Author: roovari

ಪುತ್ತೂರು : ವಿವೇಕಾನ೦ದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಕನ್ನಡ ವಿಭಾಗ, ಕನ್ನಡ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಮತ್ತು ಭರವಸೆ ಘಟಕ ಇದರ ಸಹಯೋಗದಲ್ಲಿ ಡಾ. ಶ್ರೀಧರ ಎಚ್.ಜಿ. ರಚನೆಯ ‘ನಾಥ ಪಂಥ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ : 13-07-2023ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು. ಈ ಕೃತಿಯನ್ನು ಲೋಕಾರ್ಪಣೆ ಮಾಡಿದ ಮೈಸೂರು ಮಹಾರಾಣಿ ಕಲಾ ಕಾಲೇಜಿನ ಪ್ರಾಚಾರ್ಯ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಬಿ.ಎ.ವಸಂತ ಕುಮಾರ್ ಮಾತನಾಡುತ್ತಾ “ನಾಥ ಪಂಥ ಕೃತಿ ವ್ಯಷ್ಟಿಯ ಮೂಲಕ ಹೊರ ಬಂದಿರುವ ಸಮಷ್ಟಿ. ಆತ್ಮಹತ್ಯೆಯೇ ಮುಂದಿನ ದಾರಿ, ಬೇರೆ ಯಾವುದೇ ದಾರಿ ಇಲ್ಲ ಎನ್ನುವ ವ್ಯಕ್ತಿಯ ಮನಸ್ಸನ್ನು ಆತ್ಮ ಮತ್ತು ವಿಕಾಸದೆಡೆಗೆ ಕೊಂಡೊಯ್ಯಲು ನಾಥ ಪಂಥ ಸಹಾಯವಾಗುತ್ತದೆ. ಜೀವನದ ಪ್ರತಿ ಹಂತದಲ್ಲೂ ಈ ಕೃತಿಯ ಪಾತ್ರ ಮಹತ್ವವಾದದ್ದು, ಅಂತೆಯೇ ಪಂಥಗಳ ಕುರಿತು ಅಧ್ಯಯನ ಮಾಡುವವರಿಗೆ ಈ ಪುಸ್ತಕ ಮಾದರಿಯಾಗಲಿದೆ. ಬದುಕಿನಲ್ಲಿ…

Read More

ಉಡುಪಿ: ಹಿರಿಯ ಜಾನಪದ ವಿದ್ವಾಂಸರಾದ ಡಾ. ಹರಿಕೃಷ್ಣ ಭರಣ್ಯ ಇವರು 2022ನೇ  ಸಾಲಿನ ಮತ್ತು ಡಾ. ಎನ್. ಆರ್. ನಾಯಕ್  2023ನೇ ಸಾಲಿನ ‘ಕೇಶವ ಭಟ್ಟ ಪ್ರಶಸ್ತಿ’ಗೆ ಆಯ್ಕೆಯಾಗಿರುವುದಾಗಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ. ಡಾ. ಎನ್. ಆರ್. ನಾಯಕ್   ಡಾ. ಎನ್. ಆರ್. ನಾಯಕ್ ಇವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿಯವರು. ಇವರು ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ 1964ರಿಂದ 1984ರ ವರೆಗೆ ಪ್ರಾಧ್ಯಾಪಕರಾಗಿ 1984ರಿಂದ 1993ರ ವರೆಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇವರು ಪಿ.ಎಚ್.ಡಿ ಮಾರ್ಗದರ್ಶಕರೂ ಆಗಿದ್ದರು. ಅಲ್ಲದೆ ಕರ್ನಾಟಕ ಜಾನಪದ ವಿ.ವಿಯ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಹಲವಾರು ಸಂಘಸಂಸ್ಥೆಗಳ ಅಧ್ಯಕ್ಷರಾಗಿ, ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅನುಭವ ಹೊಂದಿದ್ದಾರೆ. ಕುಮಟಾದಲ್ಲಿ ನಡೆದ ಉ.ಕ ಜಿಲ್ಲೆಯ ಪ್ರಥಮ ಜಾನಪದ ಸಮ್ಮೇಳನ, ಗೋಕರ್ಣದಲ್ಲಿ ನಡೆದ 7ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಶಿರಸಿಯಲ್ಲಿ ನಡೆದ…

Read More

ಬೆಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜನೆ ಮಾಡಿರುವ ರಾಜ್ಯಮಟ್ಟದ ಖಿದ್ಮಾ ಕಾವ್ಯ ಮತ್ತು ಸಾಂಸ್ಕೃತಿಕ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ 09-07-2023ರ ಭಾನುವಾರದಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಿತು. ಎಂಪವರ್ಡ್ ಮೈಂಡ್ಸ್ ಎಡು ಸೊಲ್ಯೂಷನ್ಸ್ ಎಲ್. ಎಲ್. ಪಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಲತಾ ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಬೆಂಗಳೂರಿನ ಕವಿ ಮತ್ತು ಚಿಂತಕರಾದ ಶ್ರೀ ಯೂಸಫ್ ಹೆಚ್. ಬಿ ಇವರು ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮತ್ತು ಡಾ. ಜ್ಯೋತಿ ಶ್ರೀನಿವಾಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಖಿದ್ಮಾ ಫೌಂಡೇಶನ್ ರಾಜ್ಯ ಸಂಚಾಲಕರಾದ ಅಮಿರ್ ಬನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ ಮೂವತ್ತು ಕವಿಗಳು ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವನವಾಚನ ಮಾಡಿದರು. ಶ್ರೀ ಮೊಹಮ್ಮದ್ ಹುಮಾಯೂನ್. ಎನ್ ಅಧ್ಯಕ್ಷತೆ ವಹಿಸಿದ್ದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಶ್ರೀ ಮೈಬೂಬಸಾಹೇಬ.ವೈ‌. ಜೆ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ಡಾ.ಎಂ.ಎಂ ಭಾಷ ನಂದಿ, ಚಂದ್ರಶೇಖರ್ ಸಿ.ಎನ್,…

Read More

ಅಂಕೋಲಾ ಶಹರದಿಂದ ತುಸು ದೂರದಲ್ಲಿರುವ ‘ವಂದಿಗೆಯೆಂಬ ಪುಟ್ಟ ಗ್ರಾಮವು ಅಂಕೋಲಾದ ಸುತ್ತಲಿನ ಹತ್ತೂರುಗಳಲ್ಲಿ ಸುಪರಿಚಿತಗೊಳ್ಳುವಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮೆರೆದ ನಾಯಕದಯರಾದ ವಿ.ಜೆ ಹಾಗೂ ವಿಠೋಬ ನಾಯಕರವರಿಂದ ಎನ್ನುವಲ್ಲಿ ಕೊಂಚವೂ ಉತೇಕ್ಷೆಯಿಲ್ಲ. ವಿಠೋಬ ನಾಯಕರವರು ಎಂಬತ್ತೆಂಟು ಸಂವತ್ಸರಗಳ ತುಂಬು ಬದುಕನ್ನು ಕಂಡವರು. ಅವರದು ನಾಡವರ ಕಟ್ಟುಮಸ್ತಾದ ಗಟ್ಟುಮುಟ್ಟಿನ ಮೈಕಟ್ಟು, ಉದ್ದನೆಯ ಆಳು, ನೀಳವಾದ ತೋಳು, ಹವಳದಂತೆ ಹೊಳೆಯುವ ಕವಳ ತುಂಬಿದ ತುಟಿಯ ನಗು, ಅಗಲವಾದ ಹಣೆ, ಆಕರ್ಷಕ ಕಂಗಳು, ವಿಸ್ತಾರವಾಗಿರುವ ಎದೆ, ಸುಮ್ಮನೆ ಮಾತನಾಡಿದರೂ ‘ಝಲ್’ ಎನ್ನಿಸುವ ಸಿರಿಕಂಠ ಮತ್ತು ರಾಜಗಾಂಭೀರ್ಯದ ನಡೆ… ಹೀಗೆ ಕಣ್ಣಿಗೆ ಕಟ್ಟುವ ಅವರು ರಂಗದಲ್ಲಿ ಹಾಗೂ ರಂಗದಾಚೆಯೂ ರಂಗಾಗಿಯೇ ಇದ್ದ ಯಕ್ಷಗಾನದ ಅಭಿಜಾತ ಕಲಾವಿದ. ನಾವೆಲ್ಲ ಪ್ರವರ್ಧಮಾನಕ್ಕೆ ಬರುವ ಹೊತ್ತಿನಲ್ಲಿ ವಿಠೋಬಣ್ಣ ರಂಗದಿಂದ ದೂರ ಸುರಿದು ಸಾಕಷ್ಟು ಸಮಯವೇ ಸಂದಿತ್ತು. ಅವರೊಂದಿಗೆ ಒಡನಾಡಿದ ಅವರ ಕಿರಿಯ ಸಮಕಾಲೀನ ಸಹ ಕಲಾವಿದರು ವೇಷ ಮಾಡಿಕೊಳ್ಳುವಾಗಲೆಲ್ಲ “ಇದು ವಂದಿಗೆಯ ವಿಠೋಬ ನಾಯಕರವರು ಮಾಡುತ್ತಿದ್ದ ವೇಷ, ವಿಠೋಬ ನಾಯಕರವರ ನಡೆ ಹಾಗಿತ್ತು.…

Read More

ಬೆಂಗಳೂರು : ಆಸ್ಟ್ರೇಲಿಯಾ ದೇಶದ ವಿಕ್ಟೋರಿಯಾ ರಾಜ್ಯದ ರಾಜಧಾನಿಯಾದ ಪಶ್ಚಿಮ ಮೆಲ್ಬೋರ್ನಿನಲ್ಲಿ ವಿಂಡ್ಯಮ್ ಪ್ರದೇಶದ ಕನ್ನಡಿಗರು ಸೇರಿ ಕಟ್ಟಿರುವ ʻವಿಂಡ್ಯಮ್ ಕನ್ನಡ ಬಳಗʼವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ದಿನಾಂಕ : 13-07-2023ರಂದು ವಿಲಿಯನ್ಸ್ ಲ್ಯಾಂಡಿಂಗ್ ನಲ್ಲಿ ಉದ್ಘಾಟಿಸಿದರು. ʻವಿಂಡ್ಯಮ್ ಕನ್ನಡ ಬಳಗʼವನ್ನು ಉದ್ದೇಶಿಸಿ ಮಾತನಾಡಿದ ಡಾ. ಜೋಶಿಯವರು “ಉದ್ಯೋಗ ಅರಸಿ ದೇಶ ಬಿಟ್ಟು ವಿದೇಶಕ್ಕೆ ಬಂದರೂ ಸ್ವಂತಿಕೆಯನ್ನು ಬಿಡದೇ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಳ್ಳುವ ಮೂಲಕ ನಿಜವಾದ ಕನ್ನಡ ಭಾಷೆಯ ರಾಯಭಾರಿಗಳು ಪಶ್ಚಿಮ ಮೆಲ್ಬೋರ್ನಿನಲ್ಲಿ ನೆಲೆಸಿರುವ ‘ವಿಂಡ್ಯಮ್ ಕನ್ನಡ ಬಳಗ’ದ ಸದಸ್ಯರು ಎಂದು ಶ್ಲಾಘಿಸಿದರು. ಕಳೆದ 15 ವರ್ಷಗಳಿಂದ ಇಲ್ಲಿ ನೆಲೆ ನಿಂತಿರುವ ಕನ್ನಡಿಗರು ಪ್ರತೀ ವರ್ಷವೂ ರಾಜ್ಯೋತ್ಸವವನ್ನು ಆಚರಿಸುತ್ತಾ ಕನ್ನಡದ ಅಭಿಮಾನವನ್ನು ಮೆರೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ಇರುವ ಕನ್ನಡಿಗರ ಮಕ್ಕಳಿಗೆ ಹಾಗೂ ಕನ್ನಡ ಭಾಷಾಭಿಮಾನ ಇರುವ ಇತರರಿಗೂ ಕನ್ನಡ ಕಲಿಸುವ ಕೆಲಸವನ್ನು ವಿಂಡ್ಯಮ್ ಕನ್ನಡ ಬಳಗ ಮಾಡುತ್ತ ಬಂದಿದೆ. ಇಂತಹ ಕನ್ನಡಿಗರ…

Read More

ಮಂಗಳೂರು : ಕುಳಾಯಿ ಹೊಸಬೆಟ್ಟಿನ ಶ್ರೀ ಶಾರದಾ ನಾಟ್ಯಾಲಯದಲ್ಲಿ ದಿನಾಂಕ :03-07-2023ರಂದು ಗುರು ಪೂರ್ಣಿಮಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆಯ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಶ್ರೀ ಶ್ರೀಕಾಂತ್ ಚಿಪ್ಳೂಣ್ಕರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರನ್ನು ಶ್ರೀ ಶಾರದಾ ನಾಟ್ಯಾಲಯದ ನೃತ್ಯ ನಿರ್ದೇಶಕಿ ವಿದುಷಿ ಶ್ರೀಮತಿ ಭಾರತಿ ಸುರೇಶ್ ಇವರು ಆತ್ಮೀಯವಾಗಿ ಸನ್ಮಾನಿಸಿದರು. ಗೌರವ ಸ್ವೀಕರಿಸಿದ ಶ್ರೀ ಶ್ರೀಕಾಂತ್ ಚಿಪ್ಳೂಣ್ಕರ್ ಅವರು ಗುರು ಪೂರ್ಣಿಮೆ ಹಾಗೂ ಗುರುಗಳ ಮಹತ್ವದ ಬಗ್ಗೆ ಶಾರದಾ ನಾಟ್ಯಾಲಯದ ಮಕ್ಕಳಿಗೆ ತಿಳಿಸಿ ಹೇಳಿದರು. ವಿದುಷಿ ಪ್ರಣತಿ ಸತೀಶ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ನಿರ್ದೇಶಕಿ ವಿದುಷಿ ಭಾರತಿ ಸುರೇಶ್ ವಂದಿಸಿದರು. ನಂತರ ಸಂಸ್ಥೆಯ ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

Read More

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡಮಿ ಪ್ರಸ್ತುತ ಪಡಿಸುವ ‘ನೃತ್ಯಾಂತರಂಗ’ದ 101ನೇ ಸರಣಿ ಕಾರ್ಯಕ್ರಮವು ದಿನಾಂಕ :01-07-2023ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಕಡಬದ ವಿಶ್ವಮೋಹನ ಸಂಸ್ಥೆಯ ಗುರು ಮಾನಸ ಪುನೀತ್ ರೈಯವರ ಶಿಷ್ಯೆಯರಾದ ಕುಮಾರಿ ಪ್ರಣಮ್ಯಾ ಪಿ.ರಾವ್ ಮತ್ತು ಕುಮಾರಿ ಸ್ನೇಹಾ ಪಿ.ರಾವ್ ಇವರು ನೃತ್ಯ ಕಾರ್ಯಕ್ರಮ ನೀಡಿದರು. ಅಕಾಡಮಿಯ ಪುಟಾಣಿ ವಿದ್ಯಾರ್ಥಿಗಳಾದ ಆದ್ಯ, ವೃದ್ಧಿ ರೈ, ಆರುಷಿ ರೈ, ಮೇಧಾ ಘಾಟೆ, ಯಶ್ವಿ, ಧನ್ವಿ ಮತ್ತು ತಪಸ್ಯಾ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನೃತ್ಯಾಶಾಲೆಯ ರೂಢಿಯಂತೆ ಮಂಗಳಮಯ ಓಂಕಾರ ನಾದವು ವಿದುಷಿ ಪ್ರೀತಿಕಲಾ ಹಾಗೂ ಶಂಖನಾದ ವಿದ್ವಾನ್ ಗಿರೀಶ್ ಕುಮಾರ್ ಇವರಿಂದ ನಡೆಯಿತು. ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದಂತಹ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹೇಶ್ ನಿಟಿಲಾಪುರ ಇವರು ದೀಪ ಬೆಳಗಿ ಕಾರ್ಯಕ್ರಮ ಪ್ರಾರಂಭಿಸಿದರು. ಕುಮಾರಿ ಮಾತಂಗಿಯವರು ಪಂಚಾಂಗ ಪಠಣವನ್ನು ನಡೆಸಿಕೊಟ್ಟರು. ನಂತರ ಈ ಕಲಾ ಶಾಲೆಯ ಮತ್ತೊಂದು ಪುಟಾಣಿಗಳ ತಂಡದಲ್ಲಿರುವ ಶಾರ್ವರಿ ರೈ, ನಿಯತಿ,…

Read More

ಸುರತ್ಕಲ್ : ಎಂ.ಆರ್.ಪಿ.ಎಲ್. ಸಂಸ್ಥೆಯವರು ನಡೆಸುತ್ತಿರುವ ಸ್ವಚ್ಛತಾ ಪಕ್ವಾಡದ ಅಂಗವಾಗಿ ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಆ್ಯಂಡ್ ರೇಂಜರ್ಸ್ ಹಾಗೂ ಜೂನಿಯರ್ ರೆಡ್ ಕ್ರಾಸ್ ಯೂನಿಟ್ ಸಹಯೋಗದಲ್ಲಿ ಕಾಲೇಜಿನ ಆವರಣದಿಂದ ಸುರತ್ಕಲ್ ಪೇಟೆಯವರೆಗೆ ಸ್ವಚ್ಛತಾ ಜಾಗೃತಿ ಜಾಥಾ ದಿನಾಂಕ : 12-07-2023ರಂದು ನಡೆಯಿತು. ಇದರ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ “ಸ್ವಚ್ಛತೆ ನಮ್ಮ ಧ್ಯೇಯ” ಎಂಬ ಶೀರ್ಷಿಕೆಯ ಬೀದಿ ನಾಟಕ ಸ್ವಚ್ಚತೆಯ ಕುರಿತು ಜನರಲ್ಲಿ ಅರಿವು ಮೂಡಿಸಿತು. ಈ ನಾಟಕವನ್ನು ವಿದ್ಯಾರ್ಥಿ ಶ್ರೀ ವಿನೀತ್ ರಾಜ್ ಮಧ್ಯ ರಚಿಸಿ, ಹಿನ್ನೆಲೆ ಸಂಗೀತ ನೀಡಿದರು ಹಾಗೂ ಉಪನ್ಯಾಸಕ, ರಂಗಕರ್ಮಿ ಶ್ರೀ ರಾಕೇಶ್ ಹೊಸಬೆಟ್ಟು ಬೀದಿ ನಾಟಕವನ್ನು ನಿರ್ದೇಶಿಸಿದರು. ಈ ಬೀದಿನಾಟಕದಲ್ಲಿ ಸುಮಾರು 45 ವಿದ್ಯಾರ್ಥಿಗಳು ಅಭಿನಯಿಸಿ ನೆರೆದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ರೋಶನಿ ನಿಲಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ಇದರ ರಿಜಿಸ್ಟ್ರಾರ್ ಪ್ರೊ. ವಿನೀತಾ ರೈ ಅವರು ಮುಖ್ಯ ಅತಿಥಿಗಳಾಗಿ…

Read More

ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ, ಕನ್ನಡ ವೈದ್ಯ ಬರಹಗಾರರ ಸಮಿತಿ ಹಾಗೂ ವಾಸವಿ ಸಾಹಿತ್ಯ ಕಲಾ ವೇದಿಕೆ ಪ್ರಸ್ತುತ ಪಡಿಸುವ ‘ಸಾಹಿತಿಗಳೊಂದಿಗೆ ಒಂದು ಸಂಜೆ’ ಆನ್ಲೈನ್ ಕಾರ್ಯಕ್ರಮವು ದಿನಾಂಕ : 16-07-2023 ರವಿವಾರ ಸಂಜೆ 6-30ಕ್ಕೆ ನಡೆಯಲಿದೆ. ಇದು ಈ ಸರಣಿ ಕಾರ್ಯಕ್ರಮದ 100ನೇ ಆವೃತ್ತಿಯಾಗಿದ್ದು, ಪ್ರಖ್ಯಾತ ಸಾಹಿತಿಯಾದ ಶ್ರೀ ಚಂದ್ರಶೇಖರ ನಾವುಡ ಬೈಂದೂರು ಈ ಬಾರಿ ಅತಿಥಿಯಾಗಿ ಭಾಗವಹಿಸಿ ‘ಸೈನ್ಯ ಛಾವಣಿ ಒಳಗಿನ ಬದುಕು’ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಈ ಆನ್ಲೈನ್ ಕಾರ್ಯಕ್ರಮವನ್ನು ಝೂಮ್ ಲಿಂಕ್ https://bit.ly/2UbE22Z, ಮೀಟಿಂಗ್ ಐಡಿ 5940765774 ಮತ್ತು ಪಾಸ್ ಕೋಡ್ imaksb ಮೂಲಕ ಭಾಗವಹಿಸಬಹುದು. ಕನ್ನಡ ವೈದ್ಯ ಬರಹಗಾರರ ಸಮಿತಿಯ ಅಧ್ಯಕ್ಷರಾದ ಡಾ.ಶಿವಾನಂದ ಕುಬಸದ, ಭಾ.ವೈ ಸಂ ಕರ್ನಾಟಕ ಶಾಖೆಯ ರಾಜ್ಯಾಧ್ಯಕ್ಷರಾದ ಡಾ. ಶಿವಕುಮಾರ್ ಲಕ್ಕೊಳ್, ಗೌರವ ಕಾರ್ಯದರ್ಶಿಗಳಾದ ಡಾ. ಕರುಣಾಕರ ಬಿ.ಪಿ. ಹಾಗೂ ಸುಳ್ಯದ ವಾಸವಿ ಸಾಹಿತ್ಯ ಕಲಾವೇದಿಕೆಯ ಡಾ. ವೀಣಾ ಎನ್. ಎಲ್ಲರಿಗೂ ಈ ಆನ್ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ದಿನಾಂಕ : 13-07-2023ರಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥರ ನೇತೃತ್ವದ ಒಂದು ತಂಡವು ನಾಲ್ವರು ಹಿರಿಯ ಸಾಹಿತಿಗಳ ಮನೆಗೆ ಹೋಗಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಪುರಸ್ಕರಿಸಿತು. ಮಂಗಳೂರು ಪರಿಸರದ ಹಿರಿಯ ಸಾಹಿತಿಗಳಾದ ಪ್ರೊ. ಕೆ.ಟಿ. ಗಟ್ಟಿ, ಡಾ. ವಾಮನ ನಂದಾವರ, ಶ್ರೀ ಸದಾನಂದ ಸುವರ್ಣ, ಶ್ರೀ ಕೇಶವ ಕುಡ್ಲ ಇವರುಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿತು. ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಜಿಲ್ಲಾ ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ಕಿರಣಪ್ರಸಾದ್ ರೈ, ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮಂಜುನಾಥ್ ರೇವಣ್ಕರ್, ಎಂ.ಪಿ. ಸಾಕೇತ್ ರಾವ್ ಮುಂತಾದವರು ಜಿಲ್ಲಾ ಕಸಾಪ ತಂಡದಲ್ಲಿದ್ದರು. ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಸಹಕಾರ-ಸಹಯೋಗ ಪಡೆಯುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಹಾಗೂ ಸಾಹಿತ್ಯ ಪರಿಷತ್ತಿನ ಪದನಿಮಿತ್ತ ಸದಸ್ಯರಾಗಿರುವ ಕರ್ನಾಟಕ…

Read More