Author: roovari

ನಾಗಪುರ: ಶ್ರೀ ಪ್ರಶಾಂತ್ ರಾಜ್ ಮತ್ತು ಪೂಜಾ ರಾಜ್ ಅವರ 11 ವರ್ಷದ ಸುಪುತ್ರ ಅರ್ಣವ್ ರಾಜ್ ಭರತನಾಟ್ಯದ ಬಾಲಪ್ರತಿಭೆ. ನೃತ್ಯಕಲೆ ಅವನಿಗೊಲಿದು ಬಂದ ದೈವದತ್ತ ವರ. ಅಂತರರಾಷ್ಟ್ರೀಯ ನೃತ್ಯಕಲಾವಿದ ಮತ್ತು ‘ಶಿವಪ್ರಿಯ’ ನೃತ್ಯಶಾಲೆಯ ಗುರು ಡಾ. ಸಂಜಯ್ ಶಾಂತಾರಾಂ ಅವರಲ್ಲಿ ಸತತ ಪರಿಶ್ರಮದಿಂದ ನೃತ್ಯಾಭ್ಯಾಸ ಮಾಡುತ್ತಿರುವ ಈ ಅನನ್ಯ ಪ್ರತಿಭಾನ್ವಿತನಾದ ಬಾಲಕನಿಗೆ ಇತ್ತೀಚೆಗೆ ಕಲ್ಚುರಲ್ ಫೌಂಡೆಶನ್ ಆಫ್ ಇಂಡಿಯಾ ಮತ್ತು ವಿದರ್ಭ ವಿಭಾಗದ ನೃತ್ಯ ಪರಿಷತ್ತಿನ ಪ್ರತಿಷ್ಠಿತ ರಾಷ್ಟ್ರಮಟ್ಟದ ‘ನೃತ್ಯ ಕಲಾಭೂಷಣ ಬಾಲಪುರಸ್ಕಾರ-2023’ ಪ್ರಶಸ್ತಿಯನ್ನು ವಿಶ್ವ ದಿನಾಚರಣೆಯಂದು ನೀಡಿ ಸನ್ಮಾನಿಸಲಾಗಿದೆ. ಇಡೀ ಭಾರತಾದ್ಯಂತ ಬಂದಿದ್ದ 150 ನಾಮಿನೇಷನ್ ಗಳಲ್ಲಿ ಚಿ. ಅರ್ಣವ್ ಆಯ್ಕೆಯಾಗಿದ್ದು ಇದು ಅವನ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದ್ದು, ಇತ್ತೀಚಿಗೆ ಅವನಿಗೆ ನಾಗಪುರದ ಸುರೇಶ ಭಟ್ ಆಡಿಟೋರಿಯಂ ನಲ್ಲಿ ಈ ಉನ್ನತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ‘ಬೆಳೆಯುವ ಪೈರು ಮೊಳಕೆಯಲ್ಲೇ’ಎಂಬಂತೆ ಅತ್ಯಂತ ಪ್ರತಿಭಾಶಾಲಿಯಾದ ಇವನು ಸ್ಕಲ್ವಿ ಇಂಟರ್ನ್ಯಾಷನಲ್ ಶಾಲೆಯಲ್ಲಿ 5 ನೆಯ ತರಗತಿಯಲ್ಲಿ ಓದುತ್ತಿದ್ದು, ತನ್ನ 8 ನೆಯ…

Read More

ಪುತ್ತೂರು : ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿ (ರಿ.) ಪುತ್ತೂರು ಇದರ ನೃತ್ಯಾಂತರಂಗ -97ನೇ ಕಾರ್ಯಕ್ರಮವು ದಿನಾಂಕ 21-04-2023 ಶುಕ್ರವಾರ ಶಶಿಶಂಕರ ಸಭಾಂಗಣ ಪುತ್ತೂರು ಇಲ್ಲಿ ಅದ್ಭುತವಾಗಿ ನೆರವೇರಿತು. ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಪ್ರಾಂಶುಪಾಲರಾದ ಶ್ರೀ ಸುಬ್ಬಪ್ಪ ಕೈಕಂಬ ಅಭ್ಯಾಗತರಾಗಿ ಆಗಮಿಸಿದ್ದು, ದೀಪ ಬೆಳಗಿ ಅಂದಿನ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡುತ್ತಾ “ನೃತ್ಯಾಂತರಂಗ ಹುಟ್ಟಿಕೊಂಡ ಉದ್ದೇಶ, ರೂಪುಗೊಳ್ಳುತ್ತಿರುವ ರೀತಿ, ಅದರ ಉತ್ತಮ ಬೆಳವಣಿಗೆ ಎಲ್ಲವೂ ಇಂದಿನ ಈ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತದೆ. ವಿದ್ಯಾರ್ಥಿಗಳಲ್ಲಿನ ಶಿಸ್ತು, ಪ್ರೇಕ್ಷಕರಲ್ಲಿ ಹುಟ್ಟಿದ ಆಸಕ್ತಿ ಇದು ಜ್ವಲಂತ ನಿದರ್ಶನವಾಗಿದೆ” ಎಂಬ ಮೆಚ್ಚುಗೆಯ ಮಾತಿನೊಂದಿಗೆ ನೃತ್ಯಾಂತರಂಗದ ಯಶಸ್ಸಿಗೆ ಶುಭ ಕೋರಿದರು. ಸಂಸ್ಥೆಯ ಪುಟಾಣಿಗಳ ತ್ರಿಪತಾಕ ತಂಡದಿಂದ ಗಣಪತಿ ಸ್ತುತಿಯೊಂದಿಗೆ ನೃತ್ಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಆಪ್ತಚಂದ್ರಮತಿ ಮುಳಿಯ ಇವರು ಬಹಳ ಸಮರ್ಥವಾಗಿ ನಿರ್ವಹಿಸಿದರು. ಆರಂಭದಲ್ಲಿ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿಯ ಸಹ ನಿರ್ದೇಶಕರಾದ ವಿದ್ವಾನ್ ಶ್ರೀ ಗಿರೀಶ್ ಕುಮಾರ್…

Read More

ಕೋಟ: ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ನಡೆಸುತ್ತಿರುವ ಯಕ್ಷಗಾನ ನೃತ್ಯ ಮತ್ತು ತಾಳಾಭ್ಯಾಸದೊಂದಿಗೆ ಪದಾಭ್ಯಾಸ ಎಂಬ ವಿಷಯದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 06-05-2023 ರಂದು ಕೋಟದ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು. ಸಾಲಿಗ್ರಾಮ ಮೇಳದ ಪ್ರದಾನ ಚಂಡೆವಾದಕರಾದ ಕೋಟ ಶಿವಾನಂದರು ‘ಯಾವುದೇ ಕಲೆ ಮಾರಾಟದ ಸರಕಾಗಬಾರದು. ಹೃದಯ, ಹೃದಯಗಳ ನಡುವಿನ ಮನೋ ವ್ಯಾಪಾರವಾಗಬೇಕು. ನಮ್ಮ ಯಕ್ಷಗಾನ ನಮ್ಮ ಮನಸ್ಸನ್ನು ಅರಳಿಸಬೇಕೆ ವಿನಹ ಕೆರಳಿಸಬಾರದು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳೇ ಈ ಕಲೆಯನ್ನು ನೀವುಗಳು ಮುಂದೆ ಹವ್ಯಾಸಿಯಾಗಿ ಬಳಸಿಕೊಳ್ಳಿ ಹಾಗೂ ಒಳ್ಳೆಯ ಪ್ರೇಕ್ಷಕರಾಗಿ, ಬದಲಾಗಿ ವೃತ್ತಿಯಾಗಿ ತೆಗೆದುಕೊಳ್ಳಬೇಡಿ’ ಎಂದು ಹೇಳಿದರು. ನಿವೃತ್ತ ಎಲ್.ಐ.ಸಿ. ಅಧಿಕಾರಿಯಾದ ಹಂದಟ್ಟು ಗಣಪಯ್ಯ ಭಟ್‌ರು ಮಾತನಾಡಿ ನಮ್ಮ ಕಾಲದಲ್ಲಿ ಯಕ್ಷಗಾನ ಕಲಿಕೆಗೆ ಕಲಾ ಶಾಲೆಗಳು ಇರಲಿಲ್ಲ, ಚೌಕಿ ಹಾಗೂ ರಂಗಸ್ಥಳಗಳೇ ಕಲಾವಿದರಿಗೆ ಅಭ್ಯಾಸ ಶಾಲೆಯಾಗಿತ್ತು. ಹಿರಿಯ ಕಲಾವಿದರೇ ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು. ಈಗ ಕಾಲ ಬದಲಾಗಿದೆ. ಸಾಕಷ್ಟು ತರಬೇತಿ ಶಾಲೆಗಳಿವೆ. ನಿಜವಾದ ಕಲಾಸಕ್ತರಿಗೆ…

Read More

ಬೆಂಗಳೂರು: ಪರಿಣತ ಅಭಿನಯ- ಹರಿತ ನೃತ್ಯ ಪಾಂಡಿತ್ಯದಲ್ಲಿ ಪಂದನಲ್ಲೂರು ಬಾನಿಯಲ್ಲಿ ಹೆಸರು ಮಾಡಿರುವ ‘’ಉಷಾಸ್ ಫೌಂಡೇಶನ್ ‘ ನೃತ್ಯಸಂಸ್ಥೆಯ ಕಲಾತ್ಮಕ ನಿರ್ದೇಶಕಿ, ಗುರು ಕಲೈಮಾಮಣಿ ಡಾ. ಸಂಗೀತಾ ಕಪಿಲನ್ ಅವರ ನುರಿತ ಗರಡಿಯಲ್ಲಿ ರೂಪುಗೊಂಡ ನೃತ್ಯ ಪ್ರತಿಮೆ ಕು. ರಿಷಾ ಪ್ರಶಾಂತ್ ಕುಮಾರ್. ಕಳೆದ ಹತ್ತುವರ್ಷಗಳಿಂದ ನಿಷ್ಠೆಯಿಂದ ಅವರಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ನಂದಿನಿ ಮತ್ತ್ತು ಪ್ರಶಾಂತ್ ಕುಮಾರ್ ಪುತ್ರಿ ಬಹುಮುಖ ಪ್ರತಿಭೆಯ ರಿಷಾ, ಇದೇ ಮೇ ತಿಂಗಳ 21 ಭಾನುವಾರದಂದು ಮಲ್ಲೇಶ್ವರದ ‘ಸೇವಾಸದನ’ದಲ್ಲಿ ಸಂಜೆ 5.30 ಗಂಟೆಗೆ ತನ್ನ ನೃತ್ಯದ ಕಲಾಸೊಬಗನ್ನು ಪ್ರದರ್ಶಿಸಲು ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾಳೆ. ಆಕೆಯ ನೃತ್ಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ. ಕು. ರಿಷಾ ಬಾಲಪ್ರತಿಭೆ. ನಾಲ್ಕುವರ್ಷದ ಮಗು ಸಂಗೀತದಲೆಗಳಿಗೆ ಹೆಜ್ಜೆ ಹಾಕುತ್ತ ಕುಣಿಯುವ ಪರಿ ತಂದೆ-ತಾಯಿಯರಿಗೆ ಅವಳಲ್ಲಿ ಅಡಗಿದ್ದ ಸುಪ್ತಪ್ರತಿಭೆ ಅರಿವಾಯಿತು. ತಂದೆ-ಪ್ರಶಾಂತ್ ಕುಮಾರ್ ತಾಯಿ ನಂದಿನಿ ಮಗುವನ್ನು ಡಾ. ಸಂಗೀತಾ ಕಪಿಲನ್ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಅಲ್ಲಿಂದ ರಿಷಾಗೆ ಕ್ರಮಬದ್ಧ…

Read More

ಪಾಂಬೂರು : ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಪಾಂಬೂರಿನ ಪರಿಚಯ ಪ್ರತಿಷ್ಠಾನವು ವಸಂತ ಕಲಾ ಸೌರಭ : ಬಹುಮುಖಿ ಸಾಂಸ್ಕೃತಿಕ ಉತ್ಸವವನ್ನು ಇದೇ ಮೇ 17ರಿಂದ ಮೇ 20ರವರೆಗೆ ಪಾಂಬೂರು ರಂಗಪರಿಚಯದಲ್ಲಿ ಆಯೋಜಿಸಿದೆ. ಮೇ 17ರಂದು ಬುಧವಾರ, ಖ್ಯಾತ ಸಾಹಿತಿ ಹಾಗೂ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಂಚಾಲಕರಾಗಿರುವ ಮಾನ್ಯ ಮೆಲ್ವಿನ್ ರೊಡ್ರಿಗಸ್‌ ರವರೊಂದಿಗೆ ಮುಖಾಮುಖಿ, ವಾಚನ, ಗಾಯನ, ಕಥಾಪ್ರಸ್ತುತಿಯ ‘ಕವಿತಾರಂಗ್’ ಕಾರ್ಯ ಕ್ರಮ ಜರಗಲಿದೆ. ಖ್ಯಾತ ಸಿತಾರ್ ಕಲಾವಿದ ಉಸ್ತಾದ್ ರಫೀಕ್ ಖಾನ್‌ ರವರ ಸಂಗೀತ ನಿರ್ದೇಶನದಲ್ಲಿ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ಮೇ 18ರಂದು ಮಂಗಳೂರು ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ರಂಗಗೀತೆಗಳು ಹಾಗೂ ಹ್ಯಾಂಗ್‌ಆನ್ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 19 ಮತ್ತು 20ರಂದು ಕನ್ನಡ ಸಿನೆಮಾ ರಂಗದ ಸೃಜನಶೀಲ ನಿರ್ದೇಶಕ ಮಂಸೋರೆಯವರ ‘ಮಂಸೋರೆ ಸಿನೆಹಬ್ಬ’ ಜರಗಲಿದೆ. ಮೇ 19ರಂದು ಇತ್ತೀಚೆಗೆ ಅತೀ ಚರ್ಚಿತ ‘19.20.21’ ಹಾಗೂ ಮೇ 20ರಂದು ರಾಷ್ಟ್ರ…

Read More

ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಹಾಗೂ ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಇವುಗಳ ಜಂಟಿ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಮೇ 14ರಂದು ಬೆಳಿಗ್ಗೆ ‘ರಜಾರಂಗು-ರಂಗ ಮಂಚ’ ಜ್ಞಾನರಂಜನಾ ಶಿಬಿರವನ್ನು ಗುರುಗಳಾದ ಕೊಯಿಕೂರು ಸೀತಾರಾಮ ಶೆಟ್ಟಿ ರಜಾರಂಗು ರಂಗ ಮಂಚ ಗೋಡೆಗೆ ಮಕ್ಕಳೊಂದಿಗೆ ಚಿಟ್ಟೆ ಅಂಟಿಸುವ ಮುಖೇನ ಉದ್ಘಾಟಿಸಿದರು. “ರಜಾರಂಗು ಶಿರೋನಾಮೆಯಡಿಯಲ್ಲಿ ಅನೇಕಾನೇಕ ಸಂಪನ್ಮೂಲ ವ್ಯಕ್ತಿಗಳು ಸಂಪರ್ಕಿಸಿ ದಾಖಲೆಯನ್ನು ಸಾಧಿಸಿದ ಶಿಬಿರವಿದು. ರೋಹಿತ್ ಎಸ್. ಬೈಕಾಡಿ ನೇತೃತ್ವದ ಶಿಬಿರ ಪಕ್ವತೆಯನ್ನು ಸಾಧಿಸುವುದು ಎಂಬುದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ಚಿಣ್ಣರಿಗೆ ಆಟದ ಮೂಲಕ ಪಠ್ಯೇತರ ಚಟುವಟಿಕೆಗಳ ಪಾಠವನ್ನು ಅರಿವಿಲ್ಲದಂತೆಯೇ ಬೋಧಿಸುತ್ತಾ ಮುನ್ನಡೆದು ರಂಗವನ್ನು ಕಲ್ಪಿಸುವ ಕಾರ್ಯವೇ ರಂಗ ಮಂಚವಾಗಿರುತ್ತದೆ. 15 ದಿನಗಳ ನಿರಂತರ ದಿನ ಪೂರ್ತಿ ಮೈಮರೆತು ಒಂದಿಷ್ಟು ಕಲಿತು ಹೊರನಡೆದರೆ ಸಂಸ್ಥೆಯ ಕೆಲಸ ಸಾರ್ಥಕವಾಗುತ್ತದೆ” ಎಂದು ಅಭಿಪ್ರಾಯಪಟ್ಟರು. “ಬದುಕನ್ನು ಕಲಿಸುವ ಶಿಬಿರ ಬೆಳೆದು ಬೆಳೆದು ಇತಿಹಾಸವನ್ನು ಸೃಷ್ಟಿಸಿದೆ. ಹಿಂದಿನ ಅನೇಕ ಶಿಬಿರದಲ್ಲೂ ಹೊಸ ಹೊಸ ಪರಿಕಲ್ಪನೆಯಲ್ಲಿ…

Read More

ನಮ್ಮ ಮನಸ್ಸಿಗೊಂದು ಭಾಷೆಯಿದೆ. ನಾವು ಯೋಚಿಸುವುದು, ಕನಸು ಕಾಣುವುದು ಈ ಭಾಷೆಯಲ್ಲೇ. ಅದು ನಮ್ಮ ಮಾತೃಭಾಷೆ. ಕನ್ನಡದಲ್ಲಿ ಮಾತನಾಡುವವರು ಕನ್ನಡ ಪುಸ್ತಕ ಓದುವವರು ಕಡಿಮೆಯಾಗುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಈ ಕಾಲದಲ್ಲಿ ಕನ್ನಡದಲ್ಲಿ ಪುಸ್ತಕ ಪ್ರಕಟಿಸುತ್ತಿರುವ ಪ್ರಕಾಶಕರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಹಾಗಾದರೆ ಓದುವವರೂ ಇರಲೇ ಬೇಕಲ್ಲಾ. 100 ವರ್ಷಗಳ ಹಿಂದೆ ಖ್ಯಾತ ಸಾಹಿತಿ ಎ.ಆರ್. ಕೃಷ್ಣ ಶಾಸ್ತ್ರಿಗಳು ಕನ್ನಡಿಗರು ಕನ್ನಡವನ್ನು ನಿರ್ಲಕ್ಷಿಸುತ್ತಿರುವುದನ್ನು ಕಂಡು ದುಃಖದಿಂದ “ನಿಮಗೆ ಕನ್ನಡ ಬೇಡವೆಂದಾದರೆ ಈಚೆ ಅರಬೀ ಸಮುದ್ರವಿದೆ. ಆಚೆ ಬಂಗಾಳಕೊಲ್ಲಿ ಇದೆ. ಗುಡಿಸಿ ಹಾಕಿ” ಎಂದು ಹೇಳಿದ್ದರು. ಕನ್ನಡ ಇನ್ನಷ್ಟು ಸಮೃದ್ಧವಾಗಿ ಬೆಳೆಯಿತೇ ವಿನಃ ಯಾರೂ ಅದನ್ನು ಗುಡಿಸಿ ಹಾಕುವ ಕೆಲಸ ಮಾಡಿಲ್ಲ. ಅದು ಕನ್ನಡದ ಶಕ್ತಿ. ಇಂದು ಅಂತರ್ಜಾಲ ಮುಂತಾದ ಹೊಸ ಹೊಸ ತಂತ್ರಜ್ಞಾನ ಸ್ಪರ್ಧೆಯಲ್ಲಿಯೂ ಕನ್ನಡ ಹಿಂದುಳಿದಿಲ್ಲ. ಹೊಸ ಪೀಳಿಗೆಯ ಯುವ ಸಮುದಾಯವು ಹೊಸ ಹುಮ್ಮಸ್ಸಿನಿಂದ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವುದನ್ನು ಕಂಡಾಗ ಖುಷಿಯಾಗುತ್ತಿದೆ. ಹಾಗೆಯೇ ತಮ್ಮ ಮಾತೃಭಾಷೆಯಲ್ಲಿ ಕವನ, ಕತೆ, ಕಾದಂಬರಿಗಳನ್ನು ಬರೆದು…

Read More

ಕಾಸರಗೋಡು : ಕಾಸರಗೋಡಿನ ಮಂಗಲ್ಪಾಡಿಯ ಪರಂಕಿಲದ ಭಜನ ಮಂದಿರದಲ್ಲಿ ಕಲಾಕುಂಚ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ದಿನಾಂಕ 21-05-2023ರಂದು ‘ವ್ಯಂಗ್ಯಚಿತ್ರ ರಚನಾ ಶಿಬಿರ’ ನಡೆಯಲಿದೆ. ಖ್ಯಾತ ವ್ಯಂಗ್ಯಚಿತ್ರಗಾರ ವಿರಾಜ್ ಅಡೂರು ನಿರ್ದೇಶನದಲ್ಲಿ ನಡೆಯುವ ಈ ಶಿಬಿರದಲ್ಲಿ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗವಹಿಸಬಹುದು. ಶಿಬಿರಕ್ಕೆ ಸೇರಲಿಚ್ಚಿಸುವ ಶಿಬಿರಾರ್ಥಿಗಳು ಡ್ರಾಯಿಂಗ್ ಪುಸ್ತಕ, ಪೆನ್ಸಿಲ್, ಕ್ರೆಯಾನ್ಸ್ ರಬ್ಬರ್ ಗಳನ್ನು ತಾವೇ ತರಬೇಕು. ಶಿಬಿರವು ಬೆಳಿಗ್ಗೆ 9-30ರಿಂದ ಸಂಜೆ 4-00ರವರೆಗೆ ನಡೆಯಲಿರುವುದು. ಈ ಶಿಬಿರವು ಸಂಪೂರ್ಣ ಉಚಿತವಾಗಿದ್ದು ಶಿಬಿರಾರ್ಥಿಗಳಿಗೆ ಉಪಾಹಾರ ಹಾಗೂ ಭೋಜನದ ವ್ಯವಸ್ಥೆಯನ್ನು ಸಂಘಟಕರೇ ಆಯೋಜಿಸಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ 8281283091 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಕಾಸರಗೋಡು ಗಡಿನಾಡಿನ ಸಾಹಿತ್ಯ ಚಟುವಟಿಕೆಯಲ್ಲಿ ಸದಾ ನಿರತರಾಗಿರುವ ಶ್ರೀ ವಿರಾಜ್ ಅಡೂರು ಇವರು ಕೃಷಿ, ಶಿಕ್ಷಣ, ವ್ಯಂಗ್ಯಚಿತ್ರ, ಸಾಹಿತ್ಯ ಸಾಮಾಜಿಕ ಸಂಘಟನೆ, ಪತ್ರಿಕೋದ್ಯಮ, ಶಿಬಿರ ಸಂಯೋಜನೆ ಶಿಬಿರದ ಸಂಪನ್ಮೂಲ ವ್ಯಕ್ತಿ ಹೀಗೆ ಕ್ರಿಯಶೀಲರಾಗಿರುವ ಇವರು ಪ್ರಜಾವಾಣಿ ಪತ್ರಿಕೆಯ ವರದಿಗಾರರು. ಚುಟುಕುಟುಕು ಇವರ ಸ್ವರಚಿತ ಕವನ ವಾಚನವು ಮಂಗಳೂರು ಆಕಾಶವಾಣಿಯಿಂದ ಅನೇಕ…

Read More

ಹೊಸಕೋಟೆ: ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ, ಪ್ರತಿ ತಿಂಗಳ ಎರಡನೇ ಶನಿವಾರದಂದು ಸಂಜೆ ಆಯೋಜಿಸುವ ನಾಟಕ ಸರಣಿ ರಂಗ ಮಾಲೆ -70 ದಿನಾಂಕ 13-05-2023 ರಂದು ನಡೆಯಿತು . ಈ ಬಾರಿ ಬೆಂಗಳೂರು ಬಿಂಕ ಬಿನ್ನಾಣಿಗರು ರಂಗ ತಂಡವು ಸಂಸ್ಕೃತದ ಮಹಾ ಕವಿ ಭಾಸ ನ “ದೂತ ಘಟೋತ್ಕಜ ” ನಾಟಕವನ್ನು ಯುವ ನಿರ್ದೇಶಕ ಶಿವು ಹೊನ್ನಿಗನಹಳ್ಳಿ ನಿರ್ದೇಶನದಲ್ಲಿ ಪ್ರದರ್ಶಿಸಿತು. ನಾಟಕ ಉದ್ಘಾಟನೆ ಮಾಡಿದ ವೇದಿಕೆ ಅಧ್ಯಕ್ಷ ಕೆ.ವಿ ವೆಂಕಟರಮಣಪ್ಪ, ಪಾಪಣ್ಣ ಕಾಟಂ ನಲ್ಲೂರು ಮಾತನಾಡುತ್ತಾ ‘ಭಾರತೀಯ ಮಹಾಕಾವ್ಯ ಮಹಾಭಾರತ . ವಿಶ್ವಕ್ಕೆ ಜೀವನ ಮೌಲ್ಯಗಳಾದ ‘ಭಾತೃತ್ವ- ಸಹ ಬಾಳ್ವೆ- ನ್ಯಾಯ-ಧಮ೯ – ಶಾಂತಿ ಸಂದೇಶಗಳನ್ನು ನೀಡುತ್ತದೆ. ಪ್ರಭುತ್ವದಲ್ಲಿ ಯುದ್ಧ ಅದರ ನಶ್ವರತೆ – ನಿರರ್ಥಕತೆಯನ್ನು ಸಾರುತ್ತಲೆ ಬಂದಿದೆ ಎಂದರು’.ನಾಟಕ ನೆರೆದ ಪ್ರೇಕ್ಷಕರನ್ನು ಮೋಡಿ ಮಾಡಿತು. ನಿರ್ದೇಶಕ ಶಿವು ಹೊನ್ನಿಗನಹಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆ ಪದಾಧಿಕಾರಿಗಳಾದ ‘ಜಗದೀಶ್ ಕೆಂಗನಾಳ್ . ಸಿದ್ದೇಶ್ವರ ದೊಡ್ಡ ಬನಹಳ್ಳಿ. ಎಂ.ಸುರೇಶ್ ಚಲಪತಿ ಮಮತ, ಮುನಿರಾಜು…

Read More

ಕಾಸರಗೋಡು : ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ ಕಳೆದ 17 ವರ್ಷಗಳಿಂದ ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ದುಡಿಯುತ್ತಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ 2022-23ನೇ ವರ್ಷದ ‘ರಂಗಚಿನ್ನಾರಿ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಅದರಂತೆ ‘ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಪ್ರಶಸ್ತಿ’ಗೆ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಪಿ. ಲಕ್ಷ್ಮೀನಾರಾಯಣ ಭಟ್ ಆಯ್ಕೆಯಾಗಿದ್ದಾರೆ. ‘ರಂಗಚಿನ್ನಾರಿ ಪ್ರಶಸ್ತಿ’ಗೆ ಕಥೆಗಾರ, ಸಾಹಿತಿ ವಿಠಲ ಗಟ್ಟಿ ಉಳಿಯ ಮತ್ತು ಖ್ಯಾತ ವಾಗ್ಮಿ ಶ್ರೀಮತಿ ಜಯಲಕ್ಷ್ಮೀ ಕಾರಂತ ಅವರನ್ನು ಆರಿಸಲಾಗಿದೆ. ಪ್ರಶಸ್ತಿಯು ತಲಾ ಐದು ಸಾವಿರ ರೂ. ನಗದು, ಸ್ಮರಣಿಕೆ, ಫಲತಾಂಬೂಲ ಹೊಂದಿದೆ. ಯುವ ಪ್ರತಿಭೆಗಳಿಗೆ ನೀಡುವ ‘ರಂಗಚಿನ್ನಾರಿ ಯುವ ಪ್ರಶಸ್ತಿ’ಗೆ ಜಾನಪದ ಕಲಾವಿದ ಸುಜಿತ್ ಕುಮಾರ್ ಹಾಗೂ ಸಂಗೀತ ಕಲಾವಿದೆ ಬಿ. ಮೇಧಾ ಕಾಮತ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 2,500 ರೂ. ನಗದು, ಸ್ಮರಣಿಕೆ, ಫಲತಾಂಬೂಲ ಹೊಂದಿದೆ. ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಪ್ರಶಸ್ತಿ ನಗದನ್ನು ದಿ. ಹರಿರಾಯ ಕಾಮತ್‌ ಸ್ಮಾರಕವಾಗಿ ನೀಡಲಾಗುವುದು.…

Read More