Author: roovari

ಬೆಂಗಳೂರು: ಸುಧೀಂದ್ರ ನೃತ್ಯ ಕಲಾನಿಕೇತನ (ರಿ.) ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದಲ್ಲಿ 08-04-2023ನೇ ಶನಿವಾರ ಹಮ್ಮಿಕೊಂಡ ‘ನೃತ್ಯ ಸಿರಿ’ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಒಂದೇ ದಿನದಲ್ಲಿ ಮೂವರು ನೃತ್ಯ ವಿದ್ವಾಂಸರುಗಳು ಕಾರ್ಯಕ್ರಮ ನೀಡಿದ್ದು, ಮೊದಲ ಭಾಗದಲ್ಲಿ ನಾಟ್ಯಗುರು ಡಾ.ಸೌಂದರ್ಯ ಶ್ರೀವತ್ಸ ಇವರ ಶಿಷ್ಯೆಯಾದ ವಿದುಷಿ ಮೈತ್ರಿ ಮಧ್ಯಸ್ಥ ಇವರು ಭರತನಾಟ್ಯವನ್ನು ಅದ್ಭುತವಾಗಿ ಪ್ರದರ್ಶಿಸಿದರು. ಇವರು ನರ್ತನ ಕೀರ್ತನಾ’ ನೃತ್ಯ ಸಂಸ್ಥೆಯ ಕಲಾ ನಿರ್ದೇಶಕರಾಗಿದ್ದಾರೆ. ಇವರು ಭರತನಾಟ್ಯದ ಅದ್ಭುತ ಪ್ರಸ್ತುತಿಯನ್ನು ನೀಡಿದರು. ಭುವನ ಗುರು ಪ್ರಸಾದ್ ಇವರು ಶಾಸ್ತ್ರೀಯ ನೃತ್ಯದ ಒಂದು ಪ್ರಕಾರವಾದ ಕಥಕ್ ನೃತ್ಯ ಕಲಾವಿದೆ. ನಾಟ್ಯಗುರು ಭಾರತಿ ವಿಠಲರ ಶಿಷ್ಯೆಯಾದ ಇವರು ಕಲ್ಪನಾ ಸ್ಕೂಲ್ ಆಫ್ ಡಾನ್ಸ್ ನ ನಿರ್ದೇಶಕಿಯಾಗಿದ್ದಾರೆ. ಎರಡನೇ ಭಾಗದಲ್ಲಿ ಇವರು ಶ್ಲಾಘನೀಯ ಕಥಕ್ ನೃತ್ಯವನ್ನು ಪ್ರಸ್ತುತ ಪಡಿಸಿದರು. ವಿದುಷಿ ಮೈತ್ರಿ ಮಧ್ಯಸ್ಥ ವಿದುಷಿ ಭುವನ ಗುರುಪ್ರಸಾದ್ 3ನೇ ಭಾಗದಲ್ಲಿ ಆಹ್ವಾನಿತ ಕಲಾದಂಪತಿಗಳಾದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದೀಪಕ್ ಇವರಿಂದ ಸಂಪೂರ್ಣ ರಾಮಾಯಣ…

Read More

ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಅಧ್ಯಾಯವು 2023ರ ಏಪ್ರಿಲ್ 18 ಮಂಗಳವಾರದಂದು ವಿಶ್ವ ಪರಂಪರೆ ದಿನವನ್ನು ಆಚರಿಸುವ ಅಂಗವಾಗಿ ನಗರದ ಹಳೆ ಬಂದರು ಪ್ರದೇಶದ ಮೂಲಕ ‘ಹೆರಿಟೇಜ್ ವಾಕ್’ ಅನ್ನು ಆಯೋಜಿಸಿತು. ಕಲಾವಿದರು, ವಾಸ್ತುಶಿಲ್ಪಿಗಳು, ಬ್ಯಾಂಕ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಆಸಕ್ತರು ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದರು. ಬೆಳಗ್ಗೆ 7:10ಕ್ಕೆ ಗುರುಪುರ ನದಿ ದಂಡೆಯಲ್ಲಿರುವ ಹಳೆ ಬಂದರಿನಿಂದ ಆರಂಭವಾದ ಪಾದಯಾತ್ರೆಗೆ ಪ್ರಾಸ್ತಾವಿಕವಾಗಿ ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಸ್ ಚಂದ್ರ ಬಸು ಪಾರಂಪರಿಕ ನಡಿಗೆಯ ಮಹತ್ವವನ್ನು ಪರಿಚಯಿಸಿದರು. 1983ರಿಂದ ವಿಶ್ವ ಪರಂಪರೆ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಸಂರಕ್ಷಣಾ ವಾಸ್ತುಶಿಲ್ಪಿ ಕ್ಯಾರೊಲಿನ್ ಡಿಸೋಜಾ ಅವರು ರೋಮನ್ ಅವಧಿಯ ಆರಂಭಿಕ ಉಲ್ಲೇಖದಿಂದ ನಂತರದ ಬ್ರಿಟಿಷ್ ಆಳ್ವಿಕೆಯ ಹಂತದವರೆಗೆ ಬಂದರಿನ ಐತಿಹಾಸಿಕ ವಿಕಾಸವನ್ನು ವಿವರಿಸಿದರು. ‘ಕಸ್ಟಮ್ ಹೌಸ್’ ಮೊದಲು ಭೇಟಿ ನೀಡಿದ ಸ್ಥಳ. ಕಸ್ಟಮ್ಸ್ ಅಧೀಕ್ಷಕರಾದ ರಾಮ್ ಅವತಾರ್ ಮೀನಾ ಅವರು…

Read More

ಮಂಗಳೂರು: ತುಳು ಕೂಟ ಕುಡ್ಲದ ಬಂಗಾರ ಪರ್ಬದ ಸರಣಿ ವೈಭವೋ – 2 ಅಂಗವಾಗಿ ‘ಬಿಸು ಪರ್ಬ ಸಂಭ್ರಮೊ’ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ದಿನಾಂಕ 15-04-2023 ಶನಿವಾರ ನೆರವೇರಿತು. ಇದೇ ವೇದಿಕೆಯಲ್ಲಿ ರತ್ನವರ್ಮ ಹೆಗ್ಗಡೆ ಪ್ರಶಸ್ತಿ -2023 ಪ್ರದಾನ ಮಾಡಲಾಯಿತು. ತುಳು ಕೂಟ ಕುಡ್ಲದ ಅಧ್ಯಕ್ಷ ಶ್ರೀ ಬಿ.ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಪ್ರಸೀತಾ ಪ್ರದೀಪ್‌ ಮತ್ತು ಶ್ರೀಮತಿ ಹೇಮ ನಿಸರ್ಗ ಇವರ ನೇತೃತ್ವದಲ್ಲಿ ಬಿಸು ಕಣಿ (ವಿಷು ಕಣಿ) ಇಟ್ಟು ಬಿಸು ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ರೂಪಕಲಾ ಆಳ್ವ ಇವರ ಬಿಸು ಆಚರಣೆಯನ್ನು ವಿವರಿಸುವ ‘ಬಿಸು’ ಹಾಡು ಮತ್ತು ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಇವರ ‘ಬಿಸುತ ಮಿನದನ’ ಹಾಡುಗಳನ್ನು ಹಾಡಲಾಯಿತು. ಈ ಕಾರ್ಯಕ್ರಮವನ್ನು ರಾಜ್ಯ ಧಾರ್ಮಿಕ ಪರಿಷತ್‌ ಮಾಜಿ ಸದಸ್ಯರಾದ ಶ್ರೀ ಪದ್ಮನಾಭ ಬಿ. ಕೋಟ್ಯಾನ್ ಉದ್ಘಾಟಿಸಿ, ಮಾತನಾಡುತ್ತಾ “ಹಿಂದಿನ ಆಚರಣೆ-ಕಟ್ಟುಪಾಡುಗಳನ್ನು ಇಂದಿನ ಪೀಳಿಗೆ ತಿಳಿಯಬೇಕು” ಎಂಬ ಸಂದೇಶ ನೀಡಿದರು. ಪ್ರಧಾನ ಕಾರ್ಯದರ್ಶಿ ಶ್ರೀ…

Read More

Mangalore: Srinivas University and Srinivas Group of Institutions Talents day was held at Srinivas University Mukka Campus on 19th April 2023. Hon’ble Chancellor of Srinivas University and President of A. Shama Rao Foundation Dr. CA A. Raghavendra Rao inaugurated the Srinivas university website initiated by students of Department of Computer Science ‘Web Flow Community’ in his presidential address he appreciated the efforts of students of dept of computer science for creating an innovative website. Hon’ble Pro-Chancellor of Srinivas University and Vice President of A. Shama Rao Foundation Dr. A. Srinivas Rao expressed his pride that students have initiated the administrative…

Read More

ಹನೂಮಂತನಿಗೆ ಶ್ರೀ ರಾಮಚಂದ್ರನಲ್ಲಿರುವ ಪರಮ ಭಕ್ತಿ, ಸೀತೆಗೆ ಪಾತಿವ್ರತ್ಯದಲ್ಲಿರುವ ಅಚಲ ನಿಷ್ಠೆ ಮತ್ತು ಕ್ಷಾತ್ರಿಯ ಹೆಣ್ಣಿನ ಓಜಸ್ಸೇ ಚೂಡಾಮಣಿ ಪ್ರಸಂಗದಲ್ಲಿ ಅಭಿವ್ಯಕ್ತಗೊಳ್ಳಬೇಕಾದ ಮೂಲ ದ್ರವ್ಯಗಳು. ಇದನ್ನು ಅಂದಿನ ತಾಳಮದ್ದಲೆಯು ಮೂಲ ಆಶಯಕ್ಕೆ ಚ್ಯುತಿ ಬಾರದಂತೆ ನಡೆದು ಶ್ರೋತ್ರಗಳ ಮೆಚ್ಚುಗೆಗೆ ಪಾತ್ರವಾಯಿತು. ಕಲ್ಕೂರ ಪ್ರತಿಷ್ಠಾನವು ಶ್ರೀಯುತ ಪ್ರದೀಪ್ ಕುಮಾರ ಕಲ್ಕೂರ ಅವರ ಮನೆಯ ಸುಂದರ ಸಭಾಂಗಣದಲ್ಲಿ ಪೇಜಾವರ ಶ್ರೀ ಶ್ರೀಗಳ 60ನೇ ಹುಟ್ಟು ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಆಯೋಜಿಸಿದ ನಾಲ್ಕು ದಿನಗಳ ನಾಡು ನುಡಿ ಜಾಗೃತಿ ಸಮ್ಮೇಳನದ ಎರಡನೇ ದಿನ ಶ್ರೀಯುತ ಬಿ ಸೀತಾರಾಮ ತೋಳ್ಪಡಿತ್ತಾಯರ ನೇತೃತ್ವದಲ್ಲಿ ಆಯೋಜನೆಗೊಂಡ ತಾಳಮದ್ದಲೆಯಲ್ಲಿ ಡಾ. ಎಂ ಪ್ರಭಾಕರ ಜೋಶಿಯವರು ಜಾಂಬವಂತರಾಗಿ ಪ್ರಸಂಗಕ್ಕೆ ಉತ್ತಮ ಮುನ್ನುಡಿಯನ್ನು ನೀಡಿದರು. ವೈಚಾರಿಕವಾಗಿ ಮತ್ತು ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲ ಸಾಮರ್ಥ್ಯವನ್ನು ಶ್ರೀಯುತ ಉಜಿರೆ ಅಶೋಕ್ ಭಟ್ ತಮ್ಮದಾಗಿಸಿಕೊಂಡಿದ್ದಾರೆ. ಈ ದೃಷ್ಟಿಯಿಂದ ಹನೂಮಂತನಾಗಿ ಅವರು ಪ್ರಸಂಗಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾದರು. ಗಾಂಭೀರ್ಯದ ದೃಷ್ಟಿಯಿಂದ ಸೀತೆಯಾಗಿ ಪಾತ್ರ ನಿರ್ವಹಣೆ ಮಾಡಿದ ಯುವ ಕಲಾವಿದ ಶ್ರೀ…

Read More

19 ಏಪ್ರಿಲ್ 2023, ಮೈಸೂರು: ಅಭಿಯಂತರರು ಪ್ರಸ್ತುತ ಪಡಿಸುವ “ಮರಣ ಮೃದಂಗ” ರಂಗ ಪ್ರಯೋಗವು ದಿನಾಂಕ:23-04-2023ರ ಬಾನುವಾರ ಸಂಜೆ 6-30ಘಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ನಾಡಿನ ಪ್ರಖ್ಯಾತ ನಾಟಕಕಾರ ಹಾಗೂ ರಂಗನಿರ್ದೇಶಕರಾದ ಶ್ರೀ ರಾಜೇಂದ್ರ ಕಾರಂತರವರು ರಚಿಸಿ ನಿರ್ದೇಶಿಸಿದ್ದು, ಈ ರಂಗ ಪ್ರಯೋಗದ ನಿರ್ವಹಣೆ ಹೆಚ್.ಎಸ್. ಸುರೇಶ್ ಬಾಬು ಅವರದ್ದು. ಮರಣ ಮೃದಂಗ: ನಾಡಿನ ಪ್ರಖ್ಯಾತ ನಾಟಕಕಾರ ಹಾಗೂ ರಂಗನಿರ್ದೇಶಕರಾದ ಶ್ರೀ ರಾಜೇಂದ್ರ ಕಾರಂತರವರು ರಚಿಸಿರುವ ‘ಮರಣ ಮೃದಂಗ’ ನಾಟಕವು ಅಧಿಕಾರದಲ್ಲಿರುವ ವ್ಯಕ್ತಿಯು ತಾನು ಎಲ್ಲಕ್ಕು ಅತೀತ ಎಂದು ಭಾವಿಸಿ ಬಿಡುತ್ತಾನೆ. ಸಾವು ಮನೆ ಬಾಗಿಲನ್ನು ಬಡಿದಾಗಲೇ ಮನುಷ್ಯನಿಗೆ ತಾನೆಷ್ಟು ಅಸಹಾಯಕ ಎಂಬ ಸತ್ಯ ಅರಿವಾಗುವುದು. ಅಂತಹ ಒಬ್ಬ ದುರಹಂಕಾರಿ ಹಾಗೂ ರಾಜಕೀಯ ನಾಯಕನ ಸಾವಿನ ಹೊಸ್ತಿಲಿನ ಸಂವೇದನೆಗಳೇ ಮರಣ ಮೃದಂಗ. ನಿರ್ದೇಶಕರ ಬಗ್ಗೆ: ಶ್ರೀ ರಾಜೇಂದ್ರ ಕಾರಂತ ಕನ್ನಡ ನಾಡಿನ ಪ್ರತಿಭಾವಂತ ರಂಗನಿರ್ದೇಶಕ ಹಾಗೂ ನಾಟಕಕಾರರು. 50ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿರುವ ಇವರು 100ಕ್ಕೂ…

Read More

19 ಏಪ್ರಿಲ್ 2023, ಬೆಂಗಳೂರು: ಸ್ಟೇಜ್ ಬೆಂಗಳೂರು ಪ್ರಸ್ತುತ ಪಡಿಸಿದ ಮಕ್ಕಳ ಥಿಯೇಟರ್ ಹಬ್ಬ ಏಪ್ರಿಲ್ -2023 ಇದರ ಅಂಗವಾಗಿ ನಾಟಕ ‘ಬದುಕಿನ ಬಣ್ಣ’ ದಿನಾಂಕ 12-04-2023ನೇ ಬುಧವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ನಯನ ಸಭಾಂಗಣದಲ್ಲಿ ನಡೆಯಿತು. ಸಂಜಯ್ ನಟನ ಮತ್ತು ಶೇಖರ್ ನಟನ ಇವರು ವಿನ್ಯಾಸ ಮತ್ತು ನಿರ್ದೇಶಿಸಿದ್ದು, ಸುಪ್ರೀತ್ ರವರ ಸಂಗೀತ ಈ ನಾಟಕಕಿದೆ. “ಬದುಕಿನ ಬಣ್ಣ” ಆಧುನಿಕ ಹಾಗೂ ಖಾಸಗೀಕರಣಗಳು ಮಾನವನಿಗೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ನಮ್ಮ ಸಂಸ್ಕೃತಿ, ಕಾಡು, ಪ್ರಾಣಿ, ಪಕ್ಷಿಗಳನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು. ಮಹಾನಗರಗಳಲ್ಲಂತೂ ಮರ ಗಿಡಗಳು, ಪಕ್ಷಿಗಳು ಕಾಣ ಸಿಗುವುದೇ ವಿರಳ. ಎಲ್ಲಾ ಮರ ಗಿಡಗಳ ಜಾಗದಲ್ಲಿ ಬಹು ಮಹಡಿಯ ಕಟ್ಟಡಗಳು, ಡಾಂಬರು ರಸ್ತೆ, ಫೈ-ಓವರ್‌ಗಳು, ವಾಹನಗಳ ಕಿರಿಕಿರಿ ಶಬ್ದ, ಕಾಲಿಗೆ ಚಕ್ರ ಕಟ್ಟಿಕೊಂಡಿರುವಂತೆ ತಮ್ಮ ಕೆಲಸಗಳತ್ತ ಓಡಾಡುವ ಜನರು. ತಮ್ಮ ಮಕ್ಕಳ ಬಗ್ಗೆಯೇ ಕಾಳಜಿ ವಹಿಸದ ಜನರು ಇನ್ನು ಮರ ಗಿಡಗಳ, ಪ್ರಾಣಿ ಪಕ್ಷಿಗಳ ಬಗ್ಗೆ…

Read More

19 ಏಪ್ರಿಲ್ 2023, ಮೈಸೂರು: ಅದಮ್ಯ ರಂಗ ಶಾಲೆ (ರಿ.) ಮೈಸೂರು ಇವರು ಜಿ.ಪಿ.ಐ.ಇ.ಆರ್. ರಂಗ ತಂಡ ಮೈಸೂರು ಸಹಕಾರದೊಂದಿಗೆ ಹನುಮಂತ ಹಾಗೇರಿ ಅವರ ರಚನೆಯ ನಾಟಕ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಇದೇ ಬರುವ ಏಪ್ರಿಲ್ 23ನೇ ಭಾನುವಾರದಂದು ಮೈಸೂರಿನ ಕಲಾಮಂದಿರ ಆವರಣ, ಕಿರು ರಂಗಮಂದಿರ ಇಲ್ಲಿ ಪ್ರದರ್ಶನಗೊಳ್ಳಲಿದೆ . ಈ ನಾಟಕವನ್ನು ವಿನೋದ ಸಿ. ಮೈಸೂರು (ಸಾಣೆಹಳ್ಳಿ ಪದವೀಧರ, ಎಂ.ಎ ಡ್ರಾಮಾ) ನಿರ್ದೇಶಿಸಿದ್ದು, ಮಧು ಮಳವಳ್ಳಿ ಬೆಳಕಿನ ವಿನ್ಯಾಸ ಮಾಡಲಿದ್ದಾರೆ. ನಾಟಕದ ಬಗ್ಗೆ: ಗುಡಿಯಾಗಿನ ಹನುಮಪ್ಪ ಯಾರಿಗೆ ಸೇರಬೇಕು? ಅನ್ನುವುದೇ ಎರಡು ಊರುಗಳ ನಡುವೆ ನಡೆಯುವ ಜಗಳವೇ ಈ ನಾಟಕದ ಕಥಾವಸ್ತು. ಆರಂಭದಲ್ಲಿ ಪೂಜಾರಿ-ರಿಂದಮ್ಮನ ಕನಸಿನಿಂದ ಶುರುವಾದ ಜಗಳಕ್ಕೆ “ರಾಜಕಾರಣ” ಸೇರಿಕೊಂಡು ಬೇರೆಯ ಸ್ವರೂಪ ಪಡೆದುಕೊಳ್ಳುತ್ತದೆ. ನೂರಾರು ವರ್ಷಗಳಿಂದ ಸಹ ಬಾಳ್ವೆಯಿಂದ ಬದುಕಿದ ಜನರನ್ನು, ಅವರ ಧಾರ್ಮಿಕ ಭಾವನೆಯನ್ನು ಕೆರಳಿಸಿ ತಮ್ಮ ಲಾಭಕ್ಕೆ ರಾಜಕಾರಣಿಗಳು ಬಳಸಿಕೊಳ್ಳುತ್ತಾ , ಅವರಲ್ಲೇ ದ್ವೇಷದ ಕಿಡಿ ಹಚ್ಚುತ್ತಾರೆ. ಇಷ್ಟೆಲ್ಲ ನಡೆದರು ಪಾಪ ಜನರಿಗೆ…

Read More

18 ಏಪ್ರಿಲ್ 2023, ಮಂಗಳೂರು: ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಒಂಭತ್ತನೇ ವರ್ಷಾಚರಣೆ ಪ್ರಯುಕ್ತ ಎಪ್ರಿಲ್ 22ರಂದು ಶನಿವಾರ ‘ಬಂಟ ಸಾಂಸ್ಕೃತಿಕ ವೈಭವ – 2023’ ಉರ್ವಾಸ್ಟೋರ್ ಅಂಬೇಡ್ಕರ್ ಭವನದಲ್ಲಿ ಜರಗಲಿದೆ ಎಂದು ಟ್ರಸ್ಟ್ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ ಹೇಳಿದ್ದಾರೆ. ನಗರದ ಬಲ್ಮಠ ಕುಡ್ಲ ಪೆವಿಲಿನ್ ನ ಸದಾಶಯ ಕಚೇರಿಯಲ್ಲಿ ಜರಗಿದ ಪೂರ್ವ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಪೂರ್ವಾಹ್ನ ಒಂಬತ್ತು ಗಂಟೆಗೆ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ‘ಬಿಸುಕಣಿ’ ಉದ್ಘಾಟಿಸುವರು. ಬಳಿಕ ವಿವಿಧ ಬಂಟರ ಸಂಘಗಳ ಕಲಾತಂಡಗಳಿಂದ ಸಾಂಸ್ಕೃತಿಕ ವೈಭವ ಜರಗುವುದು. ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭವನ್ನು ನಿಟ್ಟೆ ವಿಶ್ವವಿದ್ಯಾನಿಲಯ ಕುಲಾಧಿಪತಿ ಡಾ.ಎನ್.ವಿನಯ ಹೆಗ್ಡೆ ಉದ್ಘಾಟಿಸಲಿದ್ದು, ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದರು. ಇದೇ ಸಂದರ್ಭದಲ್ಲಿ ‘ಸದಾಶ್ರಯ’ ಗೃಹ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ‘ಏಕಾಂತದಿಂದ ಲೋಕಾಂತರಕೆ’ ಕೃತಿ ಬಿಡುಗಡೆ: ‘ಸದಾಶಯ’ ಪತ್ರಿಕೆಯ ಪ್ರಧಾನ ಸಂಪಾದಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ 100 ಲೇಖನಗಳ ಸಂಚಯ ‘ಏಕಾಂತದಿಂದ ಲೋಕಾಂತರ’…

Read More

18 ಏಪ್ರಿಲ್ 2023, ಮಂಗಳೂರು: ಮಕ್ಕಳ ಬೇಸಿಗೆ ರಜೆಯನ್ನು ಸದುಪಯೋಗಗೊಳಿಸಲು ಕಲಾಭಿ ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಇವರ ವತಿಯಿಂದ ಕೆನರಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ನಲ್ಲಿ “ಅರಳು” ಎಂಬ ಹತ್ತು ದಿನಗಳ ವೃತ್ತಿಪರ ರಂಗಭೂಮಿ ಆಯೋಜಿಸಿದ್ದು, ದಿನಾಂಕ 16.04.2023 ರವಿವಾರದಂದು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ಡಾ.ಶ್ರೀಪಾದ್ ಭಟ್ ಇದನ್ನು ಉದ್ಘಾಟಿಸಿದರು. ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಕಾರ್ಯದರ್ಶಿ ಎಂ. ರಂಗನಾಥ್ ಭಟ್, ಜೊತೆ ಕಾರ್ಯದರ್ಶಿ ಸುರೇಶ ಕಾಮತ್, ಮುಖ್ಯೋಪಾಧ್ಯಾಯರು ಕವಿತಾ ಮೌರ್ಯ, ಪಿ.ಆರ್.ಒ. ಉಜ್ವಲ್ ಮಲ್ಯ, ಗೌರವ ಸಲಹೆಗಾರರು ಡಾ.ಎಂ. ದಾಮೋದರ ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷರು ಸುರೇಶ್ ಬಿ. ವರ್ಕಾಡಿ ಇವರು ಉದ್ಘಾಟನೆಯಲ್ಲಿ ಉಪಸ್ಥಿತರಿದ್ದರು. ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ಡಾ. ಶ್ರೀಪಾದ್ ಭಟ್ ತಮ್ಮ ಮಾತಿನ ಮೂಲಕ ಮಕ್ಕಳು ಹಾಗೂ ಅವರ ಪೋಷಕರಲ್ಲಿ ರಂಗಭೂಮಿಯ ಅಭಿರುಚಿ ಮೂಡಿಸಿದರು ಮತ್ತು ಪೋಷಕರೊಂದಿಗೆ ಸಂವಾದ ಕೂಡ ನಡೆಸಿದರು. ನಂತರ ಮಂಗಳೂರಿನ ಜರ್ನಿ ಥಿಯೇಟರ್ ತಂಡದಿಂದ ರಂಗ…

Read More