Author: roovari

ಮೂಡುಬಿದಿರೆ: ಆಳ್ವಾಸ್ ಪದವಿ-ಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ಉದ್ಘಾಟನಾ ಸಮಾರಂಭವು ದಿನಾಂಕ 06 ಸೆಪ್ಟೆಂಬರ್ 2024ರಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಕಲಾ ಸಂಘವನ್ನು ಉದ್ಘಾಟಿಸಿದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ ಮಾತನಾಡಿ “ಕಲೆ ಜೀವನದ ಮೆರುಗನ್ನು ಹೆಚ್ಚಿಸಿ ಬದುಕನ್ನು ಶ್ರೀಮಂತಗೊಳಿಸುತ್ತದೆ. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿಪುಲವಾದ ಅವಕಾಶಗಳಿದ್ದು ಅದನ್ನು ಬಳಸಿಕೊಂಡು ಯಶಸ್ವಿಯಾಗಬೇಕು. ಪೋಷಕರ ಮೊಗದಲ್ಲಿ ನಗು ಮೂಡಿಸುವ ಕೆಲಸವನ್ನು ಮಕ್ಕಳು ಮಾಡಬೇಕು” ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್. ಮಾತನಾಡಿ “ಇಂದು ವಿಜ್ಞಾನ, ವಾಣಿಜ್ಯ  ಪದವೀಧರರು ನಿಮ್ಮೊಂದಿಗೆ ಸ್ಪರ್ಧೆಯಲ್ಲಿದ್ದಾರೆ. ಸರಕಾರಿ ಸ್ವಾಮ್ಯದ ಎಲ್ಲಾ ಉದ್ಯೋಗಳಲ್ಲೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವಿದೆ.  ನಿರಂತರ ಪ್ರಯತ್ನದಿಂದ ಯಶಸ್ಸನ್ನು ಪಡೆಯಬಹುದು.” ಎಂದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಜೀವನ್‌ರಾಂ ಸುಳ್ಯ  ಮಾತನಾಡಿ “ನಿರಂತರ ದುಡಿಮೆ ಮತ್ತು ಕಾಲದ ಮಹತ್ವವನ್ನು ಅರಿತುಕೊಂಡಾಗ  ಯಶಸ್ಸು ನಮ್ಮದಾಗುತ್ತದೆ. ಕಳೆದ  ಸಮಯ ಮತ್ತೆ ಯಾರಿಗೂ…

Read More

ಸುತ್ತಲೂ ಹಸಿರಿನ ರಕ್ಷಾ ಕವಚ, ಕೆಂಪು ಹೆಂಚುಗಳ ಮೇಲೆ ಬಿದ್ದು ಜಿಟಿ ಜಿಟಿ ಸದ್ದು ಮಾಡುತ್ತಿದ್ದ ಮಳೆ…ತೊಟ್ಟಿ ಮನೆಯ ಆ ಹುಲ್ಲು ಹಾಸಿನ ಮೇಲೆ ಶಬ್ಧವಾಗದಂತೆ ಸದ್ದು ಮಾಡುತ್ತಿದ್ದ ಸೂರು ನೀರು… ಚುಮು ಚುಮು ಚಳಿ…ಮೂಗರಳುವಂತೆ ಅಡುಗೆ ಕೋಣೆಯಿಂದ ಬರುತ್ತಿದ್ದ ಕಾಫಿಯ ಸುವಾಸನೆ, ಉಪ್ಪಿಟ್ಟಿಗಾಗಿ ಬೇಯುತ್ತಿದ್ದ ರವೆಯ ಘಮ ಘಮ…ಕಣ್ಣೆದುರು ರೆಕ್ಕೆ ಅಗಿಲಿಸಿಕೊಂಡು ಹಾರಾಡುತ್ತಿದ್ದ ಬಾವಲಿಗಳು…ಹೀಗೆ ಥೇಟ್ ಮಲೆನಾಡಿನ ಮೂಡಿಗೆರೆಯ ವಾತಾವರಣದಂಥ ಶರವಣಕುಮಾರ್ ಅವರ ಮನೆ ‘ಪೂರ್ಣಚಂದ್ರ’ದಲ್ಲಿ ದಿನಾಂಕ 08 ಸೆಪ್ಟೆಂವರ್ 2024ರ  ಭಾನುವಾರ ಇಳಿ ಸಂಜೆಯ ಹೊತ್ತಿನಲ್ಲಿ ಕರ್ವಾಲೋದ ಪೂರ್ಣಚಂದ್ರ ತೇಜಸ್ವಿ ತಮ್ಮ ‘ಕಿವಿ’ ಜತೆ ಆವಾಹನೆಯಾಗಿದ್ದರು ! ಮಂದಣ್ಣ, ಪ್ರಭಾಕರ, ಎಂಗ್ಟ, ಪ್ಯಾರಾ, ಬಿರಿಯಾನಿ ಕರಿಯಪ್ಪ… ಒಬ್ಬರಾ ? ಇಬ್ಬರಾ ? ಪೂಚಂತೇ ಅವರ ಕೃತಿಗಳ ಪಾತ್ರಧಾರಿಗಳ ದೊಡ್ಡ ಮೆರವಣಿಗೆಯೇ ನಡೆದುಹೋಯಿತು. ತೇಜಸ್ವಿಯವರನ್ನು ಮೌನವಾಗಿ ಧ್ಯಾನಿಸುವವರಿಗೆ ಅಪ್ಯಾಯಮಾನವಾದಂಥ ವಾತಾವರಣ ಅದು. ಈ ಕಾರ್ಯಕ್ರಮ ನೋಡಿದ್ದರೆ ಬರ್ತ್ಡೇ ಆಚರಣೆ, ಸನ್ಮಾನ ಎಂದರೆ ಬಾಯಿಗೆ ಬಂದಂತೆ ಬಯ್ದು ದೂರ ಓಡುತ್ತಿದ್ದ ತೇಜಸ್ವಿ…

Read More

ಮಂಗಳೂರು : ತುಳುಕೂಟ (ರಿ) ಕುಡ್ಲ ವತಿಯಿಂದ ಇತ್ತೀಚೆಗೆ ನಿಧನರಾದ ಮರೋಳಿ ಬಿ. ದಾಮೋದರ ನಿಸರ್ಗ ಇವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ದಿನಾಂಕ 09 ಸೆಪ್ಟೆಂಬರ್ 2024ರಂದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ “ತುಳು ಭಾಷೆ ಸಾಹಿತ್ಯ ಸಂಸ್ಕೃತಿಗಳ ಉಳಿವಿಗಾಗಿ ದಾಮೋದರ ನಿಸರ್ಗರು ಅರ್ಹಿನಿಶಿ ದುಡಿದಿದ್ದಾರೆ. ತಾನು ಬೆಳೆಯುವುದರ ಜೊತೆ ಜೊತೆಗೆ ತೌಳವರಿಗೆ ತುಳು ಬದುಕನ್ನು ಕಟ್ಟಿಕೊಟ್ಟಿದ್ದಾರೆ. ತುಳುಕೂಟದ ಬೆಳವಣಿಗಾಗಿ ಅವರು ಗಂಧದಂತೆ ತಮ್ಮನ್ನು ತೀಡಿಕೊಳ್ಳುತ್ತಾ ಇಂದು ಚಿರಸ್ಮರಣೀಯರಾಗಿ ಉಳಿದಿದ್ದಾರೆ. ಈ ರೀತಿ ಸಾವಿನ ನಂತರವೂ ನೆನಪುಳಿಯುವ ತುಳುವರು ಮತ್ತೆ ಮರಳಿ ಮರಳಿ ತುಳುಮಣ್ಣಲ್ಲಿ ಹುಟ್ಟಿಬರಲಿ” ಎಂದರು. ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ತಾರಾನಾಥ, ಜೆ. ವಿ. ಶೆಟ್ಟಿ, ವರ್ಕಾಡಿ ರವಿ ಅಲೆವೂರಾಯ, ಚಂದ್ರಶೇಖರ ಸುವರ್ಣ, ಭಾಸ್ಕರ ಕುಲಾಲ್ ಬರ್ಕೆ, ನಾಗೇಶ ದೇವಾಡಿಗ ಕದ್ರಿ, ಶ್ರೀಮತಿ ಕೆ. ಎ.…

Read More

ನಿಮ್ಮ ಕೃತಿಯ ಸಾವಿರ ಪ್ರತಿಗಳು ಪ್ರಕಟವಾದರೆ, ನೂರಾರು ಮಂದಿಯ ಕೈಗಳಿಗೆ ಸಿಕ್ಕಿ ಹತ್ತೋ ಹದಿನೈದೋ ಮಂದಿ ಓದಿ ಮೆಚ್ಚುಗೆ ಸೂಚಿಸಿದರೆ ಒಂದು ವರ್ತುಲ ಪೂರ್ತಿಯಾದಂತೆ. ಅಲ್ಲಿಗೆ ಅಕ್ಷರ ಪ್ರಯಾಣಕ್ಕೆ ವಿರಾಮ. ಕವನ ಸಂಕಲನಗಳಾದರೂ ಅಷ್ಟೆ. ಹಿಂದೆಲ್ಲ ಕವಿಯ ಒಂದೆರಡು ರಚನೆಗಳು ಪಠ್ಯಪುಸ್ತಕದಲ್ಲಿ ಬಂದರೆ, ಆಗಾಗ ಒಂದಿಷ್ಟು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದರೆ, ” ಓ ಮೊನ್ನೆ ಉದಯವಾಣಿಯಲ್ಲಿ ನಿಮ್ಮದೇನೊ ಬಂದಿತಲ್ಲ” ಎನ್ನುವುದೂ ಇತ್ತು. ಗೇಯತೆ ಇದ್ದರೆ ಧ್ವನಿ ಸುರುಳಿಯಾಗಲಿಕ್ಕೂ ಸಾಕು. ಕೆಲವರು ಈ ವಿಷಯದಲ್ಲಿ ಸ್ವಲ್ಪ ಭಿನ್ನ. ಕಾಸರಗೋಡು ಅಂಥ ಕವಿಯೊಬ್ಬನನ್ನು ಪಡೆದಿದೆ. ಸರಳ ವಿಧಾನಗಳಿಂದ ರೋಗ ನಿದಾನ ಮಾಡುತ್ತ ಆರೋಗ್ಯ ಗೀತೆಗಳನ್ನು ಹಾಡುತ್ತಾ ಭೇಟಿಗೆ ಬಂದ ರೋಗಿಗಳನ್ನು ಸಂತೈಸುತ್ತ, ಬಿಡುವಾದಾಗಲೆಲ್ಲ ಯಕ್ಷಗಾನ ಕೂಟಗಳಲ್ಲಿ ಭಾಗವಹಿಸುವ ರಮಾನಂದ ಬನಾರಿಯವರು ಕಾಲಾ ಕಾಲಕ್ಕೆ ಹದಿನೆಂಟರಷ್ಟು ಕವನ ಸಂಕಲನಗಳನ್ನು ಬರೆದಿದ್ದು ಅವುಗಳನ್ನೆಲ್ಲ ಅಧ್ಯಯನ ಮಾಡಿದ ಡಾ. ಪ್ರಮೀಳಾ ಮಾಧವ್ ಒಂದು ಪುಸ್ತಕ ತಯಾರಿಸಿದ್ದಾರೆ. ಅದರ ಹೆಸರು ‘ಸುಮನೋಲ್ಲಾಸದ ಅಲೆಗಳು.’ ಈ ಕೃತಿಯು ದಿನಾಂಕ 5 ಸೆಪ್ಟೆಂಬರ್…

Read More

ಬೆಳಗಾವಿ : ಬೆಳಗಾವಿಯ ಸಮಾಚಾರ ಸೇವಾ ಸಂಘ ಹಾಗೂ ಸಮಾಚಾರ ದಿನಪತ್ರಿಕೆ ಸೇವಾ ಬಳಗ ಗೋಕಾಕ ಇದರ ಸಹಯೋಗದಲ್ಲಿ ಸಾಮಾಜಿಕ, ಶಿಕ್ಷಣ. ಸಾಹಿತ್ಯ ಹಾಗೂ ವಿವಿಧ ಕಲೆಗಳನ್ನಾಧರಿಸಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಶಿಕ್ಷಕ ದಿನಾಚರಣೆಯ ನಿಮಿತ್ತ ದಿನಾಂಕ 08 ಸೆಪ್ಟೆಂಬರ್ 2024ರ ಭಾನುವಾರದಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವಾಸವಾಗಿರುವ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ ಇವರ ವೈದ್ಯಕೀಯ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿ ‘ಜೀವ‌ಮಾನದ ಸಾಧನೆಯ ರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕೊಳಚಪ್ಪೆ ಗೋವಿಂದ ಭಟ್ಟ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಈಶ್ವರ ಮಮದಾಪೂರ, ಸಂಯೋಜಕ ಬಸವರಾಜ ಉಪ್ಪಾರಟ್ಟಿ ಸಹಿತ ಹಲವಾರು ಗಣ್ಯರು ಭಾಗವಹಿಸಿದ್ದರು. ಡಾ. ಸುರೇಶ ನೆಗಳಗುಳಿ ಇವರು ಬಂಟ್ವಾಳ ತಾಲೂಕಿನ ನೆಗಳಗುಳಿ ಮೂಲದವರಾಗಿದ್ದು, ಮೂವತ್ತೈದು ವರ್ಷಗಳಿಂದ ವೈದ್ಯಕೀಯ ಶಿಕ್ಷಕ, ಪ್ರಾಚಾರ್ಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತುಷಾರ ಮಾಸಪತ್ರಿಕೆಯಲ್ಲಿ…

Read More

ಅಡೂರು : ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಅಡೂರು ಕೊರತಿಮೂಲೆಯ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥವಾಗಿ ಸ್ವಾತಂತ್ರ್ಯೋತ್ಸವ-2024ರ ಅಂಗವಾಗಿ ಅಂಚೆಯ ಮೂಲಕ ನಡೆಸಲಾದ ಕಾಸರಗೋಡು ಜಿಲ್ಲೆಯ ಕನ್ನಡ ಪ್ರೌಢಶಾಲಾ ವಿಭಾಗದ ‘ಕನ್ನಡ ಕವನ ರಚನಾ ಸ್ಪರ್ಧೆ’ಯಲ್ಲಿ ಮುಳ್ಳೇರಿಯದ ಜಿ.ವಿ.ಎಚ್.ಎಸ್. ಶಾಲೆಯ 10ನೇ ತರಗತಿಯ ಸಿಂಚನ ಎ. ಅವರು ಬರೆದ ‘ದುಃಖದ ಆ ಕ್ಷಣಗಳು’ ಕವನವು ಪ್ರಥಮ ಸ್ಥಾನ ಪಡೆದಿದೆ. ದ್ವಿತೀಯ ಬಹುಮಾನವನ್ನು ಬದಿಯಡ್ಕದ ಶ್ರೀ ಭಾರತಿ ವಿದ್ಯಾಪೀಠದ 8ನೇ ತರಗತಿಯ ಕವನ ಅವರ ‘ಸ್ವಾತಂತ್ರ್ಯೋತ್ಸವ’ ಕವನ ಪಡೆದಿದೆ. ತೃತೀಯ ಬಹುಮಾನವನ್ನು ಕಾರಡ್ಕ ಜಿ.ವಿ.ಎಚ್.ಎಸ್. ಶಾಲೆಯ 10ನೇ ತರಗತಿಯ ಕೀರ್ತನ ಕೆ. ಅವರ ‘ಬಡಜೀವ’ ಕವನ ಗಳಿಸಿದೆ. ಪ್ರೋತ್ಸಾಹಕ ಬಹುಮಾನವು ಬದಿಯಡ್ಕದ ಪೆರಡಾಲ ನವಜೀವನ ಪ್ರೌಢಶಾಲೆಯ 9ನೇ ತರಗತಿಯ ಕೆ. ಕವನ ಅವರು ಬರೆದ ‘ಸ್ವಾತಂತ್ರ್ಯದ ಹರುಷ’ ಪಡೆದುಕೊಂಡಿದೆ. ವಿಜೇತರಿಗೆ ಬಹುಮಾನ ವಿತರಣೆಯು ದಿನಾಂಕ 15 ಸೆಪ್ಟೆಂಬರ್ 2024ರಂದು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ಸಭಾಂಗಣದಲ್ಲಿ ನಡೆಯುವ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ,…

Read More

ಕೋಟ : ಯಕ್ಷಗಾನ ತರಬೇತಿ ಕೇಂದ್ರದ ವತಿಯಿಂದ ಕೋಟದ ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಯಕ್ಷಗಾನ ನೃತ್ಯ ತರಬೇತಿಯು ದಿನಾಂಕ 21 ಆಗಸ್ಟ್ 2024ರಂದು ಪ್ರಾರಂಭವಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಉಪೇಂದ್ರ ಸೋಮಯಾಜಿ “ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ನಿರಂತರ ಕಲಿಕೆ ಸಂಸ್ಥೆಯ ಕಾರ್ಯ ಶ್ಲಾಘನೀಯ” ಎಂದು ನುಡಿದರು. ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ರಾಜಾರಾಮ್ ಐತಾಳ್ ವಹಿಸಿದ್ದರು. ಯಕ್ಷಗಾನ ತರಬೇತಿ ಕೇಂದ್ರದ ಸಂಚಾಲಕ ಎಂ.ಎನ್. ಮಧ್ಯಸ್ಥ, ಯಕ್ಷಗುರು ಕೃಷ್ಣಮೂರ್ತಿ ಉರಾಳ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಜೋಗಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ದಿವಾಕರ್ ಐತಾಳ್ ಸ್ವಾಗತಿಸಿ, ನಿರೂಪಿಸಿದರು. ನಂತರ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ‘ಮಾಯಾಪುರಿ ಮಹಾತ್ಮೆ’ ಎಂಬ ಪ್ರಸಂಗ ಯಕ್ಷಗಾನ ಪ್ರದರ್ಶನಗೊಂಡಿತು.

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗೋಣಿಕೊಪ್ಪಲು ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಕಲಾವಿದ ದಿ. ವಿ.ಟಿ. ಶ್ರೀನಿವಾಸ್ ನೆನಪು, ಗಾನ ಮತ್ತು ನುಡಿ ನಮನ ಕಾರ್ಯಕ್ರಮವು ದಿನಾಂಕ 11 ಸೆಪ್ಟೆಂಬರ್ 2024ರಂದು ಬೆಳಿಗ್ಗೆ 11-00 ಗಂಟೆಗೆ ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ವಹಿಸಲಿದ್ದು, ಉದ್ಘಾಟನೆಯನ್ನು ಪೊನ್ನಂಪೇಟೆಯ ನೀನಾದ ಸಂಗೀತ ನೃತ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಚೇಂದಿರ ನಿರ್ಮಲ ಬೋಪಣ್ಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಾನಲ್ ಕೂರ್ಗ್ ಇವರ ಸಂಪಾದಕರಾದ ಶ್ರೀಧರ ನೆಲ್ಲಿತಾಯ, ಆಕಾಶವಾಣಿ ಕಲಾವಿದರಾದ ಬಿ.ಎ. ಗಣೇಶ್, ವಿರಾಜಪೇಟೆಯ ಸ್ವರಾರ್ಣವ ಸಂಗೀತ ಶಾಲೆಯ ವ್ಯವಸ್ಥಾಪಕರಾದ ವಿದ್ವಾನ್ ದಿಲಿ ಕುಮಾರ್, ಅದ್ಯಾಪಕರು ಮತ್ತು ಕಲಾವಿದರಾದ ಕೆ. ಚಂದ್ರಶೇಖರ್, ತಬಲ ಕಲಾವಿದರಾದ ಮುರ್ನಾಡಿನ ಚಂದ್ರು, ಪೊನ್ನಂಪೇಟೆ ತಾಲೂಕು ಕನ್ನಡ…

Read More

ಆಹ್ಲಾದಕರ ನರ್ತನವೊಂದು ಹೇಗಿರುತ್ತದೆ ಎಂಬುದನ್ನು ಸಾಕ್ಷೀಕರಿಸಿದ ಆರಭಿಯ ಮನಮೋಹಕ ನೃತ್ತ ಲಾಸ್ಯಗಳ – ಶಿಲ್ಪಾತ್ಮಕ ನೃತ್ಯಭಂಗಿಗಳ ಅನನ್ಯತೆ ಕಣ್ಮನ ಸೂರೆಗೊಂಡಿತು. ಇತ್ತೀಚೆಗೆ, ಜಯನಗರದ ಜೆ.ಎಸ್.ಎಸ್. ವೇದಿಕೆಯೆಂಬ ರಂಗೋದ್ಯಾನದಲ್ಲಿ ನಾಟ್ಯಮಯೂರಿಯೊಂದು ಸ್ವಚ್ಚಂದವಾಗಿ ಕುಣಿದಾಡಿ ತನ್ನ ನೃತ್ಯ ಸಾಧನೆಯ ಚೆಂಬೆಳಕನ್ನು ಹೊರಚೆಲ್ಲಿ ಕಲಾರಸಿಕರ ಹೃದಯವನ್ನು ಆಹ್ಲಾದಗೊಳಿಸಿತು. ಉದಯೋನ್ಮುಖ ನೃತ್ಯ ಕಲಾವಿದೆ ಆರಭಿ ಅಂದು ತನ್ನ ರಂಗಾರ್ಪಣೆಯಲ್ಲಿ ನುರಿತ ನರ್ತಕಿಯಂತೆ ಲೀಲಾಜಾಲವಾಗಿ ಪಾದಭೇದಗಳ ಸೌಂದರ್ಯದಲ್ಲಿ, ಭಾವನಿಮಗ್ನತೆಯ ಸುಂದರಾಭಿನಯದಲ್ಲಿ ಎರಡು ಗಂಟೆಗಳ ಕಾಲ ನಿರಾಯಾಸವಾಗಿ ನಗುಮೊಗದಿಂದ ನರ್ತಿಸಿದ್ದು ವಿಶೇಷ. ವಿ. ಪೂರ್ಣಿಮಾ ಗುರುರಾಜರ ಶಿಷ್ಯೆ, ತನ್ನ ಹೆಸರಿಗೆ ಅನ್ವರ್ಥಕವಾದ ಆರಭಿ ರಾಗದ ‘ಶ್ರೀ ಸರಸ್ವತಿ ನಮೋಸ್ತುತೆ’ಯ ನಂತರ, ಗಣಪತಿ ಸ್ತುತಿ- ‘ಆದಿಪೂಜಿತ ಗಣೇಶ ಚರಣಂ’ ನೆನೆಯುತ್ತ ಮೋದಕಪ್ರಿಯನ ವಿವಿಧ ರೂಪ – ಭಂಗಿಗಳನ್ನು ತನ್ನ ಸುಕೋಮಲ ಆಂಗಿಕಾಭಿನಯದಿಂದ ಕಟ್ಟಿಕೊಟ್ಟಳು. ಹದವಾದ ಮೈಕಟ್ಟಿನ ಕಲಾವಿದೆಯ ಸ್ಫುಟವಾದ ಹಸ್ತಮುದ್ರೆ, ಹರಿತ ನೃತ್ತಾವಳಿಗಳು, ‘ಪುಷ್ಪಾಂಜಲಿ’ಯ ಸ್ವರಾವಳಿಗಳ ಖಚಿತ ಹೆಜ್ಜೆಗಳು ನೋಡಲು ಚೆಂದವೆನಿಸಿದವು. ಮೋಹನ ರಾಗದ ‘ಜತಿಸ್ವರ’- ಆಮೋದಪ್ರದವಾಗಿ ಸಾಗುತ್ತ, ಆರಭಿಯ ಅಂಗಶುದ್ದ…

Read More

ಕಟೀಲು : ಕಟೀಲು ಕೇತ್ರದ ಸರಸ್ವತಿ ಸಭಾಭವನದಲ್ಲಿ ಏರ್ಪಡಿಸಲಾದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಮಟ್ಟದ ಶಿಕ್ಷಕ ಸಾಹಿತಿಗಳ 7ನೇ ಸಮ್ಮೇಳನವು ದಿನಾಂಕ 05 ಸೆಪ್ಟೆಂಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು “ಸಾಹಿತ್ಯ ಸಮ್ಮೇಳನಗಳು ಒಳ್ಳೆಯ ಮನಸ್ಸುಗಳನ್ನು ಕಟ್ಟುವ ಕಾರ್ಯ ಮಾಡಬೇಕು. ಸಾಹಿತ್ಯ ಯಾವುದೇ ಪ್ರಕಾರದಲ್ಲಿದ್ದರೂ ಓದುಗರು ಮೆಚ್ಚುವಂತಿರಬೇಕು. ಶಿಕ್ಷಕರು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಒಳ್ಳೆಯ ವಿಚಾರಗಳನ್ನು ಜನರಿಗೆ ನೀಡಬೇಕು” ಎಂದು ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕರಾದ ಹರಿನಾರಾಯಣ ಆಸ್ರಣರು ದೀಪಪ್ರಜ್ವಲನೆ ಮಾಡಿ ಸಮ್ಮೇಳನಕ್ಕೆ ಚಾಲನೆ ನೀಡಿದರು. “ಶ್ರೀ ಕ್ಷೇತ್ರದಲ್ಲಿ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ವಿಶೇಷ ಪ್ರೋತ್ಯಾಹ ನೀಡಲಾಗುತ್ತದೆ. ಶ್ರೀದೇವಿಯ ಅನುಗ್ರಹದಿಂದ ಕ್ಷೇತ್ರದಲ್ಲಿ ಭಕ್ತಾದಿಗಳ ಇಷ್ಟಾರ್ಥವು ನೆರವೇರುತ್ತವೆ” ಎಂದು ಆಶೀರ್ವಚನ ನೀಡಿದರು. ಹೊಸಕೋಟೆಯ ಹಿರಿಯ ಶಿಕ್ಷಕ ಸಾಹಿತಿ ಶ್ರೀಕಾಂತ್ ಕೆ.ವಿ. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕ.ಚು.ಸಾ.ಪ.ರಾಜ್ಯ ಸಂಚಾಲಕ…

Read More