Author: roovari

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ವತಿಯಿಂದ ‘ಚಿತ್ಪಾವನಿ ಭಾಷಾ ಕವಿಗೋಷ್ಠಿ’ ಕಾರ್ಯಕ್ರಮವು ದಿನಾಂಕ 29 ಸೆಪ್ಟೆಂಬರ್ 2024ರಂದು ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆಯಿತು. ಗೋಷ್ಠಿಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ 47 ಕವಿಗಳು ಶುದ್ಧ ಚಿತ್ಪಾವನಿ ಭಾಷೆಯಲ್ಲಿ ಕವನಗಳನ್ನು ವಾಚಿಸಿ. ಪ್ರೇಕ್ಷಕರನ್ನು ರಂಜಿಸಿದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಶ್ರೀಮತಿ ಸಂಧ್ಯಾ ಪಾಳಂದ್ಯೆ ಗೋಷ್ಠಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಅನಂತ ತಾಹ್ಮಾನ್ಕಾರ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶ್ರೀ ನಾರಾಯಣ ಫಡಕೆ ಮತ್ತು ಕಾರ್ಯಕಾರಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು ಮೂರುವರೆ ಘಂಟೆಗಳ ಕಾಲ ನಡೆದ ಈ ಕವಿಗೋಷ್ಠಿಯಲ್ಲಿ 160ಕ್ಕಿಂತಲೂ ಹೆಚ್ಚು ಪ್ರೇಕ್ಷಕರು ಚಿತ್ಪಾವನಿ ಭಾಷೆಯಲ್ಲಿನ ಕವನಗಳನ್ನು ಸವಿದರು. ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಉಷಾ ಮೆಹೆಂದಳೆ ಅತಿಥಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿ ಶ್ರೀ ಅನಂತ ತಾಹಮನ್ಕಾರ್ ಕವನಗಳ ಗುಣಮಟ್ಟದ ಬಗ್ಗೆ ಮಾಹಿತಿ ನೀಡಿ, ಗೋಷ್ಠಿಯ ಕವನಗಳ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತ…

Read More

ಮಂಗಳೂರು : ಎಂ.ಸಿ.ಸಿ. ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಫ್ಲೊಯ್ಡ್ ಕಿರಣ್ ಮೊರಾಸ್ ಇವರಿಗೆ ‘ಲಿಯೊ ರೊಡ್ರಿಗಸ್ ದತ್ತಿ ಕಿಟಾಳ್ ಯುವ ಪುರಸ್ಕಾರ’ ಪ್ರದಾನ ಕಾರ್ಯಕ್ರಮವು ದಿನಾಂಕ 05 ಅಕ್ಟೋಬರ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ವಿಧಾನ ಪರಿಷತ್ ಶಾಸಕ ಶ್ರೀ ಐವನ್ ಡಿ’ಸೋಜಾ ಇವರು ಮಾತನಾಡಿ “ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ಸಾಹಿತ್ಯಕ್ಕಿದೆ. ರಾಜಕಾರಣಿಗಳಿಗೆ ಇರುವ ಹಾಗೆ ಸಾಹಿತಿಗಳಿಗೆ ಮಿತಿ – ಮುಲಾಜುಗಳಿಲ್ಲ. ಅವರು ನೇರವಾಗಿ ಮಾತನಾಡುತ್ತಾರೆ, ಬರೆಯುತ್ತಾರೆ. ಆದುದರಿಂದ ಸಾಹಿತಿಗಳನ್ನು ಸಮಾಜ ಸುಧಾರಣೆಯ ಸೂತ್ರದಾರರು ಎನ್ನಬಹುದು. ಸಾಹಿತ್ಯ ಮತ್ತು ಸಮಾಜ ಬೆಳೆಯಲು ವಿಮರ್ಶೆ ಬಹಳ ಮುಖ್ಯವಾದುದು. ನಾವೆಲ್ಲರೂ ವಿಮರ್ಶೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸಬೇಕು.” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಶಸ್ತಿ ಪೋಷಕರಾದ ಲಿಯೊ ರೊಡ್ರಿಗಸ್ ಅಬುದಾಬಿಯಿಂದ ವಿಡಿಯೊ ಸಂದೇಶದ ಮೂಲಕ ಪ್ರಶಸ್ತಿ ವಿಜೇತರಿಗೆ ಶುಭಹಾರೈಸಿದರು. ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಕಿರಣ್ ಮೊರಾಸ್ ಇವರಿಗೆ ಶುಭ ಹಾರೈಸಿ “ಲಿಯೊ ರೊಡ್ರಿಗಸ್ ಅವರು ಕಳೆದ ಹತ್ತು ವರ್ಷಗಳಿಂದ ಯುವ…

Read More

ಪುತ್ತೂರು : ಕಳೆದ 35 ವರ್ಷಗಳಿಂದ ಉಪನ್ಯಾಸಕಿಯಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಶ್ರೀಮತಿ ಉಷಾ ಕೆ. ಇವರು ನಿರಂತರವಾಗಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದ ವೈಚಾರಿಕ – ಮಾನವೀಯ ಮೌಲ್ಯಗಳ್ಳ ಲೇಖನಗಳ ಸಂಗ್ರಹ ‘ತೆರೆದ ಗವಾಕ್ಷಿ’ ಕೃತಿಯು ದಿನಾಂಕ 12 ಅಕ್ಟೋಬರ್ 2024 ಶನಿವಾರ ಸಂಜೆ 4-30 ಗಂಟೆಗೆ ಪುತ್ತೂರಿನ ಅನುರಾಗ ವಠಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಶ್ರೀಮತಿ ಉಷಾ ಕೆ. ಇವರು ಸುಳ್ಯದ ಸರಕಾರಿ ಜೂನಿಯರ್ ಕಾಲೇಜು ಹಾಗೂ ಕಬಕದ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಕೋಡಿಂಬಾಡಿಯಲ್ಲಿ ವಾಸವಿರುವ ಇವರು ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಹಾಗೂ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ವಿಷ್ಣು ಭಟ್ ಪತ್ನಿಯಾಗಿದ್ದಾರೆ. ಈ ಕೃತಿಯನ್ನು ಪುತ್ತೂರಿನ ರಾಜೇಶ್ ಪವರ್ ಪ್ರೆಸ್ ಇದರ ಮಾಲಕರಾದ ಶ್ರೀ ರಘುನಾಥ ರಾವ್ ಇವರು ಲೋಕಾರ್ಪಣೆಗೊಳಿಸಲಿದ್ದಾರೆ. ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿ ಇವರು ಕೃತಿ ಕುರಿತು, ಸಾರಸ್ವತ ಸೌರಭದ ವ್ಯವಸ್ಥಾಪಕ ಸಂಪಾದಕರಾದ ಶ್ರೀ ಸುಳ್ಳಿ ರಾಧಾಕೃಷ್ಣ…

Read More

ಸುರತ್ಕಲ್ : ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಮಂಡಳಿ ಕುಳಾಯಿ ಇದರ ಸದಸ್ಯರಿಂದ ‘ರಾಜ ದಂಡಕ’ ಪ್ರಸಂಗದ ಯಕ್ಷಗಾನ ಬಯಲಾಟವು ನವರಾತಿ ಮಹೋತ್ಸವದ ಪ್ರಯುಕ್ತ ಸುರತ್ಕಲ್ ಇಲ್ಲಿನ ಪುರಾತನ ಮಾರಿಯಮ್ಮ ದೇವಸ್ಥಾನದಲ್ಲಿ ದಿನಾಂಕ 03 ಅಕ್ಟೋಬರ್ 2024 ರಂದು ನಡೆಯಿತು . ಶ್ರೀ ದಿನಕರ ಪಚ್ಚನಾಡಿ ಇವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ಸತೀಶ್ ಶೆಟ್ಟಿ ಬೊಂದೆಲ್, ಹರಿಪ್ರಸಾದ ಕಾರಂತ, ಸೂರಜ್ ಆಚಾರ್ಯ ಮೂಲ್ಕಿ, ಜಯರಾಮ ಆಚಾರ್ಯ ಚೇಳಾಯ್ರು ಹಾಗೂ ಮಾಧವ ಮಯ್ಯ ಸಹಕರಿಸಿದರು. ಮುಮ್ಮೇಳದಲ್ಲಿ ವೇದವ್ಯಾಸ ರಾವ್ ಕುತ್ತೆತ್ತೂರು, ವಿನೋದ್ ಕುತ್ತೆತ್ತೂರು, ನಂದಪ್ರಸಾದ್, ಕಾರುಣ್ಯನಿಧಿ, ಶ್ರೀನಿಧಿ, ಪ್ರಜ್ವಲ್ ಐತಾಳ್ ಕುಳಾಯಿ, ಶ್ರೀ ವಾಸುದೇವ ಆಚಾರ್ಯ, ಶ್ರೀರಂಜಿತ್, ದಿವಾಕರ ಕುಳಾಯಿ, ಹೃಷಿಕೇಶ ಹೆಬ್ಬಾರ್, ಅದ್ವೈತ್ ಮಯ್ಯ, ಸಚಿನ್ ಪೂಜಾರಿ, ವಿಘ್ನೇಶ್, ರಾಘವೇಂದ್ರ ಹೆಬ್ಬಾರ್ ಹಾಗೂ ಗುರುಪ್ರಸಾದ್ ಕಾರಂತ ಸಾರಪಾಡಿ ಪಾತ್ರಗಳನ್ನು ನಿರ್ವಹಿಸಿದರು.

Read More

ಹಾಸನ : ಹಾಸನದ ಮಾಣಿಕ್ಯ ಪ್ರಕಾಶನ (ರಿ.) ಸಂಸ್ಥೆಯು 2015ರಿಂದಲೂ ವೈವಿಧ್ಯಮಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ವಿವಿಧ ಲೇಖಕರ 80ಕ್ಕೂ ಹೆಚ್ಚು ಕೃತಿಗಳನ್ನು ಮುದ್ರಣ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ನೀಡುವುದರ ಜೊತೆಗೆ ದಾನಿಗಳ ಸಹಕಾರದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ದತ್ತಿ ಪುರಸ್ಕಾರ ನೀಡಿ ಗೌರವಿಸುತ್ತಿದೆ. ಈ ನಿಟ್ಟಿನಲ್ಲಿ 2024ರ ದತ್ತಿ ಪುರಸ್ಕಾರಗಳಿಗೆ 2023ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ವಿವಿಧ ಪ್ರಕಾರದ ಕೃತಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನಿರೀಕ್ಷೆಗೂ ಮೀರಿ ಕೃತಿಗಳನ್ನು ಲೇಖಕರು ಕಳುಹಿಸಿದ್ದರು. ಹಿರಿಯ ಸಾಹಿತಿಗಳಾದ ತುರುವೇಕೆರೆ ಪ್ರಸಾದ್, ಕೊಟ್ರೇಶ್ ಎಸ್. ಉಪ್ಪಾರ್, ಎನ್. ಶೈಲಜಾ ಹಾಸನ, ಪದ್ಮಾವತಿ ವೆಂಕಟೇಶ್, ನೀಲಾವತಿ ಸಿ.ಎನ್., ನಾಗರಾಜ್ ದೊಡ್ಡಮನಿ, ಎಚ್.ಎಸ್. ಬಸವರಾಜ್, ವಾಸು ಸಮುದ್ರವಳ್ಳಿ, ಡಾ. ಹಸೀನಾ ಎಚ್.ಕೆ., ಲತಾಮಣಿ ಎಂ.ಕೆ. ತುರುವೇಕೆರೆ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಈ ಕೆಳಕಂಡಂತೆ ದತ್ತಿ ಪ್ರಶಸ್ತಿಗಳಿಗೆ ಅರ್ಹ ಕೃತಿಗಳನ್ನು…

Read More

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ಮೂಲ್ಕಿ ಮಯೂರಿ ಫೌಂಡೇಷನ್ ವತಿಯಿಂದ ಆಯೋಜಿಸಿದ ‘ಮಾರ್ನೆಮಿಯ ಬಹುಬಾಷಾ ಕವಿಗೋಷ್ಠಿ’ ದಿನಾಂಕ 08 ಅಕ್ಟೋಬರ್ 2024ರ ಮಂಗಳವಾರದಂದು ಮಂಗಳೂರಿನ ಉರ್ವಾಸ್ಟೋರಿನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ನಡೆಯಿತು. ಇಲ್ಲಿ ಕವಿಗಳು 13 ಭಾಷೆಗಳಲ್ಲಿ ತಮ್ಮ ಭಾವ ಲಹರಿಗೆ ಕವಿತೆಯ ರೂಪ ನೀಡಿದರು. ಕರಾವಳಿಯಲ್ಲಿ ಮಾರ್ನೆಮಿಯ (ಮಹಾನವಮಿ) ಸಡಗರ, ಇಲ್ಲಿನ ಕೌಟುಂಬಿಕ ಬಂಧ, ಪ್ರಾಕೃತಿಕ ನಂಟು, ಆಧುನಿಕತೆಯಿಂದ ಅರ್ಥ ಕಳೆದುಕೊಳ್ಳುತ್ತಿರುವ ಆಚರಣೆಗಳ ಚಿತ್ರಣಗಳನ್ನು ಕವಿತೆಗಳ ಸಾಲುಗಳಲ್ಲಿ ಪೋಣಿಸಿದರು. ಕವಿಗಳು ಬಳಸಿದ ಭಾಷೆ ಬೇರೆ ಬೇರೆಯಾದರೂ ಭಾವಗಳು ಶೋತೃಗಳ ಎದೆಗಿಳಿದವು. ತುಳು, ಕೊಂಕಣಿ, ಬ್ಯಾರಿ ಭಾಷೆಗಳ ಜೊತೆಗೆ ಕೊರಗ, ಚಿತ್ಪಾವನ, ಹವ್ಯಕ, ಕರಾಡ, ಶಿವಳ್ಳಿ ಭಾಷೆಗಳ ಕವನಗಳನ್ನು ಕವಿಗಳು ವಾಚಿಸಿದರು. ಕೊರಗ ಭಾಷೆಯಲ್ಲಿ ಕವಿತೆ ವಾಚಿಸಿದ ಬಾಬು ಕೊರಗ ಪಾಂಗಳ ಬುಡಕಟ್ಟು ಸಮುದಾಯವು ಮಾರ್ನೆಮಿ ಹಬ್ಬವನ್ನು ಹೇಗೆ ಚೋದ್ಯದಿಂದ ಕಾಣುತ್ತದೆ ಎಂಬುದನ್ನು ಕಟ್ಟಿಕೊಟ್ಟರು. ತುಳುವಿನಲ್ಲಿ ಕವಿತೆ…

Read More

ಪುತ್ತೂರು : ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯ ಬೊಳುವಾರು ಪುತ್ತೂರು ಇದರ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಹಾಗೂ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ಸಹಯೋಗದಲ್ಲಿ ನಡೆಸಲ್ಪಡುವ ಪಾಕ್ಷಿಕ ಕಾರ್ಯಕ್ರಮದ ಪ್ರಥಮ ತಾಳಮದ್ದಳೆ ಕೂಟವು ದಿನಾಂಕ 08 ಅಕ್ಟೋಬರ್ 2024ರಂದು ಗಣೇಶ್ ಕೊಲೆಕ್ಕಾಡಿ ವಿರಚಿತ ‘ಸೌಗಂಧಿಕಾ ಹರಣ’ ಎಂಬ ಆಖ್ಯಾನದೊಂದಿಗೆ ಶ್ರೀ ಸುಬ್ರಹ್ಮಣ್ಯ ನಗರ ಮೈದಾನದ ವೇದಿಕೆಯಲ್ಲಿ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಜಯಪ್ರಕಾಶ್ ನಾಕೂರು, ಸತೀಶ್ ಇರ್ದೆ, ಆನಂದ ಸವಣೂರು ಹಾಗೂ ಚೆಂಡೆ ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪಿ.ಟಿ. ಜಯರಾಮ ಭಟ್, ಮುರಳೀಧರ ಕಲ್ಲೂರಾಯ, ಮಾಸ್ಟರ್ ಪರೀಕ್ಷಿತ್, ಮಾಸ್ಟರ್ ಅಮೋಘ ಶಂಕರ್ ಹಾಗೂ ಮಾಸ್ಟರ್ ಅಭಯಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಮತ್ತು ಶುಭಾ ಜೆ.ಸಿ. ಅಡಿಗ (ಭೀಮ), ಗುಡ್ಡಪ್ಪ ಬಲ್ಯ (ಹನೂಮಂತ), ದುಗ್ಗಪ್ಪ ನಡುಗಲ್ಲು (ಧರ್ಮರಾಯ), ಪ್ರೇಮಲತಾ ರಾವ್ (ವೇದವ್ಯಾಸ), ಕಿಶೋರಿ ದುಗ್ಗಪ್ಪ…

Read More

ಅರಸೀಕೆರೆ: ಅರಸೀಕೆರೆ ಗ್ರಾಮದ ಜನಪ್ರಿಯ ನಾಟಕಕಾರ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೂಜಾರ್ ಚಂದ್ರಪ್ಪ ದಿನಾಂಕ 08 ಅಕ್ಟೋಬರ್ 2024ರ ಮಂಗಳವಾರದಂದು ನಿಧನರಾದರು. ಅವರಿಗೆ 76 ವರ್ಷ ವ್ಯಯಸ್ಸಾಗಿತ್ತು. ಪೂಜಾ‌ರ್ ಚಂದ್ರಪ್ಪ ಕೇವಲ ಎರಡನೇ ತರಗತಿ ಓದಿದ್ದರೂ ರಂಗಭೂಮಿ ಮತ್ತು ಸಂಗೀತದ ಅಪಾರ ಆಸಕ್ತಿ ಹೊಂದಿದ್ದರು. ‘ದಂಡಿನ ದುರ್ಗಮ್ಮ’ (ದುರ್ಗಮಾತಾ ಅವತಾರ) ನಾಟಕದಲ್ಲಿ ಮೊದಲ ಬಾರಿಗೆ ದೇವಿಯ ಪಾತ್ರ ನಿರ್ವಹಿಸಿದ್ದರು. ಇವರ ಈ ಪಾತ್ರ ಜನಪ್ರಿಯತೆ ಗಳಿಸಿ ನಾಟಕವು ರಾಜ್ಯದ ವಿವಿದೆಡೆಗಳಲ್ಲಿ 267 ಪ್ರದರ್ಶನ ಕಂಡಿತ್ತು. ‘ಜಗಜ್ಯೋತಿ ಬಸವೇಶ್ವರ’, ‘ದುರ್ಗದ ದೊರೆ ಅರ್ಥಾತ್ ರಾಜ್ಯದಲ್ಲಿ ಗಂಡುಗಲಿ’ ಸೇರಿದಂತೆ ಐವತ್ತಕ್ಕೂ ಹೆಚ್ಚಿನ ನಾಟಕದಲ್ಲಿ ಇವರು ಮುಖ್ಯ ಪಾತ್ರ ನಿರ್ವಹಿಸಿದ್ದರು. ‘ಕೊಂಡು ತಂದ ಗಂಡ’, ‘ಹೆಜ್ಜೆ ತಪ್ಪದ ಹೆಣ್ಣು’, ‘ಗಂಡನ ಮಾನ’, ‘ಪತಿ ಭಕ್ತ’ ಸೇರಿದಂತೆ ಅನೇಕ ನಾಟಕದ ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದರು. ‘ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ’, ‘ಗ್ರಾಮೀಣ ಸಿರಿ’, ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ಗ್ರಾಮೀಣ ರಂಗ…

Read More

ಮಂಗಳೂರು : ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪಾಂಡೇಶ್ವರ ಇದರ ಸುವರ್ಣ ಸಂಭ್ರಮ ಆಚರಣೆಯ ಸಂಭ್ರಮದಲ್ಲಿ ‘ಸುಧನ್ವ ಮೋಕ್ಷ’ ಪ್ರಸಂಗದ ತಾಳಮದ್ದಳೆ ದಿನಾಂಕ 08 ಅಕ್ಟೋಬರ್ 2024ರಂದು ಕಡೆಕಾರಿನ ಶ್ರೀಕ್ಷೇತ್ರ ಗುರುವನದ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಯೋಗೀಶ್ ಕುಮಾರ್ ಜೆಪ್ಪು ಹಾಗೂ ಕೊರಗಪ್ಪ ಉಪಸ್ಥಿತರಿದ್ದರು. ಹಿಮ್ಮೇಳ ಮತ್ತು ಅರ್ಥದಾರಿಗಳಾಗಿ ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ, ಹಿರಿಯ ಕಲಾವಿದ ಗುಂಡ್ಯಡ್ಕ ಈಶ್ವರ ಭಟ್, ನವೀನ್, ಮುಡಿಪು ಪ್ರಶಾಂತ ಹೊಳ್ಳ, ಕುಶಾಲ ಮುಡಿಪು, ರಾಧಾಕೃಷ್ಣ, ವರ್ಕಾಡಿ ಮಾಧವ ನಾವಡ, ಸುಧಾಕರ ಸಾಲ್ಯಾನ್, ರಾಧಾಕೃಷ್ಣ ಭಟ್ ಕುಳಾಯಿ ಕಾರ್ಯಕ್ರಮ ನಡೆಸಿಕೊಟ್ಟರು.

Read More

ವಿಜಯಪುರ : ಬಿಜಾಪುರದ ಕಂದಗಲ್ಲ ಹನಮಂತರಾಯ ರಂಗಮಂದಿರದಲ್ಲಿ ನೂರಾರು ಕಂಠಗಳಲ್ಲಿ ಹಲಗೆ ಬಡಿತದ ಸದ್ದು ಮೀರಿ ಹೋರಾಟದ ಹಾಡುಗಳು ರಿಂಗಣಿಸುತ್ತಿದ್ದವು. ಅಲ್ಲಿದ್ದ ಮೈಸೂರಿನ ಗೆಳೆಯ ಜನ್ನಿ ಇವರಿಗೆ ಪಕ್ಕನೆ ನೆನಪಾಗಿದ್ದು 1974ರ ದ.ಲೇ.ಕ. ಸಮಾವೇಶ (ದಲಿತ ಲೇಖಕರ ಕಲಾವಿದರ ಸಮಾವೇಶ) ನಾವೇ ಮರೆತ ನಮ್ಮದೇ ಚರಿತ್ರೆಯನ್ನು ಮರುಕಳಿಸಿದ ‘ಜನಕಲಾ ಸಾಂಸ್ಕೃತಿಕ ಮೇಳ’ ನಿಜಕ್ಕೂ ಇದೊಂದು ಐತಿಹಾಸಿಕ ಸಮಾವೇಶ. ಕಳೆದ ಐವತ್ತು ವರ್ಷಗಳಿಂದ ನಾನು ಅನೇಕ ಸಮಾವೇಶ/ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಈ ಮೇಳಕ್ಕೆ ಇರುವ ತಾಕತ್ತು ಬೇರೆ ಎಂದರು. ಪ್ರಗತಿಪರ ಅಕ್ಷರ ಯಜಮಾನಿಕೆ ನಿರ್ಲಕ್ಷ್ಯ ಮಾಡಿದ ಸಮುದಾಯ ಪ್ರತಿನಿಧಿಗಳಾಗಿದ್ದ ಓದು ಬರದ ಐದು ಹಿರಿಯ ಮಹಿಳೆಯರಲ್ಲಿ ಕೆಲವರ ಕೈಗಳು ನಡುಗುತ್ತಿದ್ದರೂ ಅವರ ದನಿಗಳಲ್ಲಿ ನಡುಕವಿರಲಿಲ್ಲ. ಎಂಥ ದನಿ, ತಮ್ಮ ಎದೆಗಳಲ್ಲಿ ಹುದುಗಿರುವ ಅಂಬೇಡ್ಕರ್ ರನ್ನು ಹಾಡಾಗಿಸುತ್ತಿದ್ದರು. ಅವರೆಷ್ಟು ಪ್ರತಿಭಾವಂತರೆಂದರೆ ಹೋರಾಟದ ಹಾಡು ಹಾಡುತ್ತಲೇ ಐವತ್ತು ವರ್ಷ ಕಳೆದವರು ಎಂದರು ಗೆಳೆಯ ಜನ್ನಿ. ಈ ನಾಡಿಗೆ ಇವರ ದನಿಗಳನ್ನು ಪರಿಚಯಿಸುವ ಕೆಲಸ ಇನ್ನಾದರೂ ಆಗಬೇಕು.…

Read More