Subscribe to Updates
Get the latest creative news from FooBar about art, design and business.
Author: roovari
ತೀರ್ಥಹಳ್ಳಿ : ದಸರಾ ಉತ್ಸವ ಸಮಿತಿ ಆಶ್ರಯದಲ್ಲಿ ದಿನಾಂಕ 10 ಅಕ್ಟೋಬರ್ 2024ರಂದು ತೀರ್ಥಹಳ್ಳಿಯಲ್ಲಿ ಜರಗಿದ ಅಂತರ ಜಿಲ್ಲಾ ದಸರಾ ಕವಿಗೋಷ್ಟಿಯಲ್ಲಿ ತೀರ್ಥಹಳ್ಳಿಯ ಶಿಕ್ಷಕಿ ಜಿ.ಎಸ್. ನಾಗರತ್ನ ನಿಲ್ಸಿಕಲ್ ಅವರು ಪ್ರಥಮ ಸ್ಥಾನದೊಂದಿಗೆ ರೂ.5,000/- ನಗದು ಬಹುಮಾನ ಪಡೆದರು. ದ್ವಿತೀಯ ಸ್ಥಾನವನ್ನು ಚಿಕ್ಕಮಗಳೂರಿನ ಪ್ರವೀಣ್ ಕುಮಾರ್, ತೃತೀಯ ಸ್ಥಾನವನ್ನು ತೀರ್ಥಹಳ್ಳಿಯ ಡಾ. ಮುರುಳೀಧರ ಕಿರಣಕೆರೆ ಹಾಗೂ ನಾಲ್ಕನೇ ಬಹುಮಾನವನ್ನು ಭದ್ರಾವತಿಯ ಪದ್ಮಶ್ರೀ ಗೋವಿಂದರಾಜ್ ತಮ್ಮದಾಗಿಸಿಕೊಂಡರು. ಎಲ್ಲಾ ನಾಲ್ವರು ವಿಜೇತರಿಗೂ ನಗದು ಬಹುಮಾನ ಹಾಗೂ ಫಲಕವನ್ನು ನೀಡಲಾಯಿತು. ಹಿರಿಯ ಸಾಹಿತಿ ಹಾಗೂ ಯಕ್ಷಗಾನ ತಾಳಮದ್ದಲೆ ಕಲಾವಿದ ನಿಟ್ಟೂರು ಶಾಂತರಾಮ ಪ್ರಭು ಹಾಗೂ ದಸರಾ ಸಾಂಸ್ಕೃತಿಕ ಸಮಿತಿಯ ಸದಸ್ಯರು ಬಹುಮಾನಗಳನ್ನು ವಿತರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ದಸರಾ ಉತ್ಸವ ಸಮಿತಿ ಸಂಚಾಲಕ ಸಂದೇಶ್ ಜವಳಿ ಮುಂತಾದವರು ಪಾಲ್ಗೊಂಡಿದ್ದರು. ಹಿರಿಯ ಸಾಹಿತಿ ನಿಟ್ಟೂರು ಶಾಂತರಾಮ ಪ್ರಭು ಕವಿಗೋಷ್ಟಿಯನ್ನು ಉದ್ಘಾಟಿಸಿದರು. ದಸರಾ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾನ್ ರಾಮಣ್ಣ,…
ಶಿವರಾಮ ಕಾರಂತರು ಕೇವಲ ಕಾದಂಬರಿಕಾರರಲ್ಲ. ಹುಚ್ಚು ಮನಸ್ಸಿನ ಹತ್ತು ಮುಖಗಳ ಮೂಲಕ ಅವರ ದಶಾವತಾರವನ್ನು ಕಾಣದವರಿಲ್ಲ. ಎಲ್ಲವೂ ಅನುಭವಕ್ಕಾಗಿ ಎಂಬ ನಿಲುವು ಅವರನ್ನು ಅನೇಕ ರಂಗಗಳಲ್ಲಿ ದುಡಿಸಿದೆ. ಇದರಿಂದಾಗಿ ಆ ಮಹಾ ಚಿಂತಕನ ಶೈಲಿ ನಿಸ್ಪೃಹವೂ ನಿರ್ಲಿಪ್ತವೂ ಆಗಿದೆ. ಕಾದಂಬರಿಗಳೇ ಈ ಯುಗದ ಮಹಾಕಾವ್ಯಗಳೆಂಬ ಅಭಿಪ್ರಾಯ ಬರುವುದಕ್ಕೆ ಕಾರಂತರ ದುಡಿಮೆಯೂ ಕಾರಣವಾಗಿದೆ. ಅಮ್ಮನಾಗದೆಯೂ ಹೆಣ್ತನದ ವಿರಾಟ್ ರೂಪವನ್ನು ಮೆರೆದ ಮೂಕಜ್ಜಿಯ ಕನಸುಗಳ ನೋಟವು ಆಸ್ವಾದನೀಯವಾಗಿದೆ. ಇತರ ಕಾದಂಬರಿಗಳ ಅಂತರಂಗವನ್ನು ಕಾಣುವುದರ ನಡುವೆ ಕಾರಂತರ ಮಗುವಿನಂತಹ ಮನ ಮತ್ತು ಬದ್ಧತೆಗಳು ಪುಳಕವನ್ನು ಉಂಟು ಮಾಡುತ್ತವೆ. ದೇಶಕ್ಕೆ ಸ್ವಾತಂತ್ರ್ಯ ದೊರಕುವ ಮೊದಲು ಬರೆದು ನಂತರ ಪ್ರಕಟಗೊಂಡ ‘ಕರುಳಿನ ಕರೆ’ ಎಂಬ ಕಾದಂಬರಿಯಲ್ಲಿ ಕೋರ್ಟು ಕಛೇರಿಗಳು, ಹೋಟೆಲ್, ಎತ್ತಿನ ಗಾಡಿ, ಪ್ಲೇಗು, ಮೈ ಮುರಿಯುವ ದುಡಿಮೆ, ವಿಲಾಸೀ ಬದುಕು, ನಡೆನುಡಿಯನ್ನು ಛಿದ್ರಗೊಳಿಸುವ ವ್ಯಸನ, ಬ್ಯಾಂಕುಗಳಿಲ್ಲದ್ದರಿಂದ ಬೆಳೆದ ಹಣದ ಲೇವಾದೇವಿ, ಅದರಿಂದಾದ ಎಡವಟ್ಟಿನಿಂದ ಮುನ್ನೆಲೆಗೆ ಬಂದ ವ್ಯಾಜ್ಯಗಳು, ಮೇಲು ಚೀಟಿ, ಬಡ್ಡಿಖರ್ಚುಗಳ ಸಹಿತ ಡಿಕ್ರಿ, ವಾಯ್ದೆಗೆ ಬಿಡುವು…
ಬೆಂಗಳೂರು : ವೀಣಾ ಮೋಹನ್ ಸಾರಥಿಯ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ನವರಾತ್ರಿಯ ಉತ್ಸವದ ಪ್ರಯುಕ್ತ ಮಕ್ಕಳ ತಂಡದಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನವು ದಿನಾಂಕ 09 ಅಕ್ಟೋಬರ್ 2024ರಂದು ಬೆಂಗಳೂರಿನ ಬುಲ್ಟೆಂಪಲ್ ರಸ್ತೆ ಹತ್ತಿರದ ಅನ್ನಪೂರ್ಣ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವತರಾಗಿ ಸುಬ್ರಾಯ ಹೆಬ್ಬಾರ್, ಮದ್ದಲೆಯಲ್ಲಿ ಅಕ್ಷಯ್ಕುಮಾರ್, ಚಂಡೆವಾದಕರಾಗಿ ಶ್ರೀನಿವಾಸ ಪ್ರಭು ಭಾಗವಹಿಸಿದರು. ಮಕ್ಕಳಾದ ಶ್ರೀವತ್ಸ, ಶ್ರೀರಾಮ, ಶ್ರೀ ವಿದ್ಯಾ, ಧನ್ಯ, ಚಿನ್ಮಯಿ, ಮೇಘನ, ಅಹನಾ ಮತ್ತು ಶ್ರೇಯಾ ಇವರು ಭಾಗವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆದ ಯಕ್ಷಗಾನ ಪ್ರಸಂಗದ ನಿರ್ದೇಶನವನ್ನು ಪ್ರಿಯಾಂಕ ಕೆ. ಮೋಹನ್ ಮಾಡಿದರು.
ಸುರತ್ಕಲ್ : ಅವರು ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ (ರಿ) ಸುರತ್ಕಲ್ ಸಹಯೋಗದಲ್ಲಿ ಆಯೋಜಿಸಿದ ನವರಾತ್ರಿಯ ಪ್ರಯುಕ್ತ ವಿಶೇಷ ಸಂಗೀತ ಕಾರ್ಯಕ್ರಮವು ದಿನಾಂಕ 06 ಅಕ್ಟೋಬರ್ 2024ರಂದು ಸುರತ್ಕಲ್ ಇಲ್ಲಿನ ‘ಅನುಪಲ್ಲವಿ’ಯಲ್ಲಿರುವ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿಟ್ಟೆ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥೆಯಾದ ಡಾ. ಸಾಯಿಗೀತಾ ಮಾತನಾಡಿ “ಸಂಗೀತದ ಮೂಲಕ ದೈವತ್ವದ ಅನುಭೂತಿಯನ್ನು ಪಡೆಯಬಹುದು. ಶಕ್ತಿಸ್ವರೂಣಿಯರ ಆರಾಧನೆಯ ಕಾಲವಾದ ನವರಾತ್ರಿಯ ಆಚರಣೆಯಲ್ಲಿ ಸಂಗೀತವೂ ಮಹತ್ವವನ್ನು ಪಡೆದಿದೆ.” ಎಂದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ “ಯುವ ಕಲಾವಿದರು ತಮ್ಮ ಶ್ರದ್ಧೆ ಮತ್ತು ಬದ್ಧತೆಯಿಂದ ಪ್ರತಿಭಾವಂತ ಕಲಾವಿದರಾಗಿ ರೂಪುಗೊಳ್ಳುತ್ತಿದ್ದಾರೆ.” ಎಂದರು. ವಿದುಷಿ ನಮೃತಾ ಎಸ್. ಚೆನ್ನೈ ಇವರ ಹಾಡುಗಾರಿಕೆ ನಡೆಸಿಕೊಟ್ಟರು. ಇವರಿಗೆ ವಯಲಿನ್ನಲ್ಲಿ ಅನನ್ಯ ಪಿ. ಎಸ್. ಮತ್ತು ಮೃದಂಗದಲ್ಲಿ ಅಚಿಂತ್ಯಕೃಷ್ಣ ಪುತ್ತೂರು ಸಹಕರಿಸಿದರು. ಗೋವಿಂದ ದಾಸ ಕಾಲೇಜು ಸುರತ್ಕಲ್ ಇಲ್ಲಿನ ಪ್ರಾಂಶುಪಾಲರಾದ ಪ್ರೊ. ಪಿ.…
ಮಂಗಳೂರು : ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಷನ್ಸ್ ಇದರ ಕಲ್ಲೂರು ನಾಗೇಶ್ ಪ್ರಕಟಿಸಿದ ಲಕ್ಷ್ಮಣ ಅವರ ಕೃತಿ ‘ತುಳು ಬೆಳ್ಳಿ ತೆರೆಯ ಸುವರ್ಣ ಯಾನ’ ಕೃತಿಗೆ ಕಲಾ ವಿಭಾಗದಲ್ಲಿ ಮತ್ತು ಡಾ. ಇಂದಿರಾ ಹೆಗ್ಗಡೆ ಅವರ ‘ಅತಿಕಾರೆ’ ಕೃತಿಗೆ ಭಾಷಾ ವಿಭಾಗದಲ್ಲಿ ಭಾರತೀಯ ಪ್ರಕಾಶಕರ ಒಕ್ಕೂಟ ನವದೆಹಲಿ( The Federation of Indian Publishers Association- FIP) ಇವರು ಕೊಡುವ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ದಿನಾಂಕ 25 ಸೆಪ್ಟೆಂಬರ್2024ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ವೈಚಾರಿಕ ಸ್ಪಷ್ಟತೆಯಿಂದ ಪ್ರಕಾಶನವನ್ನು ಮಾಡುತ್ತಿರುವ ಕಲ್ಲೂರು ನಾಗೇಶ್ ಅವರಿಗೆ ಅಭಿನಂದನೆಗಳು. ಇದು ರಾಷ್ಟ್ರ ಮಟ್ಟದಲ್ಲಿ ನಮ್ಮ ಜಿಲ್ಲೆಗೆ ಹೆಸರು ತಂದ ಕೀರ್ತಿಯೂ ಹೌದು.
ಉಡುಪಿ : ಉಡುಪಿಯ ಸಾಂಸ್ಕೃತಿಕ ಹರಿಕಾರ ಡಾ. ತಲ್ಲೂರು ಶಿವರಾಮ ಶೆಟ್ಟಿಯವರಿಗೆ ಇದೀಗ 75ರ ಹುಟ್ಟುಹಬ್ಬದ ಸಂಭ್ರಮ. ದಿನಾಂಕ 9 ಅಕ್ಟೋಬರ್ 2024ರಂದು ಅವರು 75 ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ವ್ಯಕ್ತಿಯಾಗಲಿ ಅಥವಾ ಸಂಘ ಸoಸ್ಥೆಗಳಿಗಾಗಲಿ ಈ ವಜ್ರ ಮಹೋತ್ಸವ ಎಂಬುದು ಸಾರ್ಥಕತೆಯನ್ನು ತಂದು ಕೊಡುವ ಕ್ಷಣಗಳು. ಡಾ. ತಲ್ಲೂರು ಇವರಿಗೆ 75ರ ಸಂಭ್ರಮದ ಜೊತೆಗೆ ತಮ್ಮ ಸಾರ್ಥಕ್ಯ ಸಮಾಜ ಸೇವೆಯ ಸುವರ್ಣ ಸಂಭ್ರಮವೂ ಹೌದು. ಕಳೆದ 50 ವರ್ಷಗಳಲ್ಲಿ ಸಮಾಜ ಸೇವಕರಾಗಿ, ಕಲಾವಿದರಾಗಿ, ಕಲಾಭಿಮಾನಿಯಾಗಿ, ಕಲಾ ಪೋಷಕರಾಗಿ, ದೈವ ಭಕ್ತರಾಗಿ ಹತ್ತು ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಲ್ಲದೆ ಇವರು ಸಮಾಜಕ್ಕೆ ನೀಡಿದ ಕೊಡುಗೆಗಳು ಬೆರಗು ಹುಟ್ಟಿಸುವಂತಹುದು. ಜೀವನ ಪಥದ 75ರ ಮೈಲಿಗಲ್ಲನ್ನು ನೆಟ್ಟಿರುವ ಇವರ ಬದುಕು, ಆದರ್ಶಗಳನ್ನು ಮತ್ತೊಮ್ಮೆ ಮೆಲುಕು ಹಾಕಿಕೊಳ್ಳಬೇಕಾದ ಸುವರ್ಣ ಸಂಭ್ರಮ ಕಾಲವಿದು. ಕುಂದಾಪುರ ತಾಲೂಕಿನ ತಲ್ಲೂರು ಎಂಬ ಗ್ರಾಮದಲ್ಲಿ ತಂದೆ ಅಣ್ಣಯ್ಯ ಶೆಟ್ಟಿ ಹಾಗೂ ಕನಕಮ್ಮ ದಂಪತಿಯ ಸುಪುತ್ರರಾಗಿ 1949ರ ಅಕ್ಟೋಬರ್ 9ರಂದು…
ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ಆಯೋಜಿಸಿದ ‘ಕ್ಯಾನ್ ಲಿಟೆರಾತಿ ಫೆಸ್ಟ್ 2024’ 5 ಮತ್ತು 6 ಅಕ್ಟೋಬರ್ 2024ರಂದು ಮಂಗಳೂರಿನ ಟಿ. ವಿ. ರಮಣ ಪೈ ಕನ್ವೆನ್ಷನ್ ಸೆಂಟರ್ ಇಲ್ಲಿ ನಡೆಯಿತು. ಈ ಎರಡು ದಿನಗಳ ಈ ಸಾಹಿತ್ಯೋತ್ಸವದಲ್ಲಿ ಮಂಗಳೂರು, ಹೊನ್ನಾವರ, ಬಂಟ್ವಾಳ, ಕಾರ್ಕಳ, ಉಡುಪಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮವು ಎಂ. ಆರ್. ಪಿ. ಎಲ್. ಮತ್ತು ಶ್ರೀ ಗಣೇಶ್ ಎಲೆಕ್ಟ್ರಿಕಲ್ಸ್ ಇವರ ಮುಖ್ಯ ಪ್ರಾಯೋಜಕತ್ವದಲ್ಲಿ ಹಾಗೂ ಡಿ. ಟಿ. ಡಿ. ಸಿ. ಕೊರಿಯರ್ , ಹಾಂಗ್ಯೋ ಐಸ್ ಕ್ರೀಮ್, ಎಸ್. ಸಿ. ಡಿ. ಸಿ. ಸಿ. ಬ್ಯಾಂಕ್, ರೋಹನ್ ಕಾರ್ಪೊರೇಷನ್, ಮಹೇಶ್ ಎಂಜಿನಿಯರಿಂಗ್, ಐ ಆಮ್ ಜಯಲಕ್ಷ್ಮೀ ಮತ್ತು ಶ್ರೀ ಗಜಾನನ ಮೆಷಿನ್ ವರ್ಕ್ಸ್ ಇವರ ಸಹಪ್ರಾಯೋಜಕದಲ್ಲಿ ಯಶಸ್ವಿಯಾಗಿ ನೆರವೇರಿತು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ. ಡಿ. ವಾಸುದೇವ ಕಾಮತ್, ಗೌರವ ಕಾರ್ಯದರ್ಶಿ ಶ್ರೀ ಎಂ. ರಂಗನಾಥ್…
ಬೆಂಗಳೂರು: ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಕೆ. ಶಿವರಾಮಕಾರಂತರ 122ನೆಯ ಹುಟ್ಟಹಬ್ಬವನ್ನು ದಿನಾಂಕ 10 ಅಕ್ಟೋಬರ್ 2024ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ “ತಮ್ಮ ಬದುಕಿಗೆ ಯಾವುದೇ ಸೀಮಿತ ಪರಿಧಿಗಳನ್ನು ವಿಧಿಸಿಕೊಳ್ಳಲು ಬಯಸದ ಕಾರಂತರಿಗೆ ಜ್ಞಾನದ ಎಲ್ಲ ಶಾಖೆಗಳೂ ಹತ್ತಿರವಾಗಿ ಕಂಡವು, ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅವರು ಕ್ರಿಯಾಶೀಲರಾಗಿದ್ದರು. ಶಿವರಾಮ ಕಾರಂತರು ರೂಪಿಸಿದ ‘ಬಾಲ ಪ್ರಪಂಚ’, ‘ವಿಜ್ಞಾನ ಪ್ರಪಂಚ’ ಯೋಜನೆಗಳು ವಿಶ್ವವಿದ್ಯಾಲಯಗಳಿಗೆ ಮಾತ್ರ ಸಾಧ್ಯವಿರುವಂತದ್ದು, ಇಂತಹದ್ದನ್ನು ಒಬ್ಬರೇ ಕೈಗೊಂಡು ಸಾಧಿಸಿದರು. ಸಿರಿಗನ್ನಡ ಅರ್ಥಕೊಶವನ್ನು ತಯಾರಿಸಿದರು. ಯಕ್ಷಗಾನ ಕುರಿತ ಪುಸ್ತಕಗಳನ್ನು ಬರೆದರು. ಸ್ವತಃ ಹಲವು ಪ್ರಯೋಗಗಳನ್ನು ನಡೆಸಿದರು. ಶಿಲ್ಪಕಲೆ, ಚಿತ್ರಕಲೆಗಳ ಕುರಿತಾದ ಪುಸ್ತಕಗಳನ್ನು ಬರೆದರು. ಸ್ವತಃ ಚಿತ್ರ ರಚನೆಯನ್ನೂ ಮಾಡಿದರು. ಚಲನಚಿತ್ರ ನಿರ್ಮಿಸಿದರು, ನಿರ್ದೇಶಿಸಿದರು. ನಾಟಕ, ಯಕ್ಷಗಾನಗಳಲ್ಲಿ ನಟಿಸಿದರು. ನಲವತ್ತಕ್ಕೂ ಹೆಚ್ಚು…
ಕುಂದಾಪುರ: ಗೊಂಬೆಯಾಟದ ಉಳಿವಿಗಾಗಿ ಶ್ರಮಿಸುತ್ತಿರುವ ಉಪ್ಪಿನಕುದ್ರು ‘ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ’ಯ ನೇತಾರ ಹಾಗೂ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಇವರು ಹೆರಿಟೇಜ್, ಮ್ಯೂಜಿಯಂ ಮತ್ತು ಡಾಕ್ಯೂಮೆಂಟೇಶನ್ ಸೆಂಟರ್ಸ್ ಕಮಿಷನ್ ಆಫ್ ಯುನಿಮಾ ಇಂಟರ್ನ್ಯಾಷನಲ್ ಇದರಿಂದ ಕೊಡಮಾಡುವ “ಹೆರಿಟೇಜ್ ಪ್ರಶಸ್ತಿ 2024’ಕ್ಕೆ ಭಾಜನರಾಗಿದ್ದಾರೆ. ಕರಾವಳಿ ಜಾನಪದ ರಂಗ ಕಲೆಗಳಲ್ಲಿ ಉಪ್ಪಿನಕುದ್ರು ಯಕ್ಷಗಾನ ಸೂತ್ರದ ಗೊಂಬೆಯಾಟ ಕಲೆ ಅತೀ ವಿಶೇಷ ಹಾಗೂ ವಿಶಿಷ್ಟವಾದದ್ದು. 350 ವರ್ಷದ ಹಿಂದೆ ಪ್ರಾರಂಭಗೊಂಡು ಇಂದಿಗೆ 6ನೇ ತಲೆಮಾರಿನಲ್ಲಿ ನಡೆಯುತ್ತಿರುವ ಈ ಕಲೆ ಭಾಸ್ಕರ ಕಾಮತ್ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಸರಕಾರದ ಯಾವುದೇ ಧನಸಹಾಯ ನಿರೀಕ್ಷಿಸದೇ ಮುಂದುವರಿಯುತ್ತಿರುವ ಈ ಜಾನಪದ ಕಲೆ ಅನೇಕ ಮಹತ್ತರ ಕಾರ್ಯಗಳನ್ನು ಮಾಡುವ ಮೂಲಕ ಕಲಾಸಕ್ತರ ಗಮನ ಸೆಳೆದಿದೆ. ಉಪ್ಪಿನಕುದ್ರು ಗ್ರಾಮದಲ್ಲಿ “ಗೊಂಬೆಯಾಟ ಅಕಾಡೆಮಿ” ಚಿಂತನೆಯಡಿ ನಿರಂತರವಾಗಿ ತನ್ನ ಸೇವೆಯನ್ನು ನೀಡುತ್ತಾ ಬಂದಿರುವ ಸಂಸ್ಥೆಯು ಗೊಂಬೆಯಾಟ ಹೊರತುಪಡಿಸಿ ವಿವಿಧ ಕಲೆಗಳಿಗೂ ವೇದಿಕೆಯಾಗಿದ್ದು ಅದರ 100ನೇ ತಿಂಗಳ ಕಾರ್ಯಕ್ರಮದ ಹೊತ್ತಿನಲ್ಲಿಯೇ…
ಉಡುಪಿ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಗಾಂಧಿನಗರ, ಬ್ರಹ್ಮಾವರ ಉಡುಪಿ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ 2024ನೇ ಸಾಲಿನ ‘ಹೊಸ ನಾಟಕ ತಯಾರಿ ಶಿಬಿರ’ದ ಉದ್ಘಾಟನಾ ಸಮಾರಂಭವು ದಿನಾಂಕ 10 ಅಕ್ಟೋಬರ್ 2024ರಂದು ಸಾಲಿಕೇರಿಯ ಅಂಬೇಡ್ಕರ್ ಭವನದಲ್ಲಿ ನೆರವೇರಿತು. ಹೊಸ ನಾಟಕ ತಯಾರಿ ಶಿಬಿರವನ್ನು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರಂಗಕರ್ಮಿ ರಾಜು ಮಣಿಪಾಲ ಇವರು ಉದ್ಘಾಟಿಸಿದರು. ಬಳಿಕ ಮಾತನಾಡಿ “ಕಲಾವಿದ ಎಲ್ಲದಕ್ಕೂ ಒಗ್ಗಬೇಕು, ರಂಗಕರ್ಮಿ ಯಾವುದೇ ಆಮಿಷಕ್ಕೊಳಗಾಗದೇ ತನ್ನ ನಿಲುವನ್ನ ಪ್ರದರ್ಶಿಸಬೇಕು” ಎಂದು ಅಭಿಪ್ರಾಯಪಟ್ಟರು. ಈ ವೇಳೆ ಯುವ ಸಾಹಿತಿ ಸಚಿನ್ ಅಂಕೋಲಾ ಉಪಸ್ಥಿತರಿದ್ದರು. ಮಂದಾರದ ಕಾರ್ಯದರ್ಶಿ ಪ್ರಸಾದ್ ಬ್ರಹ್ಮಾವರ, ನಿರ್ದೇಶಕರಾದ ರೋಹಿತ್ ಎಸ್. ಬೈಕಾಡಿ ಸೇರಿ ತಂಡದ ಸದಸ್ಯರೆಲ್ಲರೂ ಭಾಗಿಯಾಗಿದ್ದರು.