Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಎಲ್ಲ ಬಗೆಯ ಕಲೆಗಳ ಶಾಸ್ತ್ರ-ಪ್ರಯೋಗ-ಸೌಂದರ್ಯಗಳ ಆಯಾಮಗಳನ್ನು ವೈಜ್ಞಾನಿಕ ಹಾಗೂ ತಾತ್ತ್ವಿಕ ನೆಲೆಯಲ್ಲಿ ಅರ್ಥೈಸಿ-ಆಸ್ವಾದಿಸಿ-ಅನುಭವವನ್ನು ಬರಹಕ್ಕಿಳಿಸಲು ತರಬೇತಿ ನೀಡುವ ಉದ್ದೇಶವನ್ನು ಹೊತ್ತು ಹೊಸ ಬಗೆಯ ಶೈಕ್ಷಣಿಕ ಹಾಗೂ ವೃತ್ತಿಸಾಧ್ಯತೆಗಳನ್ನು ಹೊಂದಿರುವ ಪದವಿ ಕೋರ್ಸ್ ಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ದಿನಾಂಕ 13-07-2023 ರಂದು ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು. ಪ್ರೊ. ವರದೇಶ ಹಿರೇಗಂಗೆಯವರು ನೆರೆದ ಕಲಾವಿದರಿಗೆ ಹಾಗೂ ಕಲಾಸಂಘಟನೆಗಳ ಸಹೃದಯರಿಗೆ ಮಾಹಿತಿ ನೀಡಿದರು. ಸಾಹಿತ್ಯದಿಂದ ತೊಡಗಿ ಸಿನೆಮಾದವರೆಗೂ, ಯಾವುದೇ ಬಗೆಯ ಕಲೆಗಳಲ್ಲಿ ಆಸಕ್ತಿಹೊಂದಿದ ವಿದ್ಯಾರ್ಥಿಗಳಿಗೆ ಬಿ.ಎ.(ಏಸ್ಥಟಿಕ್ಸ್ ಎಂಡ್ ಪೀಸ್ ಸ್ಟಡೀಸ್), ಎಂ. ಎ.(ಇಕೊಸೊಫಿಕಲ್ ಏಸ್ಥಟಿಕ್ಸ್) ಹಾಗೂ ಎಂ.ಎ.(ಆರ್ಟ್ ಎಂಡ್ ಪೀಸ್ ಸ್ಟಡೀಸ್) ಎಂಬ ಕೋರ್ಸ್ ಗಳ ಪ್ರವೇಶ ಪಡೆದು, ತಮ್ಮ ಕಲಾಜ್ಞಾನವನ್ನು ಸಮಗ್ರವಾಗಿ ವಿಸ್ತರಿಸಿಕೊಂಡು, ಸೂಕ್ತ ಉದ್ಯೋಗವನ್ನೂ ಪಡೆಯುವ ಅವಕಾಶವಿದೆ ಎಂದು ಪ್ರೊ. ಹಿರೇಗಂಗೆಯವರು ವಿವರಿಸಿದರು. ಮಣಿಪಾಲ ಎಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ)ನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಗಾಂಧಿಯನ್ ಸೆಂಟರ್ ಫಾರ್ ಫಿಲೊಸಾಫಿಕಲ್ ಆರ್ಟ್ಸ್ ಎಂಡ್ ಸಯನ್ಸಸ್’ ಎಂಬ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ.…
ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಆಶಯದಂತೆ ಮೂಡುಬೆಳ್ಳೆಯ ಸೈಂಟ್ ಲಾರೆನ್ಸ್ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿಯನ್ನು ಶಾಲಾ ಮುಖ್ಯಸ್ಥರಾದ ವಂದನೀಯ ಪ್ರದೀಪ್ ಕಾರ್ಡೋಝಾ ಇವರು ದಿನಾಂಕ : 18-07-2023ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಗುರುಗಳಾದ ಶಾಂತಾರಾಮ ಆಚಾರ್ಯ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಪದ್ಮನಾಭ ನಾಯಕ್ ಶುಭಾಶಂನೆಗೈದು, ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ ಕಾಮತ್ ಸ್ವಾಗತಿಸಿ, ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ವಿ.ಜಿ ಶೆಟ್ಟಿ, ವಿದ್ಯಾಪ್ರಸಾದ್, ಶಿಕ್ಷಕರಾದ ಸುಧೀರ್ ನಾಯಕ್ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಜಾನ್ ಕ್ಯಾಸ್ಟಲೀನೋ ವಂದನಾರ್ಪಣೆಗೈದರು.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ, ಬೊಳುವಾರು – ಪುತ್ತೂರು ಇವರ ಸಂಯೋಜನೆಯಲ್ಲಿ ಬನ್ನೂರಿನ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಿಂಗಳ ಮೂರನೇ ಮಂಗಳವಾರ ನಡೆಯುವ ಯಕ್ಷಗಾನ ತಾಳಮದ್ದಲೆಯು ದಿನಾಂಕ : 18-07-2023ರಂದು ‘ಭೀಷ್ಮ ವಿಜಯ’ ಆಖ್ಯಾನದೊಂದಿಗೆ ನಡೆಯಿತು. ಪುಳು ಈಶ್ವರ ಭಟ್ ಈ ಕಲಾ ಸೇವೆಯನ್ನು ನಡೆಸಿಕೊಟ್ಟರು. ಹಿಮ್ಮೇಳದಲ್ಲಿ ಭಾಗವತರಾಗಿ ಎಲ್.ಎನ್. ಭಟ್ ಬಟ್ಯಮೂಲೆ, ಶ್ರೀಪತಿ ನಾಯಕ್ ಅಜೇರ್, ಆನಂದ ಸವಣೂರು, ಚೆಂಡೆ ಮದ್ದಲೆಯಲ್ಲಿ ದಂಬೆ ಈಶ್ವರ ಶಾಸ್ತ್ರೀ, ಅಮೋಘ, ಆದಿತ್ಯ ಭಾಗವಹಿಸಿದರು. ಪಾತ್ರವರ್ಗದಲ್ಲಿ ಭೀಷ್ಮನ ಪಾತ್ರದಲ್ಲಿ ಶ್ರೀ ಗುಂಡ್ಯಡ್ಕ ಈಶ್ವರ ಭಟ್ ಮತ್ತು ಶ್ರೀ ಭಾಸ್ಕರ ಬಾರ್ಯ, ಪರಶುರಾಮನಾಗಿ ಶ್ರೀ ಭಾಸ್ಕರ ಶೆಟ್ಟಿ ಸಾಲ್ಮರ, ಸಾಲ್ವನಾಗಿ ಶ್ರೀ ಕುಂಬ್ಳೆ ಶ್ರೀಧರ ರಾವ್, ಅಂಬೆಯಾಗಿ ಶ್ರೀ ಚಂದ್ರಶೇಖರ ಭಟ್ ಬಡೆಕ್ಕಿಲ ಹಾಗೂ ವೃದ್ಧ ವಿಪ್ರನಾಗಿ ಶ್ರೀ ಸಚ್ಚಿದಾನಂದ ಪ್ರಭು ಭಾಗವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕ ವೃಂದ ತಾಳಮದ್ದಲೆಯ ಮೆರುಗನ್ನು ಹೆಚ್ಚಿಸಿತು.
ಉಳ್ಳಾಲ: ಖ್ಯಾತ ನಾಟಕಕಾರ, ನಟ ಪಂಡಿತ್ ಹೌಸಿನ ಪಿಲಾರು ನಿವಾಸಿ ಗಿರೀಶ್ ಪಿಲಾರ್ (60) ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 18-07-2023 ನೇ ಮಂಗಳವಾರ ಆಸ್ಪತ್ರೆಯಲ್ಲಿ ನಿಧನರಾದರು. ‘ದೇವೆರೆ ತೀರ್ಪು’, ‘ಆರ್ ಅತ್ತ್ ಈರ್’, ‘ಕೈಕೊರ್ಪೆರ್’, ‘ಬಲಿಪಡೆ ಉಂತುಲೆ’, ‘ಎಂಕುಲತ್ ನಿಕುಲು’, ‘ಎಂಕುಲ್ ಎನ್ನಿಲೆಕ ಅತ್ತ್’, ‘ಡಿಸೆಂಬರ್-1’ ಸೇರಿದಂತೆ 20ಕ್ಕೂ ಹೆಚ್ಚು ತುಳು ನಾಟಕಗಳನ್ನು ಬರೆದು ನಿರ್ದೇಶಿಸಿದ್ದರು. ಇವರು ಬರೆದು ನಿರ್ದೇಶಿಸಿದ ‘ದೇವೆರೆ ತೀರ್ಪು’ ನಾಟಕಕ್ಕೆ ಜಿಲ್ಲಾಮಟ್ಟದ ಪ್ರಶಸ್ತಿ ಲಭಿಸಿತ್ತು. ‘ಕೈಕೊರ್ಪೆರ್’ ನಾಟಕ ಬೆಳ್ತಂಗಡಿಯ ಪುಂಜಾಲ ಕಟ್ಟೆಯಲ್ಲಿ ಯಶಸ್ವಿ ಪ್ರದರ್ಶನ ಕಂಡು ಪ್ರಶಸ್ತಿ ಪಡೆದುಕೊಂಡಿತ್ತು. ‘ಬಲಿಪಡೆ ಉಂತುಲೆ’ ನಾಟಕವು 40 ಪ್ರದರ್ಶನ ಕಂಡಿತ್ತು. ನವನೀತ್ ಶೆಟ್ಟಿ ಕದ್ರಿ ರಚಿಸಿ ಶರವು ಕಲಾವಿದರು ನಟಿಸಿದ ‘ಕಾರ್ನಿಕದ ಶನೀಶ್ವರೆ’ ನಾಟಕವು ಗಿರೀಶ್ ಪಿಲಾರ್ ನಿರ್ದೇಶನದಲ್ಲಿ ಯಶಸ್ವೀ 30 ಪ್ರದರ್ಶನಗಳನ್ನು ಕಂಡಿತ್ತು. ದಿನೇಶ್ ಕಂಕನಾಡಿ ಅವರ ನಾಟಕ ‘ಮಾಸ್ಟ್ರ್ ದಾನೆ ಮನಿಪುಜೆರ್’ ನಾಟಕದಲ್ಲಿ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದರು. ಹಲವು ನಾಟಕಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಗಮನ ಸೆಳೆದಿದ್ದ ಇವರು…
ಬೆಂಗಳೂರು: ಶ್ರೀ ದುರ್ಗಾ ನೃತ್ಯ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಮೈಸೂರು (ರಿ) ಹಾಗೂ ಡಾ|| ಜೆ.ಪಿ. ಕಲ್ಪನಾ ಮತ್ತು ಕುಟುಂಬದವರು ಅರ್ಪಿಸುವ ಗುರು ವಿದುಷಿ ಶ್ರೀಮತಿ ಶ್ರೀವಿದ್ಯಾ ಶಶಿಧರ್ ಇವರ ಶಿಷ್ಯೆಯಾದ ಶ್ರೀಮತಿ ಪ್ರಣತಿ ಎಸ್ ವಾಟಾಳ್ ಇವರ ಭರತನಾಟ್ಯ ರಂಗಪ್ರವೇಶವು ದಿನಾಂಕ 23-07-2023ರ ಭಾನುವಾರ ಸಂಜೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಶಂಕರ್ ಬಿದರಿ, ಬೆಂಗಳೂರಿನ ಸುಪ್ರಸಿದ್ಧ ಸಂಗೀತ ಮತ್ತು ನೃತ್ಯ ವಿದ್ವಾಂಸರು, ವಿಮರ್ಶಕರು ಮತ್ತು ಅಂಕಣಕಾರರಾದ ಸಂಗೀತ ಕಲಾರತ್ನ ಡಾ. ಎಂ. ಸೂರ್ಯಪ್ರಸಾದ್ ಹಾಗೂ ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ಮಂಗಳೂರಿನ ನೃತ್ಯಭಾರತಿ ಕದ್ರಿಯ ಕರ್ನಾಟಕ ಕಲಾಶ್ರೀ ಗುರು ಶ್ರೀಮತಿ ಗೀತಾ ಸರಳಾಯ, ಮಂಡ್ಯದ ಗುರುದೇವ ನೃತ್ಯ ಅಕಾಡೆಮಿಯ ಗುರು ಡಾ. ಶ್ರೀಮತಿ ಚೇತನಾ ರಾಧಾಕೃಷ್ಣ ಹಾಗೂ ಮಂಗಳೂರಿನ ಹೊಸಬೆಟ್ಟುವಿನ ಶ್ರೀ ಶಾರದಾ ನೃತ್ಯಾಲಯದ ನೃತ್ಯ ವಿದುಷಿ ಶ್ರೀಮತಿ ಭಾರತಿ ಸುರೇಶ್ ಭಾಗವಹಿಸಲಿದ್ದಾರೆ. ಈ…
ಮೂಡಬಿದ್ರಿ: ಹೊಸ ಹೊಸ ಪ್ರಯೋಗಗಳನ್ನು ಹಚ್ಚಿಕೊಂಡು, ಸಮಾಜಕ್ಕೆ ತನ್ನದೇ ಆದ ರೀತಿಯಲ್ಲಿ ಹಲವಾರು ಕೊಡುಗೆಗಳನ್ನು ನೀಡಿರುವ ಆಳ್ವಾಸ್ ವಿದ್ಯಾಸಂಸ್ಥೆಯ ಪದವಿ ಕಾಲೇಜಿನಲ್ಲಿ ದಿನಾಂಕ : 15-07-2023ರಂದು “ಭರತನಾಟ್ಯದಲ್ಲಿ ತಾಳಾವಧಾನ” ಎಂಬ ಹೊಸ ಪ್ರಯೋಗಗಳನ್ನು ಒಳಗೊಂಡ ಶೈಕ್ಷಣಿಕ ಸರ್ಟಿಫಿಕೇಟ್ ಕೋರ್ಸಿನ ಸಮಾರೋಪ ಸಮಾರಂಭ ನಡೆಯಿತು. ಇದನ್ನು ಭರತನಾಟ್ಯ ಕ್ಷೇತ್ರಕ್ಕೆಂದೇ ಅನ್ವೇಷಿಸಿ, ರೂಪಿಸಿದವರು ಯುವ ವಿದ್ವಾಂಸರಾದ ಭರತನಾಟ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್. ಪುತ್ತೂರು. ಈ ಕೋರ್ಸಿನಲ್ಲಿ ನಾಲ್ಕು ಅಧ್ಯಾಯಗಳಿದ್ದು, ಹೊಸ ಪ್ರಯೋಗಗಳನ್ನು ಮತ್ತು ಹಲವಾರು ಚಟುವಟಿಕೆಗಳನ್ನು ಒಳಗೊಂಡಿದೆ. ಆಳ್ವಾಸ್ ಪದವಿ ಕಾಲೇಜಿನ ಆರು ಮಂದಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುರಿಯನ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀಮತಿ ಅಂಜಲಿ ಹಾಗೂ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಉಪಸ್ಥಿತರಿದ್ದರು.
ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ದಿನಾಂಕ : 16-07-2023ರಂದು ಉಳ್ಳಾಲ ಶ್ರೀ ವಿಷ್ಣುಮೂರ್ತಿ ದೇವರು ಕುರಿಯ ಇಲ್ಲಿ ಡಿಂಬ್ರಿ ಗುತ್ತು ಶ್ರೀ ಕೊರಗಪ್ಪ ರೈ ಹಾಗೂ ಶ್ರೀಮತಿ ವಸಂತಿ ರೈ ಇವರ ಸೇವಾರ್ಥ ರಂಗಪೂಜೆ ಹಾಗೂ ‘ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಳೆ ನಡೆಯಿತು. ಇದೇ ಸಂದರ್ಭದಲ್ಲಿ ಉತ್ತಮ ಸಂಘಟನೆ ಮತ್ತು ಕಲಾವಿದನಾಗಿ ಎಲ್ಲಾ ರೀತಿಯಿಂದಲೂ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಏಳಿಗೆಗಾಗಿ ಸಹಕಾರ ನೀಡಿರುವುದಕ್ಕೆ ಶ್ರೀ ಭಾಸ್ಕರ್ ಬಾರ್ಯ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಜಯಪ್ರಕಾಶ್ ನಾಕೂರು, ಚೆಂಡೆ ಮದ್ದಳೆಗಳಲ್ಲಿ ಶ್ರೀ ಮುರಳೀಧರ ಕಲ್ಲೂರಾಯ, ಶ್ರೀ ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಭಾಸ್ಕರ್ ಬಾರ್ಯ (ಶಂತನು), ಶ್ರೀ ಗುಂಡ್ಯಡ್ಕ ಈಶ್ವರ ಭಟ್ (ದಾಶರಾಜ),ಶ್ರೀ ಭಾಸ್ಕರ ಶೆಟ್ಟಿ ಸಾಲ್ಮರ (ಮತ್ಸ್ಯಗಂಧಿ) ಹಾಗೂ ಶ್ರೀ ಗುಡ್ಡಪ್ಪ ಬಲ್ಯ (ದೇವವೃತ) ಸಹಕರಿಸಿದರು. ರವೀಂದ್ರನಾಥ ರೈ ಬಳ್ಳಮಜಲು ಸ್ವಾಗತಿಸಿ,…
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದಿಂದ ನೀಡುವ ವಿವಿಧ ದತ್ತಿಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಿದ್ದು, ಸಂಘದಲ್ಲಿ ಇತ್ತೀಚೆಗೆ ನಡೆದ ಆಯ್ಕೆ ಸಮಿತಿಯಲ್ಲಿ ಸಾಹಿತಿಗಳಾದ ಎಂ.ಎಸ್. ಆಶಾದೇವಿ, ಡಾ.ಭೈರಮಂಗಲ ರಾಮೇಗೌಡ ಹಾಗೂ ಚಂದ್ರಿಕಾ ಪುರಾಣಿಕ ಇವರುಗಳು ಕೃತಿಗಳಿಗೆ ಪ್ರಶಸ್ತಿಗಳನ್ನು ಘೋಷಿಸಿದರು. ಪ್ರಶಸ್ತಿ ಪುರಸ್ಕೃತರ ಪಟ್ಟಿಯು ಈ ಕೆಳಗಿನಂತಿದೆ. ‘ಕಾಕೋಳು ಸರೋಜಮ್ಮ (ಕಾದಂಬರಿ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಲೀಲಾ ಮಣ್ಣಾಲ ಅವರ ‘ರಾಜ್ಯ ರಾಜಶ್ರೀ ಹರ್ಷವರ್ಧನ’ ಕಾದಂಬರಿ ಹಾಗೂ 2022ನೇ ಸಾಲಿಗೆ ಎಚ್.ಆರ್. ಸುಜಾತ ಅವರ ‘ಮಣಿಬಾಲೆ’ ಕಾದಂಬರಿಗಳು ಆಯ್ಕೆಯಾಗಿವೆ. ‘ಭಾಗ್ಯ ನಂಜಪ್ಪ (ವಿಜ್ಞಾನ ಸಾಹಿತ್ಯ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಡಾ. ಎನ್. ಸುಧಾ ಅವರ ‘ಮಾನವನ ಅನುವಂಶೀಯ ಕಾಯಿಲೆಗಳು’ ಹಾಗೂ 2022ನೇ ಸಾಲಿಗೆ ಸುಕನ್ಯಾ ಸೂನಗಳ್ಳಿಯವರ ‘ಬೆಳೆರೋಗಗಳು ಕೀಟಗಳು ಮತ್ತು ಅವುಗಳ ನಿರ್ವಹಣೆ’ ಕೃತಿಗಳು ಆಯ್ಕೆಯಾಗಿವೆ. ‘ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) ಪ್ರಶಸ್ತಿ’ಗೆ 2021ನೇ ಸಾಲಿನಲ್ಲಿ ಸಹನಾ ಕಾಂತಬೈಲು ಅವರ ‘ಇದು ಬರಿ ಮಣ್ಣಲ್ಲ’ ಮತ್ತು 2022ನೇ ಸಾಲಿಗೆ ನಳಿನಿ ಟಿ.ಭೀಮಪ್ಪರ ‘ಸೆಲ್ಫೀ…
ಮಂಗಳೂರು : ಉರ್ವದ ‘ಯಕ್ಷಾರಾಧನಾ ಕಲಾ ಕೇಂದ್ರ’ವು 14ನೇ ವರ್ಷಾಚರಣೆ ಸಂಭ್ರಮವು ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ : 15-07-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣರು “ಯಕ್ಷಗಾನದಲ್ಲಿ ಸಾತ್ವಿಕ ಭಾವದ ಅವಶ್ಯಕತೆ ಇದೆ. ಅದರ ಪ್ರತಿಪಾದನೆ ಕಲಾವಿದನ ಮೂಲಕ ಆಗಿ ಪಾತ್ರದ ಪರಕಾಯ ಪ್ರವೇಶದಿಂದ ಕಲಾವಿದ ಮತ್ತು ಕಲೆ ಬೆಳಗುತ್ತದೆ. ಸುಮಂಗಲಾರತ್ನಾಕರ ರಾವ್ ಇವರ ನಿರಂತರ ಪ್ರಯತ್ನದಿಂದಾಗಿ ಅನೇಕ ಕಲಾವಿದರು ಸಿದ್ಧರಾಗಿದ್ದಾರೆ. ಯಕ್ಷಗಾನದ ಪ್ರತಿಯೊಬ್ಬ ಗುರು ಮತ್ತು ಕಲಾವಿದ ಸಾತ್ವಿಕ ಅಭಿಯನದ ಬಗ್ಗೆ ತಿಳಿದು ರಂಗದಲ್ಲಿ ಪ್ರದರ್ಶನ ನೀಡಬೇಕು. ಯಕ್ಷಗಾನ ಅಲೌಕಿಕವಾದ ಪೌರಾಣಿಕ ಕಲ್ಪನೆ ನೀಡುವ ಕಲೆ. ಒಳ್ಳೆಯ ಸಂಗತಿ ಹಾಗೂ ಕೆಟ್ಟ ವಿಚಾರ ಯಾವುದು ಎಂಬುದನ್ನು ಯಕ್ಷಗಾನದ ಮೂಲಕ ನಾವು ತಿಳಿಯಬಹುದು. ಧರ್ಮ- ಅಧರ್ಮದ ಕುರಿತು ಯಕ್ಷಗಾನ ನಮಗೆ ತಿಳಿ ಹೇಳುತ್ತದೆ. ಯಕ್ಷಗಾನದಲ್ಲಿ ರಾಮಾಯಣ ಪ್ರಸಂಗ ವೀಕ್ಷಿಸಿದಾಗ ರಾಮನಂತೆ ನಾವೂ ಜೀವನ ನಡೆಸಬೇಕು ಎಂಬ ಭಾವನೆ ಮೂಡುತ್ತದೆ. ಆದರೆ,…
ಕಾಸರಗೋಡು : ಮೇಘ ರಂಜನಾ ಚಂದ್ರಗಿರಿ, ಸಾಹಿತ್ಯಿಕ – ಸಾಂಸ್ಕೃತಿಕ ಸಂಸ್ಥೆಯ ಐದನೇ ವರ್ಷದ ಸಂಭ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕೂಡ್ಲು ಶೇಷವನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಮಂಟಪದಲ್ಲಿ ದಿನಾಂಕ : 16-07-2023ರಂದು ‘ಭಜಿಸು ಕನ್ನಡ’ ಕಾರ್ಯಕ್ರಮ ನಡೆಯಿತು. ರಂಗ ನಿರ್ದೇಶಕ ಮತ್ತು ನಟರಾದ ಕಾಸರಗೋಡು ಚಿನ್ನಾ ದೀಪ ಬೆಳಗಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಕಾಸರಗೋಡಿನ ಕನ್ನಡಿಗರು ಆಲಸಿ ಮನೋಭಾವ ಹೊಂದಿದರೆ ಇಂದಲ್ಲ ನಾಳೆ, ನಾವು ಅನ್ಯ ಭಾಷಿಗರ ಗುಲಾಮರಾಗಿ ಬಾಳಬೇಕಾದೀತು. ನಾವು ಕನ್ನಡಿಗರು ಎಂಬ ಸ್ವಾಭಿಮಾನವನ್ನು ಇಟ್ಟುಕೊಳ್ಳದೇ ಹೋದರೆ ಮುಂದಿನ ತಲೆಮಾರಿಗೆ ಕಷ್ಟ ಕಟ್ಟಿಟ್ಟ ಬುತ್ತಿ. ನಮ್ಮ ಹಕ್ಕನ್ನು ನಾವು ಕೇಳದೆ ಹೋದರೆ ಹೇಗೆ ? ಕನ್ನಡ ಶಾಲೆಗಳಿಗೆ ನಮ್ಮ ಮಕ್ಕಳನ್ನು ಕಳಿಸಿದರೆ ಮಾತ್ರ ಕನ್ನಡ ಭಾಷೆ ಉಳಿದೀತು. ನಮ್ಮ ಸಂಸ್ಕೃತಿ, ಪರಂಪರೆಯನ್ನು ನಮ್ಮ ಮಕ್ಕಳಿಗೆ ಹೇಳಿಕೊಡುವ ಕೆಲಸ ಪ್ರಾಮಾಣಿಕವಾಗಿ ಹಿರಿಯರು ಮಾಡಬೇಕು ಹಾಗೂ ಇದು ನಮ್ಮ ಕರ್ತವ್ಯವಾಗಬೇಕು” ಎಂದು ಹೇಳಿದರು. ಶ್ರೀ…