಕುಮುಲಿಯವರು ಕುದ್ರೋಳಿ ಗಣೇಶ್ ರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಐ.ಎಂ.ಎ. ಸಂಸ್ಥೆಯ ಅಧ್ಯಕ್ಷರಾದ ಖ್ಯಾತ ಜಾದೂಗಾರ ಶ್ರೀ ಬಿ.ಎಸ್. ರೆಡ್ಡಿ ಉಪಸ್ಥಿತರಿದ್ದರು. ಇಂಡಿಯನ್ ಮ್ಯಾಜಿಕ್ ಅಸೋಸಿಯೇಶನ್ ಸಂಸ್ಥೆಯು ತನ್ನ ದಶಮಾನೋತ್ಸದ ಅಂಗವಾಗಿ ಭಾರತದ ಅಗ್ರಗಣ್ಯ ಜಾದೂಗಾರರಾದ ಶ್ರೀ ಪಿ.ಸಿ. ಸೊರ್ಕಾರ್ ಜೂನಿಯರ್ ಸೇರಿದಂತೆ ದೇಶ ವಿದೇಶದ ಹತ್ತು ಜಾದೂ ಸಾಧಕರಿಗೆ ಪ್ರಶಸ್ತಿಯನ್ನು ಕೊಡಮಾಡಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುದ್ರೋಳಿ ಗಣೇಶ್ ಬದಲಾಗುತ್ತಿರುವ ಅಭಿರುಚಿಗೆ ಹೊಂದುವಂತೆ ಪ್ರದರ್ಶನದಲ್ಲಿ…

Read More

ಕರಾವಳಿ ಪ್ರದೇಶದಲ್ಲಿ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಅನೇಕರಲ್ಲಿ ಡಾ. ಇಂದಿರಾ ಹೆಗ್ಡೆಯವರೂ ಒಬ್ಬರು. ಇವರು ಶ್ರೀಯುತ ರಾಜು ಶೆಟ್ಟಿ ಹಾಗೂ ಎಳತ್ತೂರು ಗುತ್ತು ಸಿಂಧು ಶೆಡ್ತಿ ದಂಪತಿಗಳ ಸುಪುತ್ರಿ. 14 ಮಾರ್ಚ್ 1949ರಲ್ಲಿ ಮಂಗಳೂರು ತಾಲೂಕಿನ ಕಿನ್ನಿಗೋಳಿಯ ಎಳತ್ತೂರು ಗುತ್ತಿನ ಮನೆಯಲ್ಲಿ ಇವರ ಜನನವಾಯಿತು. ಸ್ಥಳೀಯ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ಸಮಾಜಶಾಸ್ತ್ರದಲ್ಲಿ ಡಿಪ್ಲೋಮಾ ಅಧ್ಯಯನ ನಡೆಸಿದ್ದಾರೆ. ಎಸ್.ಆರ್. ಹೆಗ್ಗಡೆ ಎಂದೇ ಖ್ಯಾತರಾದ ಚೇಳಾರು ಗುತ್ತು ಸೀತಾರಾಮ ಹೆಗ್ಗಡೆಯವರ ಧರ್ಮಪತ್ನಿ. ತಮ್ಮ 33ನೇ ವಯಸ್ಸಿನಲ್ಲಿ ಸುಧಾ, ತರಂಗ ಇತ್ಯಾದಿ ಸಾಪ್ತಾಹಿಕಗಳಿಗೆ ಸಣ್ಣ ಕಥೆಗಳನ್ನು ಬರೆಯುವ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಿತರಾದ ಇಂದಿರಾ ಹೆಗ್ಗಡೆಯವರು ಎಂ. ಚಿದಾನಂದಮೂರ್ತಿಯವರ ಸಹಕಾರದಿಂದ ಸಂಶೋಧನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ತುಳುನಾಡಿನ ಪ್ರಾದೇಶಿಕ ಆಚರಣೆ ಮತ್ತು ಪರಂಪರೆಯ ಮೂಲದ ಬಗ್ಗೆ ಬಹಳ ಶ್ರಮವಹಿಸಿ ಅಧ್ಯಯನ ಮಾಡಿದ ಆಳವಾದ ಅನುಭವದೊಂದಿಗೆ ಕೃತಿರೂಪಕ್ಕಿಳಿಸಿದ ಸಂಶೋಧನಾ ಗ್ರಂಥವೇ . ‘ತುಳುವರ ಮೂಲತಾನ ಆದಿ…

Read More

ಮಂಗಳೂರು : ಕೊಂಕಣಿ ಭಾಷಾ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇಬ್ಬರು ಕೊಂಕಣಿ ಸಾಹಿತಿಗಳ ರಾಷ್ಟ್ರ ಮಟ್ಟದ ಜನ್ಮಶತಾಬ್ದಿ ಜಂಟಿ ಆಚರಣಾ ಸಮಾರಂಭ ದಿನಾಂಕ 15 ಮತ್ತು 16 ಮಾರ್ಚ್ 2025 ರಂದು ನಡೆಯಲಿದೆ. ಕೊಂಕಣಿ ಭಾಷೆಗೆ ಪ್ರಥಮ ಪದ್ಮವಿಭೂಷಣ ಗರಿ ತಂದುಕೊಟ್ಟ ದಿ. ರವೀಂದ್ರ ಕೇಳ್ಕರ್ ಮತ್ತು ಮನೋಹ‌ರ್ ರಾಯ್ ಸರ್ದೇಸಾಯಿ ಇವರ ಜನ್ಮಶತಾಬ್ಬಿ ಕಾರ್ಯಕ್ರಮ ಇಲ್ಲಿನ ಶಕ್ತಿನಗರದ ವಿಶ್ವಕೊಂಕಣಿ ಕೇಂದ್ರದಲ್ಲಿ ನಡೆಯಲಿದೆ ಎಂದು ವಿಶ್ವಕೊಂಕಣಿ ಕೇಂದ್ರದ ಕಾರ್ಯದರ್ಶಿ ಡಾ. ಮೋಹನ್ ಪೈ ತಿಳಿಸಿದರು. ದಿನಾಂಕ 15 ಮಾರ್ಚ್ 2025ರಂದು ಬೆಳಗ್ಗೆ ಘಂಟೆ 9.30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಗೋವಾ ಭಾಷಾ ನಿರ್ದೆಶನಾಲಯ ಮುಖ್ಯಸ್ಥ ಪ್ರಶಾಂತ್ ಶಿರೋಡ್ಕರ್, ಗೋವಾದ ಗಿರೀಶ್ ಕೇಳ್ಕರ್, ಸುನಿಲ್ ಸರ್ದೇಸಾಯ್ ಭಾಗವಹಿಸಲಿದ್ದಾರೆ. ಹಿರಿಯ ಸಾಹಿತಿ ಹಾಗೂ ನ್ಯಾಯವಾದಿಯಾದ ಉದಯ ಎಲ್. ಭೇಂದ್ರೆ, ರವೀಂದ್ರ ಕೇಳ್ಕರ್ ವಿಚಾರ ಮಂಡಿಸಲಿದ್ದಾರೆ. ಬಳಿದ ವಿವಿಧ ವಿಚಾರಗೋಷ್ಠಿ ನಡೆಯಲಿದೆ. ಸಂಜೆ ಘಂಟೆ 4.00ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ನಿರ್ಮಿಸಿರುವ ರವೀಂದ್ರ ಕೇಳ್ಕರ್…

Read More

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಸಮಿತಿಯ ವತಿಯಿಂದ ಸಾಹಿತಿಗಳ ಮನೆಗೆ ಅಭಿಯಾನ ಕಾರ್ಯಕ್ರಮದಡಿಯಲ್ಲಿಯಲ್ಲಿ ಹೆಸರಾಂತ ಸಾಹಿತಿ, ಮಂಗಳ ಗಂಗೋತ್ರಿಯ ವಿಶ್ರಾಂತ ಉಪ ಕುಲಪತಿ ಪ್ರೊ‌ ಡಾ. ಚಿನ್ನಪ್ಪ ಗೌಡರ ನಿವಾಸದಲ್ಲಿ ಕಾರ್ಯಕ್ರಮವು ದಿನಾಂಕ 13 ಮಾರ್ಚ್ 2025ರಂದು ನಡೆಯಿತು. ಸಮಾರಂಭದಲ್ಲಿ ಶ್ರೀಯುತರಿಗೆ ಶಾಲು ಹಾರ ಫಲಸಹಿತವಾಗಿ ಗೌರವಿಸಲಾಯಿತು. ಮೂಲತಃ ವಿಟ್ಲ ಸಮೀಪದ ಕೂಡೂರಿನವರಾದ ಶ್ರೀಯುತರು ಪ್ರಸ್ತುತ ಅಸೈಗೋಳಿಯ ತಮ್ಮ ನಿವಾಸದಲ್ಲಿ ಪತ್ನಿ ಡಾ. ಶಾಂತಿಯವರ ಜೊತೆಗೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ತುಳು ಹಾಗೂ ಕನ್ನಡ ಸಾಹಿತ್ಯದ ವಿದ್ವಾಂಸರಾಗಿದ್ದಾರೆ. ಸನ್ಮಾನ ಸ್ವೀಕರಿಸಿದ ಮಾತನಾಡಿದ ಡಾ. ಚಿನ್ನಪ್ಪ ಗೌಡ ಮಾತನಾಡಿ “ದೇಶದ ಬಹು ಭಾಷೆಗಳಲ್ಲಿ ನಮ್ಮ ಸಂಸ್ಕೃತಿ ಅಡಕವಾಗಿದ್ದು, ಭಾರತೀಯ ಸಾಹಿತ್ಯದ ವ್ಯಾಪ್ತಿ, ವೈವಿಧ್ಯತೆ ಆಗಾಧವಾಗಿದೆ. ಸ್ವತಂತ್ರ ಕೃತಿ ರಚನೆಯ ಜೊತೆಗೆ ಇತರ ಭಾಷೆಯ ಪ್ರಮುಖ ಕೃತಿಗಳನ್ನು ಅನುವಾದ ಮಾಡುವ ಮೂಲಕ ನಮ್ಮ ಸಾಹಿತ್ಯಿಕ ಪರಂಪರೆಯನ್ನು ಎಲ್ಲೆಡೆ ಪಸರಿಸಲು ಸಾಹಿತಿಗಳು ಪ್ರಯತ್ನಿಸಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಅನುವಾದ ಕೃತಿಗಳೂ ಸ್ವಾತಂತ್ರ…

Read More

ಮುಂಡುಗೋಡು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಿದ್ದಿ ಸಮುದಾಯದವರನ್ನು ಮುಖ್ಯ ನೆಲೆಗೆ ತರುವ ಉದ್ದೇಶದಿಂದ ‘ಸಿದ್ದಿ ಸಮಾವೇಶ’ವನ್ನು ದಿನಾಂಕ 15 ಮತ್ತು 16 ಮಾರ್ಚ್ 2025ರಂದು ಮುಂಡುಗೋಡಿನ ಲೊಯೋಲಾ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಸಿದ್ದಿ ಸಂಸ್ಕೃತಿ ಬಿಂಬಿಸುವ ಜಾನಪದ ಕಲಾತಂಡಗಳ ಪ್ರದರ್ಶನವು ಮೆರವಣಿಗೆಯೊಂದಿಗೆ ನಡೆಯಲಿದೆ. ‘ಸಿದ್ದಿ ಪರಂಪರೆ’, ‘ಸಿದ್ದಿಗಳ ಬದುಕಿನ ಆಯಾಮಗಳು (ಕಲೆ, ಸಂಸ್ಕೃತಿ)’, ‘ಸಿದ್ದಿಗಳ ಬದುಕು ನಿನ್ನೆ, ಇಂದು ಮತ್ತು ನಾಳೆ’, ‘21ನೇ ಶತಮಾನದಲ್ಲಿ ಸಿದ್ದಿಗಳಿಗೆ ಎದುರಾಗುತ್ತಿರುವ ಸಮಸ್ಯೆಗಳು/ ಸವಾಲುಗಳು ಮತ್ತು ಸಕಾರಾತ್ಮಕ ಸಾಧ್ಯತೆಗಳು’ ಎಂಬ ವಿಷಯಗಳಲ್ಲಿ ವಿಚಾರಗೋಷ್ಠಿಯು ವಿಭಾಗ ಮುಖ್ಯಸ್ಥರಾದ ಸ್ಟೀವನ್ ಕ್ವಾಡ್ರಸ್ ಪೆರ್ಮುದೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

Read More

ಮೈಸೂರು : ‘ಥೇಮಾ’ ಥಿಯೇಟರ್ ಪ್ರಸ್ತುತ ಪಡಿಸುವ ಡಾ. ಎಸ್.ವಿ. ಸುಷ್ಮಾ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಎಲ್.ಎಸ್.ಡಿ.’ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 16 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನ ರಂಗ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕದ ಪರಿಕಲ್ಪನೆ ಹಾಗೂ ನಟನೆ ಸುನೇತ್ರಾ ಪಂಡಿತ, ಸ್ನೇಹ ಕಪ್ಪಣ್ಣ ಮತ್ತು ಡಾ. ಎಸ್.ವಿ. ಸುಷ್ಮಾ ಇವರು ನಿರ್ವಹಿಸಿದ್ದು, ಡಾ. ಎಸ್.ವಿ. ಕಶ್ಯಪ್ ಪರಿಕಲ್ಪನೆ ಹಾಗೂ ರಚನೆ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಬೆಂಗಳೂರು : ಜಾಣಗೆರೆ ಪತ್ರಿಕೆ ಪ್ರಕಾಶನ ಇದರ ವತಿಯಿಂದ ಸಾಹಿತಿ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಇವರ ‘ನುಡಿಗೋಲು 2’ ಅಪೂರ್ವ ಸಾಧಕರ ನುಡಿ ಸಂಕಥನ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 15 ಮಾರ್ಚ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರು ಕಬ್ಬನ್ ಪಾರ್ಕ್ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತಿ ಡಾ. ಅಗ್ರಹಾರ ಕೃಷ್ಣಮೂರ್ತಿ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಬಿ.ಎಂ. ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಬೈರಮಂಗಲ ರಾಮೇಗೌಡ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಕವಿ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಇವರು ಕೃತಿ ಪರಿಚಯ ಮಾಡಲಿರುವರು. ಸಭಾ ಕಾರ್ಯಕ್ರಮದ ಮೊದಲು ಲಿಮ್ಕಾ ದಾಖಲೆಯ ಡಾ. ಬಂಡ್ಲಹಳ್ಳಿ ವಿಜಯಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತ ಪ್ರಸ್ತುತಗೊಳ್ಳಲಿದೆ.

Read More

ಮಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿ ಇವರ ಸಹಕಾರದೊಂದಿಗೆ ಸುರತ್ಕಲ್ ಸಮೀಪ ಹೊಸಬೆಟ್ಟು ಮಾರುತಿ ಬಡಾವಣೆಯ ಶಾರದಾ ಮಂದಿರದಲ್ಲಿ ದಿನಾಂಕ 26 ಫೆಬ್ರವರಿ 2025ರಂದು ಶಾರದಾ ಮಾಸದ ಕೂಟ ಸುರತ್ಕಲ್ ಇವರಿಂದ ಇಡೀ ರಾತ್ರಿ ತಾಳಮದ್ದಲೆ ಕೂಟ ನಡೆಯಿತು. ಈ ಸಮಾರಂಭದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಯಕ್ಷಗಾನ ತಾಳಮುದ್ದಳೆ ಕಾರ್ಯಕ್ರಮಗಳು ಅಹೋರಾತ್ರಿ ನಡೆಯುತ್ತಿದ್ದ ಕಾಲವೊಂದಿತ್ತು. ಈಗಿನ ಯುವ ಸಮುದಾಯಕ್ಕೆ ಅದರ ಕಲ್ಪನೆಯೂ ಇರಲಾರದು. ಆದರೆ ವಿನಯ ಆಚಾರ್ಯರ ನೇತೃತ್ವದಲ್ಲಿ ನಡೆದ ವಿಶಿಷ್ಟ ಪರಿಕಲ್ಪನೆಯ ಶಾರದಾ ಮಾಸದ ಕೂಟವು ತಾಳಮದ್ದಳೆಯ ಗತಕಾಲದ ಇತಿಹಾಸವು ಮರುಕಳಿಸುವಂತೆ ಮಾಡಿದೆ” ಎಂದು ಹೇಳಿದರು. ಯಕ್ಷಗಾನ ಹಿಮ್ಮೇಳ ವಾದನಗಳ ನುಡಿತದೊಂದಿಗೆ ಜರಗಿದ ಉದ್ಘಾಟನೆಯನ್ನು ಹಿರಿಯ ವಿದ್ವಾಂಸ ಹೊಸಬೆಟ್ಟು ಗುರುರಾಜ ಆಚಾರ್ಯ ಜಾಗಟೆ ಬಾರಿಸುವುದರ ಮೂಲಕ ನೆರವೇರಿಸಿದರು. ಯಕ್ಷಗುರು ಶಂಕರನಾರಾಯಣ ಮೈರ್ಪಾಡಿ, ಕರ್ಣಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಜೇಶ ಕುಳಾಯಿ,…

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 15 ಮಾರ್ಚ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ತುಳು ಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ಸನ್ಮಾನ್ಯ ಯು.ಟಿ. ಖಾದರ್ ಇವರ ಉಪಸ್ಥಿತಿಯಲ್ಲಿ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ. ಪುರುಷೋತ್ತಮ ಬಿಳಿಮಲೆ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

Read More

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.)’ ಇದರ ವತಿಯಿಂದ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ಕಾರ್ಯಕ್ರಮವನ್ನು ದಿನಾಂಕ 16 ಮಾರ್ಚ್ 2025ರಂದು ಪೂರ್ವಾಹ್ನ 9-30 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಅಶೋಕ ನಗರ ಕಚೇರಿ ಬಳಿಯಿರುವ ಸಾಹಿತ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ‘ನಾಗಂದಿಗೆಯೊಳಗಿನ ಸಿಹಿ-ಕಹಿ’ ಬಿ.ಎಂ. ರೋಹಿಣಿಯವರ ಕೃತಿಗಳ ಓದು ಮತ್ತು ಸಂವಾದ ಕಾರ್ಯಕ್ರಮದಲ್ಲಿ ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿಯವರು ಸಮನ್ವಯಕಾರರಾಗಿ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ. ಅಪರಾಹ್ನ 2-30 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಾಡೋಜ ಡಾ. ಸಾರಾ ಅಬೂಬಕರ್ ದತ್ತಿ ನಿಧಿಯ ‘ಸಾರಾ ದತ್ತಿ ಪ್ರಶಸ್ತಿ’ಯನ್ನು ಡಾ. ಗೀತಾ ಶೆಣೈ, ಚಂದ್ರಭಾಗಿ ರೈ ದತ್ತಿ ನಿಧಿಯ ‘ಚಂದ್ರಭಾಗಿ ರೈ ದತ್ತಿ ಬಹುಮಾನ ವಿಜೇತರು’ ರಾಜಲಕ್ಷ್ಮೀ ಕೋಡಿಬೆಟ್ಟು ಹಾಗೂ ಡಾ. ಮಮತಾ ತಿಲಕ್ ರಾವ್ ಮುಂಬೈ ದತ್ತಿನಿಧಿಯ…

Read More