Author: roovari

ನನ್ನ ಮನಸ್ಸಿನ ಜೊತೆಗೆ ಸಂವಾದ ನಡೆಸಲು ನಾನು ಬಳಸಿಕೊಂಡ ಮಾಧ್ಯಮ ನೃತ್ಯ ಕ್ಷೇತ್ರ. ನೃತ್ಯದ ಕಲಿಕೆಯ ಜೊತೆಗೆ, ಅದರ ವಿಭಿನ್ನವಾದ ಆಯಾಮಗಳನ್ನು ತಿಳಿದುಕೊಳ್ಳುತ್ತಾ, ಅದರೊಂದಿಗೆ ನಡೆಸುವ ಸೂಕ್ಷ್ಮ ಸಂವೇದನೆಯನ್ನು ತಿಳಿಸುವ ಸಾಧನವೇ ಮನಸ್ಸು. ಮನಸ್ಸು ಮರ್ಕಟನಂತೆ, ಈಗೊಮ್ಮೆ ಆಗೊಮ್ಮೆ ಬದಲಾಗುತ್ತಾ ಹೋಗುತ್ತದೆ. ಕೆಲವೊಂದನ್ನು ಸ್ವೀಕರಿಸುತ್ತಾ, ಇನ್ನೂ ಕೆಲವನ್ನು ವಿರೋಧಿಸುತ್ತಾ, ವಿಭಿನ್ನ ಗತಿಯೊಳಗೆ ಚಲಿಸುತ್ತದೆ. ನೃತ್ಯ ಮಾಧ್ಯಮವಿಂದು ಸಮಾಜದ ಒಳಿತು ಕೆಡುಕುಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಾ, ಸಾಮಾಜಿಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ತನ್ನದೇ ಆದ ಪ್ರಯತ್ನವನ್ನು ಮಾಡುತ್ತಾ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ನೃತ್ಯವು ಮನೋವಿಕಾರಗಳನ್ನು ಶಮನ ಮಾಡಿ, ಮಾನಸಿಕ ಆಘಾತಗಳನ್ನು ನಿವಾರಿಸಿ, ವ್ಯಕ್ತಿಗಳ ಆತ್ಮಸಂವೇದನೆಯನ್ನು ಉತ್ತಮ ರೀತಿಯಲ್ಲಿ ಪ್ರಚುರಪಡಿಸುವ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾದ ಫಲಿತಾಂಶಗಳನ್ನು ನೀಡುತ್ತಾ ಬರುತ್ತಿರುವ ಶ್ರೇಷ್ಠ ಮಾಧ್ಯಮಗಳಲ್ಲೊಂದು. ‘ನನ್ನ ಮಗನನ್ನು ನೃತ್ಯಪಟುವಾಗಿ ರೂಪಿಸಿಯೇ ತೀರುತ್ತೇನೆ’ ಎಂಬ ಹಠ ಹೊತ್ತ ಕೆಚ್ಚೆದೆಯ ತಾಯಿಯ ಆಸೆಯಂತೆ ನೃತ್ಯವನ್ನು ನನ್ನ ಆರನೆಯ ವಯಸ್ಸಿನಲ್ಲಿಯೇ ಕಲಿಯಲು ಪ್ರಾರಂಭಿಸಿದೆ. ಗಾತ್ರದಲ್ಲಿ ಸಣ್ಣಕ್ಕಿದ್ದ ನನ್ನನ್ನು ನೋಡಿದ ನೃತ್ಯ ಗುರುಗಳು, “ಇನ್ನೊಂದು…

Read More

15 ಏಪ್ರಿಲ್ 2023, ಮಂಗಳೂರು: ತುಳು ಪರಿಷತ್ ಮತ್ತು ಮ್ಯಾಪ್ಸ್ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಮುಂಬಯಿಯ ಲೇಖಕಿ ಶಾರದಾ ಎ. ಅಂಚನ್ ಅವರ ‘ನಂಬಿ ಸತ್ಯೋಲು’ ಅನುವಾದಿತ ಕೃತಿ ಮತ್ತು ‘ರಕ್ತ ಶುದ್ಧಿ-ಆರೋಗ್ಯ ವೃದ್ಧಿ’ ಎಂಬ ವೈದ್ಯಕೀಯ ಲೇಖನಗಳ ಸಂಕಲನ ಕೃತಿ ಹಾಗೂ ಡಾ. ಪ್ರಭಾಕರ್ ನೀರುಮಾರ್ಗ ಅವರ ‘ಓಲಗ’ ಕಾದಂಬರಿ ಬಿಡುಗಡೆ ಸಮಾರಂಭ ಮತ್ತು ಬಿಸು ಹಬ್ಬದ ವಿಚಾರ ವಿನಿಮಯ ಕಾರ್ಯಕ್ರಮವು ಮಂಗಳೂರಿನ ಬಂಟ್ಸ್ ಹಾಸ್ಟಲ್ ಸಮೀಪದ ಮ್ಯಾಪ್ಸ್ ಕಾಲೇಜು ಸಭಾಂಗಣದಲ್ಲಿ ದಿನಾಂಕ 13-04-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಬಿ.ಎಂ. ರೋಹಿಣಿ ಕೃತಿಗಳನ್ನು ಬಿಡುಗಡೆಗೊಳಿಸಿ “ಪುಸ್ತಕ ಪ್ರಕಟಣೆ ಮಾಡುವಷ್ಟೆ ಕಷ್ಟದ ಕೆಲಸ ಅದನ್ನು ಮಾರಾಟ ಮಾಡುವುದು. ಆದರೆ ಲೇಖಕರು ವರ್ಷಕ್ಕೆ ಒಂದು ಅಥವಾ ಎರಡು ಪುಸ್ತಕಗಳ ಬಿಡುಗಡೆ ಮಾಡುವ ಮೂಲಕ ಆಶ್ಚರ್ಯ ಮೂಡಿಸುತ್ತಿದ್ದಾರೆ ಹಾಗೂ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸುವುದು ತುಂಬಾ ವಿಶೇಷವಾಗಿದೆ”ಎಂದು ಹೇಳಿದರು. ತುಳು ಸಾಹಿತಿ ಕುಶಾಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ ಮಾತನಾಡಿ ತುಳು ನಾಡಿನಲ್ಲಿ ಬಿಸು ಹಬ್ಬದ…

Read More

15 ಏಪ್ರಿಲ್ 2023, ಮಂಗಳೂರು: “ಕಲಾಕುಂಚ” (ರಿ) ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ- ಇದರ ಕೇರಳ, ಗಡಿನಾಡ ಘಟಕದಿಂದ ಸೌರಮಾನ ಯುಗಾದಿ (ವಿಷು) ಪ್ರಯುಕ್ತ ಸಾಹಿತ್ಯಕ್ಕೆ ಸಂಬಂಧ ಪಟ್ಟ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿದೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ “ಜೋಗುಳ” ಹಾಡೂ ಪ್ರಧಾನವಾಗಿದೆ. ತೊಟ್ಟಿಲಲ್ಲಿ ಮಲಗಿದ ಪುಟ್ಟ ಮಗುವನ್ನು ತಾಯಿಯು ಜೋಗುಳ ಹಾಡಿ ತೂಗುತ್ತಿರುವ ದೃಶ್ಯ ಸುಮನೋಹರವಾದುದು. ಎಳೆಯ ಕಂದನನ್ನು ಶ್ರೀಕೃಷ್ಣ ಪರಮಾತ್ಮನಿಗೆ ಹೋಲಿಸಿ ರಾಗವಾಗಿ ಹಾಡುವಾಗ ತೊಟ್ಟಿಲ ಕಂದ ಹಾಡಿನ ಲಯ, ಇಂಪನ್ನು ಆಸ್ವಾದಿಸುತ್ತಾ ನಿದ್ರಾಲೋಕಕ್ಕೆ ಜಾರುತ್ತದೆ. ಜೋಗುಳವನ್ನಾಲಿಸಿದ ಪುಟ್ಟ ಮಗುವಿನ ಏಕಾಗ್ರತಾ ಶಕ್ತಿಹೆಚ್ಚಾಗುತ್ತದೆ. ಚೆನ್ನಾಗಿ ನಿದ್ರೆ ಮಾಡುತ್ತದೆ.ಇತ್ತೀಚೆಗೆ ಈ ಪದ್ಧತಿ ನಶಿಸಿ ಹೋಗುತ್ತಿದೆ. ಈ ಪದ್ದತಿ ಪುನರಾವರ್ತನೆ ಆಗಬೇಕು. ಇಂದಿನ ಯಾಂತ್ರಿಕ ಬದುಕಿನ ಜಂಜಾಟದಿಂದ ಜನ ಹೊರಗೆ ಬರಬೇಕು. ಅದಕ್ಕಾಗಿ ಇದೊಂದು ವೇದಿಕೆ ತಯಾರಾಗಿದೆ. ಜೋಗುಳ ಹಾಡು ರಚನಾ ಸ್ಪರ್ಧೆಯ ನಿಯಮಗಳು : ಒಬ್ಬರು ಒಂದೇ ಹಾಡನ್ನು ಕಳಿಸಬೇಕು. ಮೊಬೈಲಿನಲ್ಲಿ ಟೈಪಿಸಿದ ಹಾಡುಗಳನ್ನೇ ಕಳಿಸಿರಿ. ಅಕ್ಷರ ತಪ್ಪುಗಳಿಲ್ಲದ ಸುಂದರ ರಚನೆಯಾಗಿರಲಿ ಹನ್ನೆರಡರಿಂದ ಹದಿನಾರು ಸಾಲುಗಳ ಮಿತಿಯಲಿರಲಿ…

Read More

ಧೀರಜ್ ರೈ ಸಂಪಾಜೆ 15.04.1989 ರಂದು ಕೆ.ಆರ್. ಚಂದ್ರಶೇಖರ ರೈ ಸಂಪಾಜೆ ಹಾಗೂ ಪದ್ಮಾವತಿ ಸಿ. ರೈ ದಂಪತಿಯವರ 3 ಮಂದಿ ಮಕ್ಕಳಲ್ಲಿ ಹಿರಿಯ ಮಗನಾಗಿ ಜನನ. ಧನ್ ರಾಜ್ ರೈ, ಹರ್ಷರಾಜ್ ರೈ ಇವರ ತಮ್ಮಂದಿರು. ಸಿವಿಲ್ ಎಂಜಿನಿಯರಿಂಗ್ ಇವರ ವಿದ್ಯಾಭ್ಯಾಸ. ಅಜ್ಜ ಮಾದೇಪಾಲು ದಿ.ರಾಮಣ್ಣ ರೈ ಯವರು ಯಕ್ಷಗುರುಗಳು, ಸ್ತ್ರೀ ಪಾತ್ರಧಾರಿಯಾಗಿ ಕಲಾಸೇವೆ ಗೈದವರು. ತಂದೆ ಕೆ.ಆರ್.ಚಂದ್ರಶೇಖರ ರೈ ಸಂಪಾಜೆಯವರು ತೆಂಕು-ಬಡಗು ಉಭಯ ತಿಟ್ಟುಗಳಲ್ಲೂ ಸ್ತ್ರೀ ವೇಷ, ಪುಂಡುವೇಷ, ಕಿರೀಟ ವೇಷಧಾರಿಯಾಗಿ, ಚೌಡೇಶ್ವರಿ ಮೇಳ, ಸಾಲಿಗ್ರಾಮ ಮೇಳ,ಕಟೀಲು ಮೇಳ ನಂತರ ಹವ್ಯಾಸಿಯಾಗಿ ಸೇವೆ ಸಲ್ಲಿಸಿದರು. ದೊಡ್ಡಪ್ಪ ಯಕ್ಷ ರತ್ನ ರಾ.ಪ್ರ.ವಿ.ದಿ.ಶೀನಪ್ಪ ರೈ ಸಂಪಾಜೆಯವರು ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರು. ಚಿಕ್ಕಪ್ಪ ಕೆ.ಆರ್.ಗಂಗಾಧರ ರೈ ಯವರು ಹವ್ಯಾಸಿ ಮದ್ದಳೆಗಾರರು. ಹಾಗಾಗಿ ಯಕ್ಷಗಾನ ಪರಂಪರೆಯಿಂದಾಗಿ ಅಭಿರುಚಿ ತಾನಾಗಿಯೇ ಬಂತು ಎಂದು ಹೇಳುತ್ತಾರೆ ಧೀರಜ್ ರೈ ಸಂಪಾಜೆ. ಯಕ್ಷಗಾನದ ಗುರುಗಳು:- ಭಾಗವತಿಕೆ:- ನಾದಬ್ರಹ್ಮ  ಶ್ರೀ ಸುಬ್ರಹ್ಮಣ್ಯ ಭಟ್ ಮಾಂಬಾಡಿ. ಅಭಿನವ ವಾಲ್ಮೀಕಿ ದಿ. ಪುರುಷೊತ್ತಮ…

Read More

14-04-2023,ಮಂಗಳೂರು: ಉಡುಪಿಯ ಚಿತ್ರ ಕಲಾವಿದ ಸಕು ಅವರ ಶಿಲ್ಪ ಕಲಾಕೃತಿ (ರಿಲೀಫ್‌)ಗಳ ಪ್ರದರ್ಶನ ಹ್ಯುಮಾನೆ -2 ಮಂಗಳೂರಿನ ಬಲ್ಲಾಳ್ ಬಾಗ್‌ನ ಪ್ರಸಾದ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ 14-04-2023ರಂದು ಉದ್ಘಾಟನೆಗೊಂಡಿತು. ಈ ಶಿಲ್ಪಕಲಾ ಪ್ರದರ್ಶನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಶ್ರೀ ಆನಂದ ಕೆ. ಉದ್ಘಾಟಿಸಿದರು. ಅತಿಥಿಗಳಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕರಾಮ್‌ ಪೂಜಾರಿ, ಡಾ| ಟಿ.ಡಿ. ರಾಮಮೂರ್ತಿ, ಪ್ರಸಾದ್ ಆರ್ಟ್ ಗ್ಯಾಲರಿಯ ನಿರ್ದೇಶಕರಾದ ಕೋಟಿ ಪ್ರಸಾದ್ ಆಳ್ವ, ಹಿರಿಯ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ ಭಾಗವಹಿಸಿದರು ಚಿತ್ರ ಕಲಾವಿದ ಸಕು ಪಾಂಗಾಳ ಅವರು ಮಾತನಾಡಿ ’’ಈ ಶಿಲ್ಪ ಕಲಾಕೃತಿಗಳು ಕಪ್ಪೆ ಬೊಂಡಾಸ್‌ ಮೀನಿನ ಚಿಪ್ಪಿನಿಂದ (cuttlefish bone) ಮಾಡಲಾಗಿದೆ. 1997 ರಿಂದಲೇ ಕಡಲ ಬದಿಯಲ್ಲಿ ಸಿಗುವ ಈ ನಿರುಪಯುಕ್ತ ವಸ್ತುವಿನಿಂದ ಕಲಾಕೃತಿಗಳನ್ನು ರಚಿಸಲು ಪ್ರಾರಂಭಿಸಿದ್ದು ಇದರ ಮೊದಲ ಪ್ರದರ್ಶನ ಏಪ್ರಿಲ್ 3 ರಿಂದ 9 ರ ವರೆಗೆ ಉಡುಪಿಯಲ್ಲಿ ಯಶಸ್ವಿಯಾಗಿ ನಡೆದಿದೆ’’ ಎಂದರು. . ಈ…

Read More

15 ಏಪ್ರಿಲ್ 2023, ಬೆಂಗಳೂರು: ಮಗುವಿನ ಮನೋವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಥಿಯೇಟರ್ ವಿಧಾನವನ್ನುಬಳಸುವ ವಿಭಿನ್ನ ಶಿಬಿರವು ಚುಕ್ಕಿರಮಾ ಇವರ ನಿರ್ದೇಶನದಲ್ಲಿ ಸಂಚಾರಿ ಥಿಯೇಟರ್ ಇದರ ಸಹಭಾಗಿತ್ವ ದೊಂದಿಗೆ  ಏಪ್ರಿಲ್ 17 ಮತ್ತು ಏಪ್ರಿಲ್ 20ರಂದು ಎರಡು ಬ್ಯಾಚ್ ಗಳಲ್ಲಿ ಬೆಂಗಳೂರಿನ ಬಸವನಗುಡಿಯ ಪುಟ್ಟಣ್ಣ ರಸ್ತೆಯ ಸ್ಕಂದ ಕಟ್ಟಡದಲ್ಲಿ ನಡೆಯಲಿದೆ. ಕಾಲೇಜಿನ ಪ್ರಾಜೆಕ್ಟಿಗೆ ‘ನಲಿ ಮನ’ ಎಂಬ ಕಲ್ಪನೆ ನನ್ನ ಮನದಲ್ಲಿ ಮೂಡಿತು. ಎಂ.ಎಸ್ಸಿ.ಸೈಕಾಲಜಿಯ ನಮ್ಮ 4ನೇ ಸೆಮಿಸ್ಟರ್ ನಲ್ಲಿ ನಾವೆಲ್ಲರೂ ಈ ಪ್ರಾಜೆಕ್ಟ್ ಮಾಡಬೇಕಾಗಿತ್ತು. ನನ್ನ ಯೋಜನೆ ಸೈಕಾಲಜಿ ಮತ್ತು ಥಿಯೇಟರ್‌ನ ಸಂಯೋಜನೆಯಾಗಿರಬೇಕು ಎಂಬ ಅಸ್ಪಷ್ಟ ಕಲ್ಪನೆ ನನಗಿತ್ತು . ಬಾಲ್ಯದಿಂದಲೂ ರಂಗಭೂಮಿಯೊಂದಿಗೆ ಸದಾ ಸಂಬಂಧ ಹೊಂದಿದ್ದ ನನಗೆ ಮನೋವಿಜ್ಞಾನವನ್ನು ಅಧ್ಯಯನ ಮಾಡುವುದರಿಂದ ನಾನು ಆಯ್ಕೆ ಮಾಡಿದ ವಿಷಯಕ್ಕೆ ಬಹಳ ಪೂರಕವಾಗಿರುತ್ತದೆ ಎಂಬುದು ನನ್ನ ಯೋಚನೆಗೆ ಬಂದಿತು. ನನ್ನ ಜೀವನದಲ್ಲಿ ರಂಗಭೂಮಿಯ ಮಹತ್ವವನ್ನು ನಾನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ. ಆದ್ದರಿಂದ ಈ ಎರಡೂ ಅಂಶಗಳನ್ನು ನನ್ನ ಮನಸ್ಸಿನಲ್ಲಿಟ್ಟುಕೊಂಡು ನನ್ನ ಯೋಜನೆಯಲ್ಲಿ ಕೆಲಸ ಮಾಡಲು ನಾನು…

Read More

15 ಏಪ್ರಿಲ್ 2023, ಮಂಗಳೂರು: ಕೆ.ಕೆ. ಹೆಬ್ಬಾರ್ (ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್) ರು ಜೂನ್ 15,1911ರಂದು ಉಡುಪಿಯ ಕಟ್ಟoಗೇರಿಯಲ್ಲಿ ತುಳು ಭಾಷಿಕ ಬ್ರಾಹ್ಮಣ ಕುಟುಂಬದಲ್ಲಿ ಶ್ರೀ ನಾರಾಯಣ ಹೆಬ್ಬಾರ್ ಮತ್ತು ಸೀತಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. 1935ರಲ್ಲಿ ಶ್ರೀಮತಿ ಯಮುನಾರೊಂದಿಗೆ ಇವರ ವಿವಾಹವಾಯಿತು. ಮೂವರು ಮಕ್ಕಳಲ್ಲಿ ಮಗ ‘ರನ್ನ’, ಹೆಣ್ಣು ಮಕ್ಕಳು ರೇಖಾ ಮತ್ತು ರಜನಿ. ತಮ್ಮ ತಂದೆಯವರು ಆಗೊಮ್ಮೆ ಈಗೊಮ್ಮೆ ಗಣೇಶ ವಿಗ್ರಹಗಳನ್ನು ನಿರ್ಮಿಸುತ್ತಿದ್ದುದ್ದನ್ನು ಗಮನಿಸುತ್ತಿದ್ದ ಬಾಲಕ ಕೃಷ್ಣ ಹೆಬ್ಬಾರ್‌ ಆಗಿನಿಂದಲೇ ಕಲೆಯತ್ತ ಒಲವು ಬೆಳೆಸಿಕೊಂಡಿದ್ದರು. ಕಲಾವಿದರ ಕುಟುಂಬದಲ್ಲಿ ಜನಿಸಿದ ಕೃಷ್ಣ ಹೆಬ್ಬಾರ್‌ 1940ರಿಂದ 1945ರ ತನಕ ಮುಂಬಯಿಯ ಪ್ರತಿಷ್ಠಿತ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಕಲಾ ಪದವಿ ಪಡೆದು, ಪ್ಯಾರಿಸ್ ನಲ್ಲಿ ಹೆಚ್ಚಿನ ಕಲಾ ಅಧ್ಯಯನ ನಡೆಸಿದರು. ತಮ್ಮ ಜೀವನದುದ್ದಕ್ಕೂ ಹೆಬ್ಬಾರ್‌ ಹಲವು ಪ್ರಶಸ್ತಿಗಳನ್ನು ಗಳಿಸಿದರು. ಭಾರತ ಸರಕಾರದಿಂದ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ಜೊತೆಗೆ ‘ಅಕ್ಯಾಡಮಿ ಆಫ್‌ ಫೈನ್‌ ಆರ್ಟ್ಸ್‌’ (ಕೊಲ್ಕತ್ತಾ), ‘ದಿ ಮುಂಬಯಿ ಆರ್ಟ್‌ ಸೊಸೈಟಿ…

Read More

14 ಏಪ್ರಿಲ್ 2023, ಬೆಂಗಳೂರು: ಖ್ಯಾತ ‘ನಾಟ್ಯಸಂಕುಲ ಸ್ಕೂಲ್ ಆಫ್ ಭರತನಾಟ್ಯ’ ನೃತ್ಯಸಂಸ್ಥೆಯ ಗುರು ವಿದುಷಿ ಕೆ.ಎಸ್. ನಾಗಶ್ರೀ ಅವರಲ್ಲಿ ಸಮರ್ಥ ಗರಡಿಯಲ್ಲಿ ನಾಟ್ಯಶಿಕ್ಷಣ ಪಡೆದು, ವೇದಿಕೆಯ ಮೇಲೆ ತಾವು ಕಲಿತ ನೃತ್ಯವನ್ನು ಆತ್ಮವಿಶ್ವಾಸದಿಂದ ಒಟ್ಟಿಗೆ ಪ್ರದರ್ಶಿಸುವ ಹಂತವನ್ನು ತಲುಪಿದ್ದಾರೆ ಈ ತಾಯಿ-ಮಗಳು. ತಾಯಿ ದೀಪಾ ಮಂಜುನಾಥ್ ಮತ್ತು ಮಗಳು ಮುಕ್ತಾ ಎಂ. ಮಂಜುನಾಥ್ ಕಳೆದ ಹತ್ತು ವರ್ಷಗಳಿಂದ ಭರತನಾಟ್ಯವನ್ನು ಆಸಕ್ತಿಯಿಂದ ಕಲಿಯುತ್ತಿದ್ದು, ಅವರು ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸಲು ಇದೇ ತಿಂಗಳ 16 ಭಾನುವಾರದಂದು ಬೆಳಗ್ಗೆ 10 ಗಂಟೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಲಿದ್ದಾರೆ. ಅಪರೂಪದ ಈ ರಂಗಪ್ರವೇಶದಲ್ಲಿ ಅನಾವರಣಗೊಳ್ಳಲಿರುವ ತಾಯಿ-ಮಗಳ ಕಲಾಪ್ರತಿಭೆಯನ್ನು ಸಾಕ್ಷಾತ್ಕರಿಸಲು ಕಲಾರಸಿಕರೆಲ್ಲರಿಗೂ ಆದರದ ಸುಸ್ವಾಗತ. ಸಾಮಾನ್ಯವಾಗಿ ತಾಯಿ ಮಕ್ಕಳು ನೃತ್ಯ ಕಲಿಯಲು ಒಟ್ಟಿಗೆ ಸೇರಿದ ಪ್ರಸಂಗಗಳು ಕಡಮೆ ಅಥವಾ ಇಲ್ಲವೆಂದೇ ಹೇಳಬೇಕು. ಮಗಳನ್ನು ನೃತ್ಯ ಶಾಲೆಗೆ ಕರೆದೊಯ್ಯುವ ತಾಯಂದಿರಿಗೆ, ದಿನಾ ನೃತ್ಯದ ತಾಲೀಮನ್ನು ನೋಡುತ್ತ ಅವರ ಮನದೊಳಗೆ ಅವ್ಯಕ್ತವಾಗಿ ಹುದುಗಿದ ಕಲಾಪ್ರೀತಿ, ಪುಟಿದೇಳುವುದು ಸಹಜ. ಅವ್ಯಕ್ತ…

Read More

14 ಏಪ್ರಿಲ್ 2023, ಕಾಸರಗೋಡು: ರಂಗ ಚೇತನ ಚೇತನ (ರಿ) ಕಾಸರಗೋಡು ಇದರ ನೇತೃತ್ವದಲ್ಲಿ ಹಾಗೂ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಸಹಾಬಾಗಿತ್ವದಲ್ಲಿ ಪೆರ್ಮುದೆ ಶಾಲೆಯಲ್ಲಿ ಜರಗುತ್ತಿರುವ ಚಿತ್ತಾರ ರಂಗದ ರಂಗೋಲಿ ಮೂರು ದಿನಗಳ ಸಹವಾಸ ಶಿಬಿರಕ್ಕೆ ದಿನಾಂಕ 12-04-2023ರಂದು ಆಕರ್ಷಕ ತೆರೆ ಬಿತ್ತು. ಚಿತ್ತಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಂಗಡಿಮೊಗರು ಸರ್ವಿಸ್ ಕೊ ಓಪರೇಟಿವ್ ಬ್ಯಾಂಕ್ ನ ಕಾರ್ಯದರ್ಶಿ ಶ್ರೀ ವಿಠಲ ರೈ ಮಾತನಾಡಿ,”ಗ್ರಾಮೀಣ ಪ್ರದೇಶದ ಕನ್ನಡ ಮಕ್ಕಳಿಗೆ ಇಂತಹ ಶಿಬಿರದ ಮೂಲಕ ಹೆಚ್ಚು ಹೆಚ್ಚು ಅವಕಾಶಗಳು ಲಭಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವೇದಿಕೆಯಾಗಲಿ. ಈ ನಿಟ್ಟಿನಲ್ಲಿ ರಂಗ ಚೇತನ (ರಿ) ಕಾಸರಗೋಡು ಇದರ ವತಿಯಿಂದ ವರ್ಷಂಪ್ರತಿ ಜರಗುತ್ತಿರುವ ಮಕ್ಕಳ ಸಹವಾಸ ಶಿಬಿರವು ಮಾದರಿಯಾಗಿದ್ದು, ಈ ಸಂಸ್ಥೆಯ ಮೂಲಕ ಇನ್ನಷ್ಟು ಇಂತಹ ಶಿಬಿರವನ್ನು ಹಮ್ಮಿಕೊಳ್ಳುವಂತಾಗಲಿ” ಎಂದು ಶುಭ ಹಾರೈಸಿದರು. ರಂಗ ಚೇತನ ಕಾಸರಗೋಡು ಇದರ ಉಪಾಧ್ಯಕ್ಷರಾದ ವಿಜಯ್ ಕುಮಾರ್ ಪಾವಳರವರ ಅಧ್ಯಕ್ಷತೆಯಲ್ಲಿ ಜರಗಿದ…

Read More

14 ಏಪ್ರಿಲ್ 2023, ಬೆಂಗಳೂರು: ಬೆಂಗಳೂರು ಹೊಸ ಕೋಟೆಯ “ಜನಪದರು” ರಂಗ ಮಂದಿರದಲ್ಲಿ ಇದೇ ಏಪ್ರಿಲ್ 8ರಂದು ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಸರಣಿಯ ರಂಗ ಮಾಲೆ – 69ರಲ್ಲಿ ಬೆಂಗಳೂರು “ದೃಶ್ಯಕಾವ್ಯ” ರಂಗ ತಂಡದ ಡಾ. ಕೆ.ವೈ. ನಾರಾಯಣ ಸ್ವಾಮಿ ರಚನೆಯ “ಮಾಯಾ ಬೇಟೆ” ನಾಟಕವನ್ನು ನಂಜುಂಡೇಗೌಡರ ನಿರ್ದೇಶನದಲ್ಲಿ ಪ್ರದರ್ಶನ ನೀಡಿತು. ನಾಟಕ ನೆರೆದ ಪ್ರೇಕ್ಷಕರನ್ನು ಮ೦ತ್ರ ಮುಗ್ಧರನ್ನಾಗಿಸಿತು. ಭಾರತದ ರಂಗಭೂಮಿಯಲ್ಲಿ ಸದಾ ಕ್ರಿಯಾಶೀಲವಾದ ಕನ್ನಡ ರಂಗಭೂಮಿ ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಹೊಂದಿದೆ. ಇಂದಿನ ನಾಟಕಕಾರರಲ್ಲಿ ಮುಖ್ಯರಾದವರಲ್ಲಿ ಡಾ. ಕೆ.ವೈ. ನಾರಾಯಣಸ್ವಾಮಿ, ಪಂಪ ಭಾರತ ಮತ್ತು ರಸ ಋಷಿ ಕುವೆಂಪುರವರ ಮಲೆಗಳಲ್ಲಿ ಮದುಮಗಳು – ರಂಗಕೃತಿ ಮಾಡಿದ ಕೀರ್ತಿ ಇವರದು. ಹಲವಾರು ಹೊಸ ನಾಟಕಗಳ ಮೂಲಕ ಗಮನ ಸೆಳೆದವರು. 21ನೇ ಶತಮಾನ ಲಿಂಗ ಸಮಾನತೆ, ಮಹಿಳಾ ಶೋಷಣೆ ಹಾಗೂ ಸ್ತ್ರೀವಾದಿ ಹೋರಾಟದ ಕಾಲ. ಎಷ್ಟಾದರೂ ಭಾರತೀಯ ಕರ್ಮಠ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಬಂದರೂ ಹೆಣ್ಣು ಯಾವಗಲೂ second gender.…

Read More