Author: roovari

ಮಂಗಳೂರು : ಕಾಸರಗೋಡು, ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಮೇಳದವರಿಂದ ಸರಣಿ ಯಕ್ಷಗಾನ ಬಯಲಾಟವು ಏಪ್ರಿಲ್ 21ರಿಂದ 23ರವರೆಗೆ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ದಿನಾಂಕ 21-04-2023ರಂದು ‘ವೀರ ಸೌಮಿತ್ರಿ’, 22-04-2023ರಂದು ‘ವೀರ ಪಂಚಜನ’ ಹಾಗೂ 23-04-2023ರಂದು ‘ವೀರ ಜಾಂಬವ’ ಪ್ರಸಂಗಗಳು ಪ್ರದರ್ಶನಗೊಂಡಿತ್ತು. ಈ ಸಂದರ್ಭ ಮೇಳದ ಸಂಚಾಲಕರಾದ ಶ್ರೀ ಗಣಾಧಿರಾಜ ತಂತ್ರಿ ಉಪಾಧ್ಯಾಯರಿಗೆ ಯಕ್ಷಗಾನದ ಸಾಧನೆಗಾಗಿ ಸನ್ಮಾನ ನಡೆಯಿತು. ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀ ಕೆ.ಕೃಷ್ಣ ಹೆಬ್ಬಾರ್, ಪ್ರಮುಖರಾದ ಮೋನಪ್ಪ ಶ್ರೀಮಂಜು, ವಾಸುದೇವ ಆಚಾರ್ಯ, ಬದವಿದೆ ವಿಶ್ವೇಶ್ವರ ಭಟ್, ಬಾಲಕೃಷ್ಣ ಭಟ್, ಬಾಯಾರು ಎಸ್.ಎನ್‌. ಭಟ್, ಎಂ.ಸದಾಶಿವ, ಪ್ರಭಾಕರ್ ಕುಳಾಯಿ, ಎಂ.ಜೆ. ಶೆಟ್ಟಿ ಉದಯ ನಾರಾಯಣ ಮಯ್ಯ, ನವೀನ್ ಹೊಸಬೆಟ್ಟು ಶಕುಂತಳಾ ಪ್ರಕಾಶ್‌, ಮಧುವನ ಶ್ರೀಧರ ರಾವ್, ನಿಶ್ಚಿತ್ ಪಿಂಗಾರ ಕುಳಾಯಿ, ವಾಸುದೇವ ಹೆಬ್ಬಾರ್, ಬಿ.ಬಿ. ರೈ, ರಮೇಶ್ ಆಚಾರ್ಯ, ಕೆ.ಪಿ. ಚಂದ್ರಶೇಖರ್, ರಾಮಚಂದ್ರ ಕುಂದರ್ ಮತ್ತಿತರರು ಉಪಸ್ಥಿತರಿದ್ದು, ಶಂಕರನಾರಾಯಣ ಮೈರ್ಪಾಡಿಯವರು ಕಾರ್ಯಕ್ರಮವನ್ನು…

Read More

ಬೆಂಗಳೂರು: ಮನಸ್ಸಿನ ಓಟದ ಪಯಣಕ್ಕೆ ವರ್ಣಸಾಂಗತ್ಯ. ಬದುಕು ಒಂದು ಹರಿಯುವ ನದಿ ಇದ್ದ ಹಾಗೆ. ಅಂಕುಡೊಂಕಾಗಿ ಅಡೆ ತಡೆಗಳು ಇರುವಂತಹುದು. ಹಾಗಾಗಿ ಬದುಕು ಪೂರ್ತಿ ಸ್ವಾರಸ್ಯವೇ ಇರಬೇಕು ಅಂತ ಇಲ್ಲ. ಕಷ್ಟ ಸುಖ ಸದಾ ಇದ್ದೆ ಇರುತ್ತೆ. ಬದುಕನ್ನು ಮತ್ತು ಪ್ರಕೃತಿಯನ್ನು ಅನುಭವಿಸಬೇಕು. ಅದರ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ಕಲೆ ಸಮಾಜವನ್ನು ಸಂಸ್ಕಾರಗೊಳಿಸಿ ಬೇಕಾದ ಹಾಗೆ ಹೊರಳಿಸುವುದಕ್ಕೆ ಸಮರ್ಥ ಮತ್ತು ಪ್ರಚಂಡ ಶಕ್ತಿಯಾಗಿದೆ. ಇದಕ್ಕೆ ಉದಾಹರಣೆಯೆನ್ನುವಂತೆ Art Streamನ ಆರು ಕಲಾವಿದರು Meanderings journeys of the mind ಹೆಸರಿನಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಕಲಾಪ್ರದರ್ಶನ ಹಮ್ಮಿಕೊಂಡಿತ್ತು. ಇದರಲ್ಲಿ ಅಲ್ಕ ಚಡ್ದ ಹರ್ಪಲಾನಿಯವರು ಹಳದಿ ಮಿಶ್ರಿತ ಕಪ್ಪು ಬಿಳುಪು ಬಣ್ಣದೊಂದಿಗೆ ವಿವಿಧ ಸ್ತರಗಳನ್ನು ರಚಿಸಿ ಪರಸ್ಪರ ಸಂಬಂಧಗಳು ಸ್ಪಂದಿಸಿದಂತೆ, ನೆನಪುಗಳನ್ನು ಬಿಚ್ಚಿಟ್ಟಂತೆ, ಕವಿತೆಗಳ ಗುಚ್ಛವನ್ನು ತೆರೆದಿಟ್ಟಿರುವ ಚಿತ್ರಗಳು, ಬದುಕಿನ ವಿಸ್ತಾರ ಹಾಗೂ ಸೂಕ್ಷ್ಮತೆಯನ್ನು ತೋರಿಸುವಲ್ಲಿ ಸಫಲವಾಗಿದೆ. ಮಿಲ್ನ ಸಾಜಿಯವರು ಮೌನ ಮತ್ತು ಶಾಂತತೆಯಿಂದ ಮನಸ್ಸಿನಲ್ಲಿ ಉಂಟಾಗುವ ಭಾವನೆಗಳನ್ನೇ ಚಿತ್ರದಲ್ಲಿ ಕಾಣುತ್ತಾ ಮತ್ತು ಬದುಕಿನ…

Read More

ಮೈಸೂರು: ‘ಆನ್ ಸ್ಟೇಜ್ ಯೂಥ್ ಥೀಯೇಟರ್’ ಅರ್ಪಿಸುವ 45 ದಿನಗಳ ‘ರಂಗ ತರಬೇತಿ ಕಾರ್ಯಾಗಾರ’ವು ಮೇ 14ರಿಂದ ಜೂನ್ 30ರವರಗೆ ಪ್ರತಿ ದಿನ ಸಂಜೆ 6:30ರಿಂದ 9:00ರವರೆಗೆ ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿ ವಿನೋದ ಸಿ. ಮೈಸೂರು ಇವರ ನಿರ್ದೇಶನದಲ್ಲಿ ನಡೆಯಲಿದೆ. ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತರು ತಕ್ಷಣವೇ ನೋಂದಾಯಿಸಿಕೊಳ್ಳಬಹುದು. ಮೊದಲು ಬಂದವರಿಗೆ ಆದ್ಯತೆ. ಸೀಮಿತ ಅವಕಾಶ. ನಿರ್ದೇಶಕ ವಿನೋದ ಸಿ. ಮೈಸೂರು ಮಂಡ್ಯ ರಮೇಶ್ ರವರ “ನಟನ” ರಂಗ ಶಾಲೆಯಲ್ಲಿ 2 ವರ್ಷ ವಿದ್ಯಾರ್ಥಿಯಾಗಿ, ಶ್ರೀ ಶಿವಕುಮಾರ ರಂಗ ಪ್ರಯೋಗ (ಸಾಣೀಹಳ್ಳಿ) ಶಾಲೆಯಲ್ಲಿ ಪದವೀಧರರು, ಶಿವ ಸಂಚಾರ ತಿರುಗಾಟ, ಡಾ. ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಎಂ.ಎ. ಡ್ರಾಮಾ ಮಾಡಿರುತ್ತಾರೆ. ನಟ ತಯಾರಿ ವರ್ಕ್ ಶಾಪ್ : Workshop in mysuru… for theatre ನಲ್ಲಿ 21 ದಿನಗಳ workshop. ಅನುಭವ : ಕಳೆದ 9 ವರ್ಷಗಳಿಂದ ನಿರಂತರವಾಗಿ ರಂಗ ಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಿ.ಎಚ್.ಎನ್.…

Read More

ಬೆಂಗಳೂರು: ರಂಗಾಸ್ಥೆ ರಂಗ ತಂಡದವರು ತಮ್ಮ ಏಳನೇ ವರ್ಷದ ಸ್ಥಾಪಕ ದಿನಾಚರಣೆಯನ್ನು 22.04.2023ರ ಸಂಜೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಚರಿಸಿದರು. ಡಾ. ಚನ್ನೇಗೌಡ, ವಿಜಯವಾಣಿ ಪತ್ರಿಕಾ ಸಂಪಾದಕರು, ನಾಗೇಂದ್ರ ಶಾ, ಕನ್ನಡ ರಂಗಭೂಮಿಯ ಖ್ಯಾತ, ಜನಪ್ರಿಯ ನಟರು, ನಿರ್ದೇಶಕರು ಮತ್ತು ಹಿರಿಯ ವಿಮರ್ಶಕ ಗುಂಡಣ್ಣ ಚಿಕ್ಕಮಗಳೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಂಗಾಸ್ಥೆ ವತಿಯಿಂದ ಪ್ರತಿ ವರ್ಷದಂತೆ ರಂಗಭೂಮಿಯ ಹಿರಿಯ ರಂಗ ಸಂಘಟಕರಿಗೆ ಡಾಕ್ಟರ್ ಹೆಚ್. ನರಸಿಂಹಯ್ಯ ಗೌರವವನ್ನು ನೀಡಲಾಗುತ್ತದೆ. ಈ ಸಾಲಿನ ಗೌರವವನ್ನು ಹಿರಿಯ ಸಂಘಟಕರಾದ ಶ್ರೀ ಗಜಾನನ ಯುವಕ ಮಂಡಲ, ಶೇಷಗಿರಿಯ ಸನ್ಮಾನ್ಯ ಶ್ರೀ ಪ್ರಭು ಸಿದ್ದಪ್ಪ ಗುರಪ್ಪನವರು ಅವರಿಗೆ ನೀಡಲಾಯಿತು. ನಂತರ ದಕ್ಷಿಣ ಭಾರತದ ರಾಜ್ಯಗಳ ರಂಗ ಸಂಗೀತ ಗಾಯನ ಕಾರ್ಯಕ್ರಮವನ್ನು ಯುತಿ-2023 ಹೆಸರಿನಲ್ಲಿ ಪ್ರಸ್ತುತ ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ತೆಲುಗು ಭಾಷೆಯನ್ನು ಪ್ರತಿನಿಧಿಸಲು ‘ನಿಭಾ ಥಿಯೇಟರ್’ ಸಂಘಟಿತ ವಾದ್ಯ ತಂಡ, ತಮಿಳು ಭಾಷೆಯನ್ನು ಪ್ರತಿನಿಧಿಸಲು ‘ತಿನಾಯ್ ನೀಲ ವಾಸಿಗಳ್’ ತಂಡ, ಮಲಯಾಳಂ ಭಾಷೆಯನ್ನು ಪ್ರತಿನಿಧಿಸಲು ‘ಜನಭೇರಿ ಸ್ಕೂಲ್…

Read More

ಉಜಿರೆ: ಜನಪದ ಕಲಾವಿದ, ‘ತುಳು ಸಿರಿ ಕಾವ್ಯದ ಕಣಜ’ ಎಂದೇ ಖ್ಯಾತರಾಗಿದ್ದ ಬೆಳ್ತಂಗಡಿಯ ಬೆಳಾಲು ಗ್ರಾಮದ ಮಾಚಾರು ಗೋಪಾಲ ನಾಯ್ಕ (85) ಅಸೌಖ್ಯದಿಂದ ಸ್ವಗೃಹದಲ್ಲಿ ಏಪ್ರಿಲ್ 24ರಂದು ನಿಧನರಾದರು. ಅವರಿಗೆ ಪತ್ನಿ, ಪುತ್ರ ಹಾಗೂ ನಾಲ್ವರು ಪುತ್ರಿಯರು ಇದ್ದಾರೆ. ಜನಪದ ಕ್ಷೇತ್ರದಲ್ಲಿನ ಅವರ ಸೇವೆಗೆ 2005ರ ‘ರಾಜ್ಯೋತ್ಸವ ಪ್ರಶಸ್ತಿ’ ಅವರಿಗೆ ಸಂದಿತ್ತು. ಸಿರಿ ಸಂಧಿಯಲ್ಲಿರುವ 15,683 ಸಾಲುಗಳ ದೀರ್ಘ ಪಠ್ಯವನ್ನು ನಿರರ್ಗಳವಾಗಿ ಹಾಡುತ್ತಿದ್ದರು. ಇತರ ಆರಾಧನಾ ಪದ್ಧತಿಗಳಲ್ಲಿ ಬರುವ ಸಂಧಿ-ಪಾಡ್ಡನಗಳನ್ನು ಹಾಡಿನೊಂದಿಗೆ ವಿವರಣೆಯನ್ನೂ ನೀಡುತ್ತಿದ್ದರು. ಸಿರಿ ಜಾತ್ರೆಗಳಲ್ಲಿ ನಡೆಯುವ ದಲ್ಯ ಆಚರಣೆಗಳಲ್ಲಿ ಅವರ ಸಿರಿ ಕಾವ್ಯ ಇಂದಿಗೂ ಪ್ರಸ್ತುತವಾಗಿದೆ. ಜನಪದ ಪುರಾಣಗಳು ಮತ್ತು ಪರಂಪರೆಯ ಕುರಿತು ಅಪಾರ ತಿಳಿವಳಿಕೆ ಹೊಂದಿದ್ದ ಅವರ ಸಿರಿ ಕಾವ್ಯದ ಕಥೆಯ ನಡಿಗೆ, ಅದರ ಕಥೆಗಳನ್ನು ಘಟಕಗಳನ್ನಾಗಿ ವಿಂಗಡಿಸಿ ಮರು ಕಟ್ಟುವ ಕಲೆ, ವರ್ಣನೆಯನ್ನು ಪರಂಪರೆಯಿಂದ ಆಯ್ದು ಅಳವಡಿಸುತ್ತಿದ್ದರು. ಫಿನ್ಲೆಂಡ್‌ನ ಖ್ಯಾತ ಜನಪದ ವಿದ್ವಾಂಸ ಲೌರಿ ಹೋಂಕೊ ಮತ್ತು ಅನ್ನೆಲಿ ಹೋಂಕೊ 1990ರಲ್ಲಿ ಧರ್ಮಸ್ಥಳಕ್ಕೆ ಬಂದವರು ಆಸಕ್ತಿಯಿಂದ…

Read More

ಧಾರವಾಡ : ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಧಾರವಾಡದ ರಂಗಾಯಣದಲ್ಲಿ ದಿನಾಂಕ 16-04-2023 ರಾಘವೇಂದ್ರ ಪಾಟೀಲ 72ರ ಅಭಿನಂದನ ಮತ್ತು ‘ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ’ ಪ್ರದಾನ ಸಮಾರಂಭ ನೆರವೇರಿತು. ಅತಿಥಿಯ ಸ್ಥಾನದಿಂದ ಮಾತನಾಡಿದ ಕನ್ನಡದ ಶ್ರೇಷ್ಟ ಕವಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿಯವರು “ಕನ್ನಡದ ಬಹು ಮುಖ್ಯ ಕಥೆಗಾರರಾದ ರಾಘವೇಂದ್ರ ಪಾಟೀಲರ ಹೆಸರಿನಲ್ಲಿ ಕಥಾ ಪ್ರಶಸ್ತಿ ನೀಡುವ ಮೂಲಕ ಯುವ ಮನಸ್ಸುಗಳು ಸಾಮಾಜಿಕ ಋಣವನ್ನು ತೀರಿಸುವ ಉತ್ತಮ ಕಾರ್ಯವನ್ನು ಮಾಡುತ್ತಿವೆ. ಪಾಟೀಲರ ಬದುಕಿನ ಆದರ್ಶ ಮತ್ತು ಸಾಹಿತ್ಯಕ ಧೋರಣೆಗಳನ್ನು ಅನುಸರಿಸುವುದರೊಂದಿಗೆ ಯೋಗ್ಯ ಬರಹಗಾರರನ್ನು ಆಯ್ದು ಪ್ರಶಸ್ತಿಯನ್ನು ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ಲಾಬಿ, ಸ್ವಜನ ಪಕ್ಷಪಾತಗಳಿಗೆ ಒಳಗಾಗದೆ, ಪಾರದರ್ಶಕ ನೀತಿಯ ಮೂಲಕ ಸತ್ಪಾತ್ರರಿಗಷ್ಟೇ ಯೋಗ್ಯತೆಯನ್ನು ಕಲ್ಪಿಸುವ ಇಂಥ ಯೋಜನೆಗಳು ಭವಿಷ್ಯದಲ್ಲಿ ಯಶಸ್ಸು ಕಾಣಲಿ” ಎಂದು ಹಾರೈಸಿದರು. ಖ್ಯಾತ ಕಾದಂಬರಿಕಾರ ಎಂ. ಆರ್. ದತ್ತಾತ್ರಿಯವರು ರಾಘವೇಂದ್ರ ಪಾಟೀಲರ ‘ಗೈರ ಸಮಜೂತಿ’ ಕಾದಂಬರಿಯ ಕುರಿತು ಮಾತನಾಡಿದರು. ಯುವ…

Read More

ಸುಳ್ಯ: ಜೆಸಿಐ ಬೆಳ್ಳಾರೆ ಮತ್ತು ಬೆಳ್ಳಾರೆಯ ಡ್ಯಾನ್ಸ್ ಆ್ಯಂಡ್ ಬೀಟ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 21-04-2023 ಶುಕ್ರವಾರದಂದು ಜೆ.ಸಿ. ವಲಯ ನಿರ್ದೇಶಕಿ ಜೆ.ಸಿ. ಸೆನೇಟರ್ ಅಕ್ಷತಾ ಗಿರೀಶ್‌ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುರೇಶ್‌ ಕುಮಾರ್ ಶೆಟ್ಟಿ ಪನ್ನೆಗುತ್ತು, ಝೀ ಟಿವಿ ಖ್ಯಾತಿಯ ಪ್ರಣನ್ಯ ಕುದುಪಾಜೆ, ಡ್ಯಾನ್ಸ್ ಆಂಡ್ ಬಿಡ್ಸ್ ಸಂಚಾಲಕ ಜೀವನ್ ತಡಗಜೆ, ಬೆಳ್ಳಾರೆ ಜೇಸಿಯ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ ಅಜಪಿಲ, ಬೆಳ್ಳಾರೆ ಜೇಸಿ ಐಪಿಬಿ ನಿರ್ಮಲ ಜಯರಾಮ, ಕಾರ್ಯದರ್ಶಿ ಆನಂದ ಮಣಿಯಾನಿ ಮೊದಲಾದವರು ಉಪಸ್ಥಿತರಿದ್ದರು. ಜೆಸಿ ಜಯರಾಮ ಉಮಿಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ, 7 ದಿನ ನಡೆಯುವ ಮಕ್ಕಳ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅದ್ವೈತ್ ಕಲಾ ಪ್ರಶಸ್ತಿಯನ್ನು ಝೀ ಟಿವಿ ಖ್ಯಾತಿಯ ಅರಳು ಮಲ್ಲಿಗೆ ಪ್ರಶಸ್ತಿ ವಿಜೇತೆ ಪ್ರಣವ್ಯ ಕುದುಪಾಜೆ ಅವರಿಗೆ ನೀಡಿ ಗೌರವಿಸಲಾಯಿತು. ಶಿಬಿರವು ಏಪ್ರಿಲ್ 27ರ ವರೆಗೆ ನಡೆಯಲಿದೆ.…

Read More

ಹೊಸಂಗಡಿ : ಬಾಕುಡ ಸಮಾಜ ಸೇವಾ ಸಮಿತಿ (ರಿ.) ಕೇರಳ – ಕರ್ನಾಟಕ ಕೇಂದ್ರ ಸಮಿತಿಯ ನೇತೃತ್ವದಲ್ಲಿ ಹಾಗೂ ರಂಗಚೇತನ (ರಿ) ಕಾಸರಗೋಡು ಇದರ ಸಹಬಾಗಿತ್ವದಲ್ಲಿ ಮೇ ತಿಂಗಳ 13 ಮತ್ತು 14ರಂದು ಮಂಜೇಶ್ವರ ವೆಲ್ಪೇರ್ ಶಾಲೆಯಲ್ಲಿ ಜರಗಲಿರುವ ದ್ವಿದಿನ ಸಹವಾಸ ಶಿಬಿರದ ಆಮಂತ್ರಣ ಪತ್ರಿಕೆಯ ಬಿಡುಗಡೆ ಅಂಗಡಿಪದವು ನಿತ್ಯಾನಂದ ಭಜನಾ ಮಂದಿರದಲ್ಲಿ ಜರಗಿತು. ನಿತ್ಯಾನಂದ ಭಜನಾ ಮಂದಿರದ ಕೋಶಾಧಿಕಾರಿ ಹಿರಿಯ ಧಾರ್ಮಿಕ ಮುಂದಾಳು ಚಂದ್ರಶೇಖರ ಬಿ.ಎಸ್.ಎನ್.ಎಲ್. ಅಂಗಡಿಪದವು ಬಿಡುಗಡೆ ಮಾಡಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ವಿಜಯ್ ಪಂಡಿತ್ ಮಂಗಲ್ಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ,”ಶಿಬಿರಗಳು ಮಕ್ಕಳ ನೈಜ ಪ್ರತಿಭೆಯ ಅನಾವರಣದ ವೇದಿಕೆಯಾಗಿದ್ದು ಇದರ ಪ್ರಯೋಜನವನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕೆಂದು” ತಿಳಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಕೋಶಾಧಿಕಾರಿ ರಾಮ ಕುಳೂರು, ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ಕೋಶಾಧಿಕಾರಿ ಕೃಷ್ಣ ಶಕ್ತಿನಗರ, ಮಹಿಳಾ ಸಮಿತಿಯ ಅಧ್ಯಕ್ಷರಾದ ಸುಮಂಗಳ ಪೊಸೋಟ್, ಸೀತಾರಾಮ ಅಂಗಡಿಪದವು, ಏಕಾನಂದ ಮಂಗಳೂರು, ಹರೀಶ್ ಮಾಸ್ತರ್ ಅಂಗಡಿಪದವು, ಬೇಬಿ ತಚ್ಚನಿ, ಪ್ರಿಜ್ಜು ಬಳ್ಳಾರ್,…

Read More

ಕುಂದಾಪುರ: ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ-ಅರೆಹೊಳೆ ಗಣಪಯ್ಯ ಸ್ಮಾರಕ ದ್ವಿದಿನ ರಂಗ ಹಬ್ಬ ನಡೆಸುತ್ತಿದೆ. ಇದರ ಅಂಗವಾಗಿ 2023 ಏಪ್ರಿಲ್ 30 ಮತ್ತು ಮೇ 1 ತಾರೀಖಿನಂದು ಸಂಜೆ ಗಂಟೆ 6-30ಕ್ಕೆ ಡಾ. ಹಂದಟ್ಟು ಹರೀಶ್ ಹಂದೆ ರಂಗ ಮಂದಿರ, ಅರೆಹೊಳೆಯಲ್ಲಿ ಈ ರಂಗ ಹಬ್ಬ ನಡೆಯಲಿದೆ. ಆ ಪ್ರಯುಕ್ತ ದಿನಾಂಕ 30 ಏಪ್ರಿಲ್ ಭಾನುವಾರ ಬೈಂದೂರಿನ ಸುರಭಿ (ರಿ.) ಇದರ ಬಾಲಕಲಾವಿದರು ‘ಮಕ್ಕಳ ರಾಮಾಯಣ’ವನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ‘ಮಕ್ಕಳ ರಾಮಾಯಣ’ದ ಮೂಲ ರಚನೆ ಬಿ.ಆರ್. ವೆಂಕಟರಮಣ ಐತಾಳ್, ಕುಂದಾಪ್ರ ಕನ್ನಡಕ್ಕೆ ತರ್ಜುಮೆ ಮಾಡಿದವರು, ವಸ್ತ್ರ ವಿನ್ಯಾಸ ಮತ್ತು ನಿರ್ದೇಶನ ಗಣೇಶ್ ಮಂದಾರ್ತಿಯವರದ್ದು. ದಿನಾಂಕ 1 ಮೇ 2023 ಸೋಮವಾರ ಬೈಂದೂರಿನ ಲಾವಣ್ಯ (ರಿ.) ಇವರಿಂದ ಶ್ರೀ ರಾಜೇಂದ್ರ ಕಾರಂತರ ರಚನೆ ಮತ್ತು ನಿರ್ದೇಶನದ ‘ನಾಯಿ ಕಳೆದಿದೆ’ ನಾಟಕ ಅದೇ ರಂಗ ಮಂದಿರದಲ್ಲಿ ನಡೆಯಲಿದೆ. ಈ ಎರಡೂ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದ್ದು, ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭವಾಗುವುದರಿಂದ 10 ನಿಮಿಷ ಮುಂಚಿತವಾಗಿ…

Read More

ಮಂಗಳೂರು : ಸಂಗೀತ ಪರಿಷತ್ ಮಂಗಳೂರು, ಸಂಸ್ಥೆಯು ತನ್ನ 30 ವಸಂತಗಳನ್ನು ಕಳೆದ ಸಂತಸವನ್ನು ‘ತ್ರಿಂಶತಿ ಸಂಭ್ರಮ’ ಕಾರ್ಯಕ್ರಮವನ್ನು ವರ್ಷವಿಡೀ ಹಮ್ಮಿಕೊಳ್ಳುವ ಉದ್ದೇಶವಿಟ್ಟುಕೊಂಡಿರುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಕಂಪನ್ನು ಮಂಗಳೂರು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಪಸರಿಸುವ ಮಹತ್ತರ ಕಾರ್ಯ ಪರಿಷತ್ ನಿರ್ವಹಿಸುತ್ತಿದೆ. ‘ತ್ರಿಂಶತಿ ಸಂಭ್ರಮ’ದ ಉದ್ಘಾಟನಾ ಸಮಾರಂಭದ ಅಂಗವಾಗಿ ದಿನಾಂಕ 23-04-2023ರಂದು ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ‘ಮಹತಿ ಸ್ವರಾಂಜಲಿ’ ಎಂಬ ಸಂಗೀತಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಗೋಪಾಲ್ ಮೌದ್ಗಲ್ ರವರ ನೇತೃತ್ವದಲ್ಲಿ 30 ವೀಣಾವಾದಕರು ಏಕಕಾಲದಲ್ಲಿ ಒಂದೇ ವೇದಿಕೆಯಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟರು. ಪ್ರತಿಷ್ಟಿತ ಮೈಸೂರು ಶೈಲಿಯ ವೀಣಾವಾದನ ಕಾರ್ಯಕ್ರಮದಲ್ಲಿ ಅಪರೂಪದ ರಾಗಗಳಲ್ಲಿ ಕೃತಿಗಳನ್ನು ನುಡಿಸಲಾಯಿತು. ವೆಂಕಟ ಗಿರಿಯಪ್ಪನವರ ಶಾರದಾಪ್ರಿಯ ರಾಗದ ಕೃತಿ, ಸುಪೋಷಿಣಿ ರಾಗದಲ್ಲಿ ತ್ಯಾಗರಾಜರ ಕೃತಿ, ವೀಣೆ ಶೇಷಣ್ಣನವರ ಅಪರೂಪದ ಸ್ವರ ಜತಿಗಳ ಕೃತಿಗಳನ್ನು ಪ್ರಸ್ತುತ ಪಡಿಸಿದ್ದು ವಿಶೇಷವಾಗಿತ್ತು. ಶ್ರೀ ಗೋಪಾಲ್ ಮೌದ್ಗಲ್ ರವರು ರಚಿಸಿದ ಕುಮುದಪ್ರಿಯಾ ರಾಗದ ತಿಲ್ಲಾನ ಅಮೋಘವಾಗಿ ಮೂಡಿ ಬಂದಿತು. ಮೈಸೂರು ವಿನಿಕೆಯ…

Read More