Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ‘ಸುರ್ ಸೊಭಾಣ್’ ಮಕ್ಕಳ ಗಾಯನ ತರಬೇತಿಯ ಉದ್ಘಾಟನಾ ಸಮಾರಂಭವು 18 ಆಗಸ್ಟ್ 2024ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ‘ಸೋದ್ 4’ ಗಾಯನ ಸ್ಪರ್ಧೆಯ ವಿಜೇತೆ ಜ್ಯಾಕ್ಲಿನ್ ಫೆರ್ನಾಂಡಿಸ್ ಯು. ಎಸ್ ಮಾತನಾಡಿ “‘ಮಾಂಡ್ ಸೊಭಾಣ್’ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ವೇದಿಕೆ ನೀಡುತ್ತದೆ. ನಾನು ಕೂಡಾ ಗಾಯನ ಕ್ಷೇತ್ರದಲ್ಲಿ ಏನಾದರೂ ಹೆಸರು ಮಾಡಿದ್ದರೆ ಅದರಲ್ಲಿ ಈ ಸಂಸ್ಥೆಯ ತರಬೇತಿಯ ಕೊಡುಗೆ ಬಹಳಷ್ಟಿದೆ. ನಾವು ದಿನಂಪ್ರತಿ ಕಲಿಯಬೇಕು. ಲಭ್ಯ ಅವಕಾಶಗಳನ್ನು ಬಳಸಿಕೊಳ್ಳಬೇಕು. ಇಲ್ಲಿಂದ ಚೆನ್ನಾಗಿ ಕಲಿತು ಹೋದರೆ, ಗೆದ್ದು ಬಂದರೆ ಇಡೀ ಪ್ರಪಂಚ ನಿಮ್ಮನ್ನು ಗಮನಿಸುತ್ತದೆ. ‘ಸುರ್ ಸೊಭಾಣ್’ ಕಲಿಕೆಯ ನಂತರ ಸಿಡಿ, ಸಿನೆಮಾ ಹಾಗೂ ವೇದಿಕೆಗಳಲ್ಲಿ ಅವಕಾಶ ದೊರೆಯುವಾಗ ಈ ಅಭ್ಯಾಸದ ಮಹತ್ವ ನಿಮ್ಮರಿವಿಗೆ ಬರುತ್ತದೆ.” ಎಂದರು. ವಿದ್ಯಾರ್ಥಿಗಳಾದ ಎಲ್ಡನ್ ಪಿರೇರಾ, ಲೆನ್ವಿನ್ ಪಿರೇರಾ, ಪ್ರೇರಣ್ ಕ್ರಾಸ್ತಾ, ಸಿಮೊನಾ ಸಲ್ಡಾನ್ಹಾ, ಸಂಜನಾ ಮತಾಯಸ್, ಆನ್ವಿಯಾ ಲೋಬೊ ಹಾಗೂ ಆಲ್ವಿನಾ ಮೊಂತೇರೊ ಈ ಏಳು ಮಕ್ಕಳಿಗೆ ಸಪ್ತ…
ಮಂಗಳೂರು : ಆಕೃತಿ ಆಶಯ ಪಬ್ಲಿಕೇಷನ್ಸ್ ಹಾಗೂ ಕನ್ನಡ ವಿಭಾಗ ಸಂತ ಆಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು ಇದರ ವತಿಯಿಂದ ಮತ್ತು ಕನ್ನಡ ಸಂಘ ಮತ್ತು ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಮತ್ತು ಕಲ್ಚರಲ್ ಸ್ಟಡೀಸ್ ಇದರ ಸಹಕಾರದೊಂದಿಗೆ ಸುಲೋಚನಾ ಪಚ್ಚಿನಡ್ಕ ಇವರ ನಾಲ್ಕು ಕೃತಿಗಳ ಲೋಕಾರ್ಪಣೆ ಸಮಾರಂಭವು ದಿನಾಂಕ 24 ಆಗಸ್ಟ್ 2024ರಂದು ಅಪರಾಹ್ನ 3-00 ಗಂಟೆಗೆ ಸಂತ ಆಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ತುಳು-ಕನ್ನಡ ವಿದ್ವಾಂಸರು ಮತ್ತು ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ನಾಗಪ್ಪ ಗೌಡ ಆರ್. ಮತ್ತು ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಯೋಗೀಶ್ ಕೈರೋಡಿ ಇವರುಗಳು ಕೃತಿ ಪರಿಚಯ ಮಾಡಲಿದ್ದಾರೆ.
ಬೆಂಗಳೂರು : ನವಕರ್ನಾಟಕ ಪ್ರಕಾಶನ ಸಂಸ್ಥೆಯ ಮೂಲಕ ಅಕ್ಷರ ಕ್ರಾಂತಿಯನ್ನು ಮಾಡಿದ ಆರ್.ಎಸ್. ರಾಜಾರಾಮ್ 17 ಆಗಸ್ಟ್ 2024ರಂದು ಬೆಂಗಳೂರಿನಲ್ಲಿ ನಿಧನರಾದರು . ನವಕರ್ನಾಟಕ ಪ್ರಕಾಶನ ಈವರೆಗೂ ಸುಮಾರು 6000 ಕನ್ನಡದ ವಿಶಿಷ್ಟ ಕೃತಿಗಳನ್ನು ನೀಡಿದೆ. ಈ ಬೃಹತ್ ಸಾಧನೆಯ ಹಿಂದೆ ಸುಮಾರು ಐದು ದಶಕಗಳಿಗೂ ಹೆಚ್ಚಿನ ಕಾಲದ ಪ್ರೇರಣಾತ್ಮಕ ಶ್ರಮ ವಹಿಸಿದವರು ಆರ್. ಎಸ್. ರಾಜಾರಾಮ್. ‘ಪುಸ್ತಕಗಳ ಮೂಲಕ ಮನುಕುಲದ ಸೇವೆ’ ಎಂಬ ನವಕರ್ನಾಟಕದ ಘೋಷವಾಕ್ಯದ ಮೂಲಕ ಕನ್ನಡಿಗರಿಗೆ ಉತ್ತಮ ಪುಸ್ತಕಗಳು ದೊರಕುವಂತೆ ಮಾಡಿದ್ದರು. ನವಕರ್ನಾಟಕ ಸಂಸ್ಥೆಯನ್ನು ಸ್ವತಂತ್ರ ಪ್ರಕಾಶನ ಸಂಸ್ಥೆಯಾಗಿ ಬೆಳೆಸಲೇಬೇಕೆಂಬ ಆಕಾಂಕ್ಷೆಯಿಂದ ರಾಜಾರಾಮ್ ರೂಪಿಸಿದ ‘ವಿಶ್ವ ಕಥಾಕೋಶ’ 87 ದೇಶಗಳ 317 ಕಥೆಗಳ ಸಂಗ್ರಹ. ಅವುಗಳನ್ನು ಅನುವಾದ ಮಾಡಲು ಲೇಖಕರ ಪಡೆಯೇ ಮೂಡಿತು. ಅನೇಕ ರಾಯಭಾರ ಕಛೇರಿಗಳಿಗೆ ಪತ್ರ ಬರೆದು ಒಪ್ಪಿಗೆ ಪಡೆದರು. ನಿರಂಜನ ಅವರನ್ನು ಸಂಪಾದಕರಾಗಲು ಒಪ್ಪಿಸಿದರು. ಇದು ಕನ್ನಡ ಸಾರಸ್ವತ ಲೋಕದಲ್ಲಿ ಮೈಲುಗಲ್ಲಾಗಿದೆ. ‘ನೆಮ್ಮದಿಯ ನಾಳೆ ನಮ್ಮದು’ ಎಂದು ಅವರ ನೀಡಿದ ಘೋಷವಾಕ್ಯ ಅಕ್ಷರ…
ಅಗ್ರಾಳ ಪುರಂದರ ರೈಯವರ ಪುತ್ರನಾಗಿ ಅವರ ಒಡನಾಡಿಯಾಗಿದ್ದ ಸಾಹಿತ್ಯಲೋಕದ ದಿಗ್ಗಜ ಶಿವರಾಮ ಕಾರಂತರು ಸೂಚಿಸಿದ ‘ವಿವೇಕ’ ಎಂಬ ನಾಮಧೇಯವನ್ನು ಪಡೆದ, ಡಾ. ಬಿ.ಎ. ವಿವೇಕ ರೈಯವರು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನು ಮುನ್ನಡೆಸಿ, ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಮುಕ್ತವಿಶ್ವವಿದ್ಯಾಲಯದಲ್ಲೂ ಸೇವೆ ಸಲ್ಲಿಸಿದ್ದು ಮಾತ್ರವಲ್ಲ ವಿದೇಶದ ವಿದ್ಯಾಸಂಸ್ಥೆಗಳಲ್ಲೂ ಬೋಧಕರಾಗಿ ತಮ್ಮ ಛಾಪನ್ನು ಊರಿ ಕನ್ನಡದ ಬೋಧನೆಗೆ ವಿಶೇಷ ಗೌರವವನ್ನು ಹುಟ್ಟುಹಾಕಿ ಪ್ರಸ್ತುತ ನಿವೃತ್ತರಾಗಿದ್ದಾರೆ. ಈ ಸುದೀರ್ಘ ಮತ್ತು ಸಾರ್ಥಕ ಪಯಣದಲ್ಲಿ ಒಡನಾಡಿದ ವ್ಯಕ್ತಿಗಳು, ಮರೆಯಲಾಗದ, ಮರೆಯಬಾರದ ಸಾಂಸ್ಕೃತಿಕ ಮಹತ್ವದ ಸಂಗತಿಗಳು, ನೆನಪಿನ ಸಂಸ್ಕೃತಿಯ ಬರಹಗಳ ಸಂಪುಟವಾಗಿ ‘ಬದುಕು ಕಟ್ಟಿದ ಬಗೆಗಳು’ ಎಂಬ ಅರ್ಥಪೂರ್ಣ ಶೀರ್ಷಿಕೆಯೊಂದಿಗೆ ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ. ಈ ಸಂಪುಟದ ಬರಹಗಳನ್ನೋದುತ್ತಿದ್ದಂತೆ ಒಂದು ಕಾಲಘಟ್ಟದ ವಿಶೇಷವಾಗಿ ದ.ಕ. ಜಿಲ್ಲೆಯ ಸಾಂಸ್ಕೃತಿಕ ಚರಿತ್ರೆಯ ಅನೇಕ ಪುಟಗಳು ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತವೆ. ವಿಸ್ಮೃತಿಗೆ ಸಂದುಹೋಗುವ ಸಾಧಕರ ಬದುಕಿನ ಹೆಜ್ಜೆಗಳನ್ನು ಮತ್ತು ಬದುಕನ್ನು ಸುಂದರವಾಗಿಸಿದ ಅವರ ಕೊಡುಗೆಗಳನ್ನು ಹೀಗೆ ದಾಖಲಿಸುವುದು ಕಾಲದ ಅಗತ್ಯವೂ ಹೌದು. ಈ…
ಮಂಗಳೂರು : ಕಾಸರಗೋಡು ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾ ಭವನದಲ್ಲಿ ದಿನಾಂಕ 10 ಆಗಸ್ಟ್ 2024ರಂದು ದೇಲಂಪಾಡಿ ಮಹಾಲಿಂಗ ಪಾಟಾಳಿ-ಸೀತಮ್ಮ ದಂಪತಿಯ ಹೆಸರಲ್ಲಿ ಪ್ರಪ್ರಥಮವಾಗಿ ಕೊಡಲ್ಪಡುವ ಸ್ಮೃತಿ ಗೌರವವನ್ನು ಖ್ಯಾತ ಹಿರಿಯ ಸಾಹಿತಿ, ಅರ್ಥಧಾರಿ ಡಾ. ರಮಾನಂದ ಬನಾರಿ ಅವರಿಗೆ ನೀಡಿ ಗೌರವಿಸಲಾಯಿತು. ಮಹಾಲಿಂಗ ಪಾಟಾಳಿ ಅವರ 18ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಥಧಾರಿ ನಿವೃತ್ತ ಪ್ರಾಧ್ಯಾಪಕ ರಾಮಣ್ಣ ಮಾಸ್ತರ್ ವಹಿಸಿದ್ದರು. ಭಾಗವತ ನಾರಾಯಣ ತೋರಣಗಂಡಿ ಸಂಸ್ಕರಣಾ ಭಾಷಣ ಮಾಡಿದರು. ಯಕ್ಷಗಾನ ಕಲೋಪಾಸಕ ಎಂ. ರಮಾನಂದ ರೈ ವಂದಿಸಿದರು. ನಾರಾಯಣ ದೇಲಂಪಾಡಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಣೆಗೈದರು. ಮೊದಲಿಗೆ ಸ್ಥಳ ಸಾನ್ನಿಧ್ಯ ಶ್ರೀ ದೇವರ ಪೂಜಾರ್ಚನೆಯೊಂದಿಗೆ ಆರಂಭಗೊಂಡ ಈ ಕಲಾ ಸಾಂಸ್ಕೃತಿಕೋತ್ಸವದಲ್ಲಿ ಸಂಘದ ಹಿರಿಯ ಭಾಗವತ, ಗುರುಗಳಾದ ವಿಶ್ವವಿನೋದ ಬನಾರಿ ಅವರ ನಿರ್ದೇಶನದಲ್ಲಿ ಪಾರ್ತಿಸುಬ್ಬ ವಿರಚಿತ ‘ಸೀತಾಪಹಾರ – ಜಟಾಯು ಮೋಕ್ಷ’ ತಾಳಮದ್ದಳೆ ನಡೆಯಿತು. ಭಾಗವತರಾದ ರಚನಾ ಚಿದ್ಗಲ್ ಇವರ…
ಮಂಗಳೂರು : ಬಲ್ಲಾಳ್ ಬಾಗ್ನಲ್ಲಿರುವ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ 18 ಆಗಸ್ಟ್ 2024ರಿಂದ 20 ಆಗಸ್ಟ್ 2024ರವರೆಗೆ ‘ಹಯಾತಿ ಬೈ ಮೂನಿಶಾ’ ಎಂಬ ಶೀರ್ಷಿಕೆಯ ತಮ್ಮ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಮಂಗಳೂರಿನ ಕಲಾವಿದೆ ಮೂನಿಶಾ ಹಲೀಮಾ ದರ್ಬಾರ್ ಪ್ರಸ್ತುತಪಡಿಸುತ್ತಿದ್ದಾರೆ. ಪ್ರದರ್ಶನವು ಬೆಳಗ್ಗೆ 11ರಿಂದ ಸಂಜೆ 7 ರವರೆಗೆ ಸಂದರ್ಶಕರಿಗೆ ತೆರೆದಿರುತ್ತದೆ. ಈ ಪ್ರದರ್ಶನವು ಮೂನಿಶಾ ಅವರ ಕೆಲವು ಅತ್ಯುತ್ತಮ ಕೃತಿಗಳನ್ನು ಒಳಗೊಂಡಿರುತ್ತದೆ. ಇದು ವೀಕ್ಷಕರ ಹೃದಯಗಳನ್ನು ಸ್ಪರ್ಶಿಸುವ ಮತ್ತು ಪರಿವರ್ತಕ ಅನುಭವಕ್ಕೆ ಕರೆದೊಯ್ಯುವ ಭರವಸೆ ನೀಡುವ ರೋಮಾಂಚಕ ಬಣ್ಣಗಳು ಮತ್ತು ವಿನ್ಯಾಸಗಳನ್ನು ಪ್ರದರ್ಶಿಸುತ್ತದೆ. ಮೂನಿಶಾ ಕಳೆದ 15 ವರ್ಷಗಳಿಂದ ಚಿತ್ರಕಲೆಯಲ್ಲಿ ತಲ್ಲೀನರಾಗಿದ್ದಾರೆ. ಪ್ರಕೃತಿಯ ಪ್ರಶಾಂತ ಸೌಂದರ್ಯ, ಮಸೀದಿಗಳು, ಸಮ್ಮಿತೀಯ ವಾಸ್ತುಶಿಲ್ಪ, ಅಮೂರ್ತ ರೂಪಗಳು ಮತ್ತು ವಿನ್ಯಾಸಗಳನ್ನು ಸೆರೆಹಿಡಿಯುವಲ್ಲಿ ಅವರ ಪರಿಣತಿಯು ಆಕ್ರಿಲಿಕ್ ಮೂಲಕ ಜೀವಂತಗೊಳಿಸಿದೆ. ಮೂನಿಶಾ ಅವರ ಕಲೆಯ ಮೇಲಿನ ಒಲವು ಜೀವನದುದ್ದಕ್ಕೂ ಸಾಗಿದೆ ಮತ್ತು ಅವರು ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಕಾಲೇಜು ದಿನಗಳಲ್ಲಿ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ…
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಪತ್ರಿಕಾ ಭವನ ಸಮಿತಿ ಹಾಗೂ ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮನೆಯೇ ಗ್ರಂಥಾಲಯ ಕಾರ್ಯಕ್ರಮದ ಪ್ರಯುಕ್ತ ಉಡುಪಿ ಪತ್ರಿಕಾ ಭವನದಲ್ಲಿ ಸ್ಥಾಪಿಸಲಾದ ಗ್ರಂಥಾಲಯವನ್ನು ದಿನಾಂಕ 16 ಆಗಸ್ಟ್ 2024ರಂದು ಉಡುಪಿ ಇಂಚರ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ವೈ.ಸುದರ್ಶನ್ ರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ. ವೈ. ಸುದರ್ಶನ್ ರಾವ್, “ಕಂಪ್ಯೂಟರ್, ಮೊಬೈಲ್ಗಳ ಪರಿಣಾಮವಾಗಿ ಮನುಷ್ಯ ತನ್ನ ಮೆದುಳಿನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಹಾಗಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಮನೆಯಲ್ಲಿ ಪುಸ್ತಕಾಲಯವನ್ನು ಸ್ಥಾಪಿಸಬೇಕು. ಪುಸ್ತಕ ಓದುವವುದರಿಂದ ಭಾಷೆ ಮೇಲೆ ಹಿಡಿತ ಬರುತ್ತದೆಯೇ ಹೊರತು ಮೊಬೈಲ್, ಟಿವಿಗಳಿಂದಲ್ಲ” ಎಂದು ಅಭಿಪ್ರಾಯಪಟ್ಟರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅವರಿಗೆ ಉಡುಪಿ ಕನ್ನಡ ಮತ್ತು ಸಂಸ್ಕೃತಿ…
ಹೆಬ್ರಿ : ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಸಮಿತಿ ಬೆನಕನಹಳ್ಳಿ, ಪಾಂಡುಕಲ್ಲು, ಶಿವಪುರ ಹೆಬ್ರಿ ಇದರ ಸುವರ್ಣ ಆರಾಧನಾ ಪ್ರಯುಕ್ತ ಮಂಗಳೂರಿನ ಡಾ. ಎಸ್.ಪಿ. ಗುರುದಾಸ ಇವರಿಂದ ‘ಹರಿಕಥೆ’ ಕಾರ್ಯಕ್ರಮವನ್ನು ದಿನಾಂಕ 21 ಆಗಸ್ಟ್ 2024ರಂದು ಮಧ್ಯಾಹ್ನ 3-00 ಗಂಟೆಗೆ ಪಾಂಡುಕಲ್ಲು, ಪಟ್ಟಾಭಿ ನಿಲಯದಲ್ಲಿ ಆಯೋಜಿಸಲಾಗಿದೆ.
ಚನ್ನರಾಯಪಟ್ಟಣ : ಕಲಾವಿದ ಉಮೇಶ್ ತೆಂಕನಹಳ್ಳಿ ಅವರ ಚೊಚ್ಚಲ ಕೃತಿ ‘ಕಪ್ಪು ಹಲ್ಲಿನ ಕಥೆಗಳು’ ಕಾದಂಬರಿ ಲೋಕಾರ್ಪಣೆಯು ದಿನಾಂಕ 12 ಆಗಸ್ಟ್ 2024ರಂದು ಚನ್ನರಾಯಪಟ್ಟಣ ರಾಘವೇಂದ್ರ ಸಾಮಿಲ್ ರಸ್ತೆಯ ರಂಗ ಲೋಕದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಜನಪದ ವಿದ್ವಾಂಸ ಡಾ. ಚಂದ್ರು ಕಾಳೇನಹಳ್ಳಿ “ಸಾಹಿತ್ಯ ರಚನೆ ನಮ್ಮನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ. ಪುಸ್ತಕ ರಚನೆಯಿಂದ ಹಣ ಸಿಗುತ್ತದೆ ಎಂಬುದು ಸುಳ್ಳು. ಇದು ಎಲ್ಲರ ವಿಷಯದಲ್ಲೂ ಒಂದೇ ರೀತಿ ಇರುವುದಿಲ್ಲ. ನಮ್ಮೊಳಗಿನ ತುಡಿತವನ್ನು ಹೊರಹಾಕಲು ಸಾಹಿತ್ಯ ರಚನೆ ನೆರವಾಗುತ್ತದೆ. ಆದ್ದರಿಂದ ನಮ್ಮ ವಿಕಾಸವೂ ಸಾಧ್ಯ, ಆ ಮೂಲಕ ಯಶಸ್ಸು ಗಳಿಸಬಹುದು. ಯಾವುದೇ ಕೃತಿಯು ಪ್ರತಿ ಬಾರಿ ಓದಿದಾಗಲೂ ಹೊಸದೊಂದು ಅನುಭವ ನೀಡಿದರೆ ಅದು ಸಾರ್ಥಕತೆಯಾದಂತೆ. ಉದಯೋನ್ಮುಖ ಲೇಖಕರಿಗೆ ಹಲವು ಸವಾಲುಗಳಿದ್ದು, ಅವುಗಳನ್ನು ಎದುರಿಸಬೇಕಾಗಿದೆ. ಸಾಹಿತ್ಯದ ಓದನ್ನು ಮರೆತಿರುವ ಜನ ಮೊಬೈಲ್ ನೋಡುವುದಕ್ಕೆ ತಮ್ಮ ಸಮಯ ವಿನಿಯೋಗ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ” ಎಂದು ಹೇಳಿದರು. ರಂಗಕರ್ಮಿ ಪ್ರಸಾದ್ ರಕ್ಷಿದಿ ಮಾತನಾಡಿ “ಅಧ್ಯಯನ ಮತ್ತು…
ಮುಂಬಯಿ : ನಾದಾವಧಾನ ಪ್ರತಿಷ್ಠಾನ (ರಿ.) ಕುಂದಾಪುರ ಪ್ರಸ್ತುತಿಯಲ್ಲಿ ತ್ರಿರಂಗ ಸಂಗಮ ಮುಂಬಯಿ ಸಂಚಾಲಕತ್ವದಲ್ಲಿ ಮುಂಬಯಿ ಮಹಾನಗರದಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮ ‘ಯಕ್ಷ ಜ್ಞಾನ ಯಾನ’ವನ್ನು ದಿನಾಂಕ 19 ಆಗಸ್ಟ್ 2024ರಿಂದ 22 ಆಗಸ್ಟ್ 2024ರವರೆಗೆ ಮುಂಬಯಿಯಲ್ಲಿ ಆಯೋಜಿಸಲಾಗಿದೆ. ದಿನಾಂಕ 19 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮುಂಬಯಿಯ ಥಾಣೆ (ಪಶ್ಚಿಮ), ಚೆಕ್ ನಾಕಾ ಬಳಿ, ಗೋಪಾಲಾಶ್ರಮದ ಹತ್ತಿರ, ಆರ್ ನೆಸ್ಟ್ ಬ್ಯಾಂಕ್ವೆಟ್ ಹೊಟೇಲಿನಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ವೀರಮಣಿ ಕಾಳಗ’, ದಿನಾಂಕ 20 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮುಂಬಯಿಯ ದತ್ತಾನಿ ಮಾಲ್ 3ನೇ ಮಹಡಿ, ಆರ್ನ ಸ್ವರ್ಣ ಬ್ಯಾಂಕ್ವೆಟ್ ಹಾಲ್ ಇಲ್ಲಿ ಕವಿ ಮೂಲ್ಕಿ ರಾಮಕೃಷ್ಣಯ್ಯ ವಿರಚಿತ ‘ಸುಧನ್ವ ಮೋಕ್ಷ’, ದಿನಾಂಕ 21 ಆಗಸ್ಟ್ 2024ರಂದು ಸಂಜೆ 3-30 ಗಂಟೆಗೆ ಮುಂಬಯಿ ಪಶ್ಚಿಮ, ಬೊರಿವಲಿ, ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಭೀಷ್ಮಾರ್ಜುನ’ ಮತ್ತು ದಿನಾಂಕ 22 ಆಗಸ್ಟ್ 2024ರಂದು ಸಂಜೆ…