Author: roovari

ನಾಪೋಕ್ಲು : ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 04 ಡಿಸೆಂಬರ್ 2024ರಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 5ರಿಂದ 7ನೇ ತರಗತಿ ವಿಭಾಗದಲ್ಲಿ ಕನ್ನಡ ಕಂಠಪಾಠ ವಿಭಾಗದಲ್ಲಿ ಪೆರಾಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರತೀಕ್, ಮಕ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಕ್ಷಾ ಹಾಗೂ ಎಕ್ಸೆಲ್ ಶಾಲೆಯ ಎಂ.ಲಕ್ಷ್ಮಣ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ಬೆಟ್ಟಗೇರಿಯ ಉದಯ ಆಂಗ್ಲ ಮಾಧ್ಯಮ ಶಾಲೆಯ ಬಿ. ನಿಹಾರಿಕಾ ಪ್ರಥಮ, ಪೆರಾಜೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸ್ನೇಹ ದ್ವಿತೀಯ, ಮಡಿಕೇರಿಯ ಸಂತ ಮೈಕಲ್ಸ್ ಶಾಲೆಯ ಅಶೋಕ್ ಜೋಶ್ವ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಹಿಂದಿ ಕಂಠಪಾಠದಲ್ಲಿ ಚೇರಂಬಾಣೆಯ ಅರುಣ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ, ಬೇತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ.ಆರ್. ನವೀನ್, ಸಿದ್ದಾಪುರ ಸಂತ ಅನ್ನಮ್ಮ ಶಾಲೆಯ ಟಿ.ಆರ್. ಅಭಿನವ…

Read More

ಮೈಸೂರು : ರಂಗಬಂಡಿ ಮಳವಳ್ಳಿ (ರಿ.) ವತಿಯಿಂದ ಸಂಸ್ಕೃತಿ (ರಿ.) ಸಹಕಾರದೊಂದಿಗೆ ಅಯೋಜಿಸುವ ಕೆರಗೋಡು ಪ್ರಸನ್ನ ಕುಮಾರ್ ರಚನೆ ಮತ್ತು ಮಧು ಮಳವಳ್ಳಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ವನಿತಾ ರಾಜೇಶ್ ಪ್ರಸ್ತುತ ಪಡಿಸುವ ಏಕವ್ಯಕ್ತಿ ಪ್ರಯೋಗದ ‘ಮಧುರ ಮಂಡೋದರಿ’ ನಾಟಕ ಪ್ರದರ್ಶನವನ್ನು ದಿನಾಂಕ 15 ಡಿಸೆಂಬರ್ 2024ರಂದು ಮೈಸೂರಿನ ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ತಂಡದ ಬಗ್ಗೆ : ರಂಗಬಂಡಿ ಮಳವಳ್ಳಿ (ರಿ.) ಆಸಕ್ತರ ಗುಂಪುಗಳು ಕೇಂದೀಕೃತಗೊಂಡು ಹೊಸತನವನ್ನು ಕಾಣುವ, ಕನಸು ಕಂಗಳ ಹೊಸ್ತಿಲನ್ನು ಮೆಟ್ಟುವ ಸುಸಂದರ್ಭಕ್ಕಾಗಿ ರಂಗಬಂಡಿ ಮಳವಳ್ಳಿ ತಂಡ ಸಜ್ಜಾಗುತ್ತಿದೆ. ಕೇವಲ ರಂಗಾಸಕ್ತರಿಗೆ ನೋಟವನ್ನಷ್ಟೇ ಉಣಬಡಿಸುವುದಲ್ಲದೇ ರಂಗಾಭ್ಯಾಸಿಗಳಿಗೆ ಅಧ್ಯಯನಶೀಲತೆ, ರಂಗ ಪ್ರಯೋಗಗಳ ವಿಭಿನ್ನತೆ, ಭಾಷಾ ಪ್ರೇಮದ ಹೊಳಹು, ಆಂಗಿಕ ಚಲನೆಯ ಸರಿಯಾದ ಮಾರ್ಗದರ್ಶನದ ಹೆಗ್ಗುರಿಯನ್ನು ಹೊಂದಿದೆ. ಬದುಕಿಗೆ ಪೂರಕವಾದ ರಂಗಾಸಕ್ತಿಯನ್ನು ಪೂರೈಸುವ ನಿಟ್ಟಿನಲ್ಲಿ ಪ್ರಗತಿಯಲ್ಲಿ ತೊಡಗಿಕೊಳ್ಳುವ ನಿರೀಕ್ಷೆಯನ್ನು ಮುಂದಿಟ್ಟುಕೊಂಡಿದೆ. ಯಾವುದೇ ಸತ್ಸಂಕಲ್ಪಕ್ಕೆ ಸಾಮಾಜಿಕ ಕಳಕಳಿಯಿರುವ ಸಹೃದಯಿಗಳ ಸಹಕಾರ ತೀರ ಅತ್ಯಗತ್ಯವೆನ್ನುವುದು ಸರ್ವವಿಧಿತ ಈಗಾಗಲೇ ರಂಗಬಂಡಿ ಮಳವಳ್ಳಿ…

Read More

ಧಾರವಾಡ : ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಹಾವೇರಿ ಮತ್ತು ಮನೋಹರ ಗ್ರಂಥ ಮಾಲಾ ಧಾರವಾಡ ಇವರ ವತಿಯಿಂದ ಕನ್ನಡ ಕಾದಂಬರಿ ಪಿತಾಮಹ ಗಳಗನಾಥರ ಎಲ್ಲ ಕಾದಂಬರಿಗಳ ಹಾಗೆಯೇ ಅವರ ಜೀವನವನ್ನು ಕುರಿತು ಡಾ. ಕೃಷ್ಣಮೂರ್ತಿ ಕಿತ್ತೂರ ಇವರು ಸಂಶೋಧಿಸಿ ಬರೆದ ‘ಗಳಗನಾಥರು ಮತ್ತು ಅವರ ಕಾದಂಬರಿಗಳು’ ಎಂಬ ಕೃತಿಯ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 14 ಡಿಸೆಂಬರ್ 2024ರಂದು ಬೆಳಿಗ್ಗೆ 10-30 ಗಂಟೆಗೆ ಧಾರವಾಡದ ರಂಗಾಯಣ ಆವರಣದಲ್ಲಿಯ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದೆ. ಖ್ಯಾತ ಕಾದಂಬರಿಕಾರ ಪ್ರೊ. ರಾಘವೇಂದ್ರ ಪಾಟೀಲರು ಪುಸ್ತಕ ಬಿಡುಗಡೆ ಮಾಡಲಿದ್ದು, ಸಾಹಿತಿ ಪ್ರೊ. ಹರ್ಷ ಡಂಬಳ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾವೇರಿಯ ಶ್ರೀ ಗಳಗನಾಥ ಮತ್ತು ನಾ ಶ್ರೀ ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ದುಷ್ಯಂತ ನಾಡಗೌಡರು ವಹಿಸಲಿದ್ದಾರೆ. ಬಿಡುಗಡೆ ಸಮಾರಂಭದಲ್ಲಿ ಈ ಗ್ರಂಥದ ಮುಖ್ಯಪ್ರೇರಣೆಯಾದ ಶ್ರೀ ಬಿ.ವಿ. ಕುಲಕರ್ಣಿ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಂತೆಯೇ ಗಳಗನಾಥ ಕುಟುಂಬದ…

Read More

ಬೆಂಗಳೂರು : ನಾಟಕ ಬೆಂಗಳೂರು 25 ರಂಗಭೂಮಿ ಸಂಭ್ರಮದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಟಿ.ಎನ್. ಸೀತಾರಾಮ್ ಇವರ ರಚನೆಯ ಋತ್ವಿಕ್ ಸಿಂಹ ಇದರ ನಿರ್ದೇಶನದಲ್ಲಿ ವೇದಿಕೆ ಫೌಂಡೇಷನ್ ಅಭಿನಯಿಸುವ ‘ಆಸ್ಫೋಟ’ ನಾಟಕ ಪ್ರದರ್ಶನವನ್ನು ದಿನಾಂಕ 16 ಡಿಸೆಂಬರ್ 2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.

Read More

ಕುಂದಾಪುರ : ಜೆ.ಸಿ.ಐ. ಕುಂದಾಪುರ ಇದರ ಸುವರ್ಣ ಸಂಭ್ರಮ ಪ್ರಯುಕ್ತ ‘ಸುವರ್ಣ ಜೇಸೀಸ್ ನಾಟಕೋತ್ಸವ’ವನ್ನು ದಿನಾಂಕ 22 ಡಿಸೆಂಬರ್ 2024ರಿಂದ 26 ಡಿಸೆಂಬರ್ 2024ರವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಕುಂದಾಪುರದ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 22 ಡಿಸೆಂಬರ್ 2024ರಂದು ಶಶಿರಾಜ್ ಕಾವೂರು ಇವರ ರಚನೆ ಮತ್ತು ನಿರ್ದೇಶನದಲ್ಲಿ ರಂಗ ಸಂಗಾತಿ ತಂಡದವರು ‘ದಟ್ಸ್ ಆಲ್ ಯುವರ್ ಆನರ್’, ದಿನಾಂಕ 23 ಡಿಸೆಂಬರ್ 2024ರಂದು ಶಶಿರಾಜ್ ಕಾವೂರು ಇವರ ರಚನೆ ಹಾಗೂ ಹಾರಾಡಿಯ ಬಿ.ಎಸ್. ರಾಮ್ ಶೆಟ್ಟಿ ಇವರ ನಿರ್ದೇಶನದಲ್ಲಿ ಹಾರಾಡಿಯ ಭೂಮಿಕಾ (ರಿ.) ತಂಡದವರು ‘ಬರ್ಬರಿಕ’, ದಿನಾಂಕ 24 ಡಿಸೆಂಬರ್ 2024ರಂದು ಭವಭೂತಿ ರಚನೆ ಹಾಗೂ ಅಕ್ಷರ ಕೆ. ವಿ. ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರು ‘ಮಾಲತೀ ಮಾಧವ’, ದಿನಾಂಕ 25 ಡಿಸೆಂಬರ್ 2024ರಂದು ವಿದ್ಯಾನಿಧಿ ವನಾರಸೆ ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರು ‘ಅಂಕದ ಪರದೆ’, ದಿನಾಂಕ 26 ಡಿಸೆಂಬರ್ 2024ರಂದು ಮಂಜು ಕೊಡಗು…

Read More

ಬದಿಯಡ್ಕ (ಕಾಸರಗೋಡು): ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರ ವಿಶೇಷ ಭರತನಾಟ್ಯ ಪ್ರಸ್ತುತಿಯು ಸಂಗೀತ ಸಂಸ್ಥೆಯಾದ ‘ನಾರಾಯಣೀಯಂ’ನ ವೀಣಾವಾದಿನಿ ಸಂಗೀತ ವಿದ್ಯಾಪೀಠದ ಇಪ್ಪತ್ತೈದನೇ ವರ್ಷಾಚರಣೆಯ ಅಂಗವಾಗಿ ದಿನಾಂಕ 7 ಡಿಸೆಂಬರ್ 2024ರ ಶನಿವಾರದಂದು ತುಂಬಿದ ಸಭಾಗೃಹದಲ್ಲಿ ಪ್ರದರ್ಶಿಸಲ್ಪಟ್ಟಿತು. ಮೋಹನಕಲ್ಯಾಣಿ ರಾಗದ ಆದಿತಾಳದಲ್ಲಿರುವ ‘ಭುವನೇಶ್ವರಿಯ ನೆನೆ ಮಾನಸವೇ… ‘ ಎಂಬ ಹಾಡಿಗೆ ಅಯನಾ ಪೆರ್ಲ ಅವರು ಮನೋಜ್ಞವಾಗಿ ಅಭಿನಯಿಸಿದರು. ಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಇದಕ್ಕೆ ನೃತ್ಯಸಂಯೋಜನೆ ಮಾಡಿದ್ದಾರೆ. ಅನಂತರ ಆಂಗಿಕ ಹಾಗೂ ಅಭಿನಯಕ್ಕೆ ವಿಪುಲ ಅವಕಾಶಗಳಿರುವ ಪದವರ್ಣವನ್ನು ತನ್ನ ಪ್ರಸ್ತುತಿಗೆ ಆಯ್ದುಕೊಂಡರು. ಭೈರವಿ ರಾಗದಲ್ಲಿರುವ ಇದು ಆದಿತಾಳದಲ್ಲಿ ನಿಬದ್ಧವಾಗಿದೆ. ಇದು ಪೆರಿಯಸಾಮಿ ತೂರನ್ ಇವರ ರಚನೆಯಾಗಿದ್ದು, ಪ್ರಸಿದ್ಧ ಕಲಾವಿದೆ ಜಾನಕಿ ರಂಗರಾಜನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿದುಷಿ ಅಯನಾ ಅವರು ಉತ್ತಮವಾದ ಆಂಗಿಕ, ಅಭಿನಯ ಹಾಗೂ ಸಾಂದರ್ಭಿಕ ನಡೆಗಳಿಂದ ಆಕರ್ಷಕ ಮತ್ತು ಅರ್ಥಪೂರ್ಣ ಅಭಿನಯ ನೀಡಿದರು. ಬಳಿಕ ಯಮನ್ ರಾಗದ ಆದಿತಾಳದಲ್ಲಿರುವ ಶ್ರೀಕೃಷ್ಣನ ಕುರಿತ ‘ಕಡೆಗೋಲ ತಾರೆನ್ನ ಚಿನ್ನವೇ’…

Read More

ಮಂಗಳೂರು : ಮಂಗಳೂರಿನ ಅಕ್ಕ ಮಹಾದೇವಿ ಮಹಿಳಾ ಮಂಡಳಿ  04 ಜನವರಿ 2025ರಂದು ಆಯೋಜಿಸುವ ‘ವಚನ ಸಾಹಿತ್ಯ ಸಮ್ಮೇಳನ 2024-25’ ಇದರ ಲಾಂಛನದ  ಲೋಕಾರ್ಪಣಾ ಸಮಾರಂಭವು ದಿನಾಂಕ 04 ಡಿಸೆಂಬರ್ 2024ರ ಬುಧವಾರದಂದು ಮಂಗಳೂರಿನ ಶ್ರೀಕೃಷ್ಣ ಸಂಕೀರ್ಣಸಲ್ಲಿರುವ ಮಹಿಳಾ ಮಂಡಳಿಯ ಸ್ವಾಗತ ಸಮಿತಿಯ ಕಛೇರಿಯಾದ ಕಲ್ಕೂರ ಪ್ರತಿಷ್ಠಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಲಾಂಛನ ಬಿಡುಗಡೆಗೊಳಿಸಿದ ಮಂಗಳೂರು ತಾಲೂಕು ಮಹಿಳಾಮಂಡಲಗಳ ಒಕ್ಕೂಟದ ಅಧ್ಯಕ್ಷ್ಯೆಯಾದ  ಶ್ರೀಮತಿ ಚಂಚಲ ತೇಜೋಮಯ ಮಾತನಾಡಿ “ವಚನ ಸಾಹಿತ್ಯಗಳಿಗೆ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇದೆ. ಇಂತಹ ಸಮ್ಮೇಳನಗಳನ್ನು ಮಾಡುವುದರಿಂದ ಮುಂದಿನ ಪೀಳಿಗೆಗೆ ವಚನ ಸಾಹಿತ್ಯ ಹಾಗೂ ತತ್ವ ಸಿದ್ಧಾಂತಗಳನ್ನು ತಿಳಿಸಿಕೊಟ್ಟಂತಾಗುತ್ತದೆ. ತಾವು ಮಾಡಲು ಹೊರಟಿರುವ ಈ ಕಾರ್ಯಕ್ರಮ ಯಶಸ್ವಿಯಾಗಲಿ.” ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಊರ್ವಸ್ಟೋರ್ ಶ್ರೀಮಹಾ ಗಣಪತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಸುರೇಂದ್ರ ರಾವ್, ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಇದರ ಅಧ್ಯಕ್ಷ್ಯೆಯಾದ ಶ್ರಿಮತಿ ಸುಮಾ ಅರುಣ್ ಮಾನ್ವಿ, ಮಾಜಿ…

Read More

ವಿದ್ಯಾಗಿರಿ, ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ದಿನಾಂಕ 11 ಡಿಸೆಂಬರ್ 2024 ರಿಂದ 15 ಡಿಸೆಂಬರ್ 2024ರ ವರೆಗೆ ಆಯೋಜಿಸಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’30ನೇ ವರ್ಷದ ‘ಅಳ್ವಾಸ್ ವಿರಾಸತ್” ಕಾರ್ಯಕ್ರಮದ ಉದ್ಘಾಟನೆ ಮಂಗಳವಾರ ಸಂಜೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ “ವಿಶ್ವವನ್ನೇ ಹೃದಯದಲ್ಲಿ ತುಂಬುವ ಹಬ್ಬವೇ ‘ವಿರಾಸತ್’. ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಾರ್ಯಕ್ರಮ. ಸಾಹಿತ್ಯ ಮತ್ತು ಸಂಸ್ಕೃತಿ ಜೊತೆಯಾಗಿ ಮೇಳೈಸಿದ ಕಾರ್ಯಕ್ರಮ. ನಮ್ಮ ಸಾಂಸ್ಕೃತಿಕ ಸಂಪತ್ತು ಹೆಚ್ಚಾದಾಗ ಮನಸ್ಸು ಅರಳುತ್ತದೆ. ಎಲ್ಲರಿಗೂ ಸಂತೋಷ ನೀಡುವ ವ್ಯಕ್ತಿತ್ವವೇ ಆಳ್ವ. ಒಳ್ಳೆಯದನ್ನು ಒಪ್ಪಿಕೊಂಡು ಅಪ್ಪಿಕೊಳ್ಳಿ. ಆ ಹಾದಿಯಲ್ಲಿ ಸಮಾಜ, ದೇಶ ಬೆಳೆಯಬೇಕು. ನಾವೂ ಪ್ರಕೃತಿಯನ್ನು ಹಾಗೂ ಹೃದಯವನ್ನು ಅರಳಿಸಬೇಕು. ಆಳ್ವಾಸ್ ಕೃಷಿ ಮೇಳ ಕಂಡು ನೀವೂ ಸಣ್ಣ ಕೈತೋಟ ಮಾಡಿ. ಮಣ್ಣು, ಪರಿಸರ ಪ್ರೀತಿಸಿ. ಪಂಚೇಂದ್ರೀಯಗಳಿಗೆ…

Read More

ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ, ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ. ಕಾಲೇಜು ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಇವರ ಸಹಯೋಗದಲ್ಲಿ ದಿನಾಂಕ 06 ಡಿಸೆಂಬರ್ 2024 ರಿಂದ 08 ಡಿಸೆಂಬರ್ 2024ರವರೆಗೆ 46ನೆಯ  ವಾದಿರಾಜ ಕನಕದಾಸ ಸಂಗೀತೋತ್ಸವ ಉಡುಪಿಯ ಎಂ. ಜಿ. ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಟಿ. ಮೋಹನದಾಸ ಪೈ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಟಿ. ರಂಗ ಪೈ   ಮಾತನಾಡಿ “ಈ ಕಾರ್ಯಕ್ರಮ ಯುವ ಜನರಿಗೆ ಮಾದರಿಯಾಗಿದೆ. ಸಂಗೀತ ಆಸಕ್ತಿಯ ಬಗ್ಗೆ ಕೋರ್ಸ್ ಮಾಡಿದರೆ ಮಕ್ಕಳ ಕೌಶಲ ಅಭಿವೃದ್ಧಿ ಸಾಧ್ಯವಾಗಲಿದೆ. ಕಲೆಯನ್ನು ಆಸ್ವಾದಿಸುವವರು, ಕಲಾಕಾರರು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸಾಹಿತ್ಯ ಸಂಗೀತ ಕೂಡಿ ಭಕ್ತಿ ರಸವನ್ನು ಉತ್ಪಾದಿಸುತ್ತದೆ. ಈ ನಿಟ್ಟಿನಲ್ಲಿ ಇಂತಹ…

Read More

ಬೆಂಗಳೂರು : ರಂಗ ಶಂಕರ ಇದರ ವತಿಯಿಂದ ಕನ್ನಡ ನಾಟಕೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಚಾಮರಾಜನಗರದ ಶಾಂತಲಾ ಕಲಾವಿದರು ಇವರ ಸಹಯೋಗದೊಂದಿಗೆ ‘ರಂಗಕಲಿಕೆ ಕಾರ್ಯಾಗಾರ’ವನ್ನು ದಿನಾಂಕ 04 ಜನವರಿ 2024ರಿಂದ 08 ಜನವರಿ 2024ರವರೆಗೆ ಚಾಮರಾಜನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಭಾಂಗಣದಲ್ಲಿ ಪ್ರತಿ ದಿನ ಬೆಳಿಗ್ಗೆ 10-00ರಿಂದ ಸಂಜೆ 5-00 ಗಂಟೆ ತನಕ ಹಮ್ಮಿಕೊಳ್ಳಲಾಗಿದೆ. ದಿನಾಂಕ 04 ಜನವರಿ 2024ರಂದು ದು ಸರಸ್ವತಿ ಇವರಿಂದ ‘ಏಕವ್ಯಕ್ತಿ ಪ್ರದರ್ಶನ ಕಟ್ಟಿಕೊಳ್ಳುವ ಬಗೆ’, ದಿನಾಂಕ 05 ಜನವರಿ 2024ರಂದು ಕೆ.ವೈ. ನಾರಾಯಣ ಸ್ವಾಮಿ ಇವರಿಂದ ‘ನಾಟಕ ರಚನೆಯ ಸೂಕ್ಷ್ಮಗಳು’, ದಿನಾಂಕ 06 ಜನವರಿ 2024ರಂದು ಪಿಚ್ಚಳ್ಳಿ ಶ್ರೀನಿವಾಸ ಇವರಿಂದ ‘ರಂಗ ಸಂಗೀತ ಎಂದರೇನು..’, ದಿನಾಂಕ 07 ಜನವರಿ 2024ರಂದು ಕೃಷ್ಣಮೂರ್ತಿ ಹನೂರು ಇವರಿಂದ ‘ಜನಪದ ಸಾಹಿತ್ಯದಲ್ಲಿ ನಾಟಕೀಯತೆ’ ಮತ್ತು ದಿನಾಂಕ 08 ಜನವರಿ 2024ರಂದು ಎಂ.ಎಸ್. ಆಶಾದೇವಿ ಇವರಿಂದ ‘ಸಾಹಿತ್ಯವಾಗಿ ನಾಟಕವನ್ನು ಓದಿಕೊಳ್ಳುವುದು’ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ನಡೆಯಲಿದೆ.…

Read More