Author: roovari

ಬಂಟ್ವಾಳ : ಮಕ್ಕಳ ಕಲಾ ಲೋಕ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕವು ನಿರ್ವಹಿಸುವ ಬಂಟ್ವಾಳ ತಾಲೂಕು 18ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವು ಶಂಭೂರು ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಿರ್ಮಿಸಲಾಗುವ ರಾಮಚಂದ್ರ ರಾವ್ ಸಭಾಂಗಣದ ವಿ.ಮ. ಭಟ್ ವೇದಿಕೆಯಲ್ಲಿ ದಿನಾಂಕ 19 ನವೆಂಬರ್ 2024ರಂದು ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆತಿಥೇಯ ಸಂಸ್ಥೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕುಮಾರಿ ಪ್ರೇಕ್ಷಾ ಆಯ್ಕೆಯಾಗಿರುತ್ತಾರೆ ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಹೇಮಚಂದ್ರ ಭಂಡಾರದ ಮನೆ ಮತ್ತು ಪ್ರಧಾನ ಕಾರ್ಯದರ್ಶಿ ಜಯರಾಮ ಡಿ. ಪಡ್ರೆ ಜಂಟಿ ಹೇಳಿಕೆ ನೀಡಿದ್ದಾರೆ. ಪ್ರೇಕ್ಷಾ ಇವರು ಶಂಭೂರು ಗ್ರಾಮದ ಸೀನೆರೆ ಪಾಲು ಮೋಹಿನಿ ಮತ್ತು ಸುಣ್ಣಾಜೆ ದಿನೇಶ್ ಇವರ ದ್ವಿತೀಯ ಪುತ್ರಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿಯ ನಟ್ಟಿಬೈಲು ವೇದಶಂಕರ ನಗರದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಿದ್ದು, ಪ್ರಸ್ತುತ ಶಂಭೂರು ಶಾಲೆಯಲ್ಲಿ ಆರನೇ ತರಗತಿಯಿಂದ ಕಲಿಕೆ ಮುಂದುವರಿಸುತ್ತಿದ್ದಾರೆ. ಕಲಿಕೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಇವರು ಯಕ್ಷಗಾನದಲ್ಲಿಯೂ…

Read More

ಉಡುಪಿ : 2024ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರಕಾರ ನೀಡಿದ ‘ಸುವರ್ಣ ಸಂಭ್ರಮ ಪ್ರಶಸ್ತಿ’ಯನ್ನು ಪಡೆದ ಪೇತ್ರಿ ಮಂಜುನಾಥ ಪ್ರಭುಗಳನ್ನು ಅವರು ಹಿಂದೆ ಗುರುವಾಗಿ ಸೇವೆ ಸಲ್ಲಿಸಿದ್ದ ಯಕ್ಷಗಾನ ಕೇಂದ್ರ, ಇಂದ್ರಾಳಿಯಲ್ಲಿ ಯಕ್ಷರಂಗದ ಸದಸ್ಯರು ಹಾಗೂ ಗುರುಗಳ ಸಮ್ಮುಖದಲ್ಲಿ ದಿನಾಂಕ 05 ನವಂಬರ್ 2024 ರಂದು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಯಿಸಿ ಮಾತನಾಡಿದ ಪೇತ್ರಿ ಮಂಜುನಾಥ ಪ್ರಭು “ಶಿವರಾಮ ಕಾರಂತರ ಆದೇಶದಂತೆ ತಾನು ಯಕ್ಷಗಾನ ಮೇಳವನ್ನು ಬಿಟ್ಟು ಕೇಂದ್ರದ ಗುರುವಾಗಿ ಬಂದೆ. ಪರಂಪರೆಯ ಯಕ್ಷಗಾನ ಕಲೆಯನ್ನು ಉಳಿಸಿಕೊಂಡು ಹೋಗಬೇಕಾದ ಅಗತ್ಯತೆಯಿದೆ.” ಎಂದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಮಾತನಾಡಿ “ಮಂಜುನಾಥ ಪ್ರಭುಗಳಿಗೆ ಯಕ್ಷಗಾನ ಕ್ಷೇತ್ರದಲ್ಲಿ ಇರುವ ಜ್ಞಾನ ಹಾಗೂ ಅವರು ನೀಡಿರುವ ಕೊಡುಗೆಗಳು ಆವಿಸ್ಮರಣೀಯ. ಅವರ ಜ್ಞಾನವನ್ನು ಮುಂದಿನ ದಿನಗಳಲ್ಲಿ ಯಕ್ಷಗಾನ ಕೇಂದ್ರದ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳಲಾಗುವುದು.” ಎಂದರು. ಕಾರ್ಯಕ್ರಮದಲ್ಲಿ ಸಲಹಾ ಸಮಿತಿ ಸದಸ್ಯರುಗಳಾದ ಶ್ರೀ ವಿಶ್ವನಾಥ ಶೆಣೈ, ಕೇಂದ್ರದ ಗುರುಗಳು ಹಾಗೂ ಯಕ್ಷರಂಗದ ಸದಸ್ಯರು…

Read More

ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ರಂಗಾಯಣ ಮತ್ತು ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ನಾಕುತಂತಿ – ಚಿನ್ನದ ಹಬ್ಬ’ ಬೇಂದ್ರೆಯವರಿಗೆ ಜ್ಞಾನ ಪೀಠ ಪ್ರಶಸ್ತಿ ಸಿಕ್ಕ 50ನೇ ವರ್ಷದ ಸಂಭ್ರಮವನ್ನು ದಿನಾಂಕ 08 ನವೆಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ಧಾರವಾಡದ ರಂಗಾಯಣ ಆವರಣದಲ್ಲಿರುವ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಶ್ರೀ ಸುನಾಥ ದೇಶಪಾಂಡೆ ಇವರು ಉದ್ಘಾಟನೆ ಮಾಡಲಿದ್ದು, ಡಾ. ರಾಜು ತಾಳಿಕೋಟಿ, ಶ್ರೀಮತಿ ಪುನರ್ವಸು ಬೇಂದ್ರೆ ಮತ್ತು ಡಾ. ರಮಾಕಾಂತ್ ಜೋಶಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೋಷ್ಠಿ 1ರ ಪ್ರಬಂಧ ಮಂಡನೆಯಲ್ಲಿ ಡಾ. ಪ್ರಕಾಶ ಗರುಡ ಇವರಿಂದ ಬೇಂದ್ರೆಯವರ ಜ್ಞಾನಪೀಠ ಭಾಷಣ ಮತ್ತು ಶ್ರೀ ಆನಂದ ಝುಂಜರವಾಡ ಇವರಿಂದ ‘ನಾಕುತಂತಿ’ ವೈಶ್ವಿಕ ಆಶಯ ಹಾಗೂ ಗೋಷ್ಠಿ 2ರ ಪ್ರಬಂಧ ಮಂಡನೆಯಲ್ಲಿ ಡಾ. ಕೃಷ್ಣ ಕಟ್ಟಿ ಇವರಿಂದ ‘ನಾಕುತಂತಿ’ ಆರ್ಷೇಯ ದರ್ಶನಗಳು ಮತ್ತು ಡಾ. ಶ್ರೀರಾಮ ಭಟ್ ಇವರಿಂದ ‘ದ.ರಾ. ಬೇಂದ್ರೆ ಕವಿತೆಯಲ್ಲಿ…

Read More

ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ಅಂಗವಾಗಿ‌ ‘ನೃತ್ಯಾಮೃತ 11’ ಸರಣಿ ನೃತ್ಯ ಕಾರ್ಯಕ್ರಮವು ಮಂಗಳೂರು ಪುರಭವನದಲ್ಲಿ ದಿನಾಂಕ 03 ನವಂಬರ್ 2024ರಂದು ಪ್ರಸ್ತುತಗೊಂಡಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಮಂಗಳೂರಿನ‌ ಸೌರಭ ಕಲಾ ಪರಿಷತ್ತಿನ ಗುರು ಡಾ. ಶ್ರೀವಿದ್ಯಾ ಮುರಳೀಧರ್ ಇವರು ಮಾತನಾಡಿ “ಭರತನಾಟ್ಯ ಕಲಾವಿದೆಯಾಗಿ ಗುರುವಾಗಿ, ಜತೆಗೆ ವಿವಿಧ ಕಲಾ ಪ್ರಕಾರಗಳಲ್ಲಿನ ತಮ್ಮ ತೊಡಗಿಸಿಕೊಳ್ಳುವಿಕೆಯ ಹಿನ್ನೆಲೆಯಲ್ಲಿ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಕನ್ನಡ ಭಾಷೆಯಲ್ಲಿ ನೃತ್ಯಬಂಧಗಳನ್ನು ರಚಿಸಿ ನೃತ್ಯ ಸಾರಸ್ವತಕ್ಕೆ ನೀಡಿದ ಕೊಡುಗೆ ಗಮನಾರ್ಹ. ಅವುಗಳಲ್ಲಿ ಮೂರು ವಿಭಿನ್ನ ಭಾವಗಳ ಪದವರ್ಣಗಳನ್ನು (ಶೃಂಗಾರ, ಭಕ್ತಿ ಮತ್ತು ದೇಶ ಭಕ್ತಿ) ನಾಡಿನ ಹೆಸರಾಂತ ಕಲಾವಿದರ ಮೂಲಕ ‘ತ್ರಿವರ್ಣ ದೀಪ’ ಕಾರ್ಯಕ್ರಮದಲ್ಲಿ ಬೆಳಕಾಗಿಸಿದ್ದು, ಅಭಿನಂದನೀಯ” ಎಂದು ತಿಳಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು “ನೃತ್ಯಾಮೃತದಲ್ಲಿ ಪ್ರತಿ ಬಾರಿಯೂ ಹೊಸತನದೊಂದಿಗೆ ಕಾರ್ಯಕ್ರಮ ಸಂಯೋಜಿಸುತ್ತಿರುವುದು ಶ್ಲಾಘನೀಯ” ಎಂದರು. ಸಮಾರಂಭದ ಮತ್ತೋರ್ವ ಮುಖ್ಯ ಅಭ್ಯಾಗತರಾಗಿದ್ದ ಉಡುಪಿಯ ನೃತ್ಯ ನಿಕೇತನದ ಗುರು…

Read More

ಬೆಂಗಳೂರು : ಲಾಸ್ಯ ಅಕಾಡೆಮಿ ಆಫ್ ಡಾನ್ಸ್ ಇದರ ವತಿಯಿಂದ ದಿನಾಂಕ 08 ನವೆಂಬರ್ 2024ರಂದು ಸಂಜೆ 6-30 ಗಂಟೆಗೆ ಮತ್ತು ದಿನಾಂಕ 09 ನವೆಂಬರ್ 2024ರಂದು ಮಧ್ಯಾಹ್ನ 3-00 ಗಂಟೆಗೆ ತಾಳ ಜಟಿಲತೆಗಳ ಬಗ್ಗೆ ಹಾಗೂ ದಿನಾಂಕ 09 ನವೆಂಬರ್ 2024ರಂದು ಬೆಳಿಗ್ಗೆ 9-00 ಗಂಟೆಗೆ ಮತ್ತು ದಿನಾಂಕ 10 ನವೆಂಬರ್ 2024ರಂದು ಬೆಳಿಗ್ಗೆ 9-00 ಗಂಟೆಗೆ ದೇವಿ ಸರಸ್ವತಿ ಕುರಿತು ತಿಲ್ಲಾನ ಕಾರ್ಯಾಗಾರವನ್ನು ಬೆಂಗಳೂರಿನ ಸಂಜಯ್ ನಗರದಲ್ಲಿರುವ ಲಾಸ್ಯ ಅಕಾಡೆಮಿ ಆಫ್ ಡಾನ್ಸ್ ಇದರ ಅನುಗ್ರಹ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರಾವಳಿಯ ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಿ ಡಾ. ಲಕ್ಷ್ಮೀರೇಖಾ ಅರುಣ್ ಇವರು ತಿಳಿಸಿರುತ್ತಾರೆ. ನೃತ್ಯ ವಿದ್ಯಾರ್ಥಿಗಳಿಗೆ ಕಲಿಸಿಕೊಡುವ ತಿಲ್ಲಾನವು ಮಂಜುನಾಥ್ ಅವರೇ ರಚಿಸಿ, ನೃತ್ಯ ಸಂಯೋಜಿಸಿದ್ದು, ಈಗಾಗಲೇ 15ಕ್ಕೂ ಮಿಕ್ಕಿದ ನೃತ್ಯ ಗುರುಗಳು ತಮ್ಮದೇ ಸಂಯೋಜನೆಯಲ್ಲಿ ಪ್ರದರ್ಶನ ನಡೆಸಿರುತ್ತಾರೆ.

Read More

ಸುಳ್ಯ : ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು, ಕನ್ನಡ ಸಾಹಿತ್ಯ ಪರಿಷತ್ ಪಂಜ ಹೋಬಳಿ ಘಟಕ, ನೆಹರು ಮೆಮೋರಿಯಲ್ ಕಾಲೇಜು ಐ.  ಕ್ಯೂ. ಎ. ಸಿ. ವಿಭಾಗ ಮತ್ತು ಕನ್ನಡ ಸಂಘ ಇದರ ಅಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 04 ನವಂಬರ್ 2024ರಂದು ನೆಹರು ಮೆಮೋರಿಯಲ್ ಕಾಲೇಜು ಆವರಣದಲ್ಲಿ ನಡೆಯಿತು.  ಕಾರ್ಯಕ್ರಮದಲ್ಲಿ ಕುರುಂಜಿ ಮಹಾಲಿಂಗ ಮಾಸ್ತರ್ ದತ್ತಿನಿಧಿ ಉಪನ್ಯಾಸ ನೀಡಲು ಆಗಮಿಸಿದ ಹಿರಿಯ ಸಾಹಿತಿ ಡಾ‌. ಪ್ರಭಾಕರ ಶಿಶಿಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಕರ್ನಾಟಕದಲ್ಲಿ ಕನ್ನಡ ನುಡಿ, ನೆಲ ಹಾಗೂ ಜಲದ ಪರಿಸ್ಥಿತಿ ಆತಂಕವನ್ನು ಎದುರಿಸುತ್ತಿದ್ದು, ನಮ್ಮ ಸಂಸ್ಕ್ರತಿ ಮತ್ತು ಸಾಹಿತ್ಯದ ಉಳಿವಿಗಾಗಿ ಕನ್ನಡಿಗರಾದ ನಾವೆಲ್ಲರೂ ಪ್ರಾಮಾಣಿಕ  ಪ್ರಯತ್ನ ಮಾಡಿ ನಮ್ಮತನವನ್ನು ಉಳಿಸಿಕೊಳ್ಳಬೇಕು.” ಎಂದರು.   ಕ. ಸಾ. ಪ. ಅದ್ಯಕ್ಷ ಚಂದ್ರಶೇಖರ್ ಪೇರಾಲು ಇವರ  ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಪ್ರಾಂಶುಪಾಲ ಡಾ. ರುದ್ರಕುಮಾರ್ ಹಾಗೂ ಪಿ. ಯು.…

Read More

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವಗ್ರಹ ಗುಡಿಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 04 ನವೆಂಬರ್ 2024ರಂದು ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಎಂಬ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಅಚ್ಯುತ ಪಾಂಗಣ್ಣಾಯ, ಮಾಸ್ಟರ್ ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಡಾ. ಎನ್.ಕೆ. ಬಲ್ಲಾಳ್ (ಶ್ರೀ ರಾಮ), ವೇಣುಗೋಪಾಲ್ ಭಟ್ ಮಾಂಬಾಡಿ (ಲಕ್ಷ್ಮಣ), ಶಾರದಾ ಅರಸ್ (ಸೀತೆ), ಗುಡ್ಡಪ್ಪ ಬಲ್ಯ (ಘೋರ ಶೂರ್ಪನಖಿ), ಶುಭಾ ಅಡಿಗ (ಮಾಯಾ ಶೂರ್ಪನಖಿ), ಭಾರತಿ ಜಯರಾಮ್ ಮತ್ತು ಕಿಶೋರಿ ದುಗ್ಗಪ್ಪ ನಡುಗಲ್ಲು (ಮುನಿಗಳು) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ರಂಗನಾಥ ರಾವ್ ಸಹಕರಿಸಿದರು.

Read More

ಇದು ಒಂದು ಐತಿಹಾಸಿಕ ಕಥೆ ಆಧಾರಿತವಾದ ಅತ್ಯಂತ ವಿಶಿಷ್ಟ ಕೃತಿ.‌ ಭಾರತದ ಯಾವುದೇ ಭಾಗದ ಇತಿಹಾಸವಲ್ಲ. ನಮಗೆ ಯಾರಿಗೂ ಗೊತ್ತಿಲ್ಲದ ಮೂರುಸಾವಿರ ವರ್ಷಗಳಷ್ಟು ಹಿಂದಿನ ಪ್ರಾಚೀನ ಐಗುಪ್ತದ (ಇವತ್ತಿನ ಈಜಿಪ್ಟ್‌) ಇತಿಹಾಸ. ಜಗತ್ತಿನ ನಾಗರಿಕತೆಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಈಜಿಪ್ಟ್‌ ಎಂದು ನಾವು ಕೇಳಿದ್ದೇವೆ. ಆದರೆ ಇಲ್ಲಿ ಈ ಕಾದಂಬರಿಯಲ್ಲಿರುವುದು ಸತ್ಯ ಘಟನೆಗಳ ವರದಿಗಳಿಂದ ತುಂಬಿದ ಇತಿಹಾಸವಲ್ಲ. ಮನುಷ್ಯನ ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಲೋಕಗಳ ರೋಮಾಂಚನಕಾರಿ ಚಿತ್ರಣವಿರುವ ಮನ ಸೆಳೆಯುವ ಕಥೆ. ಪ್ರಜಾಪರಿಪಾಲಕ ರಾಜನೆಂದರೆ ಕೇವಲ ಲೌಕಿಕ ದೃಷ್ಟಿಯಿಂದ ಮಾತ್ರವಲ್ಲ, ಕುರಿಗಳನ್ನು ತನ್ನ ಮಕ್ಕಳಂತೆ ಪ್ರೀತಿಯಿಂದ ಪಾಲಿಸುವ ಕುರುಬನೆಂದು ಐಗುಪ್ತದ ಜನತೆ ನಂಬಿಕೊಂಡು ಬಂದಿದ್ದ ಕಾಲವದು. ಫೆರೋ ಅಹಮೋಸ್ ನ ಮರಣದ ನಂತರ ಆತನ ಪತ್ನಿ, ಚತುರಮತಿ ನುಕಿಯಾ ರಾಜಮಾತೆಯಾಗುವುದರೊಂದಿಗೆ ಆರಂಭವಾಗುವ ಕಥೆ, ಆಕೆಯ ಸೊಸೆ ಆನೆಪ್ ಸಮರ್ಥ ಆಡಳಿತಗಾರ್ತಿಯಾಗಿ ಮುಂದುವರಿದು ಆಕೆಯ ಸಾವಿನೊಂದಿಗೆ ಕೊನೆಯಾಗುತ್ತದೆ. ನಮಗೆ ಅಪರಿಚಿತವಾಗಿರುವ ನೂರಾರು ಸಾಂಸ್ಕೃತಿಕ ವಿಚಾರಗಳು ಕಾದಂಬರಿಯ ಉದ್ದಕ್ಕೂ ಬಿತ್ತರಗೊಂಡಿವೆ. ಶುದ್ಧರಕ್ತಗಳ…

Read More

ಬಂಟ್ವಾಳ: ಮೊಡಂಕಾಪು ‘ಸರಿದಂತರ’ ಪ್ರಕಾಶನವು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ಆಶ್ರಯದಲ್ಲಿ ಆಯೋಜಿಸಿದ ಪ್ರೊ. ರಾಜಮಣಿ ರಾಮಕುಂಜ ಇವರ ‘ಬಂಟ್ವಾಳದ ಸಾಂಸ್ಕೃತಿಕ ಪರಿಸರ’ ಕೃತಿಯ ಲೋಕರ್ಪಣಾ ಸಮಾರಂಭವು ದಿನಾಂಕ 31 ಅಕ್ಟೋಬರ್ 2024ರ ಗುರುವಾರದಂದು ಬಂಟ್ವಾಳದ ಕನ್ನಡ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಮೂಡುಬಿದಿರೆ ಧವಳಾ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಮಾತನಾಡಿ “ಬಂಟ್ವಾಳದ ಆರಾಧನಾ ಕೇಂದ್ರ, ಶೈಕ್ಷಣಿಕ ವಲಯ, ಸಾಧಕರು, ಸ್ಥಳನಾಮಗಳ ವಿವರಗಳೊಂದಿಗೆ ಇತಿಹಾಸದ ಸೂಕ್ಷ್ಮನೋಟಗಳನ್ನು ಪ್ರೊ. ರಾಜಮಣಿ ರಾಮಕುಂಜ ಅವರ ಬಂಟ್ವಾಳದ ಸಾಂಸ್ಕೃತಿಕ ಪರಿಸರ ಕೃತಿ ನೀಡುತ್ತದೆ. ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನವನ್ನು ಒಂದು ಕೇಂದ್ರವಾಗಿಟ್ಟುಕೊಂಡು ಇಡೀ ಪರಿಸರದ ಸಾಂಸ್ಕೃತಿಕ ಪರಂಪರೆ ಹಾಗೂ ಇತಿಹಾಸದ ಸಮಗ್ರ ನೋಟವನ್ನು ಪುಸ್ತಕ ನೀಡುತ್ತದೆ ಮತ್ತು ಸಾಂಸ್ಕೃತಿಕ ಪರಿಸರವನ್ನು ತೆರೆದಿಡುತ್ತದೆ. ಈ ಕೃತಿಯು ಸಂಶೋಧನಾತ್ಮಕ ನೋಟವನ್ನು ನೀಡಿದೆ. ಪಾಡ್ಡನ, ಮೌಖಿಕ ಮಾಹಿತಿ ಸಹಿತ ದೊರಕಿದ ಮಾಹಿತಿಯೊಂದಿಗೆ ಸೀಮಿತವಾದ ಪ್ರದೇಶವನ್ನು ಸಮಗ್ರವಾಗಿ ನೀಡಿರುವ ಉಲ್ಲೇಖ…

Read More

ಮಂಗಳೂರು : ಶಂಭೂರು ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ತಾಲೂಕಿನ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನವು ದಿನಾಂಕ 19 ನವಂಬರ್ 2024ರಂದು ನಡೆಯಲಿದೆ. ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಮಕ್ಕಳ ಸಾಹಿತ್ಯಾದಿ ಕಲೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗೆ ನೀಡಲಾಗುವ ‘ಬಾಲಬಂಧು ಪುರಸ್ಕಾರ’ಕ್ಕೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ಸಹಾಯಕ ಅಧ್ಯಾಪಕಿ ಸುಧಾ ನಾಗೇಶ್ ಇವರನ್ನು ಆಯ್ಕೆ ಮಾಡಲಾಗಿದೆಯೆಂದು ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ತಿಳಿಸಿದ್ದಾರೆ. ಕವಯಿತ್ರಿಯಾಗಿರುವ ಶ್ರೀಮತಿ ಸುಧಾ ನಾಗೇಶ್ ಇವರು ‘ಮೂಡಲಮನೆ’ ಮತ್ತು ‘ಹೃದಯರಾಗ’ ಎಂಬ ಹನಿ ಕವನ ಸಂಕಲನ ಪ್ರಕಟಿಸಿದ್ದಾರೆ. ‘ಹೀಗೆ ಸುಮ್ಮನೆ’ ಎಂಬ ಹಾಸ್ಯ ಲಹರಿ, ‘ಮಿನಿ ಎನ್ ಸೈಕ್ಲೋಪೀಡಿಯ ಫಾರ್ ಸ್ಟೂಡೆಂಟ್ಸ್’ ಎಂಬ ಮಿನಿ ಅರ್ಥ ಕೋಶ, ‘ಜೀನಿಯಸ್’ ಎಂಬ ವಿದ್ಯಾರ್ಥಿ ಕೈಪಿಡಿ ಹಾಗೂ ‘ರಂಗ ಕಲಾ ಭೂಷಕೆರ್ ಶ್ರೀ ಸೀತಾರಾಮ ಕುಲಾಲೆರ್’ ಎಂಬ ತುಳು ಕೃತಿ ಇವರ ಇತರೆ ಪ್ರಕಟಣೆಗಳು. ಕಳೆದ 15 ವರ್ಷಗಳಿಂದ ‘ಶಾರದಾ…

Read More