Author: roovari

14 ಏಪ್ರಿಲ್ 2023, ಬಂಟ್ವಾಳ: ಕೊರೋನ ಸಮಯದ ಸಂಧಿಗ್ಧತೆಯು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ನಮ್ಮ ನಿತ್ಯದ ಚಟುವಟಿಕೆಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಒಟ್ಟಾಗಿ ಹೇಳುವುದಾದರೆ ಹೊಸತೊಂದು ಹುಡುಕಲು ಅಥವಾ ಪರ್ಯಾಯವಾಗಿ ಶೋಧಿಸಲು ಕಾರಣವಾಗಿದೆ. ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಏರು ಪೇರುಗಳಾಗಿ ಡಿಜಿಟಲ್ ಪದ್ಧತಿ ಸಾಧಕ ಬಾಧಕಗಳ ನಡುವೆಯೇ ಪಾಠ ಬೋಧನೆಗಳನ್ನು ನಡೆಸಬೇಕಾದ ಅನಿವಾರ್ಯತೆ ಎದುರಾದಂತಹ ಸಂದರ್ಭದಲ್ಲಿ ಮಕ್ಕಳು ನಿತ್ಯ ಕಲಿಕಾ ಚಟುವಟಿಕೆಯಿಂದ ಇರಬೇಕಾದುದನ್ನು ಮನಗಂಡು ಕಂಡುಕೊಂಡ ಫಲವೇ ಮಕ್ಕಳ ಜಗಲಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು, ಈ ಗ್ರಾಮೀಣ ಭಾಗದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸುವ ಯೋಜನೆಯನ್ನು ರೂಪಿಸಲಾಯಿತು. ವಿವಿಧ ಸ್ಪರ್ಧೆಗಳ ಮೂಲಕ ಹಾಗೂ ವೀಕೆಂಡ್ ಟಾಸ್ಕ್ ಅನ್ನುವ ವೈವಿಧ್ಯ ಚಟುವಟಿಕೆಯ ಮೂಲಕ ಮಕ್ಕಳು ನಿರಂತರವಾಗಿ ಭಾಗವಹಿಸುವುದನ್ನು ಗಮನಿಸಿಕೊಳ್ಳಲಾಯಿತು. ಮಕ್ಕಳ ಆಸಕ್ತಿ ಕುತೂಹಲಗಳನ್ನು ಗಮನಿಸಿ ಒಂದು ಹೆಜ್ಜೆ ಮುಂದುವರಿದಂತೆ ಮಕ್ಕಳ ಪತ್ರಿಕೆಯನ್ನು ನಡೆಸುವ ಚಿಂತನೆ ಆರಂಭವಾಯಿತು. ಮಕ್ಕಳ ಸೃಜನಶೀಲ ಅಭಿವ್ಯಕ್ತಿಗಳಿಗೆ ಪೂರಕವಾಗುವಂತೆ ಮಕ್ಕಳ ಜಗಲಿ ಪತ್ರಿಕೆಯನ್ನು…

Read More

13 ಏಪ್ರಿಲ್ 2023, ಕಾಸರಗೋಡು: ಬೆಂಗಳೂರಿನ ಜಾಗೃತಿ ಸೇವಾ ಟ್ರಸ್ಟ್‌ ಸೇವಾ ಸಂಸ್ಥೆ ಆಶ್ರಯದಲ್ಲಿ ಮತ್ತು ಎಡನೀರು ಮಠದ ಸಹಕಾರದಲ್ಲಿ ಏ.15ಕ್ಕೆ ಬೆಳಗ್ಗೆ 9.30ರಿಂದ ಎಡನೀರು ಮಠದಲ್ಲಿ ಕನ್ನಡ ಸಾಹಿತ್ಯ ಸಮಾವೇಶ, 2023ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಹಾಗೂ ಅಂತರ್ ರಾಜ್ಯ ಮಟ್ಟದ ಕವಿಗೋಷ್ಠಿ, ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ. ಬೆಳಗ್ಗೆ 9.30ರಿಂದ ವಿಶ್ವ ಮಾನವ ಸಂಗೀತ ಯಾನ ಕಾರ್ಯಕ್ರಮ ಜರಗಲಿದೆ. ನಂತರ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಗುರುರಾಜ್‌, ಸಮಾಜ ಸೇವಕಿ ಡಾ. ಭಾಗೀರಥಿ, ಡಿ.ಎಸ್.ಜ್ಯೋತಿ ರೆಡ್ಡಿ, ಮಮತಾ, ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಯ ಮೈಕ್ರೋ ಬಯಾಲಜಿ ವಿಭಾಗದ ಡಾ.ಸಿ.ಎಲ್. ಶಿವಮೂರ್ತಿ ಭಾಗವಹಿಸಲಿದ್ದಾರೆ. ಬಳಿಕ ಸಾಹಿತ್ಯ ಕಾರ್ಯಕ್ರಮ, ಕವಿಗೋಷ್ಠಿ ನಡೆಯಲಿದೆ. ಪತ್ರಕರ್ತ, ಸಂಘಟಕ ಶೇಖರ್ ಅಜೆಕಾರ್, ಯೋಗ ಶಿಕ್ಷಕರಾದ…

Read More

13 ಏಪ್ರಿಲ್ 2023, ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪ್ರಖ್ಯಾತ ಪ್ರಸಾದ್ ಆರ್ಟ್ ಗ್ಯಾಲರಿಯ ಪ್ರಸಾದ್ ಚಿತ್ರಕಲಾ ಶಾಲೆ, ಬಲ್ಲಾಳ್ ಭಾಗ್, ಎಂ.ಜಿ.ರೋಡ್. ಇದರ ನಿರ್ದೇಶಕರಾದಂತಹ ಶ್ರೀಯುತ ಕೋಟಿ ಪ್ರಸಾದ್ ಆಳ್ವ ಅವರು ಸುಮಾರು 30 ವರ್ಷಗಳ ಕಾಲ ಖಾಸಗಿಯಾಗಿ ತಮ್ಮ ಸ್ವಂತ ಹಣದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಯಾವುದೇ ರೀತಿಯ ಸರ್ಕಾರದ ಅನುದಾನವಾಗಲಿ ಇರುವುದಿಲ್ಲ. ಕೇವಲ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಆಧಾರಿತವಾಗಿ ಚಿತ್ರಕಲೆಯ ವಿಷಯವನ್ನು ಒಳಗೊಂಡಿರುವಂತೆ ಪ್ರತಿ ವರ್ಷವೂ ವಾರ್ಷಿಕ ಶಿಬಿರಗಳು ಶಾಲೆಯ ಆವರಣದಲ್ಲಿ ನಡೆಯುತ್ತಿರುತ್ತದೆ. 2023 ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪರಿಸರದ ಮುಕ್ತ ವಾತಾವರಣದಲ್ಲಿ ಮಕ್ಕಳ ಮಾನಸಿಕ, ಬೌದ್ಧಿಕ, ಕ್ರಿಯಾತ್ಮಕ ಚಟುವಟಿಕೆಗಳ ಬೆಳವಣಿಗೆಗೆ ಪೂರಕವಾಗಿ ಬೇಸಿಕ್, ಪೇಪರ್ ಕ್ರಾಫ್ಟ್, ಕ್ಲೇ ಮಾಡ್ಲಿಂಗ್, ಜಲವರ್ಣ ಚಿತ್ರಕಲೆ, ಕೊಲಾಜ್, ಗ್ಲಾಸ್ ಪೇಂಟಿಂಗ್, ವಸ್ತು ಚಿತ್ರಣ, ಪ್ರಕೃತಿ ಹಾಗೂ ಆರ್ಟ್ ವರ್ಲಿ, ಮಡಿಕೆಗೆ ಬಣ್ಣ ಬಳಿಯುವುದು ಮತ್ತು ಅನ್ವಯಿಕ ಕಲೆಯ ದೃಶ್ಯ ಮಾಧ್ಯಮದ ಕುರಿತು ಜಿಲ್ಲೆಯ ನುರಿತ ಕಲಾವಿದರುಗಳಿಂದ ಶಿಕ್ಷಕರುಗಳಿಂದ…

Read More

13 ಎಪ್ರಿಲ್ 2023, ಚಾಮರಾಜಪೇಟೆ:  ಬೆಂಗಳೂರಿನ ಪ್ರತಿಷ್ಠಿತ ಭರತನಾಟ್ಯ ಸಂಸ್ಥೆಗಳಾದ ಪಾರ್ವತಿ ನೃತ್ಯವಿಹಂಗಮ(ರಿ), ಇದರ ನೃತ್ಯ ನಿರ್ದೇಶಕರಾದ ಗುರು ನಿರ್ಮಲ ಜಗದೀಶ್ ಹಾಗೂ ನೃತ್ಯಕುಟೀರ (ರಿ) ನೃತ್ಯ ಸಂಸ್ಥೆಯ ನಿರ್ದೇಶಕರಾದ ಗುರು ದೀಪ ಭಟ್ ಇವರುಗಳು ಜಂಟಿಯಾಗಿ ಇದೇ ತಿಂಗಳ 15 ಮತ್ತು 16 ರಂದು ಎರಡು ದಿನಗಳ ಕಾಲ, ನೃತ್ಯ ಕಲಾವಿದ ವಿದ್ವಾನ್ ಮಂಜುನಾಥ್ ಎನ್ ಪುತ್ತೂರು ಇವರ ‘Fun with Tala’ ತಾಳ ಕಾರ್ಯಗಾರವನ್ನು ತಮ್ಮ ಸಂಸ್ಥೆಯ ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿಗಳಿಗಾಗಿ ನೃತ್ಯ ಕುಠೀರ, ಚಾಮರಾಜಪೇಟೆಯಲ್ಲಿ ಹಮ್ಮಿಕೊಂಡಿರುತ್ತಾರೆ. ಮಂಜುನಾಥ್ ಅವರು ಜೂನಿಯರ್ ಹಾಗೂ ಸೀನಿಯರ್ ವಿಭಾಗದ ಮಕ್ಕಳಿಗಾಗಿಯೇ ಸಿದ್ದಪಡಿಸಿದ ತಾಳದ ವಿಚಾರಗಳಿರುವ ಕಾರ್ಯಗಾರ ಇದಾಗಿದೆ. ವಿದ್ವಾನ್ ಮಂಜುನಾಥ್ ಎನ್ ಪುತ್ತೂರು

Read More

13 ಏಪ್ರಿಲ್ 2023, ಮಂಗಳೂರು: ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಸನಾತನ ನಾಟ್ಯಾಲಯದ 40ನೇ ವರ್ಷಾಚರಣೆಯ ಅಂಗವಾಗಿ ದಿನಾಂಕ 09-04-2023 ಭಾನುವಾರದಂದು ನಡೆದ ಕಾರ್ಯಕ್ರಮವನ್ನು ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ, ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಸಂಸ್ಕಾರ ಭಾರತಿಯ ಪ್ರಾಂತ ಕಾರ್ಯದರ್ಶಿಗಳಾದ ನಾಗರಾಜ್ ಶೆಟ್ಟಿ ಮತ್ತು ಶ್ರೀದೇವಿ ಭಜನಾ ಮಂದಿರದ ಸಂತೋಷ್ ಶೆಟ್ಟಿ ಎಲ್ಲರೂ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಆ ಕೂಡಲೇ ಮೂಡುಶೆಡ್ಡೆಯ ಶ್ರೀದೇವಿ ಭಜನಾಮಂದಿರದ ಸದಸ್ಯರಿಂದ ಭಕ್ತಿ ಭಾವವನ್ನು ಜಾಗೃತಗೊಳಿಸುವ ಕುಣಿತ ಭಜನೆಯು ನೆರವೇರಿತು. ಬಾಲ ವಾಗ್ಮಿ , ಬೆಂಗಳೂರಿನ ಹಾರಿಕಾ ಮಂಜುನಾಥ್‌ ರವರು ‘ರಾಷ್ಟ್ರಧರ್ಮ ಜಾಗೃತಿ ಸಂದೇಶ’ದ ಬಗ್ಗೆ ಮಾತನಾಡುತ್ತಾ “ಭಾರತವು ವಿಶ್ವಗುರುವಾಗಬೇಕು ಎಂಬುದು ಎಲ್ಲರ ಕನಸು ನಿಜ, ಆದರೆ ತಾಯಿ ಭಾರತಿಯು ಇಡೀ ವಿಶ್ವದ ತಾಯಿಯಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ತಮ್ಮ ಶ್ರೀಮಂತ ಪರಂಪರೆಯನ್ನು ಅರಿತುಕೊಂಡು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು. ಸ್ವಾಮಿ ವಿವೇಕಾನಂದರಂತಹ ಜಿಜ್ಞಾಸುಗಳು…

Read More

13 ಏಪ್ರಿಲ್ 2023, ಧಾರವಾಡ: ಧಾರವಾಡ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು ರಾಘವೇಂದ್ರ ಪಾಟೀಲ – 72 ಮತ್ತು ‘ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ -2022’ ಪ್ರದಾನ ಸಮಾರಂಭವು ಭಾನುವಾರ ದಿನಾಂಕ 16 ಏಪ್ರಿಲ್ 2023ರಂದು ಧಾರವಾಡದ ಸಂಸ್ಕೃತಿ ಸಮುಚ್ಚಯ ಕಟ್ಟಡ, ರಂಗಾಯಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾರವಾಢದ ಪ್ರಸಿದ್ಧ ಕಾದಂಬರಿಕಾರರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ವಹಿಸಲಿದ್ದಾರೆ. ಅಂದು ಪೂರ್ವಾಹ್ನ ಗಂಟೆ 10.15ಕ್ಕೆ ಮೊದಲ ಘಟ್ಟದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಖ್ಯಾತ ಕವಿಗಳಾದ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಪಾಟೀಲರ ‘ತೇರು’ ಕಾದಂಬರಿ ರಚನೆಯಾಗಿ ಇಪ್ಪತ್ತು ವರ್ಷಗಳು ಸಂದಿದ್ದು, ಆ ಕೃತಿಯ ಬಗ್ಗೆ ಎಂ.ಆರ್. ದತ್ತಾತ್ರಿ, ಮತ್ತು ಇಪ್ಪತ್ತೈದು ವರ್ಷಗಳ ಹಿಂದೆ ರಚನೆಯಾದ ‘ಮಾಯಿಯ ಮುಖಗಳು’ ಎಂಬ ಕಥಾ ಸಂಕಲನದ ಬಗ್ಗೆ ಧಾರವಾಡದ ಪ್ರಸಿದ್ಧ ಕನ್ನಡ ಕವಿಗಳಾದ ಆನಂದ ಝುಂಜರವಾಡ ಮಾತನಾಡುತ್ತಾರೆ. ಪಾಟೀಲರ ಶಿಷ್ಯರೂ, ಪ್ರಸಿದ್ಧ ಉದ್ಯಮಿಗಳೂ ಆದ ಡಾ.ಪ್ರಭಾಕರ ಬಿ.ಸಿ. ಇವರು ‘ನನ್ನ ಮೇಷ್ಟ್ರು ಆರ್.ಬಿ.ಪಿ.’…

Read More

13 ಏಪ್ರಿಲ್ 2023, ಮಂಗಳೂರು: ಅಮೃತೇಶ್ವರ ನಾಟ್ಯಾಲಯ ವಾಮಂಜೂರು ಇದರ ದಶಮಾನೋತ್ಸವ ಕಾರ್ಯಕ್ರಮವು ಏಪ್ರಿಲ್ 10ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ವಿದ್ವಾನ್ ಪಿ. ಕಮಲಾಕ್ಷ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ “ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯುತ್ತದೆ. ‘ಶಕ್ತಿ ಪೀಠ’ ನೃತ್ಯ ರೂಪಕ ನಿಜವಾಗಿಯೂ ಶಿವಶಕ್ತಿಯೇ ವೇದಿಕೆಯಲ್ಲಿ ನೆಲೆಸಿದಂತೆ ಭಾಸವಾಗುತ್ತಿತ್ತು.” ಎಂದು ಅಭಿಮಾನದ ಮಾತುಗಳನ್ನಾಡಿದರು. ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರು “ಸಂಸ್ಥೆಯು ಏಳಿಗೆಯನ್ನು ಕಾಣಲಿ” ಎಂದು ಶುಭ ಆಶೀರ್ವಚನ ನೀಡಿದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಶ್ರೀ ದುರ್ಗಾ ಕನ್ ಸ್ಟ್ರಕ್ಷನ್ ನ ಮಾಲಕರಾದ ಶ್ರೀ ಸತೀಶ್ ಶೆಟ್ಟಿಯವರು “ಅಮೃತೇಶ್ವರ ನಾಟ್ಯಾಲಯ ಬೆಳೆದು ಬಂದ ರೀತಿ, ನೃತ್ಯ ಗುರುಗಳ ಶ್ರಮ ಹಾಗೂ ವಿದ್ಯಾರ್ಥಿಗಳ ಶ್ರದ್ಧೆ ಮತ್ತು ಭಕ್ತಿಯನ್ನು ನಾಟ್ಯಾಲಯದ ನಿರ್ದೇಶಕಿ ಮಾಡುವ ಕೆಲಸದಲ್ಲಿ ಕಾಣಬಹುದು” ಎಂದು ಕಾರ್ಯಕ್ರಮವನ್ನು ಪ್ರಶಂಶಿಸಿ, ‘ಶಕ್ತಿ ಪೀಠ’ ನೃತ್ಯ ರೂಪಕವನ್ನು ಶ್ಲಾಘಿಸಿದರು. ಗುರುಗಳಾದ ಶಾರದಾಮಣಿ ಶೇಖರ್ ಅವರು ನೃತ್ಯ ರೂಪಕವನ್ನು ನಿರ್ದೇಶಿಸಲು ಸಂಸ್ಥೆಯ ಗುರುಗಳಾದ ಚಿತ್ರಾಕ್ಷಿ ಅಜಿತ್ ಕುಮಾರ್…

Read More

13 ಏಪ್ರಿಲ್ 2023, ಮಂಗಳೂರು: ಮಂಗಳೂರಿನ ಉರ್ವಸ್ಟೋರಿನ ಕರಾವಳಿ ಲೇಖಕಿಯರ-ವಾಚಕಿಯರ ಸಂಘ (ರಿ.) ಮತ್ತು ತುಳು ಧರ್ಮ ಸಂಶೋಧನಾ ಕೇಂದ್ರ ಪೇರೂರು ಇದರ ಸಹಯೋಗದಲ್ಲಿ ದಿನಾಂಕ 11-04-2023 ಮಂಗಳವಾರ ಸಾಹಿತ್ಯ ಸದನದಲ್ಲಿ ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ, ಲೆಚ್ಚು ಪೂಜಾರ್ದಿ ನೆನಪಿನ “ಬರವುದಪ್ಪೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ” ಪ್ರದಾನ ಸಮಾರಂಭ ನಡೆಯಿತು. ಕಾಲವು ಅಳಿಸಲಾಗದ ಹೆಸರು ಶಕ್ತಿಯುತ ಬಂಡಾಯ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರದು. ಏಪ್ರಿಲ್ 11 ಜ್ಯೋತಿಬಾ ಫುಲೆ ಅವರ ಜನ್ಮ ದಿನ. ಭಾರತದಲ್ಲಿ ನೆಲದ ಮಕ್ಕಳ ಬದುಕಿಗೆ ಮೊದಲು ದನಿ ನೀಡಿದ ಹೆಸರುಗಳು ಇವು ಎಂದು ಅಧ್ಯಕ್ಷತೆ ವಹಿಸಿದ್ದ ಕಲೇವಾಸಂ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಹೇಳಿದರು. ಸಿಸ್ಟರ್ ಫ್ಲೋರಾ ಲೂವಿಸ್ ಮತ್ತು ಶ್ರೀಮತಿ ಸೌಭಾಗ್ಯ ಎನ್. ಅವರಿಗೆ ಸೇರಿದ ಸಭೆಯಲ್ಲಿ ‘ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು ಸಭೆಯಲ್ಲಿ ಸೇರಿದ ಸಾಹಿತ್ಯಾಸಕ್ತರು ಇದಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಶ್ರೀಮತಿ ಬಿ.ಎಂ. ರೋಹಿಣಿ…

Read More

13 ಏಪ್ರಿಲ್ 2023, ಮಂಗಳೂರು: ಕರಾವಳಿ ಚಿತ್ರಕಲಾ ಚಾವಡಿ (ರಿ.) ಮಂಗಳೂರು ಆಯೋಜಿಸುವ ‘ವಿಶ್ವ ಕಲಾ ದಿನ’ ಇದರ ಅಂಗವಾಗಿ ಕಲಾವಿದರಿಂದ ಆಶು ಚಿತ್ರಕಲಾ ರಚನಾ ಶಿಬಿರವು ಮಂಗಳೂರಿನ ಸುಲ್ತಾನ್ ಬತ್ತೇರಿ ರಸ್ತೆ, ಬೊಕ್ಕಪಟ್ನದ ಅಯ್ಯಪ್ಪ ದೇವಾಲಯದ ಬಳಿ, ದಿನಾಂಕ 15 ಎಪ್ರಿಲ್ 2023ರ ಶನಿವಾರದಂದು ಬೆಳಿಗ್ಗೆ ಗಂಟೆ 8.30ರಿಂದ – ಸಂಜೆ 4.00ರವರೆಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಪ್ರಾಧ್ಯಾಪಕರು ಹಾಗೂ ನಿಕಟಪೂರ್ವ ಪರೀಕ್ಷಾಂಗ ಕುಲಸಚಿವರಾದ ಡಾ. ಪಿ.ಎಲ್. ಧರ್ಮ ಉದ್ಘಾಟಿಸಲಿದ್ದು, ಶ್ರೀ ದಿವಾಕರ ಕದ್ರಿ, ಮಾಜಿ ಮೇಯರ್, ಜನರಲ್ ಮ್ಯಾನೇಜರ್ ಕಾರ್ಡೋಲೈಟ್ ಸ್ಪೆಷಾಲಿಟಿ ಕೆಮಿಕಲ್ ಇಂಡಿಯ ಎಲ್‌.ಎಲ್‌ ಪಿ, ಮಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಗಣೇಶ್ ಸೋಮಯಾಜಿಯವರು ಜಲವರ್ಣ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮನೋರಂಜನಿ ಉಪಾಧ್ಯ, ಜಾನ್ ಚಂದ್ರನ್, ಈರಣ್ಣ ತಿಪ್ಪಣ್ಣನವ‌ರ್, ಜಯಶ್ರೀ ಶರ್ಮ, ಡಾ. ಜಯಪ್ರಕಾಶ್, ಅರುಣ್ ಕಾರಂತ್, ನವೀನ್ ಬಂಗೇರ, ಡಾ. ಸಂಜೋತ ಧರ್ಮ,…

Read More

12 ಏಪ್ರಿಲ್ 2023, ಉಡುಪಿ: ಭಾವನಾ ಫೌಂಡೇಶನ್ ಹಾವಂಜೆ ಮತ್ತು ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸುವ ‘ಬಾಲ ಲೀಲ -2023’ ಚಿನ್ನರ ಬೇಸಿಗೆ ಶಿಬಿರವು ದಿನಾಂಕ ಏಪ್ರಿಲ್ 20ರಿಂದ 23ರ ತನಕ ಹಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ನಡೆಯಲಿದೆ. 2014ರಿಂದ ತೊಡಗಿ ಆಯೋಜಿಸುತ್ತಿರುವ ಈ ಬೇಸಿಗೆ ಶಿಬಿರದಲ್ಲಿ ಎಂಟನೇ ಆವೃತ್ತಿ ಇದಾಗಿದ್ದು, ಗ್ರಾಮೀಣ ಭಾಗದಲ್ಲಿ ಮಕ್ಕಳಿಗಾಗಿ ಕರಕುಶಲ ಕಲೆ, ವಿವಿಧ ರೀತಿಯ ಆಟೋಟಗಳು, ಚಿತ್ರಕಲೆ, ಸಂಗೀತ, ಭಾರತೀಯ ವಿವಿಧ ಕಲಾ ಪ್ರಕಾರಗಳು, ಪಕ್ಷಿ ವೀಕ್ಷಣೆ, ಮಕ್ಕಳ ಸಿನಿಮಾ, ಕಸದಿಂದ ರಸ, ಸರಿಸೃಪಗಳ ಪರಿಚಯ ಮುಂತಾಗಿ ಹಲವಾರು ಸೃಜನಾತ್ಮಕ ವಿಷಯಗಳ ಕಲಿಕೆಯನ್ನು ಈ ಶಿಬಿರವು ಒಳಗೊಂಡಿರುತ್ತದೆ. ಬೇಸಿಗೆಯ ರಜೆಯನ್ನು ಸಜೆಯಾಗಿಸುವುದನ್ನು ತಪ್ಪಿಸುವುದಕ್ಕಾಗಿ ಈ ಶಿಬಿರದ ಆಯೋಜನೆ ನಡೆಸಲಾಗುತ್ತಿದ್ದು, ಗ್ರಾಮೀಣ ಶಾಂತಪರಿಸರದಲ್ಲಿ ಬೆಳಗ್ಗೆ 9:00ರಿಂದ ಸಂಜೆ 5:00 ತನಕ ಮಕ್ಕಳ ಬೌದ್ಧಿಕ ವಿಕಸನಕ್ಕಾಗಿ ಬಹಳಷ್ಟು ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸಲದ ಶಿಬಿರದಲ್ಲಿ ಪ್ರಮುಖ ಆಕರ್ಷಣೆಯಾಗಿ ಬಿಹಾರದ ಮಧುಬನಿ ಕಲೆ, ಗೋದನ ಮತ್ತು…

Read More