Subscribe to Updates
Get the latest creative news from FooBar about art, design and business.
Author: roovari
ರಾಮನಗರ : ಪ್ರಸಿದ್ಧ ಕನ್ನಡ ಬರಹಗಾರ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಗೌರವಾರ್ಥವಾಗಿ, ತೇಜಸ್ವಿಯವರ ಕೃತಿಯ ವಿಷಯಗಳು ಮತ್ತು ಚೈತನ್ಯವನ್ನು ಪ್ರತಿಬಿಂಬಿಸುವ ತಮ್ಮ ಛಾಯಾಚಿತ್ರಗಳು ಮತ್ತು ವರ್ಣಚಿತ್ರಗಳನ್ನು ಸಲ್ಲಿಸಲು ನಾವು ಕಲಾವಿದರನ್ನು ಆಹ್ವಾನಿಸುತ್ತಿದ್ದೇವೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಜೀವನ, ಕೆಲಸ, ಕಾದಂಬರಿ ಪುಸ್ತಕ ಜಗತ್ತು, ಅವರ ಕನಸುಗಳು, ತೇಜಸ್ವಿಯವರ ವ್ಯಂಗ್ಯ ಚಿತ್ರಗಳು ಇವುಗಳನ್ನು ಸಂಬಂಧಿಸಿದ ವಿಷಯಗಳನ್ನು ಆಧರಿಸಿರಬೇಕು. ಲಿಖಿತ್ ಹೊನ್ನಾಪುರ ಸುಗ್ಗನಹಳ್ಳಿ ಅಂಚೆ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲೂಕು ರಾಮನಗರ ಜಿಲ್ಲೆ 561101 ಈ ಅಂಚೆ ವಿಳಾಸಕ್ಕೆ ಕಳುಹಿಸಲು ಕೋರುತ್ತೇವೆ. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ : 9353062539.
ಮಂಗಳೂರು : ಕಳೆದ ನಾಲ್ಕೂವರೆ ದಶಕಗಳಿಂದ ತುಳು ಕೂಟದ ಮೂಲಕ ನೀಡಲಾಗುತ್ತಿರುವ ‘ರತ್ನವರ್ಮ ಹೆಗ್ಗಡೆ ಪ್ರಶಸ್ತಿ’ ವಿಜೇತರ ಪಟ್ಟಿಯನ್ನು ಘೋಷಿಸಲಾಗಿದೆ. ಡಾ. ವೀರೇಂದ್ರ ಹೆಗ್ಗಡೆಯವರು ಈ ಪ್ರಶಸ್ತಿಗಳನ್ನು ಪ್ರಾಯೋಜಿಸುತ್ತಾ ಬರುತಿದ್ದು, ವಿಜೇತರಿಗೆ ಪ್ರಶಸ್ತಿಯನ್ನು ದಿನಾಂಕ 14 ಎಪ್ರಿಲ್ 2025ರಂದು ‘ಬಿಸು ಪರ್ಬ’ ಆಚರಣೆಯ ಸಂದರ್ಭ ಶ್ರೀಮಾತೆ ಮಂಗಳಾದೇವಿ ಅಮ್ಮನವರ ಸಾನಿಧ್ಯದಲ್ಲಿ ಪ್ರದಾನಿಸಲಾಗುವುದು. ನಗದು ಸಹಿತ ಪ್ರಥಮ ಬಹುಮಾನವನ್ನು ಶ್ರೀ ಶಶಿರಾಜ್ ಕಾವೂರು ಇವರ ‘ಕರುಣೆದ ಕಣ್ಣ್’, ದ್ವಿತೀಯ ಬಹುಮಾನವನ್ನು ಅಕ್ಷತಾ ರಾಜ್, ಪೆರ್ಲ ಇವರ ‘ಯಜ್ಞ ಪುತ್ತೊಲಿ, ಹಾಗೂ ತೃತೀಯ ಬಹುಮಾನವನ್ನು ಗೀತಾ ನವೀನ್ ಇವರ ‘ಅಪ್ಪೆ ಮಹಾಮಾಯಿ’ ನಾಟಕ ಕೃತಿಗಳು ಪಡೆದಿರುತ್ತವೆ. ಅಲ್ಲದೇ, ಈ ಬಾರಿ ‘ಬಂಗಾರ್ ಪರ್ಬಾಚರಣೆ’ಯ ಪ್ರಯುಕ್ತ ಇನ್ನೆರೆಡು ನಗದು ರಹಿತ ಪ್ರೋತ್ಸಾಹಕ ಬಹುಮಾನ ನೀಡಲು ತುಳುಕೂಟ ನಿರ್ಧರಿಸಿದ್ದು, ಪ್ರಕಾಶ್ ಬಂಗೇರ ಬಗಂಬಿಲ ಇವರ ‘ಕರಿಮಣದ ಪಿರವು’ ಮತ್ತು ವಿಲಾಸ್ ಕುಮಾರ್ ನಿಟ್ಟೆ ಇವರ ‘ಗಗ್ಗರ’ ನಾಟಕ ಕೃತಿಗಳಿಗೆ ನೀಡಿರುತ್ತಾರೆ. ಎಲ್ಲಾ ಅಪ್ರಕಟಿತ ಹಸ್ತಪ್ರತಿ ನಾಟಕ ಕೃತಿಕಾರರಿಗೆ…
ಬೆಂಗಳೂರು : ಪ್ರವರ ಥಿಯೇಟರ್ ಬೆಂಗಳೂರು ಇದರ ಸಹಕಾರದೊಂದಿಗೆ ಅಂತರಂಗ ಬಹಿರಂಗ ತಂಡ ಪ್ರಸ್ತುತ ಪಡಿಸುವ ‘Mr. ರಾವ್ & ಅಸೋಸಿಯೇಟ್ಸ್’ ನಾಟಕ ಪ್ರದರ್ಶನವನ್ನು ದಿನಾಂಕ 15 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಮುಚ್ಛಯದಲ್ಲಿ ಆಯೋಜಿಲಾಗಿದೆ. ಈ ನಾಟಕವನ್ನು ಭೀಷ್ಮ ರಾಮಯ್ಯ ರಚಿಸಿದ್ದು, ಬಾಷ್ ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು. ಈ ನಾಟಕವು ತಂದೆ ತಾಯಿಗಳು ಅಂದ್ರೆ ಮಕ್ಕಳಿಗೆ ಜವಾಬ್ದಾರಿ ಆಗಬೇಕೆ ವಿನಹ, ಹಣ ಆಸ್ತಿ ಕೊಡೊ ತಿಜೋರಿಗಳಲ್ಲ ಎಂಬ ಪ್ರಸ್ತುತ ಸಮಾಜದ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಜಗತ್ತು ಮನುಷ್ಯನಲ್ಲಿ ಸೂಕ್ಷ್ಮ ಸಂವೇದನೆಯನ್ನು ನಶಿವುವಂತೆ ಮಾಡಿದೆ. ಮನುಷ್ಯ ಮನುಷ್ಯನ ನಡುವೆ ಸಂಬಂಧಗಳನ್ನು ಅಳಿಸುತ್ತಿವೆ. ಗಟ್ಟಿಯಾಗಿ ಇರಬೇಕಾದ ರಕ್ತ ಸಂಬಂಧಗಳನ್ನು ಜೊಳ್ಳು ಮಾಡುತ್ತಿವೆ. ಒಂಟಿಯಾಗಿ ಬದುಕುತ್ತಿದ್ದ ಮನುಷ್ಯನು ಸಂಬಂಧಗಳನ್ನು ಕಟ್ಟಿಕೊಂಡಿದ್ದೆ ಮುಪ್ಪಿಗೆ ಆತುಕೊಳ್ಳಲು. ಈ ಸಂಬಂಧಗಳನ್ನೇ ದಿಕ್ಕರಿಸಿ ಈ ಆತುವಿಕೆಯನ್ನು ಕತ್ತರಿಸಿ ಹೋಗುವಾಗ…
ನಾಟ್ಯ ಎಂದೊಡನೆ ಮೊದಲು ಕಣ್ಣೆದುರಿಗೆ ಬಂದು ನಿಲ್ಲುವುದು ನಾಟ್ಯಾಧಿಪತಿ ಶಂಕರನ ಅಪೂರ್ವ ಮೆರುಗಿನ ನಾಟ್ಯ ವೈವಿಧ್ಯ ತಾಂಡವಗಳು. ನೋಡಿದಷ್ಟೂ ಪುಳಕಿಸುವ ಹೊಸಬಗೆ, ಕಂಡಷ್ಟೂ ಸಾಕ್ಷಾತ್ಕರಿಸುವ ವಿನೂತನ ಪರಿಕಲ್ಪನೆ ಅದು. ಶಿವನ ಕಥೆ ಅನಂತ ನೆಲೆಗಳಲ್ಲಿ ಅನಾವರಣಗೊಳ್ಳುವ ಕುತೂಹಲ ಜನ್ಯ ಕಥಾ ಸರಿತ್ಸಾಗರ. ಇಂಥದೊಂದು ಸ್ವಾರಸ್ಯಕರ ಕಥಾನಕದ ನೃತ್ಯರೂಪಕ ‘ನಾಟ್ಯ ಶಂಕರ’ ಇತ್ತೀಚೆಗೆ ಶಿವರಾತ್ರಿಯ ದಿನಗಳಲ್ಲಿ ‘ನಯನ’ ರಂಗಮಂದಿರದಲ್ಲಿ ಕಲಾರಸಿಕರಿಗೆ ನೀಡಿದ ರಸಾನುಭವ ನೆನಪಿನಲ್ಲಿ ಉಳಿಯುವಂಥದ್ದು. ಖ್ಯಾತ ಹಿರಿಯ ನೃತ್ಯಾಚಾರ್ಯ ಕೇಶವಮೂರ್ತಿ ನೇತೃತ್ವದ ‘ಕೇಶವ ನೃತ್ಯಶಾಲೆ’- ಕನ್ನಡ ನೃತ್ಯರೂಪಕಗಳ ಅಸ್ಮಿತೆಯಿಂದ ನೃತ್ಯಕ್ಷೇತ್ರದಲ್ಲಿ ವಿಶಿಷ್ಟತೆ ಪಡೆದಿರುವುದು ಸರ್ವವಿದಿತ. ಆದಿ ಪಂಪನಿಂದ ಪ್ರಾರಂಭವಾಗಿ ಹಲವಾರು ಕನ್ನಡ ನೃತ್ಯರೂಪಕಗಳ ನಿರ್ಮಾಣ-ಪ್ರದರ್ಶನ-ಪ್ರಯೋಗಗಳು ಅವರ ಕನ್ನಡ ಪ್ರೀತಿಯ ದ್ಯೋತಕ. ಅನಂತರ ಅವರ ಪುತ್ರ ನೃತ್ಯಾಚಾರ್ಯ ಡಾ. ಬಿ.ಕೆ. ಶ್ಯಾಂ ಪ್ರಕಾಶ್ ತಂದೆಯ ಪರಂಪರೆಯನ್ನು ಮುಂದುವರೆಸುತ್ತ ಮೂರು ದಶಕಗಳ ಹಿಂದೆಯೇ ‘ಶಿವಶಕ್ತಿ’ ಎಂಬ ನೃತ್ಯರೂಪಕವನ್ನು ಸಾಹಿತ್ಯ ರಚನೆಯೊಂದಿಗೆ ಮುಖ್ಯ ಪಾತ್ರವಹಿಸಿ ಪ್ರದರ್ಶಿಸಿದ್ದರು. ಅವರ ಮೂರನೆಯ ತಲೆಮಾರಿನವರಾದ ನೃತ್ಯಕಲಾವಿದ-ಗುರು ಕಲಾಯೋಗಿ ಎಸ್. ರಘುನಂದನ್…
ಬೆಂಗಳೂರು : ಕರ್ನಾಟಕ ಸರ್ಕಾರದಿಂದ ನೋಂದಾಯಿತ ಡಾ. ಪು.ತಿ.ನ. ಟ್ರಸ್ಟ್ (ರಿ.) ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ ಇದರ ಸಹಯೋಗದೊಂದಿಗೆ ಆಯೋಜಿಸುವ ಪು.ತಿ.ನ. ಇವರ 120ನೇ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 17 ಮಾರ್ಚ್ 2025ರ ಸೋಮವಾರದಂದು ಸಂಜೆ ಘಂಟೆ 5:00ರಿಂದ ಬೆಂಗಳೂರಿನ ಮಲ್ಲೇಶ್ವರಂ 14ನೇ ಅಡ್ಡರಸ್ತೆ ಯಲ್ಲಿರುವ ಸೇವಾಸದನದಲ್ಲಿ ನಡೆಯಲಿದೆ. ಪು. ತಿ. ನ. ಟ್ರಸ್ಟ್ (ರಿ.) ಮಂಡ್ಯ ಇದರ ಅಧ್ಯಕ್ಷರಾದ ಪ್ರೊ. ಎಂ. ಕೃಷ್ಣಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಸುವಿಖ್ಯಾತ ಲೇಖಕರು, ಪತ್ರಕರ್ತರು ಹಾಗೂ ಪ್ರಾಧ್ಯಾಪಕರಾದ ಶ್ರೀ ಎನ್. ಎಸ್. ಶ್ರೀಧರಮೂರ್ತಿ, ಶ್ರೀ ವೈ.ಕೆ.ಮುದ್ದುಕೃಷ್ಣ, ಬೆಂಗಳೂರು, ಶ್ರೀ ಮಂಡ್ಯ ರಮೇಶ್ ಬೆಂಗಳೂರು, ಶ್ರೀ ಬಿ. ಎನ್. ಸುರೇಶ್ ಬೆಂಗಳೂರು, ಶ್ರೀ ಶ್ರೀನಾಥ ಮೇಲುಕೋಟೆ ಮಂಡ್ಯ, ಡಾ. ಸುಮಾರಾಣಿ ಮಂಡ್ಯ, ಶ್ರೀ ಕೆ. ಜೆ. ನಾರಾಯಣ ಮೈಸೂರು, ಶ್ರೀ ಬಿ. ಚಂದ್ರೇಗೌಡ, ಶಿವಮೊಗ್ಗ, ಶ್ರೀ ಕುಮಾರ ಕೊಪ್ಪ. ಮಂಡ್ಯ, ಹಾಗೂ ವಿಶೇಷ…
ತೆಕ್ಕಟ್ಟೆ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ, ಇದರ ಸಿನ್ಸ್ 1999 ಶ್ವೇತಯಾನದ ಅಂಗವಾಗಿ ಧಮನಿ ಟ್ರಸ್ಟ್ (ರಿ.), ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸುವ ರಜಾ ರಂಗು -2025 ‘ಚಂದಕ್ಕಿ ಬಾರೆ ಕತೆ ಹೇಳೆ’ ಮಕ್ಕಳ ಬೇಸಿಗೆ ಶಿಬಿರವು ದಿನಾಂಕ 11 ಏಪ್ರಿಲ್ 2025 ರಿಂದ 04 ಮೇ 2025ರ ವರೆಗೆ ತೆಕ್ಕಟ್ಟೆಯ ಮಾದರಿ ಶಿಶುಮಂದಿ ನಿಸರ್ಗದಲ್ಲಿ ನಡೆಯಲಿದೆ ಖ್ಯಾತ ರಂಗಕರ್ಮಿ ಡಾ. ಶ್ರೀ ಪಾದ್ ಭಟ್ ಇವರ ನಿರ್ದೇಶನದಲ್ಲಿ 8 ರಿಂದ 16 ವರ್ಷದ ಒಳಗಿನ ಮಕ್ಕಳಿಗಾಗಿ ನಡೆಯಲಿರುವ ಈ ಶಿಬಿರದಲ್ಲಿ ಕಥಾಭಿನಯ, ಕಾವ್ಯಾಭಿನಯ, ನೃತ್ಯರೂಪಕ, ನಾಟಕಗಳು, ಚಿತ್ರಬರೆ, ಕವನ ರಚನೆ, ಆಕಾಶ ವೀಕ್ಷಣೆ, ಮಕ್ಕಳ ಅದಾಲತ್-ಸಂವಾದ (ಪಾಲಕರೊಂದಿಗೆ, ವೈದ್ಯರೊಂದಿಗೆ), ಪರಿಸರ ಅಧ್ಯಯನ, ಮಕ್ಕಳ ಸಂತೆ ಮುಂತಾದವು ನಡೆಯಲಿದೆ.
ಉಡುಪಿ : ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಜಾನಪದ ವಿದ್ವಾಂಸ ‘ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 15 ಮಾರ್ಚ್ 2025ರಂದು ಉಡುಪಿ ಚಿಟ್ಟಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್ ಇದರ ಲಕ್ಷ್ಮೀ ಸಭಾಭವನದಲ್ಲಿ ನಡೆಯಲಿದೆ. ಈ ಸಾಲಿನ ‘ಜಾನಪದ ವಿದ್ವಾಂಸ ಪ್ರಶಸ್ತಿ’ಯನ್ನು ಜಾನಪದ ಸಂಶೋಧಕ ಡಾ. ತುಕಾರಾಂ ಪೂಜಾರಿ ಇವರಿಗೆ ಹಾಗೂ ‘ಜಾನಪದ ಕಲಾವಿದ ಪ್ರಶಸ್ತಿ’ಯನ್ನು ದೈವಾರಾಧನಾ ಸೇವಾ ವರ್ಗದ ಅಲೆವೂರು ಗೋಪು ಮಡಿವಾಳ ಅವರಿಗೆ ಪ್ರದಾನ ಮಾಡಲಾಗುವುದು. ಸಹಕಾರಿ ಧುರೀಣ ಜಯಕರ್ ಶೆಟ್ಟಿ ಇಂದ್ರಾಳಿ ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು, ಉದ್ಯಮಿ ರಂಜನ್ ಕೆ. ಹಾಗೂ ಪ್ರಶಸ್ತಿಯ ರೂವಾರಿ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿರುವರು. ರಜತ ವರ್ಷದ ಸಡಗರದಲ್ಲಿರುವ ಉಡುಪಿ ಯುವವಾಹಿನಿ ಸಂಘಟನೆಯು ಸಾಹಿತಿ ಮುದ್ದು ಮೂಡುಬೆಳ್ಳೆ ಇವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ನಾನಾ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರ…
ದೆಹಲಿ : ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಫೆಸ್ಟಿವಲ್ ಆಫ್ ಲೆಟರ್ಸ್’ ಸಾಹಿತ್ಯೋತ್ಸವ ಕಾರ್ಯಕ್ರಮ ದೆಹಲಿಯ ರವೀಂದ್ರ ಭವನದಲ್ಲಿ ಮಾರ್ಚ್ 7ರಿಂದ 12ರ ತನಕ ಆಯೋಜಿಸಿದ್ದು ದೇಶದ 50ಕ್ಕೂ ಮಿಕ್ಕಿದ ಬೇರೆ ಬೇರೆ ಭಾಷೆಗಳ ಸಾಹಿತಿಗಳನ್ನು ಆಹ್ವಾನಿಸಿತ್ತು. ಈ ಬಾರಿ ತುಳು ಭಾಷೆಯಿಂದ ಅಕ್ಷತಾ ರಾಜ್ ಪೆರ್ಲ ಹಾಗೂ ಆತ್ರಾಡಿ ಅಮೃತಾ ಶೆಟ್ಟಿಯವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಆಯ್ಕೆ ಮಾಡಿದೆ. ದಿನಾಂಕ 11 ಮಾರ್ಚ್ 2025ರಂದು ಹಿರಿಯ ಸಾಹಿತಿಗಳಾದ ಕಿರಣ್ ಕುಮಾರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಟೇಸ್ಟಿ ರೌಂಡ್ – ಉತ್ತರ ಪೂರ್ವ ಹಾಗೂ ದಕ್ಷಿಣಾದಿ ಕವಿಗೋಷ್ಠಿಯಲ್ಲಿ ಅಕ್ಷತಾ ರಾಜ್ ಪೆರ್ಲ ಅವರು ತಮ್ಮ ತುಳು ಕವಿತೆಗಳನ್ನು ತುಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ತನಕ ತುಳು ಮತ್ತು ಕನ್ನಡದಲ್ಲಿ ಒಟ್ಟು 13 ಕೃತಿಗಳನ್ನು ರಚಿಸಿದ್ದು, ಈ ಮೊದಲು ಮೈಸೂರು ದಸರಾ ಕವಿಗೋಷ್ಠಿಯಲ್ಲೂ ತುಳು ಭಾಷೆಯ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ.
ಉಡುಪಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಶ್ರೀಮತಿ ಮತ್ತು ಶ್ರೀ ಗೋಪಾಲಕೃಷ್ಣ ಭಟ್ ಇವರ ಉಡುಪಿಯ “ಈಶಾವಾಸ್ಯ” ಮನೆಯಲ್ಲಿ ಉಡುಪಿ ಶ್ರೀ ಕೃಷ್ಣ ಮಠದ ಭಾವಿ ಪರ್ಯಾಯದ ಶಿರೂರು ಮಠಾಧೀಶರರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದರ ಭೀಕ್ಷಾಸೇವಾ ಅಂಗವಾಗಿ ‘ಭೀಷ್ಮಾರ್ಜುನ’ ( ಕರ್ಮಬಂಧ ) ಯಕ್ಷಗಾನ ತಾಳಮದ್ದಳೆ ದಿನಾಂಕ 12 ಮಾರ್ಚ್ 2025 ರಂದು ನಡೆಯಿತು . ಹಿಮ್ಮೇಳದಲ್ಲಿ ನಾರಾಯಣ ಶಬರಾಯ , ಪದ್ಯಾಣ ಜಯರಾಮ್ ಭಟ್ , ಮುರಳೀಧರ ಕಲ್ಲೂರಾಯ ಕುಂಜೂರು ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣನಾಗಿ ಕಿಶೋರಿದುಗ್ಗಪ್ಪ ನಡುಗಲ್ಲು, ಭೀಷ್ಮನಾಗಿ ಶುಭಾ ಜೆ. ಸಿ. ಅಡಿಗ, ಅರ್ಜುನನಾಗಿ ಹರಿಣಾಕ್ಷಿ ಜೆ. ಶೆಟ್ಟಿ ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಶ್ರೀ ಮತಿ ಶಾಂತಲಾ ಮತ್ತು ಶ್ರೀಗೋಪಾಲಕೃಷ್ಣ ಭಟ್ ಕಲಾವಿದರನ್ನು ಗೌರವಿಸಿ ವಂದಿಸಿದರು. ಶ್ರಿಮತಿ ರಾಜಶ್ರೀ ಮತ್ತು ಶ್ರೀ ನಾರಾಯಣ ಶಬರಾಯ ಸಹಕರಿಸಿದರು.
ಪುತ್ತೂರು : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ (ರಿ.) ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಶಾಸ್ತ್ರೀಯ ನೃತ್ಯ ಕಲಾವಿದರ ಸಂಘಟನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಇವರ ಸಹಭಾಗಿತ್ವದಲ್ಲಿ ಆಯೋಜಿಸುವ ‘ಭರತಮುನಿ ಜಯಂತಿ’ ಕಾರ್ಯಕ್ರಮವು ದಿನಾಂಕ 16 ಮಾರ್ಚ್ 2025ರ ಆದಿತ್ಯವಾರದಂದು ಪುತ್ತೂರು ನೆಲ್ಲಿಕಟ್ಟೆಯ ಶ್ರೀ ರಾಮಕೃಷ್ಣ ಸೇವಾ ಸಮಾಜ (ರಿ.) ಇಲ್ಲಿ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇಲ್ಲಿನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಈಶ್ವರ ಭಟ್ ಪಂಚಿಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಶಾಂತಲಾ ಪ್ರಶಸ್ತಿ ಪುರಸ್ಕೃತರು ನಾಟ್ಯಗುರು ಉಳ್ಳಾಲ ಮೋಹನ್ ಕುಮಾರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ದೀ ಶಕ್ತಿ ಮಹಿಳಾ ಯಕ್ಷಬಳಗ ಪುತ್ತೂರು ಇದರ ಸಂಚಾಲಕರಾದ ಶ್ರೀಮತಿ ಪದ್ಮ ಕೆ. ಆರ್. ಆಚಾರ್ಯ ಭಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಯುಗಳ ನೃತ್ಯ ಕಾರ್ಯಕ್ರಮ ನಡೆಯಲಿದೆ.