Author: roovari

ಉಡುಪಿ : ಹಿರಿಯ ವಿದ್ವಾಂಸರಾದ ಡಾ. ಎನ್.ಟಿ. ಭಟ್ ಮತ್ತು ಕುರಿಯ ಗಣಪತಿ ಶಾಸ್ತ್ರಿ ಅವರಿಗೆ ಮುದ್ದಣ ಪುರಸ್ಕಾರ ಸಮಿತಿ ವತಿಯಿಂದ ದಿನಾಂಕ 15-05-2023ರಂದು ಮಂಜೇಶ್ವರ ತಾಲೂಕು ಕುರುಡಪದವಿನಲ್ಲಿರುವ ಕುರಿಯ ಅವರ ಮನೆಯಲ್ಲಿ ‘ಮುದ್ದಣ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಮುದ್ದಣನ ‘ರಾಮಾಶ್ವಮೇಧ’ ಯಕ್ಷಗಾನ ಪ್ರಸಂಗವನ್ನು ಇಂಗ್ಲಿಷ್ ಗೆ ಅನುವಾದಿಸಿದ ಹಿನ್ನೆಲೆಯಲ್ಲಿ ಡಾ. ಎನ್.ಟಿ. ಭಟ್ ಅವರಿಗೆ ಮತ್ತು ‘ಕುಮಾರವಿಜಯ’ ಪ್ರಸಂಗವನ್ನು ಆಡಿಸಬಲ್ಲ ಹಿನ್ನೆಲೆಯಲ್ಲಿ ಗಣಪತಿ ಶಾಸ್ತ್ರಿಯವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದ್ದರು. ಪುರಸ್ಕಾರ ಸಮಿತಿಯ ಮುಖ್ಯಸ್ಥ ನಂದಳಿಕೆ ಬಾಲಚಂದ್ರ ರಾವ್ ಪ್ರಶಸ್ತಿ ಪ್ರದಾನ ಮಾಡಿದರು. ಕುರಿಯ ಗೋಪಾಲಕೃಷ್ಣ ಶಾಸ್ತ್ರಿ, ಶ್ಯಾಮಲಾ ಗಣಪತಿ ಶಾಸ್ತ್ರಿ, ದೇವೇಂದ್ರ ಭಾಗವತ್, ಪೋಷಕರಾದ ವಿಟ್ಲ ಹರೀಶ ಜೋಷಿ, ತ್ರಿಲೋಚನ ಶಾಸ್ತ್ರಿ ಉಪಸ್ಥಿತರಿದ್ದರು.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು 2019, 2020, 2021 ಹಾಗೂ 2022ನೇ ಸಾಲಿನ ʻಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿʼ ಪ್ರಶಸ್ತಿಯನ್ನು ಜಾನಪದ ಹಾಡುಗಳನ್ನು ಹಾಡುವ ಕಲಾವಿದೆಯರ ಸಾಧನೆಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದರು. ಓದು-ಬರಹ ಬಾರದ ನಾಡಿನ ಗ್ರಾಮೀಣ ಪ್ರದೇಶದ ಜಾನಪದ ಕಲಾವಿದೆಗೆ ಅವರ ಪ್ರತಿಭೆಯನ್ನು ಪರಿಗಣಿಸಿ ಅದಕ್ಕನುಗುಣವಾಗಿ ಮೊದಲ ಆದ್ಯತೆಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ʻಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಳ್ಳಿ ದತ್ತಿʼಯನ್ನು ಹಿರಿಯ ಪತ್ರಕರ್ತ ಹಾಗೂ ಲೇಖಕ ಶ್ರೀ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುತ್ತಾರೆ. ದತ್ತಿ ದಾನಿಗಳ ಮೂಲ ಉದ್ದೇಶದಂತೆ ಓದು ಬರಹ ಬಾರದ ಗ್ರಾಮೀಣ ಭಾಗದ ಜನಪದ ಕಲಾವಿದೆಯರನ್ನು ಗುರುತಿಸಿ ಅವರ ಪ್ರತಿಭೆಯನ್ನು ಹಾಗೂ ಅವರ ಸಾಧನೆಗಳನ್ನು ಗಮನಿಸಿ ʼಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿʼ ಪ್ರಶಸ್ತಿ ಆಯ್ಕೆ ಸಮಿತಿ ಮಾಡಿದೆ. ಇದುವರೆಗೂ ಈ ಪ್ರಶಸ್ತಿಯನ್ನು ಜಾನಪದ…

Read More

ಕುರುಡಪದವು : ಕುರಿಯ ವಿಠಲ ಶಾಸ್ತ್ರಿ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ಕುರುಡಪದವು ಇದರ ವತಿಯಿಂದ ಪ್ರತಿ ವರ್ಷವೂ ಜರಗುವಂತೆ ದಿ. ಕುರಿಯ ವಿಠಲ ಶಾಸ್ತ್ರಿ, ದಿ. ನೆಡ್ಲೆ ನರಸಿಂಹ ಭಟ್ ಮತ್ತು ದಿ. ಕರುವೋಳು ದೇರಣ್ಣ ಶೆಟ್ಟಿ ಸಂಸ್ಮರಣ ಕಾರ್ಯಕ್ರಮವು ಗಾನಲಹರಿ, ಸನ್ಮಾನ, ಯಕ್ಷಗಾನ ಕಾರ್ಯಕ್ರಮಗಳೊಂದಿಗೆ ಮೇ 13ರಂದು ಕುರುಡಪದವು ಪ್ರೌಢಶಾಲೆಯಲ್ಲಿ ಜರಗಿತು. ಸಂಜೆ ಮೂರು ಗಂಟೆಯಿಂದ ಬೊಟ್ಟಿಕೆರೆ ಪರೀಕ್ಷಿತ್ ಪೂಂಜ ಮತ್ತು ಬಳಗದವರಿಂದ ಗಾನ ಲಹರಿ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಬಳಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಂಗಳೂರು ಹರಿಕಥಾ ಪರಿಷತ್ತಿನ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಯಕ್ಷಗಾನ ಕಲಾವಿದರಾದ ಶ್ರೀಧರ ಐತಾಳ ಪಣಂಬೂರು ಇವರಿಗೆ ಕುರಿಯ ಪ್ರಶಸ್ತಿಯನ್ನೂ, ಬಡಗಿನ ಖ್ಯಾತ ಭಾಗವತರಾದ ರಾಘವೇಂದ್ರ ಮಯ್ಯರಿಗೆ ನೆಡ್ಲೆ ಪ್ರಶಸ್ತಿಯನ್ನೂ, ಸೂರಿಕುಮೇರಿ ಗೋವಿಂದ ಭಟ್ಟರಿಗೆ ಕರುವೋಳು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಶ್ರೀದೇವಿ ಪ್ರೌಢಶಾಲೆ ಪುಣಚ ಇದರ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಂಗಮ್ಮ ಹರಿಕೃಷ್ಣ ಶಾಸ್ತ್ರಿ ಸಂಸ್ಮರಣ…

Read More

ಬೆಂಗಳೂರು : ಲೇಖಕ ಗುರುಪ್ರಸಾದ್ ಗಂಟಲಗೆರೆಯವರ ‘ಟ್ರಂಕು ತಟ್ಟೆ’ (ಹಾಸ್ಟೆಲ್ ಅನುಭವ ಕಥನ) ಪುಸ್ತಕ ಬಿಡುಗಡೆ ಸಮಾರಂಭ ದಿನಾಂಕ 23-05-2023ರಂದು ಬೆಂಗಳೂರಿನ ಜಂಗಮ ಕಲೆಕ್ಟಿವ್ ನಲ್ಲಿ ನಡೆಯಲಿದೆ. ಪತ್ರಕರ್ತೆ ಹಾಗೂ ಸಿನೆಮಾ ನಿರ್ದೇಶಕಿಯಾದ ಡಿ. ಸುಮನಾ ಕಿತ್ತೂರು ಪುಸ್ತಕ ಬಿಡುಗಡೆಗೊಳಿಸಲಿದ್ದು ಲೇಖಕಿ ಹಾಗೂ ಹೋರಾಟಗಾರ್ತಿಯಾದ ದು. ಸರಸ್ವತಿ ಅಧ್ಯಕ್ಷತೆ ವಹಿಸಲಿರುವರು. ಅಧ್ಯಾಪಕರು ಮತ್ತು ಲೇಖಕರಾದ ವಿ. ಎಲ್. ನರಸಿಂಹ ಮೂರ್ತಿ ಪುಸ್ತಕ ಪರಿಚಯ ಮಾಡಲಿದ್ದಾರೆ. ಲೇಖಕರಾದ ಗುರುಪ್ರಸಾದ್ ಕಂಟಲಗೆರೆ, ಚೈತನ್ಯ ಪ್ರಕಾಶನದ ರಂಗಧಾಮಯ್ಯ ಜೆ.ಸಿ. ಮತ್ತು ಜಂಗಮ ಬಳಗ ಉಪಸ್ಥಿತಲಿರುವರು. ಈ ಕಾರ್ಯಕ್ರಮವನ್ನು ಜಂಗಮ ಕಲೆಕ್ಟಿವ್ ಮತ್ತು ಬೀ ಕಲ್ಚರ್ ತಂಡಗಳು ಜಂಟಿಯಾಗಿ ಆಯೋಜಿಸುತ್ತಿದ್ದಾರೆ.

Read More

ಮೈಸೂರು: ನಟನ ಮೈಸೂರು ಇದರ ರೆಪರ್ಟರಿ ತಂಡದ ಪ್ರಯೋಗ ನಾಟಕ ಕಣಿವೆಯ ಹಾಡು 21-05-2023ರ ಸಂಜೆ ನಟನ ರಂಗ ಶಾಲೆಯಲ್ಲಿ ನಡೆಯಲಿದೆ. ಅತೊಲ್ ಫ್ಯೂಗಾರ್ಡ್ ರಚಿಸಿರುವ ಈ ನಾಟಕವನ್ನು ಡಾ. ಮೀರಾ ಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೇಘ ಸಮೀರ ಮತ್ತು ದಿಶಾ ರಮೇಶ್ ನಟಿಸುವ ನಾಟಕಕ್ಕೆ ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಸಂಗೀತ ನೀಡಲಿದ್ದು, ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ನಾಡಿನ ಹೆಸರಾಂತ ನಿರ್ದೇಶಕ ಡಾ. ಶ್ರೀಪಾದ ಭಟ್ ಅವರದ್ದು. ನಾಟಕದ ಕುರಿತು: ಮೂಲತಃ ದಕ್ಷಿಣ ಆಫ್ರಿಕಾ ನೆಲದ ಕತೆಯಿದು. ಆದರೆ ಎಲ್ಲ ಶ್ರೇಷ್ಠ ಕೃತಿಗಿರುವಂತೆಯೇ ಈ ಕತೆಗೂ ದೇಶ, ಕಾಲ ಮೀರಿದ ಪ್ರಸ್ತುತಿಯ ಅಪಾರ ಸಾಧ್ಯತೆ ಇದೆ. ಅಂತಹ ಪ್ರಯತ್ನವಿದು. ಕಣಿವೆಯ ಹಾಡು ಕಣಿವೆ ದಾಟುವ, ಕಣಿವೆಯೊಳಗಿನ ಬದುಕು ತನ್ನ ಹಾಡು ಮುಂದುವರಿಸುವ ಸಂಘರ್ಷದ ಕತೆ ಇದು. ತಮ್ಮದೇ ನೆಲದಲ್ಲಿ ಪರಕೀಯರಾಗುತ್ತ, ಗುಲಾಮರಾಗುತ್ತ ಹೋಗುತ್ತಿರುವ ಮೂಲನಿವಾಸಿಗಳ ಬದುಕನ್ನೂ, ಪುಟ್ಟ ಬೀಜಗಳು ದೊಡ್ಡದಾಗಿ ಕಾಯಿ ಬಿಡುವ ನೆಲದ ಪವಾಡಗಳನ್ನೂ,…

Read More

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ‘ರಮಣ ಮಹರ್ಷಿ ಕಲಿಕಾಕೇಂದ್ರ’ದಲ್ಲಿ ನೃತ್ಯಗುರುಗಳಾಗಿ ಹಾಗೂ ಕಾರ್ಯಕ್ರಮ ನಿರ್ವಾಹಕರಾಗಿರುವ ವಿದ್ವಾನ್ ಶ್ರೀ ಉಜ್ವಲ್ ಜಗದೀಶ್ ಬೆಂಗಳೂರಿನ ಪ್ರಖ್ಯಾತ ನೃತ್ಯಪಟು, ಯುವ ಆಚಾರ್ಯ, ನೃತ್ಯ ಸಂಯೋಜಕ ಹಾಗೂ ಉತ್ತಮ ಸಂಶೋಧಕರು. ಇವರ ನುರಿತ ಗರಡಿಯಲ್ಲಿ ರೂಹುಗೊಂಡಿರುವ ಕಲಾಶಿಲ್ಪ ಕು. ಅಂತರ ಶ್ರೀರಾಮ್ ಬಹುಮುಖ ಪ್ರತಿಭೆಯ ನೃತ್ಯಕಲಾವಿದೆ. ಸೃಜನಶೀಲ ಕಲಾಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಕು. ಅಂತರ, ಗುರು ಉಜ್ವಲ್ ಬಳಿ ಹಲವಾರು ವರ್ಷಗಳ ಬದ್ಧತೆಯ ನೃತ್ಯಾಭ್ಯಾಸ ಮಾಡಿದ ನಂತರ ಆತ್ಮವಿಶ್ವಾಸದಿಂದ ರಂಗಾರೋಹಣ ಮಾಡಿ ತನ್ನ ಏಕವ್ಯಕ್ತಿ ನೃತ್ಯಪ್ರದರ್ಶನ ನೀಡಲು ಸನ್ನದ್ಧಳಾಗಿದ್ದಾಳೆ . ಇದೇ ತಿಂಗಳ 21 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ‘ಅಂತರಂಗಪ್ರವೇಶ’ – ಪ್ರಪ್ರಥಮ ಏಕವ್ಯಕ್ತಿ ಭರತನಾಟ್ಯವನ್ನು ‘ವಿಶ್ವ ತಾಯಂದಿರ ದಿನ’ಕ್ಕಾಗಿ ಸಂಜಯನಗರದ ರಮಣ ಮಹರ್ಷಿ ಹೆರಿಟೇಜ್ ಸಭಾಂಗಣದಲ್ಲಿ ಸಮರ್ಪಿಸಲಿದ್ದಾಳೆ. ಅವಳ ಕಲಾಸೊಬಗನ್ನು ಕಣ್ಮನ ತುಂಬಿಕೊಳ್ಳಲು ಎಲ್ಲರಿಗೂ ಆದರದ ಸ್ವಾಗತ. ಶ್ರೀಮತಿ ಉಮಾ ಶ್ರೀರಾಮ್ ಹಾಗೂ ಶ್ರೀರಾಮ್ ರವರ ಪ್ರೀತಿಯ ಪುತ್ರಿ ಅಂತರ ಬಾಲಪ್ರತಿಭೆ. ಮೂರನೆಯ…

Read More

ಬೆಂಗಳೂರು : ರೇವಾ ವಿಶ್ವವಿದ್ಯಾನಿಲಯ, ಬೆಂಗಳೂರು ಇದರ ಪ್ರದರ್ಶನ ಕಲಾವಿಭಾಗವು ಆಯೋಜಿಸಿದ, ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಕರಾವಳಿಯ ನೃತ್ಯ ಕಲಾವಿದರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಅವರು ತಾವೇ ರೂಪಿಸಿರುವ ನೃತ್ಯಕ್ಕೆ ಸಂಬಂಧಿಸಿರುವ ಪರಿಕಲ್ಪನೆ ‘ಭರತನಾಟ್ಯದಲ್ಲಿ ತಾಳ ಅವಧಾನ’ ವಿಷಯದ ಬಗ್ಗೆ ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆ ನೀಡಿದರು. ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥರಾದ ಗುರು ಡಾ.ವಿದ್ಯಾ ಶಿಮ್ಲಡ್ಕ ಹಾಗೂ ಇನ್ನಿತರ ವಿದ್ವಾಂಸರು ಉಪಸ್ಥಿತರಿದ್ದರು.

Read More

ಮಂಗಳೂರು : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಮದ್‌ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ನಗರದ ಕಾರ್‌ಸ್ಪೀಟ್‌ನ ಗೋಕರ್ಣ ಮಠದಲ್ಲಿ ಮೊಕ್ಕಾಂ ಹೂಡಿರುವ ಹಿನ್ನೆಲೆಯಲ್ಲಿ ಮಠದ ಸಭಾಂಗಣದಲ್ಲಿ ವಿದುಷಿ ವಿಭಾ ಶ್ರೀನಿವಾಸ್ ನಾಯಕ್ ಹಾಗೂ ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಮೇ 15ರಂದು ಸಂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ತಬಲಾದಲ್ಲಿ ಮೂಡುಬಿದಿರೆಯ ವಿಘ್ನೇಶ್ ಪ್ರಭು ಹಾಗೂ ಹಾರ್ಮೋನಿಯಂನಲ್ಲಿ ಮಂಗಳೂರಿನ ಹೇಮಂತ್ ಭಾಗವತ್ ಸಹಕರಿಸಿದರು.

Read More

ಯಕ್ಷರಂಗದಲ್ಲಿ ಅನೇಕ ಯುವಪ್ರತಿಭಾನ್ವಿತ ಕಲಾವಿದರು ಮಿಂಚುತ್ತಿದ್ದಾರೆ. ಇಂತಹ ಯುವ ಕಲಾವಿದರ ಸಾಲಿನಲ್ಲಿ ಮಿನುಗುತ್ತಿರುವ ಕಲಾವಿದರು ಸನ್ಮಯ್ ಭಟ್ ಮಲವಳ್ಳಿ. 20.10.2001ರಂದು ಸುಬ್ಬಯ್ಯ ಭಟ್ ಹಾಗೂ ಸವಿತಾ ಭಟ್ ಇವರ ಮಗನಾಗಿ ಜನನ. ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ. ಬಾಲ್ಯದಿಂದಲೂ ಮನೆಯಲ್ಲಿ ಯಕ್ಷಗಾನದ ವಾತಾವರಣ ಇದ್ದು ಅಜ್ಜ ನಾರಾಯಣ ಭಟ್ ಮಲವಳ್ಳಿ ಕಲಾವಿದರಾಗಿ ಹಲವಾರು ವರ್ಷ ಮೇಳದ ತಿರುಗಾಟ ಮಾಡಿದವರು. ಅವರ ಪ್ರೋತ್ಸಾಹ ಹಾಗೂ ತಂದೆ ತಾಯಿಯರ ಪ್ರೋತ್ಸಾಹ, ಕಣ್ಣಿಮನೆ ಗಣಪತಿ ಭಟ್ ಹಾಗೂ ಉದಯ ಕಡಬಾಳ ಇವರ ವೇಷ ನೋಡಿ ಯಕ್ಷಗಾನ ರಂಗಕ್ಕೆ ಪ್ರೇರಣೆಗೊಂಡು ಯಕ್ಷಗಾನಕ್ಕೆ ಬಂದರು. ಸದಾಶಿವ ಭಟ್ ಮಲವಳ್ಳಿ ಹಾಗೂ ಅನಂತ ಕುಣಬಿ ಮಲವಳ್ಳಿ ಸನ್ಮಯ್ ಅವರ ಯಕ್ಷಗಾನ ಗುರುಗಳು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿಯನ್ನು ಮಾಡಿಕೊಳ್ಳುತ್ತೀರಿ:- ಹಿರಿಯ ಅನುಭವಿ ಕಲಾವಿದರಿಂದ ವೇಷದ ನಡೆಗಳನ್ನು ಕೇಳುವುದು, ಪ್ರಸಂಗ ಪುಸ್ತಕ ಓದುವುದು, ನನ್ನ ಕಲ್ಪನೆಯಲ್ಲಿ ಪಾತ್ರ ಚಿತ್ರಣವನ್ನು ರೂಪಿಸಿ ಸರಿಯೋ ತಪ್ಪೋ ಎಂದು ವಿಚಾರಿಸಿ ತಯಾರಿ…

Read More

ಮಂಗಳೂರು: ಕಟೀಲು ಮೇಳದಲ್ಲಿ ನಿರಂತರ 42 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಹಿರಿಯ ಯಕ್ಷಗಾನ ವೇಷಧಾರಿ ಶ್ರೀಧರ ಪಂಜಾಜೆ ಅವರಿಗೆ ‘ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ’ ನೀಡಿ ಸಂಮಾನಿಸಲಾಯಿತು. ಬೆಂಗಳೂರಿನ ಡಾ. ಬಿ. ನಿಶಾಕಾಂತ ಶೆಟ್ಟಿ ಅವರ ಶ್ರೀ ಕಟೀಲು ಮೇಳದ ಸೇವೆ ಆಟದ ಸಂಧರ್ಭದಲ್ಲಿ, ಹಿರಿಯ ಹವ್ಯಾಸಿ ತಾಳಮದ್ದಳೆ ಕಲಾವಿದ ಕೀರ್ತಿಶೇಷ ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 13-05-2023ರಂದು ಸಂಜೆ 6 ಗಂಟೆಯಿಂದ ಕದ್ರಿ ಕಂಬಳಗುತ್ತು ಮಂಗಳೂರಿನಲ್ಲಿ ಜರಗಿತು. ಡಾ. ಸುಧಾಕರ ಮಾರ್ಲ ಪಂಜಾಜೆ ಅವರನ್ನು ಅಭಿನಂದಿಸಿದರು. ಹಿರಿಯ ವಿದ್ವಾಂಸ ಡಾ. ಎಮ್. ಪ್ರಭಾಕರ ಜೋಶಿ, ಪ್ರದೀಪ ಕುಮಾರ ಕಲ್ಕೂರ, ಆಸ್ಪ ಲ್ಯಾಂಪ್ ನ ಸುರೇಶ ಬಿ. ಶೆಟ್ಟಿ, ಬಿ.ವಿ. ಹೆಗ್ಡೆ ಶಿರಸಿ, ಸುರೇಶ ವಿ. ಹೆಗ್ಡೆ, ಇಂದ್ರಾಳಿ ಶಿವರಾಮ್ ಶೆಟ್ಟಿ, ಬಾಳ ತಿಮ್ಮಪ್ಪ ಶೆಟ್ಟಿ, ಶಿರ್ವಕೋಡು ದಿನೇಶ್ ಹೆಗ್ಡೆ, ಸುಧಾಕರ ರಾವ್ ಪೇಜಾವರ, ಎಲ್ಲೂರು ರಾಮಚಂದ್ರ ಭಟ್, ಚೈತ್ರ ಸಾಕೇತ್…

Read More