Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ವತಿಯಿಂದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವಂತೆ ಸುಮಾರು ರೂ.13 ಸಾವಿರ ಮೊತ್ತದ ಪುಸ್ತಕಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಇವರಿಗೆ ದಿನಾಂಕ 21 ಸೆಪ್ಟೆಂಬರ್ 2024ರಂದು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕ.ಸಾ.ಪ. ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ. ಇವರು ಪುಸ್ತಕಗಳನ್ನು ಹತ್ತಾಂತರಿಸಿದ್ದು, ಖ್ಯಾತ ಸಾಹಿತಿ ಕು.ಗೋ ರವರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಸಾಹಿತಿ ಸುಧಾ ಅಡುಕಳ, ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಮನೆಯೇ ಗ್ರಂಥಾಲಯ ಅಭಿಯಾನ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು, ಸಾಮಾಜಿಕ ಜಾಲತಾಣ ಪ್ರಮುಖ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ವಸಂತ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಲಯಾಳಂ ಭಾಷೆ ಮತ್ತು ಸಾಹಿತ್ಯವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಸಾಹಿತಿಗಳಲ್ಲಿ ತಗಳಿ ಶಿವಶಂಕರ ಪಿಳ್ಳೈಯವರೂ ಒಬ್ಬರು. ಅವರು ತಮ್ಮ ಕೃತಿಗಳಲ್ಲಿ ಸಾಮಾಜಿಕ ಅಸಮಾನತೆ, ಅನಾಚಾರಗಳನ್ನು ಚಿತ್ರಿಸಿದರು. ಕೆಳಸ್ತರದವರು, ಬೆಸ್ತರು ಮತ್ತು ರೈತಾಪಿ ವರ್ಗದವರ ಶ್ರಮಜೀವನವನ್ನು ತೋರಿಸಿದರು. ಮಲಯಾಳಂ ಸಾಹಿತ್ಯದಲ್ಲಿ ದೀನ ದಲಿತರ ಬದುಕನ್ನು ಮೊದಲ ಬಾರಿಗೆ ದಾಖಲಿಸಿದ ತಗಳಿ ಶಿವಶಂಕರ ಪಿಳ್ಳೈಯವರು ನಗರ ಸಭೆಯ ಕೆಲಸಗಳ ಮೂಲಕ ನಗರದ ದುರ್ವಾಸನೆಯನ್ನು ನಿವಾರಿಸುವ ಜಾಡಮಾಲಿಗಳ ಬಗ್ಗೆ ಬರೆದ ‘ತೋಟಿಯುಡೆ ಮಗನ್’ (1947) ಎಂಬ ಕಾದಂಬರಿಯಲ್ಲಿ ಅಧಿಕಾರಶಾಹಿಯು ಜಾಡಮಾಲಿಗಳನ್ನು ನಿರಂತರವಾಗಿ ಶೋಷಿಸುವ ಚಿತ್ರಣವಿದೆ. ಮೂರು ತಲೆಮಾರುಗಳಿಗೆ ಸೇರಿದ ಜಾಡಮಾಲಿಗಳ ಬದುಕಿನ ಏರುಪೇರುಗಳನ್ನು ಚಿತ್ರಿಸುತ್ತಾ ದುಡಿಯುವ ಜನರ ನಿಕೃಷ್ಟ ಬದುಕನ್ನು ಅನಾವರಣಗೊಳಿಸಿದ್ದಾರೆ. ದುಡಿಯುವ ಜನರಿಗೆ ವ್ಯವಸ್ಥೆಯು ಬದುಕುವ ಅವಕಾಶವನ್ನು ಕೊಡದೆ, ನಿಕೃಷ್ಟವಾಗಿ ಕಾಣುವ ರೀತಿಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ತರಾದ ಡಾ. ಮೋಹನ ಕುಂಟಾರರು ಈ ಕೃತಿಯನ್ನು ‘ತೋಟಿಯ ಮಗ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೊದಲ ತಲೆಮಾರಿಗೆ ಸೇರಿದ…
ಬೆಳ್ತಂಗಡಿ: ಶ್ರೀ ಮದವೂರ ವಿಘ್ನೇಶ ಕಲಾಸಂಘ, ಗೇರುಕಟ್ಟೆ ಬೆಳ್ತಂಗಡಿ ಇವರ ಸದಸ್ಯರಿಂದ ಉಜಿರೆಯ ಈ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಸಂಕಷ್ಟಿಯ ಪ್ರಯುಕ್ತ “ಶರಸೇತು ಬಂಧನ” ಎಂಬ ತಾಳಮದ್ದಳೆಯು ದಿನಾಂಕ 21 ಸೆಪ್ಟೆಂಬರ್ 2024 ರಂದು ನಡೆಯಿತು . ಹಿಮ್ಮೇಳದಲ್ಲಿ ಕುಮಾರಿ ನಂದನ ಮಾಲೆಂಕಿ , ಕಾರ್ತಿಕ್ ಬಳ್ಳಮಂಜ, ರತನ್ ಗುಡಿಗಾರ್ ಹಾಗೂ ಆದಿತ್ಯ ಹೊಳ್ಳ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ, ಬಾಸಮೆ ನಾರಾಯಣ ಭಟ್, ಶ್ರೀರಾಮಕೃಷ್ಣ ಭಟ್ ಬಳಂಜ ಹಾಗೂ ಶ್ರೀಮತಿ ಕೆ. ಆರ್. ಸುವರ್ಣ ಕುಮಾರಿ ಪಾಲ್ಗೊಂಡರು. ಆಡಳಿತ ಮೊಕ್ತೇಸರ ಶ್ರೀ ಶರತ್ ಕೃಷ್ಣ ಪಡ್ವಟ್ನಾಯ , ಕೊಯ್ಯುರು ಅಶೋಕ ಭಾಂಗಿನ್ನಾಯ, ಡಾ. ಪ್ರಸನ್ನಕುಮಾರ್ ಐತಾಳ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು . ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯರು ಕಲಾವಿದರಿಗೆ ಶಾಲು ಹೊಂದಿಸಿ ಗೌರವಿಸಿದರು .
ಮಂಗಳೂರು : ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನೋತ್ಸವದ ಅಂಗವಾಗಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನವು ಅಂಚೆ ಕಾರ್ಡಿನಲ್ಲಿ ಡಾ. ಕೋಟ ಶಿವರಾಮ ಕಾರಂತರ ಚಿತ್ರ ರಚನಾ ಸ್ಪರ್ಧೆಯನ್ನು ಆಯೋಜಿಸಿದೆ. ಇದು ರಾಜ್ಯ ಮಟ್ಟದ ಸ್ಪರ್ಧೆಯಾಗಿದ್ದು, ಎಸ್.ಎಸ್.ಎಲ್.ಸಿ. ವರೆಗಿನ ವಿಭಾಗ ಮತ್ತು ಮುಕ್ತ ವಿಭಾಗ ಹೀಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪೆನ್ಸಿಲ್ನಿಂದ ಕಪ್ಪು ಬಿಳುಪು ಚಿತ್ರವನ್ನು ಪೋಸ್ಟ್ ಕಾರ್ಡ್ನಲ್ಲಿ ರಚಿಸಿ, ಸ್ವ-ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಸ್ಪರ್ಧಾ ವಿಭಾಗವನ್ನು ನಮೂದಿಸಿ ದಿನಾಂಕ 06 ಅಕ್ಟೋಬರ್ 2024ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸುವುದು.. ಜಾನ್ಚಂದ್ರನ್, ಸಂಚಾಲಕರು ಅಂಚೆ ಕಾರ್ಡಿನಲ್ಲಿ ಚಿತ್ರರಚನಾ ಸ್ಪರ್ಧಾ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ. ಮಹಾತ್ಮ ಗಾಂಧಿ ರಸ್ತೆ, ಮಂಗಳೂರು-3 ವಿಜೇತರಿಗೆ ಬಹುಮಾನವನ್ನು 10 ಅಕ್ಟೋಬರ್ 2024ರಂದು ಮಂಗಳೂರಿನಲ್ಲಿ ಜರಗಲಿರುವ ಡಾ. ಕೋಟ ಶಿವರಾಮ ಕಾರಂತರ ಜನ್ಮ ದಿನೋತ್ಸವದ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ಸಂಯೋಜಕರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
ಬೆಂಗಳೂರು : ಕಾವ್ಯ, ಸಣ್ಣಕಥೆ, ವಿಮರ್ಶೆ ಇತ್ಯಾದಿ ಪ್ರಕಾರಗಳ ಬರಹಗಳನ್ನು ಆಯಾ ವರ್ಷ ಸಂಪಾದಿಸಿ ಪ್ರಕಟಿಸುವುದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಆವರ್ತಕ ಯೋಜನೆ. 2023ನೇ ಸಾಲಿನ ಸಣ್ಣಕಥೆಗಳನ್ನು ಸಂಪಾದಿಸುವ ಅವಕಾಶ ನನ್ನದು. 2023ನೇ ವರ್ಷದ ಜನವರಿಯಿಂದ ಡಿಸೆಂಬರ್ ವರೆಗೆ ನಾಡಿನ ವಿವಿಧ ಪತ್ರಿಕೆ (ದೈನಿಕ, ಸಾಪ್ತಾಹಿಕ, ಪಾಕ್ಷಿಕ, ಮಾಸಿಕ, ದ್ವೈ/ತ್ರೈಮಾಸಿಕ, ವಾರ್ಷಿಕ ಇತ್ಯಾದಿ)ಗಳಲ್ಲಿ ಪ್ರಕಟವಾದ ಸಣ್ಣಕಥೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ನಾಡಿನ ಬರಹಗಾರರಲ್ಲಿ ಕೋರಿಕೆ. ವಿಳಾಸ : ಚಾಂದಿನಿ, ನಂಜುಂಡೇಶ್ವರ ನಿಲಯ, ಹೌಸ್ ನಂಬ್ರ 3, ಎ ಬ್ಲಾಕ್, 5ನೇ ಕ್ರಾಸ್, ಚಿಕ್ಕಣ್ಣ ಲೇಔಟ್, ಮಹಾದೇವಪುರ ಪೋಸ್ಟ್, ಬೆಂಗಳೂರು – 560948 ಸಂಪರ್ಕ ಸಂಖ್ಯೆ 9945472263, ಇ-ಮೇಲ್ : [email protected]
ಮಂಗಳೂರು : ಆರ್ಟ್ ಕೆನರಾ ಟ್ರಸ್ಟ್ ಮಂಗಳೂರು, ಕವಿತಾ ಕುಟೀರ (ರಿ.) ಪೆರಡಾಲ ಮತ್ತು ನವಜೀವನ ಹೈಸ್ಕೂಲ್ ಪೆರಡಾಲ ಕಾಸರಗೋಡು ಇದರ ಹಿರಿಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಕವಿ ಕಯ್ಯಾರ ಸ್ಮೃತಿ ‘ಐಕ್ಯವೇಮಂತ್ರ’ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 28 ಸೆಪ್ಟೆಂಬರ್ 2024ರಂದು ಅಪರಾಹ್ನ 2-45 ಗಂಟೆಗೆ ಮಂಗಳೂರಿನ ಬಿ.ಇ.ಎಂ. ಹೈಸ್ಕೂಲಿನಲ್ಲಿ ಹಮ್ಮಿಕೊಳ್ಳಲಾಗಿದೆ. ಮಾನ್ಯ ಸಭಾಪತಿಗಳಾದ ಯು.ಟಿ. ಖಾದರ್ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿ ಇವರು ಕವನ ಸಂಕಲನದ ಬಗ್ಗೆ ಮಾತನಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಲಲಿತಕಲಾ ಅಧ್ಯಯನ ಕೇಂದ್ರದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮೂಡುಬಿದಿರೆ : ಸಮಾಜಮಂದಿರ ಸಭಾ (ರಿ.) ಮೂಡುಬಿದಿರೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ, ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಇವುಗಳ ಆಶ್ರಯದಲ್ಲಿ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಇವರಿಗೆ 80ರ ಅಭಿನಂದನಾ ಸಮಾರಂಭವು ದಿನಾಂಕ 21 ಸೆಪ್ಟೆಂಬರ್ 2024ರಂದು ಮೂಡುಬಿದಿರೆಯ ಸಮಾಜಮಂದಿರ ಸಭಾದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ “ಕನ್ನಡ ಸಾರಸ್ವತ ಲೋಕಕ್ಕೆ ಮೌಲ್ಯಯುತ ಸಾಹಿತ್ಯವನ್ನು ನೀಡಿದ ಹೆಗ್ಗಳಿಕೆ ಡಾ. ನಾ. ಮೊಗಸಾಲೆಯವರದ್ದಾಗಿದೆ. ಗ್ರಾಮೀಣ ಭಾಗದಲ್ಲಿದ್ದುಕೊಂಡು ಭಾಷೆ ಕಟ್ಟುವ, ಭಾಷೆ ಬೆಳೆಸುವ ಕಾಯಕವನ್ನು ಮೊಗಸಾಲೆಯವರು ಸಮರ್ಥವಾಗಿ ಮಾಡಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಭಾಷೆ ಬೆಳೆಯಬೇಕು. ಕನ್ನಡ ಬೆಳೆಯಲು ಕನ್ನಡ ಸಾಹಿತ್ಯ ಬೆಳಗಬೇಕಾಗಿದೆ. ಗ್ರಾಮೀಣ ಭಾಗದಲ್ಲಿದ್ದುಕೊಂಡು ದೊಡ್ಡ ಕಲ್ಪನೆಯನ್ನು ಮಾಡಿ ಯಶಸ್ವಿಯಾದವರು ಮೊಗಸಾಲೆ. ಕುಗ್ರಾಮದಲ್ಲಿ ಕನ್ನಡ ಕಟ್ಟಿ ಬೆಳಸಿ ಎಲ್ಲರೂ ಕಾಂತಾವರದತ್ತ ತಿರುಗಿ ನೋಡುವಂತಹ ಸಾಧನೆಯನ್ನು ಮೊಗಸಾಲೆ ಮಾಡಿದ್ದಾರೆ” ಎಂದು…
ಮಂಗಳೂರು : ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಶ್ರೀಮತಿ ಮನೋರಮಾ ಎಂ. ಭಟ್ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 23 ಸೆಪ್ಟೆಂಬರ್ 2024ರಂದು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ “ಅರ್ಥಧಾರಿ ಹಾಗೂ ಖ್ಯಾತ ವಕೀಲರಾದ ದಿ. ಮಹಾಬಲ ಭಟ್ಟರ ಪತ್ನಿ ಹಿರಿಯ ಸಾಹಿತಿ ಶ್ರೀಮತಿ ಮನೋರಮಾ ಎಂ. ಭಟ್ ಅವರು ಸರಳ ಹಾಗೂ ಸುಂದರವಾದ ನಿರೂಪಣೆಯೊಂದಿಗೆ ಔಚಿತ್ಯಪೂರ್ಣ ಕಥೆಗಳನ್ನು ರಚಿಸುವ ಮೂಲಕ ಸಾಹಿತ್ಯ ರಂಗವನ್ನು ಪ್ರವೇಶಿಸಿ ಓರ್ವ ಪ್ರಸಿದ್ದ ಮಹಿಳಾ ಸಾಹಿತಿಯಾಗಿ ಪ್ರಸಿದ್ದರಾಗಿದ್ದರು. ಪತಿಯ ಅಗಲಿಕೆಯ ಬಳಿಕ ಏಕಾಂಗಿ ಜೀವನವನ್ನು ನಿರ್ವಹಿಸಿ ಕೊನೆ ದಿನಗಳಲ್ಲಿ ಆಶ್ರಮವಾಸಿಯಾಗಿದ್ದರು. ‘ಹೊಸಹಾದಿ’, ‘ನಿರ್ಧಾರ’ ಇತ್ಯಾದಿ ಅನೇಕ ಉತ್ತಮವಾದ ಕೃತಿಗಳನ್ನು ರಚಿಸಿ ಹೆಸರು ಗಳಿಸಿದ್ದರು. ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವುದನ್ನು…
ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿ ಕೊಡಮಾಡುವ ವಾರ್ಷಿಕ ಪುಸ್ತಕ ಬಹುಮಾನಕ್ಕಾಗಿ ಪುಸ್ತಕಗಳನ್ನು ಆಹ್ವಾನಿಸಿದೆ. ಅಕಾಡೆಮಿಯು ಪ್ರತಿ ವರ್ಷ ಆಯಾ ವರ್ಷ ಪ್ರಕಟಗೊಂಡ ದೃಶ್ಯಕಲೆಗೆ ಸಂಬಂಧಿಸಿದ ಅತ್ಯುತ್ತಮ ಪುಸ್ತಕಗಳಿಗೆ ಬಹುಮಾನ ನೀಡುತ್ತಿದ್ದು 2024-25ನೇ ಸಾಲಿನ ಬಹುಮಾನಕ್ಕಾಗಿ ಇದೀಗ ಕೃತಿಗಳನ್ನು ಆಹ್ವಾನಿಸಲಾಗಿದೆ. 1 ಜನವರಿ 2023ರಿಂದ 31 ಡಿಸೆಂಬರ್ 2023ರ ಒಳಗಿನ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡ ಪುಸ್ತಕಗಳು ಬಹುಮಾನಕ್ಕೆ ಅರ್ಹವಾಗಿದ್ದು, ಆಯ್ಕೆಗೊಂಡ ಪುಸ್ತಕಕ್ಕೆ ರೂಪಾಯಿ 25 ಸಾವಿರ ನಗದು ಬಹುಮಾನ ದೊರೆಯಲಿದೆ. ಪುಸ್ತಕವು ಯಾವುದೇ ತರಗತಿ ಇಲ್ಲವೆ ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿರಬಾರದು, ಲೇಖಕರ ಸ್ವಂತ ರಚನೆಯಾಗಿರಬೇಕು, ಸಂಪಾದಿತ ಕೃತಿಯಾಗಿರಬಾರದು, ಪಿ. ಎಚ್. ಡಿ. ಹಾಗೂ ಡಿ. ಲಿಟ್ ಮತ್ತಿತರ ಅಧ್ಯಯನಕ್ಕಾಗಿ ಬರೆದ ಪುಸ್ತಕವಾಗಿರಬಾರದು ಎಂಬುದು ಸೇರಿದಂತೆ ಹಲವು ನಿಬಂಧನೆಗಳನ್ನು ವಿಧಿಸಲಾಗಿದೆ. ಲೇಖಕರು ಪುಸ್ತಕದ ನಾಲ್ಕು ಪ್ರತಿಗಳನ್ನು ಬಹುಮಾನಕ್ಕಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಪುಸ್ತಕಗಳು 30 ಅಕ್ಟೋಬರ್ 2024ರ ಒಳಗಾಗಿ ತಲುಪಬೇಕು. ಪುಸ್ತಕವನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ. ಸಿ. ರಸ್ತೆ, ಬೆಂಗಳೂರು-560002.…
ಬೆಂಗಳೂರು : ಬೆಂಗಳೂರಿನ ‘ಸ್ಟೇಜ್ ಬೆಂಗಳೂರು’ ಆಯೋಜನೆಯಲ್ಲಿ ‘ರಂಗಚಕ್ರ’ ತಂಡವು ಅಭಿನಯಿಸುತ್ತಿರುವ ಹಾಸ್ಯ ಭರಿತ ನಾಟಕ ‘ಅಪರಾಧಿ ನಾನಲ್ಲ’ ಇದರ ಪ್ರದರ್ಶನವು 05 ಅಕ್ಟೋಬರ್ 2024ರಂದು ಬೆಂಗಳೂರಿನ ವ್ಯೋಮ ಆರ್ಟ್ ಸ್ಪೇಸ್ ಆ್ಯಂಡ್ ಸ್ಟುಡಿಯೋ ಥಿಯೇಟರ್ ಇಲ್ಲಿ ನಡೆಯಲಿದೆ. ಅಪರಾಧಿ ನಾನಲ್ಲ : ಜೈಲಿನಲ್ಲಿ ಇರುವ ಖೈದಿಗಳೆಲ್ಲ ಅಪರಾಧ ಮಾಡಿದವರಲ್ಲ ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸುವ ಉಧಾಹರಣೆಗಳೂ ಇವೆ. ಶೂಟಿಂಗ್ ನೆಪದಲ್ಲಿ ಹಿರಿಯ ಅಧಿಕಾರಿಗಳ ತಂಡ ಜೈಲಿಗೆ ಭೇಟಿ ಕೊಡುತ್ತಾರೆ. ಖೈದಿಗಳು ತಮ್ಮ ಜೀವನದಲ್ಲಿ ಆದ ತಪ್ಪುಗಳನ್ನು ಫ್ಲಾಷ್ ಬ್ಯಾಕ್ ಹೇಳಿಕೊಳ್ಳುತ್ತಾರೆ. ಆ ಖೈದಿಗಳಲ್ಲಿ ದೊಡ್ಡಮಾದ ಎಂಬ ನಿರಪರಾಧಿಯನ್ನು ಪತ್ತೆ ಹಚ್ಚಿ. ಅವನನ್ನು ಬಿಡುಗಡೆ ಮಾಡಲು ಈ ತಂಡ ಶಿಫಾರಸ್ಸು ಮಾಡುತ್ತದೆ. ಹಾಸ್ಯಕ್ಕೆ ಹೇರಳವಾದ ಅವಕಾಶ ಈ ನಾಟಕದಲ್ಲಿ ಇದೆ. ಎಂ. ಎಸ್. ನರಸಿಂಹ ಮೂರ್ತಿ ರಚಿಸಿರುವ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಹೇಶ್ ಕುಮಾರ್ ಅವರದ್ದು.