Subscribe to Updates
Get the latest creative news from FooBar about art, design and business.
Author: roovari
ಸುಳ್ಯ : ಸಂಧ್ಯಾ ರಶ್ಮಿ ಸಾಹಿತ್ಯ ಸಂಘ ಸುಳ್ಯ ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕ ಇವರ ಜಂಟಿ ಆಶ್ರಯದಲ್ಲಿ ಸಾಹಿತಿ ಶ್ರೀ ಸುಬ್ರಾಯ ಚೊಕ್ಕಾಡಿಯವರ ಬಗ್ಗೆ ‘ಸಾಹಿತ್ಯ ಸಂವಾದ ಮಾಲಿಕೆ’ ಕಾರ್ಯಕ್ರಮವು ದಿನಾಂಕ 17-06-2024ರಂದು ಪೂರ್ವಾಹ್ನ 10-30 ಗಂಟೆಗೆ ಕುರಂಜಿಬಾಗ್ ಸಂಧ್ಯಾ ರಶ್ಮಿ ಸಭಾಂಗಣದಲ್ಲಿ ನಡೆಯಲಿದೆ. ಸಂಧ್ಯಾ ರಶ್ಮಿ ಸಾಹಿತ್ಯ ಸಂಘ ಇದರ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ಅಧ್ಯಕ್ಷತೆ ವಹಿಸಲಿದ್ದು, ಸುಳ್ಯದ ಎನ್.ಎಂ.ಪಿ.ಯ ನಿವೃತ್ತ ಪ್ರಾಚಾರ್ಯರಾದ ಡಾ. ಪ್ರಭಾಕರ ಶಿಶಿಲ ವ್ಯಕ್ತಿತ್ವ ಪರಿಚಯ, ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಪದವೀಧರ ಸಹ ಶಿಕ್ಷಕಿ ಶ್ರೀಮತಿ ಚಂದ್ರಮತಿ ಕೆ. ಸಾಹಿತ್ಯ ಪರಿಚಯ ಮತ್ತು ಶ್ರೀ ಕೆ.ಆರ್. ಗೋಪಾಲಕೃಷ್ಣ, ಶ್ರೀಮತಿ ಗಿರಿಜಾ ಎಂ.ವಿ. ಶ್ರೀಮತಿ ಸತ್ಯವತಿ ಎಸ್. ಇವರು ಗೀತ ಗಾಯನ ನಡೆಸಿಕೊಡಲಿದ್ದಾರೆ.
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಿದ್ದು, ವಿವಿಧ ಕೃತಿಗಳಿಗೆ ಹಾಗೂ ಇಬ್ಬರಿಗೆ ಸಮಗ್ರ ಸಾಧನೆಗಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಪುಸ್ತಕ ಬಹುಮಾನಗಳಿಗೆ ನಾಡಿನ ವಿವಿಧ ಲೇಖಕಿಯರ ಕೃತಿಗಳು ಆಯ್ಕೆಯಾಗಿದ್ದು ಅವುಗಳ ವಿವರ ಈ ಕೆಳಗಿನಂತಿವೆ. ದತ್ತಿನಿಧಿಗೆ ಆಯ್ಕೆ ಯಾಗಿರುವ ಲೇಖಕಿಯರ ಕೃತಿಗಳು : 1. ಕಾಕೋಳು ಸರೋಜಮ್ಮ ಕಾದಂಬರಿ ಪ್ರಶಸ್ತಿ – ಡಾ. ಚಂದ್ರಮತಿ ಸೋಂದಾ – ‘ದುಪಡಿ’ 2. ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿ – ಡಾ. ಬಿ. ರೇವತಿ ನಂದನ್ – ‘ತೋಟದ ಲೋಕದ ಪಾಠಗಳು’ 3. ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) – ಸರಸ್ವತಿ ಭೋಸಲೆ – ‘ಕಾಡತಾವ ನೆನಪ’ 4. ಜಿ.ವಿ. ನಿರ್ಮಲ (ಭಾರತದ ಯಾವುದೇ ಭಾಷೆಯ ಅನುವಾದಿತ ಕಾದಂಬರಿ, ಕಥಾ ಸಂಕಲನ, ಜೀವನ ಚರಿತ್ರೆ) – ವಿಜಯಾ ಶಂಕರ – ‘ತಲ್ಲಣಗಳ ನಡುವೆ’ 5. ತ್ರಿವೇಣಿ ಸಾಹಿತ್ಯ ಪುರಸ್ಕಾರ – ಮಾಧವಿ ಭಂಡಾರಿ…
ಮಂಗಳೂರು : ಗೌರವಾನ್ವಿತ, ನಾಟ್ಯ ಕಲಾ ತಪಸ್ವಿ ನಾಟ್ಯಾಚಾರ್ಯ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರು 90ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಭರತಾಂಜಲಿ ಪ್ರಸ್ತುತ ಪಡಿಸುವ ‘ಪುರುಷ ನಾಟ್ಯ ವಿಲಾಸ’ ಏಕವ್ಯಕ್ತಿ ನೃತ್ಯ ಪ್ರದರ್ಶನವನ್ನು ದಿನಾಂಕ 16-06-2024ರಂದು ಸಂಜೆ ಗಂಟೆ 5-15ಕ್ಕೆ ಡಾನ್ ಬೋಸ್ಕೋ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಮತ್ತು ಗುರು ವಿದುಷಿ ಕಮಲಾ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಹಾಸನದ ಗುರು ಉನ್ನತ ಎಚ್.ಆರ್. ಇವರ ಶಿಷ್ಯ ಸುಮಂತ್ ಎಸ್., ಬೆಂಗಳೂರಿನ ಗುರು ಪಾರ್ಶ್ವನಾಥ್ ಉಪಾಧ್ಯೆ ಇವರ ಶಿಷ್ಯ ಶೋಭಿತ್ ರಮೇಶ್ ಮತ್ತು ಹುಬ್ಬಳ್ಳಿಯ ವಿದ್ವಾನ್ ಸುಜಯ್ ಶಾನ್ ಬೋಗ್ ಇವರುಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಉಪ್ಪಳ : ‘ಕಾಸರಗೋಡು ಕನ್ನಡ ಹಬ್ಬ’ದ ಅಂಗವಾಗಿ ರಂಗ ಚಿನ್ನಾರಿ ಕಾಸರಗೋಡು ಇದರ ಸಂಗೀತ ಘಟಕವಾದ ಸ್ವರ ಚಿನ್ನಾರಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ತರುಣ ಕಲಾವೃಂದ ಐಲ ಉಪ್ಪಳ ಏರ್ಪಡಿಸಿದ ಸುಮಧುರ ಗೀತೆಗಳ ಗಾಯನ ಕಾರ್ಯಕ್ರಮವಾದ ‘ಕನ್ನಡ ಉಸಿರು’ ಕಾರ್ಯಕ್ರಮವು ದಿನಾಂಕ 25-05-2024ರಂದು ಐಲ ಶ್ರೀ ದುರ್ಗಾಪರಮೇಶ್ವರಿ ಕಲಾ ಭವನದಲ್ಲಿ ಜರಗಿತು. ಸಮಾರಂಭವನ್ನು ಉದ್ಘಾಟಿಸಿದ ನಟ ಹಾಗೂ ಸಾಹಿತಿಯಾದ ಶಶಿರಾಜ್ ರಾವ್ ಕಾವೂರು ಮಾತನಾಡಿ “ಕಲಾಪ್ರೇಮಿಗಳಿಗೆ ಸ್ವರ ಚಿನ್ನಾರಿಯು ರಸ ನಿಮಿಷಗಳನ್ನು ನೀಡಿದೆ.” ಎಂದು ತಿಳಿಸಿದರು. ಐಲ ಕ್ಷೇತ್ರದ ಆಡಳಿತ ಮೊಕೇಸರ ಕೋಡಿಬೈಲು ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಸಿರು ಸಂಚಾಲಕ ಹಾಗೂ ರಂಗ ಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ “ಕಾಸರಗೋಡಿನ ಕಲಾಪ್ರತಿಭೆಗಳಿಗೆ ಒಂದು ವೇದಿಕೆಯನ್ನು ನೀಡುವುದು, ಆ ಮೂಲಕ ಅವರ ಪ್ರತಿಭೆಯನ್ನು ಪ್ರಕಾಶಿಸಲು ಅವಕಾಶ ಕೊಡುವುದು ಸ್ವರ ಚಿನ್ನಾರಿಯ ಉದ್ದೇಶವಾಗಿದೆ.” ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ…
ಅಂಕೋಲಾ : ಕರ್ನಾಟಕ ಸಂಘ (ರಿ.) ಅಂಕೋಲಾ ಮತ್ತು ದೀನಬಂಧು ಸ.ಪ. ಗಾಂವಕರ ದತ್ತಿನಿಧಿ ಸಮಿತಿ ಅಂಕೋಲಾ ಇದರ ವತಿಯಿಂದ ‘ದತ್ತಿನಿಧಿ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ’ವು ದಿನಾಂಕ 16-06-2024ರಂದು ಬೆಳಗ್ಗೆ ಗಂಟೆ 10-30ಕ್ಕೆ ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ನಡೆಯಲಿದೆ. ಬೆಂಗಳೂರು ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಇವರು ಸಮಾರಂಭವನ್ನು ಉದ್ಘಾಟಿಸಲಿದ್ದು, ದೀನಬಂಧು ಸ.ಪ. ಗಾಂವಕರ ದತ್ತಿನಿಧಿ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಶಾಂತಾರಾಮ ನಾಯಕ ಇವರು ಅಧ್ಯಕ್ಷತೆ ವಹಿಸಲಿರುವರು. ಖ್ಯಾತ ನ್ಯಾಯವಾದಿಗಳಾದ ಶ್ರೀ ಪ್ರದೀಪ ಕೃಷ್ಣದೇವ ಗಾಂವಕರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹೊನ್ನಾವರದ ಜಾನಪದ ವಿದ್ವಾಂಸರು ಮತ್ತು ಹಿರಿಯ ಸಾಹಿತಿಗಳಾದ ಡಾ. ಎನ್.ಆರ್. ನಾಯಕ ಇವರಿಗೆ ‘ದೀನಬಂಧು ಸ.ಪ. ಗಾಂವಕರ ದತ್ತಿನಿಧಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಜನಪದ ಕಣಜ ಡಾ. ಎನ್.ಆರ್. ನಾಯಕ ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ಜನಿಸಿದ ಡಾ. ಎನ್.ಆರ್. ನಾಯಕ ಇವರು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿ…
ಉಡುಪಿ : ಬೆಂಗಳೂರಿನ ಲಹರಿ ಭಾರಿಘಾಟ್ ಅವರು ರಂಗಭೂಮಿ ಮತ್ತು ಭರತನಾಟ್ಯದ ಬಗ್ಗೆ ಆಳವಾದ ಒಲವು ಹೊಂದಿರುವ ಮತ್ತು ವೃತ್ತಿಯಾಗಿ ಸಮಾಜ ಕಾರ್ಯದಲ್ಲಿ ತೊಡಗಿರುವವರು. ತಮ್ಮ ಸಂಸ್ಥೆ ‘ಸಹಚಾರಿ’ ಮೂಲಕ ತಮ್ಮ ಸಮಾಜ ಕಾರ್ಯದ ಮೌಲ್ಯಗಳನ್ನು ಕಲೆಯೊಂದಿಗೆ ಬೆಸೆಯುವ ಉದ್ದೇಶವನ್ನು ಹೊಂದಿದ್ದಾರೆ. ‘ಸಹಚಾರಿ’ಯ ಮೊದಲ ಪ್ರಯೋಗ ‘ಶಾಂತಿ ಮತ್ತು ಪ್ರೀತಿಗಾಗಿ ನೃತ್ಯ’ ಕಾರ್ಯಕ್ರಮ ‘ಸಂವಿಧಾನ ಸಾಥಿ’ ಯೋಜನೆಯ ಭಾಗವಾಗಿದ್ದು, ದಿನಾಂಕ 16-06-2024ರ ಭಾನುವಾರ ಸಂಜೆ ಗಂಟೆ 4-30ರಿಂದ 5-30ರ ತನಕ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಸಾಂಸ್ಕೃತಿಕ ಸಂಘಟನೆ, ರಥಬೀದಿ ಗೆಳೆಯರು (ರಿ.), ಉಡುಪಿ ಇದರ ಆಶ್ರಯದಲ್ಲಿ ನೃತ್ಯ ತಜ್ಞೆ ಕೆ. ಶಾರದಾ ಆಚಾರ್ಯ ಇವರು ಪ್ರಸ್ತುತ ಪಡಿಸಲಿದ್ದಾರೆ. ‘ಸಂವಿಧಾನ ಸಾಥಿ’ ಎಂಬುದು ಬೆಂಗಳೂರಿನ ಸಂವಾದ ಬದುಕು ನೀಡುವ ಫೆಲೋಶಿಪ್ ಆಗಿದ್ದು, ಇದು ಭಾರತದ ಸಂವಿಧಾನದ ತತ್ವಗಳನ್ನು ಉತ್ತೇಜಿಸುವ ಮತ್ತು ಪ್ರತಿಪಾದಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ನೃತ್ಯ ಪ್ರದರ್ಶನವು ಸಂವಿಧಾನದಲ್ಲಿರುವ ಧರ್ಮ ನಿರಪೇಕ್ಷತೆ ಮತ್ತು ಬಂಧುತ್ವ ಎಂಬ ಆದರ್ಶಗಳನ್ನು ಪ್ರತಿಪಾದಿಸುತ್ತದೆ. ಈ…
ಧಾರವಾಡ : ದಿನಾಂಕ 11-06-2024ರಂದು ನಮ್ಮನ್ನಗಲಿದ ಹಿರಿಯ ಸರೋದ್ ಕಲಾವಿದರಾದ ಪಂಡಿತ್ ರಾಜೀವ್ ತಾರಾನಾಥರಿಗೆ ನುಡಿ ನಮನ ಕಾರ್ಯಕ್ರಮವು ದಿನಾಂಕ 13-06-2024 ರಂದು ಧಾರವಾಡದ ಗ್ರಂಥಮಾಲೆ ಅಟ್ಟದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪಂಡಿತ್ ವೆಂಕಟೇಶ ಕುಮಾರ್ “ಪಂಡಿತ್ ರಾಜೀವ್ ತಾರಾನಾಥರು ನಮ್ಮ ದೇಶದ ಶ್ರೇಷ್ಠ ಸಂಗೀತಗಾರರು. ಸ್ಪಷ್ಟವಾದಿ, ನೇರ ನಿಷ್ಠುರರಾಗಿದ್ದ ಶ್ರೀಯುತರು ಅತ್ಯುತ್ತಮ ಮಾನವತಾವಾದಿಯೂ ಆಗಿದ್ದರು. ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಲ್ಲದೆ, ಅನೇಕ ಗುರುಗಳಿಂದ ಮಾರ್ಗದರ್ಶನ ಪಡೆದಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುವ ರಾಜೀವ್ ತಾರಾನಾಥರು ಮತ್ತೆ ಈ ಸಂಗೀತ ನಾಡಿನಲ್ಲಿ ಹುಟ್ಟಿಬರಲಿ” ಎಂದು ಆಶಿಸಿದರು. ಹಿರಿಯ ಲೇಖಕ ಜಿ. ಸಿ. ತಲ್ಲೂರ ಮಾತನಾಡಿ “ಇಂತಹ ಕಲಾವಿದರು ಅಪರೂಪ. ಸಂಗೀತ ಎಲ್ಲರ ಮನಸ್ಸು ತಟ್ಟಬೇಕು. ಸಂಗೀತದಲ್ಲಿ ಶುದ್ಧತೆ, ಪ್ರಮಾಣ ಬದ್ಧತೆ, ಸಂಸ್ಕೃತಿ, ಸಂಸ್ಕಾರ ಇದೆ. ಅದನ್ನು ಸಾಧಿಸಿ ತೋರಿಸಿದವರು ಪಂ. ರಾಜೀವ ತಾರನಾಥ.” ಎಂದು ಹೇಳಿದರು. ರಮಾಕಾಂತ ಜೋಶಿಯವರು ಮಾತನಾಡಿ “ರಾಜೀವ್, ಜಿ. ಬಿ. ಜೋಶಿ ಮತ್ತು ಮನೋಹರ ಗ್ರಂಥಮಾಲೆ…
ಸಾವಿರಾರು ಮೈಲು ದೂರದ ಅರಬ್ ದೇಶವೊಂದರ ನೆಲದಲ್ಲಿ ಯಕ್ಷಗಾನವನ್ನು ಕಟೀಲು ಮೇಳದ ಆಯ್ದ ಪ್ರಬುದ್ಧ ಕಲಾವಿದರು ಪ್ರಸ್ತುತ ಪಡಿಸಿದ್ದು, ‘ಶ್ರೀದೇವಿ ಮಹಾತ್ಮೆ’ ಪ್ರಸಂಗ ಪ್ರದರ್ಶನ ಸಾವಿರಕ್ಕೂ ಹೆಚ್ಚು ಯಕ್ಷಗಾನಪ್ರಿಯ ಅನಿವಾಸಿ ಭಾರತೀಯರನ್ನು ಭಕ್ತಿ ಮತ್ತು ಭಾವ ಪರವಶರನ್ನಾಗಿಸಿದ್ದಲ್ಲದೆ ಮೆಚ್ಚುಗೆಯ ಮಹಾ ಪೂರವೇ ವ್ಯಕ್ತವಾಗಿದೆ. ಬಿರುವೆ ಜವನೆರ್ ಮಸ್ಕತ್ ತಂಡವು ಕಟೀಲಿನ ಆರೂ ಮೇಳಗಳ 33 ಮಂದಿ ಕಲಾವಿದರನ್ನು ಆಯ್ದು ಮಸ್ಕತ್ ನಲ್ಲಿ ಶ್ರೀದೇವೀ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ದಿನಾಂಕ 31-05-2024ರ ಶುಕ್ರವಾರ ದಂದು ಏರ್ಪಡಿಸಿತ್ತು. ರಂಗಸ್ಥಳ ನಿರ್ಮಾಣ ಹಾಗೂ ವಿನ್ಯಾಸ, ಯಕ್ಷಗಾನದ ಕೆಲ ಪರಿಕರಗಳ ಸಿದ್ದತೆಯ ಹೊಣೆಗಾರಿಕೆ ಹೊತ್ತು ನಿರ್ವಹಿಸಿದ್ದಲ್ಲದೆ ರಂಗಸ್ಥಳ ಹಾಗೂ ಕದಂಬವನ ಸ್ವರ್ಣದುಯ್ಯಾಲೆ ಮಂಟಪ ಅಲಂಕಾರಕ್ಕಾಗಿ ವೈವಿಧ್ಯಮಯ ಹೂವುಗಳನ್ನು ಭಾರತದಿಂದಲೇ ತರಿಸಲಾಗಿತ್ತು. ಶ್ರೀದೇವಿ ಪಾತ್ರಗಳಿಗೆ ಬಳಸಲಾದ ಮಲ್ಲಿಗೆ ಸಹಿತ ಇತರ ಹೂವುಗಳನ್ನು ದುಬಾರಿ ಬೆಲೆ ತೆತ್ತು ಅಲ್ಲಿಯೇ ಖರೀದಿ ಸಿದ್ದು, ಚೌಕಿ ಪೂಜೆಗಾಗಿ ಪವಿತ್ರ ಹೂವುಗಳನ್ನೇ ಬಳಸಿ ವಿನ್ಯಾಸಗೊಳಿಸಿದ ಕಟೀಲು ದೇವಿಯ ಭಾವಚಿತ್ರ ಆಕರ್ಷಕವಾಗಿತ್ತು. ಇಲ್ಲಿ ಸತ್ಕಾರ ವ್ಯವಸ್ಥೆಗೂ…
ಕುಶಾಲನಗರ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕ. ಸಾ. ಪ.), ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹೆಬ್ಬಾಲೆ ವಲಯ ಕ. ಸಾ. ಪ. ಘಟಕ ಹಾಗೂ ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಭಾಷಾ ಸಂಘದ ಸಂಯುಕ್ತಾಶ್ರಯದಲ್ಲಿ ಬಿ. ಜಿ. ರಘುನಾಥನಾಯಕ್ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 11-06-2024 ರಂದು ನಡೆಯಿತು. ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆ ಹಾಗೂ ಕ. ಸಾ. ಪ. ಅಧ್ಯಕ್ಷರುಗಳು ಕುರಿತು ನಡೆದ ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ. ಜಿ. ಪ್ರೇಮಕುಮಾರ್ ಮಾತನಾಡಿ “ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸುವುದು ಮತ್ತು ಅವರನ್ನು ಉತ್ತಮ ಸತ್ಪಜೆಗಳನ್ನಾಗಿ ರೂಪಿಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ. ಮಕ್ಕಳು ಕಲೆ, ಸಾಹಿತ್ಯ, ವಿಜ್ಞಾನದ ಪುಸ್ತಕಗಳನ್ನು ಓದುವ ಪ್ರವೃತ್ತಿಯೊಂದಿಗೆ ಬರವಣಿಗೆಯ ಕೌಶಲ್ಯ ಬೆಳೆಸಿಕೊಂಡು ಜ್ಞಾನವಂತರಾಗಬೇಕು. ನಾಡಿನ ಸಾಹಿತಿಗಳ ಸಾಹಿತ್ಯವನ್ನು…
ಬೆಂಗಳೂರು : ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 2023 ಸಾಲಿನ ರಾಜ್ಯಮಟ್ಟದ ನಾನಾ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ‘ಸಾಹಿತ್ಯ ರತ್ನ’ ಪ್ರಶಸ್ತಿಗೆ ಲೇಖಕ ಡಾ. ಎನ್. ಜಗದೀಶ್ ಕೊಪ್ಪ ಅವರ ‘ಬಹುತ್ವದ ಭಾರತ’ ಕೃತಿಯು ಆಯ್ಕೆಯಾಗಿದ್ದು, ‘ಯುವ ಸಾಹಿತ್ಯ ರತ್ನ’ ಪ್ರಶಸ್ತಿಗೆ ನಟಿ ರಂಜಿನಿ ರಾಘವನ್ ಅವರ ‘ಟೈಪ್ ರೈಟ್’ ಕೃತಿ ಆಯ್ಕೆಯಾಗಿದೆ. ಅದೇ ರೀತಿ ‘ಪುಸ್ತಕ ರತ್ನ’ ಪ್ರಶಸ್ತಿಗೆ ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್ ಅವರನ್ನು ಆಯ್ಕೆ ಮಾಡಲಾಗಿದ್ದು, ‘ಮುದ್ರಣ ರತ್ನ’ ಪ್ರಶಸ್ತಿಗೆ ಗೌರಿ ಲ್ಯಾಮಿನೇಟರ್ಸ್ ಸಂಸ್ಥೆಯ ಟಂಕಸಾಲಿ ಎಸ್. ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ನಾಲ್ಕೂ ಪ್ರಶಸ್ತಿಗಳು ತಲಾ 10,000 ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿವೆ. ಪ್ರಶಸ್ತಿಗಳನ್ನು ದಿನಾಂಕ 06-07-2024ರಂದು ಬೆಂಗಳೂರಿನ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸಾಮಯ್ಯ ತಿಳಿಸಿದ್ದಾರೆ. ಡಾ. ಹೆಚ್. ಎನ್. ಜಗದೀಶ್ ಕೊಪ್ಪ ಕುಮಾರಿ ರಂಜಿನಿ ರಾಘವನ್ ಶ್ರೀ ಅಭಿರುಚಿ ಗಣೇಶ್ …