Author: roovari

ಮಂಗಳೂರು : ಶ್ರೀರಾಮ ಕ್ಷತ್ರಿಯ ಮಹಿಳಾ ಯಕ್ಷ ವೃಂದದ ವತಿಯಿಂದ ದಿನಾಂಕ 13 ಜುಲೈ 2025ರ ಭಾನುವಾರದಂದು ಭಿಕ್ಷು ಲಕ್ಷ್ಮಣಾನಂದ ಸಭಾಭವನದಲ್ಲಿ ಗುರುವಂದನಾ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವದ ಬಗ್ಗೆ ಮಾತನಾಡಿದ ಶ್ರೀರಾಮ ಕ್ಷತ್ರಿಯ ಸೇವಾ ಸಮಿತಿಯ ಅಧ್ಯಕ್ಷ ಮುರಳೀಧರ ಚಂದ್ರಗಿರಿ “ಈ ಅದ್ಭುತ ಸೃಷ್ಟಿಯಲ್ಲಿ ನಮಗೆ ಅರಿವಿನ ಮೂಲವನ್ನು ತೋರಿಸಿ ನಡೆಸುವವನೇ ಗುರು. ಎಲ್ಲಾ ಕಾಲಘಟ್ಟದಲ್ಲೂ ಗುರುವಿನ ಸ್ಥಾನ ಉಲ್ಲೇಖನೀಯವೇ ಆಗಿದೆ. ಮನಸ್ಸಿಗೆ ಕವಿದ ಮಂಜನ್ನು ಒರಸಿ ಬೆಳಕಿನೆಡೆಗೆ ಗುರು ಒಯ್ಯುತ್ತಾನೆ. ‘ಏಕಕ್ಷರಂ ಕಲಿಸಿದಾತಂ ಗುರು’ ಎಂಬ ಮಾತಿದೆ. ಅಂತೆಯೇ ನಮ್ಮ ಜೀವನದಲ್ಲೂ ಅನೇಕ ಕಡೆ ಅನೇಕ ಗುರುಗಳು ಮಾರ್ಗದರ್ಶನ ನೀಡುತ್ತಾರೆ. ಅಂತಹಾ ಗುರುಸ್ಥಾನವನ್ನು ಗೌರವಿಸುವುದು ನಮಗೆ ಹೆಮ್ಮೆ” ಎಂದು ವಿವರಿಸಿದರು. ಶ್ರೀರಾಮಕ್ಷತ್ರಿಯ ಮಹಿಳಾ ವೃಂದದ ಅಧ್ಯಕ್ಷೆ ವಿದ್ಯಾ ನಾಗರಾಜ್ ಕೂಡಾ ಗುರುಪೂರ್ಣಿಮೆಯ ಮಹತ್ವದ ಸಂದೇಶ ನೀಡಿದರು. ಶ್ರೀರಾಮಕ್ಷತ್ರಿಯ ಮಹಿಳಾ ಯಕ್ಷ ವೃಂದದ ಸಂಧ್ಯಾ ದಿನೇಶ್ ಪ್ರಾರ್ಥಿಸಿ, ಕಲ್ಪನಾ ವೆಂಕಟೇಶ್ ಸ್ವಾಗತಿಸಿ, ಅಧ್ಯಕ್ಷೆ ವಾರಿಜಾ ಕೊರಗಪ್ಪ ಧನ್ಯವಾದ…

Read More

ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕೊಡವ ಭಾಷೆ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ’ ಏರ್ಪಡಿಸುವ ಸಂಬಂಧ ಸ್ವರಚಿತ ಕವನ ಆಹ್ವಾನಿಸಲಾಗಿದೆ. ಯಾವುದೇ ಜಾತಿ ಧರ್ಮ ಆಧಾರಿತ ಕವನಗಳನ್ನು ಹೊರತುಪಡಿಸಿ, ಕೊಡವ ಸಾಹಿತ್ಯ-ಸಂಸ್ಕೃತಿ ಇಲ್ಲಿನ ಪರಿಸರ, ಪ್ರಕೃತಿ ಒಳಗೊಂಡಂತೆ ತಾತ್ವಿಕ ವಿಚಾರಗಳಿಗೆ ಒತ್ತುಕೊಡುವಂತೆ ಕವನಗಳಿಗೆ ಅವಕಾಶ ನೀಡಲಾಗುವುದು. 25 ಸಾಲುಗಳಿಗೆ ಮೀರಿದ ಕವನಗಳನ್ನು ವಾಚಿಸಲು ಅವಕಾಶ ಇರುವುದಿಲ್ಲ. ಯಾವುದೇ ಕವನಗಳ ಸಾಲುಗಳನ್ನು ಗೋಷ್ಠಿಯಲ್ಲಿ ಪುನರುಚ್ಚರಿಸುವಂತಿಲ್ಲ. ಕವನಗಳನ್ನು ಕಳುಹಿಸುವ ಹಾಗೂ ಭಾಗವಹಿಸುವ ಕವಿಗಳಿಗೆ ಜಾತಿ-ಧರ್ಮಗಳ ನಿರ್ಬಂಧ ಇರುವುದಿಲ್ಲ. ಕೊಡವ ಭಾಷೆಯು ಕಡ್ಡಾಯವಾಗಿದ್ದು, ತಮ್ಮ ಕವನಗಳನ್ನು ಅಕಾಡೆಮಿ ಮೊಬೈಲ್ ಸಂಖ್ಯೆ 8762942976ಕ್ಕೆ ಕಳುಹಿಸಲು 19 ಜುಲೈ 2025 ಕೊನೆಯ ದಿನಾಂಕವಾಗಿದೆ. ಕವಿಗೋಷ್ಠಿಯು ನಾಯಕಂಡ ಬೇಬಿ ಚಿಣ್ಣಪ್ಪ ಇವರ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಪುತ್ತರಿರ ಪಪ್ಪು ತಿಮ್ಮಯ್ಯ ಹಾಗೂ ಕಂಬೆಯಂಡ ಡೀನಾ ಬೋಜಣ್ಣ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಕಾಡೆಮಿ ನಿಯಮದಂತೆ ಕವಿಗೋಷ್ಠಿಗೆ ಆಯ್ಕೆಯಾಗುವ ಹಾಗೂ ಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳಿಗೆ ಸಂಭಾವನೆ ನೀಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರಾದ…

Read More

ಬೆಂಗಳೂರು : ವಿಜಯನಗರ ಬಿಂಬದ ರಂಗ ಶಿಕ್ಷಣ ಕೇಂದ್ರ ಹಿರಿಯರ ವಿಭಾಗದ ವತಿಯಿಂದ 13ನೇ ವರ್ಷದ ಡಿಪ್ಲೋಮೋ ವಿದ್ಯಾರ್ಥಿಗಳಿಂದ ಅಭ್ಯಾಸ ಮಾಲಿಕೆ -1ಯಲ್ಲಿ ‘ಭಾಸ’ನ ‘ಮಧ್ಯಮ ವ್ಯಾಯೋಗ’ ನಾಟಕ ಪ್ರದರ್ಶನವನ್ನು ದಿನಾಂಕ 20 ಜುಲೈ 2025ರಂದು ಸಂಜೆ 4-00 ಹಾಗೂ 7-00 ಗಂಟೆಗೆ ಬೆಂಗಳೂರಿನ ವಿಜಯನಗರ ಬಿಂಬದಲ್ಲಿ ಆಯೋಜಿಸಲಾಗಿದೆ. ಪ್ರೊ. ಕೀ.ರಂ. ನಾಗರಾಜ್ ಇವರು ಕನ್ನಡಕ್ಕೆ ಅನುವಾದಿಸಿದ್ದು, ಡಾ. ಎಸ್.ವಿ. ಕಶ್ಯಪ್ ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9845734967, 9844017881, 9845265967 ಮತ್ತು 9844152967 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಯಕ್ಷಗಾನ ರಂಗಕ್ಕೆ ಇವರು ವೇಷಧಾರಿಯಾಗಿ ಬಂದವರು. ನಂತರ ಹಿಮ್ಮೇಳದ ಕಡೆಗೆ ಒಲವು ಮೂಡಿ ಯಕ್ಷಗಾನ ರಂಗದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವವರು ವಿಶ್ವಂಭರ ಅಲ್ಸೆ, ಐರೋಡಿ. 17.04.2002 ರಂದು ವಿಶ್ವನಾಥ ಅಲ್ಸೆ, ಐರೋಡಿ ಹಾಗೂ ವೀಣಾ ಅಲ್ಸೆ ಇವರ ಮಗನಾಗಿ ಜನನ. MCOM ಇವರ ವಿದ್ಯಾಭ್ಯಾಸ. ಯಕ್ಷಗಾನ ಗುರುಗಳು:- ಮಂಜುನಾಥ ಕುಲಾಲ್ ಐರೋಡಿ ಹಾಗೂ ಪ್ರತೀಶ್ ಕುಮಾರ್, ಬ್ರಹ್ಮಾವರ ಹೆಜ್ಜೆಗಾರಿಕೆ ಗುರುಗಳು. ಶಿವಾನಂದ, ಕೋಟ ಚಂಡೆಯ ಗುರುಗಳು. ದೇವದಾಸ್ ರಾವ್, ಕೂಡ್ಲಿ ಮದ್ದಳೆಯ ಗುರುಗಳು. ನೆಚ್ಚಿನ ಚೆಂಡೆ ಹಾಗೂ ಮದ್ದಳೆಗಾರರು: ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ ಇವರ ಮದ್ದಳೆ ಮತ್ತು ಚಂಡೆಯನ್ನು ತುಂಬಾ ಇಷ್ಟ ಪಡುತ್ತೇನೆ. ಇವರನ್ನು ಬಿಟ್ಟರೆ ಶಶಾಂಕ್ ಆಚಾರ್, ರಾಘವೇಂದ್ರ ಹೆಗಡೆ, ಕೆ.ಜೆ. ಸುಧೀಂದ್ರ ಆಚಾರ್. ಕೃಷ್ಣಯ್ಯ ಆಚಾರ್ ಬಿದ್ಕಲ್ಕಟ್ಟೆ, ರಾಧಾಕೃಷ್ಣ ಕುಂಜತ್ತಾಯ, ಸುಜನ್ ಹಾಲಾಡಿ. ನೆಚ್ಚಿನ ಭಾಗವತರು: ರಾಘವೇಂದ್ರ ಮಯ್ಯ ಹಾಲಾಡಿ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಗಣೇಶ್ ಆಚಾರ್ ಬಿಲ್ಲಾಡಿ. ಹನುಮಗಿರಿ ಮೇಳದ ಸಾಕೇತ ಸಾಮ್ರಾಜ್ಞಿ, ಇಂದ್ರಪ್ರಸ್ಥ, ಶುಕ್ರನಂದನೆ, ಜೊತೆಗೆ…

Read More

ಕುಂದಾಪುರ : ‘ನಾದಾವಧಾನ’ ಪ್ರತಿಷ್ಠಾನ ಕುಂದಾಪುರ ಇವರು ಬಡಗುತಿಟ್ಟು ಯಕ್ಷಗಾನದ ಭಾಗವತಿಕೆ-ಮದ್ದಳೆ-ಚಂಡೆ-ನೃತ್ಯಗಳ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುತಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ತರಗತಿಗಳಲ್ಲಿ ಎ. ಪಿ. ಫಾಟಕ್ ಭಾಗವತಿಕೆ, ಅಶ್ವಿನಿ ಕೊಂಡದಕುಳಿ ನೃತ್ಯ ಹಾಗೂ ಎನ್. ಜಿ. ಹೆಗಡೆ ಚಂಡ ಮದ್ದಳೆ ಗುರುಗಳಾಗಿ ಯಕ್ಷಗಾನ ಶಿಕ್ಷಣ ನೀಡಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ‘ನಾದಾವಧಾನ’ ಸಂಸ್ಥೆಯಿಂದ ಆನೈನ್ ನಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸುತ್ತಿದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯ ಅಡಿಯಲ್ಲಿ ಯಕ್ಷ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆನೇಕರು ಈಗಾಗಲೇ ರಂಗ ಪ್ರವೇಶವನ್ನು ಮಾಡಿ ಹಲವು ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ‘ನಾದಾವಧಾನ’ ಸಂಸ್ಥೆಯ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳ ಪ್ರಸ್ತುತಿಗಳು ಕಲಾವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ತರಗತಿಗಳಿಗೆ ಸಂಬಂಧಪಟ್ಟ ಸೂಚನೆಗಳು ಈ ಕೆಳಗಿನಂತಿವೆ : ಸಂಜೆ 7 ರಿಂದ 9ರ ಒಳಗಿನ ಸಮಯದಲ್ಲಿ ತರಗತಿಗಳು ನಡೆಯಲಿದ್ದು, ತರಗತಿಯು ಗೂಗಲ್ ಮೀಟ್ ನಲ್ಲಿ ನಡೆಯುತ್ತದೆ. ಕಲಿಕೆಗೆ ಬೇಕಾದ ನೋಟ್, ವಿಡಿಯೋ, ಆಡಿಯೋ ಇವುಗಳ ರೆಕಾರ್ಡಿಂಗ್ ನೀಡಲಾಗುವುದು. 10…

Read More

ಶಿರಿಯಾರ : ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸಾಹೇಬರಕಟ್ಟೆ ಶಿರಿಯಾರ ಇವರ ನೂತನ ಕಟ್ಟಡ “ಸೌಹಾರ್ದ ಸಿರಿ” ಉದ್ಘಾಟನಾ ಸಮಾರಂಭ ಪ್ರಯುಕ್ತ ಬಡಗುತಿಟ್ಟಿನ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ‘ಪಂಚಸ್ವರ ಯಕ್ಷಗಾನ ವೈಭವ’ ಕಾರ್ಯಕ್ರಮವು ದಿನಾಂಕ 13 ಜುಲೈ 2025ರ ಭಾನುವಾರ ಶಿರಿಯಾರದ ಸಾಹೇಬರಕಟ್ಟೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವತರಾಗಿ ಸರ್ವಶ್ರೀ ಡಾ. ರವಿ ಕುಮಾರ್ ಸೂರಾಲು, ಪ್ರಸಾದ್ ಕುಮಾ‌ರ್ ಮೊಗೆಬೆಟ್ಟು, ಗಜೇಂದ್ರ ಶೆಟ್ಟಿ ಆಜ್ರೆ, ಮಧುಕರ್‌ ಮಡಾಮಕ್ಕಿ, ಮನೋಜ್ ಕಕ್ಕುಂಜೆ ಭಾಗವಹಿಸಲಿದ್ದು, ಇವರಿಗೆ ಮದ್ದಳೆಯಲ್ಲಿ ಆನಂದ ಭಟ್ ಪೆರ್ಡೂರು, ವಿಶ್ವಂಬರ ಅಲೈ ಹಾಗೂ ಚಂಡೆಯಲ್ಲಿ ಸುಜನ್ ಕುಮಾರ್ ಹಾಲಾಡಿ, ವಿಶ್ವೇಶ್ ಪೂಜಾರಿ ಬೈದಬೆಟ್ಟು ಸಹಕರಿಸಲಿದ್ದಾರೆ. ಸುಶಾಂತ್ ಶೆಟ್ಟಿ ಅಚ್ಚಾಡಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.

Read More

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾ ಸಂಸ್ಥೆಗಳು ಮತ್ತು ಹಳೆ ವಿದ್ಯಾರ್ಥಿ ಸಂಘದ ಮುತುವರ್ಜಿಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ಹಾರ್ಮೋನಿಯಂ ಮತ್ತು ಕೀ ಬೋರ್ಡ್ ವಾದನ ತರಗತಿ ಉದ್ಘಾಟನೆಯು ದಿನಾಂಕ 14 ಜುಲೈ 2025ರಂದು ಅಪರಾಹ್ನ 3-30 ಗಂಟೆಗೆ ಕಟೀಲು ಪದವಿ ಪೂರ್ವ ಕಾಲೇಜಿನ ಭಾರತೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಬಿ.ಎಸ್.ಎನ್.ಎಲ್. ಕೆ. ಸುರೇಶ್ ರಾವ್ ಸಿತ್ಲ ಮತ್ತು ಹಾರ್ಮೋನಿಯಂ ಗುರುಗಳಾದ ವಾಸು ಮಾಸ್ತರ್ ಇವರುಗಳು ಉಪಸ್ಥಿತರಿರಲಿದ್ದಾರೆ.

Read More

ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತು ಫಣಿಗಿರಿ ಪ್ರತಿಷ್ಠಾನ ಶಿರೂರು ಬೈಂದೂರು ತಾಲೂಕು ಇದರ ಸಹಯೋಗದೊಂದಿಗೆ ದಿನಾಂಕ 06 ಜುಲೈ 2025ರಂದು ಯಕ್ಷಗಾನ ಪ್ರಸಂಗ ರಚನೆ ಕಮ್ಮಟವು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಜರುಗಿತು. ಹಿರಿಯ ಯಕ್ಷಕವಿ ಕೀರ್ತಿಶೇಷ ಶಿರೂರು ಪಣಿಯಪ್ಪಯ್ಯರವರ 108ನೇ ಜನ್ಮದಿನದ ಪ್ರಯುಕ್ತ ಇಡೀ ಕಾರ್ಯಕ್ರಮವನ್ನು ಅವರಿಗೆ ಸಮರ್ಪಿಸಲಾಯಿತು. ಈ ಕಾರ್ಯಕ್ರಮವನ್ನು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ, ಆಶೀರ್ವದಿಸಿ, “ಅಧ್ಯಯನ ಯೋಗ್ಯ ಕಾರ್ಯಕ್ರಮಗಳ ಜೊತೆ ಪ್ರಸಂಗ ರಚನೆ ಕಮ್ಮಟವು ಅಪೂರ್ವವೆನಿಸಿದೆ, ಯಶಸ್ವಿಯಾಗಲಿ” ಎಂದರು. ಗಡಿನಾಡು ಕಾಸರಗೋಡಿನ ಹಿರಿಯ ಯಕ್ಷಗಾನ ಕವಿ ಶೇಡಿಗುಮ್ಮೆ ವಾಸುದೇವ ಭಟ್ ಇವರಿಗೆ ಫಣಿಗಿರಿ ಪ್ರತಿಷ್ಠಾನ ಶಿರೂರು ಬೈಂದೂರು ಇವರು ‘ಫಣಿಗಿರಿ ಪ್ರಶಸ್ತಿ- 2025’ ನೀಡಿ ಗೌರವಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಉಮೇಶ ಶಿರೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಳೆಯ ಯಕ್ಷಗಾನ ಧ್ವನಿಸುರುಳಿಗಳ ಸಂರಕ್ಷಕರಾದ ಶ್ರೀ ಎಂ.ಎಲ್. ಭಟ್ ಮರವಂತೆ ಇವರನ್ನು ಸಿರಿಬಾಗಿಲು…

Read More

ಮೈಸೂರು : ನಟನ ರಂಗಶಾಲೆಯ 2024-25ನೇ ಸಾಲಿನ ರಂಗ ಭೂಮಿ ಡಿಪ್ಲೋಮಾ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ಸುಬ್ಬಣ್ಣ ಸ್ಮರಣೆ ಪ್ರಯುಕ್ತ ಬಿ. ಚಂದ್ರೇ ಗೌಡ ಅವರ ಅಂಕಣ ‘ಕಟ್ಟೆ ಪುರಾಣ’ ನಾಟಕ ಪ್ರದರ್ಶನವನ್ನು ದಿನಾಂಕ 13 ಜುಲೈ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕಕ್ಕೆ ದಿಶಾ ರಮೇಶ್ ಬೆಳಕು, ಮೇಘ ಸಮೀರ ವಿನ್ಯಾಸ ಮತ್ತು ಮಂಡ್ಯ ರಮೇಶ್ ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.

Read More

ಮಂಗಳೂರು : ಜನಪದ ಪಾಡ್ದನ ಕಲಾವಿದ ಬೊಳ್ಳಾಜೆ ಬಾಬಣ್ಣ (71 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಿನ್ನಕ 11 ಜುಲೈ 2025ರಂದು ದಿವಂಗತರಾದರು. ತುಳುನಾಡಿನ ಹಲವಾರು ದೈವಗಳ ಪಾಡ್ದಾನ ಬಲ್ಲವರಾಗಿದ್ದು, ಆಕಾಶವಾಣಿ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಡ್ದನವನ್ನು ಹಾಡುತ್ತಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಡೈಜೀವರ್ಲ್ಡ್ ವಾಹಿನಿಯಲ್ಲಿ ಇವರ ಪಾಡ್ದನ ದಾಖಲೀಕರಣದೊಂದಿಗೆ ಪ್ರದರ್ಶನಗೊಂಡಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸನ್ಮಾನಿತರಾಗಿದ್ದು, ಹಲವಾರು ಸನ್ಮಾನ ಪುರಸ್ಕಾರಗಳನ್ನು ಪಡೆದಿದ್ದರು. ಇತ್ತೀಚೆಗೆ ಕಾಂತಾರ ಚಲನಚಿತ್ರ ತಂಡಕ್ಕೆ ಪಾಡ್ದಾನವನ್ನು ಹಾಡಿದ್ದರು. ಆದಿ ದ್ರಾವಿಡ ಸಮುದಾಯದ ಹಿರಿಯ ನೇತಾರರಾಗಿದ್ದು, ಸಮುದಾಯದ ಕುಲ ಸತ್ಯಗಳಾದ ಸತ್ಯ ಸಾರಮಣಿ ದೈವಗಳ ಪಾಡ್ದಾನದ ಆಕರವಾಗಿ ಸಮುದಾಯಕ್ಕೆ ಮಾರ್ಗದರ್ಶಕರಾಗಿದ್ದರು. ಒಂದು ಗಂಡು,ಮೂರು ಹೆಣ್ಣು ಮಕ್ಕಳು, ಶಿಷ್ಯಂದಿರು ಮತ್ತು ಅಪಾರ ಭಂದುವರ್ಗವನ್ನು ಅಗಲಿದ್ದಾರೆ.

Read More