Author: roovari

ಅಹಲ್ಯಾ ಬಲ್ಲಾಳ್ ಪ್ರಸ್ತುತಪಡಿಸಿದ ‘ಅವಳ ಕಾಗದ’ ಲೇಖಕಿ, ಅಂಕಣಕಾರ್ತಿ ಸುಧಾ ಆಡುಕಳ ಬರೆದ ಈ ರೂಪಕವನ್ನು ಶ್ವೇತಾ ಹಾಸನ ವಿನ್ಯಾಸ ಮಾಡಿದ್ದು, ಬೆಳಕಿನ ವಿನ್ಯಾಸವನ್ನು ಶ್ರೀನಿವಾಸ್ ಜಿ. ಕಪ್ಪಣ್ಣ ಮಾಡಿದ್ದಾರೆ. ಡಾ. ಶ್ರೀಪಾದ ಭಟ್ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ ರೂಪಕ. ಅನುಕಾಲದಿಂದಲು ಹೆಣ್ಣನ್ನು ದ್ವಿತೀಯ ಪ್ರಜೆಯನ್ನಾಗಿಸಿ, ಅವಳ ಅಸ್ಮಿತೆಯನ್ನು ನಿರಾಕರಿಸುವ, ಭಾರತೀಯ ಮಧ್ಯಮವರ್ಗದ ಕುಟುಂಬದ ಹುನ್ನಾರದ ವಿರುದ್ದ ಸಿಡಿದೆದ್ದ, ಹೆಣ್ಣೊಬ್ಬಳ ರೂಪಕವಾಗಿ ನೂರು ವರ್ಷಗಳ ಹಿಂದೆಯೆ, ತಮ್ಮ ಸೂಕ್ಷ್ಮ ಸಂವೇದನಾ ಶೀಲತೆಯನ್ನು ತಮ್ಮ ಕಥೆಗಳ ಮೂಲಕ ಪ್ರಕಟಿಸಿದವರು ರವೀಂದ್ರನಾಥ ಠಾಕೂರರು. ಅವಳ‌ ಕಾಗದದ ಮೂಲಕ ಅದನ್ನು ರೂಪಕವಾಗಿಸಿದ ಶ್ರೇಯಸ್ಸು ಸುಧಾ ಅಡುಕಳ ಅವರದಾದರೆ, ಅದನ್ನು ನಿರ್ದೇಶಿಸಿದ ಶ್ರೇಯಸ್ಸು ಡಾ.ಶ್ರೀಪಾದ ಭಟ್ಟರಿಗೆ ಸಲ್ಲಬೇಕು. ಅದನ್ನು ಅನನ್ಯವಾಗಿ ತನ್ನ ಭಾವಾಭಿನಯದ ಮೂಲಕ ತೆರೆಯ ಮೇಲೆ ಪ್ರದರ್ಶಿಸಿದವರು ಮುಂಬಯಿನ ನನ್ನ ಕನ್ನಡದ ಶಿಷ್ಯೆ ಅಹಲ್ಯಾ ಬಲ್ಲಾಳ್ ಅನುಪಮ ಕಲಾವಿದೆ. “ಗಾಳಿಯಲ್ಲಿ ಹಾರಿಬಂದ ಬೀಜಗಳು, ಕಲ್ಲಿನ ಬಿರುಕುಗಳಲ್ಲಿ ಬಿದ್ದು, ಅವು ಚಿಗುರೊಡೆದಾಗಲೇ ಬಿರುಕು…

Read More

ಮಂಗಳೂರು: ಮಂಗಳೂರು ಕಲ್ಲಚ್ಚು ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಪಾಟೀಲರ ಜತೆಗೆ ಒಂದು ಸಂಜೆ, ಮಾತುಕತೆ ಸಂವಾದ ಕಾರ್ಯಕ್ರಮವು ವುಡ್ ಲ್ಯಾಂಡ್ ಹೊಟೇಲ್ ಆವರಣದಲ್ಲಿ ದಿನಾಂಕ 04-05-2023 ರಂದು ನಡೆಯಿತು. ಕನ್ನಡದ ಹಿರಿಯ ಮತ್ತು ಪ್ರಸಿದ್ಧ ಸಾಹಿತಿ ಮೂಲತ ಗೋಕಾಕ್ ನ ಪ್ರಸ್ತುತ ಧಾರವಾಡದಲ್ಲಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಪಾಟೀಲ ಅವರು ಈ ಕಾಲದ ಕನ್ನಡದ ಸಾಹಿತ್ಯ ಮತ್ತು ಸಾಹಿತಿಗಳು ಅನಿವಾರ್ಯವಾಗಿ ತ್ರೀವ ಗತಿಯಲ್ಲಿ ಬದಲಾಗುತ್ತಿದ್ದು ಎಡ ಅಥವಾ ಬಲದ ಮಾನಸಿಕತೆಯೊಂದಿಗೆ ರಾಜಕೀಯ ನೆಲೆಯಿಂದ ಗುರುತಿಸಿಕೊಳ್ಳುವ ಜಂಜಾಟದ ಒತ್ತಡದಲ್ಲಿ ಇದ್ದಾರೆ ಎಂದು ಅವರ ಅಭಿಪ್ರಾಯಪಟ್ಟಿದ್ದಾರೆ. ಆಶಾವಾದಿ ಪ್ರಕಾಶನದ ವಲೇರಿಯನ್ ಕ್ವಾಡ್ರಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಾಹಿತ್ಯ ವಲಯದ ಕಾಸರಗೋಡು ನಾರಾಯಣ ಮೂಡಿತ್ತಾಯ, ವಿಜಯಶ್ರೀ ಹಾಲಾಡಿ, ಮಾರ್ಶಲ್ ಡಿಸೋಜಾ, ಎಸ್ ಎಂ ಶಿವಪ್ರಕಾಶ್, ಎಡ್ವರ್ಡ್ ಲೋಬೊ, ಗುರುಪ್ರಸಾದ್, ವಿಯಯೇಂದ್ರ ಪಾಟೀಲ… ಮೊದಲಾದವರು ಉಪಸ್ಥಿತರಿದ್ದರು. ಕಲ್ಲಚ್ಚು ಪ್ರಕಾಶನದ ಸಾಹಿತಿ ಪ್ರಕಾಶಕ ಮಹೇಶ ಆರ್ ನಾಯಕ್ ಸ್ವಾಗತಿಸಿ ನಿರೂಪಿಸಿದರು. ಅತ್ಯಂತ ಆಕರ್ಷಕವಾಗಿ ಒಂದು…

Read More

ಪುತ್ತೂರು : ಪುತ್ತೂರು ಕಬಕ ಸಮೀಪದ ಮಂಜಪಾಲು ಶ್ರೀಮತಿ ಮತ್ತು ಶ್ರೀ ಲಿಂಗಪ್ಪ ಪೂಜಾರಿಯವರು ನೂತನವಾಗಿ ಕಟ್ಟಿದ‌ ‘ಲಕ್ಷ್ಯ’ ಮನೆಯ ಪ್ರವೇಶೋತ್ಸದ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು‌ ಪುತ್ತೂರು ವತಿಯಿಂದ ದಿನಾಂಕ 04.05.2023ರಂದು ಸಂಜೆ ‘ಜಾಂಬವತೀ ಕಲ್ಯಾಣ’ ತಾಳಮದ್ದಳೆ ನಡೆಯಿತು. ಮುಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಲಕ್ಷ್ಮೀಶ ಬೇಂದ್ರೋಡಿ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ (ಶುಭಾ ಗಣೇಶ್), ಜಾಂಬವ (ಕಿಶೋರಿ ದುಗ್ಗಪ್ಪ ನಡುಗಲ್ಲು), ಬಲರಾಮ (ಹರಿಣಾಕ್ಷೀ ಜೆ. ಶೆಟ್ಟಿ) ಹಾಗೂ ನಾರದ (ಪ್ರೇಮಲತಾ ಟಿ. ರಾವ್) ಸಹಕರಿಸಿದರು. ಸಂಘದ ಕೋಶಾಧಿಕಾರಿ ದುಗ್ಗಪ್ಪ ಯನ್. ಸ್ವಾಗತಿಸಿ ವಂದಿಸಿದರು.

Read More

ಸುಳ್ಯ : ಶ್ರೀ ಜಗದ್ಗುರು ಮಧ್ವಾಚಾರ್ಯರ ಮಹಾಸಂಸ್ಥಾನ೦ ಶ್ರೀ ಕಾಣಿಯೂರು ಮಠ ಸುಳ್ಯ ದ.ಕ. ಇಲ್ಲಿಯ ಪೀಠಾಧಿಪತಿ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಮಹಾ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ “ಶ್ರೀ ನರಸಿಂಹ ಜಯಂತಿ” ಬಾಬ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು, ಪುತ್ತೂರು ವತಿಯಿಂದ ದಿನಾಂಕ 05.05.2023ರಂದು ಬೆಳಿಗ್ಗೆ ‘ಸ್ಯಮಂತಕ ಮಣಿ’ ತಾಳಮದ್ದಳೆ ಶ್ರೀ ಮಠದ ವಠಾರದಲ್ಲಿ ನಡೆಯಿತು. ಮುಮ್ಮೇಳದಲ್ಲಿ ಭವ್ಯ ಶ್ರೀ ಕುಲ್ಕುಂದ, ಪುಂಡಿಕಾಯಿ ರಾಜೇಂದ್ರ ಪ್ರಸಾದ್, ಬೇಂದ್ರೋಡಿ ಲಕ್ಷ್ಮೀಶ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಶ್ರೀ ಕೃಷ್ಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವ), ಹರಿಣಾಕ್ಷೀ ಜೆ. ಶೆಟ್ಟಿ (ಬಲರಾಮ) ಹಾಗೂ ಪ್ರೇಮಲತಾ ಟಿ. ರಾವ್ (ನಾರದ) ಸಹಕರಿಸಿದರು. ಪೂಜ್ಯ ಶ್ರೀಗಳು ಕಲಾವಿದರನ್ನು ಗೌರವಿಸಿದರು, ಸಂಚಾಲಕ ಭಾಸ್ಕರ್ ಬಾರ್ಯ ಕಲಾವಿದರನ್ನು ಪರಿಚಯಿಸಿದರು. ಶ್ರೀ ಮಠದ ವ್ಯವಸ್ಥಾಪಕ ನಿರಂಜನ ಆಚಾರ್ ಸ್ವಾಗತಿಸಿ, ಸದಾನಂದ ಕಾಣಿಯೂರು ವಂದಿಸಿದರು.

Read More

ಬಂಟ್ವಾಳ : ಬಂಟ್ವಾಳ ತಾಲೂಕು ಮಂಚಿ ಗ್ರಾಮದ‌ ಕುಕ್ಕಾಜೆ‌ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಶ್ರೀ ನರಸಿಂಹ ಜಯಂತಿ ಬಾಬ್ತು ದಿನಾಂಕ‌ 04.05.2023ರಂದು ಸಂಜೆ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು‌ ಪುತ್ತೂರು ವತಿಯಿಂದ ‘ಶರಸೇತು ಬಂಧ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಮುರಳೀಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಹನೂಮಂತ), ಭಾಸ್ಕರ್ ಶೆಟ್ಟಿ ಸಾಲ್ಮರ (ವೃದ್ಧ ವಿಪ್ರ) ಮತ್ತು ಕಯ್ಯೂರು ನಾರಾಯಣ ಭಟ್ (ಅರ್ಜುನ) ಸಹಕರಿಸಿದರು. ನ್ಯಾಯವಾದಿ ಪತ್ತುಮುಡಿ ಚಿದಾನಂದ ರಾವ್‌ ಪ್ರಾಯೋಜಿಸಿದ್ದರು.

Read More

ಮಂಗಳೂರು : ದಿನಾಂಕ 05-05-2023ನೇ ಶುಕ್ರವಾರದಂದು ನಗರದ ಬಲ್ಮಠದಲ್ಲಿರುವ ಬಜಾಜ್ ಸುಪ್ರೀಮ್ ಕಛೇರಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯು ಕಸಾಪ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ್ ಎಸ್. ರೇವಣಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಬಜಾಜ್ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀ ರಾಘವೇಂದ್ರ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು. “ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಇತಿಹಾಸ ಇದೆ, ಚರಿತ್ರೆ ಇದೆ. ಕ.ಸಾ.ಪ. ಎನ್ನುವುದು ಸಮಸ್ತ ಕನ್ನಡಿಗರ ಸ್ವಾಭಿಮಾನದ ಸಂಕೇತ ಮತ್ತು ಕನ್ನಡದ ಅಸ್ಮಿತೆಯ ದ್ಯೋತಕ. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇವಲ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅರಿತು ಕನ್ನಡ ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮನೆಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಕನ್ನಡವನ್ನು ಬಳಸಬೇಕು. ಆಂಗ್ಲ ಭಾಷೆಯ ಮೋಹದಿಂದ ನಮ್ಮ ಆಡುಭಾಷೆ ಹಾಗೂ ಮಾತೃ ಭಾಷೆಯಾದ ಕನ್ನಡವನ್ನು ಕೀಳಾಗಿ ಕಾಣಬಾರದು. ತಾವು ಕನ್ನಡದಲ್ಲಿ ವ್ಯವಹರಿಸುವುದರ ಜೊತೆಗೆ ತಮ್ಮ ಮಕ್ಕಳಿಗೆ…

Read More

ಮುಡಿಪು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯು ದಿನಾಂಕ 05-05-2023ರಂದು ದೇರಳಕಟ್ಟೆಯ ಕಂಫರ್ಟ್ ಇನ್ ಸಭಾಂಗಣದಲ್ಲಿ ನಡೆಯಿತು. ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗದ ವಿಶ್ರಾಂತ ನಿರ್ದೇಶಕ ಪ್ರೊ ಪಿ. ಶ್ರೀಕೃಷ್ಣ ಭಟ್ ಅವರು ‘ಕನ್ನಡ ನಾಡು ನುಡಿ : ಪರಿಷತ್ತಿನ ಜವಾಬ್ದಾರಿ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. “ಸಾಹಿತ್ಯ ಪರಿಷತ್ತು ಆರಂಭದಲ್ಲಿ ರಾಜಪ್ರಭುತ್ವದ ನೇತೃತ್ವದಲ್ಲಿದ್ದು ಕಾಸರಗೋಡಿನ ಸಾಹಿತ್ಯ ಸಮ್ನೇಳನದ ಬಳಿಕ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯ ತೆಗೆದುಕೊಂಡಿತು. ಅಂದಿನಿಂದಲೂ ಸಾಹಿತ್ಯ ಪರಿಷತ್ತು ಪ್ರಭುತ್ವದ ಅಡಿಯಾಳಾಗದೇ ಕನ್ನಡ ನಾಡು ನುಡಿ ಸಂವರ್ಧನೆಗೆ ಕಟಿಬದ್ಧವಾಗಿ ಕಾರ್ಯನಿರ್ವಹಿಸಿದೆ. ಸಾಹಿತ್ಯ ಪರಿಷತ್ತು ಬೆಳ್ಳಾವೆ, ಮಾಸ್ತಿ, ಡಿವಿಜಿ ಮೊದಲಾದ ಹಲವು ಸಾಹಿತಿಗಳ ಸಮರ್ಥ ಮುಂದಾಳತ್ವದಲ್ಲಿ ನಿಘಂಟು, ಹಳೆಗನ್ನಡ ಸಾಹಿತ್ಯ, ಗದ್ಯಾನುವಾದ ಮುಂತಾದ ಮೌಲಿಕ ಕೃತಿಗಳ ಪ್ರಕಟಣೆಯ ಮೂಲಕ ಅಧ್ಯಯನ ಮತ್ತು ಜ್ಞಾನಕೇಂದ್ರಿತ ಕಾರ್ಯಗಳನ್ನು ಮಾಡಿದೆ. ಈ ಪರಂಪರೆಯ ಅರಿವು ನಮಗಿರಬೇಕು”…

Read More

ಬೆಂಗಳೂರು : ‘ಸ್ಟೇಜ್ ಬೆಂಗಳೂರು’ ಪ್ರಸ್ತುತ ಪಡಿಸುವ ಗಿರೀಶ್ ಜಿಂದಪ್ಪ ಪರಿಕಲ್ಪನೆಯ ವಿಶಾಲ್ ಕಶ್ಯಪ್ (ನಿನಾಸಂ) ನಿರ್ದೇಶನದ ‘ನೋನಗಾನ್’ ನಾಟಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 9ನೇ ತಾರೀಖು ಸಂಜೆ 7.15ಕ್ಕೆ ಪ್ರದರ್ಶನಗೊಳ್ಳಲಿದೆ. ನಾಟಕದ ವಿವರಣೆ ನೋನಗನ್ ಒಂದು ವಿಭಿನ್ನವಾದ ಪ್ರಯೋಗಾತ್ಮಕ ನಾಟಕವಾಗಿದೆ. ಈ ನಾಟಕವನ್ನು ರಚಿಸಿದ್ದು ಸ್ವತಃ ಈ ನಾಟಕದ ನಟರು. ಒಬ್ಬೊಬ್ಬ ನಟರು ಒಂದೊಂದು ಪಾತ್ರವನ್ನು ರಚಿಸಿದ್ದಾರೆ. ಒಟ್ಟು 9 ನಟರಿದ್ದು 9 ಪಾತ್ರವನ್ನು ಅವರೇ ಆಯ್ಕೆ ಮಾಡಿ ರಚಿಸಿದ್ದಾರೆ. ಈ ಸಮಾಜದಲ್ಲಿರುವ ಒಡಕು, ಭ್ರಷ್ಟಾಚಾರ ಹಾಗೂ ಸಾಮಾನ್ಯ ಜನರ ಕಷ್ಟವನ್ನು ಆ ಪಾತ್ರವೇ ಹೇಳುತ್ತವೆ. ಒಂದು ವಿಭಿನ್ನಾದ ಪ್ರಯೋಗವನ್ನು ಮಾಡಬೇಕು ಎಂಬ ಹಂಬಲ ನಮ್ಮ ಸ್ಟೇಜ್ ಬೆಂಗಳೂರು ತಂಡದ್ದು. ನಿರ್ದೇಶಕ ವಿಶಾಲ್ ಕಶ್ಯಪ್ ಕೋಲ್ಕತ್ತಾದಲ್ಲಿ ಹುಟ್ಟಿದ ಇವರು ಸುಮಾರು 15 ವರ್ಷದಿಂದ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿರುಗಾಳಿ, ತುಘಲಕ್, ವಿಜಯನಾರಸಿಂಹ, ಕ್ರಮವಿಕ್ರಮ, ರಾವಿನದಿ ದಂಡೆಯಲ್ಲಿ, ದಿ ಮರ್ಚೆಂಟ್ ಆಫ್ ವೆನಿಸ್ ಹೀಗೆ 20ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.…

Read More

ಉಡುಪಿ: ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲ್ಲೂಕು ಘಟಕ ಹಾಗೂ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ಇವರ ಸಹಕಾರದಲ್ಲಿ ಉಡುಪಿಯ ಪಿಪಿಸಿಯ ಮಿನಿ ಆಡಿಟೋರಿಯಂನಲ್ಲಿ ದಿನಾಂಕ 05-05-2023ರಂದು ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನ ಆಚರಿಸಲಾಯಿತು. “ಕನ್ನಡ ಸಾಹಿತ್ಯ ಪರಿಷತ್ತಿಗೆ 109 ವರ್ಷಗಳ ಸಂಭ್ರಮ. ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ 1915ರಲ್ಲಿ ಆಗಿನ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಳಜಿವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಈಗಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ” ಎಂದು ಸಾಹಿತಿ ಶ್ರೀ ನಾರಾಯಣ ಮಡಿ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು. ಸಮಾರಂಭವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಜೆ. ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ರವಿರಾಜ್ ಎಚ್.ಪಿ. ವಹಿಸಿದ್ದರು. ಇದೇ ಸಂದರ್ಭದಲ್ಲಿ ಯಕ್ಷ ಪ್ರೇಮಿ ಶ್ರೀ ನಾರಾಯಣ…

Read More

ಚೆನ್ನೈ: ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಹಾಗೂ ಚೆನ್ನೈಯ ಮಧುರಧ್ವನಿ ಪ್ರಸ್ತುತ ಪಡಿಸುವ ”ಮಂಜುನಾದ” ಸಂಗೀತ ಕಛೇರಿಯು ದಿನಾಂಕ 13-05-2023, ಶನಿವಾರ ಸಂಜೆ ಗಂಟೆ 6ಕ್ಕೆ ಅರ್ಕೆ ಕನ್ವೆಂಷನ್ ಸೆಂಟರ್, ಮೈಲಾಪುರ್, ಚೆನ್ನೈ ಇಲ್ಲಿ ನಡೆಯಲಿದೆ. ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್‌ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 25 ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಈಗಾಗಲೇ ರಾಜ್ಯದ ವಿವಿಧೆಡೆ 11 ಕಚೇರಿಗಳು ನಡೆದಿದ್ದು, ಈ 12ನೆಯ ಸಂಗೀತ ಕಚೇರಿಯು ಹೊರ ರಾಜ್ಯದಲ್ಲಿ ನಡೆಯುತ್ತಿರುವ ಪ್ರಪ್ರಥಮ ಕಾರ್ಯಕ್ರಮವಾಗಿರುತ್ತದೆ. ‘ಮಂಜುನಾದ’ ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಶ್ರುತಿ ಎಸ್. ಭಟ್ ಚೆನ್ನೈ, ಶ್ರೇಯಾ ಕೊಳತ್ತಾಯ ಮಂಗಳೂರು, ಅತ್ರೆಯೀ ಕೃಷ್ಣಾ ಕಾರ್ಕಳ, ಅದಿತಿ ಬಿ. ಪ್ರಹ್ಲಾದ್ ಬೆಂಗಳೂರು, ದಿವ್ಯಶ್ರೀ…

Read More