Author: roovari

ಮಂಗಳೂರು : ಹಿರಿಯ ರಂಗಕರ್ಮಿ, ನಿರೂಪಕ ಮತ್ತು ಚಿತ್ರ ಕಲಾವಿದರಾದ ಎಡ್ಡಿ ಸಿಕ್ವೇರಾ ಇವರ ಸಮಗ್ರ ರಂಗ ಕೃತಿಗಳ ಸಂಗ್ರಹ ‘ನವ್ ರಂಗ್’ ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 31 ಆಗಸ್ಟ್ 2024ನೇ ಶನಿವಾರದಂದು ಇಳಿಹಗಲು ಘಂಟೆ 6-00ಕ್ಕೆ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಕೃತಿ ಲೋಕಾರ್ಪಣೆಗೊಳಿಸಲಿದ್ದು, ಮೈಕಲ್ ಡಿ’ಸೋಜಾ ಟ್ರಸ್ಟ್ ಇದರ ಸಲಹೆಗಾರರಾದ ಸ್ಟೀಫನ್ ಪಿಂಟೊ, ಕಿಟಾಳ್ ಅಂತರ್ಜಾಲ ಪತ್ರಿಕೆಯ ಸಂಪಾದಕ ಎಚ್.ಎಮ್. ಪೆರ್ನಾಲ್ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಕೃತಿಕಾರ ಎಡ್ಡಿ ಸಿಕ್ವೇರಾ ಮತ್ತು ಖ್ಯಾತ ರಂಗ ಕಲಾವಿದೆ ಜೀನಾ ಡಿ’ಸೋಜಾ ಆಯ್ದ ನಾಟಕ ದೃಶ್ಯಗಳ ವಾಚನಾಭಿನಯ ಪ್ರಸ್ತುತ ಪಡಿಸಲಿರುವರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಂತ ಅಲೋಶಿಯಸ್ ಪ್ರಕಾಶನವು ಪ್ರೊ. ಡಾ. ವಿದ್ಯಾ ವಿನುತ ಡಿ’ಸೋಜಾ ಇವರ ನೇತೃತ್ವದಲ್ಲಿ ’ನವ್ ರಂಗ್’ ಕೃತಿಯನ್ನು ವಿಶ್ವ ಕೊಂಕಣಿ ಕೇಂದ್ರದ ಮೈಕಲ್…

Read More

ಹೆಬ್ರಿ : ಅಕ್ಷರ ಸಾಹಿತ್ಯ ಸಂಘ ಹೆಬ್ರಿ ಮತ್ತು ಶರಣ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇವುಗಳ ಸಹಯೋಗದಲ್ಲಿ ವಚನ ಸಾಹಿತ್ಯ ಸಂಭ್ರಮ, ಸಂಸ್ಥಾಪನಾ ದಿನ ಮತ್ತು ವಚನ ಗಾಯನ ಕಾರ್ಯಕ್ರಮವು ದಿನಾಂಕ 23 ಆಗಸ್ಟ್ 2024ರಂದು ಹೆಬ್ರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿರಂಜನ ಚೋಳಯ್ಯ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ “ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ಕನ್ನಡದ ಶ್ರೇಷ್ಠ ಕೊಡುಗೆಯಾಗಿದೆ. ಇಂತಹ ವಿಶಿಷ್ಟ ಸಾಹಿತ್ಯ ಬೇರೆ ಎಲ್ಲೂ ಇಲ್ಲ. ಸರಳ ಕನ್ನಡದಲ್ಲಿ ಜನರಿಗೆ ಮಟ್ಟುವ ರೀತಿಯಲ್ಲಿ ವಚನ ಸಾಹಿತ್ಯ ರಚನೆಯಾಗಿದೆ. ಸಾರ್ವಕಾಲಿಕ ಸತ್ಯವನ್ನು ವಚನ ಸಾಹಿತ್ಯ ಹೇಳುತ್ತದೆ” ಎಂದು ಹೇಳಿದರು. ಉಪಪ್ರಾಂಶುಪಾಲರಾದ ದಿವಾಕರ ಮರಕಾಲ ಎಸ್. ಮಾತನಾಡಿ, “ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದುವಲ್ಲಿ ವಚನ ಸಾಹಿತ್ಯ ಮತ್ತು ಶರಣರ ಚಳವಳಿಯ ಪಾತ್ರ ಬಹುಮುಖ್ಯವಾದುದು. ಕಾಯಕ ತತ್ವವನ್ನು ಸಾರಿದ ಶರಣ ಸಾಹಿತ್ಯ ಇಂದಿಗೂ…

Read More

ಮಳವಳ್ಳಿ : 21 ಆಗಸ್ಟ್ 2024ರಂದು ಉದ್ಘಾಟನೆಗೊಂಡ ರಂಗಬಂಡಿ ಸಂಸ್ಥೆ ಆಯೋಜಿಸಿದ ‘ಮಳವಳ್ಳಿ ಸುಂದರಮ್ಮ ರಂಗೋತ್ಸವ’ದ ಸಮಾರೋಪ ಸಮಾರಂಭವು 25 ಆಗಸ್ಟ್ 2024ರಂದು ಮಳವಳ್ಳಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗಕರ್ಮಿ ಹಾಗೂ ಸಿನಿಮಾ ನಟ ಬಿ. ಸುರೇಶ್ ಮಾತನಾಡಿ “ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ನಾಟಕಗಳು ಅಭಿವೃದ್ಧಿ ಮತ್ತು ಸೌಹಾರ್ದತೆ ನೆಲೆಸಲು ಕಾರಣವಾಗುತ್ತವೆ. ಮಳವಳ್ಳಿಯ ಜನತೆ ಹಿಂದಿನಿಂದಲೂ ಜನಪದ ಕಲೆಗೆ ಹೆಸರಾಗಿದ್ದು, ಅದನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕು. ಮಂಡ್ಯ ಜಿಲ್ಲೆಯಲ್ಲಿ ಸಿನಿಮಾ, ನಾಟಕ, ಜನಪದದಲ್ಲಿ ದೊಡ್ಡ ಹೆಸರು ಮಾಡಿದ ಕಲಾವಿದರಿದ್ದಾರೆ. ಆದರಲ್ಲೂ ಮಳವಳ್ಳಿ ತಾಲೂಕು ಮಂಟೇಸ್ವಾಮಿ, ಮಾದಪ್ಪ ನಡೆದಾಡಿದ ನೆಲೆಯಾಗಿದೆ. ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ಪ್ರತಿರೋಧ ಒಡ್ಡಿದ ಜನಪದ ನಾಯಕರು ಇವರಾಗಿದ್ದಾರೆ. ಇವರ ಪ್ರಭಾವ ಈ ಭಾಗದ ಜನರಲ್ಲಿದೆ. ಮಳವಳ್ಳಿ ಸುಂದರಮ್ಮ ಮೊಟ್ಟ ಮೊದಲ ರಂಗನಟಿಯಾಗಿ ಪಾತ್ರಗಳನ್ನು ಮಾಡಿದ್ದಾರೆ. ಸಂಗೀತ ಹಾಗೂ ಹಾಡುಗಾರಿಕೆಯಲ್ಲೂ ಪ್ರತಿಭಾವಂತರಾಗಿ ಅದ್ಭುತ ಸಾಧನೆ ಮಾಡಿದ್ದಾರೆ. ಅದರನ್ನು ಪ್ರತಿವರ್ಷ ಸ್ಮರಿಸಿ ನಾಟಕೋತ್ಸವ ನಡೆಸಬೇಕು.…

Read More

ಹಾವಂಜೆ : ಭಾವನಾ ಪ್ರತಿಷ್ಠಾನ (ರಿ.) ಹಾವಂಜೆ ಸಂಯೋಜಿಸುವ ಶ್ರೀ ಮಹಾಲಿಂಗೇಶ್ವರ ಯಕ್ಷರಂಗ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 30 ಆಗಸ್ಟ್ 2024ರಂದು ಸಂಜೆ 6-00 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆಯಲಿದೆ. ‘ಶ್ರೀ ಕೃಷ್ಣ ಸಂಧಾನ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಸರ್ವಶ್ರೀಗಳಾದ ಕೇಶವ ಆಚಾರ್ಯ ಹೆರಂಜೆ, ದೇವದಾಸ್ ರಾವ್ ಕೂಡ್ಲಿ, ಶಿವಕುಮಾರ್ ಅಳಗೋಡು, ಶಶಾಂಕ್ ಪಟೇಲ್, ರತ್ನಾಕರ ಆಚಾರ್ಯ, ಚರಿತ್ ಪೂಜಾರಿ ಮತ್ತು ಮಂಜುನಾಥ ರಾವ್ ಹಾವಂಜೆ ಇವರುಗಳು ಸಹಕರಿಸಲಿರುವರು.

Read More

ಸುರತ್ಕಲ್ : ಹೊಸಬೆಟ್ಟು ಗ್ರಾಮ ಸಂಘ (ರಿ.) ಕುಳಾಯಿ-ಹೊಸಬೆಟ್ಟು ಇದರ 66ನೇ ವಾರ್ಷಿಕ ಹರಿಕೀರ್ತನಾ ಮಹೋತ್ಸವವು ನವಗಿರಿ ಕಲ್ಯಾಣ ಮಂಟಪ ಹೊಸಬೆಟ್ಟು ಇಲ್ಲಿ ದಿನಾಂಕ 09-08-2024ರಂದು ಆರಂಭಗೊಂಡು 19-08-2024ರಂದು ಸಂಪನ್ನಗೊಂಡಿತು. ಚಿತ್ರಾಪುರದ ಪುರೋಹಿತ ವೇದಮೂರ್ತಿ ಸಿ. ಲಕ್ಷ್ಮೀಶ ಆಚಾರ್ಯ ಇವರು ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾಶೀರ್ವಾದಗೈದರು. ಸುಮಾರು 12 ಹರಿದಾಸರುಗಳಿಂದ ಸಂತರ ಹರಿಕೀರ್ತನೆಯು ನಡೆಯಿತು. ಮೊದಲನೇ ದಿನದ ಹರಿಕೀರ್ತನೆಯನ್ನು ಶ್ರೀ ಚಂದ್ರಕಾಂತ್ ಭಟ್ ಮೂಡಬಿದಿರೆ ಇವರು ನಡೆಸಿಕೊಟ್ಟಿದ್ದು, ಉಳಿದ ದಿನಗಳ ಹರಿಕೀರ್ತನೆಯನ್ನು ಶ್ರೀ ಅನಂತಪದ್ಮನಾಭ ಭಟ್ ಕಾರ್ಕಳ, ಡಾ. ಎಸ್.ಪಿ. ಗುರುದಾಸ್ ಮಂಗಳೂರು, ಶ್ರೀ ಶೇಣಿ ಮುರಳಿ ಮಂಗಳೂರು, ಶ್ರೀ ಎಚ್. ಯಜ್ಞೇಶ್ ಹೊಸಬೆಟ್ಟು, ಶ್ರೀ ಪೊಳಲಿ ಜಗದೀಶದಾಸ್, ಶ್ರೀ ಶಿವಶಂಕರದಾಸ್ ಬೆಂಗಳೂರು, ಶ್ರೀಮತಿ ಮಂಜಳಾ ಜಿ. ರಾವ್ ಮಂಗಳೂರು, ಕುಮಾರಿ ಶ್ರದ್ದಾ ಗುರುದಾಸ್ ಮಂಗಳೂರು, ಕುಮಾರಿ ವಸುಪ್ರದ ಜಿ. ಭಟ್ ಉಡುಪಿ, ಶ್ರೀ ಮಧುಸೂದನ ದಾಸರು ಮಂಡ್ಯ ಹಾಗೂ ಕೊನೆಯ ದಿನದ ಸಮಾರೋಪ ಸಮಾರಂಭದ ಹರಿಕಥೆಯನ್ನು ಕಲಾರತ್ನ ಶ್ರೀ…

Read More

ಬೆಂಗಳೂರು : ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ.) ಬೆಂಗಳೂರು ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಪಿಸುವ ‘ಗೀತ ಗೌರವ’ ಮತ್ತು ‘ಭಾವಾಭಿನಂದನೆ’ ಕಾರ್ಯಕ್ರಮವನ್ನು ದಿನಾಂಕ 31 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮರೆಯಲಾಗದ ಮಹನೀಯರಾದ ಕಾವ್ಯ ಗಾಯನ ಪಿತಾಮಹ ಪಿ. ಕಾಳಿಂಗರಾವ್ ಮತ್ತು ಸಾವಿರ ಪದಗಳ ಸರದಾರ ಬಾಳಪ್ಪಾ ಹುಕ್ಕೇರಿ ಇವರುಗಳಿಗೆ ‘ಗೀತ ಗೌರವ’ ಮತ್ತು ಪ್ರಸಿದ್ಧ ಕವಿಗಳು ಹಾಗೂ ಸಾಹಿತಿಗಳಾದ ಡಾ. ನಾ. ದಾಮೋದರ ಶೆಟ್ಟಿ, ಖ್ಯಾತ ಗಾಯಕರಾದ ನಗರ ಶ್ರೀನಿವಾಸ ಉಡುಪ ಮತ್ತು ಖ್ಯಾತ ಗಾಯಕಿ ರತ್ನಮಾಲಾ ಪ್ರಕಾಶ್ ಇವರಿಗೆ ಜನ್ಮದಿನ ಶುಭಾಶಯದ ‘ಭಾವಾಭಿನಂದನೆ’. ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಧರಣಿದೇವಿ ಮಾಲಗತ್ತಿ ಇವರು ಉದ್ಘಾಟಿಸಲಿದ್ದು, ಖ್ಯಾತ ಕವಿಗಳು ಮತ್ತು ಸಾಹಿತಿಗಳಾದ ಡಾ. ಹೆಚ್.ಎಸ್. ವೆಂಕಟೇಶಮೂರ್ತಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ವೈ.ಕೆ. ಮುದ್ದುಕೃಷ್ಣ, ನಗರ ಶ್ರೀನಿವಾಸ ಉಡುಪ,…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸೆಪ್ಟೆಂಬರ್ ತಿಂಗಳ ಸಾಪ್ತಾಹಿಕ ಸರಣಿ ಕಾರ್ಯಕ್ರಮವು ದಿನಾಂಕ 02-09-2024, 09-09-2024, 16-09-2024, 23-09-2024 ಮತ್ತು 30-09-2024ರಂದು ಪ್ರತೀ ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 02-09-2024ರಂದು ನಡೆಯಲಿರುವು ಸರಣಿ 61ರಲ್ಲಿ ಕುಮಾರಿ ಪ್ರಜ್ಞಾ, ದಿನಾಂಕ 09-09-2024ರಂದು ನಡೆಯಲಿರುವು ಸರಣಿ 62ರಲ್ಲಿ ನೃತ್ಯನಿಕೇತನ ಕೊಡವೂರಿನ 90 ಕಾಲವಿದೆಯರು, ದಿನಾಂಕ 16-09-2024ರಂದು ನಡೆಯಲಿರುವು ಸರಣಿ 63ರಲ್ಲಿ ಕುಮಾರಿ ಅನಘ ಹೆಗ್ಡೆ, ದಿನಾಂಕ 23-09-2024ರಂದು ನಡೆಯಲಿರುವು ಸರಣಿ 64ರಲ್ಲಿ ಕುಮಾರಿ ಸಾನ್ವಿ ರಾಜೇಶ್ ಮತ್ತು ದಿನಾಂಕ 30-09-2024ರಂದು ನಡೆಯಲಿರುವು ಸರಣಿ 65ರಲ್ಲಿ ಕುಮಾರಿ ಶ್ರೇಯಾ ಶ್ಯಾನುಭಾಗ್ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.

Read More

ಕಲಬುರ್ಗಿ : ವಿಶ್ವ ವಿದ್ಯಾಲಯ ಮತ್ತು ಗಜಲ್ ಎಕಾಡೆಮಿಗಳ ಸಹಯೋಗದಲ್ಲಿ ಪ್ರಥಮ ಅಂತರಾಷ್ಟ್ರೀಯ ಗಜಲ್ ಸಮ್ಮೇಳನವು ದಿನಾಂಕ 25 ಆಗಸ್ಟ್ 2024ರಂದು ಕಲಬುರ್ಗಿಯಲ್ಲಿ ನಡೆಯಿತು. ಖ್ಯಾತ ಗಜಲ್ ಸಾಹಿತಿ ಪ್ರಭಾವತಿ ದೇಸಾಯಿ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ‘ಗಜಲ್ ನಡೆದು ಬಂದ ಹಾದಿ’ ಎಂಬ ಗೋಷ್ಠಿಗೆ ಚಾಲನೆ ನೀಡದ ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರು ಮಾತನಾಡಿ “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣ ಪರ್ಷ್ಯಾದ ಗಜಲ್ ಇತ್ತಣ ಕರ್ನಾಟಕಕ್ಕೂ…… ಎಂಬ ಹಾಗೆ ಪರ್ಷಿಯಾದಿಂದ ಕರ್ನಾಟಕಕ್ಕೆ ಗಜಲ್ ನಡೆದು ಬಂದ ದಾರಿಯಾಯಿತು. ಹೊಸತನ್ನು ಹೊಸೆವ ಆಸಕ್ತಿ ಗಜಲ್ ಬೆಳವಣಿಗೆಗೆ ಕಾರಣ. ಭಾರತದ ಹೆಸರಾಂತ ಗಜಲ್ಕಾರರ ಬಗೆಗೆ ಹೇಳುತ್ತಾ ಕರ್ನಾಟಕ ಇಂದು ಅತಿ ಹೆಚ್ವು ಗಜಲ್ ಬರಹಗಾರರನ್ನು ಹೊಂದಿದೆ. ಭಾವನೆಗೆ ನಿಯಮಾವಳಿಗಳ ಮೂಲಕ ಕೊಡುವ ಚೌಕಟ್ಟು ಗಜಲ್ ಗೆ ಮೂಲ ಸ್ತಂಭ” ಎಂದು ಹೇಳಿದರು. ಖ್ಯಾತ ಕವಿ ಅಲ್ಲಾಗಿರಿ ರಾಜರ ಅಧ್ಯಕ್ಷತೆಯಲ್ಲಿ ನಡೆದ…

Read More

ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ವಿಂಶತಿ ಸಂಭ್ರಮದ ಅಂಗವಾಗಿ ತಾಳಮದ್ದಳೆ ಸರಣಿಯ 5ನೇ ಕಾರ್ಯಕ್ರಮವು ದಿನಾಂಕ 26 ಆಗಸ್ಟ್ 2024ರಂದು ಅಷ್ಟಮಿ ಸಂಭ್ರಮದ ಪ್ರಯುಕ್ತ ಕೌಡಿಚ್ಚಾರು, ಅರಿಯಡ್ಕದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಜಾಂಬವತಿ ಕಲ್ಯಾಣ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಆಲಂಕಾರು ಹಾಗೂ ಚೆಂಡೆ, ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ ಕುಂಜೂರುಪಂಜ, ಮೋಹನ್ ಶರವೂರು ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಶ್ರೀ ಕೃಷ್ಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವಂತ), ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ), ಭಾರತಿ ರೈ ಅರಿಯಡ್ಕ (ನಾರದ) ಸಹಕರಿಸಿದರು. ಭಜನಾ ಮಂದಿರದ ಅಧ್ಯಕ್ಷ ರಾಮದಾಸ್ ರೈ ಹಾಗೂ ಸದಸ್ಯರು ಕಲಾವಿದರನ್ನು ಶಾಲು ಹೊದಿಸಿ ಗೌರವಿಸಿದರು. ಸಂಘದ ನಿರ್ದೇಶಕರ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಸಂಘದ ಸದಸ್ಯೆ ಭಾರತಿ ರೈ ಅರಿಯಡ್ಕ ಪ್ರಾಯೋಜಿಸಿದರು.

Read More

ಧಾರವಾಡ : ಉತ್ತರ ಕರ್ನಾಟಕದ ಜನಪ್ರಿಯ ರಂಗ ಸಂಸ್ಥೆಯಾದ ಅಭಿನಯ ಭಾರತಿ (ರಿ.) ಇದರ ವತಿಯಿಂದ ‘ವಜ್ರ ಸಿರಿ ರಂಗೋತ್ಸವ 2024’ ಕಾರ್ಯಕ್ರಮವನ್ನು ಧಾರವಾಡ ಕರ್ನಾಟಕ ಕಾಲೇಜಿನ ಆವರಣದ ಸೃಜನಾ ರಂಗಮಂದಿರದಲ್ಲಿ ದಿನಾಂಕ 31-08-2024ರಿಂದ 02-09-2024ರವರೆಗೆ ಸಂಜೆ 6-00 ಗಂಟೆಗೆ ಹಮ್ಮಿಕೊಂಡಿದೆ. ದಿನಾಂಕ 31 ಆಗಸ್ಟ್ 2024ರಂದು ಧಾರವಾಡದ ಅಭಿನಯ ಭಾರತಿ ತಂಡದವರು ಎನ್. ಸುರೇಂದ್ರನಾಥ್ ರಚಿಸಿರುವ ಶ್ರೀಪತಿ ಮಂಜನಬೈಲು ನಿರ್ದೇಶನದಲ್ಲಿ ‘ನಾ. ತುಕಾರಾಂ ಅಲ್ಲಾ’ ಎಂಬ ಹಾಸ್ಯರಸ ಪ್ರಧಾನ ನಾಟಕವನ್ನು ಪ್ರಸ್ತುತ ಪಡಿಸಲಿರುವರು. ಈ ದಿನದ ಕಾರ್ಯಕ್ರಮಕ್ಕೆ ಜೆ.ಎಸ್.ಎಸ್. ಇದರ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಇವರು ಚಾಲನೆ ನೀಡಲಿದ್ದಾರೆ. ದಿನಾಂಕ 01 ಸೆಪ್ಟೆಂಬರ್ 2024ರಂದು ನಟನ ಪಯಣ ರೆಪರ್ಟರಿಯವರು ಡಾ. ಶ್ರೀಪಾದ ಭಟ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಕಣಿವೆ ಹಾಡು’ ಎಂಬ ನಾಟಕವನ್ನು ಅಭಿನಯಿಸಲಿದ್ದು, ರಂಗ ಕರ್ಮಿಗಳು ಚಲನಚಿತ್ರ ಹಾಗೂ ಧಾರಾವಾಹಿ ನಟರಾದ ಮಂಡ್ಯ ರಮೇಶ ಇವರು ಈ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ದಿನಾಂಕ 02…

Read More