Author: roovari

ಪುತ್ತೂರು : ಗ್ರಾಮೀಣ ಭಾಗದ ಮಕ್ಕಳಿಗೆ ಹಿಮ್ಮೇಳ ಸಹಿತ ಶುದ್ಧ ಶಾಸ್ತ್ರೀಯ ಶೈಲಿಯ ಭರತನಾಟ್ಯದ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು, ವಸುಧಾರಾ ಕಲಾಕೇಂದ್ರ ಬೋಳಂತೂರು – ಮಂಚಿ ಇವರ ಸಹಯೋಗದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾವಿದರಿಂದ ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಎನ್ನುವ ಮೂವತ್ತರ ವರ್ಷಾಚರಣೆಯ ಸಂದರ್ಭದಲ್ಲಿ ಗುರುಗಳಾದ ದೀಪಕ್ ಕುಮಾರ್ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ರೂಪುಗೊಂಡು ಜನಮೆಚ್ಚುಗೆ ಗಳಿಸಿದ ಸರಸ್ವತಿ-ಲಕ್ಷ್ಮಿ-ಪಾರ್ವತಿ ದೇವಿಯರ ಕಥಾ ಪ್ರಸ್ತುತಿ ‘ತ್ರಿಶಕ್ತಿ’ ದಿನಾಂಕ 31 ಆಗಸ್ಟ್ 2025ರ ಭಾನುವಾರ ಸಂಜೆ 5-00 ಗಂಟೆಗೆ ಲಯನ್ಸ್ ಕ್ಲಬ್ ಮಂಚಿ ಇಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. ಅಭ್ಯಾಗತರಾಗಿ ದೀಪ ಪ್ರಜ್ವಲನೆಗೈದ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಉಮಾನಾಥ ರೈ ಮೇರಾವು ಇವರು ನೃತ್ಯವನ್ನು ಶ್ಲಾಘಿಸಿದರು ಹಾಗೂ ಇನ್ನಷ್ಟು ಇಂತಹ ಗುಣಮಟ್ಟದ ಕಾರ್ಯಕ್ರಮ ಆಗುವಲ್ಲಿ ತಮ್ಮ ಸಹಕಾರ ಇರುತ್ತದೆ ಎನ್ನುವ ಭರವಸೆ ನೀಡಿದರು. ಲಯನ್ಸ್ ಭವನವನ್ನು ನೃತ್ಯ ಕಾರ್ಯಕ್ರಮಕ್ಕೆ ಉಚಿತವಾಗಿ ನೀಡಿದ ಮಾಲಕರಾದ…

Read More

ಮಂಗಳೂರು : ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ವತಿಯಿಂದ ಹಿರಿಯ ಅರ್ಥಧಾರಿ, ಸಂಘಟಕ ಬಿ. ನಾಗೇಶ ಪ್ರಭು ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 31 ಆಗಸ್ಟ್ 2025ರಂದು ಮಂಗಳೂರು ರಥಬೀದಿಯ ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಸಭಾಗೃಹದಲ್ಲಿ ಜರಗಿತು. ಈ ಸಂಧರ್ಭ ಸಂಘದ ಗೌರವಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಇವರು ಶ್ರೀಮತಿ ಯೋಗಾಕ್ಷಿ ಗಣೇಶ ತಲಕಳರವರಿಗೆ ‘ಶ್ರೀ ವಾಗೀಶ್ವರೀ ಅನುಗ್ರಹ ಪ್ರಶಸ್ತಿ’ಯನ್ನು ಪ್ರದಾನ ಮಾಡಿ “ಹಳ್ಳಿಯಲ್ಲಿದ್ದೂ ಯಕ್ಷಗಾನ ಕಲೆಯನ್ನು ಬೆಳೆಸಿ ಉಳಿಸಿದ ಇಂತಹ ಕಲಾರಾಧಕರಿಂದ ಯಕ್ಷಗಾನ ಉಳಿದಿದೆ. ತಮ್ಮನ್ನು ತಾವು ತೊಡಗಿಸಿಕೊಂಡು, ತಮ್ಮ ಮಕ್ಕಳನ್ನೂ ಯಕ್ಷಗಾನಕ್ಕೆ ಅಣಿಗೊಳಿಸಿ, ಉಳಿದ ಆಸಕ್ತರಿಗೂ ಈ ಕಲೆಯನ್ನು ಪರಿಚಯಿಸುತ್ತಿರುವ ಯೋಗಾಕ್ಷಿಯವರ ಸಾಧನೆ ಮೆಚ್ಚುವಂತಹದು. ದಿ. ನಾಗೇಶ ಪ್ರಭುಗಳು ತಮ್ಮ ದುಡಿಮೆಯ ಬಹುಪಾಲನ್ನು ಈ ಕಲೆಗಾಗಿ ವಿನಿಯೋಗಿಸಿದವರು. ಯೋಗಾಕ್ಷಿ ಗಣೇಶ ಇವರಿಗೆ ಸನ್ಮಾನ ಮಾಡುವ ಮೂಲಕ ಅವರ ಆತ್ಮಕ್ಕೆ ಅತ್ಯಂತ ಸಂತೋಷ ಉಂಟಾಗುವುದರಲ್ಲಿ ಸಂದೇಹವಿಲ್ಲ” ಎಂದರು. ದಿ. ನಾಗೇಶ ಪ್ರಭುಗಳ ಯಕ್ಷಗಾನದ ಸೇವೆಯನ್ನು ಸಂಘದ ಸಂಚಾಲಕ ನವನೀತ…

Read More

ಮೈಸೂರು : ಪರಿವರ್ತನ ರಂಗ ಸಮಾಜ (ರಿ.) ಪ್ರಸ್ತುತಪಡಿಸುವ ರವೀಂದ್ರ ಭಟ್ ಇವರ ಕೃತಿ ಆಧಾರಿತ ‘ಮೂರನೇ ಕಿವಿ’ ನಾಟಕ ಪ್ರದರ್ಶನವನ್ನು ದಿನಾಂಕ 06 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 3-30 ಹಾಗೂ ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗಶಂಕರದಲ್ಲಿ ಆಯೋಜಿಸಲಾಗಿದೆ. ಪ್ರೊ. ಎಸ್.ಆರ್. ರಮೇಶ್ ಇವರು ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಮಾತು ಬಾರದಿರುವ ಪ್ರಪಂಚದಲ್ಲಿ ಶಬ್ದ ಮತ್ತು ಮಾತಿಗೆ ಅಗಾಧವಾದ ಪ್ರಾಮುಖ್ಯತೆ ಇದೆ. ಹುಟ್ಟಿನಿಂದಲೇ ಕಿವುಡರಾದವರಿಗೆ ಮಾತನಾಡುವುದನ್ನು ಕಲಿಸಲು ನಡೆಸುವ ದೀರ್ಘ ಪ್ರಯತ್ನವೇ ಮೂರನೇ ಕಿವಿ ಕೃತಿಯ ಪ್ರಮುಖ ಉದ್ದೇಶ. ಮಾತು ಕಲಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ವಿಜ್ಞಾನವಿದೆ. ಕಲಿಕಾ ಅಭ್ಯಾಸಗಳಿವೆ. ನಿತ್ಯ ನಡೆಸುವ ಹೋರಾಟವಿದೆ. ಉತ್ಸಾಹವಿದೆ. ನಿರಾಶೆ, ಬೇಗುದಿ, ಆಶ್ಚರ್ಯ, ಕುತೂಹಲ ಎಲ್ಲವನ್ನು ಒಳಗೊಳ್ಳುವ ಸಾಹಸ ಹೋರಾಟವಿದು. ತಾಯಿ ಮಗ ಜೊತೆಯಲ್ಲಿ ನಡೆಸುವ ಈ ಕಠಿಣ ಹೋರಾಟದಲ್ಲಿ ಬೆಂಬಲವಾಗಿ ತಂದೆ ಮತ್ತು ಇತರ ಕುಟುಂಬದ ಸದಸ್ಯರು, ಶಾಲೆಯಲ್ಲಿನ ಶಿಕ್ಷಕಿಯರು, ವೈದ್ಯರು, ಮಿತ್ರರು ಎಲ್ಲರೂ ಪಾಲ್ಗೊಳ್ಳುತ್ತಾರೆ. ಒಟ್ಟಾರೆ ಇದು ಸಮುದಾಯದ…

Read More

ಮೈಸೂರು : ಕು. ಪ್ರಸನ್ನಾ ಹೆಚ್. ಇವರು 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ವಿದ್ವತ್ ಪೂರ್ವ ರಾಜ್ಯ ಮಟ್ಟದ ಸಂಗೀತ ಹಾಡುಗಾರಿಕೆ ಪರೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಈಕೆ ಚಿಟ್ಪಾಡಿಯ ಹರಿಕೃಷ್ಣ ಆಚಾರ್ಯ ಮತ್ತು ವಿದ್ಯಾ ದಂಪತಿಗಳ ಸುಪುತ್ರಿ. ಸಂಗೀತ ಶಿಕ್ಷಕಿ ವಿದುಷಿ ವಿನುತಾ ಆಚಾರ್ಯ ಹಾಗೂ ವಿದುಷಿ ಭಾರ್ಗವಿ ಹೆಚ್. ಚೆನ್ನೈ ಇವರ ಶಿಷ್ಯೆಯಾಗಿರುತ್ತಾರೆ.

Read More

ನೃತ್ಯರಂಗದಲ್ಲಿ ಸದ್ದಿಲ್ಲದೆ ಸಾಧನಾ ಪಥದಲ್ಲಿ ಸಾಗುತ್ತಿರುವ ನೃತ್ಯಗುರು ಶ್ರೀಮತಿ ಸುನೀತಾ ಅರವಿಂದ್ ನೇತೃತ್ವದ ‘ಕಲಾಂತರಿಕ್ಷಂ ನೃತ್ಯಕ್ಷೇತ್ರ’ ನೃತ್ಯಸಂಸ್ಥೆಯ ಪುಟಾಣಿ ನರ್ತಕಿಯರು ಇತ್ತೀಚೆಗೆ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಅತ್ಯಾಕರ್ಷಕ ವೇಷಭೂಷಣಗಳಿಂದ ವೇದಿಕೆಯ ಮೇಲೆ ಬಹು ಸೊಗಸಾಗಿ ನರ್ತಿಸಿದ ದೃಶ್ಯ ಅನನ್ಯವಾಗಿತ್ತು. ಸುಂದರ ವಿನ್ಯಾಸದ ನೃತ್ಯ ಸಂಯೋಜನೆ ಮತ್ತು ಕೃತಿಗಳ ಸಮರ್ಥ ಪ್ರಸ್ತುತಿಯಲ್ಲಿ ನೃತ್ಯಗುರು ಸುನೀತಾ ಅರವಿಂದ್ ಅವರ ಬಹು ಪರಿಶ್ರಮದ ಬದ್ಧತೆಯ ತರಬೇತಿ ಎದ್ದು ಕಾಣುತ್ತಿತ್ತು. ಸುಮಾರು ಮೂರು ಗಂಟೆಗಳ ಕಾಲ 75 ಉದಯೋನ್ಮುಖ ನರ್ತಕಿಯರು ರಂಗದ ಮೇಲೆ ಬಹು ಸಾಮರಸ್ಯದಿಂದ ಹೆಜ್ಜೆಗಳನ್ನು ಹಾಕಿ, ತಮ್ಮ ಅಂಗಶುದ್ಧ ನರ್ತನ ವೈಖರಿಯಿಂದ, ಆಂಗಿಕಾಭಿನಯದ ಸೊಗಸಿನಿಂದ, ಮುದನೀಡುವ ಅಭಿನಯದಿಂದ ಕಲಾರಸಿಕರನ್ನು ಆಕರ್ಷಿಸಿದರು. ವರ್ಣರಂಜಿತ ವಸ್ತ್ರವಿನ್ಯಾಸ, ಬಹು ಆಸ್ಥೆಯಿಂದ ಮಾಡಿದ್ದ ಪ್ರಸಾಧನದ ಕಲಾತ್ಮಕತೆ, ಆಭರಣಗಳ ಆಯ್ಕೆ ಬಹು ವಿಶಿಷ್ಟವೆನಿಸಿತು. ಹಿರಿಯ ಕಲಾವಿದರಷ್ಟೇ ಎಲ್ಲ ಅಂಶಗಳಲ್ಲೂ ಪುಟ್ಟಮಕ್ಕಳಿಗೆ ನೀಡಿದ್ದ ಆದ್ಯತೆ ಗಮನಾರ್ಹವಾಗಿತ್ತು. ಶುಭಾರಂಭಕ್ಕೆ ಅರಳು ಪ್ರತಿಭೆಗಳು ಬಹು ಶ್ರದ್ಧೆಯಿಂದ ಸಾಕಾರಗೊಳಿಸಿದ ‘ಪುಷ್ಪಾಂಜಲಿ’ ಮತ್ತು ವಿಘ್ನ ವಿನಾಯಕನ ಸ್ತುತಿಯ ನರ್ತನಾ ವಿಲಾಸ…

Read More

ಬೆಂಗಳೂರು : ಅಭಿನಯ ತರಬೇತಿ ಕೇಂದ್ರ ‘ರಂಗಶಾಲ’ ಅರ್ಪಿಸುತ್ತಿರುವ ವಿನಯ್ ನೀನಾಸಂ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಒ.ಬಿ.ಇ.’ ಪ್ರಶಸ್ತಿ ಸಿಗೋದು ಬಹಳ ಕಷ್ಟ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 04 ಸೆಪ್ಟೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 96633 99966 ಮತ್ತು 86600 11960 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು : ಬಿ. ದಾಮೋದರ ನಿಸರ್ಗ ಸಂಸ್ಮರಣ ಸಮಿತಿ ವತಿಯಿಂದ ದಿನಾಂಕ 31 ಆಗಸ್ಟ್ 2025ರಂದು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ದ್ವಿತೀಯ ಸಂಸ್ಮರಣ ಸಮಾರಂಭದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣ ಮಾಡಿದ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ತುಳುನಾಡು, ನುಡಿ ಮತ್ತು ಸಂಪ್ರದಾಯಗಳ ರಕ್ಷಣೆಗಾಗಿ ಪಣತೊಟ್ಟು ಹೋರಾಡಿದ ಅನೇಕ ವ್ಯಕ್ತಿಗಳು ಮತ್ತು ಸಂಘಟನೆಗಳು ನಮ್ಮಲ್ಲಿವೆ. ತುಳು ಚಳುವಳಿಯ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಹಿರಿಯರೆಲ್ಲ ಗತಿಸಿ ಹೋಗಿದ್ದಾರೆ. ಯಾವುದಕ್ಕೂ ಒಂದು ತಾರ್ಕಿಕ ಅಂತ್ಯ ಈವರೆಗೆ ಲಭಿಸಿಲ್ಲವಾದರೂ ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಸರಣಕ್ಕೆ ಪ್ರಾಮಾಣಿಕವಾಗಿ ದುಡಿದವರು ಸದಾ ಸ್ಮರಣೀಯರು. ಅಂಥವರಲ್ಲಿ ಮೂರು ದಶಕಗಳಷ್ಟು ಕಾಲ ಕುಡ್ಲ ತುಳು ಕೂಟದ ಚುಕ್ಕಾಣಿ ಹಿಡಿದು ಹಲವು ರಂಗಗಳಲ್ಲಿ ಕೆಲಸ ಮಾಡಿದ ದಾಮೋದರ ನಿಸರ್ಗರು ತುಳು ಭಾಷೆ ಮತ್ತು ಸಂಸ್ಕೃತಿಯ ನೈಜ ಹೋರಾಟಗಾರರು. ಸುದೀರ್ಘಕಾಲ ಗೋಕರ್ಣನಾಥ ಬ್ಯಾಂಕ್ ಅಧ್ಯಕ್ಷರಾಗಿ, ಮರೋಳಿ…

Read More

ವಿರಾಜಪೇಟೆ : ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಮತ್ತು ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ವಿರಾಜಪೇಟೆ ಇವರ ಸಹಯೋಗದಲ್ಲಿ ಗಣೇಶೋತ್ಸವ ಕವಿಗೋಷ್ಠಿ, ಕೃತಿ ಲೋಕಾರ್ಪಣೆ ಹಾಗೂ ಗೀತಗಾಯನ ಕಾರ್ಯಕ್ರಮ ದಿನಾಂಕ 31 ಆಗಸ್ಟ್ 2025ರಂದು ವಿರಾಜಪೇಟೆಯ ಮೂರ್ನಾಡು ರಸ್ತೆಯ ಶ್ರೀ ಕಾವೇರಿ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡಿನ ಹಿರಿಯ ಕವಿ ಡಾ. ಜಯಪ್ಪ ಹೊನ್ನಾಳಿ “ಕವಿಗಳಿಗೆ ಆಕಾಶದಲ್ಲಾಡುವ ಒಂಟಿ ಹಕ್ಕಿಯ ನಿಟ್ಟುಸಿರನ್ನು ಕೇಳಿಸಿಕೊಳ್ಳುವ, ಸಾಗರದಾಳದ ಒಂಟಿ ಮೀನಿನ ಕಣ್ಣೀರನ್ನು ಕಾಣುವ ಸೂಕ್ಷ್ಮತೆ ಇರಬೇಕು, ಕವಿಗೆ ವ್ಯವಹಾರಿಕವಾದ ಬದುಕನ್ನು ನೋಡುವ ಹೊರಗಣ್ಣುಗಳಿಗಿಂತ, ಬಾಳಿನೊಳಗಿನೊಳಗನ್ನು ಕಾಣುವ ವಿಸ್ಮಯದಿಂದ ತೆರೆದ ಒಳಗಣ್ಣು ಬಹುಮುಖ್ಯ, ಅಂತರಂಗದ ಅಚ್ಚರಿಯ ಕಣ್ಣು ತೆರೆದಾಗ ಮಾತ್ರ ಅವನಿಗೆ ಜೀವನದ ಸಮಗ್ರ ದರ್ಶನ ಸಾಧ್ಯವಾಗುತ್ತದೆ, ಕವಿತೆಯೆಂದರೆ ಅದೊಂದು ಕವಿಯ ಧ್ಯಾನಸ್ಥ ಮನೋಸ್ಥಿತಿಯಲ್ಲಿ ಅರಳುವ ಮಂದಾರ ಪುಷ್ಪ, ಅದರಲ್ಲಿ ಅರ್ಥದ ಮಕರಂದ, ಚೆಲುವಿನ ಪ್ರಾಸದ ದಳದಳಗಳ ಚೆಲುವು, ಪರಿಮಳಪೂರ್ಣವಾದ ಸೆಳೆತದ ಜೀವಭಾವದೊಲವಿನ ನಿಲುವುಗಳು ಸಂಗಮಿಸಿರಬೇಕು, ಹಾಗಾದಾಗ ಮಾತ್ರ…

Read More

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ 2024ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟವಾಗಿವೆ. ನಿರ್ಮಲಾ ಶೆಟ್ಟ‌ರ್ ಇವರಿಗೆ ಕೆ.ಟಿ. ಬನಶಂಕರಮ್ಮ ಪ್ರಶಸ್ತಿ, ಪ್ರೇಮಾ ಭಟ್ ಮತ್ತು ಎ.ಎಸ್. ಭಟ್‌ ಪ್ರಕಾಶಕಿ ಪ್ರಶಸ್ತಿಗೆ ಸುಧಾ ಚಿದಾನಂದ ಗೌಡ ಅವರು ಆಯ್ಕೆಯಾಗಿದ್ದಾರೆ. ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಕೆ.ಎಸ್. ಚೈತ್ರಾ ಅವರ ‘ದಂತ ಕಥೆಗಳು’, ಜಿ.ವಿ. ನಿರ್ಮಲ ಅನುವಾದ ಸಾಹಿತ್ಯ ಪ್ರಶಸ್ತಿಗೆ ವಿಜಯಾ ಶಂಕ‌ರ್ ಅವರ ‘ಮನೋಜ್ಞ’ ಕಾದಂಬರಿ, ಉಷಾ ಪಿ. ರೈ ಆತ್ಮಕಥನ ಪ್ರಶಸ್ತಿಗೆ ಎಚ್.ಆರ್ಿ. ಲೀಲಾವತಿ ಅವರ ‘ಹಾಡಾಗಿ ಹರಿದಾಳೆ’, ನಾಗರತ್ನ ಚಂದ್ರಶೇಖ‌ರ್ ಲಲಿತ ಪ್ರಬಂಧ ಪ್ರಶಸ್ತಿಗೆ ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ ಅವರ ‘ನೀರ್ ದೋಸೆ’ ಕೃತಿಗಳು ಆಯ್ಕೆಯಾಗಿವೆ. ಬಿ.ಸಿ. ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿಗೆ ಪಿ. ಭಾರತಿದೇವಿ ಅವರ ‘ಚಲಿಸುತ್ತಿವೆ ಚುಕ್ಕಿಗಳು’, ಬ್ಯಾಡಗಿ ಸಂಕಮ್ಮ ಕಾವ್ಯ ಪ್ರಶಸ್ತಿಗೆ ಗೀತಾ ವಸಂತ ಅವರ ‘ಪ್ರಾಣಪಕ್ಷಿಯ ರೆಕ್ಕೆ’, ಶ್ರೀಜಯ ಕಲಕೋಟಿ ಪ್ರಶಸ್ತಿಗೆ ಮೀನಾಕ್ಷಿ ಬಾಳಿ ಅವರ ‘ವಚನ ನಿಜದರ್ಶನ’,…

Read More

ಕಾಸರಗೋಡು : “ಸಂಗೀತವು ಬದುಕಿನ ಆತ್ಮ. ಇದು ಕೇವಲ ಮನೋರಂಜನೆಗೆ ಮಾತ್ರವಲ್ಲ ; ಆಧ್ಯಾತ್ಮಿಕ ಮತ್ತು ಮನಸ್ಸಿಗಾದ ನೋವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಈಗಿನ ಯಾಂತ್ರಿಕ ಯುಗದಲ್ಲಿ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವ ತಾಕತ್ತು ಸಂಗೀತಕ್ಕಿದೆ. ಒಳ್ಳೆಯ ಸಂಗೀತವನ್ನು ಆಲಿಸುವುದರಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಎ.ಕೆ. ವಿಜಯ್ (ಕೋಕಿಲಾ) ಹೇಳಿದರು. ಅವರು ದಿನಾಂಕ 24 ಆಗಸ್ಟ್ 2025 ರಂದು ಭಾನುವಾರ ಕಾಸರಗೋಡಿನ ಪದ್ಮಗಿರಿ ಕಲಾಕುಟೀರದಲ್ಲಿ ಕಾಸರಗೋಡಿನ ಸಾಹಿತ್ಯಿಕ -ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯ ನೇತೃತ್ವದಲ್ಲಿ ಜರಗಿದ ‘ಅಂತರ್ಧ್ವನಿ -7’ ಕರೋಕೆ ಗಾಯನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ವ್ಯಾಪಾರಿ ಮನೋಭಾವ ಇಟ್ಟುಕೊಂಡು ನಗರಗಳಲ್ಲಿ ಹಲವಾರು ಕರೋಕೆ ಸಂಸ್ಥೆಗಳು ಹುಟ್ಟಿಕೊಂಡರೂ ಯಾವುದೇ ಫಲಪೇಕ್ಷೆ ಇಲ್ಲದೆ ಕಾಸರಗೋಡಿನ ಗಾಯಕ-ಗಾಯಕಿಯರಿಗಾಗಿ ವೇದಿಕೆ ನಿರ್ಮಾಣ ಮಾಡಿಕೊಟ್ಟ ರಂಗಚಿನ್ನಾರಿಯ ಕೆಲಸವನ್ನು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ನಾರಿಚಿನ್ನಾರಿಯ ಅಧ್ಯಕ್ಷೆ, ನಗರ ಸಭಾ ಸದಸ್ಯೆ ಶ್ರೀಮತಿ ಸವಿತಾ ಟೀಚರ್ ಮಾತನಾಡಿ “ಗ್ರಾಮೀಣ…

Read More